ಇರ್ವಿಂಗ್ ಲಾಂಗ್‌ಮುಯಿರ್

ಅಮೇರಿಕದ ಭೌತರಸಾಯನವಿಜ್ಞಾನಿಯಾಗಿದ್ದ ಇರ್ವಿಂಗ್ ಲಾಂಗ್‌ಮುಯಿರ್ರವರು ೧೮೮೧ರ ಜನವರಿ ೩೧ರಂದು ನ್ಯೂಯಾರ್ಕಿನ ಬ್ರೂಕ್‌ಲಿನ್‌ನಲ್ಲಿ ಜನಿಸಿದರು.

ಲಾಂಗ್‌ಮುಯಿರ್ರವರು ಜನರಲ್ ಎಲೆಕ್ಟ್ರಿಕ್ ಕಂಪೆನಿಯಲ್ಲಿದ್ದಾಗ (ಬಿಸಿಯಾದ) ಟಂಗ್‌ಸ್ಟನ್ ತಂತುಗಳ ಸುತ್ತಲೂ ಅನಿಲಗಳ ಉಷ್ಣ ವಹನ (conduction) ಮತ್ತು ಸಂವಹನದ (convection) ಬಗ್ಗೆ ಅಧ್ಯಯನ ನಡೆಸಿದರು. ನಿರ್ವಾತ ವಿದ್ಯುತ್ ಬುರುಡೆಯ ಒಳಗಿನ ಗಾಜಿನ ಗೋಡೆಗಳ ಮೇಲೆ ಕಪ್ಪುಮಸಿಯಂತಹ ಕಲೆಯಾಗುವುದಕ್ಕೆ ಟಂಗ್‌ಸ್ಟನ್‌ನ ಬಾಷ್ಪೀಕರಣವೇ ಕಾರಣವಾಗಿದೆ ಎಂಬುದಾಗಿ ಅವರು ತೋರಿಸಿಕೊಟ್ಟರು. ಮುಂದೆ ಗಾಜಿನ ಬುರುಡೆಯೊಳಗೆ ನೈಟ್ರೋಜನ್ ಅನಿಲವನ್ನು ತುಂಬಿದ್ದರಿಂದ ಟಂಗ್‌ಸ್ಟನ್‌ನ ಬಾಷ್ಪೀಕರಣ ಮತ್ತು ಕಪ್ಪುಮಸಿಯಾಗುವುದು ತಪ್ಪಿತಾದರೂ, ಉಷ್ಣದ ಪ್ರಮಾಣದಲ್ಲಿ ನಷ್ಟ ಆಗುತ್ತಿರುವುದು ಕಂಡುಬಂದಿತು. ಆ ನಷ್ಟವನ್ನು ಪರಿಹರಿಸಲು ಟಂಗ್‌ಸ್ಟನ್ ತಂತುಗಳನ್ನು ಸುರುಳಿಯಲ್ಲಿ ಸುರುಳಿಯಾಕಾರದಲ್ಲಿ (coiled coil) ತಯಾರಿಸಲಾಯಿತು. ನಿರ್ವಾತದಲ್ಲಿನ ಯಾವುದೇ ಆಕಾರದ ಇಲೆಕ್ಟ್ರೋಡ್‌ಗಳ ನಡುವಿನ ವಿದ್ಯುತ್ಪ್ರವಾಹ ಆ ಇಲೆಕ್ಟ್ರೋಡ್‌ಗಳ ನಡುವಿನ ವಿಭವಾಂತರಗಳ ೩/೨ರ ಘಾತಕ್ಕೆ ಅನುಪಾತವಾಗಿರುತ್ತದೆ ಎಂಬುದಾಗಿ ಚೈಲ್ಡ್ ಮತ್ತು ಲಾಂಗ್‌ಮುಯಿರ್ರವರು ಪ್ರತಿಪಾದಿಸಿದರು. ಅದಕ್ಕೆ ‘ಚೈಲ್ಡ್-ಲಾಂಗ್ ಮುಯಿರ್ ಅವಕಾಶ-ಆವೇಶ ಪರಿಣಾಮ’ (Child-Langmuir space-charge effect) ಎಂಬುದಾಗಿ ಕರೆಯಲಾಗಿದೆ. (ಅಂದರೆ I=GV3/2 ಎಂದಾಗುತ್ತದೆ. I ಅಂದರೆ ವಿದ್ಯುತ್ಪ್ರವಾಹ, V ಅಂದರೆ ವೋಲ್ಟೇಜ್ ಮತ್ತು G ಎಂದರೆ ಇಲೆಕ್ಟ್ರೋಡ್‌ಗಳ ಭೌತಿಕರೂಪದ ಮೇಲೆ ಅವಲಂಬಿತವಾಗಿರುವ ನಿಯತಾಂಕ.) ೧೯೩೪ರಲ್ಲಿ ಲಾಂಗ್‌ಮುಯಿರ್ರವರು ‘ಅಟಾಮಿಕ್ ವೆಲ್ಡಿಂಗ್ ಟಾರ್ಚ್’ನನ್ನು ಸಂಶೋಧಿಸಿ, ಅದರ ಪೇಟೆಂಟ್ ಪಡೆದರು. ಆ ಟಾರ್ಚ್‌ನಲ್ಲಿ ಇಲೆಕ್ಟ್ರೋಡ್‌ಗಳ ನಡುವೆ ಉಂಟಾಗುತ್ತಿದ್ದ ಕಿಡಿಯ ಉಷ್ಣತೆ ಸುಮಾರು ೬೦೦೦ಡಿಗ್ರಿ ಸೆಂ.ಯಷ್ಟಿತ್ತು. ಅವರು ಘನ ಕಾರ್ಬನ್ ಡೈಆಕ್ಸೈಡ್ ಮತ್ತು ಸಿಲ್ವರ್ ಐಯೋಡೈಡ್ ಕಣಗಳನ್ನು ವಿಮಾನದಿಂದ ಆಕಾಶದಲ್ಲಿ ಚದುರಿಸಿ ಮೋಡಗಳ ರಚನೆಯಾಗುವಂತೆ ಮಾಡುವ ಪ್ರಯೋಗವನ್ನು ಮಾಡಿದರು. ಅದರಿಂದ ಮಳೆ ಬರಿಸುವ ಪ್ರಯತ್ನವನ್ನು ಅವರು ನಡೆಸಿದ್ದರು. ಲಾಂಗ್‌ಮುಯಿರ್ರವರ ಉಷ್ಣವಿದ್ಯುತ್ವಾಹಿ ವಿಸರ್ಜನೆಯ (thermionic emission) ಬಗೆಗಿನ ಉಪಯುಕ್ತ ಪ್ರಯೋಗಗಳಿಗೆ ೧೯೩೨ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಲಾಂಗ್‌ಮುಯಿರ್ರವರು ೧೯೫೭ರ ಆಗಸ್ಟ್ ೧೬ರಂದು ಮೆಸಾಚುಸೆಟ್ಸ್‌ನ ಫಾಲ್‌ಮೌತ್‌ನಲ್ಲಿ ನಿಧನರಾದರು.

ಇರ್ವಿಂಗ್ ಲಾಂಗ್‌ಮುಯಿರ್
ಇರ್ವಿಂಗ್ ಲಾಂಗ್‌ಮುಯಿರ್
ಇರ್ವಿಂಗ್ ಲಾಂಗ್‌ಮುಯಿರ್
Born
ಇರ್ವಿಂಗ್ ಲಾಂಗ್‌ಮುಯಿರ್

೧೮೮೧ ಜನವರಿ ೩೧
ಅಮೇರಿಕ
Nationalityಅಮೇರಿಕ

ಉಲ್ಲೇಖಗಳು

Tags:

ನೊಬೆಲ್ ಪ್ರಶಸ್ತಿ

🔥 Trending searches on Wiki ಕನ್ನಡ:

ಕರ್ನಾಟಕದಲ್ಲಿ ಬ್ಯಾಂಕಿಂಗ್ಮಹಾತ್ಮ ಗಾಂಧಿಯುವರತ್ನ (ಚಲನಚಿತ್ರ)ವೇದಜಿ.ಪಿ.ರಾಜರತ್ನಂಭಾರತ ಸಂವಿಧಾನದ ಪೀಠಿಕೆಪ್ಯಾರಾಸಿಟಮಾಲ್ಜೀವಸತ್ವಗಳುಜಾತ್ರೆಭಾರತೀಯ ಅಂಚೆ ಸೇವೆಪುನೀತ್ ರಾಜ್‍ಕುಮಾರ್ಶಿಲ್ಪಾ ಶಿಂಧೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕರ್ನಾಟಕ ಸ್ವಾತಂತ್ರ್ಯ ಚಳವಳಿಹಾಸನ ಜಿಲ್ಲೆಆಲಮಟ್ಟಿ ಆಣೆಕಟ್ಟುರಾಬರ್ಟ್ (ಚಲನಚಿತ್ರ)ಗುಪ್ತ ಸಾಮ್ರಾಜ್ಯಜವಾಹರ‌ಲಾಲ್ ನೆಹರುಕ್ಯಾನ್ಸರ್ಆಯ್ದಕ್ಕಿ ಲಕ್ಕಮ್ಮಕರ್ನಾಟಕ ಯುದ್ಧಗಳುಕುದುರೆಮೈಸೂರು ಸಂಸ್ಥಾನಮೈಸೂರುಭಾರತದ ಪಂಚಾಯತ್ ರಾಜ್ ವ್ಯವಸ್ಥೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಾರುಕಟ್ಟೆಜೈಮಿನಿ ಭಾರತತೇಜಸ್ವಿನಿ ಗೌಡವಿತ್ತೀಯ ನೀತಿಜೀವನಬಂಡಾಯ ಸಾಹಿತ್ಯಕ್ರಿಕೆಟ್ಕೈವಾರ ತಾತಯ್ಯ ಯೋಗಿನಾರೇಯಣರುದ್ವೈತ ದರ್ಶನನಯಾಗರ ಜಲಪಾತದಾಕ್ಷಾಯಿಣಿ ಭಟ್ತುಂಗಭದ್ರಾ ಅಣೆಕಟ್ಟುದಿಕ್ಸೂಚಿಸಹಕಾರಿ ಸಂಘಗಳುಅರವಿಂದ ಘೋಷ್ನರೇಂದ್ರ ಮೋದಿಚಂಡಮಾರುತಕೇಂದ್ರ ಲೋಕ ಸೇವಾ ಆಯೋಗಅಕ್ಕಮಹಾದೇವಿವಾಯು ಮಾಲಿನ್ಯಪ್ಲಾಸಿ ಕದನಧರ್ಮಚಿನ್ನದ ಗಣಿಗಾರಿಕೆಕಲ್ಹಣವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಋಗ್ವೇದರಾಷ್ಟ್ರಕೂಟಸ್ತ್ರೀಸಮಾಜ ವಿಜ್ಞಾನಸಂಯುಕ್ತ ರಾಷ್ಟ್ರ ಸಂಸ್ಥೆರಸ(ಕಾವ್ಯಮೀಮಾಂಸೆ)ಎಚ್.ಎಸ್.ವೆಂಕಟೇಶಮೂರ್ತಿಪ್ರವಾಸೋದ್ಯಮಭಾರತೀಯ ನೌಕಾ ಅಕಾಡೆಮಿಚಾಣಕ್ಯವಿಜಯನಗರಹೆಚ್.ಡಿ.ಕುಮಾರಸ್ವಾಮಿಭಾರತದ ತ್ರಿವರ್ಣ ಧ್ವಜಬೆಂಗಳೂರುಉಪನಿಷತ್ಆಮದು ಮತ್ತು ರಫ್ತುಋತುಹಾಕಿಕನಕದಾಸರುಶ್ರೀ ರಾಮಾಯಣ ದರ್ಶನಂಕೊಡಗುಕರ್ನಾಟಕದ ಇತಿಹಾಸಮೊಘಲ್ ಸಾಮ್ರಾಜ್ಯಭಾರತದಲ್ಲಿ ತುರ್ತು ಪರಿಸ್ಥಿತಿಧೀರೂಭಾಯಿ ಅಂಬಾನಿಯುಗಾದಿ🡆 More