ಕವಲು ಮರ

ಕವಲು ಮರ ಭಾರತದೆಲ್ಲೆಡೆ ಬೆಳೆಯುವ ಮರ.ಇದನ್ನು ಸಂಸ್ಕೃತದಲ್ಲಿ 'ಕುಂಭಿ' ಎಂದು ಕರೆಯುತ್ತಾರೆ.ಚಳಿಗಾಲದಲ್ಲಿ ಇದರ ಎಲೆಯು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಇದು ಸಾಧಾರಣ ೧೫ ಮೀ.ಎತ್ತರಕ್ಕೆ ಬೆಳೆಯುತ್ತದೆ.ಇದರ ಬಿಳಿ ಬಣ್ಣದ ಹೂಗಳು ನೇರಳೆ ಹೂಗಳನ್ನು ಹೋಲುತ್ತವೆಯಾದರೂ ಗಾತ್ರದಲ್ಲಿ ಹಿರಿದಾಗಿದ್ದು ನೀರಿನ ಪಾತ್ರೆಯಂತೆ ತೋರುತ್ತದೆ.ಇದರ ತೊಗಟೆ ಹಾಗೂ ಹೂವನ್ನು ನೆಗಡಿ ಹಾಗೂ ಕಫ ಪರಿಹಾರಕ್ಕೆ ಉಪಯೋಗಿಸುತ್ತಾರೆ.

ಕವಲು ಮರ
ಕವಲು ಮರ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಎರಿಕಾಲೆಸ್
ಕುಟುಂಬ:
Lecythidaceae
ಕುಲ:
ಕರೇಯ
ಪ್ರಜಾತಿ:
C. arborea
Binomial name
ಕರೇಯ ಅರ್ಬೋರಿಯ(Careya arborea)
Synonyms

Careya coccinea sensu Alston

ಪರ್ಯಾಯ ನಾಮಗಳು

ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕವುಲುಮರ, ದಡ್ಡಾಲ, ಹೆಣ್ಣುಮತ್ತಿ ಪರ್ಯಾಯನಾಮಗಳು. ಕ್ಯಾರಿಯ ಆರ್ಬೋರಿಯ ಇದರ ಶಾಸ್ತ್ರೀಯ ಹೆಸರು.

ನಿವಾಸ

ಇದು ಭಾರತದ ಮೂಲನಿವಾಸಿ. ಭಾರತಾದ್ಯಂತ ಮತ್ತು ಮಲಯ, ಇಂಡೋಚೀನ ಮುಂತಾದೆಡೆಗಳಲ್ಲೆಲ್ಲ ಇದು ಹರಡಿದೆ. ಸಮುದ್ರಮಟ್ಟದಿಂದ ಹಿಡಿದು 1500 ಮೀ ಎತ್ತರದ ಬೆಟ್ಟ ಪ್ರದೇಶಗಳವರೆಗೂ ಇದರ ವ್ಯಾಪ್ತಿ ಉಂಟು.

ಲಕ್ಷಣಗಳು

10-20 ಮೀ ಎತ್ತರಕ್ಕೆ ಬೆಳೆಯುವ ಮರವಿದು. ಇದರ ಚೌಬೀನೆ ಗಡುಸಾಗಿಯೂ ಭಾರವಾಗಿಯೂ ಬಲವಾಗಿಯೂ ಉಂಟು. ಬಹುಕಾಲ ನೀರಿನ ಸಂಪರ್ಕವಿದ್ದರೂ ಕೆಡದು. ಆದರೆ ಬೇಗ ಸೀಳುವುದರಿಂದ ಮತ್ತು ಬಾಗುವುದರಿಂದ ಅಷ್ಟಾಗಿ ಉಪಯೋಗದಲ್ಲಿಲ್ಲ.

ಉಪಯೋಗಗಳು

ಇದನ್ನು ಗರಗಸದಿಂದ ಕೊಯ್ಯುವುದೂ ಕಷ್ಟ. ಆದರೂ ಸೂಕ್ತರೀತಿಯಲ್ಲಿ ಸಂಸ್ಕರಿಸುವುದರಿಂದ ಇದನ್ನು ಕೃಷಿ ಉಪಕರಣಗಳು, ಹಲಗೆಗಳು, ರೈಲ್ವೆ ಸ್ಲೀಪರುಗಳು, ಬಂದೂಕದ ಹಿಡಿಗಳು, ತೊಲೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸಬಹುದು. ತೊಗಟೆಯಿಂದ ಒರಟಾದ ಹಗ್ಗ ಮತ್ತು ಕಂದುಬಣ್ಣದ ಕಾಗದ ಮುಂತಾದವನ್ನು ತಯಾರಿಸುವುದಿದೆ.

ಔಷದೀಯ ಗುಣಗಳು

ತೊಗಟೆಗೆ ಔಷಧೀಯ ಗುಣಗಳೂ ಉಂಟು. ಇದನ್ನು ಕೆಮ್ಮು, ಶೀತ, ಜ್ವರ, ಸಿಡುಬು ಮುಂತಾದ ಬೇನೆಗಳಲ್ಲಿ ಶಾಮಕ ಔಷಧಿಯಾಗಿ ಬಳಸುತ್ತಾರೆ. ಹಣ್ಣಿನ ಕಷಾಯವನ್ನು ಪಚನಕ್ರಿಯೆಯನ್ನು ಹೆಚ್ಚಿಸುವುದಕ್ಕೂ ಎಲೆಗಳನ್ನು ವ್ರಣಗಳ ನಿವಾರಣೆಗೂ ಬಳಸುವುದಿದೆ.

Tags:

ಕವಲು ಮರ ಪರ್ಯಾಯ ನಾಮಗಳುಕವಲು ಮರ ನಿವಾಸಕವಲು ಮರ ಲಕ್ಷಣಗಳುಕವಲು ಮರ ಉಪಯೋಗಗಳುಕವಲು ಮರ ಔಷದೀಯ ಗುಣಗಳುಕವಲು ಮರಕಫಚಳಿಗಾಲತೊಗಟೆನೆಗಡಿನೇರಳೆಸಂಸ್ಕೃತ

🔥 Trending searches on Wiki ಕನ್ನಡ:

ವಾಟ್ಸ್ ಆಪ್ ಮೆಸ್ಸೆಂಜರ್ರೋಸ್‌ಮರಿಪಂಪಯು.ಆರ್.ಅನಂತಮೂರ್ತಿಯೇಸು ಕ್ರಿಸ್ತಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಷಟ್ಪದಿಟೈಗರ್ ಪ್ರಭಾಕರ್ಯೋಗಪ್ರಬಂಧ ರಚನೆಚಿನ್ನಶಾತವಾಹನರುಪುತ್ತೂರುಸಾವಿತ್ರಿಬಾಯಿ ಫುಲೆಬಿ. ಆರ್. ಅಂಬೇಡ್ಕರ್ಹಲ್ಮಿಡಿಸಂಭೋಗವಿನಾಯಕ ಕೃಷ್ಣ ಗೋಕಾಕಮಹೇಶ್ವರ (ಚಲನಚಿತ್ರ)ಸಿಂಹಪಕ್ಷಿಋಗ್ವೇದಕೇಂದ್ರಾಡಳಿತ ಪ್ರದೇಶಗಳುರೋಗಅಮೇರಿಕ ಸಂಯುಕ್ತ ಸಂಸ್ಥಾನಆಂಡಯ್ಯಸರ್ವಜ್ಞಸರ್ಕಾರೇತರ ಸಂಸ್ಥೆರಾಮ್ ಮೋಹನ್ ರಾಯ್ಭಗವದ್ಗೀತೆಶಿರ್ಡಿ ಸಾಯಿ ಬಾಬಾಕಿಂಪುರುಷರುಭಾರತದ ತ್ರಿವರ್ಣ ಧ್ವಜಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಣಹದ್ದುದಿ ಡೋರ್ಸ್‌ಸುಮಲತಾಚೀನಾವಿಮರ್ಶೆಕಾದಂಬರಿಸಂಕಷ್ಟ ಚತುರ್ಥಿಅಕ್ಬರ್ಸತಿ ಪದ್ಧತಿಶಿಕ್ಷಕಹೋಲೋಕಾಸ್ಟ್ಕ್ರೈಸ್ತ ಧರ್ಮರಾಮಾಯಣವೇದಕೊಡವರುರಂಜಾನ್ರಾಷ್ಟ್ರೀಯ ಸೇವಾ ಯೋಜನೆಚೈತ್ರ ಮಾಸದಾಸ ಸಾಹಿತ್ಯಸಮಾಜ ವಿಜ್ಞಾನಹನುಮಂತಬೆಂಗಳೂರುಹಬಲ್ ದೂರದರ್ಶಕಪರೀಕ್ಷೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಷೇರು ಮಾರುಕಟ್ಟೆಕಂಪ್ಯೂಟರ್ಶೈಕ್ಷಣಿಕ ಮನೋವಿಜ್ಞಾನಡಾ ಬ್ರೋಬಾಲ್ಯ ವಿವಾಹಕುದುರೆವಾಯುಗೋಳಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಶಿವಕೋಟ್ಯಾಚಾರ್ಯಲೋಹಚಂದ್ರಗುಪ್ತ ಮೌರ್ಯಭಾರತದ ಸಂವಿಧಾನಆರ್ಯ ಸಮಾಜರೂಢಿನವಶಿಲಾಯುಗಡಿ. ದೇವರಾಜ ಅರಸ್ಭಾರತದಲ್ಲಿನ ಜಾತಿ ಪದ್ದತಿಸಂಗೊಳ್ಳಿ ರಾಯಣ್ಣ🡆 More