ಜಿ.ಕೆ.ವೆಂಕಟೇಶ್: ಭಾರತೀಯ ಸಂಗೀತ ನಿರ್ದೇಶಕ

ಜಿ.ಕೆ.ವೆಂಕಟೇಶ್ (ಸೆಪ್ಟೆಂಬರ್ ೨೧, ೧೯೨೭ - ನವೆಂಬರ್ ೧೯೯೩) -ಗುರ್ಜದ ಕೃಷ್ಣದಾಸ್ ವೆಂಕಟೇಶ್ ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ.

ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತದ ಇತರ ಚಿತ್ರರಂಗಗಳ ಹೆಸರಾಂತ ಸಂಗೀತ ನಿರ್ದೇಶಕರಲ್ಲೊಬ್ಬರು.

ಜಿ.ಕೆ.ವೆಂಕಟೇಶ್: ಜನನ ಮತ್ತು ಸಂಗೀತದ ಅಭ್ಯಾಸ, ಕನ್ನಡ ಚಿತ್ರರಂಗ, ಗಾಯಕರಾಗಿ ಜಿ.ಕೆ.ವೆಂಕಟೇಶ್
ಜಿ.ಕೆ.ವೆಂಕಟೇಶ್

ಜನನ ಮತ್ತು ಸಂಗೀತದ ಅಭ್ಯಾಸ

ಬೆಂಗಳೂರಿನಲ್ಲಿ ಸೆಪ್ಟೆಂಬರ್ ೨೧ ೧೯೨೭ರಂದು ಜನಿಸಿದ ಜಿ.ಕೆ.ವೆಂಕಟೇಶ್ ತಮ್ಮ ಸೋದರನ ಬಳಿ ಸಂಗೀತ ಅಭ್ಯಾಸ ಮಾಡಿದರು. ಖ್ಯಾತ ಸಂಗೀತ ನಿರ್ದೇಶಕರಾದ ಎಸ್.ವೆಂಕಟರಾಮನ್ ಮತ್ತು ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿದ್ದರು. ಇವರು ಬೆಂಗಳೂರು ಆಕಾಶವಾಣಿಯಲ್ಲಿ ಎ"ಗ್ರೇಡ್ ಗಾಯಕರಾಗಿದ್ದರು.

ಕನ್ನಡ ಚಿತ್ರರಂಗ

  • ಸಿಂಗ್ ಠಾಕೂರರ ಸೋದರಿ ಚಿತ್ರಕ್ಕೆ ಪದ್ಮನಾಭಶಾಸ್ತ್ರಿ ಅವರೊಡನೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ವೀಣಾ ವಿದ್ವಾಂಸರಾಗಿದ್ದ ವೆಂಕಟೇಶ್ ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾಗಿದ್ದರು.

ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಸಮ್ಮಿಶ್ರಣವನ್ನು ಸಾಧಿಸಿದ್ದು ಅವರ ವೈಶಿಷ್ಟ್ಯ.

  • ೧೯೬೨ ರಲ್ಲಿ 'ಕರುಣೆಯೇ ಕುಟುಂಬದ ಕಣ್ಣು" ಎಂಬ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ತಯಾರಿಸಿದ ಹೆಗ್ಗಳಿಕೆ ಇವರದು.ಕರುಣೆಯೇ ಕುಟುಂಬದ ಕಣ್ಣು ಚಿತ್ರದ "ನಿಜವೋ ಸುಳ್ಳೋ ನಿರ್ಧರಿಸಿ "ಹಾಡಿನ ಸಂಗೀತ ಸಂಯೋಜನೆಗೆ ಧಾಖಲೆ ಎನಿಸಿದ್ದ "ಎಂಬತ್ತು" ವಾದ್ಯಗಾರನ್ನು ಬಳಸಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗಕ್ಕೆ ಕವಿಗಳ ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
  • ೧೯೬೩ರಲ್ಲಿ ತೆರೆಕಂಡ ಎಸ್.ಕೆ.ಎ.ಚಾರಿ ನಿರ್ದೇಶನದ ಗೌರಿ ಚಿತ್ರಕ್ಕೆ ಕುವೆಂಪು ಅವರ ಯಾವ ಜನ್ಮದ ಮೈತ್ರಿ ಮತ್ತು ಕೆ.ಎಸ್.ನರಸಿಂಹಸ್ವಾಮಿ ಅವರ ಇವಳು ಯಾರು ಬಲ್ಲೆಯೇನು? ಕವಿತೆಗಳನ್ನು ಅಳವಡಿಸಿದರು.

ಇದು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಹೊಸ ಪರಂಪರೆಗೆ ಕಾರಣವಾಯಿತು.

ಗಾಯಕರಾಗಿ ಜಿ.ಕೆ.ವೆಂಕಟೇಶ್

ಜಿ.ಕೆ.ವೆಂಕಟೇಶ್ ಅವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.

  1. ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ (ಚಿತ್ರ: ಕಣ್ತೆರೆದು ನೋಡು)
  2. ವಿರಸವೆಂಬ ವಿಷಕೆ (ಚಿತ್ರ:ಭೂತಯ್ಯನ ಮಗ ಅಯ್ಯು)
  3. ಆಡಿಸಿದಾತ ಬೇಸರ ಮೂಡಿ (ಚಿತ್ರ: ಕಸ್ತೂರಿ ನಿವಾಸ)

ನಿರ್ಮಾಪಕರಾಗಿ ಜಿ.ಕೆ.ವೆಂಕಟೇಶ್

ಜಿ.ಕೆ.ವೆಂಕಟೇಶ್: ಜನನ ಮತ್ತು ಸಂಗೀತದ ಅಭ್ಯಾಸ, ಕನ್ನಡ ಚಿತ್ರರಂಗ, ಗಾಯಕರಾಗಿ ಜಿ.ಕೆ.ವೆಂಕಟೇಶ್ 
  • ೧೯೬೪ರಲ್ಲಿ ವೆಂಕಟೇಶ್ ತುಂಬಿದ ಕೊಡ ಚಿತ್ರವನ್ನು ನಿರ್ಮಾಣ ಮಾಡಿದರು. ಅವರ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲವಾಗಿದ್ದ ಈ ಚಿತ್ರದಲ್ಲಿ ಅನಕೃ ಅವರನ್ನು ಬೆಳ್ಳಿತೆರೆಯ ಮೇಲೆ ತಂದರು. ಇದೇ ಚಿತ್ರದಲ್ಲಿ, ಪಿ.ಕಾಳಿಂಗರಾಯರಿಂದ ಅಂತಿಂಥ ಹೆಣ್ಣು ನೀನಲ್ಲ ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ರೂಪಿಸಿದ್ದರು.
  • ೧೯೬೭ರಲ್ಲಿ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಇಮ್ಮಡಿ ಪುಲಿಕೇಶಿ ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು. ಇವರ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆಯಿತು. "ನಗುವ ಹೂವು" ಚಿತ್ರದ (1970) ಆರ್. ಎನ್. ಸುದರ್ಶನ್ ಹಾಡಿರುವ "ಇರಬೇಕು ಇರಬೇಕು ಅರಿಯದ ಕಂದನ ತರಹ" ಈ ಗೀತೆಯ ಮಾಧುರ್ಯಕ್ಕೆ ಬೇರೆ ಯಾವ ಕನ್ನಡದ ಗೀತೆಯೂ ಸಾಟಿಯೇ ಇಲ್ಲ ಎಂದರು ಶಿಷ್ಯ ಇಳಯರಾಜ.

ನಿಧನ

ಜಿ.ಕೆ.ವೆಂಕಟೇಶ್ ಅವರು ನವೆಂಬರ್ ೧೯೯೩ರಲ್ಲಿ ನಿಧನ ಹೊಂದಿದರು. ಅವರ ಸ್ವಇಚ್ಛೆಯಂತೆ ಅವರ ಕಣ್ಣುಗಳನ್ನು ಮರಣೊತ್ತರವಾಗಿ ದಾನ ಮಾಡಲಾಗಿದೆ.

ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳು

# ವರ್ಷ ಚಿತ್ರ
೧೯೫೬ ಹರಿಭಕ್ತ
೧೯೫೬ ಓಹಿಲೇಶ್ವರ
೧೯೫೮ ಅಣ್ಣ ತಂಗಿ
೧೯೫೯ ಜಗಜ್ಯೋತಿ ಬಸವೇಶ್ವರ
೧೯೫೯ ಧರ್ಮ ವಿಜಯ
೧೯೫೯ ಮಹಿಷಾಸುರಮರ್ಧಿನಿ
೧೯೬೦ ರಣಧೀರ ಕಂಠೀರವ
೧೯೬೦ ದಶಾವತಾರ
೧೯೬೧ ಕಣ್ತೆರೆದು ನೋಡು
೧೦ ೧೯೬೧ ಕೈವಾರ ಮಹಾತ್ಮೆ
೧೧ ೧೯೬೨ ಭೂದಾನ
೧೨ ೧೯೬೨ ಕರುಣೆಯೇ ಕುಟುಂಬದ ಕಣ್ಣು
೧೩ ೧೯೬೨ ತಾಯಿಕರುಳು
೧೪ ೧೯೬೩ ಲಾಯರ್ ಮಗಳು
೧೫ ೧೯೬೩ ಕನ್ಯಾರತ್ನ
೧೬ ೧೯೬೩ ಗೌರಿ
೧೭ ೧೯೬೩ ಮಲ್ಲಿ ಮದುವೆ
೧೮ ೧೯೬೩ ಕುಲವಧು
೧೯ ೧೯೬೩ ಕಲಿತರೂ ಹೆಣ್ಣೇ
೨೦ ೧೯೬೩ ಆನಂದಭಾಷ್ಪ
೨೧ ೧೯೬೩ ಬಂಗಾರಿ
೨೨ ೧೯೬೪ ಕಲಾವತಿ
೨೩ ೧೯೬೪ ತುಂಬಿದ ಕೊಡ
೨೪ ೧೯೬೫ ಕವಲೆರಡು ಕುಲ ಒಂದು
೨೫ ೧೯೬೫ ಸರ್ವಜ್ಞಮೂರ್ತಿ
೨೬ ೧೯೬೫ ನನ್ನ ಕರ್ತವ್ಯ
೨೭ ೧೯೬೫ ಸತಿ ಸಾವಿತ್ರಿ
೨೮ ೧೯೬೬ ಕಿಲಾಡಿ ರಂಗ
೨೯ ೧೯೬೬ ಮಧುಮಾಲತಿ
೩೦ ೧೯೬೬ ಸಂಧ್ಯಾರಾಗ
೩೧ ೧೯೬೭ ಪಾರ್ವತಿ ಕಲ್ಯಾಣ
೩೨ ೧೯೬೭ ರಾಜಶೇಖರ
೩೩ ೧೯೬೭ ರಾಜದುರ್ಗದ ರಹಸ್ಯ
೩೪ ೧೯೬೭ ಜಾಣರ ಜಾಣ
೩೫ ೧೯೬೭ ಇಮ್ಮಡಿ ಪುಲಿಕೇಶಿ
೩೬ ೧೯೬೮ ಜೇಡರಬಲೆ
೩೭ ೧೯೬೮ ಮನಸ್ಸಾಕ್ಷಿ
೩೮ ೧೯೬೮ ಗೋವಾದಲ್ಲಿ ಸಿ.ಐ.ಡಿ. ೯೯೯
೩೯ ೧೯೬೯ ಭಾಗೀರಥಿ
೪೦ ೧೯೬೯ ಕಣ್ಣುಮುಚ್ಚಾಲೆ
೪೧ ೧೯೬೯ ಮುಕುಂದ ಚಂದ್ರ
೪೨ ೧೯೬೯ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
೪೩ ೧೯೭೦ ದೇವರ ಮಕ್ಕಳು
೪೪ ೧೯೭೧ ಕಸ್ತೂರಿ ನಿವಾಸ
೪೫ ೧೯೭೧ ಬಾಳ ಬಂಧನ
೪೬ ೧೯೭೧ ನಗುವ ಹೂವು
೪೭ ೧೯೭೧ ತಾಯಿದೇವರು
೪೮ ೧೯೭೧ ಪ್ರತಿಧ್ವನಿ
೪೯ ೧೯೭೧ ತಂದೆ ಮಕ್ಕಳು
೫೦ ೧೯೭೨ ಬಂಗಾರದ ಮನುಷ್ಯ
೫೧ ೧೯೭೩ ದೂರದ ಬೆಟ್ಟ
೫೨ ೧೯೭೪ ಭೂತಯ್ಯನ ಮಗ ಅಯ್ಯು
೫೩ ೧೯೭೪ ಸಂಪತ್ತಿಗೆ ಸವಾಲ್
೫೪ ೧೯೭೪ ಭಕ್ತ ಕುಂಬಾರ
೫೫ ೧೯೭೪ ಅಣ್ಣ ಅತ್ತಿಗೆ
೫೬ ೧೯೭೫ ದಾರಿ ತಪ್ಪಿದ ಮಗ
೫೭ ೧೯೭೫ ಕೂಡಿ ಬಾಳೋಣ
೫೮ ೧೯೭೫ ಮಯೂರ
೫೯ ೧೯೭೫ ನಿರೀಕ್ಷೆ
೬೦ ೧೯೭೫ ತ್ರಿಮೂರ್ತಿ
೬೧ ೧೯೭೬ ರಾಜ ನನ್ನ ರಾಜ
೬೨ ೧೯೭೬ ಬಂಗಾರದ ಗುಡಿ
೬೩ ೧೯೭೬ ಬಾಳು ಜೇನು
೬೪ ೧೯೭೭ ವೇದಾಂತ
೬೫ ೧೯೭೭ ಸೊಸೆ ತಂದ ಸೌಭಾಗ್ಯ
೬೬ ೧೯೭೭ ಶ್ರೀಮಂತನ ಮಗಳು
೬೭ ೧೯೭೭ ಸನಾದಿ ಅಪ್ಪಣ್ಣ
೬೮ ೧೯೭೭ ಕರ್ತವ್ಯದ ಕರೆ
೬೯ ೧೯೭೭ ಒಲವು ಗೆಲವು
೭೦ ೧೯೭೭ ಗಲಾಟೆ ಸಂಸಾರ
೭೧ ೧೯೭೮ ದೇವದಾಸಿ
೭೨ ೧೯೭೮ ವಂಶಜ್ಯೋತಿ
೭೩ ೧೯೭೮ ಆಪರೇಷನ್ ಡೈಮಂಡ್ ರ್ಯಾಕೆಟ್
೭೪ ೧೯೭೮ ಚಿತೆಗೂ ಚಿಂತೆ
೭೫ ೧೯೭೮ ಭಲೇ ಹುಡುಗ
೭೬ ೧೯೭೯ ನಾ ನಿನ್ನ ಬಿಡೆನು
೭೭ ೧೯೭೯ ಅಸಾಧ್ಯ ಅಳಿಯ
೭೮ ೧೯೭೯ ಹುಲಿಯ ಹಾಲಿನ ಮೇವು
೭೯ ೧೯೭೯ ಕಮಲ
೮೦ ೧೯೭೯ ಮುತ್ತು ಒಂದು ಮುತ್ತು
೮೧ ೧೯೭೯ ನೆಂಟರೋ ಗಂಟು ಕಳ್ಳರೋ
೮೨ ೧೯೮೦ ಧೈರ್ಯಲಕ್ಷ್ಮಿ
೮೩ ೧೯೮೦ ಉಷಾ ಸ್ವಯಂವರ
೮೪ ೧೯೮೦ ರುಸ್ತುಮ್ ಜೋಡಿ
೮೫ ೧೯೮೧ ಹಾವಿನ ಹೆಡೆ
೮೬ ೧೯೮೧ ಅಂತ
೮೭ ೧೯೮೧ ಹಣಬಲವೋ ಜನಬಲವೋ
೮೮ ೧೯೮೧ ಭೂಮಿಗೆ ಬಂದ ಭಗವಂತ
೮೯ ೧೯೮೧ ಮಿಂಚಿನ ಬೆಳಕಲ್ಲಿ
೯೦ ೧೯೮೧ ಮರೆಯದ ಹಾಡು
೯೧ ೧೯೮೨ ರುದ್ರಿ
೯೨ ೧೯೮೨ ಶಂಕರ್ ಸುಂದರ್
೯೩ ೧೯೮೨ ಭಕ್ತ ಜ್ಞಾನದೇವ
೯೪ ೧೯೮೨ ಹಾಲುಜೇನು
೯೫ ೧೯೮೨ ಕಾರ್ಮಿಕ ಕಳ್ಳನಲ್ಲ
೯೬ ೧೯೮೨ ಬೂದಿ ಮುಚ್ಚಿದ ಕೆಂಡ
೯೭ ೧೯೮೨ ಸ್ನೇಹದ ಸಂಕೋಲೆ
೯೮ ೧೯೮೩ ಆಶಾ
೯೯ ೧೯೮೩ ಹೊಸ ತೀರ್ಪು
೧೦೦ ೧೯೮೩ ಎರಡು ನಕ್ಷತ್ರಗಳು
೧೦೧ ೧೯೮೩ ನೋಡಿ ಸ್ವಾಮಿ ನಾವಿರೋದೆ ಹೀಗೆ
೧೦೨ ೧೯೮೪ ಪ್ರಚಂಡ ಕುಳ್ಳ
೧೦೩ ೧೯೮೪ ಗಜೇಂದ್ರ
೧೦೪ ೧೯೮೪ ಗುರುಭಕ್ತಿ
೧೦೫ ೧೯೮೪ ಕಲಿಯುಗ
೧೦೬ ೧೯೮೪ ಜಿದ್ದು
೧೦೭ ೧೯೮೪ ಮಳೆ ಬಂತು ಮಳೆ
೧೦೮ ೧೯೮೪ ಮಕ್ಕಳಿರಲವ್ವ ಮನೆತುಂಬ
೧೦೯ ೧೯೮೫ ಪರಮೇಶಿ ಪ್ರೇಮ ಪ್ರಸಂಗ
೧೧೦ ೧೯೮೫ ಗುರು ಜಗದ್ಗುರು
೧೧೧ ೧೯೮೫ ಅದೇ ಕಣ್ಣು
೧೧೨ ೧೯೮೫ ಶಭಾಷ್ ವಿಕ್ರಂ
೧೧೩ ೧೯೮೫ ಸ್ನೇಹ ಸಂಬಂಧ
೧೧೪ ೧೯೮೫ ಚದುರಂಗ
೧೧೫ ೧೯೮೬ ಹೊಸ ನೀರು
೧೧೬ ೧೯೮೬ ಪ್ರೀತಿ
೧೧೭ ೧೯೮೭ ಪೂರ್ಣಚಂದ್ರ
೧೧೮ ೧೯೮೭ ಹೊಸಬಾಳು
೧೧೯ ೧೯೮೯ ಗಂಡಂದ್ರೆ ಗಂಡು

ಜಿ.ಕೆ.ವೆಂಕಟೇಶ್ ನಿರ್ಮಾಣದ ಕನ್ನಡ ಚಿತ್ರಗಳು

# ವರ್ಷ ಚಿತ್ರ
೧೯೬೪ ತುಂಬಿದ ಕೊಡ
೧೯೬೭ ಇಮ್ಮಡಿ ಪುಲಿಕೇಶಿ

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ


Tags:

ಜಿ.ಕೆ.ವೆಂಕಟೇಶ್ ಜನನ ಮತ್ತು ಸಂಗೀತದ ಅಭ್ಯಾಸಜಿ.ಕೆ.ವೆಂಕಟೇಶ್ ಕನ್ನಡ ಚಿತ್ರರಂಗಜಿ.ಕೆ.ವೆಂಕಟೇಶ್ ಗಾಯಕರಾಗಿ ಜಿ.ಕೆ.ವೆಂಕಟೇಶ್ ನಿರ್ಮಾಪಕರಾಗಿ ಜಿ.ಕೆ.ವೆಂಕಟೇಶ್ ನಿಧನಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳುಜಿ.ಕೆ.ವೆಂಕಟೇಶ್ ನಿರ್ಮಾಣದ ಕನ್ನಡ ಚಿತ್ರಗಳುಜಿ.ಕೆ.ವೆಂಕಟೇಶ್ಕನ್ನಡ ಚಿತ್ರರಂಗದಕ್ಷಿಣ ಭಾರತನವೆಂಬರ್ವರ್ಗ:ಚಿತ್ರರಂಗಸೆಪ್ಟೆಂಬರ್ ೨೧೧೯೨೭೧೯೯೩

🔥 Trending searches on Wiki ಕನ್ನಡ:

ಪ್ಯಾರಿಸ್ಸಂಶೋಧನೆವೇದಬೆಂಗಳೂರುಊಳಿಗಮಾನ ಪದ್ಧತಿಭಾರತದ ರಾಜಕೀಯ ಪಕ್ಷಗಳುತೆಲುಗುಸ್ವಚ್ಛ ಭಾರತ ಅಭಿಯಾನರಾಹುಲ್ ಗಾಂಧಿರಂಜಾನ್ಗ್ರಾಮ ಪಂಚಾಯತಿಭಾರತೀಯ ಭೂಸೇನೆಟೊಮೇಟೊಕನ್ನಡದಲ್ಲಿ ಕಾದಂಬರಿ ಸಾಹಿತ್ಯವಲ್ಲಭ್‌ಭಾಯಿ ಪಟೇಲ್ತಿಪಟೂರುಸೋಮೇಶ್ವರ ಶತಕನೀತಿ ಆಯೋಗಶ್ರೀ ರಾಮಾಯಣ ದರ್ಶನಂಗಣರಾಜ್ಯೋತ್ಸವ (ಭಾರತ)ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕಲ್ಯಾಣ ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗಳುಸಾವಿತ್ರಿಬಾಯಿ ಫುಲೆಅಂಗವಿಕಲತೆಕುಮಾರವ್ಯಾಸಪ್ರವಾಸೋದ್ಯಮಸಾರ್ವಜನಿಕ ಆಡಳಿತಚಂದ್ರಗುಪ್ತ ಮೌರ್ಯಭಾರತ ಬಿಟ್ಟು ತೊಲಗಿ ಚಳುವಳಿರವೀಂದ್ರನಾಥ ಠಾಗೋರ್ವಾಸ್ಕೋ ಡ ಗಾಮಕನಕದಾಸರುಕಳಿಂಗ ಯುದ್ಧಹಲ್ಮಿಡಿಗುಬ್ಬಚ್ಚಿಕಾರ್ಖಾನೆ ವ್ಯವಸ್ಥೆಹಿಮಾಲಯಆಗಮ ಸಂಧಿಕದಂಬ ರಾಜವಂಶಜಾಗತೀಕರಣಬೀದರ್ಹುಲಿಭಾರತದ ಸಂಯುಕ್ತ ಪದ್ಧತಿಮಗುವಿನ ಬೆಳವಣಿಗೆಯ ಹಂತಗಳುಹಿಪ್ಪಲಿಸಾರ್ವಜನಿಕ ಹಣಕಾಸುವಿರಾಮ ಚಿಹ್ನೆಪು. ತಿ. ನರಸಿಂಹಾಚಾರ್ಅವಾಹಕಭಾರತೀಯ ಸಂಸ್ಕೃತಿನಾಮಪದದಯಾನಂದ ಸರಸ್ವತಿಶಬ್ದಹಣಕಾಸುಭಾರತದ ಮುಖ್ಯ ನ್ಯಾಯಾಧೀಶರುಸರ್ವೆಪಲ್ಲಿ ರಾಧಾಕೃಷ್ಣನ್ಕೃಷ್ಣದೇವರಾಯವಾದಿರಾಜರುಲಕ್ಷ್ಮೀಶಚೋಮನ ದುಡಿಜನಪದ ಕರಕುಶಲ ಕಲೆಗಳುನಂಜನಗೂಡುಪುಟ್ಟರಾಜ ಗವಾಯಿತತ್ಪುರುಷ ಸಮಾಸಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಯಶ್(ನಟ)ವಾಣಿಜ್ಯ ಪತ್ರರತ್ನಾಕರ ವರ್ಣಿಸ್ವಾಮಿ ವಿವೇಕಾನಂದಸುದೀಪ್ರಮ್ಯಾಕಮಲದಹೂದ್ರಾವಿಡ ಭಾಷೆಗಳುಎಂ. ಎಂ. ಕಲಬುರ್ಗಿಬಹುವ್ರೀಹಿ ಸಮಾಸಕರ್ನಾಟಕ ವಿಧಾನ ಸಭೆ🡆 More