ಸಾವಯವ ಬೇಸಾಯ

ಬೆಳೆಯ ಆವರ್ತನೆ, ಹಸಿರು- ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣವನ್ನು ಅವಲಂಬಿಸಿರುವ ಸಾವಯವ ಬೇಸಾಯವು ಮಣ್ಣಿನ ತಯಾರಿಕೆಯ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ಮತ್ತು ಕೀಟಗಳನ್ನು ನಿಯಂತ್ರಿಸಲು, ಹಾಗೂ ಯಾಂತ್ರಿಕ ಬೇಸಾಯಕ್ಕಾಗಿ ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳು, ಗಿಡ ಬೆಳವಣಿಗೆ ನಿಯಂತ್ರಣಗಳು, ಜಾನುವಾರು ಮೇವು ಸೇರ್ಪಡೆಗಳು, ಮತ್ತು ತಳಿವಿಜ್ಞಾನ ಪ್ರಕಾರವಾಗಿ ಮಾರ್ಪಡಿಸಿದ ಸಾವಯವಗಳನ್ನು ಹೊರತುಪಡಿಸಿ ಅಥವಾ ಕಟ್ಟುನಿಟ್ಟಾಗಿ ನಿಯಮಿತಗೊಳಿಸುವ ವ್ಯವಸಾಯದ ಒಂದು ಭಾಗವಾಗಿದೆ.

೧೯೯೦ ರಿಂದ, ಸಾವಯವ ಉತ್ಪನ್ನಗಳಿಗಾಗಿನ ಮಾರುಕಟ್ಟೆಯು ೨೦೦೭ ರಲ್ಲಿ $46 ಬಿಲಿಯನ್ ತಲುಪಲು ತೀವ್ರಗತಿಯಲ್ಲಿ ಏರಿಕೆ ಕಂಡಿತು. ಸುವ್ಯವಸ್ಥಿತವಾಗಿ ನಿರ್ವಹಿಸುವ ಒಕ್ಕಲುಭೂಮಿಯಲ್ಲಿ ಈ ಬೇಡಿಕೆಯು ಸಜಾತೀಯ ವರ್ಧನೆಯನ್ನು ನಡೆಸುತ್ತದೆ. ಸರಿಸುಮಾರು ೩೨.೨ ಮಿಲಿಯನ್ ಹೆಕ್ಟೇರು ನಷ್ಟು ವಿಶ್ವವ್ಯಾಪ್ತಿಯಾಗಿ ಈಗ ಸುವ್ಯವಸ್ಥಿತವಾಗಿ ಒಕ್ಕಲು ಮಾಡಲಾಗಿದೆ, ಒಟ್ಟು ಜಗತ್ತಿನ ಒಕ್ಕಲುಭೂಮಿಯನ್ನು ಪ್ರತಿನಿಧಿಸುವ ಸರಿಸುಮಾರು ಪ್ರತಿಶತ ೦.೮ ರಷ್ಟು. ಅದರ ಜೊತೆಗೆ, ೨೦೦೭ ರಲ್ಲಿ ಸಾವಯವ ವನ್ಯ ಉತ್ಪನ್ನಗಳನ್ನು ಸರಿಸುಮಾರು ೩೦ ಮಿಲಿಯನ್ ಹೆಕ್ಟೇರುಗಳಷ್ಟು ಸಾಗುವಳಿ ಮಾಡಲಾಗಿದೆ.

ಸಾವಯವ ಬೇಸಾಯ


ಒಂದು ವೇಳೆ ಈ ಘಟನೆ ನಡೆಯದಂತೆ ಇದ್ದರೆ ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಾಗಿದೆ ಮತ್ತು ಕಾನೂನುಬದ್ಧವಾಗಿ ವಿಧಿಸಲಾಗಿದೆ, ಸಾವಯವ ಕೃಷಿ ಚಳುವಳಿಗಳಲ್ಲಿನ ಅಂತರಾಷ್ಟ್ರೀಯ ಒಕ್ಕೂಟದ ಮೇರೆಗೆ ದೊಡ್ಡ ಪ್ರಮಾಣದ ಗುಮಟ್ಟವನ್ನು ಹೊಂದಿಸುವ ಮೂಲವಾಗಿ (ಐಎಫ್ಒಎಎಮ್), ಅಂತರಾಷ್ಟ್ರೀಯಆಶ್ರಯ ಸಂಘಟನೆಯು ಸಾವಯವ ಸಮಷ್ಟಿಯನ್ನು ರಚಿಸುವುದಕ್ಕಾಗಿ ೧೯೭೨ ರಲ್ಲಿ ಸ್ಥಾಪಿಸಲಾಗಿದೆ. ಐಎಫ್‌ಒಎಎಮ್ ಲಕ್ಷಣಗಳ ಮೇಲೆಬಾಗಿರುವ ಸಾವಯವ ಬೇಸಾಯದ ದ್ಯೇಯಗಳು ಈ ಕೆಳಗಿನಂತಿವೆ:


"Organic agriculture is a production system that sustains the health of soils, nandan and Vaishnavi . It relies on ecological processes, biodiversity and cycles adapted to local conditions, rather than the use of inputs with adverse effects. Organic agriculture combines tradition, innovation and science to benefit the shared environment and promote fair relationships and a good quality of life for all involved.."

— International Federation of Organic Agriculture Movements

ಇತಿಹಾಸ

ಸಾವಯವ ಚಳುವಳಿ ೧೯೩೦-೧೯೪೦ ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು. ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್‌ಪೇಟ್ ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣದಲ್ಲಿ ೧೮ ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು. ಮೊದಲನೆಯ ವಿಶ್ವ-ಮಹಾಯುದ್ಧದ ಸಮಯದಲ್ಲಿ ಹೇಬರ್ -ಬಾಷ್ ವಿಧಾನವನ್ನು ಅನುಸರಿಸಿ ಇದನ್ನು ತಯಾರಿಸಲಾಯಿತು. ಪ್ರಾರಂಭದಲ್ಲಿ ತಯಾರಾದ ಈ ಗೊಬ್ಬರಗಳು ಅಗ್ಗವಾಗಿ ದೊರೆಯುತ್ತಿದ್ದು ಶಕ್ತಿಯುತವಾಗಿಯೂ ಇದ್ದುದಲ್ಲದೆ ಸುಲಭವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಇಂತಹುದೇ ಪ್ರಗತಿ ೧೯೪೦ ರ ಸುಮಾರಿನಲ್ಲಿ ರಾಸಾಯನಿಕ ಕೀಟನಾಶಕಗಳಲ್ಲಿಯೂ ಕಂಡುಬಂದಿತು. ಅದರ ಫಲವಾಗಿ ಈ ದಶಕವನ್ನು 'ಕೀಟನಾಶಕ ಯುಗ'ವೆಂದು ಕರೆಯಲಾಯಿತು.


ಸರ್ ಆಲ್ಬರ್ಟ್ ಹೊವಾರ್ಡ್ ಅವರನ್ನು ಸಾವಯವ ಬೇಸಾಯದ ಪಿತಾಮಹಾನೆಂದು ವಿಶೇಷವಾಗಿ ಪರಿಗಣಿಸಲಾಗಿದೆ. ಜೆ.ಐ.ರೊಡೇಲ್ ಅವರು ಈ ನಿಟ್ಟಿನಲ್ಲಿ ಹೆಚ್ಚು ಕೆಲಸವನ್ನು ಒಕ್ಕೂಟ ಸಂಸ್ಥಾನಗಳಲ್ಲಿ ಮಾಡಿದರು, ಲೇಡಿ ಈವ್ ಬಾಲ್ ಫೋಲ್ ಅವರು ಯುನೈಟೆಡ್ ಕಿಂಗ್ಡಂನಲ್ಲಿಯೂ ಮತ್ತೆ ಹಲವು ಮಂದಿ ವಿಶ್ವದ ಉದ್ದಗಲದಲ್ಲಿ ಮಾಡಿದರು.


ಸಾವಯವ ಬೇಸಾಯ ಒಟ್ಟು ಕೃಷಿ ಉತ್ಪನ್ನ ಶೇಕಡಾ ಪ್ರಮಾಣವನ್ನು ಪರಿಗಣಿಸಿದಾಗ ಪ್ರಾರಂಭದಿಂದಲೂ ತೀರಾ ಕಡಿಮೆಯಾಗಿಯೇ ಉಳಿದುಕೊಂಡು ಬಂದಿದೆ. ಜನಸಾಮಾನ್ಯರಲ್ಲಿ ಪರಿಸರದ ಪರಿಜ್ಞಾನ ಮತ್ತು ಶ್ರದ್ಧೆ ಹೆಚ್ಚಾದಂತೆಲ್ಲಾ ಮೂಲಭೂತವಾಗಿ ಸರಬರಾಜು ವ್ಯವಸ್ಥೆಯ ಚಳುವಳಿ ಒಂದು ಬೇಡಿಕೆಯ ಕೆಲಸವಾಗಿ ಪರಿಣಮಿಸಿತು. ಬಳಕೆದಾರರಿಂದ ಹಾಗೂ ಕೆಲವು ಸಂದರ್ಭಗಳಲ್ಲಿ ಸರಕಾರದ ಸಹಾಯ ಧನದಿಂದ ಬೇಡಿಕೆಗಳು ಅಧಿಕಗೊಂಡವು. ಇದರಿಂದ ಆಕರ್ಷಿತರಾದ ಬೇಸಾಯಗಾರರು ಬದಲಾವಣೆಗಾಗಿ ಹಾತೊರೆದರು. ಪ್ರಗತಿಪರ ರಾಷ್ಟ್ರಗಳಲ್ಲಿನ ಬಹುಮಂದಿ ಬೇಸಾಯಗಾರರು ಅನೂಚಾನವಾಗಿ ಬಂದ ವಿಧಾನದಲ್ಲಿ ಬೇಸಾಯಮಾಡುತ್ತಿದ್ದವರು. ಆ ವಿಧಾನಗಳೆಲ್ಲವೂ ಸಾವಯವ ಕೃಷಿಪದ್ಧತಿಯೊಂದಿಗೆ ಬಹುಮಟ್ಟಿಗೆ ಹೋಲುವಂತಿದ್ದರೂ ಅವುಗಳಿಗೆ ಯಾವ ಬಗೆಯ ಯೋಗ್ಯತಾ ಪತ್ರಗಳಿರಲಿಲ್ಲ. ಮತ್ತೆ ಕೆಲವು ವಿಷಯಗಳಲ್ಲಿ ಪ್ರಗತಿಪರ ರಾಷ್ಟ್ರಗಳ ಬೇಸಾಯಗಾರರು ಆರ್ಥಿಕ ಕಾರಣಗಳಿಗಾಗಿ ತಮ್ಮ ವಿಧಾನವನ್ನು ಬದಲಾಯಿಸಿಕೊಂಡರು. ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸುತ್ತದೆಯಾದರೂ ವಿಶೇಷವಾಗಿ ಯುರೋಪ್ ದೇಶಗಳಲ್ಲಿ ಮತ್ತು ಅನೇಕ ರಾಷ್ಟ್ರಗಳಲ್ಲಿ ವೇಗವಾಗಿ ಇದು ಬೆಳೆಯುತ್ತಿದೆ.


ಸಾವಯವ ಬೇಸಾಯ 
ಕ್ಯಾಲಿಫೋರ್ನಿಯಾದ ಕ್ಯಾಪೆಯಲ್ಲಿನ ಮಿಶ್ರ ತರಕಾರಿಗಳ ಸಾವಯವ ಬೆಳೆ. ಹಿನ್ನೆಲೆಯಲ್ಲಿ ಹೆಡ್ಜ್‌ರೊವನ್ನು ಗಮನಿಸಿ.


"An organic farm, properly speaking, is not one that uses certain methods and substances and avoids others; it is a farm whose structure is formed in imitation of the structure of a natural system that has the integrity, the independence and the benign dependence of an organism"

— Wendell Berry, "The Gift of Good Land"

ಮಣ್ಣಿನ ನಿರ್ವಹಣೆ

ಗಿಡಗಳಿಗೆ ನೈಟ್ರೋಜನ್, ಫಾಸ್ಫರಸ್ ಪೊಟಾಸಿಯಂ ಹಾಗೂ ಮೈಕ್ರೋನ್ಯೂಟ್ರಿಯೆಂಟ್ಸ್‌ಗಳ ಅವಶ್ಯಕತೆ ಇದೆ. ಆದರೆ ಸಾಕಷ್ಟು ನೈಟ್ರೋಜನ್ ಸೂಕ್ತವಾದ ಸಮಯದಲ್ಲಿ ಪಡೆಯುವುದು ವಿಶೇಷವಾಗಿ ಏಕಕಾಲದಲ್ಲಿ (ಗಿಡಗಳಿಗೆ ಹೆಚ್ಚು ಅಗತ್ಯವಿರುವಾಗ) ಒದಗಿಸುವುದು ಸಾವಯವ ಬೇಸಾಯಗಾರರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಬೆಳೆಗಳ ಪುನರಾವರ್ತನೆ ಮತ್ತು ಹಸಿರುಗೊಬ್ಬರ (ಹೊದಿಕೆ ಬೆಳೆಗಳು) ಪಯರಿನ ಮೂಲಕ ನೈಟ್ರೋಜೆನ್ ಒದಗಿಸಲು ಸಹಾಯ ಮಾಡುತ್ತವೆ (ನಿಖರವಾಗಿ, (1)ಫ್ಯಾಬಸಿ ಫ್ಯಾಮಿಲಿ) ಅದು ನೈಟ್ರೋಜನನ್ನು ವಾತಾವರಣದ ಮೂಲಕ ಸಂಯುಕ್ತ ಜೀವನದ ವಿಧಾನದಲ್ಲಿ ರೈಜೋಬಿಯಾ ಬ್ಯಾಕ್ಟೀರಿಯಾದೊಂದಿಗೆ ಒದಗಿಸುತ್ತದೆ. ಅಂತರಬೆಳೆಗಳು, ಸಹ ಮಣ್ಣಿನ ಸಾರವನ್ನು ಹೆಚ್ಚು ಮಾಡುತ್ತವೆ. ಏಕೆಂದರೆ ಅವು ಕ್ರಿಮಿಕೀಟಗಳನ್ನು ಹಾಗೂ ರೋಗ ರುಜಿನಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತವೆ. ಆದರೆ ಸ್ಪರ್ಧೆಯು ಒಂದು ಸಮಸ್ಯೆಯನ್ನು ಉಂಟುಮಾಡಬಹುದು. ಆದ್ದರಿಂದ ಬೆಳೆಯ ಸಾಲಿನ ನಡುವೆ ಹೆಚ್ಚು ಜಾಗ ಬಿಡಬೇಕಾಗುತ್ತದೆ. ಬೆಳೆಗಳ ಶೇಷವನ್ನು ಉಳಿಮೆ ಮೂಲಕ ಮತ್ತೆ ಮಣ್ಣಿನಲ್ಲಿಯೇ ಬೆರೆಸಿ ಕೊಳ್ಳಬಹುದು. ಬೇರೆ ಬೇರೆ ಜಾತಿಯ ಗಿಡಗಳು ವಿವಿಧ ಪ್ರಮಾಣದಲ್ಲಿ ನೈಟ್ರೋಜನ್ ಬಿಡುತ್ತದೆ, ಅದು ಏಕಕಾಲದಲ್ಲಿ ನಡೆಯಲು ಸಹಾಯಕವಾಗಿರುತ್ತದೆ. ಸಾವಯವ ಬೇಸಾಯಗಾರರು ದನಗಳ ಗೊಬ್ಬರವನ್ನು ಬಳಸುತ್ತಾರೆ (ಅದು ಕಾಂಪೋಸ್ಟ್ ಆಗಿರತಕ್ಕದ್ದು,)ಮತ್ತು ಕೆಲವು ಬಗೆಯ ಹದಮಾಡಿದ ಗೊಬ್ಬರಗಳು ಎಂದರೆ ಸೀಡ್ ಮೀಲ್ ಮತ್ತು ವಿವಿಧ ಬಗೆಯ ಖನಿಜಾಂಶದಿಂದ ಕೂಡಿದ ಪುಡಿಗಳು ವಿಶೇಷವಾಗಿ ಕಲ್ಲುಫಾಸ್‌ಫೇಟ್ ಮತ್ತು ಹಸಿರುಮರಳು, ಅದು ನೈಸರ್ಗಿಕವಾಗಿ ಸಹಜವಾಗಿ ದೊರೆಯುವುದರಿಂದ ಪೊಟಾಷ್‌ನ್ನು ಒದಗಿಸುತ್ತದೆ. ಇವೆಲ್ಲವೂ ಸೇರಿದಾಗ ಈ ವಿಧಾನಗಳು ಕೊರೆತಯನ್ನು ಹತೋಟಿಯಲ್ಲಿಡಲು ಸಹಾಯಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ pHನ್ನು ತಿದ್ದುಪಡಿಮಾಡಿಕೊಳ್ಳಬೇಕಾಗುತ್ತದೆ. ನೈಸರ್ಗಿಕ pH ತಿದ್ದುಪಡಿ ಸುಣ್ಣ ಮತ್ತು ಗಂಧಕವನ್ನು ಸೇರಿಸಿಕೊಳ್ಳುತ್ತದೆ. ಆದರೆ ಸಂಯುಕ್ತ ರಾಷ್ಟ್ರದಲ್ಲಿ ಕೆಲವು ಕೃತಕ ಮಿಶ್ರಣಗಳು ಉದಾಹರಣೆಗೆ ಕಬ್ಬಿಣದ ಸಲ್ಫೇಟ್, ಅಲ್ಯುಮಿನಂ ಸಲ್ಫೇಟ್,ಮೆಗ್ನೀಸಿಯಂ ಸಲ್ಫೇಟ್, ಮತ್ತು ಕರಗುವಂತಹ ಬೊರಾನ್ ಉತ್ಪನ್ನಗಳು ಮುಂತಾದವುಗಳನ್ನು ಸಾವಯವ ಕೃಷಿಯಲ್ಲಿ ಸೇರಿಸಿಕೊಳ್ಳುತ್ತಾರೆ.: 43 


ದನಗಳು ಹಾಗೂ ಬೆಳೆಗಳು ಸೇರಿಕೊಂಡು ಮಿಶ್ರ ಕೃಷಿ ಭೂಮಿಯನ್ನಾಗಿ ರೂಢಿಸಿಕೊಳ್ಳಬುಹುದು. ಇದರಲ್ಲಿ ಅನುಕೂಲವೆಂದರೆ ನೈಟ್ರೋಜನ್ ಭರಿತ ಹುಲ್ಲಿನಿಂದಾಗಿ ಭೂಮಿಯ ಫಲವತ್ತಾಗುತ್ತದೆ. ಬಿಳಿ ಕ್ಲೋವರ್ ಅಥವಾ ಅಲ್ಫಾಲ್ಫ ಹುಲ್ಲು ಬೆಳೆಸುವುದರಿಂದ ಹಾಗೂ ದ್ವಿದಳಧಾನ್ಯದ ಬೆಳೆಗಳಿಗೆ ಮಣ್ಣು ಫಲವತ್ತಾಗುತ್ತದೆ.{1/ ದನಗಳಿಲ್ಲದ ಕೃಷಿ ಭೂಮಿಗೆ ("ದನರಹಿತ")ಫಲವತ್ತತೆಯನ್ನು ಉಳಿಸಿಕೊಳ್ಳಲು ಹೆಚ್ಚು ಕಷ್ಟವಾಗುತ್ತದೆ. ಅದು ಹೊರಗಿನ ವಸ್ತುಗಳ ಮೇಲೆ ಆಧಾರವಾಗಿರಬೇಕಾಗುತ್ತದೆ. ಆಮದು ಮಾಡಿಕೊಂಡ ಗೊಬ್ಬರ ಹಾಗೂ ಅಡಗುಕಾಳುಗಳು ಹಾಗೂ ಹಸಿರು ಗೊಬ್ಬರ ಮುಂತಾದವು ಅಗತ್ಯವಾಗಿ ಒದಗಿಸಬೇಕಾಗುತ್ತದೆ. ಅಡಗು ಕಾಳುಗಳು ಪರಿಮಿತವಾದ ನೈಟ್ರೋಜನ್ ಒದಗಿಸಿದರೂ ಅದು ಕಟಾವಾಗಿರುವುದರಿಂದ ಅದರ ಮಿತಿ ಸಾಕಷ್ಟು ಕಡಿಮೆಯಿರುತ್ತದೆ. ತೋಟಗಾರಿಕಾ ಕ್ಷೇತ್ರಗಳು ವಿಶೇಷವಾಗಿ ಹಣ್ಣು ಹಾಗೂ ತರಕಾರಿಯನ್ನು ಬೆಳೆಯುವಂತಹವು, ರಕ್ಷಿತ ಪರಿಸ್ಥಿತಿಯಲ್ಲಿರುವಂತಹವು ಹೊರಗಿನ ಉತ್ಪನ್ನಗಳಿಗಾಗಿ ಮತ್ತಷ್ಟು ಹೆಚ್ಚಾಗಿ ಅವಲಂಭಿತವಾಗಿರುತ್ತವೆ.

ಕಳೆ ಹತೋಟಿ

ಪೌಷ್ಠಿಕತೆ ಒದಗಿಸಿದ ನಂತರ ಕಳೆಯನ್ನು ಹತೋಟಿಯಲ್ಲಿರಿಸಿಕೊಳ್ಳುವುದು ಎರಡನೆಯ ಸ್ಥಾನವನ್ನು ಪಡೆಯುತ್ತದೆ. ಕಳೆಯನ್ನು ಹತೋಟಿಯಲ್ಲಿರಿಸಿಕೊಳ್ಳಲು ವಿವಿಧ ಬಗೆಯ ತಾಂತ್ರಿಕತೆಗಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅವುಗಳಲ್ಲಿ ಕೈಯಿಂದ ಕಳೆ ಕೀಳುವುದು, ಒದ್ದೆ ಹುಲ್ಲನ್ನು ಬೇರುಗಳ ಬಳಿ ಹೊದಿಸುವುದು, ಕಾರ್ನ್ ಗ್ಲುಟೆನ್ ಮೀಲ್, ಸಹಜವಾದ ಪ್ರೀಮಿರ್‌ಗೆನ್ಸ್ ಹರ್‌ಬಿಸೈಡ್, ಬೆಂಕಿ, ಬೆಳ್ಳುಳ್ಳಿ ಮತ್ತು ಲವಂಗದೆಣ್ಣೆ, ಬೊರಾಕ್ಸ್, ಪೆಲರ್ ಗೋನಿಕ್ ಆಸಿಡ್ ಸೋಲರೈ ಜೇಷನ್ (ಸುಮಾರು 4–6 ವಾರಗಳ ಕಾಲ ಬೆಚ್ಚನೆಯ ವಾತಾವರಣದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್‌ನ್ನು ಅಗಲವಾಗಿ ಹೊದಿಸುವುದು), ವೈನ್‌ಗಾರ್, ಮತ್ತಿತರ ಬೇರೆ ಬೇರೆ ಮನೆಯಲ್ಲಿ ಬಳಸುವ ಭತ್ತದ ಬೇಸಾಯದಲ್ಲಿ ಇತ್ತೀಚೆಗೆ ಕಂಡು ಹಿಡಿದಿರುವ ನಿವಾರಣೆಗಳು.: 45–65  ಒಂದು ನಿವಾರಣೋಪಾಯವೆಂದರೆ ಬಾತುಕೋಳಿ ಹಾಗೂ ಮೀನುಗಳನ್ನು ಭತ್ತದ ಗದ್ದೆಗಳಲ್ಲಿ ಬಿಡುವುದು. ಅವು ಕಳೆಯನ್ನು ಮಾತ್ರವಲ್ಲದೆ ಕ್ರಿಮಿಕೀಟಗಳನ್ನು ಸಹ ತಿನ್ನುತ್ತವೆ.

ಇತರೆ ಜೀವಿಗಳನ್ನು ಹತೋಟಿಯಲ್ಲಿಡುವುದು

ಕಳೆಯು ಮಾತ್ರವಲ್ಲದೆ ಬೆಳೆಗಳಿಗೆ ಅಪಾಯಕಾರಿಯಾಗಿ ಸಮಸ್ಯೆಯೊಡ್ಡುವ ಇತರೆ ಜೀವಿಗಳಲ್ಲಿ ಆರ್ಥೋಪಾಡ್ಸ್ (ಉದಾ. ಕ್ರಿಮಿಕೀಟಗಳು) ಮತ್ತು ನೆಮಟೋಡ್ಸ್. ಶಿಲೀಂದ್ರಗಳು ಹಾಗೂ ಬ್ಯಾಕ್ಟೀರಿಯಾಗಳು ರೋಗವನ್ನು ಹರಡುತ್ತವೆ.


ಕೀಟರೋಗಗಳನ್ನು ಸರ್ವಸಾಮಾನ್ಯವಾದ ಸಮಸ್ಯೆ ಕೀಟನಾಶಕಗಳು ಸಾವಯವ ಹಾಗೂ ಸಾವಯವವಲ್ಲದ ನಿರೋಧಕಗಳು ಪರಿಸರ ಹಾಗೂ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮದಿಂದಾಗಿ ವಿವಾದಗ್ರಸ್ತ ವಿಷಯ. ಕೀಟಗಳನ್ನು ಹತೋಟಿಯಲ್ಲಿರಿಸಿಕೊಳ್ಳವ ಒಂದು ಮಾರ್ಗವೆಂದರೆ ಅವುಗಳನ್ನು ಲೆಕ್ಕಿಸದೆ ಗಿಡಗಳ ಆರೋಗ್ಯದ ಬಗೆಗೆ ಹೆಚ್ಚಿನ ಗಮನ ನೀಡುವುದು. ಏಕೆಂದರೆ ಒಂದು ಗಿಡ ತನ್ನ ಎಲೆಯ ಮೂರನೆಯ ಒಂದು ಭಾಗವನ್ನು ಕಳೆದುಕೊಂಡರೂ ಯಥಾಸ್ಥಿತಿಯಲ್ಲಿ ಬದುಕುಳಿಯಲು ಸಾಮರ್ಥ್ಯ ಪಡೆದಿದೆ. ಅದು ತನ್ನ ಬೆಳವಣೆಗೆಯಲ್ಲಿ ಕುಂಠಿತವಾಗುವುದಿಲ್ಲ.: 67  ಕೀಟನಾಶಕಗಳ ಬಳಕೆ ತಪ್ಪಿಸಬೇಕಾದರೆ ಪ್ರಕೃತಿ ಸಹಜವಾಗಿ ತಡೆಗಟ್ಟುವಂತಹ ಗಿಡಗಳನ್ನು ಆಯ್ಕೆ ಮಾಡಿ ಚೀಲಗಳಲ್ಲಿ ಗಿಡದ ಸುತ್ತಲೂ ಇಡಬೇಕು. ಸಾಯುತ್ತಿರುವ ಎಲೆಗಳು, ಹಣ್ಣುಗಳು, ಗಿಡಗಳು, ಅಡಗು ಗಿಡಗಳು ಮುಂತಾದವುಗಳನ್ನು ಹೊರತೆಗೆಯಬೇಕು.ಉಪಯುಕ್ತ ಜೀವಿಗಳನ್ನು ಮತ್ತು ಉಪಯುಕ್ತ ಕೀಟಗಳನ್ನು ಒಳಗೆ ಬಿಟ್ಟು ಬೆಳೆಯಲು ಪ್ರೋತ್ಸಾಹ ನೀಡಬೇಕು. ಜತೆಗೆ ಸಹಕಾರಿಯಾಗುವಂತಹ ಗಿಡಗಳನ್ನು ಹೊಸದಾಗಿ ನಾಟಿಮಾಡಬೇಕು, ಬಹುಮುಖ ಬೇಸಾಯವನ್ನು ರೂಢಿಯಲ್ಲಿರಿಸಿಕೊಳ್ಳಬೇಕು. ಬೇರೆ ವಿಧಾನಗಳಲ್ಲಿ ಎಂದರೆ ಬೋನುಗಳನ್ನು, ಅಂಟುಕಾರ್ಡುಗಳನ್ನು (ಇದು ಕೀಟಗಳ ಪ್ರಮಾಣವನ್ನು ಅಂದಾಜು ಮಾಡಲು ಸಹ ಅವಕಾಶವಾಗುತ್ತದೆ) ಹಾಗೂ ಕಾಲಮಾನವನ್ನು ಬದಲಾಯಿಸಿಕೊಳ್ಳುವುದು. ಜೈವಿಕ ಕೀಟ ಹತೋಟಿ ಪ್ರಾಕೃತಿಕವಾಗಿ ರೋಗ ಕೀಟಗಳನ್ನು ಹತೋಟಿಯಲ್ಲಿಡಲು ಸಹಕಾರವಾಗುತ್ತದೆ. ಇದನ್ನು ಬಳಸಲು ಗಾಳಿಕೋಶ ತಿಗಣಿ ದೊಡ್ಡ ಗಾತ್ರದ ಕಣ್ಣಿರುವ ತಿಗಣಿಗಳು ಮತ್ತು ಸ್ವಲ್ಪ ಮಟ್ಟಿಗೆ ಲೇಡಿಬಗ್ಸ್ (ಅವು ಹಾರಲು ಶಕ್ತವಾಗಿರುತ್ತವೆ)-ಇವೆಲ್ಲವೂ ರೋಗಹರಡುವ ಕೀಟಗಳನ್ನು ತಿನ್ನುತ್ತವೆ.ಹೀಗಾಗಿ ಅವುಗಳ ಹಾವಳಿಯನ್ನು ತಡೆಯಲು ಇದೊಂದು ಒಳ್ಳೆಯ ಮಾರ್ಗ. ಲೇಸ್‌ವಿಂಗ್ಸ್ ಸಹ ತಡೆಯಲು ಬಹುಮುಖ ಉಪಯೋಗಿಯಾದರೂ ಅವು ಹಾರಿಹೋಗುತ್ತವೆ ಪ್ರಾಯಿಂಗ್ ಮ್ಯಾಟಿಸ್ ಬಹಳ ನಿಧಾನವಾಗಿ ನಡೆಯುತ್ತಾ ಕಡಿಮೆ ತಿನ್ನುತ್ತವೆ. ಪ್ಯಾರಾಸಿಟಾಯಿಡ್ ಕುಟುಕು ಹುಳು ತನಗೆ ಬೇಕಾದ ಹುಳುಗಳನ್ನು ಮಾತ್ರ ಆಯ್ದುಕೊಂಡು ತಿನ್ನುತ್ತದೆ. ಸಣ್ಣ ಕೀಟಗಳು ಹೊರಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ ಏಕೆಂದರೆ ಗಾಳಿಯು ಅವುಗಳನ್ನು ಹತೋಟಿಯಲ್ಲಿರಿಸಿಕೊಂಡಿರುತ್ತವೆ. ಗಾಳಿಕೋಶ ಕೀಟಗಳು ಹೆಚ್ಚು ಪರಿಣಾಮಕಾರಿಯಾಗಿ ಸಣ್ಣ ಕೀಟಗಳನ್ನು ಹತೋಟಿಯಲ್ಲಿರಿಸಲು ಸಹಾಯಕವಾಗುತ್ತವೆ.: 66–90 


ಸಾವಯವಕ್ಕೆ ಅಂಗೀಕೃತವಾಗಿರುವ ಹಲವಾರು ಕೀಟನಾಶಕಗಳನ್ನು ಹಸಿರು ಕೀಟನಾಶಕಗಳೆಂದು ಕರೆಯಲಾಗುತ್ತಿದೆ. ಅವುಗಳಲ್ಲಿ ಸ್ಪಿನೋಸ್ಯಾಡ್ ಮತ್ತು ಬೇವು ಸಹ ಸೇರಿವೆ. ಸಾಮಾನ್ಯವಾಗಿ, ಆದರೆ ಕಡ್ಡಾಯವಾಗೇನೂ ಇಲ್ಲದೆ, ಸಾವಯವ ಕೀಟನಾಶಕಗಳು ಕತಕ ಕೀಟನಾಶಕಗಳಿಗಿಂತಲೂ ಹೆಚ್ಚು ಕ್ಷೇಮಕರ ಹಾಗೂ ಪರಿಸರಹಿತವಾದವುಗಳು..: 92  ಮುಖ್ಯವಾಗಿ ಮೂರು ಸಾವಯವ ಕೀಟನಾಶಕಗಳು ಬಳಕೆಯಲ್ಲಿರುವುದೆಂದರೆ Bt(ಬ್ಯಾಕ್ಟೀರಿಯಲ್ ಟಾಕ್ಸಿನ್), ಪೈರಿಥ್ರಮ್ ಮತ್ತು ರೋಟನೋನ್. ಸಮೀಕ್ಷೆಯಿಂದ ತಿಳಿದುಬರುವಂತೆ 10%ಗಿಂತಲೂ ಕಡಿಮೆ ಸಾವಯವ ರೈತರು ಈ ಕೀಟನಾಶಕವನ್ನು ಸತತವಾಗಿ ಬಳಸುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಅಲ್ಲಿನ ತರಕಾರಿ ಬೆಳೆಗಾರರ 5.3% ಮಾತ್ರ ರೋಟನೋನ್ ಬಳಸುತ್ತಾರೆ. 1.7% ಬೆಳೆಗಾರರು ಪೈರಿತ್ರೀಂ (ಲೋಟಾರ್ 2003:26). 2005 ರಲ್ಲಿ ವಿವಾದಗ್ರಸ್ತವೂ ಹೆಚ್ಚು ಟಾಕ್ಸಿಕ್‌ನಿಂದ ಕೂಡಿದ ರೋಟನೋನ್ ಕೀಟನಾಶಕವನ್ನು ಸಂಯುಕ್ತ ಸಂಸ್ಥಾನಗಳ ಸಾವಯವ ರೈತರಿಗಾಗಿ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಆದರೆ ಆರ್ಗಾನಿಕ್ ಮೆಟೀರಿಯಲ್ ರಿವ್ಯೂ ಇನ್‌ಸ್ಟಿಟ್ಯೂಟ್. ನಿಕೋಟಿನ್ ಸಲ್ಫೇಟ್‌ನ್ನು ಸಹ ಬಳಸಬಹುದು; ಅದು ಬೇಗನೆ ಕುಸಿದುಹೋಗುವುದಾದರೂ ಹೆಚ್ಚು ಟಾಕ್ಸಿಕ್ ಆಗಿರುತ್ತದೆ, ಆಲ್ಡಿಕಾರ್ಬ್ ನಷ್ಟು ಟಾಕ್ಸಿಕ್ ಆಗಿರುತ್ತದೆ.: 104  ಹೆಚ್ಚು ಟಾಕ್ಸಿಕ್ ಅಲ್ಲದಿದ್ದರೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಹ ಕೀಟನಾಶಕಗಳೆಂದರೆ ಬೇವು, ಸ್ಪಿನೋಸಾಡ್, ಸೋಪು, ಬೆಳ್ಳುಳ್ಳಿ, ನಿಂಬೆಣ್ಣೆ, ಕ್ಯಾಪ್ಸಿಸಿನ್ (ಹೊರಡೂಡುವುದು), ಬ್ಯಾಸಿಲಸ್ ಪೊಪಿಲ್ಲೆ , ಬ್ಯೂವಾರಿಯಾ ಬ್ಯಾಸಿನಾ ಮತ್ತು ಬೋರಿಕ್ ಆಸಿಡ್.: 110  ಕೀಟನಾಶಕಗಳನ್ನು ರೋಗವನ್ನು ಆದಷ್ಟು ಕಡಿಮೆ ಮಾಡಲು ಪುನರಾವರ್ತನೆ ಮಾಡುತ್ತ ಇರಬೇಕು.


ಎಲ್ಲಕ್ಕಿಂತ ಮುಖ್ಯವಾಗಿ ರೋಗವನ್ನು ತಡೆಗಟ್ಟಲು ಸ್ಥಳವನ್ನು ಶುಚಿಯಾಗಿರಿಸಿಕೊಳ್ಳಬೇಕು, ರೋಗದಿಂದ ಕೂಡಿದ ಹಾಗೂ ಸಾಯುತ್ತಿರುವ ಗಿಡಗಳನ್ನು ಕಿತ್ತು ಹಾಕಬೇಕು. ಗಿಡಗಳಿಗೆ ನೀರು ಮತ್ತು ಗೊಬ್ಬರವನ್ನು ಒದಗಿಸಿ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು: 129  ಕಾಂಪೋಸ್ಟ್ ಟೀಯನ್ನು ಕೆಲವು ಸಂದರ್ಭಗಳಲ್ಲಿ ನೀಡಬೇಕು ಅದು ಪರಿಣಾಮಕಾರಿಯಾಗಿರುತ್ತದೆ. ಆದರೆ ಅವು ಅಪಾಯಕಾರಿ ಹಾಗೂ ಪರಿಣಾಮಕಾರಿಯಲ್ಲವೆಂಬ ವಿಷಯ ಗಮನದಲ್ಲಿರಿಸಿಕೊಳ್ಳಬೇಕು. ಬಹುಮುಖ ಬೇಸಾಯ ರೋಗದ ಹರಡುವಿಕೆಯ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ರೋಗನಿರೋಧಕ ಬೇಸಾಯದ ಸಲಕರಣೆಗಳನ್ನು ಖರೀದಿಸಿಕೊಳ್ಳಬೇಕು. ಬ್ಯಾಸಿಲಸ್ ಸಬ್‌ಟಿಲೀಸ್, ಬ್ಯಾಸಿಲಸ್ ಪಮಿಲಸ್,ಮತ್ತು ಟ್ರೈಕೋಡರ್ಮಾ ಹಾರಿಝನಮ್ ಇವು ಬೇರುಗಳಿಗೆ ಅಂಟುವ ರೋಗಗಳನ್ನು ನಿರೋಧಿಸುವ ಸಾಮರ್ಥ್ಯವಿರುವ ಸಾವಯವ ಶಿಲೀಂದ್ರ ಕೀಟನಾಶಕಗಳು. ಬೊರ್ಡಿಯಕ್ಸ್ ಮಿಶ್ರಣದಲ್ಲಿ ತಾಮ್ರದ ಅಂಶವಿರುತ್ತದೆ.ಅದನ್ನು ಸಾವಯವ ಶಿಲೀಂದ್ರ ನಿರೋಧಕವನ್ನಾಗಿ ಅನೇಕ ಬಗೆಯಲ್ಲಿ ಬಳಸಬಹುದು. ಗಂಧಕವು ಶಿಲೀಂದ್ರಕ್ಕೆ ವಿರುದ್ಧವಾಗಿ ಹಾಗೂ ಕೀಟಗಳನ್ನು ತಡೆಯಲು ಉಪಯೋಗಿಸಬಹುದು ಸುಣ್ಣದ ಗಂಧಕ ಸಹ ದೊರೆಯುತ್ತದೆ, ಆದರೆ ಇದು ಗಿಡಗಳಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆಗಳಿವೆ. ಪೊಟಾಸಿಯಂ ಮತ್ತು ಸೋಡಿಯಂ ಬೈಕಾಬ್ರೋನೇಟ್ ಸಹ ಶಿಲೀಂದ್ರಗಳನ್ನು ಎದುರಿಸಲು ಪರಿಣಾಮಕಾರಿಯಾಗಿರುತ್ತವೆ. ಕೆಲವು ಗಿಡ ಉತ್ತೇಜಕಗಳು ಗಿಡಗಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ, ಅವುಗಳನ್ನು ಸಹ ಸಾವಯವವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳಲ್ಲಿ ಬಹುಪಾಲು ಕೃತಕವಾದವುಗಳು. ಬೇರೆ ಕೃತ ಶಿಲೀಂದ್ರಕ ಕೀಟನಾಶಕಗಳನ್ನು ಸಾಮಾನ್ಯವಾಗಿ ಬಳಸಲು ಅನುಮತಿ ನೀಡಲಾಗದಿದ್ದರೂ ಅವುಗಳನ್ನು ರಕ್ಷಕಗಳು ಮತ್ತು ಸಿಸ್ಟೆಮಿಕ್ ಎಂದು ವಿಂಗಡಿಸಲಾಗಿದೆ.: 142–44 

ಮಾನದಂಡ

ಮಾನದಂಡಗಳು ಉತ್ಪನ್ನದ ವಿಧಾನಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತವೆಯಲ್ಲದೆ ಸಾವಯವ ಕೃಷಿಗೆ ಅಂತಿಮವಾಗಿ ಉತ್ಪನ್ನಗಳನ್ನು ಒದಗಿಸಲು ಹಿಡಿತದಲ್ಲಿರಿಸಿಕೊಳ್ಳುತ್ತವೆ. ಇಂತಹ ಮಾನದಂಡಗಳು ಸ್ವ ಇಚ್ಛೆಯಿಂದಾಗಿರಬಹುದು ಇಲ್ಲವೆ ಕಾನೂನಿನ ಅಡಿಯಲ್ಲಿ ರೂಪಿತವಾಗಿರಬಹುದು. 1970 ರಷ್ಟು ಮುಂಚೆಯೇ ಸಾವಯವದ ಉತ್ಪನ್ನಕಾರರಿಗೆ ಖಾಸಗಿ ಸಂಸ್ಥೆಗಳು ಮನ್ನಣೆ ನೀಡಿ ಅಂಗೀಕರಿಸಿದ್ದುವು. 1980 ರಿಂದ ಈಚೆಗೆ ಸರಕಾರಗಳು ಸಾವಯವ ಉತ್ಪನ್ನದ ಬಗೆಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದವು. 1990 ರ ಪ್ರಾರಂಭದಲ್ಲಿ ಮಾನದಂಡ ಬಗೆಗೆ ಕಾನೂನು ರಚಿಸುವತ್ತ ಗಮನ ಸೆಳೆಯಲಾಯಿತು. ಈ ನಿಟ್ಟಿನಲ್ಲಿ ಮುಖ್ಯವಾದದ್ದು 1991 ಇಯು-ಎಕೊ ರೆಗ್ಯುಲೇಷನ್. ಇದನ್ನು ಯೂರೋಪಿಯನ್ ಯೂನಿಯನ್ (ಇಯು)ಗಾಗಿ ನಿರ್ಮಿಸಲಾಯಿತು.ಇದು 12 ದೇಶಗಳಿಗೆ ಮಾನದಂಡವನ್ನು ನಿಗದಿಪಡಿಸಿದಲ್ಲದೆ 1993 ಯುಕೆ ಕಾರ್ಯಕ್ರಮವನ್ನು ರೂಪಿಸಿತು. ಈ ಇಯು ಕಾರ್ಯಕ್ರಮವನ್ನು ಆನಂತರ ಜಪಾನ್ ದೇಶವು 2001 ರಲ್ಲಿ ಅನುಸರಿಸಿತು. 2002 ರಲ್ಲಿ ಸಂಯುಕ್ತ ಸಂಸ್ಥಾನಗಳು ನ್ಯಾಷನಲ್ ಆರ್ಗನಿಕ್ ಪ್ರೊಗ್ರಾಮ್ ರಚಿಸಿತು. (ಎನ್‌ಒಪಿ). 2007 ರ ವೇಳೆಗೆ 60 ಕ್ಕೂ ಹೆಚ್ಚಿನ ದೇಶಗಳು ಸಾವಯವ ಬೇಸಾಯವನ್ನು ಕುರಿತ ನಿಯಮಗಳನ್ನು ರಸಿಸಿಕೊಂಡಿವೆ, 2005ರಲ್ಲಿ ಸಾವಯವ ಕೃಷಿಯನ್ನು ಕುರಿತು ಸಿದ್ಧಾಂತಗಳನ್ನು ರಚಿಸಿಕೊಂಡಿದೆ(ಐಎಫ್‌ಒಎಎಂ 2007:11). 2005 ರಲ್ಲಿ ಐಎಫ್‌ಒಎಎಂ ಸಾವಯವ ಕೃಷಿಯನ್ನು ಕುರಿತು ಸಿದ್ಧಾಂತಗಳನ್ನು ರಚಿಸಿಕೊಂಡಿದೆ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣಪತ್ರವನ್ನು ಅಧಿಕೃತವಾಗಿ ನೀಡಲು ಮಾರ್ಗದರ್ಶನ ನೀಡುತ್ತದೆ. ಯಾವುದೇ ಏಜನ್ಸಿಗಳು ವೈಯುಕ್ತಿಕವಾಗಿ ಒಂದೊಂದು ಬೇಸಾಯ ಕ್ಷೇತ್ರಕ್ಕೆ ಅನುಮೋದನೆಯನ್ನಾಗಲೀ ಪ್ರಮಾಣಪತ್ರವನ್ನಾಗಲೀ ವಿತರಣೆ ಮಾಡುವುದಿಲ್ಲ. ಅವೇನಿದ್ದರೂ ಒಂದು ಗುಂಪಿಗೆ ಮಾನ್ಯತೆ ನೀಡುತ್ತದೆ.


ಆರ್ಗಾನಿಕ್ ಮೇಟೀರಿಯಲ್ಸ್ ರಿವ್ಯೂ ಇನ್‌ಸ್ಟಿಟ್ಯೂಟ್ ಸ್ವತಂತ್ರವಾಗಿ ಸಾವಯವ ಉತ್ಪನ್ನಗಳಲ್ಲಿ ಮತ್ತು ಆಹಾರದಲ್ಲಿ ಬಳಸುವ ಸಾಮಾಗ್ರಿಗಳನ್ನು ಪರೀಕ್ಷಿಸುತ್ತದೆ.

ಮಿಶ್ರಗೊಬ್ಬರ

ಸಾವಯವ ಮಾನದಂಡಗಳ ಅಡಿಯಲ್ಲಿ ಗೊಬ್ಬರವನ್ನು ಸರಿಯಾದ ಥರ್ಮೋಫಿಲಿಕ್ ಕಾಂಪೋಸ್ಟಿಂಗ್ ಗುರಿಪಡಿಸಲಾಗುತ್ತದೆ. ಅದನ್ನು ಒಂದು ಸ್ಟೆರಿಲೈಜಿಂಗ್ ತಾಪಕ್ಕೆ ತಲುಪುವಂತೆ ಬಿಡಲಾಗುವುದು. ಕಚ್ಚಾ ದನದಗೊಬ್ಬರ ಬಳಸಿದ್ದರೆ ಬೆಳೆಯನ್ನು ಕೊಯ್ಲುಮಾಡಲು ೧೨೦ ದಿನಗಳು ಕಳೆದಿರಬೇಕಾಗುತ್ತದೆ. ಮಣ್ಣಿನೊಂದಿಗೆ ನೇರವಾಗಿ ಸಂಪರ್ಕ ಪಡೆದಿರುವಾಗ ಮಾತ್ರ ಇದು ಅನ್ವಯಿಸುತ್ತದೆ. ಉತ್ಪನ್ನಗಳು ನೇರವಾಗಿ ಮಣ್ಣಿನೊಂದಿಗೆ ಸಂಪರ್ಕ ಪಡೆಯದಿರುವಾಗ ಕೊಯ್ಲು ಮಾಡಲು 90 ದಿನಗಳು ಕಳೆದಿರಬೇಕು.

ಆರ್ಥಿಕತೆ

ಕೃಷಿ ವಿಜ್ಞಾನದ ಒಂದು ಭಾಗವಾಗಿರುವ ಸಾವಯವ ಕೃಷಿಯ ಆರ್ಥಿಕತೆ ಮಾನವ ಸಮಾಜವನ್ನು ಕುರಿತು ಪರಿಪೂರ್ಣವಾದ ಪರಿಣಾಮ ಮಾಡುತ್ತದೆಯಲ್ಲದೆ ಅದು ಎಲ್ಲಾ ವಿಧಿವಿಧಾನಗಳನ್ನು ಸಾಮಾಜಿಕ ವೆಚ್ಚಗಳು, ಅವಕಾಶಗಳಿಗುಂಟಾಗುವ ವೆಚ್ಚಗಳು, ಅನಿರೀಕ್ಷಿತ ಪರಿಣಾಮಗಳು, ಅಸಂಬದ್ಧವಾದ ಮಾಹಿತಿ ಹಾಗೂ ಮಾನದಂಡದ ಆರ್ಥಿಕತೆಗಳೆಲ್ಲವನ್ನೂ ಒಳಗೊಂಡಿರುತ್ತದೆ. ಆರ್ಥಿಕತೆಯ ಪರಿಮಿತಿಯು ವಿಶಾಲವಾಗಿದ್ದರೂ ಕೃಷಿವಿಜ್ಞಾನದ ಆರ್ಥಿಕತೆ ಬೇಸಾಯ ಮಟ್ಟದಲ್ಲಿ ನಡೆಯುವ ಗರಿಷ್ಠ ಉತ್ಪನ್ನ ಹಾಗೂ ಸಾಮರ್ಥ್ಯದತ್ತ ಹೆಚ್ಚು ಗಮನ ನೀಡುತ್ತದೆ. ಮುಖ್ಯವಾಹಿನಿ ನರವಂಶಶಾಸ್ತ್ರದ ಹಿನ್ನೆಲೆಯಲ್ಲಿ ನಡೆಯುವಂತಹ ಮಾರ್ಗವನ್ನು ಅನುಸರಿಸಿ ಬಯೋಡೈವರ್ಸಿಟಿಯ ನೈಸರ್ಗಿಕವಾಚ ವಾತಾವರಣದ ಮೌಲ್ಯವನ್ನು ಪಡೆಯುತ್ತದೆ. ಉದಾಹರಣೆಗೆ ಅದು ಜನರಿಗೆ ಲಾಭದಾಯಕವಾಗಿದೆಯೆಂಬ ಅದು ಮತ್ತಷ್ಟು ಹೆಚ್ಚಿಸುವ ಒಂದೇ ಕಾರಣಕ್ಕಾಗಿ ಎಂದು ಪರಿಗಣಿಸಲಾಗಿದೆ. ಯೂರೋಪ್ ಯೂನಿಯನ್ ಮುಂತಾದಂತಹ ಸರಕಾರಗಳು ಸಾವಯವ ಕೃಷಿಗೆ ಸಹಾಯಧನವನ್ನು ನೀಡಿ ಹೆಚ್ಚಿನ ಭಾಗಗಳನ್ನು ಪ್ರೋತ್ಸಾಹಿಸುತ್ತವೆ. ಏಕೆಂದರೆ ಈ ರಾಷ್ಟ್ರಗಳು ಕಡಿಮೆ ವೆಚ್ಚದಲ್ಲಿ ಕೆಲಸವನ್ನು ನಿರ್ವಹಿಸುತ್ತವೆ ಎಂದು ನಂಬಲಾಗಿದೆ. ನೀರಿನ ಬಳಕೆಯಲ್ಲಿ ಉಳಿತಾಯ, ನೀರಿನ ಕಶ್ಮಲಗಳನ್ನು ಕೀಟನಾಶಕಗಳಂತಹ ಬಾಹ್ಯ ಪ್ರಯೋಜನಗಳು ಮತ್ತು ಇತರ ವಸ್ತುಗಳನ್ನು ವಿಶೇಷವಾಗಿ ಸಾಯಯವ ಕೃಷಿಗೆ ಸಂಬಂಧಪಟ್ಟಂತಹವುಗಳು. ಅಲ್ಲದೆ ಮಣ್ಣಿನ ಸವೆತದಲ್ಲಿ ಕಡಿಮೆಗೊಳಿಸುವುದು, ಇಂಗಾಲಾಮ್ಲದ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡುವುದು ಜತೆಗೆ ಬಯೋಡೈವರ್ಸಿಟಿಯನ್ನು ಹೆಚ್ಚುಮಾಡುವುದನ್ನು ಹಾಗೂ ಇತರೆ ಪ್ರಯೋಜನಗಳನ್ನು ಹೊಂದಿದೆ.


ಸಾವಯವ ಕೃಷಿ ತಿಳಿವಳಿಕೆ ಮತ್ತು ಕಾರ್ಮಿಕ ಪ್ರಧಾನವಾದದ್ದು. ರೂಢಿಯಲ್ಲಿರುವ ಕೃಷಿ ಬಂಡವಾಳದ ಮೇಲೆ ಆಧಾರಿತವಾಗಿದ್ದು ಅದಕ್ಕೆ ಹೆಚ್ಚಿನ ಶಕ್ತಿ ಹಾಗೂ ಸಿದ್ಧಪಡಿಸಿದ ವಸ್ತುಗಳ ಮೇಲೆ ಆಧಾರವಾಗಿರುತ್ತದೆ. ಕ್ಯಾಲಿಫೋರ್ನಿಯಾದ ಸಾವಯವ ಕೃಷಿಕರ ಅಭಿಪ್ರಾಯದಂತೆ ಅವರು ಎದುರಿಸುತ್ತಿರುವ ಅತಿ ಹೆಚ್ಚಿನ ತೊಡಕೆಂದರೆ ಉತ್ಪನ್ನದ ಮಾರಾಟ.

ಉತ್ಪಾದಕರ ಭೌಗೋಳಿಕ ಹಂಚಿಕೆ

ಸಾವಯವ ಉತ್ಪನ್ನಗಳಿಗೆ ಉತ್ತರ ಅಮೆರಿಕ ಮತ್ತು ಯೂರೋಪ್‌ನಲ್ಲಿ ಅತ್ಯಂತ ಬಲವಾಗಿದೆ. 2001 ರಲ್ಲಿ ಒಟ್ಟು 20 ಬಿಲಿಯನ್ ಡಾಲರ್‌ಗಳ ಮಾರುಕಟ್ಟೆಯಲ್ಲಿ (2003:6) ಅದರ ಅಂದಾಜು ಕ್ರಮವಾಗಿ 6 ಮತ್ತು 8 ಬಿಲಿಯನ್ ಡಾಲರ್‌ಗಳು. ಆದರೆ, 2007 ರ ರೀತ್ಯಾ ಸಾವಯವ ಕೃಷಿ ಭೂಮಿ ವಿಶ್ವದಾದ್ಯಂತ ಹಂಚಿಕೆಯಾಗಿದೆ. ಆಸ್ಟ್ರೇಲಿಯಾ 39% ಮತ್ತು ಆಸ್ಟ್ರೇಲಿಯಾ 11.8 ಮಿಲಿಯನ್ ಹೆಕ್ಟೇರ್ ಒಟ್ಟು ವಿಸ್ತೀರ್ಣದಲ್ಲಿ. ಆದರೆ ಇದರಲ್ಲಿ ಶೇಕಡಾ 97 ರಷ್ಟು ಭೂಭಾಗ ವ್ಯವಸ್ಥಿತವಾಗಿ ಹರಡಿಲ್ಲದೆ ಯಾವುದೇ ಸ್ಥಿರತೆಯಿಲ್ಲದಂತಹ ಸ್ಥಿತಿಯಲ್ಲಿದೆ (2007:35). ಇದರ ಪರಿಣಾಮದಿಂದಾಗಿ ಒಟ್ಟು ಮಾರಾಟ ಸುಮಾರು ಯು.ಎಸ್. ನ ಮಾರಾಟದ 5% ನಷ್ಟಾಗುತ್ತದೆ (2003:7). ಯೂರೋಪ್ ದೇಶಗಳು ಒಟ್ಟು ಸಾವಯವ ಕೃಷಿ ಭೂಮಿಯಲ್ಲಿ ಶೇಕಡಾ 23 ರಷ್ಟಿರುತ್ತದೆ (6.9 ಮಿಲಿಯನ್ ಹೆಕ್ಟೇರ್). ಇದರ ನಂತರ ಬರುವುದೆಂದರೆ ಲ್ಯಾಟಿನ್ ಅಮೆರಿಕ ಶೇಕಡಾ 19 ರಷ್ಟು (5.8 ಮಿಲಿಯನ್ ಹೆಕ್ಟೇರ್). ಏಷಿಯಾದಲ್ಲಿ ಶೇಕಡಾ 9.5 ರಷ್ಟು ಉತ್ತರ ಅಮೇರಿಕ ಶೇಕಡಾ 7.2 ರಷ್ಟು. ಆಫ್ರಿಕಾ ಕೇವಲ ಶೇಕಡಾ 3 ಮಾತ್ರ ಪಡೆದಿದೆ. ರಾಷ್ಟದ ಪ್ರಕಾರವಾಗಿ ಸಾವಯವ ಬೇಸಾಯ ವನ್ನೂ ನೋಡಿ.


ಆಸ್ಟ್ರೇಲಿಯಾದ ಜತೆಗೆ ಅರ್ಜಂಟೈನಾ (3.1 ಮಿಲಿಯನ್ ಹೆಕ್ಟೇರ್), ಚೀನಾ (2.3 ಮಿಲಿಯನ್ ಹೆಕ್ಟೇರ್) ಮತ್ತು ಅಮೇರಿಕ (1.6 ಮಿಲಿಯನ್ ಹೆಕ್ಟೇರ್) ವಿಸ್ತೀರ್ಣವನ್ನು ಹೊಂದಿವೆ. ಅರ್ಜೆಂಟೈನಾದ ಬಹುಹೆಚ್ಚಿನ ಸಾವಯವ ಭೂಮಿಯೆಂದರೆ ಹುಲ್ಲುಗಾವಲು. ಇದು ಬಹುಮಟ್ಟಿಗೆ ಆಸ್ಟ್ರೇಲಿಯಾದಂತೆಯೆ (2007:42). ಇಟಲಿ, ಸ್ಟೆಯಿನ್, ಜರ್ಮನಿ, ಬ್ರೆಜಿಲ್, ಉರುಗ್ವೆ ಮತ್ತು ಯು.ಕೆ ಮತ್ತು ಅಮೇರಿಕ ಇವುಗಳ ನಂತರ ಸಾವಯವ ರೀತಿಯಲ್ಲಿ ನಿರ್ವಹಿಸುವ ಭೂಭಾಗದಲ್ಲಿ ಸ್ಥಾನವನ್ನು ಪಡೆಯುತ್ತವೆ (2007:26).

ಬೆಳವಣಿಗೆ

2001 ರ ಪ್ರಕಾರ ಪ್ರಮಾಣೀಕರಿಸಿದ ಸಾವಯವ ಉತ್ಪನ್ನಗಳ ಅಂದಾಜು ಮಾರುಕಟ್ಟೆ ಬೆಲೆ 20 ಮಿಲಿಯನ್ ಡಾಲರ್‌ಗಳಷ್ಟಾಗುತ್ತದೆ. 2002 ರ ವೇಳೆಗೆ ಇದು 23 ಮಿಲಿಯನ್ ಡಾಲರುಗಳಷ್ಟು ಏರಿ 2007 ರಲ್ಲಿ 46 ಮಿಲಿಯನ್ ಡಾಲರುಗಳಿಗಿಂತಲೂ ಹೆಚ್ಚು ಬೆಳೆಯಿತು. ಇದು ಆರ್ಗಾನಿಕ್ ಮಾನಿಟರ್ ನೀಡಿರುವ ವರದಿ (ವಿಲ್ಲರ್/ಕಿಲ್ಚರ್ 2009).


ಈಚನ ವರ್ಷಗಳಲ್ಲಿ ಯೂರೊಪ್ ಹಾಗೂ ಯೂರೋಪಿಯನ್ ಯೂನಿಯನ್ ಕ್ರಮವಾಗಿ 7.8 ಮಿಲಿಯನ್ ಹೆಕ್ಟೇರ್ ಮತ್ತು 7.2 ಮಿಲಿಯನ್ ಹೆಕ್ಟೇರ್‌ ನಷ್ಟು (2007 ರ ರೀತ್ಯಾ) ಬೆಳೆದಿದೆ. ಉತ್ತರ ಅಮೆರಿಕಾ (2007 2.2 ಮಿಲಿಯನ್ ಹೆಕ್ಟೇರ್‌ನಷ್ಟು ಅಭಿವೃದ್ಧಿಪಡಿಸಿ ಸಾವಯವ ಕೃಷಿಭೂಮಿಯಲ್ಲಿ ಬಲಾಢ್ಯ ಬೆಳವಣಿಗೆಯನ್ನು ತೋರಿಸಿದೆ. ಆದರೆ ಈ ಬೆಳವಣಿಗೆಯು ವಿವಿಧ ಸನ್ನಿವೇಶಗಳ ಹಿನ್ನೆಲೆಯಲ್ಲುಂಟಾಗಿದೆ. ಯೂರೋಪಿಯನ್ ಯೂನಿಯನ್ ಕೃಷಿ ಸಹಾಯಧನವನ್ನು ಸಾವಯವ ರೈತರಿಗೆ ವರ್ಗಾಯಿಸಿದರೆ ಅಮೇರಿಕ ಮುಕ್ತ ಮಾರುಕಟ್ಟೆಯ ಮಾರ್ಗವನ್ನು ಅನುಸರಿಸಿದೆ. ಇದರಿಂದಾಗಿ 2007 ರ ರೀತ್ಯಾ ಶೇಕಡಾ 4 ರಷ್ಟು ಯೂರೋಪಿನ ಕೃಷಿ ಭೂಮಿಯನ್ನು ಸಾವಯವ ರೀತಿಯಲ್ಲಿ ನಿರ್ವಹಿಸಲಾಯಿತು. ಇದು ಅಮೇರಿಕದೊಂದಿಗೆ ತಾಳೆ ನೋಡಿದಾಗ ಶೇಕಡಾ 0.6 ರಷ್ಟಾಗುತ್ತದೆ (ವಿಲ್ಲರ್/ಕಿಲ್ಚರ್ 2009).


ಐಎಫ್‌ಒಎಎಮ್‌ನ ಇತ್ತೀಚಿನ ಪ್ರಕಟಣೆ ದಿ ವರ್ಲ್ಡ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್: ಸ್ಟಾಟಿಸ್ಟಿಕ್ಸ್ ಮತ್ತು ಎಮರ್ಜಿಂಗ್ ಟ್ರೆಂಡ್ 2009 ರ ಪ್ರಕಾರ, ಅದು ಪಟ್ಟಿಮಾಡಿರುವ ದೇಶಗಳಲ್ಲಿ 2007 ರಲ್ಲಿ ಅತಿಹೆಚ್ಚಿನ ಹೆಕ್ಟೇರ್ ಬಳಕೆಯಲ್ಲಿದೆ. ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚಿನ ಪ್ರಮಾಣದ ಸಾವಯವ ಭೂಮಿ ಎಂದರೆ 12 ಮಿಲಿಯನ್ ಹೆಕ್ಟೇರ್‌ನಷ್ಟಿದೆ. ಇದರ ನಂತರ ನಿಲ್ಲುವುದೆಂದರೆ ಅರ್ಜೆಂಟೈನಾ, ಬ್ರೆಜಿಲ್, ಮತ್ತು ಅಮೇರಿಕ. 2007 ರಲ್ಲಿ ಇದರ ಒಟ್ಟು ವಿಸ್ತೀರ್ಣ 32.2 ಮಿಲಿಯನ್ ಹೆಕ್ಟೇರಿನಷ್ಟಿತ್ತು. 1999 ರಲ್ಲಿ 11 ಮಿಲಿಯನ್ ಹೆಕ್ಟೇರ್ ಸಾವಯವ ರೀತಿಯಲ್ಲಿ ನಿರ್ವಹಿಸಿದ ಭೂಮಿಯಿತ್ತೆಂದು ವರದಿ ಹೇಳುತ್ತದೆ (ವಿಲ್ಲರ್/ಕಿಲ್ಚರ್ 2009).


ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಅಮೋಘವಾಗಿ ಬೆಳೆದಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಸಾವಯವ ಕೃಷಿ ಒಂದು ಬೃಹತ್ ಪ್ರಮಾಣದ ಉದ್ಯಮದ ವ್ಯಾಪಾರವಾಗುವಂತಹ ಲಕ್ಷಣವನ್ನು ಹೊಂದಿದೆಯೆಂದು ಹೇಳಲು ಅದು ಈಗ ಅನುಸರಿಸುತ್ತಾ ಬಂದಿರುವ ರೂಢಿಯಲ್ಲಿಯೇ ಪ್ರಗತಿಯಾಗುವುದೆಂದು ಭಾವಿಸಲಾಗುತ್ತದೆ(ಡುರಮ್ 183). ಡುರಮ್, ಲೆಸ್ಲಿ. ಗುಡ್ ಗ್ರೋಯಿಂಗ್. ಸಾಂತಾ ಕ್ರೂಜ್ : ಬೈಸನ್ ಬುಕ್ಸ್, 2005.

ಉತ್ಪಾದಕತೆ ಮತ್ತು ಲಾಭದಾಯಕತೆ

2006 ರಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಸಾವಯವ ಕೃಷಿ ಕ್ಷೇತ್ರಗಳು ಬದಲಾವಣೆಯಾದ ನಂತರ ರೂಢಿಯಲ್ಲಿರುವ ಕೃಷಿ ಕ್ಷೇತ್ರಗಳಿಗಿಂತಲೂ ಕೊಯ್ಲು ಪೂರ್ವದ ಉತ್ಪನ್ನಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿದೆಯೆಂದು ಹೇಳುತ್ತದೆ. ಇದು ಅಭಿವೃದ್ಧಿಪಡೆದ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸುತ್ತದೆ (92%), ಸಾವಯವ ಕೃಷಿ ಕ್ಷೇತ್ರಗಳು ಕೊಯ್ಲು-ಪೂರ್ವ ಉತ್ಪನ್ನವನ್ನು ಕಡಿಮೆ ಉಗ್ರತೆಯಲ್ಲಿ ಅಭಿವೃದ್ಧಿನಿರತ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣವನ್ನು ತೋರಿಸುತ್ತದೆ (132%). ಅಭಿವೃದ್ಧಿನಿರತ ರಾಷ್ಟ್ರಗಳಲ್ಲಿ ದುಬಾರಿ ಗೊಬ್ಬರಗಳ ಹಾಗೂ ಕೀಟನಾಶಕಗಳ ಅಭಾವದ ಪರಿಣಾಮವೆಂದು ಹೇಳಲಾಗುತ್ತದೆ. ಅಭಿವೃದ್ಧಿಪಡೆದ ರಾಷ್ಟ್ರಗಳಲ್ಲಿ ದೊರೆಯುವ ಸಹಾಯಧನ ಹಾಗೂ ವಿಶೇಷ ಸೌಲಭ್ಯಗಳು ಸಹ ಅದಕ್ಕೆ ಕಾರಣವೆಂದು ಸಂಶೋಧಕರು ಕಾರಣವನ್ನು ನೀಡುತ್ತಾರೆ. ಅದೇನೇ ಆದರೂ ಸಂಶೋಧಕರು ಉದ್ದೇಶಪೂರ್ವಕವಾಗಿಯೇ ಸಾವಯವ ವಿಧಾನ ಹಸಿರು ಕ್ರಾಂತಿಯನ್ನು (ರೂಢಿಯಲ್ಲಿರುವ) ಮೀರಿ ನಿಲ್ಲುತ್ತದೆಂದು ಹೇಳುವುದನ್ನು ತಡೆಹಿಡಿದಿದ್ದಾರೆ. ಈ ಅಧ್ಯಯನವು 1990 ರಲ್ಲಿ ನಡೆಸಿದ 205 ಬೆಳೆ ಹೋಲಿಕೆಗಳನ್ನು ಇದರಲ್ಲಿ ಅಳವಡಿಸಿಕೊಂಡಿದ್ದಾರೆ. ಸಾವಯವ ಬೆಳೆಗಳು ರೂಢಿ ಬೇಸಾಯಕ್ಕಿಂತ 91% ರಷ್ಟು ಪ್ರಮಾಣದಲ್ಲಿರುವುದನ್ನು ಇದು ಹೇಳುತ್ತದೆ. 2001 ರಲ್ಲಿ ಪ್ರಕಟವಾದ ಒಂದು ಪ್ರಮುಖ ಸಮೀಕ್ಷೆ 150 ಬೆಳೆ ಅವಧಿಯಲ್ಲಿ ವಿವಿಧ ಬೆಳೆಗಳನ್ನು ಕುರಿತು ನಡೆಸಿರುವುದು ಇದರಲ್ಲಿ ಸಾವಯವ ಉತ್ಪನ್ನಗಳು 95-100% ರೂಢಿಯಲ್ಲಿರುವ ಉತ್ಪನ್ನಗಳನ್ನು ಹೇಳಲಾಗಿದೆ.


ಲಾಟರ್ (2003:10) ವರದಿಯಲ್ಲಿ ಆಗಾಗ್ಗೆ ನಡೆಸಿದ ಅಧ್ಯಯನಗಳ ಪ್ರಕಾರ ಸಾವಯವ ಕೃಷಿ ಕ್ಷೇತ್ರಗಳು ಕಠಿಣ ಹವಾಮಾನವನ್ನು ತಡೆದುಕೊಳ್ಳಲು ಶಕ್ತಿಯುತವಾಗಿವೆಯೆಂದು ಹೇಳಲಾಗಿದೆ. ಅದು ರೂಢಿಯಲ್ಲಿರುವ ಕೃಷಿಕ್ಷೇತ್ರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆಂದು ಹೇಳಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ 70-90% ಹೆಚ್ಚು ಫಲವನ್ನು ನೀಡುತ್ತದೆ. ವಿಶೇಷವಾಗಿ ರೂಢಿಯಲ್ಲಿರುವ ಕೃಷಿ ಕ್ಷೇತ್ರಗಳಿಗಿಂತಲೂ ಬರಗಾಲದಲ್ಲಿ ಎದುರಿಸುವಂತಹ ಶಕ್ತಿಯನ್ನು ಪಡೆದಿರುತ್ತದೆಂದು ಹೇಳಲಾಗಿದೆ. 2005 ರಲ್ಲಿ ಪ್ರಕಟವಾದ 22 ವರ್ಷದ ಕ್ಷೇತ್ರ ಅಧ್ಯಯನವನ್ನು ಕಾರ್ನೆಲ್ ಯೂನಿವರ್ಸಿಟಿ ನಡೆಸಿದೆ. ಇದರ ಪ್ರಕಾರ ಸಾವಯವ ಕೃಷಿ ಕಾರನ್ ಮತ್ತು ಸೋಯಾಬೀನ್ ಉತ್ಪನ್ನಗಳನ್ನು ರೂಢಿಯಲ್ಲಿರುವ ಕೃಷಿ ಭೂಮಿಯಲ್ಲಿ ಬೆಳೆದ ಪ್ರಮಾಣದಷ್ಟೇ ದೀರ್ಘಾವಧಿಯ ಸರಾಸರಿ ಲೆಕ್ಕಾಹಾಕಿದಾಗ ಇಳುವರಿಯನ್ನು ಸೂಚಿಸುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದ ಶಕ್ತಿಯನ್ನು ಬಳಸಲಾಗಿದೆಯಲ್ಲದೆ ಕೀಟನಾಶಕಗಳನ್ನು ತೀರಾ ಬಳಸಿಯೇ ಇಲ್ಲವೆಂಬುದು ಗಮನಿಸಬೇಕಾದ ವಿಚಾರ. ಕಡಿಮೆ ಪ್ರಮಾಣದ ಇಳುವರಿ ಸಾಮಾನ್ಯ ಅವಧಿಗಳಲ್ಲಿಯೂ ಹೆಚ್ಚಿನ ಇಳುವರಿ ಬರಗಾಲದ ಅವಧಿಗಳಲ್ಲಿಯೂ ಇದು ತೋರಿಸುತ್ತದೆ. ಸೆಂಟ್ರಲ್ ಅಮೇರಿಕದಲ್ಲಿ ನಡೆಸಿದ 1,804 ಸಾವಯವ ಕೃಷಿ ಕ್ಷೇತ್ರಗಳ ಅಧ್ಯಯನವೊಂದು ಹೇಳುವ ಪ್ರಕಾರ 1998 ರಲ್ಲಿ ಅಲ್ಲಿ ಹುರಿಕೇನ್ ಮಿಚ್ (ಬಿರುಗಾಳಿ) ಬಡಿದಾಗ ಸಾವಯವ ಕೃಷಿ ಕ್ಷೇತ್ರಗಳು ಅಪಾಯವನ್ನು ಬೇರೆ ಕ್ಷೇತ್ರಗಳಿಗಿಂತಲೂ ಹೆಚ್ಚು ಬಲವಾಗಿ ತಡೆಯಿತೆಂದು ಹೇಳುತ್ತದೆ. 20 ರಿಂದ 40% ಮೇಲ್ಮಣ್ಣನ್ನು ಹೆಚ್ಚಾಗಿ ಉಳಿಸಿಕೊಂಡಿತಲ್ಲದೆ ಸಣ್ಣಪುಟ್ಟ ಪ್ರಮಾಣದ ಆರ್ಥಿಕ ನಷ್ಟವನ್ನೂ ಸಹ ಆಗದಂತೆ ತಡೆಯಿತೆಂದು ಹೇಳಿದೆ. ಇದು ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿದಾಗ ಪ್ರಮಾಣದ ದೃಷ್ಟಿಯಲ್ಲಿ ಮಹತ್ವದ ವಿಷಯವೆಂದು ಹೇಳಲಾಗುತ್ತದೆ.


ಇದಲ್ಲದೆ, 21 ವರ್ಷದ ಒಂದು ಪ್ರಮುಖ ಸ್ವಿಸ್ ಅಧ್ಯಯನ ಹೇಳುವ ಪ್ರಕಾರ ಸಾವಯವ ಕೃಷಿ ಇಳುವರಿ ರೂಢಿಯಲ್ಲಿರುವ ಕೃಷಿಗಿಂತ 20% ಕಡಿಮೆ, ಅದೇ ಸಮಯದಲ್ಲಿ 50% ಕಡಿಮೆ ವೆಚ್ಚ (ಗೊಬ್ಬರ ಮತ್ತು ಶಕ್ತಿಗಾಗಿ), 97% ಕಡಿಮೆ ಕೀಟನಾಶಕಗಳು. ಅಮೇರಿಕದ ಕೃಷಿ ಇಲಾಖೆಯ ಅಗ್ರಿಕಲ್ಚರ್ ರಿಸರ್ಚ್ ಸರ್ವೀಸ್ (ಎಆರ್‌ಎಸ್) ನಡೆಸಿದ ದೀರ್ಘಕಾಲದ ಅಧ್ಯಯನದ ಪ್ರಕಾರ ವಿಜ್ಞಾನಿಗಳ ತೀರ್ಮಾನ ಇದು: ಹೆಚ್ಚು ಪ್ರಚಾರದಲ್ಲಿರುವ ನಂಬಿಕೆಗೆ ವಿರುದ್ಧವಾಗಿ ಸಾವಯವ ಕೃಷಿಯ ಉಳಿದುರುವ ಕೃಷಿ ಭೂಮಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಬೆಳೆಸುತ್ತದೆಂಬುದನ್ನು ಹೇಳುತ್ತದೆ. ಇದು ದೀರ್ಘಕಾಲದ ಇಳುವರಿ ಲಾಭವನ್ನು ಸಾವಯವ ಕೃಷಿ ಹೇಗೆ ನೀಡುತ್ತದೆಂಬುದನ್ನು ವ್ಯಕ್ತಪಡಿಸುತ್ತದೆ. 18 ವರ್ಷಗಳ ಒಂದು ಅಧ್ಯಯನದ ಪ್ರಕಾರ ಸಾಯವ ಕೃಷಿಯ ವಿಧಾನಗಳು ಸತ್ವಹೀನ ಮಣ್ಣಿನ ವಿಚಾರದತ್ತ ಗಮನಹರಿಸಿದೆ. ರೂಢಿಯಲ್ಲಿರುವ ಕೃಷಿ ಪದ್ಧತಿ ಶೀತಲ ವಾತಾವರಣದಲ್ಲಿ ಪರಿಣಾಮಕಾರಿಯಾಗಿ ಫಲಿಸುತ್ತದೆ. ಮಣ್ಣಿನ ಸತ್ವವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಇಳುವರಿಯನ್ನು ಸಹ ಕೊಡುತ್ತದೆ. ಆದರೆ ಅದರ ವಾದದಂತೆ ಸಾವಯವ ಕೃಷಿ ಆಮದುಮಾಡಿಕೊಂಡ ವಸ್ತುಗಳ ಮೇಲೆ ಅವಲಂಬಿತವಾಗಿ ಲಾಭವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇದನ್ನು "ಸ್ವಾವಲಂಬನೆ" ಎಂದು ಪರಿಗಣಿಸಲಾಗುವುದಿಲ್ಲವೆಂದು ಹೇಳುತ್ತದೆ.


ಸಾವಯವ ಕೃಷಿಯು ಕಡಿಮೆ ಇಳುವರಿಯನ್ನು ಕೊಡುವುದಾದರೂ ಈ ವಿಧಾನದಲ್ಲಿ ಕೃತಕ ಗೊಬ್ಬರ ಅಥವಾ ಕೀಟನಾಶಕಗಳ ಅಗತ್ಯವಿರುವುದಿಲ್ಲ. ಬೆಳೆ ನಾಶಪಡಿಸುವುದನ್ನು ತಡೆಯಲು ಬೇಕಾಗುವ ವೆಚ್ಚದ ಬದಲಾಗಿ ಅದನ್ನೂ ಬಳಸಿಕೊಂಡು ಸಾವಯವ ಕೃಷಿಗೆ ಬೇಕಾಗುವ ವೆಚ್ಚವನ್ನೂ ಸೇರಿಸಿಕೊಂಡರೆ ಸಾವಯವ ರೈತರು ಹೆಚ್ಚಿನ ಲಾಭಾಂಶವನ್ನು ಪಡೆಯಲು ಸಾಧ್ಯ. ಸಾವಯವ ಕೃಷಿಯು ರೂಢಿಯಲ್ಲಿರುವ ಕೃಷಿಗಿಂತಲೂ ಹೆಚ್ಚು ಲಾಭದಾಯಕವೆಂಬುದು ಅದರ ವೆಚ್ಚಗಳನ್ನು ಪರಿಗಣಿಸಿದಾಗ ಮನಗಾಣಬಹುದು. ಆದರೆ ಖರ್ಚಿಲ್ಲದಿದ್ದರೆ ಮಾತ್ರ ಅದು ಲಾಭದಾಯಕವೆಂದು ಹೇಳಬಹುದು (ಲಾಟರ್ 2003:11). ವೆಲ್ಷ್ (1999) ಅವರ ವರದಿಯಂತೆ ಸಾವಯವ ಕೃಷಿ ಬರಗಾಲವನ್ನು ಸಹಿಸಲು ಹೆಚ್ಚು ಶಕ್ತವಾಗಿರುವುದರಿಂದ ಅಮೇರಿಕದಲ್ಲಿರುವ ಬರಡು ಪ್ರಾಂತ್ಯಗಳಲ್ಲಿ ಹೆಚ್ಚು ಲಾಭದಾಯಕವಾಗಿರಬಹುದು.


2008 ರಲ್ಲಿ ಸಂಯುಕ್ತ ರಾಷ್ಟ್ರಗಳ ಎನ್‌ವಿರನ್‌ಮೆಂಟಲ್ ಪ್ರೋಗ್ರಾಂ (ಯುಎನ್‌ಇಪಿ) ಮತ್ತು ಯುಎನ್‌ಸಿಟಿಎಡಿ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಒಂದು ವರದಿಯನ್ನು ಸಲ್ಲಿಸಿತು. ಅದರ ಪ್ರಕಾರ ಸಾವಯವ ಕೃಷಿ ಆಫ್ರಿಕದಲ್ಲಿ ಹೆಚ್ಚು ಉಪಯೋಗಕರವಾದದ್ದು ಅದು ರೂಢಿಯಲ್ಲಿರುವ ಕೃಷಿ ಪದ್ಧತಿಗಿಂತಲೂ ಹೆಚ್ಚು ಸುರಕ್ಷದಾಯಕವಾದದು ದೀರ್ಘಕಾಲ ಬಾಳುವಂತಹುದು ಎಂದು ಮುಂತಾಗಿ ಹೇಳಿದೆ. ಈ ವರದಿಯು 24 ಆಫ್ರಿಕಾ ದೇಶಗಳಲ್ಲಿ 114 ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯವನ್ನು ನಿರ್ಧರಿಸಿದೆ. ಸಾವಯವ ಅಥವಾ ಅದಕ್ಕೆ ಸಮೀಪದ ವಿಧಾನಗಳನ್ನು ಅನುಸರಿಸಿರುವ ಉದಾಹರಣೆಗಳಲ್ಲಿ ಇಳುವರಿ ದುಪ್ಪಟ್ಟಾಗಿದೆ ಎಂದು ತಿಳಿಸುತ್ತದೆ. ಇದರಲ್ಲಿ ಮಣ್ಣಿನ ಸತ್ವ ಸುಧಾರಿಸಿರುವುದು ಮಾತ್ರವಲ್ಲದೆ ಬರಗಾಲವನ್ನು ತಡೆಯುವ ಶಕ್ತಿಯೂ ಹೆಚ್ಚು ಬಲಗೊಂಡಿದೆ ಎಂದು ಹೇಳುತ್ತದೆ.


2009 ರಲ್ಲಿ ಬಂದಿರುವ ಒಂದು ವಿಮರ್ಶೆಯಂತೆ ವಿಸ್‌ಕಾನ್‌ಸಿನ್‌ನಲ್ಲಿ ಸಾವಯವ ಉತ್ಪನ್ನ ಬೆಲೆಯ ಖರ್ಚುಗಳಿಗಾಗಿ ಮಾಡುವ ವೆಚ್ಚವನ್ನು ಪರಿಗಣಿಸಿದಾಗ ಹೆಚ್ಚು ಲಾಭದಾಯಕವೆಂದು ತೀರ್ಮಾನಿಸಿದೆ.

ಬೃಹತಾರ್ಥಿಕ ಪರಿಣಾಮ

ಸಾವಯವ ವಿಧಾನಗಳಿಗೆ ಯಾವಾಗಲೂ ಹೆಚ್ಚಿನ ಕಾರ್ಮಿಕ ಸೌಲಭ್ಯದ ಅಗತ್ಯವಿರುತ್ತದೆ, ಗ್ರಾಮೀಯ ಉದ್ಯೋಗಳನ್ನು ಪೂರೈಸುತ್ತದೆ ಆದರೆ ನಗರವಾಸಿಗರ ವೆಚ್ಚವನ್ನು ಹೆಚ್ಚಿಸುತ್ತದೆ.

ಪ್ರೇರಣೆಗಳು

ವ್ಯವಸಾಯವು ಸಾಮಾನ್ಯವಾಗಿ ಹೇಳುವುದಾದರೆ ರಸಗೊಬ್ಬರಗಳು, ಪೌಷ್ಠಿಕಾಂಶದ ಕೊರತೆ, ಹೆಚ್ಚುವರಿ ನೀರಿನ ಬಳಕೆ, ಮತ್ತು ವರ್ಗೀಕರಿಸಿದ ಇತರ ಸಮಸ್ಯೆಗಳ ಮೂಲಕ ಸಮಾಜಕ್ಕೆ ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ. ಈ ಕೆಲವು ಅಂಶಗಳನ್ನು ಸಾವಯವ ವಿಧಾನಗಳು ಕಡಿಮೆಗೊಳಿಸುವ ಕಾರಣ, ಸಾವಯವ ಕೃಷಿಯು ಸಮಾಜಕ್ಕೆ ಕೆಲವು ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ವ್ಯವಸಾಯದ 2000 ದಲ್ಲಿನ ಅಂದಾಜಿನ ಪ್ರಕಾರ ಬ್ರಿಟನ್‌ನಲ್ಲಿ 1996 ಸಾಲಿನ ಬಾಹ್ಯ ವೆಚ್ಚಗಳು 2343 ಮಿಲಿಯನ್ ಬ್ರಿಟಿಷ್ ಪೌಂಡುಗಳು ಅಥವಾ ಒಂದು ಹೆಕ್ಟೇರಿಗೆ 208 ಪೌಂಡ್‌ಗಳು ಎಂದು ನಿರ್ಧರಿಸಿದೆ. 2005 ವಿಶ್ಲೇಷಣೆಯ ಪ್ರಕಾರ ಅಮೇರಿಕದಲ್ಲಿ ಕೃಷಿಭೂಮಿಗಳಲ್ಲಿನ ಈ ವೆಚ್ಚಗಳು ಸುಮಾರು 5 ರಿಂದ 16 ಬಿಲಿಯನ್ ಡಾಲರ್‌ಗಳು (ಒಂದು ಹೆಕ್ಟೇರಿಗೆ $30 ರಿಂದ $96) ವಿಧಿಸುತ್ತದೆ, ಅದೇ ಸಮಯದಲ್ಲಿ ಜಾನುವಾರುಗಳ ಉತ್ಪಾದನೆಯ ಮೇಲೆ 714 ಮಿಲಿಯನ್ ಡಾಲರುಗಳನ್ನು ವಿಧಿಸಲಾಗಿದೆ. ಬಾಹ್ಯ ವೆಚ್ಚಗಳನ್ನು ಆಂತರಿಕಗೊಳಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎರಡೂ ಅಧ್ಯಯನಗಳು ತೀರ್ಮಾನಕ್ಕೆ ಬಂದಿವೆ, ಮತ್ತು ತಂತಮ್ಮ ವಿಶ್ಲೇಷಣೆಗಳಲ್ಲಿ ಅವು ಸಹಾಯಧನಗಳ ಕುರಿತು ನಮೂದಿಸಿಲ್ಲ. ಆದರೆ ಸಮಾಜದೆಡೆಗೆ ಕೃಷಿಯು ಹೇರುವ ವೆಚ್ಚದ ಮೇಲೆ ಸಹಾಯಧನಗಳೂ ಸಹ ಪ್ರಭಾವ ಬೀರುತ್ತವೆ ಎಂದು ಅವು ಸೂಚಿಸಿವೆ. ಪೂರ್ತಿಯಾಗಿ ಹಣಕಾಸಿನ ಪ್ರಭಾವಗಳ ಕುರಿತಾಗಿಯೇ ಎರಡೂ ಅಧ್ಯಯನಗಳು ಗಮನವನ್ನು ಕೇಂದ್ರೀಕರಿಸಿವೆ. 2000ದ ಅವಲೋಕನವು ಕೀಟನಾಶಕಗಳ ವಿಷಕಾರಿತ್ವಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದರೂ, ಕೀಟನಾಶಕಗಳ ಕುರಿತಾಗಿ ಬೇರೂರಿದ್ದ ಊಹನಾತ್ಮಕ ಪರಿಣಾಮಗಳನ್ನು ಒಳಗೊಂಡಿರಲಿಲ್ಲ, ಮತ್ತು ಕೀಟನಾಶಕಗಳ ಒಟ್ಟಾರೆ ಪ್ರಭಾವದ ಕುರಿತಾದ 1992ರ ಒಂದು ಅಂದಾಜಿನ ಮೇಲೆ 2004ರ ಅವಲೋಕನವು ಅವಲಂಬಿತವಾಗಿತ್ತು.

ಕೀಟನಾಶಕಗಳು

ಸಾವಯವ ಬೇಸಾಯ 
ವಾಷಿಂಗ್ಟನ್‌ನಲ್ಲಿನ ಪೆಟೋರಾಸ್‌ನಲ್ಲಿನ ಸಾವಯವ ಆಪಲ್‌ನ ಹಣ್ಣಿನ ತೋಟದಲ್ಲಿರುವ ಚಿಹ್ನೆಯು ಈ ಮರಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸದಂತೆ ಎಚ್ಚರಿಸುತ್ತಿದೆ.


ಹೆಚ್ಚಿನ ಸಾವಯವ ಬೇಸಾಯಗಳು ರೂಢಿಯಲ್ಲಿನ ಬೇಸಾಯಕ್ಕಿಂತ ಕೆಲವು ಕೀಟನಾಶಕಗಳನ್ನು ಬಳಸುತ್ತವೆ, ಕೆಲವು ಕೀಟನಾಶಕಗಳು ಪರಿಸರ ಅಥವಾ ಮಾನವ ಆರೋಗ್ಯ ಕ್ಕೆ ನೇರವಾಗಿ ತೆರೆದುಕೊಳ್ಳುವಿಕೆಯನ್ನುಂಟು ಮಾಡುವ ಮೂಲಕ ಹಾನಿಯನ್ನುಂಟು ಮಾಡುತ್ತದೆ. ಸಾವಯವ ಬೇಸಾಯದಲ್ಲಿ ಬಳಸಲಾದ ಮುಖ್ಯವಾದ ಐದು ಕೀಟನಾಶಕಗಳೆಂದರೆ ಬಿಟಿ (ಬ್ಯಾಕ್ಟೀಯಾ ವಿಷಾಹಾರಿ), ಪೈರೆಥ್ರಮ್, ರೋಟೆನೊನ್[ಸೂಕ್ತ ಉಲ್ಲೇಖನ ಬೇಕು], ತಾಮ್ರ ಮತ್ತು ಗಂಧಕ ಆಗಿವೆ. ಈ ಕೀಟನಾಶಕಗಳನ್ನು ಸಾವಯವ ವ್ಯವಸಾಯಿಗಳಲ್ಲಿ 10% ಗಿಂತಲೂ ಕಡಿಮೆ ಜನರು ನಿಯತವಾಗಿ ಬಳಸುತ್ತಾರೆ ಎಂದು ಸಮೀಕ್ಷೆಗಳು ತಿಳಿಸುತ್ತವೆ; ಕ್ಯಾಲಿಫೋರ್ನಿಯಾದಲ್ಲಿನ ತರಕಾರಿ ಬೆಳೆಗಾರರು 5.3% ರಷ್ಟು ರೊಟೆನನ್ ಅನ್ನು ಮತ್ತು 1.7% ರಷ್ಟು ಪೈರೆಥ್ರಮ್ (ಲೋಟರ್ 2003:26)ಬಳಸುತ್ತಾರೆ ಎಂದು ಮತ್ತೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ಕಡಿಮೆಗೊಳಿಸುವಿಕೆ ಮತ್ತು ವರ್ಜನೆಯು ತಾಂತ್ರಿಕವಾಗಿ ಸವಾಲಾಗಿದೆ. ಕೆಲವು ಸಾವಯವ ಬೇಸಾಯಗಳು ಕೀಟನಾಶಕಗಳ ಬಳಕೆಯಿಂದ ಪೂರ್ಣವಾಗಿ ವರ್ಜಿತಗೊಳ್ಳಲು ನಿರ್ವಹಿಸುತ್ತವೆ; ಸಾವಯವ ಕೀಟನಾಶಕಗಳನ್ನು ಸಾಮಾನ್ಯವಾಗಿ ಇತರ ಕೀಟ ನಿಯಂತ್ರಣ ನೈಪುಣ್ಯಗಳಿಗೆ ಪೂರಕವಾಗಿರುವಂತೆ ಬಳಸಲಾಗುತ್ತವೆ.


ಕೀಟನಾಶಕದ ಬಳಕೆಯ ಮುಖ್ಯವಾದ ಪರಿಣಾಮಗಳಲ್ಲಿ ಕೀಟನಾಶಕದ ಇಳಿಕೆಯು ಒಂದು ಕಾರಣವಾಗಿದೆ. ಯುಎಸ್‌ಡಿಎ ನೈಸರ್ಗಿಕ ಸಂಪನ್ಮೂಲ ಸಂಗೋಪನೆ ಸೇವೆಯು ಕೀಟನಾಶಕಗಳನ್ನು ಬಳಸಿದ ಜಮೀನುಗಳ ನೀರಿನ ನೈರ್ಮಲ್ಯದಿಂದ ಉಂಟಾಗುವ ನೈಸರ್ಗಿಕ ತೊಂದರೆಯನ್ನು ಪರಿಶೀಲಿಸಿತು, ಅದರ ಫಲಿತಾಂಶವಾಗಿ "ಕಳೆದ ಇಪ್ಪತ್ತಾರು ವರ್ಷಗಳಲ್ಲಿನ ರಾಷ್ಟ್ರದ ಕೀಟನಾಶಕ ನೀತಿಗಳು ಕೆಲವು ಪ್ರದೇಶದಲ್ಲಿ ಅನ್ವಯಿಸಲಾದ ಕೀಟನಾಶಕಗಳ ಭಾರದ ಹೆಚ್ಚಳದ ಮಧ್ಯೆಯೂ ಸಂಪೂರ್ಣ ಪರಿಸರ ತೊಂದರೆಯನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಅದೇನೇ ಇದ್ದರೂ, ರಾಷ್ಟ್ರದಲ್ಲಿನ ಕೆಲವು ಪ್ರದೇಶಗಳಲ್ಲಿ ಯಾವುದೇ ಪ್ರಗತಿ ಇಲ್ಲದ ನಿರದರ್ಶನಗಳು ಕಂಡುಬಂದಿವೆ, ಮತ್ತು ಕುಡಿಯುವ ನೀರು, ಮೀನು, ಪಾಚಿ ಮತ್ತು ಚಿಪ್ಪುಜೀವಿಗಳ ರಕ್ಷಣೆಯ ಅಪಾಯದ ಮಟ್ಟಗಳು ಹೆಚ್ಚಿಗೆ ಕಂಡುಬಂದಿದೆ".


ಕೀಟ ನಿರೋಧಕ ತಳಿವಿಜ್ಞಾನ ರೀತಿಯಲ್ಲಿ ಮಾರ್ಪಡಿಸಿದ ಬೆಳೆಗಳನ್ನು ಕೀಟನಾಶಕಗಳ ಬಳಕೆಯ ಪರ್ಯಾಯವಾಗಿ ಪ್ರಸ್ತಾಪಿಸಲಾಗಿದೆ, ಆದಾಗ್ಯೂ ತಳಿವಿಜ್ಞಾನ ರೀತಿಯಲ್ಲಿ ಮಾರ್ಪಡಿಸಿದ ಆಹಾರದ ಸುರಕ್ಷತೆ ಮತ್ತು ದೀರ್ಘ ಕಾಲದ ಪ್ರಯೋಜನಗಳ ಕುರಿತು ಕಳವಳಗಳು, ಸಾವಯವ ಕೃಷಿ ಚಳುವಳಿಯಲ್ಲಿ ತಳಿವಿಜ್ಞಾನ ರೀತಿಯ ಮಾರ್ಪಡಿಸುವಿಕೆಯನ್ನು ವ್ಯಾಪಕವಾಗಿ ವಿರೋಧಿಸುವಂತೆ ಮಾಡಿತು.

ಆಹಾರ ಗುಣಮಟ್ಟ ಮತ್ತು ಸುರಕ್ಷತೆ


ಸಂಶೋಧನೆಯು ಅನಿರ್ಣಾಯಕವಾಗಿದ್ದರೂ ಸಹ, ಸಾವಯವ ಆಹಾರವನ್ನು ರೂಢಿಯಲ್ಲಿನ ಆಹಾರಕ್ಕಿಂತ ಆರೋಗ್ಯಕರ ಎಂದು ಸಾಮಾನ್ಯ ಸಾರ್ವಜನಿಕರಿಂದ ನಂಬಲಾಗಿದೆ. ಪ್ರಾಣಿಗಳ ಆಹಾರದಲ್ಲಿನ ಸಾವಯವ ಆಹಾರ ಪದ್ಧತಿಯು ಸ್ವಲ್ಪಮಟ್ಟಿಗೆ ಉತ್ತಮ ಆರೋಗ್ಯ ಮತ್ತು ಸಂತಾನೋತ್ಪತ್ತಿದಾಯಕ ಎಂದು ಕಂಡುಬಂದಿದೆ, ಆದರೆ ಅದೇ ರೀತಿಯ ಪರೀಕ್ಷೆಗಳನ್ನು ಮಾನವನ ಮೇಲೆ ಮಾಡಲಾಗಿಲ್ಲ. ಕೆಲವು ತರಕಾರಿಗಳು ಮತ್ತು ಧಾನ್ಯಗಳಲ್ಲಿ ಪ್ರೋಟೀನ್‌ನ ಕಡಿಮೆ ಸಾಂದ್ರೀಕರಣವನ್ನು ಹೊಂದಿದೆ, ಆದರೆ ಇದು ಹೆಚ್ಚಿನ ಗುಣಮಟ್ಟದ್ದಾಗಿದೆ. ಪೌಷ್ಠಿಕಾಂಶಗಳು ಅದೇ ರೀತಿಯಲ್ಲಿ ಸಾವಯವ ಆಹಾರದಲ್ಲಿ ಸ್ವಲ್ಪ ಹೆಚ್ಚಿನ ವಿಟಮಿನ್ ಸಿ ಹೊಂದಿರುವುದು ಕಂಡುಬರುತ್ತದೆ.


ಸಾವಯವ ಆಹಾರದ ಸುರಕ್ಷತೆಗೆ ಸಂಬಂಧಿಸಿದಂತೆ ಕೇವಲ ಪ್ರಾಯೋಗಿಕ ಮುಕ್ತಾಯಗಳನ್ನು ಮಾತ್ರ ಮಾಡಬಹುದಾಗಿದೆ. ಸಾವಯವ ಉತ್ಪನ್ನವು ಕಡಿಮೆ ಆಹಾರರಾಸಾಯನಿಕ ಉಳಿಕೆಗಳನ್ನು ಹೊಂದಿರುವ ಸಾಧ್ಯತೆಗಳಿವೆ, ಆದರೆ ಈ ಉಳಿಕೆಗಳು ಸಾಮಾನ್ಯವಾಗಿ ಸ್ವೀಕರಿಸಬಲ್ಲ ದೈನಂದಿನ ಒಳಸೇರಿಸುವಿಕೆಗಿಂತಲೂ ಕಡಿಮೆ ಮತ್ತು ಅದರ ಆರೋಗ್ಯ ಪರಿಣಾಮವು ಪ್ರಶ್ನಾರ್ಹವಾಗಿದೆ. ಸಾವಯವ ಆಹಾರವು ಕಡಿಮೆ ನೈಟ್ರೇಟ್‌ನ ಸಾಂದ್ರೀಕರಣವನ್ನು ಹೊಂದಿರುವಂತೆ ತೋರುತ್ತದೆ, ಆದರೆ ನೈಟ್ರೇಟ್‌ನ ಆರೋಗ್ಯ ಪರಿಣಾಮವು ಚರ್ಚೆಯಲ್ಲಿದೆ. ಸಾವಯವ ಮತ್ತು ರೂಢಿಯಲ್ಲಿನ ಆಹಾರಗಳೆರಡೂ ಚಿರಸ್ಥಾಯಿಯಾದ ಸಾವಯವ ಮಲಿನಕಾರಿಗಳು ಮತ್ತು ಹೆಚ್ಚಿನ ಲೋಹಗಳ ಒಂದೇ ರೀತಿಯ ಸಾಂದ್ರೀಕರಣಗಳನ್ನು ಹೊಂದಿರುವಂತೆ ನಿರೀಕ್ಷಿಸಲಾಗಿದೆ. ನೈಸರ್ಗಿಕ ಗಿಡ ಕೀಟನಾಶಕಗಳು ಮತ್ತು ಅದರ ಆರೋಗ್ಯ ಪರಿಣಾಮಗಳಿಗೆ ಡೇಟಾ ನಿಯಮಿತವಾಗಿರುತ್ತದೆ, ಅಲ್ಲದೆ ಬ್ಯಾಕ್ಟೀರಿಯಾ ರೋಗಕಾರಕಗಳಿಂದ ಅಪಾಯಗಳು ಹೆಚ್ಚಾಗಿರುತ್ತವೆ.


ಸಾವಯವ ಆಹಾರದ ಹೆಚ್ಚಿನ ಖರ್ಚುವೆಚ್ಚಗಳು (45 ರಿಂದ 200% ವರೆಗಿನ ವ್ಯಾಪ್ತಿ) ಶಿಫಾರಸು ಮಾಡಿದ ಒಂದು ದಿನಕ್ಕೆ 5 ಬಾರಿಯ ತರಕಾರಿಗಳು ಮತ್ತು ಹಣ್ಣುಗಳ ಬಳಕೆಯನ್ನು ನಿಯಮಿತಗೊಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ, ಈ ಮೂಲಕ ಅದು ಸಾವಯವವೇ ಅಥವಾ ಸಾಂಪ್ರದಾಯಿಕವಾಗಿರಲಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿದುಬಂದಿದೆ.


ಸಾವಯವ ಆಹಾರ ಪದ್ಧತಿಯನ್ನು ಸ್ವೀಕರಿಸಿದ ಮಕ್ಕಳು ಮತ್ತು ರೂಢಿಯಲ್ಲಿನ ಆಹಾರ ಪದ್ಧತಿಯನ್ನು ಸ್ವೀಕರಿಸಿದ ಮಕ್ಕಳಿಗಿಂತ ಕಡಿಮೆ ಆರ್ಗಾನೋಫಾಸ್ಪೆರಸ್ ಕೀಟನಾಶಕಗಳಿಗೆ ತೆರೆದುಕೊಳ್ಳುವಿಕೆ ಅನುಭವವನ್ನು ಪಡೆದರು ಎಂದು ಎರಡು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಅಧ್ಯಯನದಲ್ಲಿನ ಆರೋಗ್ಯ ಫಲಿತಾಂಶ ಡೇಟಾವನ್ನು ಸಂಶೋಧಕರು ಸಂಗ್ರಹಿಸಲಿಲ್ಲವಾದರೂ, ಅವರು ಹೀಗೆಂದು ಪ್ರತಿಕ್ರಿಯಿಸಿದ್ದಾರೆ "ಸಾವಯವ ಆಹಾರಾಭ್ಯಾಸ ಹೊಂದಿರುವ ಮಕ್ಕಳು ನರದೌರ್ಬಲ್ಯ ಆರೋಗ್ಯ ಅಪಾಯಗಳಿಗೆ ತುತ್ತಾಗುವ ಸಂಭವನೀಯತೆ ಕಡಿಮೆ ಇರಬಹುದು ಎಂದು ಗ್ರಹಿಸಬಹುದಾಗಿದೆ". 2007 ದ ಅಧ್ಯಯನದ ಪ್ರಕಾರ ಸಾವಯವ ಹಾಲನ್ನು ಸೇವಿಸುವುದರಿಂದ ಇಸುಬು ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವುದರೊಂದಿಗೆ ಸಂಯೋಗ ಹೊಂದಿದೆ, ಆದಾಗ್ಯೂ ಸಾವಯವ ಹಣ್ಣುಗಳು, ತರಕಾರಿಗಳು, ಅಥವಾ ಮಾಂಸಕ್ಕೆ ಯಾವುದೇ ತುಲನಾತ್ಮಕ ಪ್ರಯೋಜನ ಕಂಡುಬಂದಿಲ್ಲ.


ಇತರ ಪರೀಕ್ಷೆಗಳು ಸೇರಿದಂತೆ ರೂಢಿಯಲ್ಲಿನ ಕೃಷಿಗೆ ಹೋಲಿಸುವ ಮೂಲಕ ಸಾವಯವ ಆಹಾರ ಉತ್ಪನ್ನಗಳ ಗುಣಮಟ್ಟದಲ್ಲಿನ ವ್ಯತ್ಯಾಸಗಳನ್ನು ದೃಢೀಕರಿಸಲು ಸ್ವಿಟ್ಜರ್‌ಲ್ಯಾಂಡ್‌ನ ಸುಮಾರು 200 ತೋಟಗಳಲ್ಲಿ ವ್ಯಾಪಕವಾದ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳಲಾಯಿತು. ಫಿಬೆಲ್ ಸಂಸ್ಥೆಯು ಸುಮಾರು 200 ತೋಟಗಳಲ್ಲಿ ವ್ಯತ್ಯಾಸಗಳನ್ನು ಕಂಡುಹಿಡಿಯುತ್ತಿದೆ. "ಸಾವಯವ ಉತ್ಪನ್ನಗಳು ಹೆಚ್ಚಿನ ಹಂತಗಳ ದ್ವಿತೀಯ ಗಿಡದ ಸಂಯೋಗಗಳನ್ನು ಮತ್ತು ವಿಟಮಿನ್ ಸಿಯನ್ನು ಹೊಂದಿರುವ ಮೂಲಕ ಹೊರಗೆ ಎದ್ದು ಕಾಣುತ್ತದೆ. ಹಾಲು ಮತ್ತು ಮಾಂಸದ ವಿಷಯದಲ್ಲಿ, ಪೌಷ್ಠಿಕಾಂಶದ ಕೋನದಲ್ಲಿ ವೀಕ್ಷಿಸುವುದಾದರೆ ಕೊಬ್ಬಿನ ಆಸಿಡ್ ಪ್ರೊಫೈಲ್ ಯಾವಾಗಲೂ ಉತ್ತಮವಾಗಿರುತ್ತದೆ. ಕಾರ್ಬೊಹೈಡ್ರೇಟ್ಸ್ ಮತ್ತು ಮಿನರಲ್‌‌ಗಳಿಗೆ ಸಂಬಂಧಿಸಿದಂತೆ, ಸಾವಯವ ಉತ್ಪನ್ನಗಳಿಗೂ ಮತ್ತು ರೂಢಿಯಲ್ಲಿನ ಉತ್ಪನ್ನಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಆದಾಗ್ಯೂ, ಅನಪೇಕ್ಷಣೀಯವಾದಂತಹ ನೈಟ್ರೇಟ್ ಮತ್ತು ಕೀಟನಾಶಕ ಉಳಿಕೆಗಳಿಗೆ ಸಂಬಂಧಿಸಿದಂತೆ, ಸಾವಯವ ಉತ್ಪನ್ನಗಳು ಸ್ಪಷ್ಟ ಪ್ರಯೋಜನವನ್ನು ಹೊಂದಿದೆ. ಸಾವಯವ ಮತ್ತು ಸಾಮಾನ್ಯ ಕೃಷಿಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವಲ್ಲಿ £12ಎಂ ಇಯು ಬಿಡುಗಡೆ ಮಾಡಿರುವ ನಿಧಿಯಿಂದ 2007 ರಲ್ಲಿನ ಪ್ರಕಟಣೆಯ ಪ್ರಕಾರ ಸಾವಯವ ಆಹಾರಗಳು ಹೆಚ್ಚಿನ ಪೌಷ್ಠಿಕಾಂಶ ಮೌಲ್ಯವನ್ನು ಹೊಂದಿವೆ. ಸಾವಯವ ರೀತಿ ಬೆಳೆದ ಉತ್ಪನ್ನವು ಒಂದು ಮುಖ್ಯವಾದ ಪ್ರತ್ಯಾಮ್ಲವಾದ ಫ್ಲ್ಯೆವನಾಯ್ಡ್‌ಗಳನ್ನು ಎರಡು ಪಟ್ಟು ಹೆಚ್ಚಿಗೆ ಹೊಂದಿರುತ್ತದೆ ಎಂದು ಇತ್ತೀಚಿನ ಅಧ್ಯಯನದಿಂದ ಕಂಡುಬಂದಿದೆ. 2007 ಅಧ್ಯಯನದ ಪ್ರಕಾರ ಸಾವಯವ ವಿಧಾನದಿಂದ ಬೆಳೆದ ಕಿವಿಫ್ರೂಟ್ ಸಾಂಪ್ರದಾಯಿಕವಾಗಿ ಬೆಳೆದ ಕಿವಿಫ್ರೂಟ್‌ಗಿಂತಲೂ ಹೆಚ್ಚಿನ ಪ್ರತ್ಯಾಮ್ಲಗಳನ್ನು ಹೊಂದಿದೆ ಎಂದು ಕಂಡುಬಂದಿದೆ.

ಉಡುಪು ಗುಣಮಟ್ಟ ಮತ್ತು ಸುರಕ್ಷತೆ

ಇತ್ತೀಚೆಗೆ, ಪರಿಸರ ಕಾಳಜಿ ಮತ್ತು ವೈಯಕ್ತಿಕ ಆರೋಗ್ಯದ ಕಾರಣದಿಂದಾಗಿ ಸಾವಯವ ಉಡುಪು ವ್ಯಾಪಕವಾಗಿ ಲಭ್ಯವಾಗುವಂತೆ ಆಗಿದೆ. ಸಾವಯವ ಉಡುಪಿನ ಹಲವಾರು ಗ್ರಾಹಕರು ಸಿಂಥೆಟಿಕ್ ರಾಸಾಯನಿಕಗಳ ಮೇಲೆ ಒಲವು ಹೊಂದಿಲ್ಲದಿದ್ದರೂ, ರಾಸಾಯನಿಕಗಳ ಕಡಿಮೆ ಹಂತದ ತೆರೆದುಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳು ಎಂದು ದೀರ್ಘಕಾಲಿಕ ವೈದ್ಯಕೀಯ ಲಕ್ಷಣಗಳಿಂದ ಬಳಲುತ್ತಿರುವ ಬಾಧಿತ ವ್ಯಕ್ತಿಯು ಹೇಳಲಾಗುವ ಬಹು ರಾಸಾಯನಿಕ ಸೂಕ್ಷ್ಮತೆಯಿಂದ ಬಳಲುತ್ತಿರುವವರಿಂದ ಸಾವಯವ ಉಡುಪು ಮಾರುಕಟ್ಟೆಯ ಒಂದು ಅರ್ಥಪೂರ್ಣವಾದ ಭಾಗಕ್ಕೆ ಬೇಡಿಕೆ ಬರುತ್ತದೆ.


ಪರಿಸರ ವಿಜ್ಞಾನವು ಪ್ರಮುಖವಾಗಿ ಕೀಟನಾಶಕಗಳ ಬಳಕೆಯ ಸುತ್ತ ಗಮನವನ್ನು ಹರಿಸುತ್ತದೆ, ವಿಶ್ವದ 16% ಕೀಟನಾಶಕಗಳನ್ನು ಹತ್ತಿ ಉತ್ಪನ್ನಕ್ಕೆ ಬಳಸಲಾಗುತ್ತಿದೆ.

ತಳೀಯವಾಗಿ ರೂಪಾಂತರಗೊಂಡ ಜೀವಿಗಳು

ಸಾವಯವ ಬೇಸಾಯದ ಮುಖ್ಯ ಉದ್ದೇಶವೆಂದರೆ ಗಿಡಗಳು ಮತ್ತು ಪ್ರಾಣಿಗಳು ಸೇರಿದಂತೆ, ತಳೀಯವಾಗಿ ರೂಪಾಂತರಿಸಿದ ಉತ್ಪನ್ನಗಳನ್ನು ತಿರಸ್ಕರಿಸುವುದೇ ಆಗಿದೆ. ಅಕ್ಟೋಬರ್ 19, 1998, ರಂದು ಐಎಫ್ಒಎಎಮ್‌ನ 12ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿದವರು ಮಾರ್ ಡೆಲ್ ಪ್ಲೇಟಾ ಘೋಷಣೆಯನ್ನು ಹೊರಡಿಸಿದರು, ಇಲ್ಲಿ ಆಹಾರ ತಯಾರಿಕೆ ಮತ್ತು ವ್ಯವಸಾಯದಲ್ಲಿ ತಳೀಯವಾಗಿ ರೂಪಾಂತರಿಸಿದ ಜೀವಿಗಳ ಬಳಕೆಯನ್ನು ತ್ಯಜಿಸಲು ಸುಮಾರು 60 ರಾಷ್ಟ್ರಗಳಿಂದ 600 ಪ್ರತಿನಿಧಿಗಳು ಒಮ್ಮತದಿಂದ ಮತ ಚಲಾಯಿಸಿದರು. ಈ ಅಂಶದಿಂದ, ಜಿಎಂಒ ಗಳನ್ನು ಸಾವಯವ ಬೇಸಾಯದಿಂದ ವರ್ಗೀಯವಾಗಿ ಬೇರ್ಪಡಿಸುವುದು ವ್ಯಾಪಕವಾಗಿ ಅಂಗೀಕರಿಸುವಂತೆ ಆಯಿತು.


ಸಾವಯವ ಬೇಸಾಯದಲ್ಲಿ ಯಾವುದೇ ಜೀವಾಂತರ ತಂತ್ರಜ್ಞಾನಗಳ ಬಳಕೆಗೆ ವಿರೋಧವು ತೀವ್ರವಾಗಿದ್ದರೂ, ವ್ಯವಸಾಯ ಸಂಶೋಧಕರಾದ ಲೂಯೀಸ್ ಹೆರೇರಾ-ಎಸ್ಟ್ರೆಲ್ಲಾ ಮತ್ತು ಎರಿಯಲ್ ಅಲ್ವಾರೆಜ್-ಮೊರಾಲೆಸ್ ಅವರು ನಿರ್ದಿಷ್ಟವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿ ಜೀವಾಂತರ ತಂತ್ರಜ್ಞಾನಗಳನ್ನು ಸಾವಯವ ಬೇಸಾಯದೊಂದಿಗೆ ಸಮರ್ಥನೀಯ ವ್ಯವಸಾಯದಂತೆ ಎತ್ತಿಹಿಡಿಯುವುದನ್ನು ಮುಂದುವರಿಸಿದರು. ಅದೇ ರೀತಿ, ಕೆಲವು ಸಾವಯವ ವ್ಯವಸಾಯಿಗಳು ತಳೀಯವಾಗಿ ಮಾರ್ಪಡಿಸಿದ ಬೀಜದ ಬಳಕೆಯ ನಿಷೇಧದ ಹಿಂದಿರುವ ತಾರ್ಕಿಕ ವಿವರಣೆಯನ್ನು ನೀಡಲು ಪ್ರಶ್ನಿಸಿದರು ಏಕೆಂದರೆ ಜೈವಿಕ ತಂತ್ರಜ್ಞಾನವು ಸಾವಯವ ತತ್ವಗಳಿಂದ ಕೂಡಿರುವುದನ್ನು ಅವರು ಕಾಣುತ್ತಾರೆ


ಜಿಎಂಒಗಳನ್ನು ಸಾವಯವ ಬೇಸಾಯದಿಂದ ಬೇರ್ಪಡಿಸಿದ್ದರೂ ಸಹ, ತಳೀಯವಾಗಿ ಮಾರ್ಪಡಿಸಿದ ಬೇಸಾಯಗಳು ಸಾವಯವ ಮತ್ತು ವಂಶಪಾರಂಪರಿಕ ತಳಿಗಳಲ್ಲಿನ ಪರಾಗವನ್ನು ಕಲುಷಿತಗೊಳಿಸುವುದನ್ನು ಹೆಚ್ಚಿಸುವ ಮೂಲಕ ಸಾವಯವ ಆಹಾರ ಸರಬರಾಜಿನಲ್ಲಿ ಸೇರ್ಪಡೆಗೊಳ್ಳದಂತೆ ತಡೆಯುವಲ್ಲಿ ಸಾಧ್ಯವಾಗದಿದ್ದಲ್ಲಿ, ತುಂಬಾ ಕಷ್ಟವಾಗುತ್ತದೆ ಎಂಬ ಚಿಂತೆ ಕಂಡುಬಂದಿದೆ. ಅಂತರರಾಷ್ಟ್ರೀಯ ವ್ಯಾಪಾರ ನಿರ್ಬಂಧಗಳು ಲಭ್ಯವಿರುವ ಜಿಎಂಒಗಳನ್ನು ಕೆಲವು ರಾಷ್ಟ್ರಗಳಿಗೆ ಪರಿಮಿತಿಗೊಳಿಸಿದೆ.


ಪರಿಸರಕ್ಕೆ ಅಥವಾ, ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ತಳೀಯ ಮಾರ್ಪಾಡಿನಿಂದ ಒಡ್ಡಬಹುದಾದ ನೈಜವಾದ ಅಪಾಯಗಳ ಕುರಿತು ತೀವ್ರವಾಗಿ ಎತ್ತಿಹಿಡಿಯಲಾಯಿತು. ಜಿಎಂ ಆಹಾರ ಚರ್ಚೆಯನ್ನು ನೋಡಿ.

ಮಣ್ಣಿನ ಸಂರಕ್ಷಣೆ


ಡರ್ಟ್: ದಿ ಎರೋಶನ್ ಆಫ್ ಸಿವಿಲೈಜೇಶನ್ ನಲ್ಲಿ, ಭೂರೂಪಶಾಸ್ತ್ರಜ್ಞ ಡೇವಿಡ್ ಮಾಂಟ್ಗೋಮೆರಿ ಅವರು ಮಣ್ಣಿನ ಸವೆತದಿಂದ ಬರಬಹುದಾದ ಬಿಕ್ಕಟ್ಟಿನ ಕುರಿತು ರೂಪರೇಖೆಯನ್ನು ಹಾಕಿದ್ದಾರೆ. ವ್ಯವಸಾಯವು ಒಂದು ರೀತಿಯ ಮೇಲ್ಮಣ್ಣಿನ ಗುಣವನ್ನು ಅವಲಂಬಿಸಿರುತ್ತದೆ, ಮತ್ತು ಅದನ್ನು ಮರುಸ್ಥಾನಗೊಳಿಸುವುದಕ್ಕಿಂತ ಹತ್ತು ಪಟ್ಟು ವೇಗವಾಗಿ ಖಾಲಿ ಮಾಡಲಾಗುತ್ತಿದೆ. ಉಳುಮೆ ಇಲ್ಲದ ಬೇಸಾಯವು, ಕೀಟನಾಶಕಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕೆಲವರು ಹೇಳುವುದನ್ನು ಸವೆಯುವಿಕೆಯನ್ನು ಕಡಿಮೆ ಗೊಳಿಸಲು ಒಂದು ಹಾದಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಯುಎಸ್‌ಡಿಎ ನ ವ್ಯವಸಾಯ ಸಂಶೋಧನೆ ಸೇವೆಯ ಇತ್ತೀಚಿನ ಅಧ್ಯಯನದ ಪ್ರಕಾರ ಸಾವಯವ ಬೇಸಾಯದಲ್ಲಿ ಉಳಿಮೆ ಇಲ್ಲದ ಉಳುಮೆಯೊಂದಿಗನ ಬೇಸಾಯಕ್ಕಿಂತ ಮೆನ್ಯೂರ್‌ನ ಬಳಕೆಯಿಂದಾಗಿ ಮಣ್ಣಿನ ಸಂರಕ್ಷಣೆ ಉತ್ತಮವಾಗಿದೆ ಎಂದು ಕಂಡುಬಂದಿದೆ.

ವಾತಾವರಣ ಬದಲಾವಣೆ

ಆರ್ಗ್ಯಾನಿಕ್ ಆನ್ಸರ್ ಟು ಕ್ಲೈಮೇಟ್ ಚೇಂಜ್ ನಲ್ಲಿ, — ಪೌಷ್ಠಿಕತೆಯ ಆವರ್ತನೆಗಳಲ್ಲಿನ ಮುಚ್ಚುವಿಕೆಯ, ಜೈವಿಕ ವಿಭಿನ್ನತೆ ಮತ್ತು ತೀಕ್ಷ್ಣವಾದ ಮಣ್ಣಿನ ನಿರ್ವಹಣೆಯ ತೀವ್ರತೆಯಿಂದಾಗಿ — ವಾತಾವರಣ ಬದಲಾವಣೆಯನ್ನು ಶಾಂತಗೊಳಿಸುವ ಮತ್ತು ತಲೆಕೆಳಗಾಗಿಸುವ ಸಾಮಥ್ಯವನ್ನು ಸಾವಯವ ವ್ಯವಸಾಯವು ಹೊಂದಿದೆ ಎಂದು ಆಂಟೊನಿ ಮೆಲೇಕಾ ಅವರು ವಾದಿಸುತ್ತಾರೆ.


ಸಾವಯವ ವ್ಯವಸಾಯ ವ್ಯವಸ್ಥೆಗಳು ಮತ್ತು ರೂಢಿಯಲ್ಲಿನ ವ್ಯವಸ್ಥೆಗಳನ್ನು 1981 ರಿಂದ ಹೋಲಿಸುತ್ತಿರುವ ರೋಡೆಲ್ ಸಂಸ್ಥೆಯ ಪ್ರಕಾರ, ಪಳೆಯುಳಿಕೆಯ ಇಂಧನ ಹೊರಸೂಸುವಿಕೆಗಳು ಮತ್ತು ಮಣ್ಣಿನಲ್ಲಿ ಇಂಗಾಲವನ್ನು ಪ್ರತ್ಯೇಕಗೊಳಿಸುವಿಕೆಯನ್ನು ಕಡಿಮೆಗೊಳಿಸುವ ಮೂಲಕ ಜಾಗತಿಕ ತಾಪಮಾನವನ್ನು ಶಮನಗೊಳಿಸುವಲ್ಲಿ ಸಾವಯವ ವ್ಯವಸಾಯವನ್ನು ಸಹ ಬಳಸಬಹುದಾಗಿದೆ. ಸಾವಯವ ವ್ಯವಸ್ಥೆಗಳಲ್ಲಿನ ಸಿಂಥೆಟಿಕ್ ನೈಟ್ರೋಜನ್‌ನ ಹೊರಹಾಕುವಿಕೆಯಿಂದಾಗಿ ಪಳೆಯುಳಿಕೆ ಇಂಧನದ ಬಳಕೆಯನ್ನು ಶೇಕಡಾ 33 ರಷ್ಟನ್ನು (ಲಾಸಲ್ಲೆ) ಕಡಿಮೆಗೊಳಿಸುತ್ತದೆ ಮತ್ತು ಇಂಗಾಲದ ಸ್ವಾಧೀನತೆಯು CO2 ಅನ್ನು ಮಣ್ಣಿನಲ್ಲಿ ಸಾವಯವ ವಸ್ತುವಿನ ರೂಪದಲ್ಲಿ ಹಾಕುವ ಮೂಲಕ ವಾತಾವರಣದಿಂದ ಹೊರಹಾಕುತ್ತದೆ, ಈ ವಿಧಾನವು ಸಾಂಪ್ರದಾಯಿಕವಾಗಿ ನಿರ್ವಹಿಸಲಾಗುವ ಮಣ್ಣಿನಲ್ಲಿ ಸಾಮಾನ್ಯವಾಗಿ ಕಳೆದುಕೊಳ್ಳುತ್ತದೆ. ರೋಡೆಲ್ ಸಂಸ್ಥೆಯ ಪ್ರಕಾರ ಸಾವಯವ ಉಳುಮೆ ಮಾಡದೆ ನಿರ್ವಹಿಸುವ ಮಣ್ಣಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಇಂಗಾಲ ಸ್ವಾಧೀನವು ಸಂಭವಿಸುತ್ತದೆ.


(ರೂಢಿಯಲ್ಲಿನ) ವ್ಯವಸಾಯದಿಂದ ಋಣಾತ್ಮಕ ಬಾಹ್ಯತ್ವಗಳ ಮಟ್ಟವನ್ನು ಸಾವಯವ ವ್ಯವಸಾಯವು ಕಡಿಮೆಗೊಳಿಸುತ್ತದೆ. ಇದನ್ನು ಖಾಸಗಿ ಅಥವಾ ಸಾರ್ವಜನಿಕ ಪ್ರಯೋಜನಗಳಂತೆ ನೋಡುವುದು ಆಸ್ತಿ ಹಕ್ಕುಗಳ ಪ್ರಾರಂಭಿಕ ವಿವರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಜಾಗತಿಕ ವಾತಾವರಣ ಬದಲಾವಣೆಯನ್ನು ಎದುರಿಸಲು ವ್ಯವಸಾಯವನ್ನು ಕಡಿಮೆ ಮೌಲ್ಯೀಕರಿಸಲಾಗಿದೆ ಮತ್ತು ಕಡಿಮೆ ಅಂದಾಜು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ರೋಡೆಲ್ ಸಂಸ್ಥೆಯು ದಾಖಲಿಸಿರುವ ಮಣ್ಣಿನ ಇಂಗಾಲ ಡೇಟಾವು ಪುನರುಜ್ಜೀವಕ ಸಾವಯವ ವ್ಯವಸಾಯದ ವ್ಯವಸ್ಥೆಗಳು CO2 ಹೊರಸೂಸುವಿಕೆಗಳನ್ನು ಶಮನಗೊಳಿಸುವಲ್ಲಿ ಹೆಚ್ಚು ಕ್ರಿಯಾತ್ಮಕ ಪ್ರಾವೀಣ್ಯತೆಗಳಾಗಿವೆ ಎಂದು ತೋರಿಸುತ್ತದೆ.

ಪೌಷ್ಠಿಕಾಂಶ ಬೇರ್ಪಡಿಸುವಿಕೆ

ಕೆರೆಗಳು, ನದಿಗಳು, ಮತ್ತು ನೆಲದಡಿಯ ನೀರು ಅಲ್ಗಲ್ ಬ್ಲೂಮ್ಸ್, ಯೂಟ್ರೋಫಿಕೇಶನ್, ಮತ್ತು ಅವುಗಳು ಮುಂದೆ ಅಂತ್ಯ ವಲಯಗಳಾಗುತ್ತವೆ. ಹೆಚ್ಚುವರಿಯಾಗಿ, ನೈಟ್ರೇಟ್‌ಗಳು ಜಲಜೀವಿಗಳಿಗೆ ತಾನಾಗಿಯೇ ಹಾನಿಕಾರಕವಾಗಿದೆ. ಈ ಮಾಲಿನ್ಯದ ಮುಖ್ಯ ಕೊಡುಗೆ ಎಂದರೆ ನೈಟ್ರೇಟ್ ಗೊಬ್ಬರಗಳು, ಇವುಗಳ ಬಳಕೆಯು "2050 ಹೊತ್ತಿಗೆ ಎರಡುಪಟ್ಟು ಅಥವಾ ಮೂರು ಪಟ್ಟು" ಆಗುವ ನಿರೀಕ್ಷೆ ಇದೆ. ಸಾವಯವ ಗೊಬ್ಬರ ಬಳಸಿದ ಜಮೀನುಗಳು ರೂಢಿಯಲ್ಲಿನ ಗೊಬ್ಬರ ಬಳಸಿದ ಜಮೀನುಗಳಿಗಳಿಗೆ ಹೋಲಿಸಿದಲ್ಲಿ "ಹಾನಿಕಾರಕ ನೈಟ್ರೇಟ್ ಬೇರ್ಪಡಿಸುವಿಕೆಯನ್ನು ಮಹತ್ವಪೂರ್ಣವಾಗಿ [ಕಡಿಮೆ ಮಾಡುತ್ತದೆ]": "ಸಾವಯವ ಜಮೀನುಗಳಿಗಿಂತ ರೂಢಿಯಲ್ಲಿನ ಜಮೀನುಗಳಲ್ಲಿ ವಾರ್ಷಿಕ ನೈಟ್ರೇಟ್ ಬೇರ್ಪಡಿಸುವಿಕೆಯು 4.4-5.6 ರಷ್ಟು ಹೆಚ್ಚಾಗಿದೆ" ಎಂದು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ನ ಸಂಶೋಧಕರು ಕಂಡುಹಿಡಿದಿದ್ದಾರೆ.


ವ್ಯವಸಾಯದ ಮಾಲಿನ್ಯದಿಂದಾಗಿ ಮೆಕ್ಸಿಕೊದ ಕೊಲ್ಲಿಯಲ್ಲಿ ಜಡವಾದ ವಲಯವು ಉಂಟಾಗಲು ಕಾರಣವಾಯಿತು ಎಂದು ವಿಜ್ಞಾನಿಗಳು ನಂಬುತ್ತಾರೆ: ರಸಗೊಬ್ಬರಗಳು ಮತ್ತು ಜಾನುವಾರುಗಳ ಮೆನ್ಯೂರ್‌ನ ಸಂಯೋಗದ ಹೊಡೆದೋಡಿಸುವಿಕೆ. ಕೊಲ್ಲಿಗೆ ಬಿಡುಗಡೆಯಾಗುವ ನೈಟ್ರೋಜನ್‌ನಲ್ಲಿ ಅರ್ಧದಷ್ಟು ವ್ಯವಸಾಯದಿಂದ ಬರುತ್ತದೆ ಎಂದು ಅಮೇರಿಕದ ಭೌಗೋಳಿಕ ಸಮೀಕ್ಷೆ (ಯುಎಸ್‌ಜಿಎಸ್) ಯ ಅಧ್ಯಯನವು ತಿಳಿಸಿದೆ. ಇದರಿಂದಾಗಿ ಮೀನುಗಾರರು ಮೀನು ಹಿಡಿಯಲು ಕರಾವಳಿ ತೀರದಿಂದ ಬಹಳಷ್ಟು ದೂರ ಸಾಗಬೇಕಾಗಿರುವುದರಿಂದ ಅವರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ.


2000 ದ ಐಎಫ್‌ಒಎಎಮ್ ಸಮ್ಮೇಳನದಲ್ಲಿ, ದನೂಬೆ ನದಿ ಗೆ ನೈಟ್ರೋಜನ್ ಕರಗುವುದರ ಕುರಿತು ಸಂಶೋಧಕರು ಒಂದು ಅಧ್ಯಯನವನ್ನು ಮಂಡಿಸಿದರು. ಸಾವಯವ ಬೇಸಾಯಗಳಲ್ಲಿ ನೈಟ್ರೋಜನ್‌ನ ಕರಗುವಿಕೆ ಗಮನಾರ್ಹವಾಗಿ ಕಡಿಮೆ ಎಂದು ಅವರು ಕಂಡು ಕೊಂಡಿದ್ದಾರೆ ಮತ್ತು ಒಂದು ಕೆಜಿ ನೈಟ್ರೋಜನ್ ಬಿಡುಗಡೆ ಮಾಡುವುದಕ್ಕೆ 1 ಯೂರೊವನ್ನು ವಸೂಲಿ ಮಾಡುವ ಮೂಲಕಬಾಹ್ಯ ವೆಚ್ಚವನ್ನು ಹೋಗಲಾಡಿಸಬಹುದು ಎಂದು ಸಲಹೆ ನೀಡಿದರು.


2005 ರ ಅಧ್ಯಯನವು ವ್ಯವಸಾಯದ ತ್ಯಾಜ್ಯ ಮತ್ತು ಅಲ್ಗಾ ಬ್ಲೂಮ್ಸ್‌ನ ನಡುವೆ ಉತ್ತಮ ಕೊಂಡಿಯನ್ನು ಕಂಡುಹಿಡಿದರು.

ಜೀವವೈವಿಧ್ಯತೆ

ಸಾವಯವ ಬೇಸಾಯದಿಂದ ವ್ಯಾಪಕವಾಗಿ ಜೀವಿಗಳು ಲಾಭ ಪಡೆಯುತ್ತವೆ, ಆದರೂ ಸಾವಯವ ವಿಧಾನಗಳು ಸಮಗ್ರವಾದ ವ್ಯವಸಾಯ ಪರಿಸರದ ರೂಢಿಯಲ್ಲಿನ ವಿಧಾನಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆಯೆ ಎಂಬುದು ಸ್ಪಷ್ಟವಾಗಿಲ್ಲ. ಬೇಸಾಯ ರೂಢಿಯ ಅಧ್ಯಯನದ ಹೋಲಿಕೆಯಲ್ಲಿ ಸುಮಾರು ಎಲ್ಲ ಕೃಷಿಯೇತರ, ಸ್ವಾಭಾವಿಕವಾಗಿ ಸಂಭವಿಸುವ ಜೀವಿಗಳು ಸಾವಯವ ಬೇಸಾಯಕ್ಕೆ ಜನಸಂಖ್ಯೆ ಮತ್ತು ಫಲವತ್ತತೆ ಎರಡರಲ್ಲಿಯೂ ಹೆಚ್ಚು ಆದ್ಯತೆಯನ್ನು ನೀಡಿದೆ. ಸಂಯೋಜನೆ ಹೊಂದಿರುವ ಎಲ್ಲ ಜೀವಿಗಳನ್ನು ಒಟ್ಟುಸೇರಿಸುತ್ತಾ, ರೂಢಿಯಲ್ಲಿನ ಬೇಸಾಯ ವಿಧಾನಗಳ ವಿರುದ್ಧ ಸಾವಯವ ಬೇಸಾಯದಲ್ಲಿ ಸರಾಸರಿ 30% ಹೆಚ್ಚು ಕಂಡುಬಂದಿದೆ. ಪಕ್ಷಿಗಳು, ಚಿಟ್ಟೆಗಳು, ಮಣ್ಣಿನ ಕ್ರಿಮಿಗಳು, ಜೀರುಂಡೆಗಳು, ಎರೆಹುಳುಗಳು, ಜೇಡ, ಸಸ್ಯಜೀವಿಗಳು ಮತ್ತು ಸ್ತನಿವರ್ಗದ ಜೀವಿಗಳಿಗೆ ಮುಖ್ಯವಾಗಿ ಪರಿಣಾಮಬೀರಿದೆ. ಸಾವಯವ ಕೃಷಿಯು ಕಡಿಮೆ ಅಥವಾ ಯಾವುದೇ ಕಳೆಕುಲಿಗಳು ಮತ್ತು ಕೀಟನಾಶಕಗಳನ್ನು ಬಳಸುವುದಿಲ್ಲ ಈ ಮೂಲಕ ಜೀವವೈವಿಧ್ಯತೆ ಹೊಂದಾಣಿಕೆ ಮತ್ತು ಜನಸಂಖ್ಯೆ ಸಾಂದ್ರತೆಯ ಉಪಯೋಗ ಪಡೆಯುತ್ತದೆ. ಹಲವಾರು ಕಳೆ ಜೀವಿಗಳು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವಂತಹ ಮತ್ತು ಕಳೆ ಕೀಟಗಳಿಗೆ ಮೇವು ಉಣಿಸಲು ಸಹಾಯ ಮಾಡುತ್ತವೆ. ಮೆನ್ಯೂರ್‌ನಂತಹ ನೈಸರ್ಗಿಕ ಗೊಬ್ಬರ ಹರಡಿರುವುದರಿಂದ ಹೆಚ್ಚುವರಿಯಾದ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಾಗುವ ಕಾರಣ ಮಣ್ಣಿನ ಅವಲಂಬಿತ ಜೀವಿಗಳು ಹೆಚ್ಚಿನ ಲಾಭ ಪಡೆಯುತ್ತವೆ, ಅದೇ ಸಮಯದಲ್ಲಿ ರೂಢಿಯಲ್ಲಿನ ಕೃಷಿ ವಿಧಾನದೊಂದಿಗೆ ಸಂಯೋಗ ಹೊಂದಿರುವ ಕಳೆಕುಲಿಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆಗೊಳ್ಳುವುದನ್ನು ಅನುಭವಿಸುತ್ತದೆ. ಹೆಚ್ಚುವರಿಯಾದ ಜೀವವೈವಿಧ್ಯತೆಯು, ಕೆಲವು ಸಾವಯವ ನೆಲಗಳಿಂದ ಹೆಚ್ಚಿನ ಇಳುವರಿ ಅನುಭವಿಸಲು ವಿಶೇಷವಾಗಿ ಮೈಕೊರ್‌ಹಿಜ್ಜೆಯಂತಹ ಮಣ್ಣಿನ ಮೈಕ್ರೋಬ್ಸ್‌ನಿಂದ, ವಿಶೇಷವಾಗಿ 21-ವರ್ಷಗಳ ಅವಧಿಯಲ್ಲಿನ ಸಾವಯವ ಮತ್ತು ನಿಯಂತ್ರಣ ಕ್ಷೇತ್ರಗಳಲ್ಲಿನ ಹೋಲಿಕೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾ ವಿವರಣೆಯನ್ನಾಗಿ ಪ್ರಸ್ತಾಪಿಸಲಾಗಿದೆ.

ಸಾವಯವ ಬೇಸಾಯದಿಂದ ಪಡೆದುಕೊಳ್ಳಲಾದ ಜೀವವೈವಿಧ್ಯತೆಯ ಹಂತವು ಮಾನವರಿಗೆ ಸ್ವಾಭಾವಿಕ ಆಸ್ತಿಯಾಗಿದೆ. ಹಲವಾರು ಸಾವಯವ ಬೇಸಾಯಗಳಲ್ಲಿ ಕಂಡುಬರುವ ಲೋಹಗಳಿಂದಾಗಿ ವ್ಯವಸಾಯದಲ್ಲಿನ ತಡೆದುಕೊಳ್ಳುವಿಕೆಯನ್ನು ಒದಗಿಸುತ್ತದೆ ಈ ಮೂಲಕ ಮಾನವನ ಅವಲಂಬನೆಯನ್ನು (ಉದಾ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು) ಕಡಿಮೆ ಮಾಡುತ್ತದೆ. ಸಾವಯವ ವಿಧಾನದಿಂದ ಬೆಳೆಯುವ ರೈತರು ಜೀವವೈವಿಧ್ಯತೆಯನ್ನು ಶಿಫಾರಸು ಮಾಡುತ್ತಾ ಕಡಿಮೆ ಇಳುವರಿಯ ಅಪಾಯವನ್ನು ತಪ್ಪಿಸುತ್ತಾರೆ. ರಿಂಗ್-ನೆಕಲ್ ಫೆಸೆಂಟ್ ಮತ್ತು ನಾರ್ದನ್ ಬಾಬ್‌ವೈಟ್‌ನಂತಹ ಸಾಮಾನ್ಯ ಆಟದ ಪಕ್ಷಿಗಳು ವ್ಯವಸಾಯ ನೆಲಗಳಲ್ಲಿ ನೆಲೆಸುತ್ತವೆ, ಮತ್ತು ಅವುಗಳು ಮನರಂಜನೀಯ ಬೇಟೆಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸ್ವಾಭಾವಿಕ ಆಸ್ತಿಯನ್ನು ಹೆಚ್ಚುವರಿಗೊಳಿಸುತ್ತವೆ. ಸಾವಯವ ಬೇಸಾಯ ವ್ಯವಸ್ಥೆಗಳಲ್ಲಿ ಪಕ್ಷಿ ಜೀವಿಗಳ ಸಾಂದ್ರತೆ ಮತ್ತು ಸಂಖ್ಯೆ ಹೆಚ್ಚಾಗಿರುವ ಕಾರಣ, ಜೀವವೈವಿಧ್ಯತೆಯನ್ನು ಶಿಫಾರಸು ಮಾಡುವುದು ತಾರ್ಕಿಕ ಮತ್ತು ಮಿತವ್ಯಯ ಎಂದು ನಾವು ಕಾಣಬಹುದಾಗಿದೆ.


ಮಣ್ಣಿನ ಮತ್ತು ಮಣ್ಣಿನ ಜೀವಿಗಳ ಮೇಲಿನ ಜೈವಿಕ ಸಂಶೋಧನೆಯು ಸಾವಯವ ಬೇಸಾಯದ ವ್ಯವಸ್ಥೆಯು ಉಪಯುಕ್ತವೆಂದು ಸಾಬೀತುಪಡಿಸಿದೆ. ಬಹು ರೀತಿಯ ಬ್ಯಾಕ್ಟೀರಿಯಾ ಮತ್ತು ನುಸುಬಿನ ಬೇರ್ಪಡಿಕೆಯ ರಾಸಾಯನಿಕಗಳು, ಗಿಡದ ಮತ್ತು ಪ್ರಾಣಿಯ ತ್ಯಾಜ್ಯವನ್ನು ಉತ್ತಮ ಪೌಷ್ಠಿಕಾಂಶವುಳ್ಳ ಮಣ್ಣನ್ನಾಗಿ ಮಾರ್ಪಡಿಸುತ್ತದೆ. ಇದಕ್ಕೆ ಪ್ರತಿಫಲವಾಗಿ, ಉತ್ಪಾದಕನು ಆರೋಗ್ಯಕರ ಇಳುವರಿಗಳಿಂದ ಮತ್ತು ಭವಿಷ್ಯದ ಕೃಷಿಗಳಿಗಾಗಿ ಇನ್ನಷ್ಟು ಕೃಷಿಯೋಗ್ಯ ಮಣ್ಣನ್ನು ಪಡೆಯುತ್ತಾನೆ. ಇನ್ನಷ್ಟು ಹೇಳುವುದಾದರೆ, ಸಾವಯವ ಮಣ್ಣಿನ ಕಣಗಳು ಮತ್ತು ಮಣ್ಣಿನ ಗುಣಮಟ್ಟಕ್ಕೆ ಮತ್ತು ಇಳುವರಿಗೆ ಅದರ ಸಂಬಂಧವನ್ನು ಪರೀಕ್ಷಿಸುತ್ತ 21-ವರ್ಷಗಳ ಅಧ್ಯಯನವನ್ನು ಮಾಡಲಾಯಿತು. ಯಾವುದೇ ಮೆನ್ಯೂರ್‌ನ ಹಾಕುವಿಕೆ ಇಲ್ಲದ ನೆಲದೊಂದಿಗೆ ಹೋಲಿಸುತ್ತಾ, ಮೆನ್ಯೂರ್‌ನ ಬದಲಾಗುವ ಹಂತಗಳೊಂದಿಗೆ ಸಕ್ರಿಯವಾಗಿ ನಿರ್ವಹಿಸಿದ ಮಣ್ಣನ್ನು ನಿಯಂತ್ರಣಗಳು ಒಳಗೊಂಡಿತ್ತು. ಅಧ್ಯಯನ ಪ್ರಾರಂಭಿಸಿದ ನಂತರ, ನಿಯಂತ್ರಿತ ನೆಲದಲ್ಲಿನ ಇಳುವರಿಯು ಮೆನ್ಯೂರ್ ಹೊಂದಿದ ನೆಲಕ್ಕೆ ಹೋಲಿಸಿದಲ್ಲಿ ತುಂಬಾ ಕಡಿಮೆ ಕಂಡುಬಂದಿತು. ಮೆನ್ಯೂರ್ ನೆಲದಲ್ಲಿನ ಹೆಚ್ಚುವರಿಯಾದ ಮಣ್ಣಿನ ಮೈಕ್ರೋಬ್‌ನ ಸಮುದಾಯವು ಆರೋಗ್ಯದಾಯಕ, ಹೆಚ್ಚು ಕೃಷಿಯೋಗ್ಯ ಮಣ್ಣಿನ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಎಂದು ಮುಕ್ತಾಯಗೊಳಿಸಲಾಯಿತು.

ಮಾರಾಟ ಮತ್ತು ಮಾರುಕಟ್ಟೆಯ ಚಟುವಟಿಕೆ

ಮಾರುಕಟ್ಟೆಯ ಚಟುವಟಿಕೆ ಮತ್ತು ವಿತರಣೆಯು ಕಷ್ಟಕರ ತೊಡಕುಗಳು ಎಂದು ಸಾವಯವ ವ್ಯವಸಾಯಿಗಳು ವರದಿ ಮಾಡುತ್ತಾರೆ. ಹೆಚ್ಚಿನ ಸಾವಯವ ಮಾರಾಟಗಳು ಮುಂದುವರಿದ ರಾಷ್ಟ್ರಗಳಲ್ಲಿ ಗಮನಹರಿಸಿವೆ. ಈ ಉತ್ಪನ್ನಗಳನ್ನೇ ಅರ್ಥಶಾಸ್ತ್ರಜ್ಞರು ಭರವಸೆಯ ಸರಕು ಎಂದು ಹೇಳುತ್ತಾರೆ ಅದರಲ್ಲಿ ಅವರು ಅನಿಶ್ಚಿತ ಪ್ರಮಾಣೀಕರಣದ ಮೇಲೆ ಅವಲಂಬಿಸುತ್ತಾರೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಿದಂತೆ, ಸಾವಯವ ಉತ್ಪನ್ನಗಳ ಮೇಲಿನ ಬೇಡಿಕೆಯ ಪ್ರಮಾಣವು ಕಡಿಮೆಯಾಗುವುದನ್ನು ಅನುಭವಿಸಬಹುದು. WSL ಸ್ಟ್ರ್ಯಾಟೆಜಿಕ್ ರೀಟೈಲ್ ನಡೆಸಿದ 2008 ರ ಸಮೀಕ್ಷೆಯಲ್ಲಿ 2006 ರಿಂದ ಸಾವಯವ ಉತ್ಪನ್ನಗಳ ಮೇಲಿನ ಕಾಳಜಿಯು ಕುಸಿದಿದೆ, ಮತ್ತು 42% ಅಮೇರಿಕನ್ನರು ಸಾವಯವ ಉತ್ಪನ್ನವನ್ನು ನಂಬಬೇಡಿ ಎಂಬ ಮತಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹಾರ್ಟ್‌ಮ್ಯಾನ್ ಸಮೂಹದ ಪ್ರಕಾರ 69% ಅಮೇರಿಕನ್ನರು ಅಪರೂಪಕ್ಕೆ ಸಾವಯವ ಉತ್ಪನ್ನಗಳನ್ನು ಕೊಳ್ಳುತ್ತಾರೆ, 2005 ರಲ್ಲಿ ಇದು 73% ಇತ್ತು ಎಂದು ವರದಿ ಮಾಡುತ್ತದೆ. ಸಾವಯವ ಉತ್ಪನ್ನಕ್ಕೆ ಜನರು ಸ್ಥಳೀಯ ಉತ್ಪನ್ನವನ್ನು ಬದಲಿಯಾಗಿ ಬಳಸುತ್ತಿರಬಹುದು ಎಂದು ಹಾರ್ಟ್‌ಮ್ಯಾನ್ ಸಮೂಹವು ಹೇಳುತ್ತದೆ.

ವಿತರಕರು

ಅಮೇರಿಕದಲ್ಲಿ, 75% ನಷ್ಟು ಸಾವಯವ ಕೃಷಿಯು 2.5 ಹೆಕ್ಟೇರುಗಳಿಗಿಂತಲೂ ಕಡಿಮೆ ಮತ್ತು ಕ್ಯಾಲಿಫೋರ್ನಿಯಾದಲ್ಲಿ 2% ನಷ್ಟು ಕೃಷಿಯು ಮಾರಾಟದ ಅರ್ಧದಷ್ಟು ಕಂಡುಬರುತ್ತದೆ (ಲಾಟರ್ 2003:4). ಚಿಕ್ಕ ಕೃಷಿಯ ಗುಂಪುಗಳು ತಮ್ಮ ಸರಕುಗಳನ್ನು ಹೆಚ್ಚು ಕ್ರಿಯಾತ್ಮಕವಾಗಿ ಮಾರುಕಟ್ಟೆಗೆ ತರುವಲ್ಲಿ ಆರ್ಗ್ಯಾನಿಕ್ ವ್ಯಾಲಿ, ಇನ್ಸ್. ನಂತಹ ಸಹಕಾರ ಕೇಂದ್ರಗಳನ್ನು ಪ್ರಾರಂಭಿಸಿದೆ.


ಕಳೆದ ಇಪ್ಪತ್ತು ವರ್ಷಗಳಿಂದೆ, ಅದಾಗ್ಯೂ ಹೆಚ್ಚಿನ ಸಹಕಾರ ವಿತರಣಕಾರರನ್ನು ಸೇರಿಸಲಾಗಿದೆ ಅಥವಾ ಕೊಂಡೊಯ್ಯಲಾಗಿದೆ. ಗ್ರಾಮೀಣ ಸಮಾಜಶಾಸ್ತ್ರಜ್ಞ ಪಿಲಿಫ್ ಹೆಚ್.ಹವಾರ್ಡ್ ರವರು ಸಂಯುಕ್ತ ಸಂಸ್ಥಾನದದಲ್ಲಿ ಸಾವಯವ ಕೈಗಾರಿಕೆಯ ಕ್ರಮ ಮತ್ತು ಪರಿವರ್ತನೆಯ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಅವರು 1982 ರಲ್ಲಿ 28 ಗ್ರಾಹಕ ಸಹಕಾರ ವಿತರಣಕಾರರಿದ್ದರು ಆದರೆ 2007 ರಲ್ಲಿ ಕೇವಲ 3 ಮಾತ್ರ ಎಂದು ವಾದಿಸಿದ್ದಾರೆ, ಮತ್ತು ಅವರು ಸಂಘಟಿಸುವ ಗ್ರಾಫಿಕ್ ತೋರಿಸುವಿಕೆಯನ್ನು ರಚಿಸಿದ್ದಾರೆ. ಅವರ ಸಂಶೋಧನೆಗಳು ಹೆಚ್ಚಿನದಾಗಿ ಚಿಕ್ಕ ಸಹಕಾರತ್ವಗಳನ್ನು ತೋರಿಸುತ್ತದೆ ಅಂತೆಯೇ ಬೃಹತ್ ಬಹುರಾಷ್ಟ್ರೀಯ ಕಾರ್ಪೋರೇಷನ್ ಗಳಲ್ಲಿ ಮಗ್ನರಾಗಿದ್ದಾರೆ ಇದೇ ತರಹದ ಜನರಲ್ ಮಿಲ್ಸ್, ಹೈನ್, ಕಾನ್ ಗ್ರಾ, ಕೆಲ್ಲಾಗ್, ಮತ್ತು ವಿವಿಧ ಬಗೆಯ ಇತರೆ ವ್ಯಾಪಾರ ಮುದ್ರೆಗಳು. ಈ ಬಲವರ್ಧನೆಯು ಗ್ರಾಹಕರ ಮತ್ತು ಪತ್ರಿಕೋದ್ಯಮಿಗಳ ಸಂಭಾವ್ಯ ವಂಚನೆ ಮತ್ತು ಗುಣಮಟ್ಟಗಳಲ್ಲಿನ ಕೀಳುಸ್ಥಿತಿಗೆ ಸಂಬಂಧಗಳನ್ನು ಹೆಚ್ಚಿಸುತ್ತದೆ. ಹೆಚ್ಚಿನದಾಗಿ ಈ ಬೃಹತ್ ಕಾರ್ಪೋರೇಷನ್ ಗಳಲ್ಲಿ ಸಾವಯವ ಉತ್ಪನ್ನಗಳನ್ನು ಚಂದದಾರರ ಮೂಲಕ ಮಾರಾಟ ಮಾಡಲಾಗುತ್ತದೆ, ಅವರ ಹೆಸರುಗಳನ್ನು ಪಟ್ಟಿಗಳ ಮೇಲೆ ಇರಿಸಲು ಅನುಮತಿಸಲಾಗುತ್ತದೆ.

ರೈತರ ಮಾರುಕಟ್ಟೆಗಳು

ಸಣ್ಣ ಸಾವಯವ ರೈತರ ಲಾಭದಾಯಕತೆಗಾಗಿ ಬೆಲೆಯ ಕಂತುಗಳು ಪ್ರಮುಖವಾದುದು, ಮತ್ತು ಹಲವು ರೈತರಿಂದ ಗ್ರಾಹಕರಿಗೆ ನೇರವಾಗಿ ಮಾರಲಾಗುತ್ತದೆ. ಸಂಯುಕ್ತ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ,1994 ರಲ್ಲಿ 1,755 ರಿಂದ 2006 ರಲ್ಲಿ 4,385 ರಷ್ಟು ಬೆಳೆಯಲಾಯಿತು.

ಸಾಮರ್ಥ್ಯ ವರ್ಧನೆ

ಸಾವಯವ ವ್ಯವಸಾಯವು ಅರ್ಥಪೂರ್ಣವಾದ ಸಾಮಾಜಿಕ-ಆರ್ಥಿಕ ಮತ್ತು ಪರಿಸರ ವಿಜ್ಞಾನದ ಸಮರ್ಥನೀಯ ಬೆಳವಣಿಗೆಗಾಗಿ, ವಿಶೇಷವಾಗಿ ಬಡ ರಾಷ್ಟ್ರಗಳ ಬೆಳವಣಿಗೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ. ಒಂದು ವಿಧದಲ್ಲಿ, ಸಾವಯವ ತತ್ತ್ವಗಳನ್ನು ಅನ್ವಯಿಸುವುದರಿಂದ, ಅಂದರೆ ಸ್ಥಳೀಯ ಸಂಪನ್ಮೂಲಗಳ ದಕ್ಷ ನಿರ್ವಹಣೆಯಿಂದಾಗಿ (ಉದಾ. ಸ್ಥಳೀಯ ಬೀಜ ವಿಧಗಳು, ಮೆನ್ಯೂರ್, ಇತ್ಯಾದಿ) ಖರ್ಚುವೆಚ್ಚ ದಕ್ಷತೆ ಸಾಧ್ಯವಾಗಿದೆ. ಮತ್ತೊಂದು ರೀತಿಯಲ್ಲಿ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯು ಮಹತ್ತರವಾದ ಬೆಳವಣಿಗೆಯ ನಿರೀಕ್ಷೆ ಹೊಂದಿದೆ ಮತ್ತು ದಕ್ಷಿಣದಲ್ಲಿನ ಕಾಲ್ಪನಿಕ ಉತ್ಪಾದಕರು ಮತ್ತು ರಫ್ತುದಾರರಿಗೆ ತಮ್ಮ ವರಮಾನವನ್ನು ಮತ್ತು ಜೀವನದ ಸ್ಥಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮವಾದ ಅವಕಾಶಗಳನ್ನು ಒದಗಿಸುತ್ತದೆ.


ಸಾವಯವ ವ್ಯವಸಾಯವು ಒಂದು ಉತ್ತಮ ಜ್ಞಾನಯುಕ್ತ ಕೇಂದ್ರೀಕೃತ ಉತ್ಪಾದನೆಯ ವ್ಯವಸ್ಥೆಯಾಗಿದೆ. ಆದ್ದರಿಂದ ಈ ಕುರಿತು ಸಾಮರ್ಥ್ಯ ವರ್ಧನೆಯ ಅಂಶಗಳು ಮುಖ್ಯ ಪಾತ್ರವಹಿಸುತ್ತವೆ. ಸಾವಯವ ವ್ಯವಸಾಯಕ್ಕೆ ಸಂಬಂಧಿಸಿದಂತೆ ತರಬೇತಿ ವಸ್ತುಗಳು ಮತ್ತು ತರಬೇತಿ ಕೋರ್ಸುಗಳ ಅಭಿವೃದ್ಧಿಯ ಕುರಿತು ಪ್ರಪಂಚದಾದ್ಯಂತ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ಜ್ಞಾನದ ದೊಡ್ಡ ಭಾಗಗಳು ಇನ್ನೂ ಹಂಚಿ ಹೋಗಿವೆ ಮತ್ತು ಸುಲಭವಾಗಿ ಪಡೆದುಕೊಳ್ಳಲಾಗುವುದಿಲ್ಲ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿಯು ಸಾವಯವ ವಿಭಾಗದ ಬೆಳವಣಿಗೆಗೆ ಮುಖ್ಯವಾದ ನಿರ್ಬಂಧವಾಗಿ ಉಳಿದುಕೊಂಡಿದೆ.


ಆ ಕಾರಣಕ್ಕಾಗಿ, ಸಾವಯವ ವ್ಯವಸಾಯ ಚಳುವಳಿಯ ಅಂತರರಾಷ್ಟ್ರೀಯ ಒಕ್ಕೂಟವು ಅಂತರ್ಜಾಲ ತರಬೇತಿ ವೇದಿಕೆಯನ್ನು ರಚಿಸಿತು, ಸಾವಯವ ವ್ಯವಸಾಯದ ಕುರಿತು ಉತ್ತಮ ಗುಣಮಟ್ಟದ ತರಬೇತಿ ಸಲಕರಣೆಗಳನ್ನು ಒದಗಿಸುವುದು ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಉಚಿತವಾದ ಪ್ರವೇಶ ನೀಡುವ ಮೂಲಕ ಸಾವಯವ ವ್ಯವಸಾಯಕ್ಕೆ ಜಾಗತಿಕ ಉಲ್ಲೇಖವಾಗಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿದೆ. ನವೆಂಬರ್ 2007 ರಲ್ಲಿ, ತರಬೇತಿ ವೇದಿಕೆಯು 170 ಕ್ಕೂ ಹೆಚ್ಚಿನ ಉಚಿತ ಕೈಪಿಡಿಗಳು ಮತ್ತು 75 ತರಬೇತಿ ಅವಕಾಶಗಳನ್ನು ಆಯೋಜಿಸಿತ್ತು.

ವಿವಾದ

ಸಾವಯವ ವ್ಯವಸಾಯ ವ್ಯವಸ್ಥೆಗಳು ಹೆಚ್ಚು ಇಳುವರಿ ನೀಡುವ ಬೇಸಾಯ ವ್ಯವಸ್ಥೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ ಎಂದು ಹಲವಾರು ವಿಮರ್ಶಕರ ಭಾವನೆಯಾಗಿದೆ. ಈ ವಿಮರ್ಶಕರಲ್ಲಿ ಕೃಷಿ ನೆಲವನ್ನು ಪರಿಣಾಮಕಾರಿಯಾಗಿ ವಿಸ್ತರಿಸುತ್ತಾ ಮತ್ತು ಪ್ರಕ್ರಿಯೆಯಲ್ಲಿ ಪರಿಸರವ್ಯವಸ್ಥೆಯನ್ನು ನಿರ್ಮೂಲನೆ ಮಾಡುತ್ತಾ "ಹಸಿರು ಕ್ರಾಂತಿಯ" ಸಂಸ್ಥಾಪಕ, ನೊಬೆಲ್ ಶಾಂತಿ ಪುರಸ್ಕೃತ ನಾರ್ಮನ್ ಬೋರ್ಗಾಲ್ ಅವರು ಮತ್ತು ಪ್ರೊ. ಎ. ಟ್ರೆವಾವಸ್, ಅವರು ಸಾವಯವ ಬೇಸಾಯವು 4 ಬಿಲಿಯನ್ ಜನರಿಗೆ ಆಹಾರ ನೀಡುತ್ತದೆ ಎಂದು ಪ್ರತಿಪಾದಿಸುತ್ತಾರೆ.


ಟ್ರೆವಾಸ್ ಮತ್ತು ಲಾರ್ಡ್ ಪಿ. ಮೆಲ್ಚೆಟ್ ಅವರ ನಡುವಿನ ಚರ್ಚೆಯನ್ನು ಸಾರಾಂಶಗೊಳಿಸಿ, ತೊಂದರೆಗಳ ಬಗ್ಗೆ ಪರಿಶೀಲಿಸಿ ಕಳವಳಗೊಂಡು ಉನ್ನತ ಸೂಪರ್‌ಮಾರ್ಕೆಟ್ Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಕಟಿಸಿತು.


ಪ್ರದೇಶದಿಂದ-ಪ್ರದೇಶಕ್ಕೆ, ಆಲೂಗಡ್ಡೆಗಳ ಸಾವಯವ ಬೇಸಾಯ, ಸಕ್ಕರೆ ಬೀಟ್ ಮತ್ತು ಬೀಜದ ಹುಲ್ಲು ರೂಢಿಯಲ್ಲಿನ ಬೇಸಾಯಕ್ಕಿಂತ ಅರ್ಧದಷ್ಟು ಕಡಿಮೆ ಬೆಳೆ ಬೆಳೆಯುತ್ತದೆ ಎಂದು ಡ್ಯಾನಿಶ್ ಪರಿಸರ ರಕ್ಷಣೆ ಏಜೆನ್ಸಿಯ ಒಂದು ಅಧ್ಯಯನ ಕಂಡುಹಿಡಿದಿದೆ.


2008 ರ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಅಧ್ಯಯನವು ಸಾವಯವ ವಿಧಾನಗಳಿಂದ ಆಫ್ರಿಕಾದಲ್ಲಿ ಹೆಚ್ಚಿನ ಇಳುವರಿ ಸಾಧ್ಯವಾಯಿತು ಮತ್ತು ಸುಮಾರು ಇನ್ನೂರರಷ್ಟು ಬೆಳೆಗಳ ಹೋಲಿಕೆಯಿಂದ ಸಾವಯವ ಬೇಸಾಯದ ಮೂಲಕ ಪ್ರಸ್ತುತ ಮಾನವ ಜನಸಂಖ್ಯೆಗೆ ಪ್ರತಿ ವ್ಯಕ್ತಿಗೆ ಸಾಕಾಗುವಷ್ಟು ಆಹಾರ ಪದಾರ್ಥವನ್ನು ತಯಾರಿಸಬಹುದು ಎಂದು ಚರ್ಚಿಸಲಾಯಿತು; ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿನ ಸ್ವಲ್ಪ ಹೆಚ್ಚಿನ ಇಳುವರಿಯ ಫಲಿತಾಂಶ ಮತ್ತು ಸಾವಯವ ವಿಧಾನಗಳಿಂದ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿನ ಸ್ವಲ್ಪಮಟ್ಟಿನ ಹೆಚ್ಚಿನ ಇಳುವರಿಯೊಂದಿಗೆ ಸಾವಯವ ಮತ್ತು ಸಾವಯವವಲ್ಲದ ವಿಧಾನಗಳಿಂದ ಇಳುವರಿಯಲ್ಲಿನ ವ್ಯತ್ಯಾಸವು ಬಹಳ ಕಡಿಮೆ ಇದೆ.


ಆ ವಿಶ್ಲೇಷಣೆಯನ್ನು ಅಲೆಕ್ಸ್ ಆವೆರಿ ಅವರಿಂದ ತೀವ್ರವಾಗಿ ಟೀಕೆಗೆ ಒಳಗಾಯಿತು, ಅವರ ಹೇಳುವ ಪ್ರಕಾರ ಹಲವಾರು ಸಾವಯವವಲ್ಲದ ಅಧ್ಯಯನವು ಸಾವಯವದಂತೆ ವಿಮರ್ಶಿಸಲಾಯಿತು, ತಪ್ಪಾಗಿ ವರದಿ ಮಾಡಿದ ಸಾವಯವ ಇಳುವರಿ, ಸಾವಯವ ಮತ್ತು ಸಾವಯವವಲ್ಲದ ಅಧ್ಯಯನಗಳ ನಡುವೆ ತಪ್ಪಾದ ಹೋಲಿಕೆ ಮಾಡಲಾಗಿತ್ತು, ವಿಭಿನ್ನ ಕಾಗದಗಳು ಅದೇ ದತ್ತಾಂಶವನ್ನು ಉಲ್ಲೇಖಿಸುವ ಮೂಲಕ ಹೆಚ್ಚಿನ ಸಾವಯವ ಇಳುವರಿಯ ಸಂಖ್ಯೆಯನ್ನು ಸೂಚಿಸಲಾಯಿತು, ಮತ್ತು ನಿಷ್ಪಕ್ಷಪಾತವಲ್ಲದ ಮೂಲಗಳ ಅಧ್ಯಯನಗಳಿಗೂ ಹಾಗೂ ಅತಿಕಟ್ಟುನಿಟ್ಟಿನ ವಿಶ್ವವಿದ್ಯಾಲಯ ಅಧ್ಯಯನಗಳಿಗೂ ಸಮವಾದ ಬೆಲೆಯನ್ನು ನೀಡಲಾಗಿತ್ತು ಎಂದು ಪ್ರತಿಪಾದಿಸಿದರು.


ಎಫ್‌ಐಬಿಎಲ್ ಇನ್‌ಸ್ಟಿಟ್ಯೂಟ್ನ ನಿರ್ದೇಶಕ ಉರುಸ್ ನಿಗ್ಗಿ, ಅವರ ಪ್ರಕಾರ 'ಆರ್ಗ್ಯಾನಿಕ್ ಫುಡ್ ಎಕ್ಸ್‌ಪೋಸಡ್' ಅಥವಾ 'ದಿ ಹೈಪೊಕ್ರಿಸಿ ಆಫ್ ಆರ್ಗ್ಯಾನಿಕ್ ಫಾರ್ಮರ್ಸ್' ನಂತಹ ಪತ್ರಿಕೆ ಲೇಖನಗಳ ಅಲೆಯು ಸಾವಯವ ಬೇಸಾಯದ ವಿರುದ್ಧ ಒಂದು ಜಾಗತಿಕ ಕಾರ್ಯಾಚರಣೆಯ ಒಂದು ಭಾಗವಾಗಿದೆ ಅವರು ತಮ್ಮ ಚರ್ಚೆಗಳನ್ನು ಸಾಮಾನ್ಯವಾಗಿ ಹಡ್ಸನ್ ಇನ್‌ಸ್ಟಿಟ್ಯೂಟ್‌ನ ಅಲೆಕ್ಸ್ ಆವೆರಿ ಅವರ ಪುಸ್ತಕ 'ದಿ ಟ್ರೂತ್ ಎಬೌಟ್ ಆರ್ಗ್ಯಾನಿಕ್ ಫಾರ್ಮಿಂಗ್' ದಿಂದ ತೆಗೆದುಕೊಳ್ಳುತ್ತಾರೆ ಎಂದು ಒತ್ತಿಹೇಳುತ್ತಾರೆ.


1998 ರಲ್ಲಿ, ಹಡ್ಸನ್ ಇನ್‌ಸ್ಟಿಟ್ಯೂಟ್ ನ ಡೆನಿಸ್ ಆವೆರಿ ಅವರ ಪ್ರಕಾರ ಕಾಯಿಲೆ ನಿಯಂತ್ರಣ ಕೇಂದ್ರ(ಸಿಡಿಸಿ) ವನ್ನು ಮೂಲವಾಗಿಟ್ಟುಕೊಂಡು ಸಾವಯವವಲ್ಲದ ಆಹಾರದ ಬದಲಾಗಿ ಸಾವಯವ ಆಹಾರವನ್ನು ಸೇವಿಸುವುದರಿಂದ ಇ. ಕೊಲಿ ಸೋಂಕು ತಗುಲುವ ಅಪಾಯವು ಎಂಟರಷ್ಟು ಹೆಚ್ಚು ಎಂದು ಪ್ರತಿಪಾದಿಸುತ್ತಾರೆ. ಸಿಡಿಸಿ ಯನ್ನು ಸಂಪರ್ಕಿಸಿದಾಗ, ಈ ಸಮರ್ಥನೆಗೆ ಯಾವುದೇ ಆಧಾರವಿಲ್ಲ ಎಂದು ಅದು ತಿಳಿಸಿತು.


ನ್ಯೂ ಯಾರ್ಕ್ ಟೈಮ್ಸ್ ಆವೆರಿ ಅವರ ಆಕ್ರಮಣವನ್ನು ಈ ರೀತಿ ಟೀಕಿಸಿತ್ತು: "ಅಮೇರಿಕದಲ್ಲಿನ ಆಹಾರ ಪದಾರ್ಥಗಳ ಮಾರಾಟದಲ್ಲಿ ಸಾವಯವ ಆಹಾರ ಪದಾರ್ಥಗಳ ಮಾರಾಟವು ಕೇವಲ ಶೇಕಡಾ 1 ತೋರಿಸುತ್ತಿದ್ದರೂ ಸಹ, ರೂಢಿಯಲ್ಲಿನ ಆಹಾರ ತಯಾರಿಕೆ ಕೈಗಾರಿಕೆಯು ಚಿಂತಿತವಾಗಿದೆ ಎಂದು ಉತ್ತಮ ಹಣಕಾಸು ಸಂಶೋಧನಾ ಸಂಸ್ಥೆಯ ಸಾವಯವ ಬೇಸಾಯದ ಮೇಲಿನ ಆಕ್ರಮಣವು ಸೂಚಿಸುತ್ತಿದೆ."

ಹೊರ ಸಂಪರ್ಕ

  • ಜಾಗತಿಕ ಸಾವಯವ ಸಮಾವೇಶ: ವಿಷಯ ಮಂಡನೆಗೆ ಆಹ್ವಾನ;[೪] Archived 2016-09-21 ವೇಬ್ಯಾಕ್ ಮೆಷಿನ್ ನಲ್ಲಿ.
  • ಅಂತರರಾಷ್ಟ್ರೀಯ ಸಾವಯವ ಕೃಷಿ ಚಳವಳಿ ಒಕ್ಕೂಟ (ಐಫೋಮ್) ಪ್ರತಿ ಮೂರು ವರ್ಷಗಳಿಗೊಮ್ಮೆ ಆಯೋಜಿಸುವ ಜಾಗತಿಕ ಸಾವಯವ ಸಮಾವೇಶವು ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ. ನವದೆಹಲಿಯಲ್ಲಿ 2017ರ ನವೆಂಬರ್ 9ರಿಂದ 11ರವರೆಗೆ ಸಮಾವೇಶವನ್ನು ಸಂಘಟಿಸಲಾಗಿದ್ದು, ಸಾವಯವ ಕೃಷಿಕರು ತಮ್ಮ ಅನುಭವವನ್ನು ಜಾಗತಿಕ ಮಟ್ಟದಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ಇದನ್ನೂ ನೋಡಿರಿ

  • ಕೃಷಿ ಪರಿಸರ ವಿಜ್ಞಾನ
  • ಬಯೋಡೈನಾಮಿಕ್ ಕೃಷಿ
  • ಪ್ರಮಾಣಿತ ಸ್ವಾಭಾವಿಕ ಬೆಳೆವಣಿಗೆ
  • ಕೈಗಾರಿಕಾ ಕೃಷಿ
  • ಸಾವಯವ ತೋಟಗಾರಿಕೆ ಮತ್ತು ಜಮೀನಿನ ವಿಷಯಗಳ ಪಟ್ಟಿ
  • ಸಾವಯವ ಪೋಷಾಕು
  • ಸಾವಯವ ಆಹಾರ
  • ಸಾವಯವ ಮುಂದುವರಿಕೆ
  • ಶಾಶ್ವತಕೃಷಿ
  • ಕಾಲೋಚಿತ ಆಹಾರ
  • ಪುಷ್ಟಿಕರ ಕೃಷಿ
  • ಅರಣ್ಯ ಕೃಷಿ
  • ಸಾವಯವ ಬೇಸಾಯದ ಸಂಗ್ರಹ
  • ಆಸ್ಟ್ರೇಲಿಯನ್ ಸಾವಯವ ಒಕ್ಕಲು ಮತ್ತು ತೋಟಗಾರಿಕೆ
  • ಡಬ್ಲ್ಯುಡಬ್ಲ್ಯುಒಒಎಫ್

ಉಲ್ಲೇಖಗಳು

ಉಲ್ಲೇಖಗಳು


  • ವಾನ್ ಎಲ್ಸನ್, ಟಿ., (2000) ಯುರೋಪಿನಲ್ಲಿ ಸಾವಯವ ಕೃಷಿಗಾಗಿ ವೈವಿಧ್ಯತೆಯ ಜಾತಿಯ ಕೆಲಸ. ಕೃಷಿ, ಪರಿಸರ ವ್ಯವಸ್ಥೆಗಳು ಮತ್ತು ಪರಿಸರ 77: 101-109
  • ಹೋಲ್, ಡಿ.ಜಿ., ಪರ್ಕಿನ್ಸ್, ಎ.ಜೆ.,ವಿಲ್ಸನ್, ಜೆ.ಡಿ.ಅಲೆಕ್ಸಾಂಡರ್, ಐ.ಹೆಚ್., ಮತ್ತು ಇವನ್ಸ್, ಎ.ಡಿ.(2005) ಸಾವಯವ ಬೇಸಾಯದ ಪ್ರಯೋಜನ ಜೀವಿಯ ವೈವಿದ್ಯತೆಯಿದೆಯೇ? ಬಯೋಲಾಜಿಕಲ್ ಸಂರಕ್ಷಣೆ 122: 113-130.
  • ಗ್ಯಾಬ್‌ರಿಯಲ್, ಡಿ., ಮತ್ತು ಚಾರ್‌ಕ್ಟೆ, ಟಿ.(2007) ಸಾವಯವ ಬೇಸಾಯದಿಂದ ಕೀಟವು ಸಸ್ಯಗಳ ಪರಾಗಸ್ಪರ್ಶದ ಲಾಭಕತೆ. (2007) ಕೃಷಿ, ಪರಿಸರ ವ್ಯವಸ್ಥೆ ಮತ್ತು ಪರಿಸರ 118: 43-48
  • ಬೆಂಗ್ ಸ್ಟಾನ್, ಜೆ.,ಆನ್ ಸ್ಟ್ರಾಮ್, ಜೆ., ವಿಬುಲ್, ಎ.(2005 ಜೀವಿಗಳ ವೈವಿಧ್ಯತೆಯ ಮೇಲೆ ಸಾವಯವ ಕೃಷಿಯ ಪರಿಣಾಮಗಳು ಮತ್ತು ಬಾಹುಳ್ಯ:ಒಂದು ಮೆಟಾ -ವಿಶ್ಲೇಷಣೆ. ಪರಿಸರವಿಜ್ಞಾನಕ್ಕೆ ಅನ್ವಯಿಸಿದ ದಿನಚರಿ 42: 261-269
  • ಪೆರಿಂಗ್ಸ್ ಎಟ್ ಅಲ್. (2006)ಕೃಷಿ ಭೂದೃಶ್ಯ ವಿನ್ಯಾಸಗಳಲ್ಲಿ ಜೀವಿಗಳ ವೈವಿಧ್ಯತೆ :ಬಡ್ಡಿಯಲ್ಲಿ ನಷ್ಟವಿಲ್ಲದೆ ಸ್ವಾಭಾವಿಕ ಬಂಜವಾಳದ ಉಳಿತಾಯ.ಸಂರಕ್ಷಣೆಯ ಬಯೋಲಜಿ20: 263-264
  • ಬೀಚರ್ ಎನ್.ಎ. ಎಟ್ ಅಲ್. ಸಾವಯವ ಮತ್ತು ಸಾವಯವಯೇತರ ಒಚ್ಚಲು ಭೂಮಿಯಲ್ಲಿ ಪಕ್ಷಿಗಳ ಆಗ್ರೋಎಕಾಲಜಿ (2002). ಸಂರಕ್ಷಣೆಯ ಬಯೋಲಜಿ 6: 1621-1630
  • ಬ್ರೌನ್, ಆರ್.ಡಬ್ಲ್ಯೂ., 1999ಬಿ. ಮಿತಿ/ ಭೂಮಿಯ ಸಂಪರ್ಕಗಳು ಮತ್ತು ಚಿಕ್ಕ ಸಸ್ತನಿಗಳು. ಅನ್ವಯಿತ ಬಯೋಲಜಿಯ ಅಂಶಗಳು 54, 203–210.
  • ವಿಕ್ರಂಸಿಂಗ್,ಎಲ್.ಜಿ.,ಹ್ಯಾರೀಸ್, ಎಸ್.,ಜೋನ್ಸ್, ಜಿ.,ವಾಗನ್, ಎನ್., 2003 ಸಾವಯವ ಮತ್ತು ಸಂರಕ್ಷಣೆಯ ಭೂಮಿಗಳಲ್ಲಿ ಬಾವುಲಿಯ ಚಟುವಟಿಕೆ ಮತ್ತು ಸಜೀವಿಗಳ ಸಿರಿವಂತಿಕೆ. ಅನ್ಲಯಿಕ ಎಕಾಲಜಿಯ 40, 984–993 ದಿನಚರಿ
  • ವೀಲರ್ ಎಸ್.ಎ (2008) ಸಾವಯವ ಕೃಷಿಯ ಅಭಿಮುಖವಾಗಿ ಕೃಷಿ ಪ್ರವೃತ್ತಿಗಳ ನೋಟಗಳ ಪ್ರಭಾವವೇನು? ಪರಿಸರ ವಿಜ್ಞಾನದ ಅರ್ಥಶಾಸ್ತ್ರಗಳು 65:145-154
  • ಇಂಗ್ರಾಮ್ ಎಮ್.(2007) ಬಯೋಲಜಿ ಮತ್ತು ಮುಂದಕ್ಕೆ: ವಿಜ್ಞಾನದ ‘‘ಸ್ವಾಭಾವಿಕದ ಹಿಂದಕ್ಕೆ" ಸಂಯುಕ್ತ ರಾಷ್ಟ್ರಗಳಲ್ಲಿ ಬೇಸಾಯ. ಆನ್ನಲ್ಸ್‌ ಆಫ್ ದಿ ಅಸೋಸಿಯೇಷನ್ ಆಫ್ ಅಮೆರಿಕನ್ ಜಿಯೋಗ್ರಾಫರ್ಸ್‌, 97:298-312
  • ಫ್ಲಿಬಾಕ್ ಎ.,ಅಬ್ರೋಲ್ಸರ್ ಹೆಚ್.,ಗನ್ಸ್ಟ್ ಎಲ್., ಮತ್ತು ಮ್ಯಾಡರ್ ಪಿ. (2006) ಸಾವಯವ ಮತ್ತು ಸಂರಕ್ಷಣೆಯ ಬೇಸಾಯದಲ್ಲಿ ವರ್ಷಗಳ ನಂತರ ಸೂಚಿಸುವ ಮಣ್ಣಿನ ಸಾವಯವ ವಿಷಯ ಮತ್ತು ಬಯೋಲಾಜಿಕಲ್ ಮಣ್ಣಿನ ಗುಣಮಟ್ಟ. ಕೃಷಿ,ಪರಿಸರ ವ್ಯವಸ್ಥೆಗಳು ಮತ್ತು ಪರಿಸರ 118: 273-284
  • ವಿಲ್ಲರ್, ಹೆಲ್ಗಾ ಮತ್ತು ಕ್ಲಿಚರ್ (ಆವೃತ್ತಿಗಳು) (2009):ಪ್ರಪಂಚದ ಸಾವಯವ ಕೃಷಿ. ಅಂಕಿಅಂಶಗಳು ಮತ್ತು ನಿರ್ಗಮಿಸುವ ಪ್ರವೃತ್ತಿಗಳು 2009. ಐಎಫ್‌ಒಎಎಮ್,ಬೋನ್; ಫಿಬೆಲ್, ಫ್ರಿಕ್; ಐಟಿಸಿ, ಜಿನೆವಾ. ದಿ ಆರ್ಗ್ಯಾನಿಕ್ ವರ್ಲ್ಡ್ ಹೋಂಪೇಜ್ ನಲ್ಲಿ ಹೆಚ್ಚಿನ ಮಾಹಿತಿಗಾಗಿ ಲಭ್ಯವಿದೆ

ಹೆಚ್ಚಿನ ಓದಿಗಾಗಿ

  • ನಾಳಿನ ಚರ್ಚೆ:ಸಾವಯವ ಬೇಸಾಯ, ಜೆನೆಟಿಕ್ಸ್ ಮತ್ತು ಆಹಾರದ ಮುಂದಿನ ಕಾಲ. (2008). [೫] . ಆಕ್ಸ್‌ಫರ್ಡ್‌ ಯೂನಿವರ್ಸಿಟ್ ಪ್ರೆಸ್
  • ಆಧುನಿಕ ಕೃಷಿ ಉತ್ಪಾದಕತೆ, ರಾಷ್ಟ್ರೀಯ ಸಂಶೋಧನಾ ಸಲಹಾಸಮಿತಿಯಲ್ಲಿ ಬದಲಿ ಬೇಸಾಯದ ವಿಧಾನಗಳ ಪಾತ್ರ. (1989). ಬದಲಿ ಕೃಷಿ . ನ್ಯಾಷನಲ್ ಅಕಾಡೆಮಿಸ್ ಪ್ರೆಸ್
  • 0/}- ಕ್ಯಾಲಿಫೋರ್ನಿಯಾ ತರಭೇತುಗಳಲ್ಲಿ ನಾವಿನ್ಯವುಂಟು ಮಾಡುವ ಕಾರ್ಯಕ್ರಮ ಬಹುಮಟ್ಟಿಗೆ ವಲಸೆಗಾರ ಕೆಲಸಗಾರರು ಸಾವಯವ ಬೇಸಾಯದಲ್ಲಿ ಹೇಗೆ ಯಶಸ್ವಿಯಾಗುತ್ತಾರೆ.
  • ಜೂಲಿ ಗೂತ್ಮಾನ್, ಭೂಸಂಬಂಧಿತ ಕನಸುಗಳು: ಕ್ಯಾಲಿಫೋರ್ನಿಯಾದಲ್ಲಿ ಸಾವಯ ಬೇಸಾಯದ ಪಾರಾಡಾಕ್ಸ್ , ಬರ್ಕ್‌ಲಿ ಮತ್ತು ಲಂಡನ್: ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 2004, ಐಎಸ್‌ಬಿಎನ್ 978-0-520-24094-೦
  • ಅಲೆಕ್ಸ್ ಆವೆರಿ (2006)' ಸಾವಯವ ಆಹಾರದ ಬಗೆಗಿನ ಸತ್ಯತೆ ವಾಲ್ಯೂಮ್ 1, ಸಿರೀಸ್ 1)ಹೆಂಡರ್‌ಸನ್ ಸಂಪರ್ಕಗಳು ಎಲ್.ಎಲ್.ಸಿ. ಐಎಸ್‌ಬಿಎನ್ 0978895207
  • ಲಾಂಪ್‌ಕಿನ್ ಮತ್ತು ಪಾಡಲ್. 1994). ಸಾವಯವ ಬೇಸಾಯದ ಆರ್ಥಿಕತೆಗಳು: ಅಂತರಾಷ್ಟ್ರೀಯ ಪರಿಪ್ರೇಕ್ಷೆ ಗಿಲ್ಡ್ ಫೋರ್ಡ್: ಅಂತರಾಷ್ಟ್ರೀಯ. ಐಎಸ್‌ಬಿಎನ್ 0-85198-911-ಎಕ್ಸ್
  • Ableman, Michael (1993). From the Good Earth: A Celebration of Growing Food Around the World. HNA Books. ISBN 0810925176. ;
  • Ableman, Michael (1998). On Good Land: The Autobiography of an Urban Farm. San Francisco: Chronicle Books. ISBN 0811819213.
  • ಒಇಸಿಡಿ. (2003). (0}ಸಾವಯವ ಕೃಷಿ: ಸಮರ್ಥನೀಯ, ಮಾರುಕಟ್ಟೆಗಳು, ಮತ್ತು ನಿಯಮಗಳು. ಸಿಎಬಿಐ ಅಂತರರಾಷ್ಟ್ರೀಯ. ಉಚಿತ ಪೂರ್ಣ-ಪಠ್ಯ.

ಬಾಹ್ಯ ಲಿಂಕ್‌ಗಳು

Tags:

ಸಾವಯವ ಬೇಸಾಯ ಇತಿಹಾಸಸಾವಯವ ಬೇಸಾಯ ಮಾನದಂಡಸಾವಯವ ಬೇಸಾಯ ಆರ್ಥಿಕತೆಸಾವಯವ ಬೇಸಾಯ ಪ್ರೇರಣೆಗಳುಸಾವಯವ ಬೇಸಾಯ ಮಾರಾಟ ಮತ್ತು ಮಾರುಕಟ್ಟೆಯ ಚಟುವಟಿಕೆಸಾವಯವ ಬೇಸಾಯ ಸಾಮರ್ಥ್ಯ ವರ್ಧನೆಸಾವಯವ ಬೇಸಾಯ ವಿವಾದಸಾವಯವ ಬೇಸಾಯ ಹೊರ ಸಂಪರ್ಕಸಾವಯವ ಬೇಸಾಯ ಇದನ್ನೂ ನೋಡಿರಿಸಾವಯವ ಬೇಸಾಯ ಉಲ್ಲೇಖಗಳುಸಾವಯವ ಬೇಸಾಯ ಉಲ್ಲೇಖಗಳುಸಾವಯವ ಬೇಸಾಯ ಹೆಚ್ಚಿನ ಓದಿಗಾಗಿಸಾವಯವ ಬೇಸಾಯ ಬಾಹ್ಯ ಲಿಂಕ್‌ಗಳುಸಾವಯವ ಬೇಸಾಯಜಾನುವಾರುತಳಿವಿಜ್ಞಾನಬೇಸಾಯರಾಸಾಯನಿಕ ಗೊಬ್ಬರವ್ಯವಸಾಯ,

🔥 Trending searches on Wiki ಕನ್ನಡ:

ಪಂಚಾಂಗಕನ್ನಡದಲ್ಲಿ ಸಾಂಗತ್ಯಕಾವ್ಯಭಾರತದ ಬುಡಕಟ್ಟು ಜನಾಂಗಗಳುಎ.ಎನ್.ಮೂರ್ತಿರಾವ್ಕನ್ನಡದಲ್ಲಿ ವಚನ ಸಾಹಿತ್ಯತತ್ತ್ವಶಾಸ್ತ್ರಜಾತ್ರೆಭೂತಾರಾಧನೆಕರ್ನಾಟಕದ ಹಬ್ಬಗಳುರಗಳೆಹೊಯ್ಸಳ ವಾಸ್ತುಶಿಲ್ಪಮನಮೋಹನ್ ಸಿಂಗ್ಶ್ರೀ ರಾಘವೇಂದ್ರ ಸ್ವಾಮಿಗಳುಪರೀಕ್ಷೆಎರಡನೇ ಮಹಾಯುದ್ಧಅರ್ಥಶಾಸ್ತ್ರಭಾರತದ ವಿಶ್ವ ಪರಂಪರೆಯ ತಾಣಗಳುನಾರಾಯಣಿ ಸೇನಾಕೊಡಗುಕೋಟ ಶ್ರೀನಿವಾಸ ಪೂಜಾರಿವಲ್ಲಭ್‌ಭಾಯಿ ಪಟೇಲ್ಜಾಗತಿಕ ತಾಪಮಾನಜಾಗತೀಕರಣಮಣ್ಣುಹರಪ್ಪಭಾರತದ ರಾಷ್ಟ್ರಗೀತೆಹಸಿರುಅಡೋಲ್ಫ್ ಹಿಟ್ಲರ್ಗೋವಿಂದ ಪೈಕಲಬುರಗಿಸತ್ಯ (ಕನ್ನಡ ಧಾರಾವಾಹಿ)ಬೆಳಗಾವಿವರ್ಗೀಯ ವ್ಯಂಜನಭ್ರಷ್ಟಾಚಾರಜನಪದ ಕಲೆಗಳುಶಾಲೆಪ್ರಜಾಪ್ರಭುತ್ವಅ.ನ.ಕೃಷ್ಣರಾಯಬಾಗಲಕೋಟೆಮುತ್ತುಗಳುಸ್ಟಾರ್‌ಬಕ್ಸ್‌‌ಮಾನವ ಸಂಪನ್ಮೂಲ ನಿರ್ವಹಣೆಬಾದಾಮಿ ಶಾಸನಮೊದಲನೇ ಅಮೋಘವರ್ಷಶಬ್ದಬಾಲ್ಯ ವಿವಾಹಹುರುಳಿಕೃಷ್ಣರಾಜಸಾಗರಚದುರಂಗಭೂಮಿದೀಪಾವಳಿಭಾರತದ ಸಂವಿಧಾನ ರಚನಾ ಸಭೆಬಾಲಕಾರ್ಮಿಕತಿಗಳಾರಿ ಲಿಪಿಯೋನಿಹಸ್ತಪ್ರತಿಬೆಂಕಿಮಾಧ್ಯಮಸುಭಾಷ್ ಚಂದ್ರ ಬೋಸ್ಇನ್ಸ್ಟಾಗ್ರಾಮ್ಭಾರತದ ವಿಜ್ಞಾನಿಗಳುವ್ಯವಸಾಯರಾಮವಚನ ಸಾಹಿತ್ಯಜ್ಯೋತಿಬಾ ಫುಲೆಒಡೆಯರ್ನೈಸರ್ಗಿಕ ಸಂಪನ್ಮೂಲಈರುಳ್ಳಿಕುಟುಂಬಪೊನ್ನವಿಭಕ್ತಿ ಪ್ರತ್ಯಯಗಳುಪೂರ್ಣಚಂದ್ರ ತೇಜಸ್ವಿಪ್ಯಾರಾಸಿಟಮಾಲ್ಒಡೆಯರ ಕಾಲದ ಕನ್ನಡ ಸಾಹಿತ್ಯಶ್ರೀ ರಾಮಾಯಣ ದರ್ಶನಂಇಮ್ಮಡಿ ಪುಲಿಕೇಶಿಭಾರತೀಯ ಭೂಸೇನೆವಿರೂಪಾಕ್ಷ ದೇವಾಲಯಬೇವು🡆 More