ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಹಲಸೂರು, ಹಳೇ ಬೆಂಗಳೂರಿನ ಪ್ರದೇಶಗಳಲ್ಲಿ ಒಂದು.
ಹಲಸೂರೂ, ದೊಮ್ಮಲೂರು,ಇಂದಿರಾನಗರ, ಎಂ.ಜಿ.ರಸ್ತೆ ಹಾಗು ಬೈಯಪ್ಪನ ಹಳ್ಳಿ ಗಳಿಂದ ಸುತ್ತುವರಿದಿದೆ. ಇದು ಹಲವಾರು ದೇವಾಲಯಗಳಿಗೆ ಮತ್ತು ಬದಲಿಗೆ ಕಿರಿದಾದ ರಸ್ತೆಗಳಿಗೆ ಹೆಸರುವಾಸಿಯಾಗಿದೆ.
ಹಲಸೂರು ಮೊದಲನೇ ಕೆಂಪೇಗೌಡ (೧೫೧೩-೧೫೬೯) ವಿಜಯನಗರದ ಅರಸರು ಬಳುವಳಿಯಾಗಿ ನೀಡಿದರು. ಬೆಂಗಳೂರಿನ ಅತೀ ದೊಡ್ಡ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು ಎರಡನೇ ಕೆಂಪೇಗೌಡ ನಿರ್ಮಿಸಿದರು, ಮತ್ತು ಬೆಂಗಳೂರಿನ ಗೌಡ ರಾಜರು ನಿರ್ಮಿಸಿದ ಕೆರೆಗಳಲ್ಲಿ ಬದುಕುಳಿದಿರುವ ಕೆರೆ ಇದಾಗಿದೆ. ಮೊದಲ ಬ್ರಿಟಿಷ್ ಸೇನಾ ನಿಲ್ದಾಣವು ೧೮೦೭ ರಲ್ಲಿ ಹಲಸೂರಿನಲ್ಲಿ ಸ್ಥಾಪನೆಯಾಯಿತು.
ಹಲಸೂರು ಕೆರೆಯ ಬಳಿ ಒಂದು ದೊಡ್ಡ ಹಲಸಿನಹಣ್ಣಿನ ತೋಟವಿತ್ತು. ಹಾಗಾಗಿ ಆ ಪ್ರದೇಶಕ್ಕೆ ಹಲಸೂರು ಎಂದು ಹೆಸರು ಬಂದಿತು ಎಂಬುದು ವಾಡಿಕೆ. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ 'ಹಲಸೂರು' ಎಂಬ ಹೆಸರು ಆಂಗ್ಲೀಕೃತಗೊಳಿಸಲ್ಪಟ್ಟಿತು.
ಹೊಯ್ಸಳ ಕಾಲದ ಶ್ರೀ ಸೋಮೇಶ್ವರ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದು. ಇಲ್ಲಿನ ರಾಮಕೃಷ್ಣ ಮಠವು ಸುಮಾರು ನೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
This article uses material from the Wikipedia ಕನ್ನಡ article ಹಲಸೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.