ಗಾನಕಲಾಶ್ರೀ ಡಾ.ಟಿ.ಎಸ್.ಸತ್ಯವತಿ ಯವರು ಕರ್ನಾಟಕ ಸಂಗೀತ, ಸಂಸ್ಕೃತ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದಾರೆ.
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಡಾ. ಸತ್ಯವತಿ, | |
---|---|
Born | ಸತ್ಯವತಿ 30th June 1954 |
Nationality | ಭಾರತೀಯ |
Education | ಸಂಸ್ಕೃತದಲ್ಲಿ ಎಂ.ಎ, ಎಂ.ಫಿಲ್, ಮತ್ತು ಪಿಎಚ್.ಡಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಶಿಕ್ಷಣ [ಸಾಕ್ಷ್ಯಾಧಾರ ಬೇಕಾಗಿದೆ] |
Occupation | ಸಂಗೀತ ವಿದ್ವಾಂಸರು |
Parent(s) | ಟಿ.ಎಸ್.ಶ್ರೀನಿವಾಸಮೂರ್ತಿ, ಮತ್ತು ರಂಗಲಕ್ಷ್ಮಿ |
ಸತ್ಯವತಿ, ಯವರು ೩೦ ಜೂನ್, ೧೯೫೪ ರಲ್ಲಿ [ಸಾಕ್ಷ್ಯಾಧಾರ ಬೇಕಾಗಿದೆ] ಟಿ.ಎಸ್.ಶ್ರೀನಿವಾಸಮೂರ್ತಿ ಮತ್ತು ರಂಗಲಕ್ಷ್ಮಿ ಅವರ ಪುತ್ರಿಯಾಗಿ[ಸಾಕ್ಷ್ಯಾಧಾರ ಬೇಕಾಗಿದೆ] ಜನಿಸಿದರು. ಅವರು ಸಂಗೀತ ವಿದ್ವಾಂಸರಲ್ಲದೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿ ಸಂಸ್ಕೃತದಲ್ಲಿ ಎಂ.ಎ; ಎಂ.ಫಿಲ್, ಮತ್ತು ಪಿಎಚ್.ಡಿ. ಸಾಧನೆಗಳನ್ನು ಮಾಡಿದ್ದಾರೆ. ನಂತರ, ಅವರು, 'ಬೆಂಗಳೂರಿನ ವಿದ್ಯಾವರ್ಧಕ ಸಂಘದ ಮಹಿಳಾ ಪ್ರಥಮ ದರ್ಜೆ ಕಾಲೇಜಿ'ನಲ್ಲಿ ಕಳೆದ ಮೂರು ದಶಕಗಳಿಂದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಲಾಶ್ರೀ, ವಿದುಷಿ ವಸಂತ ಮಾಧವಿಯವರಿಂದಲೂ ಮತ್ತು ಪದ್ಮಭೂಷಣ ಆರ್. ಕೆ.ಶ್ರೀಕಂಠನ್ ರವರಿಂದಲೂ ಸಂಗೀತ ಗಾಯನ ಶಿಕ್ಷಣವನ್ನು ಪಡೆದರು. ಮುಂದುವರೆದು, ಸಂಗೀತ ಕಲಾರತ್ನ ಬಿ.ವಿ.ಕೆ ಶಾಸ್ತ್ರಿ ಅವರಿಂದ ಸಂಗೀತ ಶಾಸ್ತ್ರ ಶಿಕ್ಷಣವನ್ನೂ ಮತ್ತು ಸಂಗೀತ ಕಲಾ ರತ್ನ ವಿದ್ವಾನ್ ಬೆಂಗಳೂರು ಕೆ.ವೆಂಕಟರಾಮ್ ಅವರಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡಿದ್ದಾರೆ.
ಸತ್ಯವತಿಯವರು ಕೇವಲ ಎರಡು ವರ್ಷದ ಮಗುವಾಗಿರುವಾಗಲೇ ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿಯವರ ಸಮ್ಮುಖದಲ್ಲಿ ಗಾಯನಕ್ಕಾಗಿ ಪ್ರಶಂಸೆ ಪಡೆದ ಬಾಲ ಪ್ರತಿಭೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ 'ಕರ್ನಾಟಕ ಗಾನಕಲಾ ಪರಿಷತ್ತಿ'ನಲ್ಲಿ ಅವರು ಮೊದಲ ಸಭಾಕಛೇರಿ ನಡೆಸಿದರು. ದೇಶದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದರ ಜೊತೆಗೆ ಅವರು 'ಸಾರ್ಕ್ ಶೃಂಗ ಸಭೆ ೧೯೮೫', 'ಅಕ್ಕ ವಿಶ್ವ ಸಮ್ಮೇಳನ ೨೦೧೦' ಸೇರಿದಂತೆ ವಿವಿಧ ರಾಷ್ಟ್ರಗಳ ಹಲವಾರು ವೇದಿಕೆಗಳಲ್ಲೂ ತಮ್ಮ ಸಂಗೀತ ರಸದೌತಣವನ್ನು ಅವರು ಶ್ರೋತೃಗಳಿಗೆ ನೀಡಿದ್ದಾರೆ.
ಗಾಯನ ಕಾರ್ಯಕ್ರಮಗಳಷ್ಟೇ ಅಲ್ಲದೆ ಸತ್ಯವತಿಯವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನಿರ್ವಹಿಸಿದ್ದಾರೆ. ಮೈಸೂರ್ ಅಸೋಸಿಯೇಷನ್, ಮುಂಬೈನಲ್ಲಿ ಪ್ರಾತ್ಯಕ್ಷಿಕೆಗಳ ಸಹಿತ ಸಂಗೀತ ಕಾರ್ಯಾಗಾರವನ್ನು ನಡೆಸಿ ಹಲವಾರು ಯುವಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ಅನೇಕ ವಾಗ್ಗೇಯಕಾರರು, ದಾಸರು, ಕವಿಗಳ ಕುರಿತಾಗಿ ಪ್ರತ್ಯೇಕವಾಗಿ ಅವರು ನಡೆಸಿಕೊಡುತ್ತಿರುವ ವಿಶೇಷ ಕಾರ್ಯಗಾರಗಳು ವಿಶ್ವದಾದ್ಯಂತ ಪ್ರಶಂಸೆ ಪಡೆದಿವೆ. ಅತ್ಯಂತ ಕ್ಲಿಷ್ಟವಾದ “ರಾಗಮಾಲಿಕಾ ತಾಳಾವಧಾನ” ಪಲ್ಲವಿಗಳ ರಚನೆ, ಗಾಯನ ಮತ್ತು ಪ್ರಾತ್ಯಕ್ಷಿಕೆಗಳನ್ನು ಅವರು ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳ ನಿರ್ದೇಶನ ಮಾಡಿದ್ದಾರೆ. ದಕ್ಷ ಯಜ್ಞ, ಗೀತ ಗೋವಿಂದ, ಅಭಿಜ್ಞಾನ ಶಾಕುಂತಲ ಮುಂತಾದ ನೃತ್ಯ ರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯವತಿಯವರ ಅನೇಕ ಧ್ವನಿ ಸುರಳಿಗಳು ಬಿಡುಗಡೆಯಾಗಿವೆ. ಅನೇಕ ವಿದ್ವತ್ ಪೂರ್ಣ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಹಲವಾರು ವಿದಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರು ಕಲಾವಿದರಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಅನೇಕ ವೇದಿಕೆಗಳಿಂದ ಕಾರ್ಯಕ್ರಮಗಳನ್ನು ನೀಡುತ್ತಿರುವ ಹದಿನೈದಕ್ಕೂ ಹೆಚ್ಚು ಮಂದಿ ಅವರ ಶಿಷ್ಯರು ನಾಡಿಗೆ ಹೆಮ್ಮೆ ತಂದಿದ್ದಾರೆ.
ಈ ಮಹಾನ್ ಸಂಗೀತ, ಸಂಸ್ಕೃತ ಮತ್ತು ಸಂಸ್ಕೃತಿ ಸಾಧಕರಾದ ಡಾ.ಟಿ.ಎಸ್.ಸತ್ಯವತಿ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು :
ಡಾ.ಟಿ.ಎಸ್.ಸತ್ಯವತಿ,ಯವರು, ಮುಂಬಯಿ ನಗರದ ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಏಪ್ರಿಲ್,೩, ೨೦೧೫ ರಂದು, ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸದ ಆಹ್ವಾನಿತ ಉಪನ್ಯಾಸಕಿಯಾಗಿ ಭಾರತೀಯ ಸಂಗೀತದ ಬೇರು, ಬೆಳವಣಿಗೆ ಮತ್ತು ಮೂಲಗುರಿಯ ಬಗ್ಗೆ ವಿಸ್ತೃತವಾಗಿ ಮಾತಾಡಿದರು. (೪, ಫೆಬ್ರವರಿ, ಮತ್ತು ೫ ಫೆಬ್ರವರಿ, ೨೦೨೩ ರ ದಿನಗಳಂದು) "ಔಚಿತ್ಯವು ಸಂಪೂರ್ಣ ಸೌಂದರ್ಯಕ್ಕೆ ಹೇತುವಾಗುತ್ತದೆ"-ಡಾ.ಟಿ.ಎಸ್.ಸತ್ಯವತಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ-೨೦೨೩,ಕರ್ನಾಟಕ ಮಲ್ಲ, ೧೧, ಫೆಬ್ರವರಿ, ೨೦೨೩
This article uses material from the Wikipedia ಕನ್ನಡ article ಟಿ. ಎಸ್. ಸತ್ಯವತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.