'ಟಿ.ಎಸ್.ಭಟ್' ದಿವಂಗತ ಎಂ.
ಸಿ. ವೀರ್ ರವರ ಬಳಿ ಕಥಕ್ ಮತ್ತುಕಥಕ್ಕಳಿ ನೃತ್ಯಪ್ರಾಕಾರಗಳನ್ನು ಕಲಿತು ಅಭ್ಯಾಸಮಾಡಿದರು. ಮುಂದೆ ಕರಾವಳಿಯ ಪ್ರಮುಖ ಭರತನಾಟ್ಯ ದಂಪತಿಗಳಾದ ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಯವರ ಹತ್ತಿರ 'ಭರತನಾಟ್ಯ'ವನ್ನು ಕಲಿತರು. ಮೈಸೂರು ಅರಮನೆ ಮತ್ತು ಮೈಸೂರಿನ ಹಲವು ಕಲಾ ಕೇಂದ್ರಗಳಲ್ಲಿ, ಹಾಗೂ ರಾಷ್ಟ್ರದಾದ್ಯಂತ ತಮ್ಮ ನೃತ್ಯಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ವೃತ್ತಿಯಿಂದ ಭಟ್ಟರು, 'ಕಮರ್ಶಿಯಲ್ ಟ್ಯಾಕ್ಸ್ ಆಫೀಸರ್' ಆಗಿ ಸೇವೆ ಸಲ್ಲಿಸುತ್ತಿದ್ದರು.
ಟಿ. ಎಸ್. ಭಟ್ಟರು, ೧೯೨೭ ರ, ಅಕ್ಟೋಬರ್, ೬ ರಂದು, ಮನೆನಾಡಿನ ತವರುಮನೆಯಾದ ತೀರ್ಥಹಳ್ಳಿ ಯಲ್ಲಿ ಜನಿಸಿದರು.
೧೯೫೭ ರಲ್ಲೇ, ಬೆಂಗಳೂರಿನಲ್ಲಿ ನೃತ್ಯಾಸಕ್ತರಿಗೆ ಕಲಿಸಲು ಒಂದು ನರ್ತನ ಶಾಲೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ. ಕರ್ನಾಟಕ ನೃತ್ಯಕಲಾ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ೮ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 'ಭರತ ಬಾಹುಬಲಿ' ಮತ್ತು 'ಕಾಮದಹನ' ಎಂಬ ಮ್ಯೂಸಿಕಲ್ ಬ್ಯಾಲೆ ನೃತ್ಯಗಳು ಅಂದಿನ ದಿನಗಳಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದವು.
This article uses material from the Wikipedia ಕನ್ನಡ article ಟಿ. ಎಸ್. ಭಟ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.