ಎ.ಆರ್.ಕೃಷ್ಣಶಾಸ್ತ್ರಿ:

ಪ್ರೊ.

ಎ. ಆರ್. ಕೃಷ್ಣಶಾಸ್ತ್ರಿ (ಫೆಬ್ರುವರಿ ೧೨, ೧೮೯೦ - ಫೆಬ್ರುವರಿ ೧, ೧೯೬೮) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳೊಲ್ಲಬ್ಬರು. ಇವರ "ಬಂಗಾಳಿ ಕಾದಂಬರೀಕಾರ ಬಂಕಿಮ ಚಂದ್ರ" ಎಂಬ ಕೃತಿಗೆ ೧೯೬೧ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಎ.ಆರ್.ಕೃಷ್ಣಶಾಸ್ತ್ರಿ
ಚಿತ್ರ[[File:|200px]]
ಜನನದ ದಿನಾಂಕ೧೨ ಫೆಬ್ರವರಿ 1890
ಹುಟ್ಟಿದ ಸ್ಥಳಅಂಬಳೆ
ಸಾವಿನ ದಿನಾಂಕ೧ ಫೆಬ್ರವರಿ 1968
ಮರಣ ಸ್ಥಳಬೆಂಗಳೂರು
ವೃತ್ತಿbiographer, ಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ
ಮಹಾರಾಜ ಕಾಲೇಜು


ಬಾಲ್ಯ

ತಂದೆ, ಪ್ರಖ್ಯಾತ ವಯ್ಯಾಕರಣಿ ಅಂಬಳೆ ರಾಮಕೃಷ್ಣಶಾಸ್ತ್ರಿಗಳು. ಇವರು ಶೃಂಗೇರಿ ಸ್ವಾಮಿಗಳ ಬಳಿ ಪದಕ, ಶಾಲು ಜೋಡಿ, ಚಿನ್ನದ ಕಾಪು, ತೋಡಗಳನ್ನು ಪಡೆದವರು. ಮೈಸೂರಿನ ಸಂಸ್ಕೃತ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ತಾಯಿ ಶಂಕರಮ್ಮನವರು. ಫೆ.೧೨, ೧೮೯೦ ರಲ್ಲಿ ಜನಿಸಿದರು. ಮೈಸೂರಿನ ದೇವೀರಮ್ಮಣ್ಣಿ ಅಗ್ರಹಾರದಲ್ಲಿ ವಾಸ್ತವ್ಯಹೂಡಿದ್ದ ಅವರ ಮನೆಯನ್ನು ಮಹಾರಾಜರೇ ಕೊಟ್ಟಿದ್ದರು. ಶಾಸ್ತ್ರಿಗಳಿಗೆ ಮನೆಯೇ ಪಾಠಶಾಲೆ, ಮತ್ತು ತಂದೆಯವರೇ ಶಿಕ್ಷಕರು. ಅವರ ಮೊದಲ ಪಾಠ, " ಓಂ ನಮಃ ಶಿವಾಯ. ತಮ್ಮ ೮ನೆ ವರ್ಷದಲ್ಲೇ ತಾಯಿಯವರ ಅಕಾಲನಿಧನದಿಂದ ತಂದೆಯವರ ಸಾನ್ನಿಧ್ಯ ಹೆಚ್ಚಾಯಿತು. ಅವರು ತಂದೆಯವರ ಜೊತೆಗೇ ಪಾಠಶಾಲೆಗೆ ಹೋಗುತ್ತಿದ್ದರು.

ಕೃಷ್ಣಶಾಸ್ತ್ರಿಗಳ ವೇಶಭೂಷಣಗಳು :

ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ಮತ್ತು ತಲೆಯಲ್ಲಿ ಜುಟ್ಟು ಇತ್ತು. ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿಹೋಗುತ್ತಿದ್ದರು. ಶಾಲೆಯಲ್ಲಿ ಎಲ್ಲರಿಗಿಂತ ತಾವೇ ಮೊದಲಿಗರು. ಅವರಿಗೆ ವಿದ್ಯಾರ್ಥಿವೇತನ ಸಿಕ್ಕ ಮೊದಲ ತಿಂಗಳಲ್ಲೇ, ಒಂದು ಪುಸ್ತಕ ಖರೀದಿಸಿದರು. ಅದರ ಹೆಸರು," ಆನಂದ ಮಠ."

ವೃತ್ತಿಜೀವನ  : (ಜಿಲ್ಲಾ ಕಛೇರಿ ಗುಮಾಸ್ತರಿಂದ- ಕನ್ನಡ ಪ್ರಾಧ್ಯಾಪಕರವರೆಗೆ)

ಗವರ್ನಮೆಂಟ್ ಕಾಲೇಜಿನಲ್ಲಿ ತಮ್ಮ ಬಿ.ಎ. ಪರೀಕ್ಷೆ ಪಾಸ್ ಮಾಡಿದರು. ಇಂಗ್ಲೀಷ್ ನಲ್ಲಿ ಕೇವಲ ಒಂದು ಅಂಕದಿಂದ ನಪಾಸ್ ಆಗಿದ್ದರು. ೧೯೧೩ ರಲ್ಲಿ ಅದೊಂದು ವಿಷಯಕ್ಕೆ ಪರೀಕ್ಷೆಗೆ ಕುಳಿತುಕೊಂಡು ತೇರ್ಗಡೆಯಾದರು. ಅದೇವರ್ಷದಲ್ಲಿ ಅವರಿಗೆ ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸ ಸಿಕ್ಕಿತು. ವೇತನ ತಿಂಗಳಿಗೆ ೩೫/-ರೂಪಾಯಿಗಳು. ಅಲ್ಲಿ ೬ ತಿಂಗಳು ಕೆಲಸಮಾಡಿ, ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಅಸಿಸ್ಟೆಂಟ್ ಮಾಸ್ಟರ್ ಆಗಿ ಸೇರಿ ಕೆಲಸಮಾಡಿದರು. ಮುಂದಿನ ವರ್ಷ ಅವರ ಸ್ಥಾನದ ಹೆಸರು, "ಟ್ಯೂಟರ್" ಎಂದಾಯಿತು. ಸೆಂಟ್ರಲ್ ಕಾಲೇಜಿನಲ್ಲಿ ಎಲ್ಲಾಭಾಷೆಗಳ ಒಂದೊಂದು ಸಂಘವಿದ್ದ ಕಾಲ ಅದು. ದುರದೃಷ್ಟವಶಾತ್ ಕನ್ನಡ ಭಾಷೆಯ ಸಂಘವಿರಲಿಲ್ಲ.

ಸೆಂಟ್ರೆಲ್ ಕಾಲೇಜಿನಲ್ಲಿ, ಪ್ರಬುದ್ಧಕರ್ನಾಟಕ ಪತ್ರಿಕೆಯ ಆರಂಭ:

ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಸಂಘವೆಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಮುಂದಿನ ವರ್ಷ '"ಪ್ರಬುದ್ಧ ಕರ್ನಾಟಕ"' ತ್ರೈಮಾಸಿಕ ಪತ್ರಿಕೆಪತ್ರಿಕೆಯನ್ನು ಆರಂಭಿಸಿದರು. ಆಗಿನಕಾಲದಲ್ಲಿ ಕನ್ನಡ ಓದುವವರು, ಅದರಲ್ಲಿ ಬರೆಯುವವರು ಇರಲೇ ಇಲ್ಲವೆನ್ನಬಹುದು. ಶಾಸ್ತ್ರಿಯವರಿಗೋ ಕನ್ನಡ ಸಂಘ ಮತ್ತು ಪ್ರಬುದ್ಧ ಕರ್ನಾಟಕಗಳು ಎರಡು ಕಣ್ಣಿನಷ್ಟು ಪ್ರಮುಖವಾದವುಗಳು. ಮನೆ ಮನೆಗಳಿಗೂ ಹೋಗಿ ಕನ್ನಡಲ್ಲಿ ಹೆಚ್ಚು ಹೆಚ್ಚು ಬರೆಯಲು ಯುವಜನರನ್ನು ಪ್ರೋತ್ಸಾಹಿಸಿದರು. ತಪ್ಪುಗಳನ್ನು ತಾವೇ ತಿದ್ದಿ ಪ್ರಕಟಪಡಿಸುತ್ತಿದ್ದರು. ಅಲ್ಲಿ ಟ್ಯೂಟರ್ ಆಗಿದ್ದಾಗಲೇ ತಾವೇ ಸ್ವತಃ ಓದಿಕೊಂಡು ಎಮ್. ಎ. ಪರೀಕ್ಷೆ ಪಾಸುಮಾಡಿದರು. ೧೯೧೯ ರಲ್ಲಿ ಅವರಿಗೆ ಓರಿಯೆಂಟಲ್ ಲೈಬ್ರರಿಯಲ್ಲಿ ಸಂಶೋಧಕ ವಿಜ್ಞಾನಿಯ ಕೆಲಸ ಸಿಕ್ಕಿತು. ಅವರು ಅಲ್ಲಿನ ಲೆಕ್ಕ-ಪತ್ರ, ಪುಸ್ತಕಗಳ ಮಾರಾಟದ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕಾಗಿತ್ತು. ಆದ್ದರಿಂದ ಹೆಚ್ಚು ಸಂಶೋಧನೆಗಳನ್ನು ಮಾಡಲಾಗಲಿಲ್ಲ. ಇವರಿಗೆ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ಹತ್ತಿರದ ಗೆಳೆಯರು. ಎ. ಆರ್. ಕೃಷ್ಣಶಾಸ್ತ್ರಿಗಳು ಒಬ್ಬ ಘನ ವಿದ್ವಾಂಸರು. ೧೯೩೯ ರಲ್ಲಿ ಪ್ರೊ. ವೆಂಕಣ್ಣಯ್ಯನವರು ಮರಣಹೊಂದಿದರು. ಈ ಅಕಾಲ ಮರಣದಿಂದ ಶಾಸ್ತ್ರಿಗಳು ತುಂಬಾ ನೊಂದಿದ್ದರು. ಆದರೆ ಶಾಸ್ತ್ರಿಗಳನ್ನು ವೆಂಕಣ್ಣಯನವರ ಸ್ಥಾನವನ್ನು ತುಂಬಲು ವಿಶ್ವವಿದ್ಯಾಲಯದವರು ಮನವಿಮಾಡಿಕೊಂಡಿದ್ದರಿಂದ ಒಪ್ಪಿಕೊಳ್ಳಲೇಬೇಕಾಯಿತು. ಟಿ. ಎಸ್.ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳ ಜೋಡಿಯನ್ನು ಮಿತ್ರರು, "ಅಶ್ವಿನಿದೇವತೆಗಳು," ಎಂದು ಕರೆಯುತ್ತಿದ್ದರು. ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳ ಮತ್ತೊಂದು ಅಮೂಲ್ಯವಾದ ಕೊಡುಗೆ ಎಂದರೆ "'ವಚನಭಾರತ"'ವೆಂಬ ಗ್ರಂಥದ ರಚನೆ. ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ವಚನಭಾರತ, ೫೦೦ ಪುಟಗಳ ಸರಳ, ಸ್ಪಷ್ಟ ಲೇಖನ. ವಚನಭಾರತವನ್ನು ಏಕೆ ಓದಬೇಕು ಎನ್ನುವುದರ ಬಗ್ಗೆ ಬಹಳ ಸುಂದರವಾಗಿ ತಮ್ಮ ಪೀಠಿಕೆಯಲ್ಲಿ ಬರೆದಿದ್ದಾರೆ. ಸ್ವತಃ ದೈವಭಕ್ತರಾದರೂ, ಅವರು ತಮ್ಮ ೬೦ ನೆಯ ವರ್ಷದ ಷಷ್ಟಿಪೂರ್ತಿಯನ್ನು ನೆರೆವೇರಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಪ್ರತಿವರ್ಷವೂ ಮಾಘ ಶುದ್ಧ ಪೂರ್ಣಿಮೆಯ ದಿನದಂದು, ಭಾರತದ ಪ್ರತಿಯನ್ನು ದೇವರಮುಂದೆ ಇಟ್ಟು, ಪೂಜಿಸಿ, ಅದರ ಪ್ರತಿಗಳನ್ನು ಎಲ್ಲರಿಗೂ ಹಂಚಿ ತೃಪ್ತಿಪಡುತ್ತಿದ್ದರು. ಅವರಿಗೆ ಸಂಸ್ಕೃತ, ಬಂಗಾಳಿ, ತಮಿಳು, ತೆಲುಗು, ಹಿಂದಿ, ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಫ್ರೆಂಚ್, ಜರ್ಮನ್, ಉರ್ದುಭಾಷೆಗಳನ್ನೂ ಅವರು ಕಲಿತುಕೊಂಡರು. ವಚನಭಾರತ ಬರೆದ ಸ್ವಲ್ಪದಿನದಲ್ಲೇ, ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಬಸವನಗುಡಿಯ ೨ ನೆಯ ರಸ್ತೆಯಲ್ಲಿದ್ದ ಅವರಮನೆಯ ರಸ್ತೆಯನ್ನು, ಎ. ಆರ್. ಕೃಷ್ಣ ಶಾಸ್ತ್ರಿ ರೋಡ್, ಎಂದು ನಾಮಕರಣಮಾಡಲಾಯಿತು.

ನಿವೃತ್ತಿಯ ನಂತರವೂ ಕೆಲಸಕ್ಕೆ ಆಹ್ವಾನ :

ಅವರು ನಿವೃತ್ತರಾದಮೇಲೂ ಕನ್ನಡದಲ್ಲಿ ಪಾಠಹೇಳಲು ಕರೆ ಬಂದದ್ದು, ನ್ಯಾಷನಲ್ ಕಾಲೇಜ್ ನಲ್ಲಿ. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಒಂದು ಪೈಸ ಮುಟ್ಟಲಿಲ್ಲ. ಆಗ ಪಾಠಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತ್ತಿದ್ದರು. ಪ್ರತಿ ದಿನ ಮಾರನೆಯ ದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠ ಮಾಡುತ್ತಿದ್ದರು. ಅವರು ಬಂಗಾಳಿ ಭಾಷೆಯನ್ನು ಕಲಿತರು. ಭಾರತ ಸಾಹಿತ್ಯ ಅಕ್ಯಾಡಮಿಯವರು,ಬಂಕಿಮ ಚಂದ್ರ ಪುಸ್ತಕಕ್ಕೆ, ೧,೦೦೦ ರೂಪಾಯಿ ಬಹುಮಾನ, ತಾಮ್ರಪತ್ರಕೊಟ್ಟು ಗೌರವಿಸಿದರು. ಆಗ ೭೦ ವರ್ಷ. ಆರೋಗ್ಯ ಚೆನ್ನಾಗಿಲ್ಲದಿದ್ದರಿಂದ ಆ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಮಿತ್ರರಮುಂದೆ ಕೊಡಲಾಯಿತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಣಗಳನ್ನು ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ. ಅವರ ಮೊಮ್ಮಕ್ಕಳಾದ, ನಿರ್ಮಲ ಮತ್ತು ಭಾರತಿಯವರಿಗೆ ಅರ್ಥವಾಗುವುದು ಕಷ್ಟ ಎಂದು ತೋರಿದಾಗ, ಅವರು "ನಿರ್ಮಲಭಾರತಿ" ಎಂಬ ಪುಸ್ತಕವನ್ನು ಕೇವಲ ಮಕ್ಕಳಿಗಾಗಿಯೇ ಬರೆದರು. ಅವರ ಅಭಿಮಾನಿಗಳು, ಗೆಳೆಯರು ತಮ್ಮ ಗೌರವವನ್ನು ಸಲ್ಲಿಸಲು ಅವರಿಗೆ "ಅಭಿವಂದನ" ಎಂಬ ಗ್ರಂಥವನ್ನು ಹೊರತಂದರು. ಈಗ ಶಾಸ್ತ್ರಿಗಳು ಅದಕ್ಕೆ ವಿರೋಧಿಸಲಿಲ್ಲ. ಪ್ರಶಸ್ತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಲ್ಲಿ ದಯಪಾಲಿಸಲಾಯಿತು. ಅವರ ೭೩ ನೆಯ ವಯಸ್ಸಿನಲ್ಲಿ, ತಮ್ಮ ಕೊನೆಯ ಕೃತಿ ನಿಬಂಧಮಾಲ ಬರೆಯಲು ಪ್ರಾರಂಭಿಸಿದರು. ಆದರೆ, ೧, ಫೆ, ೧೯೬೮ ರಲ್ಲಿ ನಿಧನರಾದರು. ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆಯನ್ನು ಗಮನಿಸಿ, ಮೈಸೂರು ವಿಶ್ವವಿದ್ಯಾನಿಲಯ "ಗೌರವ ಡಿ.ಲಿಟ್ ," ಪದವಿಯನ್ನು ಕೊಟ್ಟು ಪುರಸ್ಕರಿಸಿದರು. ಅದೇ ವರ್ಷದಲ್ಲಿ, ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿಯೂ ಬಂತು. ೧೯೪೧ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು.

ಬಿರುದು ಮತ್ತು ಪ್ರಶಸ್ತಿಗಳು:

"ಕನ್ನಡಕುಲಸಾರಥಿ", "ಕನ್ನಡ ಕುಲಗುರು", ಎಂದು ಅವರ ಶಿಷ್ಯರುಗಳು ಮತ್ತು ಅಭಿಮಾನಿಗಳು ಕರೆಯುತ್ತಿದ್ದರು. ವಿಶ್ವವಿದ್ಯಾಲಯದ ಪದವಿದಾನ ಸಮಾರಂಭಗಳಲ್ಲಿ, ಶಾಸ್ತ್ರಿಗಳು ಕಂಚಿನಕಂಠದಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದದ್ದು, ದಾಖಲೆಗೆ ಪಾತ್ರವಾದ ಸಂಗತಿ.


ಅವರ ಕೃತಿಗಳು :

  • ೧. ೧೨ ನೆಯ ಶತಮಾನದ ಜೈನರ ಗ್ರಂಥಗಳು.
  • ೨. ಧರ್ಮಾಮೃತ.
  • ೩. ಕೆಳದೀ ನೃಪವಿಜಯ.
  • ೪. ಸಂಸ್ಕೃತನಾಟಕ
  • ೫. ಭಾಸಕವಿ
  • ೬. ರಾಮಕೃಷ್ಣಪರಮಹಂಸರು.
  • ೭. ನಾಗಮಹಾಶಯ.
  • ೮. ಸರ್ವಜ್ಞ ಕವಿ.
  • ೯. ಕನ್ನಡ ಸಂಸ್ಕೃತ ನಾಟಕಗಳು.
  • ೧೦. ಭಾಸ, ಶೂದ್ರಕ, ಕಾಳಿದಾಸ.
  • ೧೧. ವಚನಭಾರತ.
  • ೧೨. ಶ್ರೀಪತಿಯ ಕಥೆಗಳು.
  • ೧೩. ಕಥಾಮೃತ.
  • ೧೪. ಬೃಹತ್ ಕಥಾಮಂಜರಿ.
  • ೧೫. ಕಥಾಸರಿತ್ಸಾಗರ.
  • ೧೬. ದಡ್ಡರಕಥೆ.
  • ೧೭. ಭೇತಾಳ ವರ.
  • ೧೮. ರಾಜಾರಾಣಿಯರ, ಋಷಿಗಳಮತ್ತು ಗಂಧರ್ವರ ಕಥೆಗಳು.
  • ೧೯. ಬಂಕಿಮ ಚಂದ್ರ.
  • ೨೦. ನಿರ್ಮಲಭಾರತಿ.
  • ೨೧. ನಿಬಂಧಮಾಲ.
  • ೨೨. ಭಾಷಣಗಳು-ಲೇಖನಗಳು.
  • ೨೩. ಕವಿಜಿಹ್ವಾಬಂಧನ.

-ಕೆ. ಶಾಂತಾ, ೧೯೭೩. ಪ್ರೊ. ಎಲ್. ಎಸ್. ಎಸ್. ರವರು ಸಂಪಾದಿಸಿದ ಕಿರುಹೊತ್ತಿಗೆಗಳು.

ನೋಡಿ

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣಶಾಸ್ತ್ರೀ, ಎ ಆರ್

ಉಲ್ಲೇಖಗಳು

Tags:

ಎ.ಆರ್.ಕೃಷ್ಣಶಾಸ್ತ್ರಿ ಬಾಲ್ಯಎ.ಆರ್.ಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿಗಳ ವೇಶಭೂಷಣಗಳು :ಎ.ಆರ್.ಕೃಷ್ಣಶಾಸ್ತ್ರಿ ವೃತ್ತಿಜೀವನ  : (ಜಿಲ್ಲಾ ಕಛೇರಿ ಗುಮಾಸ್ತರಿಂದ- ಕನ್ನಡ ಪ್ರಾಧ್ಯಾಪಕರವರೆಗೆ)ಎ.ಆರ್.ಕೃಷ್ಣಶಾಸ್ತ್ರಿ ಸೆಂಟ್ರೆಲ್ ಕಾಲೇಜಿನಲ್ಲಿ, ಪ್ರಬುದ್ಧಕರ್ನಾಟಕ ಪತ್ರಿಕೆಯ ಆರಂಭ:ಎ.ಆರ್.ಕೃಷ್ಣಶಾಸ್ತ್ರಿ ನಿವೃತ್ತಿಯ ನಂತರವೂ ಕೆಲಸಕ್ಕೆ ಆಹ್ವಾನ :ಎ.ಆರ್.ಕೃಷ್ಣಶಾಸ್ತ್ರಿ ಬಿರುದು ಮತ್ತು ಪ್ರಶಸ್ತಿಗಳು:ಎ.ಆರ್.ಕೃಷ್ಣಶಾಸ್ತ್ರಿ ನೋಡಿಎ.ಆರ್.ಕೃಷ್ಣಶಾಸ್ತ್ರಿ ಉಲ್ಲೇಖಗಳುಎ.ಆರ್.ಕೃಷ್ಣಶಾಸ್ತ್ರಿಕೇಂದ್ರ ಸಾಹಿತ್ಯ ಅಕಾಡೆಮಿಫೆಬ್ರುವರಿ ೧ಫೆಬ್ರುವರಿ ೧೨೧೮೯೦೧೯೬೧೧೯೬೮

🔥 Trending searches on Wiki ಕನ್ನಡ:

ಅಂತರಜಾಲಇಂಡಿಯನ್ ಪ್ರೀಮಿಯರ್ ಲೀಗ್ಪರಿಸರ ವ್ಯವಸ್ಥೆವಿವಾಹಬಯಲಾಟಬಾಲಕಾರ್ಮಿಕಇನ್ಸ್ಟಾಗ್ರಾಮ್ಕೂಡಲ ಸಂಗಮಬಾದಾಮಿಹೆಚ್.ಡಿ.ದೇವೇಗೌಡಜಾನ್ವಿ ಕಪೂರ್ಬಾಲ ಗಂಗಾಧರ ತಿಲಕಅಂಬಿಗರ ಚೌಡಯ್ಯಭಾರತದ ರಾಷ್ಟ್ರಗೀತೆವಚನಕಾರರ ಅಂಕಿತ ನಾಮಗಳುಭಾರತದ ತ್ರಿವರ್ಣ ಧ್ವಜನುಡಿಗಟ್ಟುವಿದುರಾಶ್ವತ್ಥಮಾನವನ ನರವ್ಯೂಹಭಾಷಾ ವಿಜ್ಞಾನಸಮಾಸಪಕ್ಷಿಕದಂಬ ರಾಜವಂಶವಿರೂಪಾಕ್ಷ ದೇವಾಲಯಆಣೆಕಿತ್ತೂರು ಚೆನ್ನಮ್ಮಭೂಮಿ ದಿನಭಾರತದ ರಾಜ್ಯಗಳ ಜನಸಂಖ್ಯೆಮುಕ್ತಾಯಕ್ಕಹಾವೇರಿಬಳ್ಳಾರಿರಾಶಿಗಣರಾಜ್ಯೋತ್ಸವ (ಭಾರತ)ಶಬ್ದಮಣಿದರ್ಪಣಮಳೆಗಾಲಮದುವೆತ್ರಿವೇಣಿಸಂಸ್ಕೃತ ಸಂಧಿಚಂದ್ರಶೇಖರ ಕಂಬಾರವಾಯು ಮಾಲಿನ್ಯಕಲಿಕೆಮಣ್ಣುಶ್ರೀಲಂಕಾ ಕ್ರಿಕೆಟ್ ತಂಡಜಯಮಾಲಾಭಾರತೀಯ ನದಿಗಳ ಪಟ್ಟಿಮಲಬದ್ಧತೆಉತ್ತರ ಕನ್ನಡವೀಳ್ಯದೆಲೆಅರವಿಂದ ಘೋಷ್ಚಾಲುಕ್ಯಕನ್ನಡ ಅಕ್ಷರಮಾಲೆಕನ್ನಡದಲ್ಲಿ ಸಣ್ಣ ಕಥೆಗಳುಮಾರ್ಕ್ಸ್‌ವಾದನಾಗರೀಕತೆಶಿಶುನಾಳ ಶರೀಫರುಕ್ರಿಯಾಪದಶಾಂತಕವಿಭಾರತೀಯ ಅಂಚೆ ಸೇವೆಕಂಪ್ಯೂಟರ್ಭಾರತದ ಸಂಸತ್ತುಭಕ್ತಿ ಚಳುವಳಿಪ್ರಶಾಂತ್ ನೀಲ್ಭಾರತೀಯ ಕಾವ್ಯ ಮೀಮಾಂಸೆಹಲ್ಮಿಡಿಸಮುದ್ರಗುಪ್ತಧರ್ಮ (ಭಾರತೀಯ ಪರಿಕಲ್ಪನೆ)ಚನ್ನವೀರ ಕಣವಿರಚಿತಾ ರಾಮ್ತುಮಕೂರುಬಂಗಾರದ ಮನುಷ್ಯ (ಚಲನಚಿತ್ರ)ಸಂಪತ್ತಿನ ಸೋರಿಕೆಯ ಸಿದ್ಧಾಂತಭಾರತ ಸಂವಿಧಾನದ ಪೀಠಿಕೆಕನಕದಾಸರುಬಾಲಕೃಷ್ಣಮಡಿವಾಳ ಮಾಚಿದೇವಕಂಸಾಳೆಅಳಿಲು🡆 More