ಇಫ್ನಿ

ಆಫ್ರಿಕದ ಮೊರಾಕೊ ದೇಶದ ಅಟ್ಲಾಂಟಿಕ್ ತೀರದಲ್ಲಿ ಸ್ಪೇನಿಗೆ ಸೇರಿದ ಸಣ್ಣ ದೇಶ.

ವಿಸ್ತಾರ 57.9 ಚ.ಮೈ.; ಜನಸಂಖ್ಯೆ 47,582 (1960). ನಿವಾಸಿಗಳು ಬರ್ಬರರು; ಸೂಡಾನಿನ ನೀಗ್ರೊ ವೈಲಕ್ಷಣ್ಯಗಳನ್ನೂ ಹೊಂದಿದ್ದಾರೆ. ಎಲ್ಲರೂ ಇಸ್ಲಾಂ ಧರ್ಮೀಯರು. ಯೂರೋಪಿಯನ್ನರ ಸಂಖ್ಯೆ ಅತ್ಯಲ್ಪ. ಮೊರಾಕೊ ದೇಶದ ದಕ್ಷಿಣ ಭಾಗದಲ್ಲಿರುವಂತೆ ಇಲ್ಲೂ ಸೆಕೆ ಹೆಚ್ಚು. ಮಳೆ ಕಡಿಮೆ 80 ಕಿ.ಮೀ. ಸಮುದ್ರತೀರವನ್ನು ಹೊಂದಿದೆ. ಇಡೀ ದೇಶ ಮರಗಿಡಗಳೇನೂ ಬೆಳೆಯದ ಹುಲ್ಲುಗಾವಲು ಪ್ರದೇಶ. ಕೆಲ ಭಾಗದಲ್ಲಿ ಆಹಾರಕ್ಕಾಗಿ ಕಾಳುಗಳನ್ನು ಬೆಳೆಯುತ್ತಾರೆ. ಕೆಲವು ಕಡೆ ಆಲಿವ್ ಮರಗಳು ಬೆಳೆಯುತ್ತವೆ. ಕುರಿ ಸಾಕುತ್ತಾರೆ; ಮೀನು ಹಿಡಿಯುವುದು ಮುಖ್ಯ ಕಸುಬು. ಹತ್ತಿರ ಇರುವ ಕ್ಯಾನರಿ ದ್ವೀಪಗಳಲ್ಲಿ ತಮ್ಮ ಸ್ವಾಸ್ಥ್ಯಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ೧೪೭೬ರಲ್ಲಿ ಈ ಪ್ರದೇಶವನ್ನು ಸ್ಪೇನಿನವರು ವಶಪಡಿಸಿಕೊಂಡು ಒಂದು ರೇವು ಪಟ್ಟಣವನ್ನು ಸ್ಥಾಪಿಸಿದರು. ಆದರೆ ೧೫೨೪ರಲ್ಲಿ ಮೂರರು ಇದನ್ನು ನಾಶಪಡಿಸಿದರು. ಮುಂದೆ ೧೮೬೦ರವರೆಗೂ ಈ ಪ್ರದೇಶದಲ್ಲಿ ಸ್ಪೇನಿನ ಅಧಿಕಾರವಿರಲಿಲ್ಲ. ಸ್ಪೇನಿಗೂ ಮೊರಾಕೊಗೂ ಯುದ್ಧ ನಡೆದು ಕೊನೆಗೊಂಡ ಮೇಲೆ, ರೇವುಪಟ್ಟಣವಿದ್ದ ಪ್ರದೇಶವನ್ನು ಸ್ಪೇನಿಗೆ ಬಿಟ್ಟುಕೊಡಲು ಮೊರಾಕೊ ಸರ್ಕಾರ ಒಪ್ಪಿಕೊಂಡಿತು. ಆದರೂ ಈ ಪ್ರದೇಶ ಸಂಪೂರ್ಣವಾಗಿ ಸ್ಪೇನಿನ ವಶಕ್ಕೆ ಬಂದದ್ದು 1934ರಲ್ಲಿ, ಫ್ರೆಂಚ್ ಸರ್ಕಾರ ನಡೆಸಿದ ಮಧ್ಯಸ್ತಿಕೆಯ ಪರಿಣಾಮವಾಗಿ. ಆದರೂ ಮೊರಾಕೊ ರಾಷ್ಟ್ರೀಯ ಚಳವಳಿಗಾರರ ಪ್ರತಿಭಟನೆ ಇದ್ದೇ ಇತ್ತು. ಕೊನೆಗೆ ೧೯೫೮ರಲ್ಲಿ ಈ ಪ್ರದೇಶವನ್ನು ಸ್ಪೇನಿನ ಒಂದು ಪ್ರಾಂತ್ಯವನ್ನಾಗಿ ಮಾಡಿ ಒಬ್ಬ ಗವರ್ನರ್ ಜನರಲ್ ನನ್ನು ನಿಯಮಿಸಿದ ಮೇಲೆ ಇಫ್ನಿ ಒಂದು ಸ್ಥಿಮಿತಸ್ಥಿತಿಗೆ ಬಂದಿತು.

ಸಿಡೀಇಫ್ನಿ

ಸಿಡೀಇಫ್ನಿ ಈ ಪ್ರಾಂತ್ಯದ ರಾಜಧಾನಿ. ಜನಸಂಖ್ಯೆ ೯೩೩೨ (೧೯೫೪). ಹಡಗುಗಳಿಗೆ ಕೊಂಚ ರಕ್ಷಣೆ ಕೊಡುವ ಕೊಲ್ಲಿಯಿಲ್ಲಿದೆ. ಕ್ಯಾನರಿ ದ್ವೀಪಗಳು, ಸ್ಪ್ಯಾನಿಷ್ ಸಹರ ಮತ್ತು ಮೊರಾಕೊ ದೇಶಗಳ ವ್ಯಾಪಾರ ಈ ರೇವಿನ ಮೂಲಕ ನಡೆಯುತ್ತದೆ. ಹೊರದೇಶದವರ ವಿರುದ್ಧ ಮೊರಾಕೊ ರಾಷ್ಟ್ರೀಯ ಚಳವಳಿ ಮಾತ್ರ ಇನ್ನೂ ನಿಂತೇ ಇಲ್ಲ.

ಉಲ್ಲೇಖ

Tags:

ಆಫ್ರಿಕಾದೇಶ

🔥 Trending searches on Wiki ಕನ್ನಡ:

ಕಲ್ಯಾಣಿಅಲಿಪ್ತ ಚಳುವಳಿಗೌತಮಿಪುತ್ರ ಶಾತಕರ್ಣಿಕೃಷ್ಣದೇವರಾಯಪೆರಿಯಾರ್ ರಾಮಸ್ವಾಮಿಪೂರ್ಣಚಂದ್ರ ತೇಜಸ್ವಿವಿಷ್ಣುವರ್ಧನ್ (ನಟ)ಸುಬ್ಬರಾಯ ಶಾಸ್ತ್ರಿಕನ್ನಡ ಸಾಹಿತ್ಯ ಪ್ರಕಾರಗಳುಮಾನವ ಸಂಪನ್ಮೂಲ ನಿರ್ವಹಣೆವೆಂಕಟೇಶ್ವರ ದೇವಸ್ಥಾನನಿರುದ್ಯೋಗಹಳೇಬೀಡುಮೇರಿ ಕೋಮ್ಚಿಪ್ಕೊ ಚಳುವಳಿಬ್ಯಾಬಿಲೋನ್ವಾಲ್ಮೀಕಿಫುಟ್ ಬಾಲ್ರಾಮ್ ಮೋಹನ್ ರಾಯ್ತೆರಿಗೆಕರಗಕನ್ನಡದಲ್ಲಿ ಅಂಕಣ ಸಾಹಿತ್ಯಬಿ.ಜಯಶ್ರೀಆದಿಪುರಾಣಹಸಿರುಮನೆ ಪರಿಣಾಮತ್ರಿಪದಿಮೈಸೂರು ಪೇಟಭಾರತದಲ್ಲಿ ಪಂಚಾಯತ್ ರಾಜ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗಣೇಶ್ (ನಟ)ಸೂರ್ಯಯಶವಂತರಾಯಗೌಡ ಪಾಟೀಲಜೋಳಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಚಿಕ್ಕಮಗಳೂರುಹನುಮಾನ್ ಚಾಲೀಸಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪ್ಲೇಟೊದಲಿತರಾಣಿ ಅಬ್ಬಕ್ಕಶ್ರವಣ ಕುಮಾರಏಡ್ಸ್ ರೋಗಜಾನಪದಸವರ್ಣದೀರ್ಘ ಸಂಧಿಭರತೇಶ ವೈಭವಧನಂಜಯ್ (ನಟ)ಬೆಳಗಾವಿಭಾರತೀಯ ಸಂಸ್ಕೃತಿವಿಮರ್ಶೆವ್ಯಾಯಾಮಭಾರತದಲ್ಲಿ ಕಪ್ಪುಹಣಆರ್ಯ ಸಮಾಜಭರತ-ಬಾಹುಬಲಿವಿಜಯಾ ದಬ್ಬೆಶ್ರೀಪಾದರಾಜರುಮಫ್ತಿ (ಚಲನಚಿತ್ರ)ರಾಣೇಬೆನ್ನೂರುಬಾಲ ಗಂಗಾಧರ ತಿಲಕಕಿರುಧಾನ್ಯಗಳುವಿರಾಮ ಚಿಹ್ನೆಯಶ್(ನಟ)ಭಾರತದ ರಾಜಕೀಯ ಪಕ್ಷಗಳುಕರ್ನಾಟಕದ ಸಂಸ್ಕೃತಿಕರ್ನಾಟಕ ಹೈ ಕೋರ್ಟ್ದ.ರಾ.ಬೇಂದ್ರೆಸೇತುವೆಅವಾಹಕಕೃಷ್ಣರಾಜಸಾಗರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಂಡಲ ಹಾವುಗಿರೀಶ್ ಕಾರ್ನಾಡ್ಕಟ್ಟುಸಿರುಯೋನಿನುಡಿಗಟ್ಟುಚುನಾವಣೆಆದೇಶ ಸಂಧಿಬಾಹುಬಲಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಅಂಬರ್ ಕೋಟೆ🡆 More