ಅಂತಾರಾಷ್ಟ್ರೀಯ ಭೂಪಟಶಾಸ್ತ್ರ ಸಂಘ

ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟದಿಂದಲೇ ಉದ್ಭವಿಸಿದ ಈ ಸಂಘ ಇನ್ನೂ ಒಕ್ಕೂಟದ ಸಂಯೋಜಿತ ಸಂಘ ವಾಗಿಯೇ ಉಳಿದುಕೊಂಡಿದೆ.

ಅಂತಾರಾಷ್ಟ್ರೀಯ ಭೂಪಟಶಾಸ್ತ್ರ ಸಂಘ

ಈ ಸಂಘದ ಧ್ಯೇಯಗಳೆಂದರೆ: 1. ದಕ್ಷಿಣ ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಆಕೃತಿ ವಿಸ್ತಾರಗಳನ್ನು ತ್ರಿಕೋಣಮಾನದಿಂದ ನಿರ್ಣಯಿಸುವುದು. 2. ಭೂಗೋಳಶಾಸ್ತ್ರದ ಅಧ್ಯಯನದ ವಿವಿಧಘಟ್ಟಗಳಲ್ಲಿ ಪ್ರದೇಶವಿವರಣೆಯ ಭೂಪಟಗಳಿಗೆ ಪ್ರಾಮುಖ್ಯ ಕೊಡುವುದು. 3. ಸಮುದ್ರ ಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ನಿರ್ಧರಿಸಲು ಭೂಮಿಯ ಕೆಲವು ಮೇಲ್ಮೈ ಭಾಗಗಳನ್ನು ನಿಖರವಾಗಿ ಸಮಗೊಳಿಸಲು ಇರುವ ಅಗತ್ಯ. 4. ಭೂಗೋಳವೊಂದನ್ನು 1:1,000,000ರ ಮಾಪಕದಲ್ಲಿ ತಯಾರಿಸಲು ಒಂದು ಪ್ರಯೋಗತಂತ್ರವನ್ನು ರೂಪಿಸುವುದು.

ಮೇಲೆ ತಿಳಿಸಿದ ಮಾಪಕದ ರೀತ್ಯಾ ಭೂಪಟದ ರಚನೆಗೆ ಸಂಬಂಧಿಸಿದ ಕಾರ್ಯವನ್ನು ನಡೆಸಲು ಸಂಘ 1891ರಲ್ಲಿ ಬರ್ನ್ನಲ್ಲಿ ಸ್ಪೇನಿನ ಕರ್ನಲ್ ಕೋಎಲ್ಲೊ ಅವರ ನೇತೃತ್ವದಲ್ಲಿ ಒಂದು ಸಮರ್ಥ ನಕ್ಷಾಶಾಸ್ತ್ರ ಸಮಿತಿಯನ್ನು ರಚಿಸಿತು. ಸಂಘದ ಮೂರು ಅಧಿವೇಶನಗಳು ಸ್ಟಾಕ್ಹೋಂನಲ್ಲಿ (1960), ಲಂಡನ್ನಲ್ಲಿ (1964) ಮತ್ತು ನವದೆಹಲಿಯಲ್ಲಿ (1968) ನಡೆದುವು. ಇದಕ್ಕೆ ಮೊದಲು 1925ರಲ್ಲಿ ಈಜಿಪ್ಟಿನ ದೊರೆ ಫೌದ್ನ ಆಶ್ರಯದಲ್ಲಿ 1908ರಲ್ಲಿ ಜಿನೀವ ಅಧಿವೇಶನದಲ್ಲಿ ಪ್ರಾರಂಭವಾದ ಪ್ರಪಂಚದ ಉಬ್ಬುಚಿತ್ರ ಭೂಪಟದ ಕಾರ್ಯವನ್ನು ಪುರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಪ್ರಧಾನವಾಗಿ ಎದ್ದುಕಾಣುವ ಹಾಗೂ ಮೇಲ್ಮೈಲಕ್ಷಣಗಳನ್ನು ತೋರಿಸುವ ಭೂಪಟಗಳನ್ನು ಅಚ್ಚುಹಾಕಲು ಯುದ್ಧಾನಂತರ ಕಾಲಗಳಲ್ಲಿ ಹೊಸ ಹೊಸ ತಂತ್ರಗಳನ್ನು ರೂಪಿಸಲಾಗಿದೆ.

1968ರಲ್ಲಿ ನವದೆಹಲಿಯಲ್ಲಿ ಸೇರಿದ ಅಧಿವೇಶನದಲ್ಲಿ 1. ನಕ್ಷಾಶಾಸ್ತ್ರಜ್ಞರ ತರಬೇತಿ, 2. ತಾಂತ್ರಿಕ ಪದಗಳ ವ್ಯಾಖ್ಯೆ, ವರ್ಗೀಕರಣ ಹಾಗೂ ಅವುಗಳ ಪ್ರಮಾಣನಿಷ್ಕರ್ಷೆ, 3. ನಕ್ಷಾಶಾಸ್ತ್ರದಲ್ಲಿ ಸ್ವಯಂಚಾಲನ ವ್ಯವಸ್ಥೆ-ಈ ಅಂಶಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ನಕ್ಷಾಶಾಸ್ತ್ರ ಸಂಘದ ಜಂಟಿ ಅಧಿವೇಶನ ಎರಡೂ ವಿಭಾಗಗಳಲ್ಲಿ ಪರಿಣತರ ಸಂಪೂರ್ಣ ಸಹಕಾರಕ್ಕೆ ಕರೆನೀಡಿತು.

ಅಂತಾರಾಷ್ಟ್ರೀಯ ಭೂಪಟಶಾಸ್ತ್ರ ಸಂಘ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ದಕ್ಷಿಣ ಆಫ್ರಿಕಭೂಗೋಳಲ್ಯಾಟಿನ್

🔥 Trending searches on Wiki ಕನ್ನಡ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸ್ಕೌಟ್ಸ್ ಮತ್ತು ಗೈಡ್ಸ್ಕರ್ಬೂಜಶಾಲೆಮಹಾತ್ಮ ಗಾಂಧಿರಾಮ ಮಂದಿರ, ಅಯೋಧ್ಯೆಕವಿಗಳ ಕಾವ್ಯನಾಮಕಾವೇರಿ ನದಿಚಿಕ್ಕಮಗಳೂರುಉತ್ತರ ಪ್ರದೇಶಕಳಸವೆಬ್‌ಸೈಟ್‌ ಸೇವೆಯ ಬಳಕೆಜಯಪ್ರಕಾಶ ನಾರಾಯಣಭಾರತದ ಮಾನವ ಹಕ್ಕುಗಳುಕನ್ನಡದಲ್ಲಿ ವಚನ ಸಾಹಿತ್ಯಮಾನವ ಅಭಿವೃದ್ಧಿ ಸೂಚ್ಯಂಕಆರೋಗ್ಯಡ್ರಾಮಾ (ಚಲನಚಿತ್ರ)ಪಂಜೆ ಮಂಗೇಶರಾಯ್ಹತ್ತಿವಿಶ್ವದ ಅದ್ಭುತಗಳುಗೊಮ್ಮಟೇಶ್ವರ ಪ್ರತಿಮೆಯೋನಿಸಮುಚ್ಚಯ ಪದಗಳುಜೀವವೈವಿಧ್ಯನಾಟಕಭಾರತದ ಸಂವಿಧಾನದ ೩೭೦ನೇ ವಿಧಿಕೊಡಗುಇಂದಿರಾ ಗಾಂಧಿಭೂಕಂಪಸುಭಾಷ್ ಚಂದ್ರ ಬೋಸ್ಎಲೆಕ್ಟ್ರಾನಿಕ್ ಮತದಾನದೇವರ ದಾಸಿಮಯ್ಯಭಾರತೀಯ ರೈಲ್ವೆಇ-ಕಾಮರ್ಸ್ಮಜ್ಜಿಗೆರಾವಣವಿಭಕ್ತಿ ಪ್ರತ್ಯಯಗಳುಬುಡಕಟ್ಟುಜಾಗತಿಕ ತಾಪಮಾನ ಏರಿಕೆಜ್ಞಾನಪೀಠ ಪ್ರಶಸ್ತಿಮಣ್ಣುಗ್ರಾಮ ಪಂಚಾಯತಿಬಿಳಿಗಿರಿರಂಗನ ಬೆಟ್ಟಅಕ್ಕಮಹಾದೇವಿರಾಹುಲ್ ಗಾಂಧಿಬಂಡಾಯ ಸಾಹಿತ್ಯರೈತಕಾಮಸೂತ್ರಯೇಸು ಕ್ರಿಸ್ತಬೌದ್ಧ ಧರ್ಮಖ್ಯಾತ ಕರ್ನಾಟಕ ವೃತ್ತಶುಕ್ರಮೈಸೂರುಕರ್ನಾಟಕದ ಮಹಾನಗರಪಾಲಿಕೆಗಳುಚಿನ್ನಭೂಮಿಸಂಸ್ಕೃತ ಸಂಧಿಹಣ್ಣುವ್ಯವಹಾರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಂಪ ಪ್ರಶಸ್ತಿಜೀವನಮಲೆಗಳಲ್ಲಿ ಮದುಮಗಳುಗೌತಮ ಬುದ್ಧದಾವಣಗೆರೆಮಾರೀಚಅಷ್ಟ ಮಠಗಳುಚಂಡಮಾರುತಮೊಘಲ್ ಸಾಮ್ರಾಜ್ಯಗಾಳಿ/ವಾಯುಸಾಮಾಜಿಕ ಸಮಸ್ಯೆಗಳುಭೋವಿಪ್ರಜಾಪ್ರಭುತ್ವಗರ್ಭಧಾರಣೆಊಳಿಗಮಾನ ಪದ್ಧತಿಬ್ಲಾಗ್ಹಲ್ಮಿಡಿ🡆 More