ಹಿಂದಿ ಚಿತ್ರನಟ ಅಶೋಕ್ ಕುಮಾರ್

’ಕುಮುದ್ ಲಾಲ್ ಕುಂಜಿಲಾಲ್ ಗಂಗೂಲಿ’ಯೆಂದು ಮನೆಯಲ್ಲಿ ಕರೆಯಲ್ಪಡುವ 'ಅಶೋಕ್ ಕುಮಾರ್, ಬಂಗಾಳದ 'ಭಾಗಲ್ಪುರ' ದಲ್ಲಿ ಹುಟ್ಟಿದ್ದು ಅಕ್ಟೋಬರ್, ೧೩, ೧೯೧೧ ರಲ್ಲಿ.

ತಂದೆ, 'ಕುಂಜಲಾಲ್ ಗಂಗೂಲಿ', ಲಾಯರ್ ಆಗಿದ್ದರು. ತಾಯಿ 'ಗೌರಿ ದೇವಿ', ಧನಿಕರ ಮಗಳು. ’ಖಾಂಡ್ವ’ '(ಮಧ್ಯ ಪ್ರದೇಶ್)'ನಿಂದ ಬಂದವರು. 'ಬಾಲಿವುಡ್ ಚಿತ್ರರಂಗ'ದ ಇನ್ನೂ ಹಲವು ಹೆಸರುಗಳಾದ 'ಕಿಶೋರ್ ಕುಮಾರ್', 'ಅನೂಪ್ ಕುಮಾರ್', ಇವರ ಸೋದರರು. ಸೋದರಿ 'ಸತಿದೇವಿ', 'ಸಶಧರ್ ಮುಖರ್ಜಿ' ಯವರ ಪತ್ನಿ, ಹತ್ತಿರದ ಗೆಳೆಯರಿಂದ 'ದಾದಾಮುನಿ'ಯೆಂದೇ ಸಂಬೋಧಿಸಲ್ಪಡುವ ' ಅಶೋಕ್ ಕುಮಾರ್' ೧೯೪೦ ರಲ್ಲೇ ಕಲ್ಕತ್ತಾದ 'ಪ್ರೆಸಿಡೆನ್ಸಿ ಕಾಲೇಜ್' ನಿಂದ ಎಮ್. ಎ; ಪದವಿ ಪಡೆದಿದ್ದರು.

Ashok Kumar
ಹಿಂದಿ ಚಿತ್ರನಟ ಅಶೋಕ್ ಕುಮಾರ್
Born
Kumudlal Kunjilal Ganguly

(೧೯೧೧-೧೦-೧೩)೧೩ ಅಕ್ಟೋಬರ್ ೧೯೧೧
Bhagalpur, Bengal Presidency, British India
Died10 December 2001(2001-12-10) (aged 90)
ಮುಂಬೈ, Maharastra, India
Cause of deathHeart Failure
Other namesSanjay
Ashok Kumar
Occupation(s)Actor, painter
Years active1936–1997
SpouseShobha Devi
RelativesAnoop Kumar, Kishore Kumar(Brothers), Sati Devi (Sister)

'ವೈವಿಧ್ಯಮಯ ಪಾತ್ರಗಳು

ನಾಯಕ, ಖಳನಾಯಕ, ತಂದೆ, ಮಾವ, ಅಣ್ಣ, ಹೀಗೆ ಒಟ್ಟಾರೆ ೨೨೦ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೪೦ ರ ದಶಕದಲ್ಲಿ 'ಮುಂಬಯಿ ಟಾಕೀಸ್' ಗೆ ಪಾದಾರ್ಪಣೆಮಾಡಿದ 'ದಾದಾಮುನಿ'ಯವರು, ೧೯೯೮ ರವರೆಗೆ ಸಕ್ರಿಯವಾಗಿ ಚಿತ್ರರಂಗದಲ್ಲಿ ಬೇರುಬಿಟ್ಟಿದ್ದರು. ಯಾರೂ ಸಾಧಿಸದ ಸಾಧನೆಯೆಂದರೆ, ನೂರಕ್ಕೂ ಹೆಚ್ಚು 'ಶತದಿನೋತ್ಸವ'ಗಳನ್ನು ಆಚರಿಸಿದ ಚಿತ್ರಗಳಲ್ಲಿ ಅವರು ನಟಿಸಿದ್ದರು. 'ನವಯುವಕ'ನಿಂದ 'ಅಜ್ಜ'ನವರೆಗೆ ಹಾಸ್ಯ, ಗಾಂಭೀರ್ಯ, ಭಾವನಾತ್ಮಕವಾದ ಅಬ್ಬರ ಅರಚಾಟಿಕೆಯಿಲ್ಲದೆ ಸಹಜತೆಯ ಅಭಿನಯದಿಂದ ಜನಪ್ರಿಯತೆ ಸಾಧಿಸಿದರು. ನಿರ್ಮಾಪರಿಗಂತೂ 'ಅಶೋಕ್ ಕುಮಾರ್' ಮೇಲೆ ಹಣ ಗ್ಯಾರಂಟಿಯಾಗಿ ಚಕ್ರಬಡ್ಡಿಯ ಸಮೇತ ವಾಪಸ್ ದೊರೆಯುತ್ತಿತ್ತು.

'ದಾದಾಮುನಿಯವರ, ನಾಯಕಿಯರು

  • 'ದೇವಿಕಾರಾಣಿ',
  • 'ಲೀಲಾಚಿಟ್ನಿಸ್',
  • 'ವನಮಾಲಾ',
  • 'ವಾಸಂತಿ',
  • 'ರೋಸ್',
  • 'ನೂತನ್,
  • 'ಮೀನಾಕುಮಾರಿ'
  • 'ಮಧುಬಲಾ'
  • 'ಗೀತಾಬಾಲಿ'
  • 'ಸುಮಿತ್ರ'
  • 'ಹೇಮಾಮಾಲಿನಿ'

ಜೊತೆ ಪಾತ್ರಾಭಿನಯಿಸಿದ ಏಕೈಕ ಕಲಾವಿದ. 'ಪದ್ಮಶ್ರೀ', 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತ',ವ್ಯವಹಾರದಲ್ಲಿ ಅತಿ ಕಟ್ಟುನಿಟ್ಟಿನವ. ವಿಚಿತ್ರ ಸ್ವಭಾವದವ. 'ಬಿ.ಆರ್. ಛೋಪ್ರ', 'ದೇವಕಿ ಬೋಸ್','ಅಮಿಯ ಚಕ್ರವರ್ತಿ', 'ಬಿಮಾಲ್ ರಾಯ್', 'ಸಕ್ಬೇನ್ ಬೋಸ್', ಹಾಗೂ ಮದ್ರಾಸ್ ನ ಚಿತ್ರ-ನಿರ್ಮಾಪಕರು, ನಿರ್ದೇಶಕರುಗಳ ಅತ್ಯಂತ ಬೇಡಿಕೆಯ ನಟ.

'ಮುಂಬೈನ,'ಕಾಲಾಘೋಡ ಜಿಲ್ಲೆ'ಯಲ್ಲಿ 'ಸ್ವಂತಮನೆ'

೧೯೬೦-೭೦ ರ ದಶಕದಲ್ಲಿ ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದರು. ಮುಂಬೈನಲ್ಲಿ 'ಕಾಲಾಘೋಡಾ ಜಿಲ್ಲೆ'ಯ ಅತಿಬೆಲೆಬಾಳುವ ಜಾಗದಲ್ಲಿ 'ರೋಸ್,' ಎಂಬ ಬಹುಮಹಡಿಯ-ಕಟ್ಟಡದ ಎರಡನೆಯ ಮಹಡಿಯ 'ಸ್ವಂತ ಮನೆ'ಯಲ್ಲಿ ಅವರು ವಾಸಿಸುತ್ತಿದ್ದರು. ಈ ಕಟ್ಟಡ ಈಗಿನ 'ಛತ್ರಪತಿ ವಸ್ತುಸಂಗ್ರಹಾಲಯ' ದ ಹಿಂಭಾಗದಲ್ಲಿದೆ. ಹಣಕಾಸಿನ ವಿಷಯದಲ್ಲಿ ಯಾವರಾಜಿಗೂ ಸಿದ್ಧರಾಗದ 'ದಾದಾಮುನಿ'ಯವರು ಯಾವಾಗಲೂ ತಮ್ಮಪಾಡಿಗೆ ಇರುತ್ತಿದ್ದರು. ತಮ್ಮಂದಿರು ಯಾವಾಗಲೂ ಅವರ ಜೊತೆಯಲ್ಲಿ ವಾಸವಾಗಿರಲಿಲ್ಲ. ಜನರ ನೆನಪಿನಲ್ಲುಳಿಯುವ ಹಲವು ಚಿತ್ರಗಳಲ್ಲಿ ಮನೋಜ್ಞ ಅಭಿನಯವನ್ನು ಕೊಟ್ಟಿದ್ದಾರೆ.

  • 'Achhut Kanya' (Hindi: अछूत कन्या, Urdu: اچھوت کنیا, translation: Untouchable Maiden) ೧೯೩೬ ರಲ್ಲಿ, ನಿರ್ಮಿಸಿದ ಚಿತ್ರದಲ್ಲಿ ಪಾದಾರ್ಪಣೆ.
  • 'ಕಿಸ್ಮತ್'
  • 'ಕಂಗನ್'
  • 'ಪರಿಣೀತಾ'
  • 'ಏಕ್ ಹೀ ರಾಸ್ತ'
  • 'ಪಾಕೀಜಾ'
  • 'ಹೂಮಾಯೂನ್', ಐತಿಹಾಸಿಕ ಚಿತ್ರ,
  • 'ಮಹಲ್' ಮುಂತಾದವುಗಳು

'ಅಶೋಕ್ ಕುಮಾರ್,' ಒಳ್ಳೆಯ ’ಗಾಯಕ’ ಕೂಡಾ. ಅವರ ದಿನಗಳಲ್ಲಿ ಹಿಂಬದಿಯ ಹಾಡುಗಾರಿಕೆ ಅಷ್ಟು ಪ್ರಬಲವಾಗಿರಲಿಲ್ಲ. ಸಾಮಾನ್ಯವಾಗಿ ಅಂದಿನ ನಾಯಕ-ನಾಯಕಿಯರು, ತಮ್ಮ ಪಾತ್ರಗಳಿಗೆ ಸಂಬಂಧಿಸಿದ ಹಾಡುಗಳನ್ನು ಅವರೇ ಹಾಡುವ ಕಾಲವದು. ’ಆಶೀರ್ವಾದ್’ ನಲ್ಲಿ ’ಚಲಿರೆ ರೇಲ್ ಗಾಡಿ ಕಲೆಗಾಂ ಮಲೆಗಾಂ'.ಅವಿಸ್ಮರಣೀಯ ಅದ್ಭುತ ನಟನೆ; ಹಣದ ಬಗ್ಗೆ ತೀವ್ರವಾದ ಅಕ್ಕರೆ.

ಕೊಂಡಿಗಳು

ಹೊರಗಿನ ಕೊಂಡಿಗಳು

Tags:

ಹಿಂದಿ ಚಿತ್ರನಟ ಅಶೋಕ್ ಕುಮಾರ್ ವೈವಿಧ್ಯಮಯ ಪಾತ್ರಗಳುಹಿಂದಿ ಚಿತ್ರನಟ ಅಶೋಕ್ ಕುಮಾರ್ ದಾದಾಮುನಿಯವರ, ನಾಯಕಿಯರುಹಿಂದಿ ಚಿತ್ರನಟ ಅಶೋಕ್ ಕುಮಾರ್ ಮುಂಬೈನ,ಕಾಲಾಘೋಡ ಜಿಲ್ಲೆಯಲ್ಲಿ ಸ್ವಂತಮನೆಹಿಂದಿ ಚಿತ್ರನಟ ಅಶೋಕ್ ಕುಮಾರ್ ಕೊಂಡಿಗಳುಹಿಂದಿ ಚಿತ್ರನಟ ಅಶೋಕ್ ಕುಮಾರ್ ಹೊರಗಿನ ಕೊಂಡಿಗಳುಹಿಂದಿ ಚಿತ್ರನಟ ಅಶೋಕ್ ಕುಮಾರ್

🔥 Trending searches on Wiki ಕನ್ನಡ:

ಕನ್ನಡದಲ್ಲಿ ಸಣ್ಣ ಕಥೆಗಳುಬಾಲಕಾರ್ಮಿಕಪಂಪಧರ್ಮಸ್ಥಳಭಾರತನಾ. ಡಿಸೋಜಕೈಗಾರಿಕೆಗಳುನೇಮಿಚಂದ್ರ (ಲೇಖಕಿ)ಸಜ್ಜೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಪಶ್ಚಿಮ ಘಟ್ಟಗಳುಮೀರಾಬಾಯಿಆತ್ಮಚರಿತ್ರೆರಾಮಾಯಣಡಿ. ದೇವರಾಜ ಅರಸ್ಇಸ್ಲಾಂಮೋಡವೆಂಕಟೇಶ್ವರ ದೇವಸ್ಥಾನಪ್ರಬಂಧ ರಚನೆಅಂತಿಮ ಸಂಸ್ಕಾರಕೊಡವರುಬೌದ್ಧ ಧರ್ಮಒಲಂಪಿಕ್ ಕ್ರೀಡಾಕೂಟಹರಪ್ಪದಾಳಿಂಬೆಕಿಸ್ (ಚಲನಚಿತ್ರ)ಪೌರತ್ವಪುರಾಣಗಳುಕರ್ನಾಟಕದ ಜಿಲ್ಲೆಗಳುಲಂಚ ಲಂಚ ಲಂಚಛತ್ರಪತಿ ಶಿವಾಜಿಜೈನ ಧರ್ಮಚಿನ್ನಪಾಂಡವರುಪ್ರವಾಹಕಲ್ಲಂಗಡಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಷಟ್ಪದಿಹೆಚ್.ಡಿ.ಕುಮಾರಸ್ವಾಮಿಜವಾಹರ‌ಲಾಲ್ ನೆಹರುಇಮ್ಮಡಿ ಪುಲಿಕೇಶಿಗಿರೀಶ್ ಕಾರ್ನಾಡ್ಪಠ್ಯಪುಸ್ತಕಕರಗಕನ್ನಡ ವ್ಯಾಕರಣಚೆನ್ನಕೇಶವ ದೇವಾಲಯ, ಬೇಲೂರುಅಕ್ಬರ್ಸಂಚಿ ಹೊನ್ನಮ್ಮಕನ್ನಡ ಸಾಹಿತ್ಯ ಪರಿಷತ್ತುರಮ್ಯಾನವೋದಯಗರ್ಭಧಾರಣೆಭಾರತೀಯ ರಿಸರ್ವ್ ಬ್ಯಾಂಕ್ಅರ್ಥಶಾಸ್ತ್ರವ್ಯಂಜನಜೇನು ಹುಳುಕರ್ನಾಟಕ ಐತಿಹಾಸಿಕ ಸ್ಥಳಗಳುಶ್ರವಣಬೆಳಗೊಳವಿಶಿಷ್ಟಾದ್ವೈತಕೈಗಾರಿಕಾ ಕ್ರಾಂತಿಕಥೆರೋಗವಸಾಹತುಪಾಲಕ್ಕೃಷಿಓಂ (ಚಲನಚಿತ್ರ)ರಾಷ್ಟ್ರೀಯ ಸೇವಾ ಯೋಜನೆಬಾಗಲಕೋಟೆಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ಸಂಶೋಧನೆಹೆಚ್.ಡಿ.ದೇವೇಗೌಡಕೈವಾರ ತಾತಯ್ಯ ಯೋಗಿನಾರೇಯಣರುತ್ರಿಪದಿಕ್ಯಾರಿಕೇಚರುಗಳು, ಕಾರ್ಟೂನುಗಳುಶನಿದಲಿತವೃತ್ತಪತ್ರಿಕೆ🡆 More