ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಇವರು ೧೮೭೦ರಲ್ಲಿ ಜನಿಸಿದರು.
೧೮೯೩ರಲ್ಲಿ ಪುಣೆಯಲ್ಲಿ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಗದಿಗೆಯ್ಯನವರ ತಂದೆ ಹುಚ್ಚಯ್ಯನವರು “ಚಂದ್ರೋದಯ” ಎನ್ನುವ ವಾರಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಗದಿಗೆಯ್ಯನವರು ಕೆಲಕಾಲ “ಚಂದ್ರೋದಯ”ವನ್ನು ಮುಂದುವರಿಸಿದರು ಹಾಗು “ವಾಗ್ದೇವಿ” ಎನ್ನುವ ಮಾಸಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ಇವೆರಡೂ ಪತ್ರಿಕೆಗಳು ಕೆಲಕಾಲದ ನಂತರ ವಿಲೀನಗೊಂಡವು.
ಗದಿಗೆಯ್ಯನವರು ರಾಷ್ಟ್ರೀಯ ಮನೋಭಾವದವರು. ಕನ್ನಡದ ಕಳಕಳಿ ಇದ್ದವರು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಾಮರಾವ ನರಗುಂದಕರ ಹಾಗು ಗದಿಗೆಯ್ಯ ಹೊನ್ನಾಪುರಮಠ ಇವರು ಜೊತೆಗೂಡಿ ಹುಟ್ಟುಹಾಕಿದ “ಕರ್ನಾಟಕ ಸಭೆ”ಯು ಮುಂದೆ ಕರ್ನಾಟಕ ಏಕೀಕರಣಕ್ಕೆ ನಾಂದಿಯಾಯಿತು.
೧೮೯೭ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಇವರು ಮುಂದಿನ ೧೬ ವರ್ಷಗಳ ಕಾಲ ಅದರ ಪ್ರಗತಿಗಾಗಿ ದುಡಿದರು. ಆಲೂರು ವೆಂಕಟರಾಯರು ಧಾರವಾಡದಲ್ಲಿ ನಡೆಯಿಸಿದ ಕನ್ನಡ ಗ್ರಂಥಕರ್ತರ ಪ್ರಥಮ ಪರಿಷತ್ತನ್ನು ಯಶಸ್ವಿಗೊಳಿಸಲು ಗದಿಗೆಯ್ಯನವರು ಪರಿಶ್ರಮಿಸಿದರು.
ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಇವರು ೧೯೩೩ ಜನೆವರಿ ೭ರಂದು ನಿಧನರಾದರು.
This article uses material from the Wikipedia ಕನ್ನಡ article ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.