ಸುಲ್ತಾನ್ ಬತ್ತೆರಿ ಕೇರಳದಲ್ಲಿನ ವಯನಾಡು ಜಿಲ್ಲೆಯಲ್ಲಿ ಇರುವ ಒಂದು ನಗರ.
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಕೇರಳ-ಕರ್ನಾಟಕ ಗಡಿಗೆ ಹತ್ತಿರವಿರುವ ಈ ನಗರಕ್ಕೆ ಗಣಪತಿವಾಟ್ಟಮ್ ಎಂದೂ ಹೆಸರಿತ್ತು. ಕಿಡಂಗ ಬುಡಕಟ್ಟಿನ ಜನರು ವಾಸಿಸುತ್ತಿದ್ದುದರಿಂದ ಇದನ್ನು ಕಿಡಂಗನಾಡು ಎಂದೂ ಕರೆಯಲಾಗುತ್ತಿತ್ತು. ಇದು ವಯನಾಡು ಜಿಲ್ಲೆಯಲ್ಲಿರುವ ಅತೀ ದೊಡ್ಡ ನಗರಪ್ರದೇಶವಾಗಿದೆ. ಇಲ್ಲಿ ಸುಮಾರು ೧೩ನೇ ಶತಮಾನದಲ್ಲಿ ಕಟ್ಟಲ್ಪಟ್ಟಿರುವ ಜೈನ ಮಂದಿರವಿದ್ದು, ಟಿಪ್ಪು ಸುಲ್ತಾನ್ ಈ ಬಸದಿಯ ಮೇಲೆ ದಾಳಿ ಮಾಡಿ ಬಸದಿಯನ್ನು ಫಿರಂಗಿಗಳನ್ನು ಸಂಗ್ರಹಿಸುವ ಸಂಗ್ರಹಾಗಾರವನ್ನಾಗಿ ಬಳಸಲು ಆರಂಭಿಸಿದನು. ಹಾಗಾಗಿ ಈ ನಗರಕ್ಕೆ ಸುಲ್ತಾನ್ ಬತ್ತೆರಿ ಎಂದು ಹೆಸರು ಬಂತು. (ರಾಕೆಟ್ಟು, ಕ್ಷಿಪಣಿಗಳನ್ನು ಉಡಾಯಿಸುವ ಕೊಳವೆಯಾಕಾರದ ಸಾಧನಕ್ಕೆ ಆಂಗ್ಲಭಾಷೆಯಲ್ಲಿ ಬ್ಯಾಟರಿ ಎಂದು ಹೆಸರಿದೆ. ಬ್ಯಾಟರಿ ಶಬ್ಧವೇ ಹಿಂದಿಯಲ್ಲಿ ಬತ್ತೆರಿ ಆಗಿದೆ.) ಸುಲ್ತಾನ್ ಬತ್ತೆರಿ ಕೊಝಿಕ್ಕೊಡ್-ಕೊಳ್ಳೆಗಾಲ ರಾಷ್ಟ್ರೀಯ ಹೆದಾರಿಯಲ್ಲಿ, ಕೊಝಿಕ್ಕೊಡ್ನಿಂದ ಸುಮಾರು ೯೭ ಕಿಲೋ ಮೀಟರ್ ದೂರದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೯೩೦ಮೀಟರ್ ಎತ್ತರದಲ್ಲಿರುವ ಈ ನಗರ, ಮೈಸೂರಿನಿಂದ ೧೧೪ ಕಿಲೋ ಮೀಟರ್, ಉದಕಮಂಡಲದಿಂದ ೧೦೦ ಕಿ.ಮೀ ದೂರದಲ್ಲಿದೆ.
ಸುಲ್ತನ್ ಬತ್ತೆರಿ ಸುಲ್ತಾನ್ ಬತ್ತೆರಿ | |
---|---|
Town | |
Population (೨೦೦೧) | |
• Total | ೨೭೪೭೩ |
ಸುಲ್ತಾನ್ ಬ್ಯಾಟರಿ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಒಂದು ಒಳ್ಳೆಯ ರಸ್ತೆ ಸಂಪರ್ಕ ಹೊಂದಿದೆ. ಪ್ರಮುಖ ರಸ್ತೆ ಎನ್ ಹೆಚ್ 212 ಮೈಸೂರು, ಬೆಂಗಳೂರು ಮತ್ತು ಕ್ಯಾಲಿಕಟ್, ಎರಡು ರಾಜ್ಯ ಹೆದ್ದಾರಿಗಳು ಸಂಪರ್ಕ ಗೆ ಊಟಿ ಮತ್ತು ಕೊಯಂಬ ತ್ತೂರು ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ಹೊಂದಿದೆ ಸಂಪರ್ಕ ಮಂಗಳೂರು
This article uses material from the Wikipedia ಕನ್ನಡ article ಸುಲ್ತನ್ ಬತ್ತೆರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.