ಜೈನ ಧರ್ಮದ ಮೂಲಗಳು ಅಸಷ್ಟವಾಗಿವೆ.
ಅದರ ತಾತ್ವಿಕ ಬೇರುಗಳು ಪ್ರಾಚೀನ ಭಾರತದಲ್ಲಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಊಹಾಪೋಹದ ಹಳೆಯ ಹರಿವುಗಳಷ್ಟು ಹಿಂದೆ ಹೋಗುತ್ತವೆ. ಕ್ರಿ.ಪೂ. 5 ನೇ ಶತಮಾನದ ಅವಧಿಯಲ್ಲಿ, ಮಹಾವೀರನು ಜೈನ್ ಧರ್ಮದ ಅತ್ಯಂತ ಪ್ರಭಾವೀ ಶಿಕ್ಷಕರಲ್ಲಿ ಒಬ್ಬನಾದನು. ಆದರೆ, ಮಹಾವೀರನು ಬಹುಶಃ ಜೈನ ಧರ್ಮದ ಸಂಸ್ಥಾಪಕ ಅಥವಾ ಧರ್ಮದ ಲೇಖಕನಲ್ಲ. ಜೈನ ಧರ್ಮವು ಅವನನ್ನು ತನ್ನ ಪ್ರವಾದಿಯೆಂದು ಪೂಜಿಸುತ್ತದೆ. ಸಂಪ್ರದಾಯದಲ್ಲಿ ಅವನು ಆರಂಭದಿಂದಲೂ, ಬಹಳ ಹಿಂದೆ ಸ್ಥಾಪಿತವಾದ ಧರ್ಮವನ್ನು ಅನುಸರಿಸಿದ್ದವನಾಗಿ ಕಾಣುತ್ತಾನೆ.
ಮಹಾವೀರನ ಪಾರಂಪರಿಕ ಪೂರ್ವಾಧಿಕಾರಿಯಾಗಿದ್ದ ಪಾರ್ಶ್ವನಾಥನು ಸಮಂಜಸವಾದ ಐತಿಹಾಸಿಕ ಸಾಕ್ಷಿಗಳಿರುವ ಮೊದಲ ಜೈನ ವ್ಯಕ್ತಿಯಾಗಿದ್ದಾನೆ. ಅವನು ಕ್ರಿ.ಪೂ. 9 - 7 ನೇ ಶತಮಾನದಲ್ಲಿ ಯಾವಾಗಲೋ ಬದುಕಿದ್ದಿರಬಹುದು. ಅಂಗೀಕೃತ ಪುಸ್ತಕಗಳಲ್ಲಿ ಪಾರ್ಶ್ವನಾಥನ ಅನುಯಾಯಿಗಳನ್ನು ಉಲ್ಲೇಖಿಸಲಾಗಿದೆ; ಮತ್ತು ಉತ್ತರಾಧ್ಯಾಯನ ಸೂತ್ರದಲ್ಲಿನ ಒಂದು ದಂತಕಥೆಯು ಪಾರ್ಶ್ವನಾಥನ ಶಿಷ್ಯ ಹಾಗೂ ಮಹಾವೀರನ ಶಿಷ್ಯನ ನಡುವೆ ಆದ ಭೇಟಿಯ ಬಗ್ಗೆ ಹೇಳುತ್ತದೆ. ಇದು ಜೈನ ಪಂಥದ ಹಳೆಯ ಮತ್ತು ಹೊಸ ಶಾಖೆಯ ಸೇರಿಕೆಯನ್ನು ತಂದಿತು.
ಜೈನರು ಸಾಂಪ್ರದಾಯಿಕವಾಗಿ ತೀರ್ಥಂಕರ ಎಂದು ಕರೆಯಲಾಗುವ ಧರ್ಮದ ಇಪ್ಪತ್ತನಾಲ್ಕು ಪ್ರಚಾರಕರ ಮೂಲಕ ತಮ್ಮ ಇತಿಹಾಸವನ್ನು ಪತ್ತೆಹಚ್ಚುತ್ತಾರೆ. ಈ ತೀರ್ಥಂಕರರ ವಂಶಾವಳಿಯು ಋಷಭನಾಥನಿಂದ ಆರಂಭವಾಗಿ ಮಹಾವೀರನೊಂದಿಗೆ ಕೊನೆಗೊಳ್ಳುತ್ತದೆ. ಇವರಲ್ಲಿ, ಕೊನೆಯ ಇಬ್ಬರು ತೀರ್ಥಂಕರರು ಐತಿಹಾಸಿಕ ವ್ಯಕ್ತಿಗಳಾದರೆ ಮೊದಲ ಇಪ್ಪತ್ತೆರಡು ತೀರ್ಥಂಕರರು ಹೆಚ್ಚಾಗಿ ಕಾಲ್ಪನಿಕ ಪೌರಾಣಿಕ ವ್ಯಕ್ತಿಗಳು. ಕ್ರಿ.ಪೂ. 1000 ರ ನಂತರದ ಮೊದಲ ಶತಮಾನ ಜೈನ ಧರ್ಮದ ಮೂಲಕ್ಕೆ ಹೆಚ್ಚು ಉನ್ನತ ಮಿತಿಯಾಗಿರುತ್ತದೆ ಎಂದು ಗ್ಲಾಸೆನಾಪ್ ಬರೆಯುತ್ತಾರೆ.
ಪಾರ್ಶ್ವನಾಥನ ಮೋಕ್ಷ ನಂತರ, ಅವನ ಶಿಷ್ಯ ಶುಭದತ್ತನು ಸನ್ಯಾಸಿಗಳ ಮುಖ್ಯಸ್ಥನಾದನು. ಶುಭದತ್ತನ ನಂತರ ಹರಿದತ್ತ, ಆರ್ಯಸಮುದ್ರ, ಪ್ರಭಾ ಮತ್ತು ಕೊನೆಯದಾಗಿ ಕೇಸಿ ಉತ್ತರಾಧಿಕಾರಿಗಳಾದರು. ಜೈನ ಗ್ರಂಥಗಳಲ್ಲಿ ಮಹಾವೀರನ ಶಿಷ್ಯ ಮತ್ತು ಕೇಸಿ ನಡುವೆ ನಡೆದ ಸಂಭಾಷಣೆಯ ದಾಖಲೆಗಳಿವೆ; ಕೇಸಿ ತನ್ನ ಸಮುದಾಯದವರೊಂದಿಗೆ ಮಹಾವೀರನನ್ನು ತೀರ್ಥಂಕರನಾಗಿ ಒಪ್ಪಿಕೊಂಡನು, ಪರಿಣಾಮವಾಗಿ ಅವನೊಡನೆ ವಿಲೀನಗೊಂಡನು.
ತೀರ್ಥಂಕರರು ಕೇವಲ ಜ್ಞಾನ ಅಂದರೆ ಪರಿಪೂರ್ಣ ಜ್ಞಾನವನ್ನು ಸಾಧಿಸಿದ್ದಾರೆ ಎಂದು ಹೇಳಲಾಗುತ್ತದೆ. ಮಹಾವೀರನ ನಂತರ, ಅವನ ಶಿಷ್ಯ ಸುಧರ್ಮ ಸ್ವಾಮಿ ನಾಯಕತ್ವ ವಹಿಸಿಕೊಂಡನು ಎಂದು ಹೇಳಲಾಗುತ್ತದೆ. ಅವನು ಕ್ರಿ.ಪೂ.515 ರ ತನಕ ಜೈನ ಸಮುದಾಯದ ಮುಖ್ಯಸ್ಥನಾಗಿದ್ದನು. ಅವನ ಮರಣದ ನಂತರ, ಸುಧರ್ಮ ಸ್ವಾಮಿಯ ಶಿಷ್ಯನಾದ ಜಂಬುಸ್ವಾಮಿ ಸನ್ಯಾಸಿಗಳ ಮುಖ್ಯಸ್ಥನಾದನು. ಅವನು ಕ್ರಿ.ಪೂ. 463 ರ ತನಕ ಮುಖ್ಯಸ್ಥನಾಗಿದ್ದನು. ಸಾಂಪ್ರದಾಯಿಕವಾಗಿ ಸುಧರ್ಮ ಸ್ವಾಮಿ ಮತ್ತು ಜಂಬುಸ್ವಾಮಿ ಕೂಡ ಕೇವಲ ಜ್ಞಾನವನ್ನು ಸಾಧಿಸಿದ್ದರು ಎಂದು ಹೇಳಲಾಗುತ್ತದೆ . ಜಂಬುಸ್ವಾಮಿಯ ನಂತರ ಯಾರೂ ಇದುವರೆಗೂ ಅದನ್ನು ಸಾಧಿಸಿಲ್ಲ ಎಂದು ಹೇಳಲಾಗಿದೆ.
ಸುಧರ್ಮ ಸ್ವಾಮಿ ನಂತರ, ಐವರು ಸೂತ್ರಕೇವಲಿಗಳ (ಗ್ರಂಥಗಳಲ್ಲಿ ಅತ್ಯಂತ ನಿಪುಣರಾದವರು) ಸರಣಿ, ಜೈನ ಸಮುದಾಯದ ಸನ್ಯಾಸಿಗಳ ನೇತೃತ್ವ ವಹಿಸಿದ್ದರು. ಭದ್ರಬಾಹು ಕೊನೆಯ ಸೂತ್ರಕೇವಲಿಯಾಗಿದ್ದನು. ಭದ್ರಬಾಹುವಿನ ನಂತರ ಏಳು (ಅಥವಾ ಹನ್ನೊಂದು) ನಾಯಕರು ಇದ್ದರು. ಪ್ರತಿ ಪೀಳಿಗೆಯಲ್ಲಿ ಗ್ರಂಥಗಳ ಜ್ಞಾನ ಕ್ರಮೇಣ ಕಳೆದುಹೋಗುತ್ತಿತ್ತು.
This article uses material from the Wikipedia ಕನ್ನಡ article ಜೈನ ಧರ್ಮ ಇತಿಹಾಸ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.