ಐಕಳ ಹರೀಶ್ ಶೆಟ್ಟಿಯವರು, ದಕ್ಷಿಣ ಕನ್ನಡ ಜಿಲ್ಲೆಯ 'ಕಿನ್ನಿಗೋಳಿ' ಊರಿನವರು.'ಬಂಟ್ಸ್ ಫೆಡರೇಷನ್,ಮುಂಬಯಿಯ ವೈಸ್ ಪ್ರೆಸಿಡೆಂಟ್', 'ವರ್ಲ್ಡ್ ಸನ್ ಶೈನ್ ಹೋಟೆಲ್ ನ ಡೈರೆಕ್ಟರ್', 'ಸಂಧ್ಯಾ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷ'ರಾಗಿ ಕೆಲಸಮಾಡುತ್ತಿದ್ದಾರೆ.
ಯಕ್ಷಗಾನದಲ್ಲಿ ಆಪಾರ ಆಸಕ್ತರು. ಅದನ್ನು ಪ್ರಚಾರಮಾಡಲು ಅಪಾರ ಶ್ರಮವಹಿಸುತ್ತಾ ಬಂದಿದ್ದಾರೆ. ಮುಂಬಯಿ ಮಹಾನಗರದ ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮ ಸಹಕಾರ, ಸಹಾಯ, ಯೋಗದಾನ ಮಾಡುತ್ತಾ ಬಂದಿದ್ದಾರೆ. ಹರೀಶ್ ಶೆಟ್ಟಿಯವರು ಒಬ್ಬ ಕುಶಲ ಹಾಗೂ ಸಮರ್ಥ ಸಂಘಟಕರು. ಒಳ್ಳೆಯ ಅಂಗಸೌಷ್ಟವ,ಹಾಗೂ ಕ್ರೀಡಾಸಕ್ತರಾದ ಹರೀಶ್ ರವರು ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೂ ಹಲವಾರು ಪ್ರಶಸ್ತಿ, ಪದಕಗಳನ್ನು ಸತತವಾಗಿ ಗಳಿಸುತ್ತಾ ಬಂದಿದ್ದಾರೆ.'ಮಿಸ್ಟರ್ ಮ್ಯಾಂಗಲೋರ್ ಯೂನಿವರ್ಸಿಟಿ ಪ್ರಶಸ್ತಿ', ೩ ವರ್ಷ ಸತತವಾಗಿ ಗಳಿಸಿದ್ದಾರೆ. 'ವಿಜಯ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರು', ಅವರ ವಿದ್ಯಾರ್ಥಿ ಜೀವನದಲ್ಲೇ 'ಮುಲ್ಕಿ ಹಾಗೂ ಅಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರಾಗಿದ್ದರು'.
ಹರೀಶ್ ರವರು, ಯಳತೂರು ಗುಥು ರಾಮಣ್ಣ ಶೆಟ್ಟಿ, ಹಾಗೂ ಐಕಳ ಕೂರಂಬಿ ಗುಥು ದೇವಕಿ ಆರ್ ಶೆಟ್ಟಿ ಪರಿವಾರದಲ್ಲಿ ೧೯, ಏಪ್ರಿಲ್,೧೯೬೧ ರಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಶಿಮಂತೂರ್ ಶಾರದಾ ಹೈ ಸ್ಕೂಲಿನಲ್ಲಿ ಹಾಗು ಮುಲ್ಕಿಯ ವಿಜಯ ಕಾಲೇಜಿನಲ್ಲಿ ಪದವಿ ಗಳಿಸಿದರು. ಬಾಲ್ಯದ ದಿನಗಳಲ್ಲೇ ಸಮಾಜ ಸೇವೆ, ಸಂಘಟನಾ ಕೌಶಲ್ಯ ಅವರಿಗೆ ಮೈಗೂಡಿತ್ತು. ೧೯೮೩-೮೪ ರಲ್ಲಿ ಮುಲ್ಕಿಯ ವಿಜಯಾ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹರೀಶ್ ಶೆಟ್ಟಿಯವರು, ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ, ಮುಂಬಯಿ ನಗರಕ್ಕೆ ಆಗಮಿಸಿ, ಹೋಟೆಲ್ ಉದ್ಯಮವನ್ನು ಶುರು ಮಾಡಿದರು.,ಮುಂಬಯಿ ಮಹಾನಗರದ ಸಾಂಸ್ಕತಿಕ ಹಾಗೂ ಸಂಘ-ಸಂಸ್ಥೆಗಳ ಜೊತೆ ತಮ್ಮನ್ನು ತೊಡಗಿಸಿಕೊಂಡರು. ಹಲವಾರು ದೇವಸ್ಥಾನಗಳಿಗೆ ದೇಣಿಗೆಹಣ ಸಂಗ್ರಹಿಸಿ,ತಾವೂ ದಾನಮಾಡುತ್ತಾ ಬಂದಿದ್ದಾರೆ. ದುರ್ಗಾಪರಮೇಶ್ವರಿ ಅಮ್ಮನವರ ಪರಮ ಭಕ್ತರು. ಶ್ರೀಕ್ಷೇತ್ರ ಕಟೀಲಿನ ದುರ್ಗಾಂಬಿಕೆ ದೇವರ ಕೃಪೆಯಿಂದ ಅವರ ಉದ್ಯಮ ಕ್ಷೇತ್ರ ಮುನ್ನಡೆಯುತ್ತಾ ಬಂದಿದೆಯೆಂದು ಅವರು ಪ್ರಬಲವಾಗಿ ನಂಬುತ್ತಾರೆ.
ಶ್ರೀಮತಿ ಚಂದ್ರಿಕಾ ಎಚ್.ಶೆಟ್ಟಿಯವರನ್ನು ಮದುವೆಯಾಗಿ, ಅರ್ಜುನ್ ಎಚ್. ಶೆಟ್ಟಿ ಎಂಬ ಮಗ, ಹಾಗೂ ಸನ್ನಿಧಿ ಎಚ್. ಶೆಟ್ಟಿ ಎಂಬ ಮಗಳನ್ನು ಪಡೆದಿದ್ದಾರೆ. ಐಕಳ ದಂಪತಿಗಳ ರಜತ ವಿವಾಹೋತ್ಸವ ಕಟೀಲಿನ ಭ್ರಮರಾಂಬ ದೇವಾಲಯದಲ್ಲಿ ಜರುಗಿತು.
ಹರೀಶ್, ಸರಳ ವ್ಯಕ್ತಿತ್ವದ ಅತ್ಯುತ್ತಮ ಆಡಳಿತಗಾರ. ಒಂದು ಕಾರ್ಯವನ್ನು ಕೈಗೆತ್ತಿಕೊಂಡರೆ ಅದು ಸಂಪೂರ್ಣವಾಗಿ ಯಶಸ್ಸನ್ನು ಪಡೆದಮೇಲೆಯೇ ಅವರು ವಿಶ್ರಮಿಸುವುದು. ಅವರ ತರಹದ ಸಮಾನ ಆಸಕ್ತಿಗಳ ಜೊತೆಗಾರರಿಂದಲೂ ಅತರಹದ ಕಾಳಜಿ ಜವಾಬ್ದಾರಿಯನ್ನು ನಿರೀಕ್ಷಿಸುತ್ತಾರೆ. ಬಂಟ್ಸ್ ಸಂಘ , ಮುಂಬಯಿನ ಅಧ್ಯಕ್ಷರಾಗಿ ತಮ್ಮ ದಿನದ ಪ್ರಮುಖ ಸಮಯವನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಅವರು ಕೈಗೊಂಡಿರುವ ಹಲವಾರು ಸಮಾಜ-ಮುಖಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಅವರ ಪತ್ನಿ, ಹಾಗೂ ಮಗ ಅರ್ಜುನ್, ರವರ ಪಾಲು ಹೆಚ್ಚಿನದಾಗಿದೆ.
This article uses material from the Wikipedia ಕನ್ನಡ article ಐಕಳ ಹರೀಶ್ ಶೆಟ್ಟಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.