ಹನುಮಸಾಗರ

ಹನುಮಸಾಗರ ಗ್ರಾಮವು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿದೆ.

ಹನುಮಸಾಗರ
ಹನುಮಸಾಗರ
village
Population
 (೨೦೧೨)
 • Total೧೧೫೦೦

ಭೌಗೋಳಿಕ ವಿವರ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಹನುಮಸಾಗರ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

ಶ್ರೀಭರಮಲಿಂಗೇಶ್ವರ ದೇವಾಲಯ ಶ್ರೀ ದ್ಯಾಮಮ್ಮ ದೇವಿ ದೇವಸ್ಥಾನ,ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಅಂಬಾ ಭವಾನಿ ದೇವಾಲಯ, ಬನಶಂಕರಿ ದೇವಾಲಯ, ಶ್ರೀ ಕರಿಸಿದ್ದೇಶ್ವರ ಮಠ, ಶ್ರೀ ಅನ್ನದಾನೇಶ್ವರ ಮಠ ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ವೆಂಕಟೇಶ್ವರ ದೇವಾಲಯ, ಶ್ರೀ ಪಾಂಡುರಂಗ ದೇವಾಲಯ ಹಾಗೂ ಶ್ರೀ ಹನುಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬಗಳು

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣಿಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು, ಪದವಿ ಪೂವ‌ ಕಾಲೇಜು ಹಾಗೂ ಸುಮಾರು ಖಾಸಗಿ ಶಿಕಣ ಸಂಸ್ಥೆಗಳಿವೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಹನುಮಸಾಗರ ಗ್ರಾಮವು ನೈಸರ್ಗಿಕವಾದ ಪವನ ಶಕ್ತಿಗೆ ಬಹಳ ಪ್ರಸಿದ್ದಿ ಪಡೆದಿದೆ.

ಉಲ್ಲೇಖಗಳು

Tags:

ಹನುಮಸಾಗರ ಭೌಗೋಳಿಕ ವಿವರಹನುಮಸಾಗರ ಸಾಂಸ್ಕೃತಿಕಹನುಮಸಾಗರ ಕಲೆ ಮತ್ತು ಸಂಸ್ಕೃತಿಹನುಮಸಾಗರ ಧರ್ಮಗಳುಹನುಮಸಾಗರ ಭಾಷೆಗಳುಹನುಮಸಾಗರ ದೇವಾಲಯಗಳುಹನುಮಸಾಗರ ಮಸೀದಿಗಳುಹನುಮಸಾಗರ ನೀರಾವರಿಹನುಮಸಾಗರ ಉದ್ಯೋಗಹನುಮಸಾಗರ ಬೆಳೆಗಳುಹನುಮಸಾಗರ ಹಬ್ಬಗಳುಹನುಮಸಾಗರ ಶಿಕ್ಷಣಹನುಮಸಾಗರ ಸಾಕ್ಷರತೆಹನುಮಸಾಗರ ರಾಜಕೀಯಹನುಮಸಾಗರ ಉಲ್ಲೇಖಗಳುಹನುಮಸಾಗರಕರ್ನಾಟಕಕುಷ್ಟಗಿಕೊಪ್ಪಳ

🔥 Trending searches on Wiki ಕನ್ನಡ:

ಪ್ರಜಾವಾಣಿಒಡೆಯರ್ಮಂತ್ರಾಲಯಸಜ್ಜೆಮಡಿಲಗಣಕ ಅಥವಾ ಲ್ಯಾಪ್‌ಟಾಪ್ಶಿಕ್ಷಕಎರಡನೇ ಮಹಾಯುದ್ಧಟಾರ್ಟನ್ನಿರ್ವಹಣೆ ಪರಿಚಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಸಂಸ್ಕಾರಭೂಕಂಪಲಿಯೊನೆಲ್‌ ಮೆಸ್ಸಿಸಾಮ್ರಾಟ್ ಅಶೋಕಚಾಲುಕ್ಯಯುನೈಟೆಡ್ ಕಿಂಗ್‌ಡಂಅಂಬಿಗರ ಚೌಡಯ್ಯಜಾನಪದತುಳಸಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸ್ತ್ರೀಭಾರತದ ಚುನಾವಣಾ ಆಯೋಗಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವ್ಯಂಜನಶ್ರವಣಬೆಳಗೊಳವಿನಾಯಕ ದಾಮೋದರ ಸಾವರ್ಕರ್ಐಹೊಳೆವಸ್ತುಸಂಗ್ರಹಾಲಯಸಂಗೀತ ವಾದ್ಯಛಂದಸ್ಸುಭಾರತೀಯ ಸಂಸ್ಕೃತಿಧರ್ಮಹಲ್ಮಿಡಿಭಾರತದ ರಾಷ್ಟ್ರಗೀತೆಕವಿರಾಜಮಾರ್ಗಪ್ರತಿಧ್ವನಿರಾಷ್ಟ್ರಕವಿಅಶೋಕನ ಶಾಸನಗಳುಮಧುಮೇಹಎಚ್. ಜೆ . ಲಕ್ಕಪ್ಪಗೌಡಮುಟ್ಟುಕರ್ಣಮಾಲಿನ್ಯರಾಮ್ ಮೋಹನ್ ರಾಯ್ವಾಣಿಜ್ಯ(ವ್ಯಾಪಾರ)ಇಸ್ಲಾಂ ಧರ್ಮಭಾರತದ ರಾಜಕೀಯ ಪಕ್ಷಗಳು1935ರ ಭಾರತ ಸರ್ಕಾರ ಕಾಯಿದೆಕೈಗಾರಿಕೆಗಳುಸೂರ್ಯಅಭಿಮನ್ಯುವರ್ಲ್ಡ್ ವೈಡ್ ವೆಬ್ಇಂದಿರಾ ಗಾಂಧಿಸಂಸ್ಕೃತಿಯುವರತ್ನ (ಚಲನಚಿತ್ರ)ಕುರುಬದಯಾನಂದ ಸರಸ್ವತಿಕರ್ನಾಟಕದಲ್ಲಿ ಪಂಚಾಯತ್ ರಾಜ್ಮೂಲಧಾತುದೆಹಲಿಹಲ್ಮಿಡಿ ಶಾಸನವರ್ಣತಂತು ನಕ್ಷೆಸಸ್ಯ ಜೀವಕೋಶಸರೀಸೃಪತುಕಾರಾಮ್ಕಲ್ಯಾಣ ಕರ್ನಾಟಕಜಲಶುದ್ಧೀಕರಣಎಚ್ ನರಸಿಂಹಯ್ಯಕಾಂತಾರ (ಚಲನಚಿತ್ರ)ವ್ಯಾಸರಾಯರುಕನ್ನಡಪ್ರಭವೇದಶಿವಯುಗಾದಿಬಾಲ್ಯ ವಿವಾಹಗುರುತ್ವ🡆 More