ಬಿ.ಎಮ್.ಹೆಗ್ಡೆ

ಬಿ.

ಎಮ್. ಹೆಗ್ಡೆ (ಬೆಳ್ಳೆ ಮೋನಪ್ಪ ಹೆಗ್ಡೆ) ಇವರು ಖ್ಯಾತ ಹೃದ್ರೋಗ ತಜ್ಞರಲ್ಲೊಬ್ಬರು. ಇವರು ೧೮ ಆಗಸ್ಟ್ ೧೯೩೮ ರಲ್ಲಿ ಜನಿಸಿದರು.

ಬೆಳ್ಳೆ ಮೋನಪ್ಪ ಹೆಗ್ಡೆ
ಬಿ.ಎಮ್.ಹೆಗ್ಡೆ
Hegde in 2005
BornAugust 18, 1938
South Canara,
Madras Presidency,
British India
(now in Udupi District, Karnataka, India)
Medical career
Professionmedical scientist,educationist and author
InstitutionsManipal University
Bharatiya Vidya Bhavan
Notable prizesDr. B. C. Roy Award(1999)
Padma Bhushan (2010)
ಬಿ.ಎಮ್.ಹೆಗ್ಡೆ
B M Hegde being conferred an honorary doctorate by Kiran Kumar Reddy

ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ. ಬಿ.ಸಿ.ರಾಯ್ ಪ್ರಶಸ್ತಿಯನ್ನು ೧೯೯೯ರಲ್ಲಿ ಪಡೆದ ಹೆಗ್ಡೆಯವರಿಗೆ ಭಾರತ ಸರ್ಕಾರವು ೨೦೧೦ ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಹೆಗ್ಡೆಯವರು ಪ್ರಸ್ತುತ ಭಾರತೀಯ ವಿದ್ಯಾಭವನ ಮಂಗಳೂರು ಘಟಕದ ಮುಖ್ಯಸ್ಥರಾಗಿರುವರು.

ಜನನ

ಹೆಗ್ಡೆಯವರು ಆಗಸ್ಟ್ ೧೮, ೧೯೩೮ ರಂದು ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದರು.

ವಿದ್ಯಾಭ್ಯಾಸ

ಹಿರಿಯಡ್ಕದ ಬೋರ್ಡ್ ಹೈಸ್ಕೂಲ್‍ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಉಡುಪಿಯ ಎಂ ಜಿ ಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಶಿಕ್ಷಣವನ್ನು ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು ೧೯೬೦ ರಲ್ಲಿ ಪಡೆದರು. ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂ.ಡಿ.ಪದವಿ. ಹೆಗ್ಡೆಯವರು ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ, ಅಲ್ಲಿರುವ ಎಲ್ಲಾ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಪ್ರಥಮ ಕನ್ನಡಿಗ ಹಾಗೂ ಭಾರತೀಯನೆನಿಸಿಕೊಂಡರು. ಇವರು FRCC, FRCPI, FRCPE, FRCP, MRCP ಮುಂತಾದ ಅನೇಕ ವಿದೇಶಿ ಪದವಿಗಳನ್ನು ಪಡೆದಿರುವರು.

ವೃತ್ತಿಜೀವನ

ಪ್ರೊ. ಬೆರ್ನಾರ್ಡ್ ಲೋವ್ನ್ ನಂತಹ ನೋಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರ ಹತ್ತಿರ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂ.ಆರ್.ಸಿ.ಪಿ. ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾಗಿರುವರು. ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಪರೀಕ್ಷಕರಾಗಿ ದಕ್ಷಿಣ ಅಮೇರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲಾ ಖಂಡಗಳ ಪ್ರಮುಖ ವಿ.ವಿ.ಗಳಿಗೆ ಹೋಗಿರುವರು. ೧೯೮೨ ರಿಂದ ಲಂಡನ್ ವಿ.ವಿ ಯ ಶಾಶ್ವತ ಸಂದರ್ಶನ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿರುವ ಗಣ್ಯರು, ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿರುವರು.

ಇತರ ಮಾಹಿತಿಗಳು

ಡಾ.ಬಿ.ಎಂ.ಹೆಗ್ಡೆಯವರು ಆಸ್ತಿಕರು. ಭಾರತೀಯ ವಿದ್ಯಾಭವನದೊಡನೆ ನಿಕಟ ಸಂಪರ್ಕ ಹೊಂದಿರುವ ಡಾ.ಬಿ.ಎಂ.ಹೆಗ್ಡೆಯವರು ಆಯುರ್ವೇದದ ಸತ್ವವನ್ನು ಮನಗಂಡು ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿಯ ಆಶ್ರಯದಲ್ಲಿ ಒಂದು ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣರಾಗಿರುವರು.

ನಿಷ್ಠೂರವಾದಿ: ಡಾ.ಬಿ.ಎಂ.ಹೆಗ್ಡೆ ಅವರು ಯಾವುದೇ ರೀತಿಯ ಸಂಕೋಚವಿಲ್ಲದೆ ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬಲ್ಲ ಸತ್ಯಪ್ರಿಯ ನಿಷ್ಠೂರವಾದಿಗಳು. ಆಧುನಿಕ ವೈದ್ಯಕೀಯದಲ್ಲಿರುವ ಅನಗತ್ಯ ತಪಾಸಣೆಗಳ, ಅನಗತ್ಯ ಔಷಧಗಳ ಹಾಗೂ ಅನಗತ್ಯ ಚಿಕಿತ್ಸೆಗಳ ಬಗ್ಗೆ ಉಗ್ರವಾಗಿ ಖಂಡಿಸುವ ಪ್ರವೃತ್ತಿ ರಕ್ತಗತವಾಗಿ ಬಂದಿದೆ. ಹಾಗಾಗಿ ಇವರಿಗೆ ಸಾಕಷ್ಟು ಹಿತಶತ್ರುಗಳಿರುವರು. ಅನೇಕ ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಗಣ್ಯರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ (ಭಾರತ, ಬ್ರಿಟನ್, ಅಮೆರಿಕ, ಜರ್ಮನಿ, ಕುವೈಟ್, ಚೈನಾ) ಸಂಪಾದಕ ಮಂಡಳಿಯಲ್ಲಿ ಹಾಗೂ ಸಲಹಾಮಂಡಳಿಯಲ್ಲಿರುವರು ಹಾಗೂ ಪ್ರತಿಷ್ಠಿತ ಬ್ರಿಟಿಶ್ ಮೆಡಿಕಲ್ ಜರ್ನಲ್ (ಬಿ.ಎಂ.ಜೆ) ‘ರೆಫ್ರಿ‘ಯಾಗಿಯೂ ಕೆಲಸ ಮಾಡುತ್ತಿರುವರು.

ಬರಹಗಾರ ಮತ್ತು ವಾಗ್ಮಿ

ಡಾ. ಬಿ.ಎಂ.ಹೆಗ್ಡೆ ಅವರು ಭಾಷಣಕಾರರು. ಇದುವರೆಗೆ ಚಿನ್ನದ ಪದಕಗಳನ್ನು ಒಳಗೊಂಡ ೮೦ ಜಾಗತಿಕ ದತ್ತಿ ಭಾಷಣಗಳನ್ನು ನೀಡಿರುವರು. ಆಕಾಶವಾಣಿ, ದೂರದರ್ಶನ, ಜ಼ೀ ಟಿವಿ ಲಂಡನ್, ಬಿಬಿಸಿ ಮುಂತಾದ ವಾಹಿನಿಗಳ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ನೀಡಿರುವರು. ಇಂಗ್ಲಿಷಿನಲ್ಲಿ ಹಾಗೂ ಕನ್ನಡದಲ್ಲಿ ೩೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿರುವರು.

ಪ್ರಶಸ್ತಿಗಳು

ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಲಭಿಸಿರುವ ಕೆಲವು ಪ್ರಮುಖ ಪ್ರಶಸ್ತಿಗಳು:

ಉಲ್ಲೇಖಗಳು

Tags:

ಬಿ.ಎಮ್.ಹೆಗ್ಡೆ ಜನನಬಿ.ಎಮ್.ಹೆಗ್ಡೆ ವಿದ್ಯಾಭ್ಯಾಸಬಿ.ಎಮ್.ಹೆಗ್ಡೆ ವೃತ್ತಿಜೀವನಬಿ.ಎಮ್.ಹೆಗ್ಡೆ ಇತರ ಮಾಹಿತಿಗಳುಬಿ.ಎಮ್.ಹೆಗ್ಡೆ ಬರಹಗಾರ ಮತ್ತು ವಾಗ್ಮಿಬಿ.ಎಮ್.ಹೆಗ್ಡೆ ಪ್ರಶಸ್ತಿಗಳುಬಿ.ಎಮ್.ಹೆಗ್ಡೆ ಉಲ್ಲೇಖಗಳುಬಿ.ಎಮ್.ಹೆಗ್ಡೆಹೃದಯರೋಗ೧೯೩೮

🔥 Trending searches on Wiki ಕನ್ನಡ:

ಊಳಿಗಮಾನ ಪದ್ಧತಿವಚನಕಾರರ ಅಂಕಿತ ನಾಮಗಳುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಶಾಂತಲಾ ದೇವಿಯೇಸು ಕ್ರಿಸ್ತಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸಂಸ್ಕೃತಕ್ರಿಯಾಪದಹವಾಮಾನಭಾರತದ ಮುಖ್ಯಮಂತ್ರಿಗಳುತಂತ್ರಜ್ಞಾನದ ಉಪಯೋಗಗಳುಅಂಬಿಗರ ಚೌಡಯ್ಯಬಂಡಾಯ ಸಾಹಿತ್ಯರಾಷ್ಟ್ರೀಯ ಶಿಕ್ಷಣ ನೀತಿಆರತಿಭಾರತದಲ್ಲಿ ತುರ್ತು ಪರಿಸ್ಥಿತಿದಕ್ಷಿಣ ಕನ್ನಡಶ್ಯೆಕ್ಷಣಿಕ ತಂತ್ರಜ್ಞಾನಸರ್ವಜ್ಞಕರ್ನಾಟಕದ ಜಾನಪದ ಕಲೆಗಳುರಾಹುಲ್ ಗಾಂಧಿವಾಟ್ಸ್ ಆಪ್ ಮೆಸ್ಸೆಂಜರ್ಶೈಕ್ಷಣಿಕ ಮನೋವಿಜ್ಞಾನಪಂಜುರ್ಲಿರಾಮಅನುರಾಗ ಅರಳಿತು (ಚಲನಚಿತ್ರ)ಕರ್ನಾಟಕದ ಇತಿಹಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯಪಂಚ ವಾರ್ಷಿಕ ಯೋಜನೆಗಳುಕನ್ನಡಉತ್ತರ ಕನ್ನಡಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುತ್ಯಾಜ್ಯ ನಿರ್ವಹಣೆಮಾನವ ಅಭಿವೃದ್ಧಿ ಸೂಚ್ಯಂಕಕನ್ನಡ ರಂಗಭೂಮಿರಮ್ಯಾವ್ಯಂಜನತೆನಾಲಿ ರಾಮ (ಟಿವಿ ಸರಣಿ)ಹೊಯ್ಸಳ ವಾಸ್ತುಶಿಲ್ಪಪಂಪವೃದ್ಧಿ ಸಂಧಿಕಲ್ಯಾಣ ಕರ್ನಾಟಕಕ್ರೈಸ್ತ ಧರ್ಮರಾಘವಾಂಕಮೋಳಿಗೆ ಮಾರಯ್ಯರಾವಣಅಳಿಲುಭಗತ್ ಸಿಂಗ್ವೀರೇಂದ್ರ ಪಾಟೀಲ್ವಲ್ಲಭ್‌ಭಾಯಿ ಪಟೇಲ್ಜೀವಕೋಶಮಹೇಂದ್ರ ಸಿಂಗ್ ಧೋನಿಭತ್ತಪ್ರಾಥಮಿಕ ಶಾಲೆಶಾತವಾಹನರುಉಪ್ಪಿನ ಸತ್ಯಾಗ್ರಹಶ್ರೀಧರ ಸ್ವಾಮಿಗಳುವಿಜಯದಾಸರುಅಂತಿಮ ಸಂಸ್ಕಾರಕನ್ನಡ ಚಿತ್ರರಂಗಶಬ್ದಮಣಿದರ್ಪಣಗಂಗ (ರಾಜಮನೆತನ)ಭಾರತೀಯ ಧರ್ಮಗಳುಕಾರ್ಮಿಕರ ದಿನಾಚರಣೆಸರ್ಪ ಸುತ್ತುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದ ಜನಸಂಖ್ಯೆಯ ಬೆಳವಣಿಗೆಸಾಹಿತ್ಯಜ್ಞಾನಪೀಠ ಪ್ರಶಸ್ತಿದ್ವಿರುಕ್ತಿಅಧಿಕ ವರ್ಷಮೌರ್ಯ ಸಾಮ್ರಾಜ್ಯಎತ್ತಿನಹೊಳೆಯ ತಿರುವು ಯೋಜನೆಮಿಥುನರಾಶಿ (ಕನ್ನಡ ಧಾರಾವಾಹಿ)ನಾಗಸ್ವರ🡆 More