ದೂರದರ್ಶನ ಕೇಂದ್ರ - ಬೆಂಗಳೂರು: ಭಾರತದ ಏಕೈಕ ಸಾರ್ವಜನಿಕ ಕಿರುತೆರೆ ಜಾಲವಾದ ದೂರದರ್ಶನದ ಬೆಂಗಳೂರು ಕೇಂದ್ರ.
೧೯೮೨ರಲ್ಲಿ ದೂರದರ್ಶನ ರಾಷ್ಟ್ರೀಯ ವಾಹಿನಿಯ ಪ್ರಸಾರ ಕೇಂದ್ರವಾಗಿ ಸ್ಥಾಪನೆಗೊಂಡ ಬೆಂಗಳೂರು ದೂರದರ್ಶನ ಕೇಂದ್ರವು ಶಂಕರ್ ಗುರು ಚಲನಚಿತ್ರದ ಪ್ರಸಾರದೊಡನೆ ಚಾಲನೆಗೊಂಡಿತು. ನಂತರ ೧೯೮೪ರಲ್ಲಿ ಕನ್ನಡ ಕಾರ್ಯಕ್ರಮಗಳ ಪ್ರಸಾರದೊಡನೆ ಸ್ವತಂತ್ರವಾಹಿನಿ ಯಾಯಿತು.
ಪ್ರತಿನಿತ್ಯ ಸಂಜೆ ಕೆಲವು ಗಂಟೆಗಳ ಕನ್ನಡ ಕಾರ್ಯಕ್ರಮಗಳ ಪ್ರಸಾರವಾಗಲು ತೊಡಗಿದವು ಹಾಗು ಹಂಸಗೀತೆ ಚಲನಚಿತ್ರದ ಪ್ರಸಾರದೊಡನೆ ವಾರಕ್ಕೊಮ್ಮೆ ಕನ್ನಡ ಚಲನಚಿತ್ರದ ಪ್ರಸಾರವಾಗಲು ಪ್ರಾರಂಭವಾಯಿತು. ಕನ್ನಡ ವಾರ್ತೆಗಳು, ಚಲನಚಿತ್ರ ಗೀತೆಗಳ ಕಾರ್ಯಕ್ರಮವಾದ ಚಿತ್ರಮಂಜರಿ, ನಾಟಕ, ಶಾಸ್ತ್ರೀಯ ಸಂಗೀತ/ಭಾವಗೀತೆ, ಶೈಕ್ಷಣಿಕ ಕಾರ್ಯಕ್ರಮಗಳು ಬಿತ್ತರಗೊಳ್ಳಲು ಶುರುವಾಯಿತು.
ಸಿಹಿ ಕಹಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಧಾರಾವಾಹಿ. ಸಿಹಿ ಕಹಿಯ ಯಶಸ್ಸಿನ ಹಿಂದೆಯೇ ಅನೇಕ ಧಾರಾವಾಹಿಗಳ ನಿರ್ಮಾಣವಾದವು, ಹಾಗೆಯೇ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ೯೦ರ ದಶಕದ ಮಧ್ಯದಲ್ಲಿ ಡಿ.ಡಿ.೯ ಎಂಬ ಇನ್ನೊಂದು ವಾಹಿನಿಯೂ ಪ್ರಾರಂಭವಾಯಿತು.
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಮಧ್ಯಾಹ್ನ ೩ರಿಂದ ರಾತ್ರಿ ೮ರವರೆಗೆ ಪ್ರಸಾರದಲ್ಲಿದ್ದು, ನಂತರದ ಸಮಯಗಳಲ್ಲಿ ದೂರದರ್ಶನ ರಾಷ್ಟ್ರೀಯ ಜಾಲದ ಕಾರ್ಯಕ್ರಮಗಳ ಪ್ರಸಾರವನ್ನು ಮುಂದುವರೆಸುತ್ತದೆ. ಡಿ.ಡಿ.೯ ವಾಹಿನಿಯು ೧೯೯೯ರಲ್ಲಿ ಚಂದನ ಎಂಬ ಹೆಸರಿಂದ ಅಧಿಕ ಅವಧಿಯ ಪ್ರಸಾರವನ್ನು ಮುಂದುವರೆಸಿ, ಸದ್ಯಕ್ಕೆ ಬೆಳಗ್ಗೆ ೫ರಿಂದ ರಾತ್ರಿ ೧೦ರವರೆಗೆ ಪ್ರಸಾರದಲ್ಲಿರುವ ವಾಹಿನಿಯಾಗಿದೆ.
This article uses material from the Wikipedia ಕನ್ನಡ article ಬೆಂಗಳೂರು ದೂರದರ್ಶನ ಕೇಂದ್ರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.