ಪುತ್ತೂರಿನ ಸಾಹಿತ್ಯ ವಲಯವನ್ನು ವಿಸ್ತರಿಸಿದ ಹಿರಿಯರಲ್ಲಿ ಪ್ರೊ.ಬಿ.ಲೀಲಾ ಭಟ್ಟರು ಒಬ್ಬರು.
ಪುತ್ತೂರಿನ ಸಾಹಿತ್ಯ ವಲಯವನ್ನು ವಿಸ್ತರಿಸಿದ ಹಿರಿಯರಲ್ಲಿ ಪ್ರೊ.ಬಿ.ಲೀಲಾ ಭಟ್ಟರು ಒಬ್ಬರು.
ಇವರ ಹುಟ್ಟೂರು ದ.ಕ.ಜಿಲ್ಲೆಯ ಪುತ್ತೂರು, ತಂದೆ ಬೊಳುವಾರು ಶ್ರೀನಿವಾಸ ಭಟ್, ತಾಯಿ ಜೀನಾ ಬಾಯಿ ಇವರು ಜಿನಸಿ ವ್ಯಾಪಾರಿಗಳು. ಪ್ರವಾಸ ಕಥನ, ಸಂಶೋದನೆ, ಸಂಪಾದನೆ, ಅನುವಾದ, ಜೀವನಚರಿತ್ರೆ ಹೀಗೆ ಸೃಜನೇತರ ಸಾಹಿತ್ಯ ವಲಯದಲ್ಲಿ ಕೆಲಸ ಮಾಡಿದ ಹಿರಿಯ ವ್ಯಕ್ತಿ. ಇವರ ಮನೆ ಮಾತು ಕೊಂಕಣಿ. ಆದರೆ ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅವರಿಗೆ ಪರಿಣತಿಯಿತ್ತು. ಉಗ್ರಾಣ ಮಂಗೇಶರಾಯರು, ಶಿವರಾಮ ಕಾರಂತರು, ಬ್ಯೆಂದೂರು ಆನಂದರಾಯರು, ಕಡವ ಶಂಭುಶರ್ಮ ಮುಂತಾದವರು ನಿರ್ಮಿಸಿದ ಪುತ್ತೂರಿನ 'ಸಾಹಿತ್ಯ ರಥ'ವನ್ನು ಮುನ್ನಡೆಸಿದ ಹಿರಿಮೆ ಇವರದು. ಪುತ್ತೂರು ಕರ್ನಾಟಕ ಸಂಘದ ಬೆಂಬಲ, ಬೋಳಂತಕೋಡಿ ಈಶ್ವರ ಭಟ್ಟರ ಒತ್ತಾಸೆ, ಲೀಲಾ ಭಟ್ಟರ ಶ್ರದ್ಧೆಗಳು ಮುಪ್ಪುರಿಗೊಂಡು ಉಗ್ರಾಣ ಮತ್ತು ಎಂ.ಎನ್.ಕಾಮತ್ ಸಂಪುಟಗಳು ಹೊರಬರಲು ಸಾದ್ಯವಾಯಿತು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪುತ್ತೂರಿನಲ್ಲಿಯೇ ಪಡೆದರು ಹಾಗು ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜಿನಲ್ಲಿ ಬಿ. ಎ., ಬಿ. ಟಿ. ಪದವಿ, ಮದ್ರಾಸು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ. ಪದವಿ.ಪದಡೆದಿದ್ದಾರೆ ಗುರುಗಳು: ಕಡವ ಶಂಭುಶರ್ಮ, ಮಾರಪ್ಪ ಶೆಟ್ಟಿ ಹಾಗು ಮದ್ರಾಸಿನಲ್ಲಿ ಪ್ರೊ. ಎಂ. ಮರಿಯಪ್ಪ ಭಟ್ಟರು ಮೊದಲಾದವರು. ಉದ್ಯೊಗ:ಇವರು ಆರಂಭದಲ್ಲಿ ನಾಲ್ಕು ವರ್ಷ ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡಿದ ಅನಂತರ ಕನ್ನಡ ಉಪನ್ಯಾಸಕರಾಗಿ ಉಡುಪಿಯ ಎಂ. ಜಿ. ಎಂ. ಕಾಲೇಜಿನಲ್ಲಿ ತಮ್ಮ ಬದುಕಿನ ಸಾರವತ್ತಾದ ಭಾಗವನ್ನು ಕಳೆದರು.
This article uses material from the Wikipedia ಕನ್ನಡ article ಲೀಲಾ ಭಟ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.