ಬಾಲನ್ ನಂಬಿಯಾರ್ (ಜನನ 12 ನವೆಂಬರ್ 1937 ಕನ್ನಪುರಂನಲ್ಲಿ) ಒಬ್ಬ ಭಾರತೀಯ ವರ್ಣಚಿತ್ರಕಾರ, ಶಿಲ್ಪಿ, ಎನಾಮೆಲಿಸ್ಟ್, ಛಾಯಾಗ್ರಾಹಕ ಮತ್ತು ಶೈಕ್ಷಣಿಕ ಸಂಶೋಧಕ.
ಇವರು ಶಾಲೆಯಲ್ಲಿದ್ದಾಗಲೇ ತಮ್ಮ ಮೊದಲ ದೊಡ್ಡ ಕಲಾಕೃತಿಯಾಗಿ ಐದು ಅಡಿ ಮಣ್ಣಿನ ಶಿಲ್ಪವನ್ನು ಮಾಡಿದರು. ಶಾಲೆಯನ್ನು ಮುಗಿಸಿದ ನಂತರ, ಅವರು ಕೇರಳದ ಪಾಲಕ್ಕಾಡ್ನಲ್ಲಿರುವ ಹೈಸ್ಕೂಲ್ನಲ್ಲಿ ಸ್ವಲ್ಪ ಸಮಯದವರೆಗೆ ಶಿಲ್ಪಕಲೆಯನ್ನು ಕಲಿಸಿದರು. ಆಮೆಲೆ ಮದ್ರಾಸ್ನ ದಕ್ಷಿಣ ರೈಲ್ವೇಗೆ ಡ್ರಾಫ್ಟ್ಮನ್ ಆಗಿ ಸೇರಿದರು. 1971 ರಲ್ಲಿ, ನಂಬಿಯಾರ್ ಅವರು ಶಿಲ್ಪಕಲೆಯಲ್ಲಿ ವಿಶೇಷತೆಯೊಂದಿಗೆ ಮದ್ರಾಸ್ನ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನಿಂದ (ಈಗ ಫೈನ್ ಆರ್ಟ್ಸ್ ಕಾಲೇಜ್, ಚೆನ್ನೈ) ಲಲಿತಕಲೆಯಲ್ಲಿ ಡಿಪ್ಲೊಮಾ ಪಡೆದರು. ಅವರು ತಮ್ಮ ವೃತ್ತಿಜೀವನವನ್ನು ಜಲವರ್ಣ (ವಾಟರ್ಕಲರ್) ಚಿತ್ರಕಲೆಯೊಂದಿಗೆ ಪ್ರಾರಂಭಿಸಿದರು, ಆದರೆ ಶೀಘ್ರದಲ್ಲೇ ಶಿಲ್ಪಕಲೆಗೆ ಬದಲಾಯಿಸಿದರು, ಆರಂಭದಲ್ಲಿ ಕಂಚಿನ ಮತ್ತು ಕಾಂಕ್ರೀಟ್ನಲ್ಲಿ ಎರಕಹೊಯ್ದ ವಿಧಾನಗಳನ್ನು ಬಳಸಿದರು. ಅವರ ನಂತರದ ಉಕ್ಕಿನ ಕೆಲಸಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ನ ಲೋಹಶಾಸ್ತ್ರ ವಿಭಾಗದಲ್ಲಿ ಅವರ ಪ್ರಯೋಗಗಳ ಉತ್ಪನ್ನಗಳಾಗಿವೆ.
ಬಾಲನ್ ನಂಬಿಯಾರ್ | |
ಹುಟ್ಟು |
ಇವರು ಶಿಲ್ಪಿಯಾಗಿ ಜೇಡಿಮಣ್ಣು, ಫೈಬರ್ಗ್ಲಾಸ್ ಕಾಂಕ್ರೀಟ್, ಮರ, ಕಂಚು, ಸ್ಟೀಲ್ ಮತ್ತು 2000 ರಿಂದ ಸ್ಟೇನ್ಲೆಸ್ ಸ್ಟೀಲ್ನೊಂದಿಗೆ ಕೆಲಸ ಮಾಡಿದರು. ಅವರ ಅನೇಕ ಕೃತಿಗಳು ಹೊರಾಂಗಣ ಶಿಲ್ಪಗಳಾಗಿವೆ; ಮತ್ತು ಕೆಲವು ಸ್ಮಾರಕಗಳಾಗಿವೆ. ಅವರು ದಂತಕವಚ ವರ್ಣಚಿತ್ರಗಳನ್ನು ನಿರ್ಮಿಸಿದರು, ಇಟಲಿಯ ಪಡುವಾದ ಪಾವೊಲೊ ಡಿ ಪೊಲಿ ಅವರಿಂದ ಕೌಶಲ್ಯವನ್ನು ಕಲಿತರು. 1982 ರಲ್ಲಿ ವೆನಿಸ್ ಬೈನಾಲೆ, 1978 ರಲ್ಲಿ ಹ್ಯಾನೋವರ್ನಲ್ಲಿ ಕನ್ಸ್ಟ್ರಕ್ಟಾ-78, ನವದೆಹಲಿಯಲ್ಲಿ ಟ್ರಿಯೆನ್ನೆಲ್ ಇಂಡಿಯಾ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಅವರ ಕೃತಿಗಳನ್ನು ಪ್ರದರ್ಶಿಸಲಾಯಿತು. ಅವರ ಕೃತಿಗಳು ಅನೇಕ ವಸ್ತುಸಂಗ್ರಹಾಲಯಗಳ ಶಾಶ್ವತವಾಗಿ ಸಂಗ್ರಹಣೆಯಾಗಿವೆ.
ಬಾಲನ್ ನಂಬಿಯಾರ್ ಅವರು ಭಾರತೀಯ ಪಶ್ಚಿಮ ಕರಾವಳಿಯ ನೂರಾರು ಧಾರ್ಮಿಕ ಪ್ರದರ್ಶನಗಳ ಬಗ್ಗೆ ಮತ್ತು ತೆಯ್ಯಂ ಮತ್ತು ಭೂತಗಳ ಕಲಾ ಪ್ರಕಾರಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಛಾಯಾಚಿತ್ರಗಳೊಂದಿಗೆ ದಾಖಲಿಸಿದ್ದಾರೆ. ಅವರ ಲೇಖನಗಳು ಮತ್ತು ಛಾಯಾಚಿತ್ರಗಳು ಪುಸ್ತಕಗಳಲ್ಲಿ ಪ್ರಕಟವಾಗಿವೆ. ನವದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಅವರ ಸುಮಾರು 1800 ಛಾಯಾಚಿತ್ರಗಳನ್ನು ಪಡೆದುಕೊಂಡಿದೆ.
ಅವರು ತಮ್ಮ ಕೃತಿಗಳು ಮತ್ತು ಶೈಕ್ಷಣಿಕ ಸಂಶೋಧನೆಗಳಿಗೆ ಪ್ರಶಸ್ತಿಗಳನ್ನು ಪಡೆದಿದ್ದಾರೆ: 1981 ರಲ್ಲಿ ಭಾರತ ರಾಷ್ಟ್ರೀಯ ಪ್ರಶಸ್ತಿ ಮತ್ತು 1980 ರಲ್ಲಿ ಲಲಿತ ಕಲಾ ಅಕಾಡೆಮಿ (ನ್ಯಾಷನಲ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್) ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಶಿಲ್ಪಕಲೆಗಳಿಗಾಗಿ 1982-83ರಲ್ಲಿ ಭಾರತ ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿಪ್ ಮತ್ತು 1983-85 ರಲ್ಲಿ ಜವಾಹರಲಾಲ್ ನೆಹರು ಸ್ಮಾರಕ ನಿಧಿಯ ನೆಹರು ಫೆಲೋಶಿಪ್, ಶೈಕ್ಷಣಿಕ ಸಂಶೋಧನೆಗಾಗಿ 2005ರಲ್ಲಿ ಕೇರಳ ಲಲಿತ ಕಲಾ ಅಕಾಡೆಮಿಯ ಅಕಾಡೆಮಿ ಫೆಲೋಶಿಪ್ ಮತ್ತು 2013 ರಲ್ಲಿ ಕಲಾತ್ಮಕ ಚಿತ್ರಕಲೆಗಾಗಿ ಕೇರಳ ಸಂಗೀತ ನಾಟಕ ಅಕಾಡೆಮಿಯ ಪ್ರವಾಸಿ ಕಲಾರತ್ನ ಫೆಲೋಶಿಪ್ ಪಡೆದಿದ್ದಾರೆ . ಕೇರಳ ಸರ್ಕಾರವು ಅವರಿಗೆ 2015 ರಲ್ಲಿ ಕಲಾ ವಿಭಾಗದಲ್ಲಿ ಅತ್ಯುನ್ನತ ರಾಜ್ಯ ಪ್ರಶಸ್ತಿಯಾದ 2014 ರ ರಾಜಾ ರವಿ ವರ್ಮ ಪುರಸ್ಕಾರವನ್ನು ನೀಡಿತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಬೆಂಗಳೂರು ಫೆಬ್ರವರಿ 2018 ರಲ್ಲಿ ನಂಬಿಯಾರ್ ಅವರ ಆರು ದಶಕಗಳ ಕೆಲಸದ ಹಿನ್ನೋಟವನ್ನು ನಡೆಸಿತು, ಇದನ್ನು ಸದಾನಂದ್ ಮೆನನ್ ಅವರು ಸಂಗ್ರಹಿಸಿದರು [೧]
ಅವರು ನವದೆಹಲಿಯ ಲಲಿತ್ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ, ಲಲಿತ ಕಲಾ ಅಕಾಡೆಮಿಯ ಜನರಲ್ ಕೌನ್ಸಿಲ್ ಸದಸ್ಯರಾಗಿದ್ದಾರೆ, ಸಂಸ್ಕೃತಿಯ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.
This article uses material from the Wikipedia ಕನ್ನಡ article ಬಾಲನ್ ನಂಬಿಯಾರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.