ಕಳಿಂಗ ಯುದ್ದ ಕ್ರಿ.ಪೂ.261

ಕಳಿಂಗ ಯುದ್ಧವು ಕ್ರಿ.ಪೂ.೨೬೧ ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗೂ ನಡೆದ ಯುದ್ಧ.

ಇದು ಸಾಮ್ರಾಟ್ ಅಶೋಕನ ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಗಮನಾರ್ಹವಾದ ಘಟನೆ. ಅಶೋಕನ ಏಕೈಕ ಪ್ರಮುಖ ಯುದ್ಧವಾದ ಈ ಯುದ್ದ, ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ಧಗಳಲ್ಲಿ ಒಂದಾಗಿದೆ. ಅಶೋಕನು ರ್ಕಿ.ಪೂ.೨೬೧ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು. ಅಶೋಕನ ೧೩ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು, ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲಾ ಎಂಬುದಾಗಿ ತಿಳಿದು ಬರುತ್ತದೆ. ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೇಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ಧವನ್ನು ಗೆದ್ದಿತು. ಈ ಯುದ್ಧದ ಅಪಾರ ರಕ್ತಪಾತವು ಅಶೋಕನ ಮನಃಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿತು.[೧]

ಹಿನ್ನಲೆ

ಅಶೋಕನ ಆಕ್ರಮಣದ ಮುಂಚಿನ ಕಳಿಂಗ ಮತ್ತು ಮೌರ್ಯ ಸಾಮ್ರಾಜ್ಯ ಕಳಿಂಗದ ಆಕ್ರಮಣ ರಾಜಕೀಯ ಮತ್ತು ಆರ್ಥಿಕ ಎರಡೂ ಕಾರಣಗಳಿವೆ.ಕಳಿಂಗ ರಾಜ್ಯವು ಪ್ರಸಿದ್ಧ ಮತ್ತು ಶ್ರೀಮಂತ ಪ್ರದೇಶವಾಗಿತ್ತು. ಅದು ಕಲೆಗಳಲ್ಲಿ ನುರಿತ ಜನತೆಯನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತದೆ. ಕಳಿಂಗದ ಜನರು ಕಡಲಿನಾಚೆಯ ದೇಶಗಳೊಂದಿಗೆ ವ್ಯಾಪಾರ ಮಾಡಿದವರಲ್ಲಿ ಭಾರತದಲ್ಲಿಯೇ ಮೊದಲನೆಯವರು. ಅಲ್ಲಿನ ಜನತೆ ಮುಕ್ತವಾದ ಸಂಸ್ಕೃತಿ ಮತ್ತು ಸಮಾನ ನಾಗರಿಕ ಸಂಹಿತೆ ಪಾಲಿಸುತ್ತಿದ್ದರು.[೨] ಅಶೋಕನ ತಂದೆ ಬಿಂದುಸಾರನ ಕಾಲದಿಂದಲೂ ಮಗಧ ಮೂಲದ ಮೌರ್ಯ ಸಾಮ್ರಾಜ್ಯವು ಪ್ರಾಂತೀಯ ವಿಸ್ತರಣೆ ನೀತಿ ಅನುಸರಿಸುತ್ತಿತ್ತು. ನಂದರ ಕಾಲದಲ್ಲಿ ಮಗಧದ ಅಧೀನದಲ್ಲಿದ್ದ ಕಳಿಂಗ ಪ್ರದೇಶವು ಮೌರ್ಯರ ಆಳ್ವಿಕೆಯ ಆರಂಭದಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.[೩] ಮಗಧದ ಸಾಮ್ರಾಟರಿಗೆ ಇದು ಒಂದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿತ್ತು. ಇದು ಮೌರ್ಯರು ತಮ್ಮ ರಾಜಕೀಯ ಪ್ರತಿಷ್ಠೆಗೆ ಧಕ್ಕೆಯೆಂದು ಪರಿಗಣಿಸಿದರು. ಅವರಿಗೆ ಕಳಿಂಗದ ಪರಾಧೀನ ಪೂರ್ಣಗೊಳಿಸುವುದು ಕಡ್ಡಾಯವಾಗಿ ತೋರಿತು. ಹೀಗಾಗಿ ಅಶೋಕನು ತನ್ನ ಸಿಂಹಾಸನ ಭದ್ರ ಪಡಿಸಿದ ನಂತರ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು.[೨]

ಯುಧ್ಧ

ಕಳಿಂಗದ ಯುದ್ಧಭೂಮಿ ಎಂದು ಹೇಳಲಾಗುವ ದಯಾ ನದಿಯ ತೀರದ ಒಂದು ನೋಟ. ಈ ಯುದ್ಧವು ಅಶೋಕನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸುಮಾರು ಕ್ರಿ.ಪೂ. ೨೬೧ರಲ್ಲಿ ಜರುಗಿತು. ಈ ಹಿಂದೆ ಅಶೋಕನ ತಾತನಾದ ಚಂದ್ರಗುಪ್ತ ಮೌರ್ಯನು ಕಳಿಂಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವನನ್ನು ಹಿಮ್ಮೆಟ್ಟಿಸಲಾಗಿತ್ತು. ಅಶೋಕನಿಗೂ ಕೇವಲ ಒಂದು ಘೋರ ಯುದ್ಧದ ನಂತರವೇ ವಿಜಯ ದೊರೆಯಿತು.

ಅಶೋಕನದ್ದು ೪ ಲಕ್ಷ ಯೋಧರ ಸೇನೆಯಾದರೆ, ಕಳಿಂಗ ದೇಶದಲ್ಲಿ ೬೦,೦೦೦ ಪದಾತಿಗಳು, ೧೦,೦೦೦ ಅಶ್ವದಳ ಹಾಗು ೭೦೦ ಗಜಸೇನೆಗಳಿತ್ತು.[೪] ಈ ಸಮರದಲ್ಲಿ ಸುಮಾರು ೧,೫೦,೦೦೦ ಕಳಿಂಗದ ಯೋಧರು ಹಾಗೂ ೧,೦೦,೦೦೦ ಅಶೋಕನ ಯೋಧರು ಸಾವನ್ನಪ್ಪಿದರು.[೫][೬] ಇದರ ಪರಿಣಾಮವಾಗಿ ಯುದ್ಧ ಭೂಮಿಯ ಸಮೀಪದಲ್ಲಿ ಹರಿಯುವ ದಯಾ ನದಿಯ ಬಣ್ಣ ಸಾವಿಗೀಡದವರ ರಕ್ತದಿಂದ ಕೆಂಪಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ.

ಪರಿಣಾಮ

ಯುದ್ಧದ ನಂತರ ಸಂಪೂರ್ಣ ಕಳಿಂಗವನ್ನು ಸಂಪೂರ್ಣ ಲೂಟಿ ಮತ್ತು ನಾಶ ಮಾಡಲಾಯಿತು. ಯುದ್ಧವು ಸುಮಾರು ೧ ಲಕ್ಷ ಜನರ ಸಾವು ಮತ್ತು ಒಂದೂವರೆ ಲಕ್ಷ ಜನರ ಗಡಿಪಾರಾಗಲು ಕಾರಣವಾಯಿತು. ಈ ಕ್ರೌರ್ಯದಿಂದ ನೊಂದ ಅಶೋಕನು ಯುದ್ಧದ ಬಗೆಗಿನ ತನ್ನ ನಿಲುವನ್ನು ಬದಲಾಯಿಸಿ ಮುಂದೆಂದೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧವನ್ನು ಮಾಡದಿರಲು ಪಣ ತೊಟ್ಟನು. ನಂತರ ಬೌದ್ಧಧರ್ಮ ಸ್ವೀಕರಿಸಿ ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮದ ಪ್ರಚಾರಕ್ಕಾಗಿ ಬಳಸಿದನು.

ಕಳಿಂಗ ಯುದ್ಧದ ಬಗೆಗಿನ ಅಶೋಕನ ಪ್ರತಿಕ್ರಿಯೆಯನ್ನು ಅವನ ಹದಿಮೂರನೆ ಶಾಸನದಲ್ಲಿ ದಾಖಲಿಸಲಾಗಿದೆ. ಕಳಿಂಗವನ್ನು ವಶಪಡಿಸಿದ ನಂತರ ಅಶೋಕನು ಸೇನಾ ವಿಸ್ತರಣೆಯನ್ನು ನಿಲ್ಲಿಸಿ, ಮುಂದಿನ ೪೦ ವರ್ಷಗಳಿಗೂ ಹೆಚ್ಚು ಕಾಲ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯಿಂದ ತನ್ನ ಸಾಮ್ರಾಜ್ಯವನ್ನು ಆಳಿದನು.

ಶಿಲಾ ಶಾಸನ ೧೩ "ದೇವರುಗಳಿಗೆ ಪ್ರಿಯನಾದ, ರಾಜ ಪ್ರಿದರ್ಶಿ, ಕಳಿಂಗ ದೇಶವನ್ನು ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ವಶಪಡಿಸಿದನು. ಸುಮಾರು ಒಂದೂವರೆ ಲಕ್ಷ ಜನರ ಗಡಿಪಾರಾದರು, ೧ ಲಕ್ಷಕ್ಕು ಹೆಚ್ಚು ಜನರು ಸಾವನ್ನಪಿದರು(ನಾನಾ ಕಾರಣಗಳಿಂದ). ಕಳಿಂಗರನ್ನು ವಶಪಡಿಸಿಕೊಂಡ ನಂತರ ದೇವರುಗಳಿಗೆ ಪ್ರಿಯನಾದವನು, ತನ್ನಲ್ಲಿ ಧರ್ಮದೆಡೆಗೆ, ಧರ್ಮದ ಪ್ರೇಮದೆಡೆಗೆ ಮತ್ತು ಧರ್ಮದಲ್ಲಿ ಪಾಠದೆಡೆಗೆ ಬಲವಾದ ಓರೆಯನ್ನು ಕಂಡನು. ಈಗ ದೇವರುಗಳಿಗೆ ಪ್ರಿಯನಾದವನು ಕಳಿಂಗವನ್ನು ವಶಪಡಿಸಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ಪಡುತ್ತಿದ್ದಾನೆ

Tags:

🔥 Trending searches on Wiki ಕನ್ನಡ:

ದ್ರೌಪದಿಜಾತ್ರೆಹೈನುಗಾರಿಕೆಡೊಳ್ಳು ಕುಣಿತಕನ್ನಡಪ್ರಭನವರತ್ನಗಳುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಆಮ್ಲ ಮಳೆಕ್ಷಯಕರ್ಣಾಟ ಭಾರತ ಕಥಾಮಂಜರಿರಾಜ್‌ಕುಮಾರ್ಸುಭಾಷ್ ಚಂದ್ರ ಬೋಸ್ಆಹಾರ ಸಂರಕ್ಷಣೆಸವರ್ಣದೀರ್ಘ ಸಂಧಿರಾಜ್ಯಗಳ ಪುನರ್ ವಿಂಗಡಣಾ ಆಯೋಗಕನ್ನಡ ಅಕ್ಷರಮಾಲೆತಾಮ್ರವಿಧಾನ ಪರಿಷತ್ತುಲೋಪಸಂಧಿಒನಕೆ ಓಬವ್ವಸಿಂಧನೂರುಓಂ (ಚಲನಚಿತ್ರ)ಜರ್ಮೇನಿಯಮ್ಬ್ರಾಟಿಸ್ಲಾವಾಜವಾಹರ‌ಲಾಲ್ ನೆಹರುಸೋಡಿಯಮ್ಹೆಣ್ಣು ಬ್ರೂಣ ಹತ್ಯೆಬೌದ್ಧ ಧರ್ಮಜೀವವೈವಿಧ್ಯಮೂಲವ್ಯಾಧಿರಾಮ ಮಂದಿರ, ಅಯೋಧ್ಯೆಒಡೆಯರ್ಬಿಲ್ಹಣಚಿತ್ರದುರ್ಗಕಪ್ಪುಭರತನಾಟ್ಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತಮೂಲಧಾತುಪಕ್ಷಿತತ್ಪುರುಷ ಸಮಾಸಕರ್ನಾಟಕದ ಶಾಸನಗಳುಅವರ್ಗೀಯ ವ್ಯಂಜನನರ್ಮದಾ ನದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾರತದ ಉಪ ರಾಷ್ಟ್ರಪತಿಮಾರುಕಟ್ಟೆಪುನೀತ್ ರಾಜ್‍ಕುಮಾರ್ಕಬೀರ್ಬಾಲ್ಯ ವಿವಾಹಗಂಗ (ರಾಜಮನೆತನ)ವಲ್ಲಭ್‌ಭಾಯಿ ಪಟೇಲ್ವೈದೇಹಿಇಮ್ಮಡಿ ಪುಲಕೇಶಿಕೃಷಿ ಅರ್ಥಶಾಸ್ತ್ರಚದುರಂಗ (ಆಟ)ಉಪ್ಪಿನ ಸತ್ಯಾಗ್ರಹಮಾವುಯೋನಿಏಕೀಕರಣಕೆಂಪು ಮಣ್ಣುಛಂದಸ್ಸುಶಬ್ದಮಣಿದರ್ಪಣಶನಿಋತುಜಾಹೀರಾತುಚದುರಂಗದ ನಿಯಮಗಳುಮಂತ್ರಾಲಯಕನ್ನಡಿಗಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಮುದ್ರಗುಪ್ತಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಶಬ್ದಅಮ್ಮಊಟಸಾಮ್ರಾಟ್ ಅಶೋಕ🡆 More