೨೦೧೭ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ೬೨ ಸಾಧಕರಿಗೆ ಲಭಿಸಿದೆ.
ಪ್ರಶಸ್ತಿಯು ೧ಲಕ್ಷ ರೂಪಾಯಿ ನಗದು, ೨೫ಗ್ರಾಂ ಚಿನ್ನ, ಹಾರ, ಶಾಲು, ಮೈಸೂರು ಪೇಟ ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಈ ವರ್ಷ ಚಿನ್ನದ ತೂಕವನ್ನು ೨೦ಗ್ರಾಂನಿಂದ ೨೫ಗ್ರಾಂಗೆ ಹೆಚ್ಚಿಸಲಾಗಿದೆ. ರಾಜ್ಯ ರಚನೆಯ ೬೨ನೇ ವರ್ಷದ ಆಚರಣೆಯ ದ್ಯೋತಕವಾಗಿ ೬೨ ಜನರಿಗೆ ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮುಖ್ಯಮಂತ್ರಿಯವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೊನೆಯ ಕ್ಷಣದಲ್ಲಿ ಸರಕಾರ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿತು. ಡಾ.ಪಿ.ಕೆ.ರಾಜಶೇಖರ್ರವರಿಗೆ ಮೊದಲೇ ಒಮ್ಮೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರಿಂದ, ಅವರ ಬದಲಿಗೆ ಸೀತಾರಾಮ ಜಾಗೀರದಾರ ಅವನ್ನು ಆಯ್ಕೆ ಮಾಡಲಾಗಿದೆ. ಡಾ.ರವೀಂದ್ರನಾಥ ಶ್ಯಾನುಭಾಗ್ ಪ್ರಶಸ್ತಿ ನಿರಾಕರಿಸಿದ್ದರಿಂದ ಅವರ ಬದಲಿಗೆ ಕಲಬುರ್ಗಿಯ ಡಾ.ಸೈಯದ್ ಷಾ ಖುಸ್ರೊ ಅವರನ್ನು ಆಯ್ಕೆ ಮಾಡಲಾಗಿದೆ. ೨೦೧೭ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಕೊನೆಯ ಪಟ್ಟಿ ಇಂತಿದೆ :
ಸಾಧಕರು | ಸಾಧನೆಯ ಕ್ಷೇತ್ರ | ಟಿಪ್ಪಣಿ |
---|---|---|
ನಾಗಮೋಹನ್ ದಾಸ್ | ನ್ಯಾಯಾಂಗ | |
ಬಸವರಾಜ ಸಬರದ | ಸಾಹಿತ್ಯ | |
ವೈದೇಹಿ | ಸಾಹಿತ್ಯ | |
ಮಾಹೆರ್ ಮನ್ಸೂರ್ | ಸಾಹಿತ್ಯ | |
ಹನುಮಾಕ್ಷಿ ಗೋಗಿ | ಸಾಹಿತ್ಯ | |
ಡಿ.ಎಸ್. ನಾಗಭೂಷಣ | ಸಾಹಿತ್ಯ | |
ಬೇಲೂರು ಕೃಷ್ಣಮೂರ್ತಿ | ರಂಗಭೂಮಿ | |
ಗೂಡೂರು ಮಮತಾ | ರಂಗಭೂಮಿ | |
ಸಿ.ಕೆ. ಗುಂಡಣ್ಣ | ರಂಗಭೂಮಿ | |
ಶಿವಪ್ಪ ಭರಮಪ್ಪ ಅದರಗುಂಚಿ | ರಂಗಭೂಮಿ | |
ಎ.ವರಲಕ್ಷ್ಮೀ | ರಂಗಭೂಮಿ | |
ಎನ್.ವೈ. ಪುಟ್ಟಣ್ಣಯ್ಯ | ರಂಗಭೂಮಿ | |
ಕಾಂಚನಾ | ಸಿನಿಮಾ–ಕಿರುತೆರೆ | |
‘ಮುಖ್ಯಮಂತ್ರಿ’ ಚಂದ್ರು | ಸಿನಿಮಾ–ಕಿರುತೆರೆ | |
ಹಾಸನ ರಘು | ಸಿನಿಮಾ–ಕಿರುತೆರೆ | |
ಲಲಿತಾ ಜೆ. ರಾವ್ | ಸಂಗೀತ–ನೃತ್ಯ | |
ರಾಜಪ್ರಭು ಧೋತ್ರೆ | ಸಂಗೀತ–ನೃತ್ಯ | |
ರಾಜೇಂದ್ರ ಸಿಂಗ್ ಪವಾರ್ | ಸಂಗೀತ–ನೃತ್ಯ | |
ವೀರೇಶ ಕಿತ್ತೂರ | ಸಂಗೀತ–ನೃತ್ಯ | |
ಉಳ್ಳಾಲ ಮೋಹನ ಕುಮಾರ್ | ಸಂಗೀತ–ನೃತ್ಯ | |
ತಂಬೂರಿ ಜವರಯ್ಯ | ಜಾನಪದ | |
ಶಾವಮ್ಮ | ಜಾನಪದ | |
ಗೊರವರ ಮೈಲಾರಪ್ಪ | ಜಾನಪದ | |
ತಾಯಮ್ಮ | ಜಾನಪದ | |
ಮಾನಪ್ಪ ಈರಪ್ಪ ಲೋಹಾರ | ಜಾನಪದ | |
ಕೃಷ್ಣಪ್ಪ ಗೋವಿಂದಪ್ಪ ಪುರದರ | ಜಾನಪದ | |
ಡೆಂಗಮ್ಮ ಕರಡಿಗುಡ್ಡ | ಜಾನಪದ | |
ಶಿವರಾಮ ಜೋಗಿ | ಯಕ್ಷಗಾನ–ಬಯಲಾಟ | |
ಬಳ್ಕೂರು ಕೃಷ್ಣಯಾಜಿ | ಯಕ್ಷಗಾನ–ಬಯಲಾಟ | |
ಈಶ್ವರವ್ವ ಹುಚ್ಚವ್ವ ಮಾದರ | ಯಕ್ಷಗಾನ–ಬಯಲಾಟ | |
ಕೆ. ಪಂಪಾಪತಿ (ಸಾರಥಿ) | ಯಕ್ಷಗಾನ–ಬಯಲಾಟ | |
ಮೀರಾ ನಾಯಕ್ | ಸಮಾಜ ಸೇವೆ | |
ಡಾ.ಸೈಯದ್ ಷಾ ಖುಸ್ರೊ | ಸಮಾಜ ಸೇವೆ | |
ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಗಲಿ | ಸಮಾಜ ಸೇವೆ | |
ರಾಮಚಂದ್ರ ಗುಹಾ | ಸಂಕೀರ್ಣ | |
ಎಸ್. ಸಯ್ಯದ್ ಅಹಮದ್ | ಸಂಕೀರ್ಣ | |
ಎಚ್.ಬಿ. ಮಂಜುನಾಥ್ | ಸಂಕೀರ್ಣ | |
ಸೀತಾರಾಮ ಜಾಗೀರದಾರ | ಸಂಕೀರ್ಣ | |
ಬಿ. ಗಂಗಾಧರಮೂರ್ತಿ | ಸಂಕೀರ್ಣ | |
ಜಿ.ಎಲ್.ಎನ್. ಸಿಂಹ | ಚಿತ್ರಕಲೆ–ಶಿಲ್ಪಕಲೆ | |
ಶಾಣಮ್ಮ ಮ್ಯಾಗೇರಿ | ಚಿತ್ರಕಲೆ–ಶಿಲ್ಪಕಲೆ | |
ಹೊನ್ನಪ್ಪಾಚಾರ್ಯ | ಚಿತ್ರಕಲೆ–ಶಿಲ್ಪಕಲೆ | |
ಮನೋಹರ ಕೆ. ಪತ್ತಾರ | ಚಿತ್ರಕಲೆ–ಶಿಲ್ಪಕಲೆ | |
ಬಿಸಲಯ್ಯ | ಕೃಷಿ–ಪರಿಸರ | |
ಅಬ್ದುಲ್ ಖಾದರ ಇಮಾಮ ಸಾಬ | ಕೃಷಿ–ಪರಿಸರ | |
ಎಸ್.ಎಂ. ಕೃಷ್ಣಪ್ಪ | ಕೃಷಿ–ಪರಿಸರ | |
ಸಿ. ಯತಿರಾಜು | ಕೃಷಿ–ಪರಿಸರ | |
ಕುಸುಮಾ ಶಾನುಭಾಗ್ | ಮಾಧ್ಯಮ | |
ಎ.ಸಿ. ರಾಜಶೇಖರ (ಅಬ್ಬೂರು) | ಮಾಧ್ಯಮ | |
ವಿಠ್ಠಪ್ಪ ಗೋರಂಟ್ಲಿ | ಮಾಧ್ಯಮ | |
ರಾಮದೇವ ರಾಕೆ | ಮಾಧ್ಯಮ | |
ಡಾ. ಎಂ.ಆರ್. ಶ್ರೀನಿವಾಸನ್ | ವಿಜ್ಞಾನ–ತಂತ್ರಜ್ಞಾನ | |
ಡಾ. ಮುನಿವೆಂಕಟಪ್ಪ ಸಂಜಪ್ಪ | ವಿಜ್ಞಾನ–ತಂತ್ರಜ್ಞಾನ | |
ಡಾ. ಲೀಲಾವತಿ ದೇವದಾಸ್ | ವೈದ್ಯಕೀಯ | |
ಎಲ್. ಶೇಖರ್ ನಾಯಕ್ | ಕ್ರೀಡೆ | |
ವಿ.ಆರ್. ರಘುನಾಥ್ | ಕ್ರೀಡೆ | |
ಸಹನಾ ಕುಮಾರಿ | ಕ್ರೀಡೆ | |
ಡಾ. ಲೀಲಾವತಿ ದೇವದಾಸ್ | ಕ್ರೀಡೆ | |
ಪಿ. ಶ್ಯಾಮರಾಜು | ಶಿಕ್ಷಣ | |
ಬಿ.ಎ. ರೆಡ್ಡಿ | ಎಂಜಿನಿಯರಿಂಗ್ | |
ರೋನಾಲ್ಡ್ ಕೊಲಾಸೋ | ಹೊರನಾಡು |
ಸಾಧಕರು | ಸಾಧನೆಯ ಕ್ಷೇತ್ರ | ಊರು | ಟಿಪ್ಪಣಿ |
---|---|---|---|
ನಾಗನೂರು ವಚನ ಅಧ್ಯಯನ ಕೇಂದ್ರ | ವಚನ ಅಧ್ಯಯನ | ಬೆಳಗಾವಿ |
This article uses material from the Wikipedia ಕನ್ನಡ article ರಾಜ್ಯೋತ್ಸವ ಪ್ರಶಸ್ತಿ ೨೦೧೭, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.