ಬೈಲಕುಪ್ಪೆ

ಬೈಲಕುಪ್ಪೆ ಯು ಲಗ್‌ಸಮ್‌‌ ಸ್ಯಾಂಡಪ್ಲಿಂಗ್‌‌ (1961ರಲ್ಲಿ ಸ್ಥಾಪಿಸಲ್ಪಟ್ಟಿತು) ಮತ್ತು ಡಿಕ್ಯಿ ಲಾರ್ಸೋ (1969ರಲ್ಲಿ ಸ್ಥಾಪಿಸಲ್ಪಟ್ಟಿತು) ಎಂದು ಕರೆಯಲ್ಪಡುವ, ಟಿಬೆಟ್‌‌ ಜನರಿಗೆ ಸೇರಿದ ಎರಡು ಅಕ್ಕಪಕ್ಕದ ನಿರಾಶ್ರಿತ ವಸಾಹತು ಶಿಬಿರಗಳ ತಾಣವಾಗಿದೆ; ಅಷ್ಟೇ ಅಲ್ಲ ಟಿಬೆಟ್ಟಿನ ಬೌದ್ಧಮತದ ಹಲವಾರು ಸನ್ಯಾಸಿ ಮಂದಿರಗಳಿಗೆ ಇದು ನೆಲೆಯಾಗಿದೆ.

ಭಾರತದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಜಿಲ್ಲೆಪಶ್ಚಿಮ ಭಾಗದಲ್ಲಿ ಈ ಪ್ರದೇಶವು ನೆಲೆಗೊಂಡಿದೆ. ಅವಳಿ ಪಟ್ಟಣವಾದ ಕುಶಾಲನಗರವು ಬೈಲಕುಪ್ಪೆಯಿಂದ 6 ಕಿಲೋಮೀಟರುಗಳಷ್ಟು ದೂರದಲ್ಲಿ ನೆಲೆಗೊಂಡಿದೆ.

ಬೈಲಕುಪ್ಪೆ
ಬೈಲಕುಪ್ಪೆ
ಪಟ್ಟಣ
Population
 (2001)
 • Total೨೧,೫೧೨ (all)
ಬೈಲಕುಪ್ಪೆ
ಸುವರ್ಣ ದೇವಾಲಯಕ್ಕಿರುವ ಪ್ರವೇಶದ್ವಾರ

ಜನಸಂಖ್ಯೆ

1998ರಲ್ಲಿ ಕೇಂದ್ರೀಯ ಟಿಬೆಟ್ಟಿನ ಆಡಳಿತದ [ಯೋಜನಾ ಆಯೋಗ][೧] ವತಿಯಿಂದ ನಡೆಸಲ್ಪಟ್ಟ ಜನಸಂಖ್ಯಾಶಾಸ್ತ್ರದ ಸಮೀಕ್ಷೆಯೊಂದರ ಅನುಸಾರ, {ಯೋಜನಾ ಆಯೋಗ. 2004. ದೇಶಭ್ರಷ್ಟತೆಗೀಡಾಗಿರುವ ಟಿಬೆಟಿಯನ್ನರ ಸಮುದಾಯ. ಜನಸಂಖ್ಯಾಶಾಸ್ತ್ರದ ಮತ್ತು ಸಮಾಜೋ-ಆರ್ಥಿಕ ಸಮಸ್ಯೆಗಳು 1998 - 2001. ಧರ್ಮಶಾಲಾ: ಯೋಜನಾ ಆಯೋಗದ ಕಚೇರಿ} ಆ ಸಮಯದಲ್ಲಿ ಎರಡು ವಸಾಹತು ಶಿಬಿರಗಳಲ್ಲಿದ್ದ ನಿರಾಶ್ರಿತರ ಸಂಖ್ಯೆಯು 10,727ರಷ್ಟಕ್ಕೆ ಮುಟ್ಟಿತ್ತು. ಆದಾಗ್ಯೂ, ಸನ್ಯಾಸಿಗಳ ಮಂದಿರಗಳಲ್ಲಿದ್ದ ಟಿಬೆಟಿಯನ್ನರ ಜನಸಂಖ್ಯೆಯನ್ನು ಈ ಅಂಕಿ-ಅಂಶಗಳು ಒಳಗೊಂಡಿದ್ದವೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ. 1959ರ ಭಾರತದಲ್ಲಿ ಮರುನೆಲೆಗೊಳ್ಳಲು ಬಂದ ಟಿಬೆಟ್ಟಿನ ಕೆಲವೊಂದು ನಿರಾಶ್ರಿತರಿಗೆ ಸ್ಥಳಾವಕಾಶ ಮಾಡಿಕೊಡಲೆಂದು, ರಾಜ್ಯ ಸರ್ಕಾರದ ವತಿಯಿಂದ ಗುತ್ತಿಗೆ ನೀಡಲ್ಪಟ್ಟ ಜಮೀನಿನಲ್ಲಿ ಈ ವಸಾಹತು ಶಿಬಿರಗಳು ಸ್ಥಾಪಿಸಲ್ಪಟ್ಟವು. ಪರಸ್ಪರ ನಿಕಟವಾಗಿರುವ ಅನೇಕ ವ್ಯವಸಾಯದ ವಸಾಹತುಗಳು / ಸಣ್ಣ ಶಿಬಿರಗಳನ್ನು ಬೈಲಕುಪ್ಪೆಯು ಒಳಗೊಂಡಿದೆ, ಮತ್ತು ಟಿಬೆಟಿಯನ್ನರ ಬೌದ್ಧಮತದ ಎಲ್ಲಾ ಪ್ರಮುಖವಾದ ಸಂಪ್ರದಾಯಗಳಲ್ಲಿರುವ ಹಲವಾರು ಸನ್ಯಾಸಿ ಮಂದಿರಗಳು, ಸನ್ಯಾಸಿನಿಯರ ಮಠಗಳು ಮತ್ತು ದೇವಾಲಯಗಳನ್ನು ಇದು ಹೊಂದಿದೆ. ಅವುಗಳ ಪೈಕಿ ಅತ್ಯಂತ ಗಮನಾರ್ಹವಾದವುಗಳೆಂದರೆ, ಬೃಹತ್‌‌ ಶೈಕ್ಷಣಿಕ ಮಠೀಯ ಸಂಸ್ಥೆಯಾದ ಸೆರಾ, ಸಣ್ಣ ಗಾತ್ರದ ತಾಶಿಲುನ್‌ಪೊ ಸನ್ಯಾಸಿಗಳ ಮಂದಿರ (ಎರಡೂ ಗೆಲುಕ್ಪಾ ಸಂಪ್ರದಾಯದಲ್ಲಿವೆ) ಮತ್ತು ನ್ಯಾಮ್‌ಡ್ರೋಲಿಂಗ್‌‌ ಸನ್ಯಾಸಿಗಳ ಮಂದಿರ (ನೈಯಿಂಗ್ಮಾ ಸಂಪ್ರದಾಯದಲ್ಲಿದೆ). ಇಲ್ಲಿನ ಭಾರತೀಯರು ಮತ್ತು ಟಿಬೆಟಿಯನ್ನರ ಜನಸಂಖ್ಯೆಯು ಈಗ 50000ವನ್ನು ದಾಟಿದೆ ಮತ್ತು ಬೈಲಕುಪ್ಪೆಯು ಒಂದು ಸಣ್ಣ ಹಳ್ಳಿಯಿಂದ ಒಂದು ಚೊಕ್ಕವಾಗಿರುವ ಪಟ್ಟಣದ ಸ್ವರೂಪಕ್ಕೆ ನಿಧಾನವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಪಟ್ಟಣದ ಹವಾಮಾನವು ಅತ್ಯಂತ ಉತ್ತಮವಾಗಿರುವುದರಿಂದ ಇಲ್ಲಿ ನೀವು ಅದನ್ನು ಬಹಳಷ್ಟು ಆನಂದಿಸಬಹುದು. ಈ ಪಟ್ಟಣಕ್ಕೆ ಉತ್ತಮವಾದ ರೀತಿಯಲ್ಲಿ ರಸ್ತೆಗಳ ಸಂಪರ್ಕವಿದೆ ಮತ್ತು ಇದು ಸರಿಸುಮಾರಾಗಿ ಕಾವೇರಿ ನದಿಯ ದಂಡೆಗಳ ಮೇಲೆ ನೆಲೆಗೊಂಡಿದೆ. ಬೌದ್ಧಮತದ ಮುಂದುವರಿದ ಆಚರಣೆಗಳು ಅಥವಾ ಪರಿಪಾಠಗಳಿಗೆ ಸಂಬಂಧಿಸಿದ ಬೌದ್ಧಮತದ ಅನೇಕ ವಿಶ್ವವಿದ್ಯಾಲಯಗಳನ್ನು ಬೈಲಕುಪ್ಪೆಯು ಹೊಂದಿದೆ. ಸೆರಾಜೇ, ಸೆರಾಮೇ, ನಳಂದಾ ಇತ್ಯಾದಿಗಳು ಅವುಗಳ ಪೈಕಿ ಕೆಲವಾಗಿವೆ.

ಸೌಲಭ್ಯಗಳು

ಬೈಲಕುಪ್ಪೆಯು ಒಂದು ಸಣ್ಣ ಪಟ್ಟಣವಾಗಿದೆ. ಇದು ಆರಕ್ಷಕ ಠಾಣೆ, ವಾಣಿಜ್ಯ ಬ್ಯಾಂಕುಗಳು, ದೂರವಾಣಿ ವಿನಿಮಯ ಕೇಂದ್ರ, ಅಂಚೆ ಕಚೇರಿ, ವಸತಿಗೃಹಗಳು ಮತ್ತು ಅತ್ಯಂತ ಮುಖ್ಯವಾಗಿ, ಸ್ವರ್ಗಸದೃಶವಾಗಿರುವ ಒಂದು ಹವಾಮಾನವನ್ನು ಹೊಂದಿದೆ. ಬಸ್ಸುಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳಿಂದ ಸಾರಿಗೆ ಸೌಲಭ್ಯಗಳು ಮುಖ್ಯವಾಗಿ ದೊರೆಯುತ್ತವೆ.

ಇಲ್ಲಿಗೆ ತಲುಪುವುದು ಹೇಗೆ?

ರಾಜ್ಯ ಹೆದ್ದಾರಿ ಸಂಖ್ಯೆ 88ರ ಮೇಲೆ ಬೈಲಕುಪ್ಪೆಯು ನೆಲೆಗೊಂಡಿದೆ. ಅತ್ಯುತ್ಕೃಷ್ಟ ಗುಣಮಟ್ಟವನ್ನು ಹೊಂದಿರುವ ರಸ್ತೆಗಳಿಂದ ಇದು ಅತ್ಯುತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ. ಮೈಸೂರು, ಬೆಂಗಳೂರು, ಮಂಗಳೂರು, ಚೆನ್ನೈ, ಪಣಜಿ ಇತ್ಯಾದಿಗಳಂಥ ಪ್ರಮುಖ ನಗರ-ಪಟ್ಟಣಗಳಿಂದ ಇಲ್ಲಿಗೆ ಬಸ್ಸಿನ ಸೌಲಭ್ಯಗಳು ಲಭ್ಯವಿವೆ. ಬೈಲಕುಪ್ಪೆ ಮತ್ತು ಇತರ ನಗರಗಳ ನಡುವೆ ಕಿಲೋಮೀಟರುಗಳಲ್ಲಿ ಇರುವ ಅಂತರವನ್ನು ಈ ಮುಂದೆ ನೀಡಲಾಗಿದೆ: ಮೈಸೂರು (82), ಬೆಂಗಳೂರು (220), ಮಂಗಳೂರು (172), ಮಂಡ್ಯ (122), ಚೆನ್ನೈ (585), ಹಾಸನ (80), ಮಡಿಕೇರಿ (36).

ಇಲ್ಲಿ ನೋಡಲು ಏನೇನಿದೆ?

ನ್ಯಾಮ್ರೋಡೊಲಿಂಗ್‌ ಸನ್ಯಾಸಿಗಳ ಮಂದಿರವು (ಸುವರ್ಣ ದೇವಾಲಯ) ಈ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರಿನಿಂದ ಮಡಿಕೇರಿಯ ಕಡೆಗೆ ಹೋಗುವಾಗ, ಬೈಲಕುಪ್ಪೆಯಲ್ಲಿನ ಮೊದಲ ಶಿಬಿರ ರಸ್ತೆಗೆ ಎಡಕ್ಕೆ ತಿರುಗಬೇಕಾಗುತ್ತದೆ. ಮತ್ತೆ 4 ಕಿಲೋಮೀಟರುಗಳಷ್ಟು ಸಾಗಿದಾಗ ನಿಮಗೆ ಈ ತಾಣವು ಸಿಗುತ್ತದೆ. ಪಟ್ಟಣದಲ್ಲಿನ ತಿರುಮಲಾಪುರ ರಸ್ತೆಯಲ್ಲಿ ಸುಮಾರು ಒಂದು ಮೈಲು ದೂರದವರೆಗೆ ನೀವು ಸಾಗಿದರೆ, ಕರ್ನಾಟಕದಲ್ಲಿನ ಅತಿದೊಡ್ಡ ಸರೋವರಗಳ ಪೈಕಿ ಒಂದೆನಿಸಿರುವ ಇಂಗಳಕೆರೆಯನ್ನು (ಇಂಗಳಗೆರೆ) ನೀವು ಕಾಣಬಹುದು. ಸರೋವರಕ್ಕೆ ಸಾಗುವೆಡೆಗಿನ ಮಾರ್ಗದಲ್ಲಿ ಕಂಡುಬರುವ ಹಸಿರು ಅರಣ್ಯವು ನಿಮ್ಮ ಮನಸ್ಸನ್ನು ಆಹ್ಲಾದಕರವನ್ನಾಗಿಸುತ್ತದೆ. ಸರೋವರದ ಸಮೀಪದಲ್ಲಿ ಹಳೆಯದಾದ ಕಲ್ಲಿನ ಶಿಲ್ಪಕೃತಿಯೊಂದಿದ್ದು, ಅದರಲ್ಲಿ ಸುಂದರ ಕೆತ್ತನೆಗಳಿರುವುದನ್ನು ನೀವು ಕಾಣಬಹುದು. ಈ ಸರೋವರದ ನಂತರ, ಪರ್ವತದ (ರಂಗಸ್ವಾಮಿ ಬೆಟ್ಟ) ತುದಿಯ ಮೇಲೆ ರಂಗಸ್ವಾಮಿ ದೇವಾಲಯವಿರುವುದನ್ನು ಕಾಣಬಹುದು. ಗಣಪತಿ ದೇವಾಲಯವು ಹೆದ್ದಾರಿಯ ಸೌಂದರ್ಯಕ್ಕೆ ಮೆರುಗನ್ನು ನೀಡುತ್ತದೆ. ಬೌದ್ಧಮತದ ಸನ್ಯಾಸಿಗಳಿಗಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಬೌದ್ಧಮತೀಯ ಸನ್ಯಾಸಿ ಮಂದಿರಗಳು ಮತ್ತು ಶಾಲೆಗಳು ಇಲ್ಲಿ ಕಂಡುಬರುತ್ತವೆ.

ಬೈಲಕುಪ್ಪೆ 
ಸುವರ್ಣ ದೇವಾಲಯದ ಒಳಗಡೆಯ ಚಿತ್ರಣ

ಬಾಹ್ಯ ಕೊಂಡಿಗಳು


Tags:

ಬೈಲಕುಪ್ಪೆ ಜನಸಂಖ್ಯೆಬೈಲಕುಪ್ಪೆ ಸೌಲಭ್ಯಗಳುಬೈಲಕುಪ್ಪೆ ಇಲ್ಲಿಗೆ ತಲುಪುವುದು ಹೇಗೆ?ಬೈಲಕುಪ್ಪೆ ಇಲ್ಲಿ ನೋಡಲು ಏನೇನಿದೆ?ಬೈಲಕುಪ್ಪೆ ಬಾಹ್ಯ ಕೊಂಡಿಗಳುಬೈಲಕುಪ್ಪೆಕರ್ನಾಟಕಟಿಬೆಟ್ಪಶ್ಚಿಮಮೈಸೂರು

🔥 Trending searches on Wiki ಕನ್ನಡ:

ಭೋವಿಭಾರತದ ವಿಜ್ಞಾನಿಗಳುಭಾರತದಲ್ಲಿನ ಚುನಾವಣೆಗಳುಭಾರತದಲ್ಲಿ ಕೃಷಿನಿರ್ವಹಣೆ ಪರಿಚಯಮೊರಾರ್ಜಿ ದೇಸಾಯಿಕಾಲ್ಪನಿಕ ಕಥೆಶಿವನ ಸಮುದ್ರ ಜಲಪಾತಕರ್ನಾಟಕದ ಮಹಾನಗರಪಾಲಿಕೆಗಳುಜ್ಞಾನಪೀಠ ಪ್ರಶಸ್ತಿಅವಯವದೆಹಲಿಯ ಇತಿಹಾಸಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಬೆಳವಲರಾಷ್ಟ್ರಕೂಟದೇಶಗಳ ವಿಸ್ತೀರ್ಣ ಪಟ್ಟಿಗಸಗಸೆ ಹಣ್ಣಿನ ಮರಟಿ.ಪಿ.ಕೈಲಾಸಂದಾಸ ಸಾಹಿತ್ಯಹೊಂಗೆ ಮರಕಪ್ಪೆ ಅರಭಟ್ಟಕರ್ನಾಟಕದ ವಾಸ್ತುಶಿಲ್ಪಧಾರವಾಡಕಾವೇರಿ ನದಿಮಾರಾಟ ಪ್ರಕ್ರಿಯೆಎಕರೆಡಿ.ಎಸ್.ಕರ್ಕಿಆಗುಂಬೆದೇವತಾರ್ಚನ ವಿಧಿಚಿಕ್ಕಮಗಳೂರುಹೊಯ್ಸಳ ವಿಷ್ಣುವರ್ಧನಕೆ ವಿ ನಾರಾಯಣಪ್ರಜಾಪ್ರಭುತ್ವದ ಲಕ್ಷಣಗಳುನಾಗರೀಕತೆವಂದೇ ಮಾತರಮ್ಭಾರತದ ಚಲನಚಿತ್ರೋದ್ಯಮರಾಮನಗರಕೊರೋನಾವೈರಸ್ ಕಾಯಿಲೆ ೨೦೧೯ಕರ್ನಾಟಕ ಹೈ ಕೋರ್ಟ್ರಾಜಾ ರವಿ ವರ್ಮಕರ್ನಾಟಕದ ಹಬ್ಬಗಳುನೀತಿ ಆಯೋಗಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮೇರಿ ಕ್ಯೂರಿಭಾರತದ ಉಪ ರಾಷ್ಟ್ರಪತಿತಿರುಗುಬಾಣಭಾರತದ ಪ್ರಧಾನ ಮಂತ್ರಿಕನ್ನಡದಲ್ಲಿ ಸಣ್ಣ ಕಥೆಗಳುಧರ್ಮಸ್ಥಳಚಾಣಕ್ಯಪರಿಸರ ವ್ಯವಸ್ಥೆಸಿಂಧನೂರುಕ್ರಿಯಾಪದಜಿ.ಪಿ.ರಾಜರತ್ನಂಜಗ್ಗೇಶ್ಕಾನೂನುಹೊಯ್ಸಳೇಶ್ವರ ದೇವಸ್ಥಾನಅಣ್ಣಯ್ಯ (ಚಲನಚಿತ್ರ)ಎಚ್‌.ಐ.ವಿ.ಹೈದರಾಲಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಊಳಿಗಮಾನ ಪದ್ಧತಿಭಾರತದ ಮುಖ್ಯಮಂತ್ರಿಗಳುಹಾನಗಲ್ಪ್ರಬಂಧಕೈಗಾರಿಕೆಗಳುವೈದೇಹಿಲಿನಕ್ಸ್ಆದಿ ಶಂಕರರು ಮತ್ತು ಅದ್ವೈತಲಕ್ಷ್ಮಿಭಕ್ತಿ ಚಳುವಳಿಹಲ್ಮಿಡಿ ಶಾಸನಸಿಂಹಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದುರ್ಯೋಧನಸಾಹಿತ್ಯಯೋನಿ🡆 More