ಸಂಯೋಜಕ ಅನಿಲ್ ಬಿಸ್ವಾಸ್

ಅನಿಲ್ ಬಿಸ್ವಾಸ್ (अनिल विश्वास) (7 ಜುಲೈ 1914 - 31 ಮೇ 2003) ಅವರು 1935 ರಿಂದ 1965ರ ಅವಧಿಯ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕರಾಗಿದ್ದರು, ಅದರ ಜೊತೆಗೆ ಅವರು ಮುಂಚೂಣಿಯಲ್ಲಿದ್ದ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು, ಹನ್ನೆರಡು ಜನರ ಮೊದಲ ಭಾರತೀಯ ಆರ್ಕೆಸ್ಟ್ರಾದಲ್ಲಿ ಒಬ್ಬರಾಗಿದ್ದರು ಹಾಗೂ ಆರ್ಕೇಸ್ಟ್ರಾದ ಸಂಗೀತ ಮತ್ತು ಜೋರಾದ ಕೋರಲ್ ಪರಿಣಾಮಗಳನ್ನು ಭಾರತೀಯ ಚಲನಚಿತ್ರ ರಂಗಕ್ಕೆ ಪರಿಚಯಿಸಿದರು .

ಪಾಶ್ಚಿಮಾತ್ಯ ಸಿಂಫೋನಿಕ್ ಮ್ಯೂಸಿಕ್ನಲ್ಲಿ ಪರಿಣತಿ ಪಡೆದಿದ್ದರು, ಭಾರತೀಯ ಶಾಸ್ತ್ರೀಯ ಅಥವಾ ವಿಶೇಷವಾಗಿ ಬೌಲ್ ಹಾಗೂ ಭಟಿಯಾಲಿಗಳಂತಹ ಜಾನಪದ ಸಂಗೀತವನ್ನು ಕೂಡಾ ಬಲ್ಲವರಾಗಿದ್ದರು . ಅವರ 90 ಚಲನಚಿತ್ರಗಳಲ್ಲಿ, ಅತ್ಯಂತ ನೆನಪಿನಲ್ಲಿಯುಳಿಯುವಂತಹವೆಂದರೆ, ರೋಟಿ (1942), ಕಿಸ್ಮತ್ (1943 ಚಲನಚಿತ್ರ) (1943), ಅನೋಕಾ ಪ್ಯಾರ್ (1948), ತರಾನಾ (1951), ವಾರಿಸ್ (1954), ಪರ್ದೇಸಿ (1957) ಹಾಗೂ ಚಾರ್ ದಿಲ್ ಚಾರ್ ರಾಹೇ (1959). ಚಲನಚಿತ್ರಗಳಲ್ಲಿ ಕೌಂಟರ್ ಮೆಲೊಡಿಯ ಬಳಕೆಯನ್ನು ಪ್ರಾರಂಭಿಸಿದ್ದರಲ್ಲಿ ಇವರು ಮುಂಚೂಣಿಯಲ್ಲಿದ್ದರು, ಪಾಶ್ಚಿಮಾತ್ಯ ಸಂಗೀತ ‘ಕ್ಯಾಂಟೆಲಾ’ ಅಳವಡಿಸಿಕೊಂಡರು, ಅವರ ರೋಟಿ (1942) ಚಿತ್ರದಲ್ಲಿನ ಗದ್ಯಕಥನದ ಹಾಡುಗಳಂತಹವನ್ನು ಕೂಡಾ ಸಂಯೋಜಿಸಿದರು, ಇವೆಲ್ಲದರ ಜೊತೆಗೆ ರಾಗಮಾಲಾವನ್ನು ಮೊಟ್ಟ ಮೊದಲಿಗೆ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಅವರು ಪರಿಚಯಿಸಿದ ಪಾಶ್ಚಿಮಾತ್ಯ ವಾದ್ಯಗೀತ ರಚನೆಯು ಇನ್ನೊಂದು ಪ್ರಮುಖವಾದ ಅಂಶವಾಗಿದೆ, ಸುಸ್ವರದ ಮಧ್ಯೆಯಲ್ಲಿ ಹಾಗೂ ಇತರೆ ರೀತಿಯ ಸಂಗೀತಗಳಲ್ಲಿ ದೇಶೀಯ ವಾದ್ಯಗಳ ಜೊತೆಗೆ ಪಾಶ್ಚಿಮಾತ್ಯ ವಾದ್ಯಗಳನ್ನು ಸೇರಿಸುವ ಹೊಸ ರೀತಿಯ ಸಂಗೀತದ ಶೈಲಿಯು ಇಂದಿಗೂ ಭಾರತೀಯ ಚಲನಚಿತ್ರರಂಗದಲ್ಲಿ ಇನ್ನೂ ನಡೆದುಕೊಂಡುಬಂದಿದೆ . ಅವರಿಗೆ 1986ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತು.

Anil Biswas
Born
Anil Krishna Biswas

(೧೯೧೪-೦೭-೦೭)೭ ಜುಲೈ ೧೯೧೪
Barisal, East Bengal
DiedMay 31, 2003(2003-05-31) (aged 88)
Occupation(s)music composer, playback singer, actor
Years active1932- 1975
Spouse(s)Ashalata, nee Mehrunnissa (divorced)
Meena Kapoor (1959-present)

ಜೀವನ ಚರಿತ್ರೆ

ಆರಂಭಿಕ ಜೀವನ

ಅನಿಲ್ ಕೃಷ್ಣ ಬಿಸ್ವಾಸ್ ಅವರು 7 ಜುಲೈ 1914ರಂದು, ಪೂರ್ವ ಬಂಗಾಳದ ಬಾರಿಸಾಲ್‌ನಲ್ಲಿ (ಈಗಿನ ಬಾಂಗ್ಲಾದೇಶದಲ್ಲಿದೆ) ಜೆ ಸಿ ಬಿಸ್ವಾಸ್ ಅವರ ಮನೆಯಲ್ಲಿ ಜನಿಸಿದರು,, ಚಿಕ್ಕ ವಯಸ್ಸಿನಲ್ಲಿಯೇ ಅವರು ಸ್ಥಳೀಯ ನಾಟಕ ಕಂಪನಿಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿದರು. ಅವರು ಬೆಳೆದ ಹಾಗೇ ಒಳ್ಳೆಯ ಸಂಗೀತ ಪ್ರತಿಭೆಯೆಂದು ತೋರಿಸಿಕೊಂಡರು, 14 ವರ್ಷ ವಯಸ್ಸಿನಲ್ಲಿ ಸ್ಥಳೀಯ ಸಂಗೀತ ಕಾರ್ಯಕ್ರಮಗಳಿಗೆ ಸಂಯೋಜನೆ ಮಾಡಿ , ವಾದ್ಯ ನುಡಿಸುತ್ತಿದ್ದರು; ನಂತರದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದರು, ಆಗಿನ್ನೂ ಮೆಟ್ರಿಕ್ಯುಲೇಷನ್ ಓದುತ್ತಿದ್ದರು, ಅವರ ಕ್ರಾಂತಿಕಾರಿ ಚಟುವಟಿಕೆಗಳಿಂದಾಗಿ ಹಲವಾರು ಬಾರಿ ಜೈಲಿಗೆ ಕಳುಹಿಸಲಾಯಿತು, ಅವರ ಓದಿಗೆ ಬಹಳಷ್ಟು ತೊಂದರೆಯಾಯಿತು. ಕೊನೆಗೆ 1930ರಲ್ಲಿ, ಅವರ ತಂದೆಯ ನಿಧನದ ನಂತರ ಬಂಧನಕ್ಕೊಳಗಾಗದಂತೆ ವೇಷ ಮರೆಸಿ ಕಲ್ಕತ್ತಾಗೆ ತೆರಳಿದರು..

ವೃತ್ತಿಜೀವನ

ಅನಿಲ್ ಬಿಸ್ವಾಸ್ ಮೊದಲು ಹೆಸರುವಾಸಿಯಾಗಿದ್ದು 1930ರ ದಶಕದ ಆರಂಭದಲ್ಲಿ ಕೊಲ್ಕತಾದಲ್ಲಿ, ಅವರು ಮೊದಲು ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದರು, ನಂತರ ಅವರು ನಟನಾಗಿ, ಗಾಯಕನಾಗಿ, ಮತ್ತು ಸಹ ಸಂಗೀತ ನಿರ್ದೇಶಕನಾಗಿ, ಕೋಲ್ಕತಾದ ’ರಂಗಮಹಲ್ ರಂಗಭೂಮಿಗೆ’ ಸೇರಿಕೊಂಡಿದ್ದರು, 1932–34ರ ಅವಧಿಯ ಸಮಯದಲ್ಲಿ ಅವರು ಹಲವಾರು ವಾಣಿಜ್ಯ ವೇದಿಕಾ ನಿರ್ಮಾಣಗಳಲ್ಲಿ ಹಾಡಿದ್ದರು ಮತ್ತು ನಟಿಸಿದ್ದರು. ಆ ವೇಳೆಗೆ ಅವರು, ಖಾಯಲ್, ತುಮ್ರೀ ಮತ್ತು ದಾದ್ರಗಳಂತಹ ಹಾಡುವ ಶೈಲಿಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು, ಮತ್ತು ಶ್ಯಾಮ ಸಂಗೀತ ಮತ್ತು ಕೀರ್ತನಾ ಶೈಲಿಗಳಲ್ಲಿ, ಭಕ್ತಿ ಸಂಗೀತದ ಪರಿಪೂರ್ಣ ಗಾಯಕರಾದರು. ಅವರು ’ಹಿಂದುಸ್ತಾನ್ ರೆಕಾರ್ಡಿಂಗ್ ಸಂಸ್ಥೆ’ ಯೊಂದಿಗೆ ಗಾಯಕ, ಗೀತಕಾರ, ಮತ್ತು ಸಂಗೀತ ಸಂಯೋಜಕರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ, ಕುಂದನ್ ಲಾಲ್ ಸೈಗಲ್ ಮತ್ತು ಸಚಿನ್ ದೇವ್ ಬರ್ಮನ್‌ ಸಹ, ತಾವು ಮುಂಬಯಿಗೆ ವಲಸೆಗೋಗುವ ಮೊದಲು ಇದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪ್ರಖ್ಯಾತ ಬೆಂಗಾಲಿ ಕವಿ ಕಾಝಿ ನಝ್ರುಲ್ ಇಸ್ಲಾಮ್ ಅವರಿಂದಲೂ ಕಾರ್ಯನಿಯೋಜನೆಗಳನ್ನು ಪಡೆದುಕೊಂಡಿದ್ದಾರೆ, ಇದು ಸಂಗೀತ ನಿರ್ದೇಶಕರಾದ ಹಿರಣ್ ಬೋಸ್ ಇವರನ್ನು ಗುರುತಿಸುವಂತೆ ಮಾಡಿತ್ತು ಮತ್ತು ಇದೇ ಸಂಗೀತ ನಿರ್ದೇಶಕರ ಕೋರಿಕೆಯ ಮೆರೆಗೆ ಅವರು 1934ರಲ್ಲಿ ಬಾಂಬೆ (ಮುಂಬಯಿ)ಗೆ ತೆರಳಿದರು. ಅನಿಲ್ ಮೊದಲು ರಾಮ್ ದಾರ್ಯಾನಿಯವರ ’ಈಸ್ಟರ್ನ್ ಆರ್ಟ್ ಸಿಂಡಿಕೇಟ್‌’ಗೆ ಸೇರ್ಪಡೆಯಾದಾಗ, ಅದು ಭಾರತೀಯ ಚಲನಚಿತ್ರದಲ್ಲಿ ಹಿನ್ನೆಲೆ ಗಾಯನವು, ಇದರ ಪ್ರಥಮ ಪ್ರವೇಶವನ್ನು ಮಾಡುತ್ತಿದ್ದ ಸಮಯವಾಗಿತ್ತು, ಮತ್ತು ಅಲ್ಲಿ ಅವರು ’ಬಾಲ್ ಹತ್ಯಾ’ ಮತ್ತು ’ಭಾರತ್ ಕಿ ಬೇಟಿ’ ಗಾಗಿ ಸಂಗೀತ ಸಂಯೋಜನೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು, ನಂತರ ಅವರು ಧರಮ್ ಕಿ ದೇವಿ (1935) ಚಿತ್ರಕ್ಕಾಗಿ ಚಿತ್ರ ಸಂಯೋಜಕರಾಗಿ ಪ್ರಥಮ ಕಾಣಿಕೆಯನ್ನು ನೀಡಿದರು, ಅದಕ್ಕಾಗಿ ಅವರು ಹಿನ್ನೆಲೆ ಸಂಗೀತದ ಸಂಯೋಜನೆಯನ್ನು ಮಾಡಿದ್ದರು, ಮತ್ತು ಅದರಲ್ಲಿ ನಟಿಸಿದ್ದಷ್ಟೇ ಅಲ್ಲದೆ, ಕುಚ್ ಬೀ ನಹೀ ಭರೋಸಾ.. ಹಾಡನ್ನು ಸಹ ಹಾಡಿದ್ದರು 1936ರಲ್ಲಿ ಅವರು 'ಸಾಗರ್ ಮೂವೀಟೋನ್ಸ್'ಗೆ ಸಂಯೋಜಕರಾಗಿ ಸೇರ್ಪಡೆಯಾದರು, ಮೊದಲು ಅವರು ಅಲ್ಲಿ ಸಂಯೋಜಕರಾದ ಅಶೋಕ್ ಘೋಶ್‌ ರೊಂದಿಗೆ, ಮನ್‌ಮೋಹನ್ ಮತ್ತು ಡೆಕ್ಕನ್ ಕ್ವೀನ್ ಚಿತ್ರಗಳಲ್ಲಿ ಮತ್ತು ಪ್ರಣ್ಸುಖ್ ನಾಯಕ್‌ರ ಜೊತೆಯಲ್ಲಿ ಕೂಡಾ ಸಹ-ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು, ಮತ್ತು ನಂತರ ಸಾಗರ್ ಮೂವೀಟೋನ್ಸ್, 1939ರಲ್ಲಿ ಯೂಸಫ್ ಫಝಲ್‌ಬೋಯ್ ಆಫ್ ಆರ್‌ಸಿಎನ ಹೊಸದಾಗಿ ವಿಸ್ತರಿಸಿದ ರಾಷ್ಟ್ರೀಯ ಸ್ಟ್ಯೂಡಿಯೋಗಳೊಂದಿಗೆ ಸೇರ್ಪಡೆಯಾದಾಗಲೂ ಸಹ ಅದರೊದಿಗೆ ಸಂಯೋಜಕರಾಗಿ ಮುಂದುವರೆದರು. ಮುಂದಿನ ಎರಡುವರ್ಷಗಳಲ್ಲಿ ಅವರು ಹನ್ನೊಂದು ಚಿತ್ರಗಳನ್ನು ಮಾಡಿದ್ದರು, ಇವುಗಳಲ್ಲಿ ಬಹುತೇಕವು ಸಾಹಸಕಾರ್ಯದವೇ ಆಗಿದ್ದವು, ವಾಣಿಜ್ಯ ಸಾಧನೆಯನ್ನು ಗಳಿಸಿದ್ದ ಮೆಹಬೂಬ್ ಖಾನ್‌ರ ಜಾಗಿರ್ದಾರ್ (1937) ಚಿತ್ರವು, ಚಲನಚಿತ್ರ ಉದ್ಯಮದಲ್ಲಿ ಅವರನ್ನು ಒಂದು ಸಂಗೀತ ಶಕ್ತಿಯನ್ನಾಗಿ ಸ್ಥಿರಪಡಿಸಿತು. ನಂತರ ಕೂಡಲೇ ಬಹುಸಂಖ್ಯೆಯ ಸ್ವತಂತ್ರ ಕೆಲಸಗಳು ಆವರಿಗೆ ದೊರಕಿದವು, ಅವುಗಳಲ್ಲಿ ಬಹು ಮುಖ್ಯವಾದವು, 300 ಡೇಸ್ ಆಂಡ್ ಆಪ್ಟರ್ , ಗ್ರ್ಯಾಮೋಫೋನ್ ಸಿಂಗರ್ , ಹಮ್ ತುಮ್ ಔರ್ ವೋ , ಏಕ್ ಹಿ ರಸ್ತ , ಮತ್ತು ಮೆಹಬೂಬ್ ಖಾನ್‌'ರ ವತನ್ (1938), ಆಲಿಬಾಬ (1940), ಅತ್ಯುತ್ತಮ, ಔರತ್ (1940), ಬೆಹನ್ (1941), ನಂತರ ಮತ್ತೆ ಅವರೊಂದಿಗೆ ರೋಟಿ (1942) ಚಿತ್ರದಲ್ಲಿ ಕೆಲಸಮಾಡಿದ್ದರು, ಅದಕ್ಕಾಗಿ ಅವರು ಚಿತ್ರಕಥೆ ಮತ್ತು ಪರಿಕಲ್ಪನೆಯ ನೆರವನ್ನೂ ನೀಡಿದ್ದರು , ಮತ್ತು ಇದರಲ್ಲಿನ ಬಹುತೇಕ ಹಾಡುಗಳು ಚಿತ್ರ ನಟಿ ಅಕ್ತಾರಿಬಾಯ್ ಫೈಝಾಬಾದಿ (ಬೇಗಮ್ ಅಕ್ತಾರ್)ರ ವಿಶೇಷತೆಯನ್ನು ಹೊಂದಿದ್ದವು, ಅದಾಗ್ಯೂ ಕೆಲವು ಒಪ್ಪಂದದ ಭಿನಾಬಿಪ್ರಾಯಗಳ ಕಾರಣ ಅವುಗಳನ್ನು ತೆಗೆದುಹಾಕಲಾಗಿತ್ತು (ಅವಳು ಮೆಗಾಫೋನ್ ಗ್ಯಾಮೋಫೋನ್ ಸಂಸ್ಥೆಯೊಂದಿಗೆ ಒಪ್ಪಂದದಲ್ಲಿದ್ದಾಗ, ಸಂಗೀತದ ಧ್ವನಿ ಮುದ್ರಣವನ್ನು ಹೆಚ್‌ಎಮ್‌ವಿ ಯೊಂದಿಗೆ ಮಾಡಲಾಗಿತ್ತು). ಮುಂದಿನ ವರ್ಷಗಳಲ್ಲಿ ಅವರು, ದಿಲೀಪ್ ಕುಮಾರ್‌ರ ಪ್ರಥಮ ಚಿತ್ರ, ಜ್ವರ್ ಬತ್ತಾ (1944) ಮತ್ತು ದಿಲೀಪ್ ಕುಮಾರ್‌ರಿಂದಲೇ ನಟಿಸಲಾದ ಮತ್ತು ನಂತರ ಇದನ್ನು ಬೆಂಗಾಲಿಯಲ್ಲಿ ನೌಕಾಡುಬಿ ಹೆಸರಿನಲ್ಲಿ ಮರುನಿರ್ಮಿಸಿದ ನಿತಿನ್ ಬೋಸ್‌ರವರಿಂದ ನಿರ್ದೇಶಿಸಲಾದ ಮಿಲನ್ (1947) ಗಳಂತಹ ಬಾಂಬೆ ಟಾಕೀಸ್ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಅವರು ಪ್ರಖ್ಯಾತ ಹಿನ್ನೆಲೆ ಗಾಯಕ ಮುಕೇಶ್ ರವರಿಗೆ, 'ದಿಲ್ ಜಲ್ತಾ ಹೈ ತೊ ಜಲ್ನೆ ದೆ' ಗೀತೆಯನ್ನು ಹಾಡುವುದರ ಮೂಲಕ, ಪೆಹ್ಲಿ ನಝರ್ (1945) ಚಿತ್ರದಲ್ಲಿ, ಮತ್ತು ಮುಂಬಯಿನಲ್ಲಿ ಅವರ ಮೊದಲ ಹಾಡಾದ 'ಆಯೆ ದಿಲ್ ಮುಜೆ ಐಸೀ ಜಗಾ ಲೇ ಚಲ್' ಗೀತೆಯನ್ನು ಹಾಡುವುದರ ಮೂಲಕ ತಲತ್ ಮಹಮದ್ ರವರಿಗೆ, ಆರ್ಝೂ (1949) ಚಿತ್ರದಲ್ಲಿ ಹೊಸಾ ತಿರುವನ್ನು ನೀಡಿದ್ದರು ; ಅಷ್ಟೇ ಅಲ್ಲದೆ ಅವರು ಸುರೇಂದ್ರನಾತ್, ಪಾರುಲ್ ಗೋಷ್, ಅಮೀರ್ಬಾಯ್ ಕರ್ನಾಟಕಿ, ಲತಾ ಮಂಗೇಶ್ಕರ್, ಮತ್ತು ರೋಶನ್ ಅರಾ ಬೇಗಮ್ ರಂತಹ ಅನೇಕ ಗಾಯಕರ ಸಾಧನೆಗೆ ಕಾರಣರಾಗಿದ್ದರು. ಸಾಗರ್ ಮೂವೀಟೋನ್ಸ್‌ನಡಿಯಲ್ಲಿ ನಟಿಯಾಗಿದ್ದ ಆಶಾ ಲತಾರನ್ನು ಅವರು ಮದುವೆಯಾದರು, ಅವರ ಮೊದಲ ಹೆಸರು ಮೆಹ್ರುನ್ನೀಸಾ ಆಗಿತ್ತು, ನಂತರ ಅವರು ಆಶಾ ಲತಾ ಬಿಸ್ವಾಸ್ ಹೆಸರಿನಲ್ಲಿ ನಟಿಸುವುದನ್ನು ಮುಂದುವರೆಸಿದರು, ಮತ್ತು ಅವರು ಮೂರು ಜನ ಗಂಡು ಮಕ್ಕಳನ್ನು ಮತ್ತು ಒಂದು ಹೆಣ್ಣು ಮಗುವನ್ನು ಹೊಂದಿದ್ದರು, ಈ ದಂಪತಿಗಳು ನಂತರ ವಿಚ್ಛೇದನವನ್ನು ಪಡೆದರು. ನಂತರ 1961ರಲ್ಲಿ ವಿಮಾನ ದುರಂತದಲ್ಲಿ ಅವರ ಮಗ ಪ್ರದೀಪ್ ಮರಣಹೊಂದಿದ ಘಟನೆಯು, ಅವರನ್ನು ಚಲನಚಿತ್ರ ಉದ್ಯಮದಿಂದ ತಕ್ಷಣ ಹೊರಬರುವಂತೆ ಮಾಡಿತು. 1942ರಲ್ಲಿ, ಅವರು ದೇವಿಕಾ ರಾಣಿ ಯವರ ಪ್ರಸ್ತಾಪದಿಂದ ಬಾಂಬೆ ಟಾಕೀಸ್‌ಗೆ ಸೇರ್ಪಡೆಯಾದರು, ಅಲ್ಲಿ ಅವರು ತಮ್ಮ ಅತ್ಯುತ್ತಮ ಸಾಧನೆಯಾದ, ಅಶೋಕ್ ಕುಮಾರ್ ಮತ್ತು ಮುಂತಾಝ್ ಶಾಂತಿ ಅಭಿನಯಿಸಿದ, ಗ್ಯಾನ್ ಮುಖರ್ಜೀರ ಕಿಸ್ಮತ್ (1943ರ ಚಿತ್ರ) (1943) ಚಿತ್ರದ , 'ಪಪಿಹಾರೆ', ಈ ಗೀತೆಗಾಗಿ ಹೆಚ್ಚು ನೆನೆಸಿಕೊಳ್ಳಲಾಗುತ್ತಿದ್ದು, ಈ ಹಾಡನ್ನು ಅವರ ಸಹೋದರಿ ಪಾರುಲ್ ಘೋಶ್ ಹಾಡಿದ್ದರು (ಪ್ರಖ್ಯಾತ ಕೊಳಲುವಾದಕ, ಪನ್ನಲಾಲ್ ಘೋಶ್‌ರ ಪತ್ನಿ), ದೇಶಾಭಿಮಾನ ಸಾಧನೆ, 'ದೂರ್ ಹಟೊ ಏ ದುನಿಯಾ ವಾಲೊ', ಮತ್ತು 'ಧೀರೆ ಧೀರೆ ಆರೆ ಬಾದಲ್, ಮೇರಾ ಬುಲ್‌ಬುಲ್ ಸೋ ರಹಾ ಹೈ, ನಟ ಅಶೋಕ್ ಕುಮಾರ್‌ರಿಂದ ಹಾಡಲಾದ, ಶೋರ್ಗಲ್ ನ ಮಚಾ' ಹಾಡುಗಳಿಗೆ ಸಂಗೀತ ಸಂಯೋಜಿಸುವ ಅವಕಾಶವನ್ನು ಪಡೆದರು. 1946ರಲ್ಲಿ, ಅವರು ಬಾಂಬೇ ಟಾಕೀಸ್ ಅನ್ನು ತೊರೆದರು ಹಾಗೂ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ನಂತರದಲ್ಲಿ ಅವರ ಪತ್ನಿ ಆಶಾಲತಾ ಬಿಸ್ವಾಸ್ ಅವರ ಒಡೆತನದ ತಮ್ಮದೇ ಬ್ಯಾನರ್ ‘ವೆರೈಟಿ ಪಿಕ್ಚರ್ಸ್’ ಅಡಿಯಲ್ಲಿ ನಾಲ್ಕು ಚಿತ್ರಗಳಲ್ಲಿ ಕೆಲಸ ಮಾಡಿದರು, ಲಾಡ್ಲಿ (1949), ಲಾಜವಾಬ್ (1950), ಬಡೀ ಬಹು (1951) ಹಾಗೂ ಹಮ್ದರ್ದ್ (1953), ಕೆ‍ಎ ಅಬ್ಬಾಸ್‌ರ ಜೊತೆಗೆ ರಾಹಿ (1952) ಚಿತ್ರ, ಹಾಡೇ ಇಲ್ಲದ ಮುನ್ನಾ (1954) ಚಿತ್ರಗಳಿಗೆ ಹಿನ್ನೆಲೆ ಧ್ವನಿಗಾಗಿ ಕೆಲಸ ಮಾಡಿದರು, ಇದಲ್ಲದೆ ಇಂಡೋ-ರಷಿಯನ್ ಸಹ ನಿರ್ಮಾಣದಲ್ಲಿ ನರ್ಗಿಸ್ ಅಭಿನಯದ ಪರ್ದೇಸಿ (1957) ಹಾಗೂ ಚಾರ್ ದಿಲ್ ಚಾರ್ ರಾಹೇ (1959)ಗಾಗಿ ಕಾರ್ಯ ನಿರ್ವಹಿಸಿದರು. ಉದ್ದಿಮೆಯಲ್ಲಿ ಇವರನ್ನು ಸಂಗೀತ ಪಾರಂಗತ ಅನಿಲ್‌ದಾ ಎಂದು ಕರೆಯಲಾಗುತ್ತದೆ, ಚಿತ್ರರಂಗದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳಿಂದ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನಗಳಿಂದ ಕ್ರಮೇಣ ನಿರಾಶೆಗೊಂಡು ದೂರ ಉಳಿದರು. 1960ರ ದಶಕದ ಪ್ರಾರಂಭದಲ್ಲಿ, ವೃತ್ತಿ ಜೀವನದ ಪ್ರಮುಖ ಹಂತದಲ್ಲಿದ್ದಾಗಲೇ ಅವರು ಚಲನಚಿತ್ರರಂಗದಿಂದ ನಿವೃತ್ತಿ ಹೊಂದಿದರು, ಅವರು ತಮ್ಮ ನೆಲೆಯನ್ನು ನವ ದೆಹಲಿಗೆ ಬದಲಾಯಿಸಿದರು, ಇದರ ಮಧ್ಯೆ ಮಹೇಶ್ ಕೌಲ್ ಅವರ ಸೌತೇಲಾ ಭಾಯಿ ಯಂತಹ ಒಂದು ಅಥವಾ ಎರಡು ಚಿತ್ರಗಳಿಗಾಗಿ ಕೆಲಸ ಮಾಡಿದರು (1962), ಅವರ ಕೊನೆಯ ಚಿತ್ರ ಮೋತಿಲಾಲ್ ಅವರ ನಿರ್ದೇಶನದ ಛೋಟಿ ಛೋಟಿ ಬಾತೇ (1965), ನಾದಿರಾ ಹಾಗೂ ಮುಕೇಶ್ ಅಭಿನಯಿಸಿರುವ 'ಝಿಂದಗಿ ಕ್ವಾಬ್ ಹೈ ಥಾ ಹಮೇ ಭಿ' ಹಾಡು, ದುರಾದೃಷ್ಟವಶಾತ್ ಚಿತ್ರದ ಬಿಡುಗಡೆಗೆ ಮುನ್ನವೇ ಮೋತಿಲಾಲ್ ಅವರು ನಿಧನ ಹೊಂದಿದರು, ಚಿತ್ರವು ರಾಷ್ಟ್ರೀಯ ಪ್ರಶಸ್ತಿ ಗಳಿಸಿತಾದರೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ದೆಹಲಿಯಲ್ಲಿ ಅವರು ಮಾರ್ಚ್ 1963 ರಲ್ಲಿ ಆಲ್ ಇಂಡಿಯಾ ರೇಡಿಯೋ (ಎ‌ಐಆರ್)ನಲ್ಲಿ ನ್ಯಾಷನಲ್ ಆರ್ಕೆಸ್ಟ್ರಾದ ನಿರ್ದೇಶಕಾಗಿದ್ದರು , 1975ರವರೆಗೆ ದೆಹಲಿಯ ಎಐಆರ್ನ ಸುಗಮ ಸಂಗೀತ (ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ)ದಲ್ಲಿ ಮುಖ್ಯ ನಿರ್ಮಾಪಕರಾಗಿದ್ದರು . ಆ ನಂತರದಲ್ಲಿ, ದೂರದರ್ಶನದ ಮುಂಚೂಣಿಯಲ್ಲಿದ್ದ ದಾರಾವಾಹಿ ಹಮ್ ಲೋಗ್‌ ಗಾಗಿ (1984) ಹಾಗೂ 1991ರ ಸಮಯದಲ್ಲಿ ಹಲವಾರು ಡಾಕ್ಯುಮೆಂಟರಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದರುand , ಹಾಗೂ ಸುಮಾರು 2 ವರ್ಷಗಳ ಕಾಲ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು. ಅವರು 1996ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡರು.

ವೈಯಕ್ತಿಕ ಜೀವನ

ಅವರು ಮೊದಲು ಆಶಾಲತಾ (ನಿಜವಾದ ಹೆಸರು ಮೆಹ್ರುನ್ನೀಸಾ) ಅವರನ್ನು ವಿವಾಹವಾದರು, ಆಕೆಯು 1940ರ ದಶಕದಲ್ಲಿ ನಟಿಯಾಗಿದ್ದರು, ಅವರಿಗೆ ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಳು. ಮಗಳ ಹೆಸರು ಶಿಖಾ ವೋಹ್ರಾ ಹಾಗೂ ಆಕೆಯ ಮಗಳಾದ ಪರೊಮಿತಾ ವೊಹ್ರಾ ಚಿರಪರಿಚಿತ ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕಿ, ನೋಡಿ ಮತ್ತು . ಆನಂತರದಲ್ಲಿ ಅನಿಲ್ ಬಿಸ್ವಾಸ್ ಅವರು ನಟ ಬಿಕ್ರಮ್ ಕಪೂರ್ ಅವರ ಮಗಳಾದ ಹಿನ್ನೆಲೆ ಗಾಯಕಿ, ಮೀನಾ ಕಪೂರ್ ಅವರನ್ನು 1959ರಲ್ಲಿ ವಿವಾಹವಾದರು. ಮೀನಾ ಅವರು 1950ರ ದಶಕದ ಹಾಡುಗಳಾದ ನರ್ಗಿಸ್ ಅಭಿನಯದ ಪರ್ದೇಸಿ ಚಿತ್ರದ (1957) ಹಾಡು ‘ರಸಿಯಾ ರೆ ಮನ್ ಬಸಿಯಾ ರೆ’ ಹಾಗೂ ಮೀನಾ ಕುಮಾರಿ ಅಭಿನಯದ ಚಾರ್ ದಿಲ್ ಚಾರ್ ರಾಹೇನ್ ಚಿತ್ರದ ಹಾಡು ‘ಕಚ್ಚಿ ಹೈ ಉಮರಿಯಾ’ಗಳನ್ನು ಹಾಡಿದ್ದಾರೆ. ಅನಿಲ್ ಬಿಸ್ವಾಸ್ ಅವರು 31 ಮೇ 2003ರಂದು ನವದೆಹಲಿಯಲ್ಲಿ ನಿಧನರಾದರು . ಅವರು ತಮ್ಮ ಪತ್ನಿ ಹಾಗೂ ಪುತ್ರರಾದ ಅಮಿತ್ ಬಿಸ್ವಾಸ್ ಹಾಗೂ ಉತ್ಪಲ್ ಬಿಸ್ವಾಸ್ ಅವರನ್ನು ಮತ್ತವರ ಪುತ್ರಿ ಶಿಖಾ ವೋಹ್ರಾ ಅವರನ್ನು ಅಗಲಿದ್ದಾರೆ. ಶಹಿನ್‌ಶಾ (1988), ಮೈ ಆಝಾದ್ ಹ್ಞೂ ಹಾಗೂ ಆಜಾ ಮೇರಿ ಜಾನ್‌ ನಂತಹ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದಂತಹ ಅಮರ್-ಉತ್ಮಲ್ ಜೋಡಿಯಲ್ಲಿ ಉತ್ಪಲ್ ಬಿಸ್ವಾಸ್ ಅವರು ಇದ್ದಾರೆ (1993). ಅವರ ನಿಧನರಾದಾಗ, ಭಾರತದ ಪ್ರಧಾನ ಮಂತ್ರಿಯವರು, ಅವರ ಬಗೆಗೆ ಹೀಗೆ ಹೇಳಿದ್ದರು, “ಸಂಗೀತದ ಶಾಸ್ತ್ರೀಯತೆ ಹಾಗೂ ಜನಪ್ರಿಯತೆಗಳ ನಡುವೆ ಸಮತೋಲನ ಮಾಡಿ ಸಮ್ಮೋಹನ ಮಾಡುತ್ತಿದ್ದಂತಹ ಪ್ರಮುಖ ವ್ಯಕ್ತಿಯಾಗಿದ್ದರು”, ಹಾಗೂ, “ಭಾರತೀಯ ಚಲನಚಿತ್ರರಂಗದ ಸಂಗೀತಕ್ಕೆ ಹಲವಾರು ಪ್ರತಿಭಾನ್ವಿತ ಹಾಡುಗಾರರನ್ನು ಪರಿಚಯಿಸುವ ಅಪೂರ್ವ ವ್ಯಕ್ತಿತ್ವ” ಎಂದು ಹೊಗಳಿದರು.

ಚಲನಚಿತ್ರಗಳ ಪಟ್ಟಿ

  • ಛೋಟಿ ಛೋಟಿ ಬಾತೇ (1965)
  • ಸೌತೇಲಾ ಭಾಯಿ (1962)
  • ಅಂಗೂಲಿಮಾಲ (1960)
  • ಚಾರ್ ದಿಲ್ ಚಾರ್ ರಾಹೇ(1959)
  • ಸಂಸ್ಕಾರ್ (1958)
  • ಅಭಿಮಾನ್‌ (1973)
  • ಪರ್ದೇಸೀ (1957 ಚಲನಚಿತ್ರ)
  • ಹೀರ್ (1956)
  • ಪೈಸಾ ಹೈ ಪೈಸಾ (1956)
  • ದು-ಜಾನೇ (1955)
  • ಫರಾರ್ (1955)
  • ಜಲ್ತೀ ನಿಶಾನಿ (1955)
  • ಜಾಸೂಸ್ (1955)
  • ಮಾನ್ (1954)
  • ಮಹಾತ್ಮಾ ಕಬೀರ್ (1954)
  • ನಾಝ್ (1954)
  • ವಾರಿಸ್ (1954)
  • ಆಕಾಶ್ (1953)
  • ದಿಲ್-ಎ-ನಾದಾನ್ (1953)
  • ಫರೇಬ್ (1953)
  • ಜಲಿಯನ್‌ವಾಲಾ ಬಾಗ್ ಕಿ ಜ್ಯೋತಿ (1953)
  • ಮೆಹಮಾನ್ (1953)
  • ರಾಹಿ (1953)
  • ದೋ ರಹಾ (1952)
  • ಆರಾಮ್ (1951)
  • ದೋಸ್ ಸಿತಾರೆ (1951)
  • ತರಾನಾ (1979)
  • ಆರ್‍ಝೂArzoo (1950)
  • ಬೇಕಸೂರ್ (1950)
  • ಗರ್ಲ್ಸ್ ಸ್ಕೂಲ್ (1949)
  • ಜೀತ್ (1949)
  • ಲಾಡ್ಲಿ (1949)
  • ಅನೋಖಾ ಪ್ಯಾರ್ (1948)
  • ಗಜ್ರೆ (1948)
  • ವೀಣಾ (1948)
  • ಪೆಹಲಿ ನಝರ್ (1945)
  • ಜ್ವರ್ ಭತಾ (1944)
  • ಹಮಾರಿ ಬಾತ್ (1943)
  • ಕಿಸ್ಮತ್ (1943)
  • ಜವಾನಿJawani (1942)
  • ವಿಜಯ್ (1988) ....
  • ಆಸ್ರಾ (1941)
  • ಬಾಹೇನ್ (1941)
  • ಅಲಿಬಾಬಾ (1940/I)
  • ಔರತ್ (1940)
  • ಪೂಜಾ (1940)
  • ಏಕ್ ಹಿ ರಾಸ್ತಾ (1939)
  • ಜೀವನ್ ಸಾಥಿ (1939)
  • ಅಭಿಲಾಶಾ (1938)
  • ಡೈನಮೈಟ್ (1938)
  • ಗ್ರಾಮಫೋನ್ ಸಿಂಗರ್ (1938)
  • ಹಮ್ ತುಮ್ ಔರ್ ವೋ (1938)
  • ತೀನ್ ಸೌ ದಿನ್ ಕೆ ಬಾದ್ (1938)
  • ವತನ್ (1938)
  • ಜಂಟಲ್‌ಮನ್ ಡಾಕು (1937)
  • ಜಾಗಿರ್ದಾರ್ (1937)
  • ಕೋಕಿಲಾ (1937)
  • ಮಹಗೀತ್ (1937)
  • ಪ್ರೇಮ್ ಬಂಧನ್ (1936)
  • ಶೇರ್ ಕಾ ಪಂಜಾ (1936)
  • ಧರ್ಮಾ ಕಿ ದೇವಿ (1935)

ಹೆಚ್ಚಿನ ಓದಿಗಾಗಿ

  • ಅನಿಲ್ ಬಿಸ್ವಾಸ್: ಟ್ರೈಬ್ಯೂಟ್ , ಅವರ ಐವತ್ತನೆಯ ವರ್ಷದ ಸಂಗೀತ ಸಂಯೋಜನೆಯ ಪ್ರಬಂಧಗಳ ಸಂಗ್ರಹ, ಬೆಂಗಳೂರು, 1986.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

    ವಿಡಿಯೊ ಲಿಂಕ್

Tags:

ಸಂಯೋಜಕ ಅನಿಲ್ ಬಿಸ್ವಾಸ್ ಜೀವನ ಚರಿತ್ರೆಸಂಯೋಜಕ ಅನಿಲ್ ಬಿಸ್ವಾಸ್ ವೈಯಕ್ತಿಕ ಜೀವನಸಂಯೋಜಕ ಅನಿಲ್ ಬಿಸ್ವಾಸ್ ಚಲನಚಿತ್ರಗಳ ಪಟ್ಟಿಸಂಯೋಜಕ ಅನಿಲ್ ಬಿಸ್ವಾಸ್ ಹೆಚ್ಚಿನ ಓದಿಗಾಗಿಸಂಯೋಜಕ ಅನಿಲ್ ಬಿಸ್ವಾಸ್ ಉಲ್ಲೇಖಗಳುಸಂಯೋಜಕ ಅನಿಲ್ ಬಿಸ್ವಾಸ್ ಬಾಹ್ಯ ಕೊಂಡಿಗಳುಸಂಯೋಜಕ ಅನಿಲ್ ಬಿಸ್ವಾಸ್ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

🔥 Trending searches on Wiki ಕನ್ನಡ:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಿ. ಎಂ. ಶ್ರೀಕಂಠಯ್ಯಸಾಮಾಜಿಕ ಸಮಸ್ಯೆಗಳುಮಾನವ ಸಂಪನ್ಮೂಲ ನಿರ್ವಹಣೆಸಮಾಜಶಾಸ್ತ್ರಭಾರತದ ನದಿಗಳುಜಿ.ಎಸ್.ಶಿವರುದ್ರಪ್ಪಕರ್ನಾಟಕ ಲೋಕಸೇವಾ ಆಯೋಗಚೋಳ ವಂಶಶಕ್ತಿಗ್ರಂಥ ಸಂಪಾದನೆಕವಿರಾಜಮಾರ್ಗಶ್ರವಣಬೆಳಗೊಳರಾಷ್ಟ್ರಕವಿಲಾರ್ಡ್ ಕಾರ್ನ್‍ವಾಲಿಸ್ಅಕ್ಷಾಂಶ ಮತ್ತು ರೇಖಾಂಶವೆಂಕಟೇಶ್ವರ ದೇವಸ್ಥಾನಮೆಸೊಪಟ್ಯಾಮಿಯಾಬೆಂಗಳೂರುಗೃಹರಕ್ಷಕ ದಳಶ್ರೀಕೃಷ್ಣದೇವರಾಯಆಲೂರು ವೆಂಕಟರಾಯರುಲಿಯೊನೆಲ್‌ ಮೆಸ್ಸಿಆಹಾರ ಸಂಸ್ಕರಣೆವಾಲ್ಮೀಕಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದಲ್ಲಿ ಮೀಸಲಾತಿಆಯ್ಕಕ್ಕಿ ಮಾರಯ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಸಾರ್ವಜನಿಕ ಹಣಕಾಸುಆದಿಪುರಾಣಕರ್ನಾಟಕದ ಹಬ್ಬಗಳುವಿದ್ಯುಲ್ಲೇಪಿಸುವಿಕೆಜಲಶುದ್ಧೀಕರಣಗಂಗ (ರಾಜಮನೆತನ)ವಾಣಿಜ್ಯ ಪತ್ರಹಲ್ಮಿಡಿಶಿಶುನಾಳ ಶರೀಫರುಭಾರತೀಯ ರಿಸರ್ವ್ ಬ್ಯಾಂಕ್ತಾಮ್ರಕೆಂಪು ಮಣ್ಣುಸಿಂಧೂತಟದ ನಾಗರೀಕತೆಹೈದರಾಲಿಯುಗಾದಿಧೂಮಕೇತುಮೂಕಜ್ಜಿಯ ಕನಸುಗಳು (ಕಾದಂಬರಿ)ವಾಣಿಜ್ಯೋದ್ಯಮಸೀತೆರುಕ್ಮಾಬಾಯಿವಿಜಯ ಕರ್ನಾಟಕಮಲೈ ಮಹದೇಶ್ವರ ಬೆಟ್ಟಪ್ರವಾಸೋದ್ಯಮಅರ್ಜುನಉಪನಯನಹಸಿರು ಕ್ರಾಂತಿಸಿಂಗಾಪುರಶಿವವರ್ಲ್ಡ್ ವೈಡ್ ವೆಬ್ಮಂತ್ರಾಲಯಶೂದ್ರ ತಪಸ್ವಿಓಂ (ಚಲನಚಿತ್ರ)21ನೇ ಶತಮಾನದ ಕೌಶಲ್ಯಗಳುಕದಂಬ ಮನೆತನಶ್ರೀನಿವಾಸ ರಾಮಾನುಜನ್ಋತುಶ್ರೀ ರಾಘವೇಂದ್ರ ಸ್ವಾಮಿಗಳುದೆಹಲಿಕರ್ನಾಟಕದ ನದಿಗಳುಭೌಗೋಳಿಕ ಲಕ್ಷಣಗಳುಕನ್ನಡ ವ್ಯಾಕರಣಏಡ್ಸ್ ರೋಗಅಷ್ಟಾವಕ್ರಬದ್ರ್ ಯುದ್ಧಸಂಸ್ಕೃತಿನವೆಂಬರ್ ೧೪ಭಾರತದ ಉಪ ರಾಷ್ಟ್ರಪತಿಕರ್ನಾಟಕದ ಶಾಸನಗಳು🡆 More