ಅರುಣ್ ಶೌರಿ (ಹಿಂದಿ: अरूण शौरी) (ಜನನ: 1941 ನವೆಂಬರ್ 2) ಭಾರತದ ಒಬ್ಬ ಪತ್ರಿಕೋದ್ಯಮಿ, ಲೇಖಕ, ಬುದ್ಧಿಜೀವಿ ಮತ್ತು ರಾಜಕಾರಣಿಯಾಗಿದ್ದಾರೆ.
ಇವರು ವಿಶ್ವ ಬ್ಯಾಂಕ್ನ (1968-72 ಮತ್ತು 1975-77) ಅರ್ಥಶಾಸ್ತ್ರಜ್ಞರು, ಭಾರತದ ಯೋಜನಾ ಆಯೋಗದ ಸಲಹೆಗಾರ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯದ ಸಂಪಾದಕ ಮತ್ತು ಭಾರತ ಸರಕಾರದಲ್ಲಿ (1998-2004) ಸಚಿವರಾಗಿ ಕೆಲಸಮಾಡಿದ್ದಾರೆ.
ಅರುಣ್ ಶೌರಿ | |
---|---|
ವೈಯಕ್ತಿಕ ಮಾಹಿತಿ | |
ಜನನ | ಜಲಂಧರ್, ಭಾರತ | ನವೆಂಬರ್ ೨, ೧೯೪೧
ರಾಜಕೀಯ ಪಕ್ಷ | ಭಾರತೀಯ ಜನತಾ ಪಾರ್ಟಿ |
ಸಂಗಾತಿ(ಗಳು) | ಅನಿತ |
ವೃತ್ತಿ | ರಾಜಕಾರಣಿ |
ಉದ್ಯೋಗ | ಪತ್ರಕರ್ತ ಮತ್ತು ವಿಶ್ವ ಬ್ಯಾಂಕ್ನ ಅರ್ಥಶಾಸ್ತ್ರಜ್ಞ |
ಭಾರತದ ಜಲಂಧರ್ನಲ್ಲಿ ಅವರು ಜನಿಸಿದರು. ಅವರ ತಂದೆ ಪೌರಾಡಳಿತ ಅಧಿಕಾರಿಯಾಗಿರುವ (IAS) ಹರಿ ದೇವ್ ಶೌರಿ, ನಂತರ ಗ್ರಾಹಕ ಹಕ್ಕುಗಳ ರಕ್ಷಣೆ ಕಾರ್ಯಕರ್ತರಾದರು. ಭಾರತದ ವಿಭಜನೆಯ ಸಮಯದಲ್ಲಿ, ಅವರ ತಂದೆ ಲಾಹೋರ್ನ ಮ್ಯಾಜಿಸ್ಟ್ರೇಟ್ ಆಗಿದ್ದರು. ವಿಭಜನೆಯ ನಂತರ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಿತು. ಅರುಣ್ ಬರಾಖಂಬಾದ ಮಾಡರ್ನ್ ಸ್ಕೂಲ್ ಮತ್ತು ದೆಹಲಿಯ ಸೇಂಟ್ ಸ್ಟೀಫನ್'ಸ್ನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಅವರು ಅಮೆರಿಕಾದ ಸೆರಕ್ಯುಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು. ಅವರ ಸಹೋದರಿ ನಳಿನಿ ಸಿಂಗ್ ಸಹ ಪತ್ರಿಕೋದ್ಯಮಿಯಾಗಿದ್ದಾರೆ.
ಅನೇಕ ಹಗರಣಗಳ ಸರಣಿಯನ್ನು ಸ್ವತಃ ಅವರೇ ಬರೆದು ಪತ್ರಿಕೆಯಲ್ಲಿ ಬಯಲುಮಾಡಿದರು. ಶೌರಿ ಮತ್ತು ಅವರು 1979ರಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಇಂಡಿಯನ್ ಎಕ್ಸ್ಪ್ರೆಸ್ ಸರ್ಕಾರದ ಉನ್ನತ ಮಟ್ಟಗಳಲ್ಲಿ ಭ್ರಷ್ಟಾಚಾರವನ್ನು ಬಹಿರಂಗ ಮಾಡಿತು ಹಾಗೂ ಅನೇಕ ಪ್ರಮುಖ ಹಗರಣಗಳನ್ನು ಬಯಲು ಮಾಡಿತು. “ಭಾರತದ ವಾಟರ್ಗೇಟ್“ ಎಂದು ಹೆಸರಾದ ಹಗರಣವೂ ಇದರಲ್ಲಿ ಸೇರಿದೆ. ಶೌರಿ 1981ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಅಬ್ದುಲ್ ರೆಹಮಾನ್ ಅಂತುಳೆ ವಿರುದ್ಧ ಏಕಾಂಗಿಯಾಗಿ ಧರ್ಮಯುದ್ಧ ಪ್ರಾರಂಭಿಸಿದ್ದರು. ಅಂತುಳೆ ಅವರು ರಾಜ್ಯದ ಸಂಪನ್ಮೂಲಗಳನ್ನು ಅವಲಂಬಿಸಿದ ಉದ್ಯಮಗಳಿಂದ ಲಕ್ಷಾಂತರ ಡಾಲರ್ಗಳನ್ನು ಸುಲಿಗೆ ಮಾಡಿಇಂದಿರಾ ಗಾಂಧಿಹೆಸರಿನಲ್ಲಿದ್ದ ಖಾಸಗಿ ದತ್ತಿನಿಧಿಯಲ್ಲಿ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಲೇಖನದಿಂದಾಗಿ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕಾಯಿತು. ಪತ್ರಿಕಾ ಸುದ್ದಿಯಿಂದ ಭಾರತದಲ್ಲಿನ ಅತ್ಯುನ್ನತ ದರ್ಜೆಯ ಅಧಿಕಾರಿ ಪದವಿಯಿಂದ ನಿರ್ಗಮಿಸಿದ್ದರಿಂದ ಕೇವಲ ಇಂದಿರಾ ಗಾಂಧಿಗೆ ಮಾತ್ರವಲ್ಲದೆ ಅವರ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಕಸಿವಿಸಿಯುಂಟುಮಾಡಿತ್ತು. ಶೌರಿಯಿಂದ ಈ ಹಗರಣಗಳ ಬಹಿರಂಗದಿಂದಾಗಿ, ಇಂಡಿಯನ್ ಎಕ್ಸ್ಪ್ರೆಸ್ನ ಮುಂಬಯಿ ಕಛೇರಿಗಳಲ್ಲಿ ಸುದೀರ್ಘ ಕಾರ್ಮಿಕ ವಿವಾದಕ್ಕೆ ನಾಂದಿಯಾಯಿತು. ಅಲ್ಲಿ ಅಂತುಳೆಯೊಂದಿಗೆ ಸಂಪರ್ಕ ಹೊಂದಿರುವ ಕಾರ್ಮಿಕ ಸಂಘಟನೆಕಾರ ಕಾರ್ಮಿಕರನ್ನು ಕನಿಷ್ಠ ವೇತನಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿದರು. ಅದು ಭಾರತದ ಇತರ ಪತ್ರಿಕೆಗಳು ನೀಡುವ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನದಾಗಿತ್ತು. ಸರಕಾರ ಪತನದಲ್ಲಿ ಸಹ ಇದು ಫಲಿತಾಂಶ ಕಂಡಿತು. ವಿವಿಧ ಏಜೆನ್ಸಿಗಳು ಇಂಡಿಯನ್ ಎಕ್ಸ್ಪ್ರೆಸ್ ವಿರುದ್ಧ ಕಾನೂನು ದಾವೆಗಳನ್ನು ಹೂಡಿದ್ದು ಸಹ ಇದರಲ್ಲಿ ಸೇರಿದೆ. ಸರಕಾರದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ, 1982ರಲ್ಲಿ ಪತ್ರಿಕೆಯ ಮಾಲೀಕರಾದ ರಾಮ್ನಾಥ್ ಗೋಯಂಕಾ ಶೌರಿಯವರನ್ನು ಪದಚ್ಯುತಿಗೊಳಿಸಿದರು. ಸುಮಾರು 1982 ಮತ್ತು 1986 ನಡುವಿನ ಅವಧಿಯಲ್ಲಿ ಶೌರಿ ಹಲವಾರು ಪತ್ರಿಕೆ ಮತ್ತು ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದರು. ಅದೇ ವೇಳೆಯಲ್ಲಿ ಪೀಪಲ್'ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್ನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1986ರಲ್ಲಿ ಅವರು ಟೈಮ್ಸ್ ಆಫ್ ಇಂಡಿಯಾನ ಕಾರ್ಯನಿರ್ವಾಹಕ ಸಂಪಾದಕರಾಗಿ ನೇಮಕಗೊಂಡರು. ಆದರೆ 1987ರಲ್ಲಿ ಗೋಯಂಕಾ ಅವರನ್ನು ಮತ್ತೆ ಇಂಡಿಯನ್ ಎಕ್ಸ್ಪ್ರೆಸ್ಗೆ ವಾಪಸು ಕರೆಸಿಕೊಂಡರು. ನಂತರ ಶೌರಿ ಬೊಫೋರ್ಸ್ ಹೋವಿಟ್ಜರ್ ಬಂದೂಕು ಖರೀದಿ ಹಗರಣದಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ವಿರುದ್ಧ ಹರಿತವಾದ ದಾಳಿ ಪ್ರಾರಂಭಿಸಿದರು. ಇದರಿಂದಾಗಿ ನಂತರದ ಲೋಕಸಭೆ ಚುನಾವಣೆಗಳಲ್ಲಿ ರಾಜೀವ್ ಗಾಂಧಿ ಸೋಲಬೇಕಾಯಿತು. ಪತ್ರಿಕಾ ಸ್ವಾತಂತ್ರ್ಯ ಎತ್ತಿಹಿಡಿಯಲು ಶೌರಿ ಹಲವು ಬಾರಿ ಹೋರಾಡಿದ್ದರು. 1988ರಲ್ಲಿ ಮಾನನಷ್ಟ ಮಸೂದೆಯನ್ನು ಮಂಡಿಸುವ ಸರಕಾರದ ಪ್ರಸ್ತಾವನೆ ವಿರುದ್ಧ ಅವರ ಹೋರಾಟವು ಬಹುಶಃ ಅತ್ಯಂತ ಖ್ಯಾತಿ ಪಡೆದಿದೆ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಬಾಯಿಕಟ್ಟುವ ಪ್ರಯತ್ನವಾಗಿ ಅಸಾಮಾನ್ಯ ವೇಗದಲ್ಲಿ ಮಸೂದೆಯನ್ನು ಮಂಡಿಸಲಾಯಿತು ಎಂಬ ವ್ಯಾಪಕವಾಗಿ ಗ್ರಹಿಸಲಾಗಿತ್ತು. ಈ ಕ್ರಮದ ವಿರುದ್ಧ ಇಡೀ ಪತ್ರಿಕಾ ಸಮುದಾಯ ಶೌರಿ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ಜತೆ ಕೈಜೋಡಿಸಿತು. ಅದೇ ಸಂದರ್ಭದಲ್ಲಿ ಸರಕಾರವು ಇಂಡಿಯನ್ ಎಕ್ಸ್ಪ್ರೆಸ್ನ ವಿರುದ್ಧ 300 ಪ್ರಕರಣಗಳನ್ನು ದಾಖಲಿಸಿತ್ತು. ಬ್ಯಾಂಕುಗಳಿಂದ ಪತ್ರಿಕೆಗೆ ಹಣಕಾಸಿನ ನೆರವನ್ನು ಕಡಿತಗೊಳಿಸಲಾಗಿತ್ತು. ಶೌರಿ, ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಿದರು. 1990ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ನ ಸಂಪಾದಕೀಯ ನೀತಿ ಕುರಿತು ಭಿನ್ನಾಭಿಪ್ರಾಯಗಳು ಉಂಟಾದ್ದರಿಂದ ಶೌರಿ ರಾಜೀನಾಮೆ ನೀಡಬೇಕಾಗಿ ಬಂದಿತು. ಮಂಡಲ್ ಆಯೋಗದ ವರದಿಯ ಅನುಷ್ಠಾನಕ್ಕೆ ಶೌರಿ ವಿರೋಧಿಸಿದ್ದೇ ಈ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಮಂಡಲ್ ಆಯೋಗದ ವರದಿಯಂತೆ ಇತರ ಹಿಂದುಳಿದ ವರ್ಗಗಳಿಗೆ (OBC) ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ಹೇಳಲಾಗಿತ್ತು. ಇದಕ್ಕೆ ಆಗಿನ V.P. ಸಿಂಗ್ರ ಸರಕಾರವು ಉಪಕ್ರಮ ಕೈಗೊಂಡಿತ್ತು. ಇದಾದ ನಂತರ, ಅವರು ಪುಸ್ತಕಗಳು ಮತ್ತು ನಿಯಮಿತ ಅಂಕಣಗಳನ್ನು ಬರೆಯಲು ತಮ್ಮ ಶಕ್ತಿಯನ್ನು ವಿನಿಯೋಗಿಸಿದರು. ಅವರು ಭಾರತದ ಸುಮಾರು 30 ದಿನಪತ್ರಿಕೆಗಳಲ್ಲಿ ವಿವಿಧ ಭಾಷೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಶೌರಿ ಭಾರತೀಯ ಜನತಾ ಪಕ್ಷದ (BJP) ಸದಸ್ಯರಾಗಿದ್ದಾರೆ. ಅವರು ರಾಜ್ಯಸಭೆಯ ಸದಸ್ಯರಾಗಿದ್ದರು ಮತ್ತು ಭಾರತ ಸರ್ಕಾರದಲ್ಲಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸಚಿವಸಂಪುಟದಲ್ಲಿ ಬಂಡವಾಳ ಹಿಂದೆಗೆತ,ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿದ್ದರು. ಬಂಡವಾಳ ಹಿಂದೆಗೆತ ಸಚಿವರಾಗಿ, ಇತರ ಸಂಸ್ಥೆಯೊಂದಿಗೆ ಮಾರುತಿ, VSNL, ಹಿಂದುಸ್ತಾನ್ ಜಿಂಕ್ ಮಾರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಸಚಿವರಾಗಿ ಅವರ ಸ್ಥಾನವು ವಿವಾದಾತ್ಮಕವಾಗಿತ್ತು, ಆದರೆ ಅವರು ಮತ್ತು ಅವರ ಕಾರ್ಯದರ್ಶಿ ಪ್ರದೀಪ್ ಬೈಜಲ್ರವರು ಅತ್ಯುತ್ತಮ ದರ್ಜೆಯದೆಂದು ಜನರು ನಂಬಿದ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದಕ್ಕಾಗಿ ಗೌರವಾನ್ವಿತರಾಗಿದ್ದರು. ಭಾರತದ ಅತಿ ಶ್ರೇಷ್ಠ 100 CEOಗಳ ಅಭಿಪ್ರಾಯ ಸಂಗ್ರಹದ ಫಲಿತಾಂಶದಲ್ಲಿ ವಾಜಪೇಯಿ ಸರಕಾರದಲ್ಲಿ ಅತ್ಯುತ್ತಮ ಸಚಿವರೆಂಬ ಶ್ರೇಯಾಂಕ ಗಳಿಸಿದ್ದಾರೆ. ವರ್ಷ 2000ದಲ್ಲಿ ಶೌರಿ ಇಡೀ ಮೊತ್ತವನ್ನು,(ರೂ. 11.90 ಕೋಟಿ)ಅವರಿಗೆ ಲಭ್ಯವಾದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS)ಸಿಕ್ಕಿದ ವಿವೇಚನಾ ಕೋಟಾದಡಿ ಖರ್ಚು ಮಾಡುವ ಹಣವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ದಲ್ಲಿ ಬಯೋ-ಸೈನ್ಸಸ್ ಆಂಡ್ ಬಯೋ-ಇಂಜಿನಿಯರಿಂಗ್ ಇಲಾಖೆ ಸ್ಥಾಪಿಸಲು ವಿನಿಯೋಗಿಸಿದರು. 2005ರಲ್ಲಿ ಅವರು ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಗಳು ಮತ್ತು ಪರಿಸರ ಇಂಜಿನಿಯರಿಂಗ್ ಗಾಗಿ ಪ್ರತ್ಯೇಕ,ಪೂರ್ಣ ಪ್ರಮಾಣದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ 11 ಕೋಟಿ ರೂಪಾಯಿ ಮುಡಿಪಾಗಿಡುವುದರ ಮೂಲಕ ಆ ಅಭಿಯಾನಕ್ಕೆ ತಮ್ಮ ಬದ್ಧತೆ ಪ್ರದರ್ಶಿಸಿದರು. 2007ರಲ್ಲಿ ಭಾರತದ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ನಾಮ ನಿರ್ದೇಶನವನ್ನು ವಿರೋಧಿಸಿ ದನಿ ಎತ್ತಿದವರಲ್ಲಿ ಶೌರಿ ಸಹ ಒಬ್ಬರು. ಅರುಣ್ ಶೌರಿ 'ಡಸ್ ದಿಸ್ ಟೈಂಟೆಡ್ ಪರ್ಸನ್ ಡಿಸರ್ವ್ ಟು ಬಿಕಮ್ ಪ್ರೆಸಿಡೆಂಟ್ ಆಫ್ ಇಂಡಿಯಾ?' ಎಂಬ ಹೆಸರಿನ ಎರಡು ಲೇಖನಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ಪ್ರಕಟಿಸಿದರು. ಇದರಲ್ಲಿ ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿಯ ಅತೀ ಪ್ರಶ್ನಾರ್ಹ ಹಿನ್ನೆಲೆಯನ್ನು ಅವರು ಚರ್ಚಿಸಿದ್ದಾರೆ. ಕರಣ್ ಥಾಪರ್ರೊಂದಿಗಿನ ಸುದೀರ್ಘ ಸಂದರ್ಶನದಲ್ಲಿ, ಶೌರಿಯವರು ಪ್ರತಿಭಾ ಪಾಟೀಲ್ ಸ್ಥಾಪಿಸಿ ಅದರ ಉಸ್ತುವಾರಿ ಹೊತ್ತಿರುವ ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್ನಿಂದ ಹಣದ ದುರುಪಯೋಗದ ಕುರಿತು ಪ್ರತಿಭಾಪಾಟೀಲ್ ಮತ್ತು ಅವರ ಬಂಧುಗಳ ವಿರುದ್ಧ ಆರೋಪಗಳ ಬಗ್ಗೆ ಭಾರೀ ಪ್ರಮಾಣದ ಸಾಕ್ಷ್ಯಗಳನ್ನು ನೀಡಿದರು. ಈ ಬ್ಯಾಂಕ್ ಪ್ರತಿಭಾ ಪಾಟೀಲ್ರ ಹಲವು ಕುಟುಂಬ ಸದಸ್ಯರಿಗೆ ಕಾನೂನುಬಾಹಿರವಾಗಿ ಸಾಲದ ಮೇಲೆ ಬಡ್ಡಿಯನ್ನು ಮನ್ನಾ ಮಾಡಿದರೆಂದು ಕಂಡಬಂದಿದ್ದರಿಂದ 2003ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ನ ಪರವಾನಗಿಯನ್ನು ರದ್ದುಗೊಳಿಸಿತು. ಪ್ರತಿಭಾರವರು ಸಹೋದರ G.N.ಪಾಟೀಲ್ ವಿರುದ್ಧ ಕೊಲೆಯ ಪ್ರಕರಣವೊಂದರಲ್ಲಿ ವಿಚಾರಣೆಗೆ ಅಡ್ಡಿಪಡಿಸಿದರೆಂದು ಶೌರಿ ಆರೋಪಿಸಿದ್ದಾರೆ.
ಕಳೆದ 2009ರ ಸಾರ್ವತ್ರಿಕ ಚುನಾವಣೆಯುಲ್ಲಿ BJP ಪಕ್ಷವು ಸೋತ ನಂತರ, ಯಶವಂತ್ ಸಿನ್ಹಾ ಮತ್ತು ಜಸ್ವಂತ್ ಸಿಂಗ್ರೊಂದಿಗೆ ಸೇರಿ BJP ಪಕ್ಷದೊಳಗೆ ಆತ್ಮಾವಲೋಕನ ಮತ್ತು ನಾಯಕರ ಉತ್ತರದಾಯಿತ್ವಕ್ಕೆ ಒತ್ತಾಯಿಸಿದ ಧ್ವನಿಗಳಲ್ಲಿ ಅರುಣ್ ಶೌರಿ ಅವರೂ ಸೇರಿದ್ದರು. ಹಿರಿಯ BJP ನಾಯಕ ಜಸ್ವಂತ್ ಸಿಂಗ್ ಬರೆದ ಪುಸ್ತಕದಲ್ಲಿ ಮಹಮದ್ ಅಲಿ ಜಿನ್ನಾರನ್ನು ಹೊಗಳಿದ್ದಾರೆ, ಎಂಬ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ವಿಷಯ ಕೆರಳುವ ಹಂತ ತಲುಪಿತು. ಶೌರಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾದ ತಮ್ಮ ಲೇಖನಗಳಲ್ಲಿ ಜಸ್ವಂತ್ ಸಿಂಗ್ರನ್ನು ಸಮರ್ಥಿಸಿಕೊಂಡರು.ಈ ನಿರ್ಣಯವನ್ನು ತೆಗೆದುಕೊಂಡಿದ್ದಕ್ಕಾಗಿ BJP ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದ ರಾಜ್ನಾಥ್ ಸಿಂಗ್ಅವರನ್ನು ಹಂಪ್ಟಿ ಡಂಪ್ಟಿ ಮತ್ತು ಅಲೈಸ್ ಇನ್ ಬ್ಲಂಡರ್ಲ್ಯಾಂಡ್ ಎಂಬ ಆಯ್ದ ಪದಗಳನ್ನು ಬಳಸಿ ಅವರ ಸ್ವೇಚ್ಛಾವರ್ತನೆ ಬಗ್ಗೆ ಟೀಕಿಸಿದರು.
ಅರುಣ್ ಶೌರಿ ಅನಿತಾ ಶೌರಿಯವರನ್ನು ಮದುವೆಯಾದರು. ಅವರಿಗೆ ಒಬ್ಬ ಪುತ್ರನಿದ್ದಾನೆ.
ತಮ್ಮ ಬರಹಗಳಿಂದಾಗಿ ದೇಶಾದ್ಯಂತ ಅವರಿಗೆ ಗಣನೀಯ ಅನುಯಾಯಿಗಳಿದ್ದರು. ಹಾಗೆಯೇ ಅವರಿಗೆ ದೇಶ-ವಿದೇಶದ ಗೌರವಗಳು ಲಭಿಸಿದವು. ಅವುಗಳಲ್ಲಿ ಪದ್ಮ ಭೂಷಣ, ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪ್ರಶಸ್ತಿ, ಆಸ್ಟರ್ ಪ್ರಶಸ್ತಿ, K.S. ಹೆಗ್ಡೆ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಸಂಪಾದಕ ಪ್ರಶಸ್ತಿ ಮತ್ತು ದಿ ಫ್ರಿಡಮ್ ಟು ಪಬ್ಲಿಶ್ ಅವಾರ್ಡ್ ಪ್ರಮುಖವಾದವು.[ಸೂಕ್ತ ಉಲ್ಲೇಖನ ಬೇಕು]
ಸಹ ಲೇಖಕರಾಗಿ:
This article uses material from the Wikipedia ಕನ್ನಡ article ಅರುಣ್ ಶೌರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.