ಗೊದ್ದನಮರ

Kunthia pinnata KuntzeKunthia cochinensis Dennst.Garuga pharhad Buch.-Ham.Garuga kenghar Buch.-Ham.

Garuga pinnata
ಗೊದ್ದನಮರ
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ಬರ್ಸರೇಸಿಯೇ
ಕುಲ: ಗರುಗಾ
ಪ್ರಜಾತಿ:
G. pinnata
Binomial name
Garuga pinnata
Roxb.
Synonyms

ಗೊದ್ದನಮರ ಬರ್ಸರೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಅರೆನೆಲ್ಲಿ, ಬೋಳಮಟೆ, ಹಾಲಉಲಿಗೆ ಇದರ ಪರ್ಯಾಯ ನಾಮಗಳು. ಗಾರುಗ ಪಿನೇಟ ವೈಜ್ಞಾನಿಕ ಹೆಸರು. ಭಾರತಾದ್ಯಂತ ಮಿಶ್ರಪರ್ಣಪಾತಿ ಕಾಡುಗಳಲ್ಲಿ ತೇಗ ಮತ್ತು ಸಾಲ ವೃಕ್ಷಗಳ ಜೊತೆಯಲ್ಲಿ ಕಂಡುಬರುತ್ತದೆ. ಆಗ್ನೇಯ ಏಷ್ಯ ಮತ್ತು ಪೆಸಿಫಿಕ್ ಸಾಗರದ ಕೆಲವು ದ್ವೀಪಗಳಲ್ಲೂ ಇದರ ವ್ಯಾಪ್ತಿಯಿದೆ.

ಲಕ್ಷಣಗಳು

ಸುಮಾರು 15 ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಮುಖ್ಯ ಕಾಂಡವೇ ಸುಮಾರು 8 ಮೀ ಇದ್ದು ನೇರವಾಗಿ ಉರುಳೆಯಂತೆ ಬೆಳೆಯುತ್ತದೆ. ಮರದ ತೊಗಟೆ ಬೂದಿಮಿಶ್ರಿತ ಕಂದುಬಣ್ಣದ್ದು. ಆಗಿಂದಾಗ್ಗೆ ತೊಗಟೆ ಹಾಳೆಗಳಂತೆ ಕಳಚಿ ಬೀಳುತ್ತದೆ. ಅನಿಯತ ಆಕಾರದ ಪದರುಗಳಾಗಿ ನುಲಿದುಕೊಳ್ಳುತ್ತದೆ. ಎಲೆಗಳು ಏಕಪಿಚ್ಛಕ ಸಂಯುಕ್ತ ಮಾದರಿಯವು. ಪರ್ಯಾಯ ಮಾದರಿಯಲ್ಲಿ ಕಾಂಡಗಳ ತುದಿಗಳಲ್ಲಿ ಜೋಡಣೆ. ಕೆಲವು ವೇಳೆ ಎಲೆಗಳ ಮೇಲೆ ಕೆಂಪುಬಣ್ಣದ ಗಂಟುಗಳನ್ನು ಗಮನಿಸಬಹುದು. ಹೂಗಳು ಚಿಕ್ಕದಾಗಿದ್ದು ಹಳದಿ ಅಥವಾ ಹಸಿರುಮಿಶ್ರಿತ ಬಿಳಿಬಣ್ಣದವು; ಇವು ಅಂತ್ಯಾರಂಭಿ ಮಾದರಿಯ ಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಮಿಶ್ರತೆರನಾದವು. ಏಕಲಿಂಗಿಗಳಾಗಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿರಬಹುದು. ಏಕ ಲಿಂಗಿಗಳು ಗಂಡಾಗಿರಬಹುದು, ಹೆಣ್ಣಾಗಿರಬಹುದು. ಒಂದೇ ಮರದಲ್ಲಿ ಎರಡು ಬಗೆಗಳೂ ಇವೆ. ಹಣ್ಣು ಅಷ್ಟಿಫಲ ಮಾದರಿಯದು; ಆಕಾರ ಗುಂಡಗೆ ಮತ್ತು ಹಣ್ಣು ರಸಭರಿತವಾಗಿರುತ್ತದೆ ಬಣ್ಣ ಹಳದಿಮಿಶ್ರಿತ ಹಸುರು ಬಣ್ಣದಿಂದ ಕಪ್ಪು ಬಣ್ಣದವರೆಗೂ ವ್ಯತ್ಯಾಸವಾಗುತ್ತದೆ. ಇದನ್ನು ತಿನ್ನಬಹುದು. ಹಣ್ಣಿನಲ್ಲಿ 3-4 ಬೀಜಗಳಿರುತ್ತವೆ.

ಬೇಸಾಯ

ಗೊದ್ದನಮರಕ್ಕೆ ಹೆಚ್ಚು ಬಿಸಿಲು ಬೇಕು. ಇದು ಕಡುಚಳಿಯನ್ನಾಗಲೀ ಶುಷ್ಕತೆಯನ್ನಾಗಲೀ ಸಹಿಸುವುದಿಲ್ಲ. ಆದರೆ ಕಾಳ್ಗಿಚ್ಚಿಗೆ ಬೇಗನೆ ತುತ್ತಾಗುವುದಿಲ್ಲ. ಮರವನ್ನು ಕಡಿದು ಹಾಕಿದಾಗ ಉಳಿಯುವ ಮೋಟಿನಿಂದ ಬೇಗನೆ ಚಿಗುರುತ್ತದೆ. ಅಲ್ಲದೆ ಯಥೇಚ್ಛವಾಗಿ ಬೇರುಸಸಿಗಳನ್ನೂ ಉತ್ಪಾದಿಸುತ್ತದೆ. ಇದರ ಸ್ವಾಭಾವಿಕ ಪುನರುತ್ಪತ್ತಿ ಬೀಜಗಳ ಮೂಲಕ. ಕಾಂಡತುಂಡುಗಳ ಮೂಲಕವೂ ವೃದ್ಧಿಸಬಹುದು. ಪ್ರತಿವರ್ಷ ಮಳೆಗಾಲದ ವೇಳೆಗೆ ಇದರ ಹಣ್ಣುಗಳು ಮಾಗಿ ನೆಲಕ್ಕೆ ಬಿದ್ದು ಬಿರಿಯುತ್ತವೆ. ಒಳಗಿನ ಬೀಜಗಳು ಮರು ವರ್ಷದ ಮಳೆಗಾಲದಲ್ಲಿ ಮೊಳೆತು ಸಸಿಗಳಾಗುತ್ತವೆ. ಗೊದ್ದನಮರವನ್ನು ಕೃತಕವಾಗಿ ವೃದ್ಧಿಸಲು ಬೀಜಗಳನ್ನೇ ಬಳಸಬಹುದಾದರೂ ಬೀಜಗಳು ಮೊಳೆಯಲು ಒಂದು ವರ್ಷ ಬೇಕಾಗುತ್ತದಲ್ಲದೆ ಸಸಿಗಳ ಬೆಳೆವಣಿಗೆ ನಿಧಾನವಾದ್ದರಿಂದ ಕಾಂಡ ತುಂಡುಗಳನ್ನು ನೆಟ್ಟು ಬೆಳೆಸುವುದೇ ವಾಡಿಕೆಯಲ್ಲಿರುವ ಮತ್ತು ಸೂಕ್ತವಾದ ಕ್ರಮವಾಗಿದೆ. ಇಂಥ ಗಿಡಗಳು ಶೀಘ್ರಗತಿಯಲ್ಲಿ ಬೆಳೆಯುತ್ತವೆ.

ಉಪಯೋಗ

ಗೊದ್ದನಮರದ ಚೌಬೀನೆಯ ರಸಕಾಷ್ಠ ಬಿಳಿಯಬಣ್ಣದ್ದು. ಚೇಗು ಕೆಂಪುಮಿಶ್ರಿತ ಕಂದು ಬಣ್ಣದ್ದು. ಚೇಗು ಗಟ್ಟಿಯಾಗಿದೆ. ಚೌಬೀನೆಯನ್ನು ಗಾಳಿಯ ಸಹಾಯದಿಂದ ಒಣಗಿಸಬಹುದಾದರೂ ರಸಕಾಷ್ಠ ಸುಲಭವಾಗಿ ಒಣಗದು. ಇದರಿಂದಾಗಿ ರಸಕಾಷ್ಠವನ್ನು ಸೂಕ್ತ ವಿಧಾನಗಳಿಂದ ಸಂಸ್ಕರಿಸಬೇಕು. ಚೌಬೀನೆಯನ್ನು ಸುಲಭವಾಗಿ ಗರಗಸದಿಂದ ಕೊಯ್ಯಬಹುದು. ಅಲ್ಲದೆ ಇದು ಮರಗೆಲಸಗಳಿಗೆ ಒಗ್ಗುತ್ತದೆ. ಚೇಗಿನಿಂದ ಪೀಠೋಪಕರಣಗಳನ್ನು ತಯಾರಿಸಬಹುದು. ಸಣ್ಣ ದೋಣಿ, ಮರದ ಹಲಗೆ, ಪೆಟ್ಟಿಗೆ, ಪೀಪಾಯಿ, ಪ್ಲೈವುಡ್, ಮನೆಕಟ್ಟಲು ಬೇಕಾಗುವ ಮರದ ವಸ್ತುಗಳು ಮುಂತಾದವನ್ನು ತಯಾರಿಸಲು ಚೌಬೀನೆಯನ್ನು ಉಪಯೋಗಿಸುತ್ತಾರೆ. ಕೆಳದರ್ಜೆಯ ಪೆನ್ಸಿಲುಗಳು ಹಾಗೂ ಬೆಂಕಿಪೊಟ್ಟಣದ ತಯಾರಿಕೆಗೆ ಸಹ ಬಳಸುವುದುಂಟು. ಇದರಿಂದ ಒಳ್ಳೆಯ ದರ್ಜೆಯ ಇದ್ದಲನ್ನೂ ಪಡೆಯಬಹುದು. ಗೊದ್ದನಮರದ ತಿರುಳನ್ನು ಗೊಡ್ಡೆಮರದ ತಿರುಳಿನೊಂದಿಗೆ ಸೇರಿಸಿ ಕಂದುಬಣ್ಣದ ಕಾಗದವನ್ನು ತಯಾರಿಸಲು ಬಳಸುತ್ತಾರೆ.

ಔಷಧೀಯ ಗುಣಗಳು

ಗೊದ್ದನಮರದ ಹಣ್ಣುಗಳನ್ನು ಹಸಿಯಾಗಿ, ಬೇಯಿಸಿ ಹಾಗೂ ಉಪ್ಪಿನಕಾಯಿ ರೂಪದಲ್ಲಿ ತಿನ್ನಬಹುದು. ಹುಳಿಯಾಗಿರುವ ಇವಕ್ಕೆ ತಂಪುಕಾರಕ ಹಾಗೂ ಜೀರ್ಣಕಾರಕ ಗುಣಗಳಿವೆ. ಎಲೆಯ ರಸವನ್ನು ಜೇನು ಹಾಗೂ ಇತರ ವಸ್ತುಗಳೊಡನೆ ಉಬ್ಬಸ ನಿವಾರಣೆಗೆ ಬಳಸುತ್ತಾರೆ. ಫಿಲಿಪೀನ್ಸಿನಲ್ಲಿ ಇದರ ಬೇರಿನ ಕಷಾಯವನ್ನು ಪುಪ್ಫುಸ ಸಂಬಂಧವಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವುದಿದೆ. ಇದರ ಎಲೆಗಳು ಹಾಗೂ ಎಳೆ ಚಿಗುರುಗಳು ದನಕರುಗಳಿಗೆ ಒಳ್ಳೆಯ ಮೇವು. ಮರದ ತೊಗಟೆ ಹಾಗೂ ಎಲೆಯ ಮೇಲಿನ ಗಂಟುಗಳನ್ನು ಚರ್ಮ ಹದ ಮಾಡಲು ಉಪಯೋಗಿಸುತ್ತಾರೆ. ಗೊದ್ದನಮರಕ್ಕೆ ಬೆಂಕಿಯನ್ನು ನಿರೋಧಿಸುವ ಸಾಮರ್ಥ್ಯವಿರುವುದರಿಂದ ಮತ್ತು ಈ ಮರ ಸುಲಭವಾಗಿ ಬೆಳೆಯುವುದರಿಂದ ಇದನ್ನು ಅರಣ್ಯ ವೃದ್ಧಿಗೆ ಉಪಯೋಗಿಸುತ್ತಾರೆ.

ಛಾಯಾಂಕಣ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಗೊದ್ದನಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗೊದ್ದನಮರ ಲಕ್ಷಣಗಳುಗೊದ್ದನಮರ ಬೇಸಾಯಗೊದ್ದನಮರ ಉಪಯೋಗಗೊದ್ದನಮರ ಔಷಧೀಯ ಗುಣಗಳುಗೊದ್ದನಮರ ಛಾಯಾಂಕಣಗೊದ್ದನಮರ ಉಲ್ಲೇಖಗಳುಗೊದ್ದನಮರ ಬಾಹ್ಯ ಸಂಪರ್ಕಗಳುಗೊದ್ದನಮರ

🔥 Trending searches on Wiki ಕನ್ನಡ:

ಕುದುರೆಮುಖನಿರ್ಮಲಾ ಸೀತಾರಾಮನ್ಸ್ವರಒಲಂಪಿಕ್ ಕ್ರೀಡಾಕೂಟವ್ಯಾಸರಾಯರುಕವಿರಾಜಮಾರ್ಗದಾಕ್ಷಾಯಿಣಿ ಭಟ್ದ್ರಾವಿಡ ಭಾಷೆಗಳುಭೂಮಿಯ ವಾಯುಮಂಡಲಮಾರುಕಟ್ಟೆಅಡೋಲ್ಫ್ ಹಿಟ್ಲರ್ಕರ್ನಾಟಕದ ಜಿಲ್ಲೆಗಳುಲಂಚ ಲಂಚ ಲಂಚಭಾರತೀಯ ಶಾಸ್ತ್ರೀಯ ನೃತ್ಯಅಂಬಿಗರ ಚೌಡಯ್ಯಮೂಢನಂಬಿಕೆಗಳುಅರವಿಂದ್ ಕೇಜ್ರಿವಾಲ್ರಸ(ಕಾವ್ಯಮೀಮಾಂಸೆ)ಬರವಣಿಗೆರಾಯಚೂರು ಜಿಲ್ಲೆಕಾರವಾರಕಾಟೇರಅಶ್ವತ್ಥಮರಹಣಜೀವನಚರಿತ್ರೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಬಾಬು ಜಗಜೀವನ ರಾಮ್ವರ್ಗೀಯ ವ್ಯಂಜನದಿ ಪೆಂಟಗನ್ಗಣರಾಜ್ಯೋತ್ಸವ (ಭಾರತ)ಪ್ರಬಂಧ ರಚನೆಸರ್ವಜ್ಞಪಶ್ಚಿಮ ಘಟ್ಟಗಳುಸಂವಹನಸಾಮಾಜಿಕ ಸಮಸ್ಯೆಗಳುಅಂಜನಿ ಪುತ್ರಅಲಿಪ್ತ ಚಳುವಳಿಪ್ರೀತಿತಾಳಗುಂದ ಶಾಸನಕಿತ್ತೂರು ಚೆನ್ನಮ್ಮಅರ್ಜುನಹುಣಸೆಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕಲ್ಯಾಣ ಕರ್ನಾಟಕದುಂಡು ಮೇಜಿನ ಸಭೆ(ಭಾರತ)ಬೆಂಗಳೂರುಪಾಲಕ್ಸಂತಾನೋತ್ಪತ್ತಿಯ ವ್ಯವಸ್ಥೆಗ್ರಾಹಕರ ಸಂರಕ್ಷಣೆಯೂಟ್ಯೂಬ್‌ಅಕ್ಷಾಂಶ ಮತ್ತು ರೇಖಾಂಶಪುತ್ತೂರುಬ್ಯಾಂಕ್ಪಿ.ಲಂಕೇಶ್ರಾಘವಾಂಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಣ್ಣುಹಬ್ಬಕರ್ಬೂಜನಾಯಕತ್ವಭಾರತದಲ್ಲಿ ಪಂಚಾಯತ್ ರಾಜ್ಭಾರತದ ರಾಷ್ಟ್ರಪತಿನೇಮಿಚಂದ್ರ (ಲೇಖಕಿ)ಅಭಿ (ಚಲನಚಿತ್ರ)ದೇವನೂರು ಮಹಾದೇವಕ್ರೀಡೆಗಳುಪುರಂದರದಾಸಪ್ರವಾಸಿಗರ ತಾಣವಾದ ಕರ್ನಾಟಕಹಯಗ್ರೀವನಿರುದ್ಯೋಗಮಹಾವೀರಶೈಕ್ಷಣಿಕ ಮನೋವಿಜ್ಞಾನಚಾಲುಕ್ಯತುಮಕೂರುಪಾರ್ವತಿವಿಶ್ವ ಮಹಿಳೆಯರ ದಿನಕೃಷಿಸರ್ಕಾರೇತರ ಸಂಸ್ಥೆ🡆 More