ಗುಮ್ಮಟ

ಗುಮ್ಮಟ ಎಂದರೆ ಗೋಳಾಕೃತಿಯ, ಶಂಕ್ವಾಕೃತಿಯ ಅಥವಾ ಅಂಡಾಕಾರದ ಮೇಲ್ಛಾವಣಿ (ಡೋಂ).

ಈ ಆಕೃತಿಯ ಗುಮ್ಮಟಗಳನ್ನು ರಚಿಸಬೇಕಾದರೆ ಇವಕ್ಕೆ ಸರಿಹೊಂದುವ ನಕ್ಷೆಯಲ್ಲಿ ಗೋಡೆಯನ್ನು ಸಂವೃತಿಸುವಂತೆ ಕಟ್ಟಿ ಅದರ ಮೇಲೆ ಕಮಾನುರೂಪದ ಗೋಡೆಗಳನ್ನು ಆವರಿಸಿರುವಂತೆ ಎಬ್ಬಿಸಿ ಪೂರೈಸಬೇಕಾಗುತ್ತದೆ. ಹೀಗೆ ಸುತ್ತಲೂ ಆವರಿಸುವ ಗುಮ್ಮಟ ಬುಡದಲ್ಲಿ ಸಾಕಷ್ಟು ದಪ್ಪವಿದ್ದು ಕ್ರಮೇಣ ಕಮ್ಮಿಯಾಗುತ್ತ ತುದಿಯಲ್ಲಿ, ಎಂದರೆ ಗುಮ್ಮಟದ ನೆತ್ತಿಯ ಮಟ್ಟದಲ್ಲಿ ಕನಿಷ್ಠವಾಗಿರುತ್ತದೆ. ಚೌಕಾಕಾರದ ನಕ್ಷೆಯ ಕೋಣೆಗೆ ಗೋಳಾಕಾರದ ಗುಮ್ಮಟವನ್ನೊದಗಿಸಬೇಕಾದಾಗ ಆ ಕೋಣೆಯ ಗೋಡೆಗಳ ಮೇಲ್ಭಾಗವನ್ನು ಚೌಕದಿಂದ ಅಷ್ಟಕೋನಾಕೃತಿಗೂ, ಕ್ರಮೇಣ ವೃತ್ತಾಕೃತಿಗೂ ಮಾರ್ಪಡಿಸಬೇಕಾಗುತ್ತದೆ. ಹೀಗೆಯೇ ಇತರ ಆಕಾರದ ಗುಮ್ಮಟಗಳಿಗೋಸ್ಕರ ಅವುಗಳ ಕೆಳಭಾಗದ ಕೋನೆಗಳ ನಕ್ಷೆಯನ್ನು ಅನುಸಾರವಾಗಿ ಬದಲಾಯಿಸಬೇಕಾಗುತ್ತದೆ.

ಗುಮ್ಮಟ
ತಾಜ್ ಮಹಲ್

ಇತಿಹಾಸ

ಗುಮ್ಮಟಗಳ ಬಳಕೆ ರೋಮನರ ಕಾಲದಲ್ಲಿ ಪ್ರಾರಂಭವಾಯಿತೆನ್ನಬಹುದು. ಪ್ರಾಚೀನ ಗುಮ್ಮಟಗಳು ರೋಮ್ ಸಾಮ್ರಾಜ್ಯದಲ್ಲಿ ಅಲ್ಲದೆ ಅದೇ ಕಾಲದ ಇತರ ರಾಜ್ಯಗಳಲ್ಲಿ ಕಂಡುಬರುವುದಿಲ್ಲ. ಭಾರತದಲ್ಲಿ ಗುಮ್ಮಟಾಕಾರದ ಸ್ತೂಪಗಳೇ ಮೊದಲಾದ ಕಟ್ಟಡಗಳು ಬೌದ್ಧಕಾಲದಲ್ಲಿ ರಚಿತವಾಗಿದ್ದರೂ ಇವೆಲ್ಲ ಘನ ಗೋಳಗಳಾಗಿದ್ದು ಟೊಳ್ಳು ಗೋಳಾಕಾರದ ಗುಮ್ಮಟಗಳೆಲ್ಲವೂ ರೋಮನರ ಕಾಲದಲ್ಲಿಯೇ ಜನಿತವಾದವು. ವೃತ್ತಕಮಾನುಗಳು ಆರಂಭವಾದದ್ದು ರೋಮನರ ಕಾಲದಲ್ಲಿ ಎಂಬುದು ಖಚಿತವಾಗಿರುವುದರಿಂದ ಕಮಾನಿನ ಆಧಾರದ ಮೇಲೆಯೇ ಗುಮ್ಮಟಗಳು ಜನನವಾದುವೆಂದು ಊಹಿಸಬಹುದು. ರೋಮನರ ಕಾಲದಿಂದೀಚೆಗೆ ರಚಿತವಾದ ಗುಮ್ಮಟಗಳೆಲ್ಲವೂ ಒಂದು ವಿಧದಲ್ಲಿ ಅಲ್ಲದಿದ್ದರೆ ಇನ್ನೊಂದು ವಿಧದಲ್ಲಿ ರೋಮನರ ಆದಿ ಗುಮ್ಮಟಗಳ ಅನುಕರಣಗಳೇ. ಯವನರು ಕೂಡ ಕ್ರಿಸ್ತಶಕದ ತರುಣದಲ್ಲಿ ರೋಮನ್ ಗುಮ್ಮಟಗಳಿಂದ ಪ್ರಭಾವಿತರಾಗಿ ಅವುಗಳ ಆಕೃತಿಯಲ್ಲಿ ಸ್ವಲ್ಪ ಮಾರ್ಪಡಿಸಿಕೊಂಡು ಯವನ ಗುಮ್ಮಟಗಳನ್ನು ತಮ್ಮ ಸಾಮ್ರಾಜ್ಯಗಳ ಎಲ್ಲ ಕಡೆಗಳಲ್ಲಿಯೂ ಹರಡಿದರು. ಯವನರು ಕಾಲಕ್ರಮೇಣ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದಮೇಲೆ ಯವನ ಗುಮ್ಮಟಗಳು ಇಲ್ಲಿಯೂ ರಚಿಸಲ್ಪಟ್ಟವು. ಬಹಮನಿ ರಾಜ್ಯದೊಂದಿಗೆ ಶುರುವಾದ ಗುಮ್ಮಟಗಳು ಕ್ರಮೇಣ ಹೆಚ್ಚಿ ಮೊಗಲರ ಕಾಲದ ವೇಳೆಗೆ ಅನೇಕ ರೀತಿಯಲ್ಲಿ ಅರಮನೆಗಳು, ಗೋರಿಗಳು, ಮಸೀದಿಗಳು, ಪ್ರವೇಶದ್ವಾರಗಳು ಮುಂತಾದವುಗಳ ಛಾವಣಿಯಲ್ಲಿ ಹೇರಳವಾಗಿ ಪ್ರಯೋಗಿಸಲ್ಪಟ್ಟಿವೆ. ದಕ್ಷಿಣ ಭಾರತದಲ್ಲಿ ಬಿಜಾಪುರದ ಗೋಲ್‍ಗುಂಬಜ್ ಎಂಬ ಅದಿಲ್ ಷಾಹಿ ಗುಮ್ಮಟ ಪ್ರಸಿದ್ಧವಾದುದು. ಆಧುನಿಕ ವಾಸ್ತುಶಿಲ್ಪದಲ್ಲಿ ಗುಮ್ಮಟಗಳ ಬಳಕೆ ಕ್ಷಯಿಸಿದೆ ಎನ್ನಬಹುದು.

ಗುಮ್ಮಟ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕಾರ್ಮಿಕರ ದಿನಾಚರಣೆಹರಿಹರ (ಕವಿ)ನಿರುದ್ಯೋಗಜಿ.ಪಿ.ರಾಜರತ್ನಂವಿಕ್ರಮಾರ್ಜುನ ವಿಜಯಗೋಲ ಗುಮ್ಮಟಬರಗೂರು ರಾಮಚಂದ್ರಪ್ಪಇಮ್ಮಡಿ ಪುಲಿಕೇಶಿಹೆಚ್.ಡಿ.ಕುಮಾರಸ್ವಾಮಿಜಾಗತಿಕ ತಾಪಮಾನಊಳಿಗಮಾನ ಪದ್ಧತಿಸಂಶೋಧನೆಮಾಲ್ಡೀವ್ಸ್ಶೃಂಗೇರಿ ಶಾರದಾಪೀಠಮಂಡಲ ಹಾವುಪಂಪಕಾರ್ಯಾಂಗಹಂಪೆಹೆಣ್ಣು ಬ್ರೂಣ ಹತ್ಯೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕನ್ನಡ ನ್ಯೂಸ್ ಟುಡೇಗದಗಕಾವೇರಿ ನದಿತತ್ತ್ವಶಾಸ್ತ್ರರಾಮಾಯಣದಶಾವತಾರನಾಮಪದರತ್ನಾಕರ ವರ್ಣಿಲಕ್ಷ್ಮೀಶಭಾರತೀಯ ಸಂವಿಧಾನದ ತಿದ್ದುಪಡಿಘಾಟಿ ಸುಬ್ರಹ್ಮಣ್ಯಕನ್ನಡ ಗುಣಿತಾಕ್ಷರಗಳುವ್ಯಂಜನಜನಪದ ಕಲೆಗಳುಬೆರಳ್ಗೆ ಕೊರಳ್ಸರ್ವಜ್ಞಬಳ್ಳಾರಿಇತಿಹಾಸಪಾಂಡವರುಭೀಮಾ ತೀರದಲ್ಲಿ (ಚಲನಚಿತ್ರ)ಎಲೆಕ್ಟ್ರಾನಿಕ್ ಮತದಾನಯು.ಆರ್.ಅನಂತಮೂರ್ತಿಬೆಳವಲಕಪ್ಪೆ ಅರಭಟ್ಟಉಡುಪಿ ಜಿಲ್ಲೆಉಡಭಾರತದಲ್ಲಿ ಪಂಚಾಯತ್ ರಾಜ್ಪ್ರೀತಿಬಾಗಲಕೋಟೆಮಾಟ - ಮಂತ್ರಭಾವನಾ(ನಟಿ-ಭಾವನಾ ರಾಮಣ್ಣ)ಬ್ರಾಹ್ಮಣಗಾಂಜಾಗಿಡಸ್ತ್ರೀಸಂಭೋಗದಾಸವಾಳಪ್ರಜಾವಾಣಿಚನ್ನವೀರ ಕಣವಿವಸುಧೇಂದ್ರರಚಿತಾ ರಾಮ್ಶ್ರೀ. ನಾರಾಯಣ ಗುರುಭಾರತದ ಚುನಾವಣಾ ಆಯೋಗಆಲಿವ್ನಾಲ್ವಡಿ ಕೃಷ್ಣರಾಜ ಒಡೆಯರುಪೋಲಿಸ್ಭಾರತದಲ್ಲಿನ ಶಿಕ್ಷಣಭಾರತ ಬಿಟ್ಟು ತೊಲಗಿ ಚಳುವಳಿಕಾಮಾಲೆರಾಸಾಯನಿಕ ಗೊಬ್ಬರಹಸ್ತ ಮೈಥುನಭಾರತೀಯ ಜನತಾ ಪಕ್ಷಭಾರತೀಯ ಭೂಸೇನೆಮಯೂರಶರ್ಮಪರಮಾಣುಭಾರತದಲ್ಲಿ ಪರಮಾಣು ವಿದ್ಯುತ್ಆಶಿಶ್ ನೆಹ್ರಾರಾಷ್ಟ್ರಕವಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಬ್ಬು🡆 More