ಮುಟ್ಟು ನಿಲ್ಲುವಿಕೆ

ಮಹಿಳೆಯರಿಗೆ ಸುಮಾರು ೪೫-೫೫ ವರ್ಷ ಪ್ರಾಯದ ನಂತರ ತಿಂಗಳು- ತಿಂಗಳು ಮುಟ್ಟಾಗುವಿಕೆ ನಿಲ್ಲುತ್ತದೆ.

ಈ ಪ್ರಕ್ರಿಯೆಗೆ ಮುಟ್ಟು ನಿಲ್ಲುವಿಕೆ ಅಥವಾ ಮೆನೋಪಾಸ್ ಅಥವಾ ಋತುಸ್ತಬ್ಧ ಎನ್ನುತ್ತಾರೆ. ಮೆನೋಪಾಸ್ ಸಮಯದಲ್ಲಿ ಮಹಿಳೆಯ ಸಂತಾನೋತ್ಪತ್ತಿ ನಿಲ್ಲುತ್ತದೆ. ಮುಟ್ಟು ನಿಂತಾಗ ಮಹಿಳೆಯರಿಗೆ ದೈಹಿಕ ಹಾಗು ಮಾನಸಿಕ ಬದಲಾವಣೆಗಳಾಗುತ್ತದೆ.

ಮುಟ್ಟು ನಿಲ್ಲುವಿಕೆ
ಋತುಸ್ತಬ್ಧದ ಲಕ್ಷಣಗಳು

ಮುಟ್ಟು ನಿಲ್ಲುವ ಸಮಯ

ಸಾಮಾನ್ಯವಾಗಿ ೪೫-೫೫ ವರ್ಷ ಪ್ರಾಯದಲ್ಲಿ ಮುಟ್ಟು ನಿಲ್ಲುತ್ತದೆ. ೪೭-೪೮ ವರ್ಷಗಳಲ್ಲಿ ಮುಟ್ಟು ನಿಲ್ಲುವುದಕ್ಕೆ ಅನುವಂಶೀಯ ಕಾರಣಗಳು ಮತ್ತು ಹವಾಗುಣದ ಕಾರಣಗಳು ಪ್ರಭಾವ ಬೀರುತ್ತವೆ. ಈ ಕ್ರಿಯೆಗೆ ಉಷ್ಣನಿಲಯದ ಮಹಿಳೆಯರಿಗಿಂತ ಶೀತವಲಯದ ಮಹಿಳೆಯರಿಗಿಂತ ಬೇಗ ನಿಲ್ಲುತ್ತದೆ.

ಋತುಬಂಧದ ಸಮಸ್ಯೆಯ-ಲಕ್ಷಣಗಳು

ಚಿತ್ರದ ವಿವರ:

    ತಲೆನೋವು
    ಚರ್ಮ-;ಶುಶ್ಕತೆ
    ಮಾನಸಿಕ:- ತಲೆತಿರುಗುವಿಕೆ-;ಅಡ್ಡಿಪಡಿಸಿದ ಮಲಗುವ ಕ್ರಮಗಳು;ಆತಂಕ-;ಕಳಪೆ ಸ್ಮರಣೆ-;ಕೇಂದ್ರೀಕರಿಸಲು ಅಸಮರ್ಥತೆ-;ಖಿನ್ನತೆಯ ಮನಸ್ಥಿತಿ-
ಕಿರಿಕಿರಿ-;ಮನಸ್ಥಿತಿಯ ಏರು ಪೇರು-;ಲೈಂಗಿಕ ಚಟುವಟಿಕೆಯಲ್ಲಿ ಕಡಿಮೆ ಆಸಕ್ತಿ;
    ನೋವು; ಯೋನಿ- ಶುಷ್ಕತೆ-;ನೋವಿನ ಸಂಭೋಗ;
    ವ್ಯವಸ್ಥಿತೆ:- ತೂಕ ಹೆಚ್ಚಳ-; ರಾತ್ರಿ ಭಾರಿ ಬೆವರು; ಎದೆಬಡಿತ; ಸ್ತನಗಳು- ಹಿಗ್ಗುವಿಕೆ-;ಬಿಸಿ ಹೊಳಪಿನ- ಶುಷ್ಕತೆ;
    ಕೀಲುಗಳು:-ನೋಯುತ್ತಿರುವ ಠೀವಿ ನಿಲುವ;ಬೆನ್ನು ನೋವು
    ಮೂತ್ರ:-ಅಸಂಯಮ- ತುರ್ತು; ತುರಿಕೆ ಥಿನ್ನಿಂಗ್; ಟಿಂಗ್ಲಿಂಗ್

ಋತುಸ್ತಬ್ಧದ ಲಕ್ಷಣಗಳು

  • ಗರ್ಭಕೋಶ
  • ಮುಟ್ಟು ನಿಲ್ಲುವಿಕೆ- ಸ್ತ್ರೀಯ ಸಂತಾನಪ್ರಾಪ್ತಿಕಾಲ ಮುಗಿಯಿತೆಂಬುದಕ್ಕೆ ಬಲು ಸ್ಪಷ್ಟ ಕಾರಣವಾಗಿರುವ ಮಾಸಿಕ ರಜಸ್ಸ್ರಾವದ ಸ್ಥಿರನಿಲುಗಡೆ (ಮೆನೋಪಾಸ್ ಆಥವಾ ಕ್ಲೈಮ್ಯಾಕ್ಟೆರಿಕ್). ಜನಜನಿತವಾಗಿ ಇದನ್ನು ದೇಹಕ್ರಿಯೆ ಬದಲಾಗುವ ಪರ್ವಕಾಲ (ಛೇಂಜ್ ಆಫ್ ಲೈಫ್) ಎಂದಿದೆ. ಮುಟ್ಟು ನಿಲ್ಲುವುದು ಮುಖ್ಯವಾಗಿ ಅಂಡಾಶಯಗಳ ಕ್ರಿಯೆ ಮುಗಿಯಿತೆಂಬುದರ ಬಾಹ್ಯಸೂಚನೆ ಅಷ್ಟೆ. ಅಂಡಾಶಯದಲ್ಲಿ ಕ್ಲುಪ್ತವಾಗಿ ಪ್ರತಿ ತಿಂಗಳೂ ಜರಗುವ ವ್ಯಾಪಾರಗಳು ದೇಹದ ರಾಸಾಯನಿಕಸ್ಥಿತಿಯಲ್ಲಿ ತಕ್ಕ ಬದಲಾವಣೆಗಳನ್ನು ಮಾಡುತ್ತವೆ. ಇಂಥ ಬದಲಾವಣೆಗಳಲ್ಲಿ ಇತರ ಅಂತಃಸ್ರಾವ ಗ್ರಂಥಿಗಳಾದ ಥೈರಾಯ್ಡ್ ಮತ್ತು ಪಿಟ್ಯೂಯಿಟರಿಗಳು ಭಾಗವಹಿಸುತ್ತವೆ. ರಜೋ ನಿವೃತ್ತಿಯಲ್ಲಿ ಅಂಡಾಶಯದ ಸ್ರಾವ ಸ್ಥಗಿತಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಧಕ್ಕೆ ಆಗುವುದೂ ಇದೆ.
  • ಮುಟ್ಟು ನಿಲ್ಲುವುದಕ್ಕೆ ನಿರ್ದಿಷ್ಟ ಕಾಲವಿಲ್ಲ. ಮುಕ್ಯಾಲುಪಾಲು ಸ್ತ್ರೀಯರಲ್ಲಿ 40-50 ವರ್ಷಗಳಲ್ಲಿ ನಿಲ್ಲುತ್ತದೆ. ಮುಟ್ಟು ನಿಲ್ಲುವ ವಿಧಾನ ಕೂಡ ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಕೆಲವರಲ್ಲಿ ಒಮ್ಮಿಂದೊಮ್ಮೆಗೆ ನಿಂತು ಹೋಗಬಹುದು ಅಥವಾ ಕ್ರಮೇಣ ಕಡಿಮೆಯಾಗಿ ಒಂದೆರಡು ವರ್ಷಗಳಲ್ಲಿ ನಿಂತುಹೋಗಬಹುದು. ಇನ್ನೂ ಕೆಲವರಲ್ಲಿ ಅವ್ಯವಸ್ಥಿತವಾಗಿ ಒಂದೊಂದು ಸಲ ಅತಿಸ್ರಾವವಾಗಬಹುದು.
  • ಸಾಧಾರಣವಾಗಿ ಈ ಸಮಯಗಳಲ್ಲಿ ದೇಹದೊಳಗೆ ಆಗುವ ಈ ಮಾರ್ಪಾಡುಗಳಿಂದ ಹೆಂಗಸಿನ ದೈಹಿಕ ಅಥವಾ ಮಾನಸಿಕಸ್ಥಿತಿಗೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಏನಾದರೂ ಅದರೆ ಅವು ಬಹಳ ಅಲ್ಪಪ್ರಮಾಣದ್ದಾಗಿರುತ್ತವೆ. ಈ ಸಣ್ಣ ತೊಂದರೆಗಳೇ ಅತಿಯಾಗಿ ತೋರಿ ಅವುಗಳಿಗೆ ಔಷಧಿ ಕೊಡಬೇಕಾಗಬಹುದು. ಮಾನಸಿಕ ತೊಂದರೆಗಳಲ್ಲಿ ಸಾಮಾನ್ಯವಾಗಿ ಮನಸ್ಸು ಕುಗ್ಗುವುದು, ಬಲ ಕಡಿಮೆಯಾಗುವುದು, ನಿದ್ದೆ ಇಲ್ಲದಿರುವುದು, ನರಗಳ ನೋವು ಮತ್ತು ತಲೆಸಿಡಿತ ಮುಂತಾದವು ಬರಬಹುದಾದ ತೊಂದರೆಗಳು. ಇಂಥ ಸಮಯದಲ್ಲೇ ಮಕ್ಕಳಿಲ್ಲದ ಹೆಣ್ಣಿಗೆ ತಾನು ಬಸುರಿಯೆಂಬ ಸುಳ್ಳು ನಂಬಿಕೆ ಬಂದು, ಹೊಟ್ಟೆ ದೊಡ್ಡದಾಗಿ ಹುಸಿ ಹೆರಿಗೆ ನೋವು ಕೂಡ ಬರಬಹುದು. ಮಾನಸಿಕದೌರ್ಬಲ್ಯಕ್ಕೆ ಒಳಗಾದವರಿಗೆ ಮತ್ತು ಅವರ ವಂಶದಲ್ಲಿ ಮಾನಸಿಕದೌರ್ಬಲ್ಯ ಉಂಟಾದವರಿದ್ದರೆ ಅಂಥವರಿಗೆ ಇಂಥ ಸವಯದಲ್ಲಿ ಮನೋರೋಗ ಖಿನ್ನತೆ ಬರುವ ಸಂಭವಗಳು ಹೆಚ್ಚಾಗುತ್ತವೆ.
  • ಹೆಂಗಸರಿಗೆ ಸಾಧಾರಣವಾಗಿ ಮುಟ್ಟು ನಿಲ್ಲುವ ಕಾಲದಲ್ಲಿ ಮುಖ ಮತ್ತು ಕುತ್ತಿಗೆ ಬೆಚ್ಚಗಾಗಿ ಕೆಂಪಾಗುತ್ತದೆ. ಅತಿಯಾಗಿ ಬೆವರು ಬರುತ್ತದೆ. ಇವು ಕೆಲವೇ ಕ್ಷಣಗಳಿರಬಹುದು ಅಥವಾ ಕೆಲವು ನಿಮಿಷಗಳು ಕೂಡ ಇರಬಹುದು. ಮುಟ್ಟು ನಿಂತಮೇಲೆ ಕೆಲವು ಹೆಂಗಸರು ಸ್ಥೂಲಕಾಯರಾಗುತ್ತಾರೆ.
  • ಅಂಡಾಶಯಗಳ ಕಾಯಿಲೆಯಿಂದಾಗಲಿ ಇನ್ನಿತರ ನಿರ್ನಾಳಗ್ರಂಥಿಗಳ ಕಾಯಿಲೆಯಿಂದಾಗಲಿ ನಿರ್ದಿಷ್ಟ ಕಾಲಕ್ಕೆ ಮೊದಲೇ ಮುಟ್ಟು ನಿಂತುಹೋಗಬಹುದು. *ಕೆಲವೊಮ್ಮೆ ಅತಿಯಾದ ದೈಹಿಕಕಾಯಿಲೆಗಳಿಂದಲೂ ತೀವ್ರವಾದ ಭಾವಾತ್ಮಕ ಹಾಗೂ ಮಾನಸಿಕ ತೊಂದರೆಯಿಂದಲೂ 40ವರ್ಷಗಳಿಗೂ ಮೊದಲೇ ಮುಟ್ಟು ನಿಂತುಹೋಗಬಹುದು. ಅಂಡಾಶಯಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಅಥವಾ ಎಕ್ಸ್‍ಕಿರಣಗಳಿಂದ ಅವುಗಳ ಕೆಲಸವನ್ನು ನಿಲ್ಲಿಸಿ, ನಿರ್ದಿಷ್ಡ ಕಾಲಕ್ಕೆ ಮೊದಲೇ ಮುಟ್ಟು ನಿಲ್ಲಿಸಬಹುದು. ಆದರೆ ಇಂಥ ವ್ಯಕ್ತಿಗಳಿಗೆ ಮಾನಸಿಕ ಮತ್ತು ನರಸಂಬಂಧಿ ತೊಂದರೆಗಳು ಬಲುಬೇಗನೆ ಬರುತ್ತವೆ.

ಹೆರುವ ಕಾಲ ಮುಗಿಯುತ್ತ ಬಂದಂತೆ

  • ಮುಟ್ಟು ನಿಲ್ಲುವುದನ್ನು ವೈದ್ಯಕೀಯ ದೃಷ್ಟಿಯಂದ ನೋಡಿದರೆ ಮುಖ್ಯವಾಗಿ ಹೆಂಗಸಿನ ಬಾಳಿನಲ್ಲಿ ಮಕ್ಕಳನ್ನು ಹೆರುವ ಕಾಲ ಮುಗಿಯುತ್ತ ಬಂದಂತೆ. ಆಗ ಗರ್ಭಕೋಶದ ಗಡ್ಡೆಗಳು ಮತ್ತು ಅಂಡಾಶಯದ ಗಡ್ಡೆಗಳು ಬರುವ ಸಂಭವ ಹೆಚ್ಚುತ್ತ ಹೋಗುತ್ತದೆ. ಅವ್ಯವಸ್ಥಿತವಾಗಿ ರಕ್ತಸ್ರಾವವಾಗುವುದೇ ಗರ್ಭಕೋಶದ ಏಡಿಗಂತಿ ರೋಗದ ಮೊದಲನೆಯ ಕುರುಹು. ಅತಿಸ್ರಾವವಾಗುವುದು ಗರ್ಭಕೋಶದ ಗಡ್ಡೆಗೆ ಕುರುಹು. ಇವೆರಡೂ ಮುಟ್ಟು ನಿಲ್ಲುವ ಕಾಲಕ್ಕೆ ಬರಬಹುದು. ಆದ್ದರಿಂದ ಹೆಂಗಸು ಇವಕ್ಕೆ ಹೆಚ್ಚು ಗಮನ ಕೊಡದೆ ಇರಬಹುದು ಮತ್ತು ರೋಗಗಳ ಮೊದಲನ್ನು ಅಸಡ್ಡೆ ಮಾಡಬಹುದು. ಹೊಟ್ಟೆ ದಪ್ಪವಾಗಿರುವುದನ್ನು ನಿರ್ಲಕ್ಷಿಸಿ ಅದನ್ನು ಮುಟ್ಟುನಿಂತಮೇಲೆ ಸಾಮಾನ್ಯವಾಗಿ ಬರುವ ಮೈ ಎಂದು ಭಾವಿಸಬಹುದು. ಇಂಥ ಸಂದರ್ಭಗಳಲ್ಲಿ ಯೋಗ್ಯ ವೈದ್ಯಕೀಯಸಲಹೆ ಪಡೆಯುವುದು ಅಪೇಕ್ಷಣೀಯ. (ಜೆ.ವೈ.ಐ.)
  • ಈ ಸಂದರ್ಭದಲ್ಲಿ ಮೂಳೆಗಳ ಸವೆತ ಆರಂಭವಾಗುತ್ತದೆ. ಬೆನ್ನುಮೂಳೆ ಸೊಂಟದ ಮೂಳೆ ತೊಡೆಯ ಮೂಳೆಗಳು ಅತಿಯಾಗಿ ತೆಳುವಾಗಿ ಬಿಡುತ್ತವೆ (ಆಸ್ಟಿಯೋಪೋರೋಸಿಸ್) ಸಣ್ಣ ಏಟು, ಏಳುವುದು, ಕೂಡುವುದು, ಇಂತಹ ನಿತ್ಯದ ಕೆಲಸಗಳಿಗೇ ಮೂಳೆ ಸುಲಭವಾಗಿ ಮುರಿಯುತ್ತದೆ. ಇದಕ್ಕಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನಿಯಮಿತ ಆಹಾರ, ವ್ಯಾಯಾಮ, ಯೋಗ, ಮಾನಸಿಕ ನೆಮ್ಮದಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಪ್ರಯೋಜನಕಾರಿ.

ಯೋನಿ ಮತ್ತು ಗರ್ಭಾಶಯ

ಋತುಸ್ತಬ್ಧದ ಸಮಯದಲ್ಲಿ ಋತುಚಕ್ರದ ಅವಧಿ ಕಡಿಮೆಯಾಗುತ್ತದೆ (೨-೫ ದಿನಗಳು) ಹಾಗೂ ದೀರ್ಘ ಚಕ್ರಗಳು ಸಾಧ್ಯ. ಕ್ರಮವಲ್ಲದ ರಕ್ತಸ್ರಾವ ಇರಬಹುದು. ಹಾರ್ಮೋನುಗಳ ಬದಲಾವಣೆಗಳಿಂದಾಗಿ ನಿಷ್ಕ್ರಿಯ ಗರ್ಭಾಶಯದ ರಕ್ತಸ್ರಾವ ಕಂಡುಬರುತ್ತದೆ.

ಮೆನೋಪಾಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಮತ್ತು ಮೆನೋಪಾಸ್ ನಂತರ ಮುಂದುವರಿಯುವ ಲಕ್ಷಣಗಳು:

  • ನೋವಿನ ಸಂಭೋಗ
  • ಯೋನಿ ಶುಷ್ಕತೆ
  • ಅಟ್ರೋಫಿಕ್ ಯೋನಿ ನಾಳದ ಉರಿಯೂತ

ಇತರ ದೈಹಿಕ ಲಕ್ಷಣಗಳು

  • ಜಂಟಿ ನೋವು, ಬೆನ್ನು ನೋವು, ತೂಕ ಹೆಚ್ಚುವುದು, ಚರ್ಮ ಜುಮ್ಮೆನಿಸುವಿಕೆ, ಶಕ್ತಿಯ ಕಡಿಮೆಯಾಗುವುದು, ಸ್ತನ ನೋವು, ಹೃದಯ ಬಡಿತ ಹೆಚ್ಚಾಗುವುದು, ತಲೆನೋವು, ತಲೆತಿರುಗುವಿಕೆ, ರಾತ್ರಿ ನಿದ್ರಿಸುವಾಗ ಬೆವರುವುದು.

ಮಾನಸಿಕ ಲಕ್ಷಣಗಳು

  • ಆತಂಕ, ನೆನಪಿನ ಶಕ್ತಿ ಕಡಿಮೆಯಾಗುವುದು, ಖಿನ್ನತೆಯ ಮನಸ್ಥಿತಿ, ಮನಸ್ಥಿತಿಯ ಏರು ಪೇರು, ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗುವುದು

ದೀರ್ಘಕಾಲೀನ ಪರಿಣಾಮಗಳು

  • ಆಸ್ಟಿಯೋಪೆನಿಯಾ, ಹೃದಯಕ್ಕೆ ಸಂಧಿಸಿದ ರೋಗಗಳು, ದುರ್ಬಲಗೊಂಡ ಶ್ವಾಸಕೋಶದ ಕಾರ್ಯ

ನೋಡಿ

ಉಲ್ಲೇಖಗಳು

ಮುಟ್ಟು ನಿಲ್ಲುವಿಕೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಟ್ಟು ನಿಲ್ಲುವಿಕೆ

Tags:

ಮುಟ್ಟು ನಿಲ್ಲುವಿಕೆ ಮುಟ್ಟು ನಿಲ್ಲುವ ಸಮಯಮುಟ್ಟು ನಿಲ್ಲುವಿಕೆ ಋತುಬಂಧದ ಸಮಸ್ಯೆಯ-ಲಕ್ಷಣಗಳುಮುಟ್ಟು ನಿಲ್ಲುವಿಕೆ ಋತುಸ್ತಬ್ಧದ ಲಕ್ಷಣಗಳುಮುಟ್ಟು ನಿಲ್ಲುವಿಕೆ ನೋಡಿಮುಟ್ಟು ನಿಲ್ಲುವಿಕೆ ಉಲ್ಲೇಖಗಳುಮುಟ್ಟು ನಿಲ್ಲುವಿಕೆ

🔥 Trending searches on Wiki ಕನ್ನಡ:

ಹಾರೆನುಡಿ (ತಂತ್ರಾಂಶ)ಗಣರಾಜ್ಯೋತ್ಸವ (ಭಾರತ)ದಿಕ್ಕುತತ್ಸಮ-ತದ್ಭವಶಾಲೆಸಚಿನ್ ತೆಂಡೂಲ್ಕರ್ಫುಟ್ ಬಾಲ್ಹಂಪೆರಾಘವಾಂಕಕೆ. ಎಸ್. ನರಸಿಂಹಸ್ವಾಮಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಾಮಾಜಿಕ ಸಮಸ್ಯೆಗಳುಭಾರತದ ರೂಪಾಯಿನಚಿಕೇತಉತ್ತರ ಕರ್ನಾಟಕಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವರ್ಗೀಯ ವ್ಯಂಜನಜ್ವರಕ್ರಿಕೆಟ್ಗೋಕಾಕ್ ಚಳುವಳಿಸಂಯುಕ್ತ ಕರ್ನಾಟಕ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ದಾಸ ಸಾಹಿತ್ಯಹಯಗ್ರೀವಸಾವಯವ ಬೇಸಾಯಜರಾಸಂಧಜಿ.ಎಸ್.ಶಿವರುದ್ರಪ್ಪವಿವಾಹವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸ್ತ್ರೀಜೋಗರಾಶಿಕೊರೋನಾವೈರಸ್ವಿಜಯದಾಸರುಅಮ್ಮಝಾನ್ಸಿ ರಾಣಿ ಲಕ್ಷ್ಮೀಬಾಯಿಉತ್ತರ ಪ್ರದೇಶಅವತಾರಹಾಸನಪ್ರಜ್ವಲ್ ರೇವಣ್ಣಹನುಮಂತನ್ಯೂಟನ್‍ನ ಚಲನೆಯ ನಿಯಮಗಳುಬ್ಯಾಂಕ್ಕೈವಾರ ತಾತಯ್ಯ ಯೋಗಿನಾರೇಯಣರುಬಿ.ಜಯಶ್ರೀಪಾರ್ವತಿಜನಪದ ಕಲೆಗಳುಮಾನ್ವಿತಾ ಕಾಮತ್ಮಜ್ಜಿಗೆಅವ್ಯಯಕಂಪ್ಯೂಟರ್ವಿಜಯ್ ಮಲ್ಯಕಂದದಶಾವತಾರವೇದವ್ಯಾಸವೀರಪ್ಪನ್ಚದುರಂಗ (ಆಟ)ಹೆಸರುಧರ್ಮಸ್ಥಳಮಹಾವೀರಗೀತಾ (ನಟಿ)ಲಕ್ಷ್ಮೀಶನುಗ್ಗೆಕಾಯಿಆರತಿವಾಟ್ಸ್ ಆಪ್ ಮೆಸ್ಸೆಂಜರ್ಯೋಗ ಮತ್ತು ಅಧ್ಯಾತ್ಮವಿರಾಟನಾಮಪದಆನೆಪಠ್ಯಪುಸ್ತಕಮಲೆಗಳಲ್ಲಿ ಮದುಮಗಳುನವರತ್ನಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಲಸುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕರ್ನಾಟಕದ ಸಂಸ್ಕೃತಿ🡆 More