(೩೦-೦೫೧೯೩೮)
ಡಾ.ಪ್ರಧಾನ್ ಗುರುದತ್ತರು, ಬಹುಮುಖ ಪ್ರತಿಭೆಯ ಒಬ್ಬ ಅಪರೂಪದ ಕನ್ನಡ ಪ್ರಾಧ್ಯಾಪಕರು. ಬಹುಭಾಷಾಪಂಡಿದರು. ಮೈಸೂರು ವಿಶವಿದ್ಯಾಲಯದ ಡಾ ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೮ ರಲ್ಲಿ ವಿವೃತ್ತರಾದರು. ೧೫೦ ಕ್ಕೂ ಮಿಗಿಲಾದ ಪುಸ್ತಕ ಪ್ರಕಟಣೆ. ಸುಮಾರು ೨೫೦ ಸಂಶೋಧನ ಲೇಖನಗಳು ಇಂಗ್ಲೀಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದಾರೆ.
ಪ್ರಧಾನ್, ಜನಿಸಿದ್ದು ಚಿಕ್ಕಬಳ್ಳಾಪುರದಲ್ಲಿ.
ಮೈಸೂರಿನಲ್ಲಿ ಉಚ್ಚ ಶಿಕ್ಷಣ; ಕನ್ನಡದಲ್ಲಿ ಎಂ.ಎ.ಆನರ್ಸ್; ಎಂ ಎ. ಅನುವಾದದಲ್ಲಿ; ಎಂ.ಫಿಲ್ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದರು. ಇವರು ಆರಿಸಿಕೊಂಡ ವಿಷಯ : 'ಕೃಷ್ಣ ಕಥೆಯ ಉಗಮ, ಮತ್ತು ವಿಕಾಸ'. ಡಿ.ಲಿಟ್.ಪದವಿ, ತುಮಕೂರು ವಿಶ್ವವಿದ್ಯಾಲಯದಿಂದ. ಗುರುದತ್ತರ ಮಾರ್ಗದರ್ಶನದಲ್ಲಿ ೭ ಪಿ.ಎಚ್.ಡಿ ವಿದ್ಯಾರ್ಥಿಗಳು, ೨೦ ವಿದ್ಯಾರ್ಥಿಗಳು, ಎಂ.ಫಿಲ್ ಕನ್ನಡ ಇಂಗ್ಲಿಷ್ ಸಂಸ್ಕೃತ, ಫ್ರೆಂಚ್ ತಮಳು ತೆಲುಗು ಮರಾಠಿ ಭಾಷೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಪ್ರದಾನ್ ಗುರುದತ್ತರ ಪರಿವಾರದಲ್ಲಿ, ಪತ್ನಿ ಸೀತಾಲಕ್ಷ್ಮಿ ಹಾಗೂ ಮಕ್ಕಳು : ಶ್ರೀಕಾಂತ, ಆರತಿ, ಅಶ್ವಿನಿ,
This article uses material from the Wikipedia ಕನ್ನಡ article ಪ್ರಧಾನ್ ಗುರುದತ್ತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.