ವರಮಹಾಲಕ್ಷ್ಮಿ ವ್ರತ

ಅಧಿಕೃತ ಹೆಸರು ಆಚರಿಸಲಾಗುತ್ತದೆ ರೀತಿ ಮಹತ್ವ ಆವರ್ತನ ಶ್ರಾವಣಮಾಸದ ಪ್ರಸಿದ್ಧಹಿಂದೂಪರ್ವ(ಹಬ್ಬ)ಗಳಲ್ಲಿವರಮಹಾಲಕ್ಷ್ಮೀವ್ರತವೂ ಒಂದು.

Varalakshmi Vrata
ವರಲಕ್ಷ್ಮಿ ವ್ರತ
ಅಧಿಕೃತ ಹೆಸರುVaralakshmi Vrata
ಆಚರಿಸಲಾಗುತ್ತದೆಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು
ರೀತಿಪೂಜಾ
ಮಹತ್ವಧಾರ್ಮಿಕ
ಆವರ್ತನವಾರ್ಷಿಕ

ಲಕ್ಷ್ಮೀದೇವಿ

ವರಮಹಾಲಕ್ಷ್ಮಿ ವ್ರತ 
ವರಲಕ್ಷ್ಮಿ ವ್ರತ ಪೂಜೆ ಒಂದು ವಿಶಿಷ್ಟ ನೋಟ

ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದುರ್ವಾಸಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖಬ್ರಹ್ಮನನ್ನು ಮುಂದಿಟ್ಟುಕೊಂಡು(ಪುರಸ್ಕರಿಸಿ), ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).

ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ,ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು-ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.

ವ್ರತ

"ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾಗವೇ|

ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಮ್(ಸರ್ವಮಾಂಗಲ್ಯಸಿದ್ಧಯೇ)||"

ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.


ವ್ರತ ಆಚರಿಸುವ ವಿಧಾನ

  • ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ.
  • ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ. ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.
  • ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು.
  • ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು. ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.

"ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ"

ಲಕ್ಷ್ಮಿಯ ಕುರಿತಾದ ಸ್ತೋತ್ರಗಳು

"ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ|

ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಮ್||

ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ|

ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್||"

ಕ್ಷೀರಸಮುದ್ರರಾಜನ ಮಗಳಾದ, ಶ್ರೀರಂಗಧಾಮದ ಒಡೆಯಳಾದ, ಸಮಸ್ತ ದೇವತಾಸ್ತ್ರೀಯರಿಂದ ಸೇವಿಸಲ್ಪಡುವ, ಜಗತ್ತಿಗೇ ದಾರಿದೀಪವಾದ, ಬ್ರಹ್ಮ-ಇಂದ್ರ-ಶಂಕರಾದಿಗಳಿಗೆ ತನ್ನ ಕೃಪಾಕಟಾಕ್ಷದಿಂದಲೇ ಸಕಲವೈಭವಗಳನ್ನಿತ್ತ, ಮೂರುಲೋಕಗಳಿಗೂ ಮಾತೆಯಾದ, ಕಮಲಜೆ ಹಾಗೂ ಪದ್ಮಾಸನೆಯಾದ, ಶ್ರೀಹರಿಪ್ರಿಯೆಯಾದ ಹೇ ಮಹಾಲಕ್ಷ್ಮಿಯೇ! ನಿನ್ನನ್ನು ವಂದಿಸುತ್ತೇನೆ.

"ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ|

ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ! ನಮೋsಸ್ತು ತೇ||"

ಹೇ ಮಹಾಮಾಯೇ! ಶ್ರೀಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ! ಶಂಖ-ಚಕ್ರ-ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ! ಹೇ ಮಹಾಲಕ್ಷ್ಮಿಯೇ! ನಿನಗೆ ನಮಸ್ಕಾರವಿರಲಿ.


" ಯಾ ರಕ್ತಾಂಬುಜವಾಸಿನೀ ವಿಲಸಿನೀ ಚಂಡಾಶು ತೇಜಸ್ವಿನೀ|
      ಆರಕ್ತಾ ರುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ||
  ಯಾ ರತ್ನಾಕರಮಂಥನಾತ್ಪ್ರಘಟಿತಾ ವಿಷ್ಣೋಶ್ಚ ಯಾ ಗೇಹಿನೀ|
               ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ|| "

ಭಾವಾರ್ಥ- ಯಾವ ವರಲಕ್ಷ್ಮಿಯು ಕೆಂದಾವರೆಯಲ್ಲಿ ಕುಳಿತು ಕೋಟಿಸೂರ್ಯಸಮಪ್ರಭಳೋ, ಕೆಂಪುವಸ್ತ್ರವನ್ನುಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಳು ಸಮುದ್ರಮಥನದಲ್ಲಿ ಉದ್ಭವಿಸಿ ಭಗವಾನ್ ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಮನಸ್ಸಿಗೆ ಮುದನೀಡುವ, ಪದ್ಮವನ್ನೇ ಆಲಯವನ್ನಾಗಿಸಿಕೊಂಡ, ಭಗವತೀ ಲಕ್ಷ್ಮಿಯು ನನ್ನನ್ನು ರಕ್ಷಿಸಲಿ.

ಉಲ್ಲೇಖಗಳು

Tags:

ವರಮಹಾಲಕ್ಷ್ಮಿ ವ್ರತ ಲಕ್ಷ್ಮೀದೇವಿವರಮಹಾಲಕ್ಷ್ಮಿ ವ್ರತ ವ್ರತವರಮಹಾಲಕ್ಷ್ಮಿ ವ್ರತ ವ್ರತ ಆಚರಿಸುವ ವಿಧಾನವರಮಹಾಲಕ್ಷ್ಮಿ ವ್ರತ ಲಕ್ಷ್ಮಿಯ ಕುರಿತಾದ ಸ್ತೋತ್ರಗಳುವರಮಹಾಲಕ್ಷ್ಮಿ ವ್ರತ ಉಲ್ಲೇಖಗಳುವರಮಹಾಲಕ್ಷ್ಮಿ ವ್ರತ

🔥 Trending searches on Wiki ಕನ್ನಡ:

ಮೆಕ್ಕೆ ಜೋಳಹೆಚ್.ಡಿ.ದೇವೇಗೌಡಕರ್ಬೂಜಪ್ರಜಾಪ್ರಭುತ್ವದ ಲಕ್ಷಣಗಳುವಿಜಯಪುರಹೊಯ್ಸಳಬಾರ್ಲಿಗಸಗಸೆ ಹಣ್ಣಿನ ಮರಊಳಿಗಮಾನ ಪದ್ಧತಿಪುರಂದರದಾಸಜಾತ್ರೆನವಿಲುಮಾಸ್ತಿ ವೆಂಕಟೇಶ ಅಯ್ಯಂಗಾರ್ಯೋಗಎಚ್‌.ಐ.ವಿ.ಹದ್ದುಭಗೀರಥಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಉತ್ತರ ಕನ್ನಡಸರಸ್ವತಿಎಲೆಕ್ಟ್ರಾನಿಕ್ ಮತದಾನಕ್ರೀಡೆಗಳುಬುದ್ಧತಲಕಾಡುಜೋಗಿ (ಚಲನಚಿತ್ರ)ಭಾರತದ ಸಂವಿಧಾನದ ಏಳನೇ ಅನುಸೂಚಿಇತಿಹಾಸಭಾರತದ ತ್ರಿವರ್ಣ ಧ್ವಜಕೊಡಗುಸಮಂತಾ ರುತ್ ಪ್ರಭುಮೈಸೂರು ಸಂಸ್ಥಾನಲಕ್ಷ್ಮೀಶಉತ್ತರ ಕರ್ನಾಟಕಕೊಳ್ಳೇಗಾಲಗೌತಮ ಬುದ್ಧಗಣೇಶಪರಶುರಾಮಭಾರತದ ಪ್ರಧಾನ ಮಂತ್ರಿಎಂ.ಬಿ.ಪಾಟೀಲಕ್ಯಾನ್ಸರ್ಸಾರಾ ಅಬೂಬಕ್ಕರ್ಭೂಕಂಪಭಾರತದ ಚುನಾವಣಾ ಆಯೋಗರಾಷ್ಟ್ರೀಯತೆಬೆಳಗಾವಿಕರ್ನಾಟಕ ಹೈ ಕೋರ್ಟ್ಕಪ್ಪೆ ಅರಭಟ್ಟವಿಭಕ್ತಿ ಪ್ರತ್ಯಯಗಳುಮಹಾವೀರಮೊರಾರ್ಜಿ ದೇಸಾಯಿದೆಹಲಿಯ ಇತಿಹಾಸವೈದಿಕ ಯುಗತಿರುಗುಬಾಣರಾಜ್ಯಗಳ ಪುನರ್ ವಿಂಗಡಣಾ ಆಯೋಗತಾಳಗುಂದ ಶಾಸನಭಾರತದ ಬುಡಕಟ್ಟು ಜನಾಂಗಗಳುವೇದವ್ಯಾಸಕರುಳುವಾಳುರಿತ(ಅಪೆಂಡಿಕ್ಸ್‌)ಕೈಮೀರಆದಿ ಶಂಕರಮಂಡ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗರ್ಭಕಂಠದ ಕ್ಯಾನ್ಸರ್‌ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಇಂದಿರಾ ಗಾಂಧಿಕೆಳದಿ ನಾಯಕರುಜಂಟಿ ಪ್ರವೇಶ ಪರೀಕ್ಷೆಭಾರತೀಯ ರೈಲ್ವೆಮಾವುಗೋವರನ್ನಯಶ್(ನಟ)ರೇಣುಕದೊಡ್ಡಬಳ್ಳಾಪುರಅಂತಿಮ ಸಂಸ್ಕಾರಜೋಡು ನುಡಿಗಟ್ಟುಸಂಗೊಳ್ಳಿ ರಾಯಣ್ಣದಲಿತ🡆 More