ವಸುಮತಿ ಉಡುಪ (ಏಪ್ರಿಲ್ ೧೮, ೧೯೪೮) ಕನ್ನಡದ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರು.
ವಸುಮತಿ ಉಡುಪ | |
---|---|
ಜನನ | ಏಪ್ರಿಲ್ ೧೮, ೧೯೪೮ ನಗರ ಗ್ರಾಮ, ಹೊಸನಗರ ತಾಲೂಕು, ಶಿವಮೊಗ್ಗ, ಕರ್ನಾಟಕ |
ವೃತ್ತಿ | ಕಥೆಗಾರ್ತಿ |
ವಿಷಯ | ಕನ್ನಡ ಸಾಹಿತ್ಯ |
ವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭಟ್ಟ ಮತ್ತು ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿಯುಸಿವರೆಗೆ ಓದಿದ ವಸುಮತಿ ಮದುವೆಯಿಂದಾಗಿ ಮುಂದೆ ಓದಲಿಲ್ಲ.
ಉಡುಪ ಬರೆದ ಕಥೆಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚು. ಇವರ ಅನೇಕ ಕಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ. ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕೃತಿಗಳು ನಾಟಕಗಳಾಗಿ ಸಹ ಪರಿವರ್ತನೆಗೊಂಡಿವೆ.
ಸರಳ ಭಾಷೆ, ನೇರ ನಿರೂಪಣೆ ವಸುಮತಿಯವರ ಶೈಲಿ. ಕಾದಂಬರಿ, ಕಥೆ, ಪ್ರಬಂಧ ಅವರ ನೆಚ್ಚಿನ ಪ್ರಕಾರಗಳು. ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ.
ಮುಂತಾದುವು
ಮುಂತಾದವು
This article uses material from the Wikipedia ಕನ್ನಡ article ವಸುಮತಿ ಉಡುಪ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.