ಯಾಸಿರ್ ಅರಾಫತ್

ಯಾಸಿರ್ ಅರಾಫತ್ (ಅರಬಿಕ್: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು(೧೯೯೩ ರಿಂದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು).

ಫತಾ ದ ನಾಯಕರು ಮತ್ತು ೧೯೬೯ ರಿಂದ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾಂತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು.

ياسر عرفات
ಯಾಸರ್ ಅರಾಫತ್
ಯಾಸಿರ್ ಅರಾಫತ್


ಪ್ಯಾಲಸ್ತೀನಿ ರಾಷ್ಟ್ರೀಯ ಪ್ರಾಧಿಕಾರದ ಮೊದಲ ರಾಷ್ಟ್ರಪತಿ
ಅಧಿಕಾರದ ಅವಧಿ
ಜನವರಿ ೨೦, ೧೯೯೬ – ನವೆಂಬರ್ ೧೧, ೨೦೦೪
ಪೂರ್ವಾಧಿಕಾರಿ ಅಹ್ಮದ್ ಶುಕೈರಿ ೧೯೬೪-೧೯೬೭
ಉತ್ತರಾಧಿಕಾರಿ ರಾವ್ಹಿ ಫತ್ತು

ಜನನ ಆಗಸ್ಟ್ ೨೪ ಅಥವಾ ಆಗಸ್ಟ್ ೪, ೧೯೨೯
ಕೈರೊ ಅಥವಾ ಜೆರೂಸಲೆಮ್
ಮರಣ ನವೆಂಬರ್ ೧೧, ೨೦೦೪
ಪ್ಯಾರಿಸ್
ರಾಜಕೀಯ ಪಕ್ಷ ಫತಾಹ್
ಜೀವನಸಂಗಾತಿ ಸುಹಾ ಅರಾಫತ್

ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾದಕರಾದರೆ ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು.

ಇತ್ತೀಚಿನ ಸುದ್ದಿಯೆಂದರೆ ನವೆಂಬರ್ ೧೧, ೨೦೦೪ ರಂದು ಪ್ಯಾರಿಸ್ ನಲ್ಲಿ ಇವರು ನಿಧನರಾದರು.

ಜೀವನ

ಪ್ರಾಥಮಿಕ ವರ್ಷಗಳು

ಅರಾಫತ್ ಅವರ ಹೇಳಿಕೆಯ ಪ್ರಕಾರ ಅವರು ಜನಿಸಿದ್ದು ಜೆರುಸಲೆಂ ನಲ್ಲಿ; ಆದರೆ ಅನೇಕರ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಈಜಿಪ್ಟ್ ದೇಶದ ಕೈರೋ ನಗರದಲ್ಲಿ. ಕೈರೋ ವಿಶ್ವವಿದ್ಯಾಲಯದಲ್ಲಿ ಓದಿದ ಅರಾಫತ್ ೧೯೪೮ ರ ಅರಬ್-ಇಸ್ರೇಲಿ ಯುದ್ಧದಲ್ಲಿ ಪಾಲ್ಗೊಳ್ಳಲು ವಿಫಲ ಯತ್ನ ನಡೆಸಿದರು. ೧೯೫೨ ರಲ್ಲಿ ಪ್ಯಾಲೆಸ್ಟಿನಿಯನ್ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದರು. ೧೯೫೬ ರಲ್ಲಿ ಸಿವಿಲ್ ಇಂಜಿನಿಯರಿ೦ಗ್ ಪದವಿಯನ್ನು ಪಡೆದರಲ್ಲದೆ ಸುಯೆಜ್ ಯುದ್ಧದಲ್ಲಿ ಈಜಿಪ್ಟ್ ನ ಭೂಸೇನೆಯಲ್ಲಿ ಪಾಲ್ಗೊಂಡರು.

ಫತಾ

ನಂತರ ಕುವೈತ್ ದೇಶಕ್ಕೆ ತೆರಳಿದ ಅರಾಫತ್ ಸ್ವತಂತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ ಫತಾಎಂಬ ಸಂಸ್ಥೆಯನ್ನು ಆರಂಭಿಸಿದರು. ೧೯೬೪ ರಲ್ಲಿ ಒಂದು ಇಸ್ರೇಲಿ ನೀರಿನ ಪಂಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ ಜೋರ್ಡನ್ ದೇಶದ ಅಲ್-ಕರಮೇಹ್ ಗ್ರಾಮದಲ್ಲಿ ಇಸ್ರೇಲಿ ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು.

ಯಾಸಿರ್ ಅರಾಫತ್ 
ಯಾಸಿರ್ ಅರಾಫತ್

ಜೋರ್ಡನ್

೧೯೭೦ ರಲ್ಲಿ ಜೋರ್ಡನ್ ದೇಶ ಮತ್ತು ಪ್ಯಾಲೆಸ್ಟೈನಿಯನ್ ಉಗ್ರವಾದಿಗಳ ನಡುವೆ ಸಾಕಷ್ತು ಭಿನ್ನಾಭಿಪ್ರಾಯಗಳು ತಲೆದೋರಿದವು. ಜೂನ್ ೧೯೭೦ ರಲ್ಲಿ ನೇರ ಯುದ್ಧ ಆರಂಭವಾಯಿತು. ಸಿರಿಯಾ ದೇಶದಿಂದ ಸಹಾಯ ಪಡೆದ ಅರಾಫತ್ ಈ ಸಮಯಕ್ಕೆ ಪ್ಯಾಲೆಸ್ಟೈನ್ ವಿಮೋಚನಾ ಸ೦ಘ (ಪಿಎಲ್‍ಒ) ದ ಸೇನಾನಾಯಕರಾಗಿದ್ದರು. ಜೋರ್ಡನ್ ಗೆ ಇಸ್ರೇಲ್ ಮತ್ತು ಅಮೆರಿಕ ಗಳಿಂದ ಸಹಾಯದ ದೊರೆಯುವ ಲಕ್ಷಣಗಳು ಕಂಡುಬಂದವು. ಕೊನೆಗೆ ಜೋರ್ಡನ್ ಆ ವರ್ಷದ ಸಪ್ಟೆಂಬರ್ ನಲ್ಲಿ ಮೇಲುಗೈ ಸಾಧಿಸಿತು.

ಲೆಬನಾನ್

೧೯೭೩ ರಲ್ಲಿ ಅಮೆರಿಕದ ರಾಷ್ಟ್ರೀಯ ಸುರಕ್ಷಾ ಪ್ರಾಧಿಕಾರದವರು ಪಡೆದ ಮಾಹಿತಿಯ ಮೇರೆಗೆ ಸುಡನ್ ದೇಶದ ಸೌದಿ ರಾಯಭಾರಿ ಕಛೇರಿಯ ಮೇಲೆ ನಡೆದ ದಾಳಿ, ಹಾಗೂ ನಂತರ ಅಮೆರಿಕನ್ ರಾಯಭಾರಿ ಮತ್ತು ಇನ್ನಿತರರ ಕೊಲೆಗೆ ಅರಾಫತ್ ಅವರು ಆದೇಶ ನೀಡಿದರು ಎನ್ನಲಾಯಿತು. ಅರಾಫತ್ ಅವರು ಇದನ್ನು ಅಲ್ಲಗಳೆದರು.

ಜೋರ್ಡನ್ ನಿಂದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ ಲೆಬನಾನ್ ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿಂದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರಂಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರಂಭಿಸಿತು.

೧೯೭೨ ರ ಮ್ಯೂನಿಚ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅಂಗವೆಂದು ಹೇಳಲಾದಕಪ್ಪು ಸಪ್ಟಂಬರ ಇದನ್ನು ನಡೆಸಿತು ಎಂದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸಂಬಂಧವಿಲ್ಲವೆಂದು ಹೇಳಿದರು.

೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸಂಸ್ಥೆ ಎಂಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು.

೧೯೭೮ ರ ಲೆಬನಾನ್ ನ ಆಂತರಿಕ ಯುದ್ಧದಲ್ಲಿ ಪಿಎಲ್‍ಒ ಪಾಲ್ಗೊಂಡಿತ್ತು. ಲೆಬನಾನ್ ದೇಶದ ಕ್ರೈಸ್ತ ಸಮುದಾಯದ ಆಪಾದನೆಯ೦ತೆ ಅನೇಕರ ಸಾವಿಗೆ ಅರಾಫತ್ ಅವರೇ ಕಾರಣರು. ಇಸ್ರೇಲ್ ಲೆಬನಾನ್ ನ ಕ್ರೈಸ್ತ ಸಮುದಾಯದ ಪರ ವಹಿಸಿತು ಮತ್ತು ಎರಡು ಮುಖ್ಯ ದಾಳಿಗಳನ್ನು ನಡೆಸಿತು. ಅನೇಕ ಜನ ಪ್ಯಾಲೆಸ್ಟೈನ್ ನ ಪೌರರು ಈ ದಾಳಿಗಳಲ್ಲಿ ಮೃತಪಟ್ಟರು.

ಟನೀಸಿಯಾ

೧೯೮೨ ರಲ್ಲಿ ಲೆಬನಾನ್ ನ ಮೇಲೆ ಇಸ್ರೇಲ್ ನ ದಾಳಿಯ ಸಮಯದಲ್ಲಿ ಅರಾಫತ್ ಮತ್ತು ಪಿಎಲ್‍ಒ ಅನ್ನು ಲೆಬನಾನ್ ನಿಂದ ಹೊರಹೋಗಲು ಬಿಡಲಾಯಿತು. ಅರಾಫತ್ ಅವರು ಇ ಬಾರಿ ಟುನೀಸಿಯಾ ದೇಶಕ್ಕೆ ತೆರಳಿ ಅಲ್ಲಿ ತಮ್ಮ ನೆಲೆಯನ್ನು ೧೯೯೩ ರ ವರೆಗೆ ಸ್ಥಾಪಿಸಿದರು.

೧೯೯೩ ರಲ್ಲಿ, ಅಮೆರಿಕದ ಒತ್ತಡದ ಮೇರೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಓಸ್ಲೋ ಒಪ್ಪಂದವನ್ನು ಸ್ಥಾಪಿಸಿದರು. ಇರದಂತೆ, ಐದು ವರ್ಷಗಳಲ್ಲಿ ಪ್ಯಾಲೆಸ್ಟೈನ್ ನಲ್ಲಿ ಸ್ವ-ರಾಜ್ಯ ಉಂಟಾಗುವಂತೆ ಒಪ್ಪಂದವಾಯಿತು.

ಪ್ಯಾಲೆಸ್ಟೀನಿಯನ್ ಪ್ರಾಧಿಕಾರ

೧೯೯೬ ರಲ್ಲಿ ಪ್ಯಾಲೆಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷರಾಗಿ ಅರಾಫತ್ ಚುನಾಯಿತರಾದರು. ೧೯೯೮ ರ ಸಮಯಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಹೊಂದಿಸಿದ ಮಾತುಕತೆಗಳ ನಂತರ ಇಸ್ರೇಲ್ ನ ಪ್ರಧಾನಿ ಎಹುಡ್ ಬರಾಕ್ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಗಳ ಕೆಲ ಭಾಗಗಳನ್ನು ಪ್ಯಾಲೆಸ್ಟೈನ್ ಗೆ ಬಿಟ್ಟುಕೊಡುತ್ತೇನೆಂದು ತಿಳಿಸಿದರು. ಆದರೆ ವಿವಾದಶೀಲ ನಿರ್ಧಾರವೊಂದರಲ್ಲಿ ಅರಾಫತ್ ಇದನ್ನು ನಿರಾಕರಿಸಿದರು.

ನಿಧನ

ಅಕ್ಟೋಬರ್ ೨೮, ೨೦೦೪ ರಲ್ಲಿ ಅರಾಫತ್ ತೀವ್ರವಾಗಿ ಅಸ್ವಸ್ಥರಾದರು. ಅವರನ್ನು ಪ್ಯಾರಿಸ್ ನಗರದ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಇತ್ತೀಚಿನ ಬೆಳವಣಿಗೆಯಲ್ಲಿ ಅರಾಫತ್ ಅವರು ನವೆಂಬರ್ ೧೧ ರಂದು ಮರಣ ಹೊಂದಿದರೆಂಬ ಘೋಷಣೆ ಬಂದಿದೆ.

ಉಲ್ಲೇಖಗಳು

Tags:

ಯಾಸಿರ್ ಅರಾಫತ್ ಜೀವನಯಾಸಿರ್ ಅರಾಫತ್ ನಿಧನಯಾಸಿರ್ ಅರಾಫತ್ ಉಲ್ಲೇಖಗಳುಯಾಸಿರ್ ಅರಾಫತ್ಅರಬಿಕ್ನೊಬೆಲ್ಪ್ಯಾಲೆಸ್ಟೈನ್

🔥 Trending searches on Wiki ಕನ್ನಡ:

ಲಕ್ಷ್ಮೀಶಶಬರಿಸಿದ್ದಪ್ಪ ಕಂಬಳಿಮಂಗಳ (ಗ್ರಹ)ವಿವಾಹಈಸೂರುಶುಕ್ರಸೌರಮಂಡಲರಾಮಊಳಿಗಮಾನ ಪದ್ಧತಿಚಂದ್ರಶೇಖರ ಕಂಬಾರಪಾರ್ವತಿಮೂಕಜ್ಜಿಯ ಕನಸುಗಳು (ಕಾದಂಬರಿ)ಖೊಖೊಭಾರತದ ರೂಪಾಯಿಆಧುನಿಕ ವಿಜ್ಞಾನಕರ್ನಾಟಕ ಜನಪದ ನೃತ್ಯಕಂದಭಾರತದ ರಾಷ್ಟ್ರಪತಿಗಳ ಪಟ್ಟಿಬೌದ್ಧ ಧರ್ಮ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಮಲ್ಟಿಮೀಡಿಯಾವಾಯು ಮಾಲಿನ್ಯಪು. ತಿ. ನರಸಿಂಹಾಚಾರ್ಎಳ್ಳೆಣ್ಣೆಅಳತೆ, ತೂಕ, ಎಣಿಕೆಮನೆವಿಜಯದಾಸರುಮಲೇರಿಯಾಗುಪ್ತ ಸಾಮ್ರಾಜ್ಯಚಂದ್ರಗುಪ್ತ ಮೌರ್ಯಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಅರಿಸ್ಟಾಟಲ್‌ಕೃಷ್ಣದೇವರಾಯವೆಬ್‌ಸೈಟ್‌ ಸೇವೆಯ ಬಳಕೆಮುಪ್ಪಿನ ಷಡಕ್ಷರಿಪೊನ್ನಕ್ಯಾನ್ಸರ್ನಗರರಾಶಿಕರ್ಮಕಾರ್ಮಿಕರ ದಿನಾಚರಣೆರಾಷ್ಟ್ರಕವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿನಾಮಪದಭೋವಿಅಶೋಕನ ಶಾಸನಗಳುಎ.ಎನ್.ಮೂರ್ತಿರಾವ್ಫೇಸ್‌ಬುಕ್‌ಡಿ.ಕೆ ಶಿವಕುಮಾರ್ದೇವರ ದಾಸಿಮಯ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಒಗಟುನಿರ್ವಹಣೆ ಪರಿಚಯಭಗತ್ ಸಿಂಗ್ಯುಗಾದಿಜನಪದ ಕಲೆಗಳುಪರಿಸರ ವ್ಯವಸ್ಥೆತುಳುಆರೋಗ್ಯಕಪ್ಪೆ ಅರಭಟ್ಟಸರ್ಪ ಸುತ್ತುಕಂಸಾಳೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮಹಾತ್ಮ ಗಾಂಧಿಮಾವುಮಹೇಂದ್ರ ಸಿಂಗ್ ಧೋನಿಅವರ್ಗೀಯ ವ್ಯಂಜನಭಾರತೀಯ ಜನತಾ ಪಕ್ಷನರೇಂದ್ರ ಮೋದಿಕಳಸಹಣಸ್ಕೌಟ್ ಚಳುವಳಿರೇಡಿಯೋಹರಿಹರ (ಕವಿ)ಶೈಕ್ಷಣಿಕ ಸಂಶೋಧನೆ🡆 More