ಅಗರಖೇಡ: ಭಾರತ ದೇಶದ ಗ್ರಾಮಗಳು

ಅಗರಖೇಡ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ.

ಅಗರಖೇಡ
ಅಗರಖೇಡ
village
Population
 (೨೦೧೨)
 • Total೧೫೦೦೦

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 6978 ಇದೆ. ಅದರಲ್ಲಿ 3621 ಪುರುಷರು ಮತ್ತು 3357 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಅಗರಖೇಡ: ಭೌಗೋಳಿಕ, ಹವಾಮಾನ, ಜನಸಂಖ್ಯೆ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ ಇದು ಕಟಬು ಸಮುದಾಯದವರು ಪೂಜಿಸುವ ಪ್ರಸಿಧ್ಧ ಮತ್ತು ಪ್ರಾಛೀನ ದೇವಾಲಯವಾಗಿದೆ,ಈ ಸಮುದಾಯವು ಸುಮಾರು ವರ್ಷಗಳ ಹಿ೦ದೇ ಗ್ರಾಮಕ್ಕೆ ವಲಸೆ ಬ೦ದವರಾಗಿದ್ದಾರೆ, ಇವರ ಮೂಲ ವೃತ್ತಿ ಮೀನು ಹಿಡಿಯುವ ಮತ್ತು ತೊಗಲು ಗೊ೦ಬೆ ಆಡಿಸುವ ಮಾಡುತ್ತಾ ಬ೦ದಿಧ್ಧಾರೆ,ಇವರನ್ನು ಕಿಳ್ಳಿಕೇತರ ,ಸಿಳ್ಳೆಕ್ಯಾತಸ್ ಅ೦ತಾ ಸಹ ಕರೆಯಲಾಗುತ್ತೆ.
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಭೌಧ ಮಂದಿರ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು. ಡಾ ಬಿ ಆರ್ ಅಂಬೆಡ್ಕರ ಜಯಂತಿ. ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

  • ಸರಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ಅಗರಖೇಡ
  • ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ, ಅಗರಖೇಡ
  • ಗಂಗಲಿಂಗ ಕಿರಿಯ ಪ್ರಾಥಮಿಕ ಶಾಲೆ, ಅಗರಖೇಡ
  • ಆದ್ಯ ಶ್ರೀರಂಗ ಹಿರಿಯ ಪ್ರಾಥಮಿಕ ಶಾಲೆ, ಅಗರಖೇಡ
  • ಶ್ರೀ ಶಂಕರಲಿಂಗ ಪ್ರೌಢ ಶಾಲೆ, ಅಗರಖೇಡ
  • ಶ್ರೀ ಶಿವರುಧ್ರಪ್ಪ ತೋಳನೂರ ಪದವಿ ಪೂರ್ವ ಮಹಾವಿದ್ಯಾಲಯ, ಅಗರಖೇಡ

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಮಳೆ ಮಾಪನ ಕೇಂದ್ರ

  • ಮಳೆ ಮಾಪನ ಕೇಂದ್ರ, ಅಗರಖೇಡ

ಬ್ಯಾಂಕ್

  • ಸಿಂಡಿಕೇಟ್ ಬ್ಯಾಂಕ್, ಅಗರಖೇಡ

ಗ್ರಾಮ ಪಂಚಾಯತಿ

  • ಗ್ರಾಮ ಪಂಚಾಯತಿ, ಅಗರಖೇಡ

ವಿಜಯಪುರ ಜಿಲ್ಲಾ ಇಂಡಿ ತಾಲೂಕಿನ ಅಗರಖೇಢ ಗ್ರಾಮ ಪಂಚಾಯತಿಯಲ್ಲಿ ಓಟ್ಟು ಎರಡು ಗ್ರಾಮಗಳಿದ್ದು ಓಂದು ಗುಬ್ಬೇವಾಡ ಮತ್ತೋಂದು ಶಿರಗೂರ ಇನಾಂ ಪಂಚಾಯತಿಯಲ್ಲಿ ಓಟ್ಟು ಸದಸ್ಯರ ಸಂಖ್ಯೆ 21 ಇದ್ದು ಗುಬ್ಬೇವಾಡದಲ್ಲಿ 4 ಸದಸ್ಯರು ಹಾಗೂ ಶಿರಗೂರ 2 ಜನ ಸದಸ್ಯರಿರುತ್ತಾರೆ ಮತ್ತು ಅಗರಖೇಢ ಗ್ರಾಮದಲ್ಲಿ ಗಂಗಲಿಂಗ ಎಂಬ ಪೂರಾತನ ದೇವಾಲಯವಿದೆ ಈ ಗ್ರಾಮವು ಸುಮರು ಇಂಡಿಯಿಂದಾ 22 ಕಿ.ಮಿ ಇರತ್ತದೆ ಹೆಚ್ಚು ಜನ ಕೃಷಿ ಅವಲಂಬಿತರಾಗಿದ್ದರೆ ಪ್ರಮುಖ ಬೇಳೆಗಳಾದ ಜೋಳ.ಕಬ್ಬು ಬೇಳೆಗಳಾಗಿವೆ ಗಂಗಲಿಂಗ ಎಂಬ ಪ್ರಾಥಮಿಕ ಶಾಲೆ ಇದ್ದು ಓಟ್ಟು 206 ವಿದ್ಯಾರ್ಥಿಗಳಿದ್ದು ಇತರೆ ಓಟ್ಟು 163 ಪರಿಷಿಷ್ಠ ಜಾತಿ 05 ಅಲ್ಪಸಂಖ್ಯಾತ 37 ವಿದ್ಯಾರ್ಥಿಗಳಿರುತ್ತಾರೆ.

ದೂರವಾಣಿ ವಿನಿಮಯ ಕೇಂದ್ರ

  • ದೂರವಾಣಿ ವಿನಿಮಯ ಕೇಂದ್ರ, ಅಗರಖೇಡ

ಅಂಚೆ ಕಚೇರಿ

ಅಗರಖೇಡ - 586111 (ಆಲೂರ, ಇಂಗಳಗಿ, ಗುಬ್ಬೇವಾಡ, ಹಿರೇಬೇವನೂರ, ಇಂಗಳಗಿ, ಮನೂರ, ಭೂಯ್ಯಾರ).

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅಗರಖೇಡ

ಹಾಲು ಉತ್ಪಾದಕ ಸಹಕಾರಿ ಸಂಘ

  • ಹಾಲು ಉತ್ಪಾದಕ ಸಹಕಾರಿ ಸಂಘ, ಅಗರಖೇಡ

ಪ್ರಾಥಮಿಕ ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಅಗರಖೇಡ

ಪಶು ಆಸ್ಪತ್ರೆ

  • ಪಶು ಆಸ್ಪತ್ರೆ, ಅಗರಖೇಡ

ನೀರು ಬಳಕೆದಾರರ ಸಹಕಾರ ಸಂಘ

  • ನೀರು ಬಳಕೆದಾರರ ಸಹಕಾರ ಸಂಘ, ಅಗರಖೇಡ

ಖಾದಿ ಗ್ರಾಮೋದ್ಯೋಗ

  • ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಅಗರಖೇಡ

ಕಾಲುವೆ

  • ಅಗರಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ

ಹೊರ ಪೋಲಿಸ್ ಠಾಣೆ

  • ಹೊರ ಪೋಲಿಸ್ ಠಾಣೆ, ಅಗರಖೇಡ

ಬಿಜಾಪುರ ಕರ್ನಾಟಕ

ಅಗರಖೇಡ: ಭೌಗೋಳಿಕ, ಹವಾಮಾನ, ಜನಸಂಖ್ಯೆ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ

Tags:

ಅಗರಖೇಡ ಭೌಗೋಳಿಕಅಗರಖೇಡ ಹವಾಮಾನಅಗರಖೇಡ ಜನಸಂಖ್ಯೆಅಗರಖೇಡ ಸಾಂಸ್ಕೃತಿಕಅಗರಖೇಡ ಕಲೆ ಮತ್ತು ಸಂಸ್ಕೃತಿಅಗರಖೇಡ ಧರ್ಮಅಗರಖೇಡ ಭಾಷೆಅಗರಖೇಡ ದೇವಾಲಯಅಗರಖೇಡ ಮಸೀದಿಅಗರಖೇಡ ನೀರಾವರಿಅಗರಖೇಡ ಕೃಷಿ ಮತ್ತು ತೋಟಗಾರಿಕೆಅಗರಖೇಡ ಆರ್ಥಿಕತೆಅಗರಖೇಡ ಉದ್ಯೋಗಅಗರಖೇಡ ಬೆಳೆಅಗರಖೇಡ ಸಸ್ಯಅಗರಖೇಡ ಪ್ರಾಣಿಅಗರಖೇಡ ಹಬ್ಬಅಗರಖೇಡ ಶಿಕ್ಷಣಅಗರಖೇಡ ಸಾಕ್ಷರತೆಅಗರಖೇಡ ರಾಜಕೀಯಅಗರಖೇಡ ಮಳೆ ಮಾಪನ ಕೇಂದ್ರಅಗರಖೇಡ ಬ್ಯಾಂಕ್ಅಗರಖೇಡ ಗ್ರಾಮ ಪಂಚಾಯತಿಅಗರಖೇಡ ದೂರವಾಣಿ ವಿನಿಮಯ ಕೇಂದ್ರಅಗರಖೇಡ ಅಂಚೆ ಕಚೇರಿಅಗರಖೇಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಅಗರಖೇಡ ಹಾಲು ಉತ್ಪಾದಕ ಸಹಕಾರಿ ಸಂಘಅಗರಖೇಡ ಪ್ರಾಥಮಿಕ ಆರೋಗ್ಯ ಕೇಂದ್ರಅಗರಖೇಡ ಪಶು ಆಸ್ಪತ್ರೆಅಗರಖೇಡ ನೀರು ಬಳಕೆದಾರರ ಸಹಕಾರ ಸಂಘಅಗರಖೇಡ ಖಾದಿ ಗ್ರಾಮೋದ್ಯೋಗಅಗರಖೇಡ ಕಾಲುವೆಅಗರಖೇಡ ಹೊರ ಪೋಲಿಸ್ ಠಾಣೆಅಗರಖೇಡಇಂಡಿಕರ್ನಾಟಕವಿಜಯಪುರ

🔥 Trending searches on Wiki ಕನ್ನಡ:

ಪಂಪನಿದ್ರೆರಾಷ್ಟ್ರಕವಿಭಾರತದ ರಾಷ್ಟ್ರಪತಿಗಳ ಪಟ್ಟಿಘಾಟಿ ಸುಬ್ರಹ್ಮಣ್ಯಅಕ್ಷಾಂಶ ಮತ್ತು ರೇಖಾಂಶಲಕ್ಷ್ಮಿಮಸೂರ ಅವರೆಭಾರತದಲ್ಲಿನ ಚುನಾವಣೆಗಳುಕೊತ್ತುಂಬರಿಭಾರತದ ಉಪ ರಾಷ್ಟ್ರಪತಿಡಿ.ವಿ.ಗುಂಡಪ್ಪಸಂಯುಕ್ತ ರಾಷ್ಟ್ರ ಸಂಸ್ಥೆಬರಗೂರು ರಾಮಚಂದ್ರಪ್ಪಏಡ್ಸ್ ರೋಗಭಾರತದ ಚುನಾವಣಾ ಆಯೋಗಎನ್. ರಂಗನಾಥ ಶರ್ಮಾಹಣದುಬ್ಬರಕರ್ಮಧಾರಯ ಸಮಾಸಮೌರ್ಯ (ಚಲನಚಿತ್ರ)ವೈದೇಹಿಕರ್ನಾಟಕದ ತಾಲೂಕುಗಳುಸುಕನ್ಯಾ ಮಾರುತಿತಂಬಾಕುರಾಘವಾಂಕಬೆಲ್ಲವ್ಯಾಸರಾಯರುಕೈಗಾರಿಕಾ ನೀತಿಹೊಯ್ಸಳ ಸಾಮ್ರಾಜ್ಯದ ಸಮಾಜ.ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕೇಂದ್ರಾಡಳಿತ ಪ್ರದೇಶಗಳುವಿಜಯನಗರಕೆ. ಎಸ್. ನರಸಿಂಹಸ್ವಾಮಿನೇಮಿಚಂದ್ರ (ಲೇಖಕಿ)ವಿಜಯಪುರ ಜಿಲ್ಲೆರೈತವಾರಿ ಪದ್ಧತಿಮಾರುಕಟ್ಟೆಮೈಗ್ರೇನ್‌ (ಅರೆತಲೆ ನೋವು)ಕನ್ನಡದಲ್ಲಿ ಮಹಿಳಾ ಸಾಹಿತ್ಯಸಾರ್ವಜನಿಕ ಆಡಳಿತಗಾಂಧಿ ಮತ್ತು ಅಹಿಂಸೆಮಾಸ್ತಿ ವೆಂಕಟೇಶ ಅಯ್ಯಂಗಾರ್ಮಂಕುತಿಮ್ಮನ ಕಗ್ಗಕನ್ನಡ ಸಾಹಿತ್ಯಹಿಂದಿ ಭಾಷೆಶನಿ (ಗ್ರಹ)ಕರ್ನಾಟಕದ ನದಿಗಳುಭಾಷೆಜೈಪುರಪಂಜೆ ಮಂಗೇಶರಾಯ್ಹಲ್ಮಿಡಿ ಶಾಸನಸಂಪ್ರದಾಯಮಾನಸಿಕ ಆರೋಗ್ಯಬಡ್ಡಿವಾಯು ಮಾಲಿನ್ಯನಾಯಕತ್ವಮಳೆನೀರು ಕೊಯ್ಲುಮೆಕ್ಕೆ ಜೋಳಮುಖೇಶ್ ಅಂಬಾನಿಪಿ.ಬಿ.ಶ್ರೀನಿವಾಸ್ರೈತಬೆಳಗಾವಿಜ್ಯೋತಿಷ ಶಾಸ್ತ್ರಗೋಕರ್ಣಸಂಖ್ಯೆಸಮಾಸಭಾರತೀಯ ಶಾಸ್ತ್ರೀಯ ನೃತ್ಯಹುಣಸೆಯುಗಾದಿವೆಂಕಟೇಶ್ವರ ದೇವಸ್ಥಾನಗುಪ್ತ ಸಾಮ್ರಾಜ್ಯಆಚರಣೆಯಣ್ ಸಂಧಿಕುರಿ ಸಾಕಾಣಿಕೆಸಂತಾನೋತ್ಪತ್ತಿಯ ವ್ಯವಸ್ಥೆಹವಾಮಾನಗ್ರಂಥಾಲಯಗಳು🡆 More