ಹೊಸಕೋಟೆ -ಭಾರತದ ರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು.
ಹೊಸಕೋಟೆ ತಾಲೂಕು 548 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಹೊಸಕೋಟೆ ಎಂದಾಕ್ಷಣ ಎಲ್ಲರಿಗೂ ಕಾಡುವ ಪ್ರೆಶ್ನೆ ಒಂದೇ ಹೊಸಕೋಟೆ ಎಂಬ ಹೆಸರು ಹೇಗೆ ಬಂತು ಹೊಸಕೋಟೆಯ ಇತಿಹಾಸ ಏನು ಎಂಬುದು, ತಿಳಿದುಕೊಳ್ಳೋ ಕುತೂಹಲ ಎಲ್ಲರಿಗೂ ಇರುತ್ತದೆ.
ಹೊಸಕೋಟೆ ಹೊಸಕೋಟೆ | |
---|---|
city | |
Population (೨೦೦೧) | |
• Total | ೩೬,೩೩೩ |
ಹೊಸಕೋಟೆಯನ್ನು ಆಳ್ವಿಕೆ ಮಾಡಿದ ಮುಖ್ಯವಾದ ವಂಶಸ್ಥರು ಅಂದರೆ ಅವರು ಸುಗಟುರು ಪಾಳೆಗಾರರು ಈ ಪಾಳೇಗಾರರ ವಂಶದ ಮೂಲ ಪುರುಷ ದೇವಪ್ಪ ಗೌಡ ( ಕ್ರಿ ಶ 1377 - 1422) ಸುಗಟುರು ಪಾಳೆಗಾರರು ವಿಜಯನಗರ ಸಾಮ್ರಾಜ್ಯದ ಸಮಂತರಾಗಿದ್ದು ದೇವಪ್ಪ ಗೌಡರ ನಂತರ ಆತನ ಮಗ ಹಾಗೂ ಹೊಸಕೋಟೆಯ ಮೂಲಪುರುಷನು ಅದ ತಮ್ಮೆಗೌಡ (ಕ್ರಿ ಶ 1422-1464) ತನ್ನ ಆಡಳಿತಾವಧಿಯಲ್ಲಿ ಹೊಸಕೋಟೆಯಲ್ಲಿ ಮಣ್ಣಿನ ಕೋಟೆಯನ್ನು ಕಟ್ಟಿಸುತ್ತಾನೆ.
ಹೊಸಕೋಟೆಯು ಸುಗಟುರಿನಿಂದ ದಕ್ಷಿಣಕ್ಕೆ ಸುಮಾರು 16 ಕಿ ಮೀ ದೂರದಲ್ಲಿದ್ದು ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ (ನಗರದ ಸುತ್ತಲು) ಪ್ರದೇಶದಲ್ಲಿ ಶತ್ರುಗಳ ಸಂಭವನೀಯ ದಾಳಿಯಿಂದ ರಕ್ಷಿಸಿಕೊಳ್ಳಲು ಭದ್ರವಾದ ರಕ್ಷಣಾ ಗೋಡೆಯನ್ನು ನಿರ್ಮಿಸಿ ಕೋಟೆಯ ಸುತ್ತಲೂ ಕಂದಕ ನಿರ್ಮಿಸಿ ಮುಳ್ಳು ಹಾಗು ಕಳ್ಳಿ ಮರಗಳನ್ನು ಬೆಳೆಸಿ ಶತ್ರುಗಳಿಂದ ರಕ್ಷಣೆ ಪಡೆಯಲಾಗುತ್ತಿತು ರಕ್ಷಣಾ ಗೋಡೆಯನ್ನು ಕೋಟೆ ಎಂದು ಕರೆದು ಅದನ್ನು ಹೊಸಕೋಟೆ ಎಂದು ಕರೆಯಲಾಗುತ್ತದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹೊಸಕೋಟೆಯ ಕೋಟೆ ನಿರ್ಮಾಣ 1422-1464 ರ ಮಧ್ಯ ಕಟ್ಟಿಸಲಾಗಿದ್ದು , ಬೆಂಗಳೂರಿನಲ್ಲಿ ಯಲಹಂಕ ನಾಡ ಪ್ರಭುಗಳ ವಂಶಕ್ಕೆ ಸೇರಿದ ಒಂದನೆಯ ಕೆಂಪೇಗೌಡರು ಬೆಂಗಳೂರು ಕೋಟೆಯನ್ನು 1535 ರಲ್ಲಿ ಕಟ್ಟಿಸಿದ್ದು ಅದಕ್ಕೂ ಮುಂಚೆ ಅಂದರೆ 75 ವರ್ಷಗಳ ಮುಂಚೆಯೇ ಹೊಸಕೋಟೆಯ ಕೋಟೆಯನ್ನು ತಮ್ಮೆಗೌಡ ಕಟ್ಟಿಸಿರುತ್ತಾರೆ.
"ನಮ್ಮ ಹೊಸಕೋಟೆ" ಯ ಸಮಗ್ರ ಇತಿಹಾಸದ ಬಗ್ಗೆ ಯಾವುದೇ ಹಿರಿಯರಿಗೆ ಕೇಳಿದರು ಅವರು ಹೇಳುವ ಹೆಸರು ಹೊಸಕೋಟೆಯ ಮೂಲ ಪುರುಷ ಹಾಗೂ ಹೊಸಕೋಟೆಯ ನಿರ್ಮಾಣ ಮಾಡಿದ ತಮ್ಮೆಗೌಡರ ಹೆಸರು ಮಾತ್ರ ಕೇಳಿಬರುತ್ತೆ 3 ಶತಮಾನಗಳ ಆಳ್ವಿಕೆ ನಡೆಸಿರುವ ಸುಗಟುರು ಪಾಳೇಗಾರರು ಯಾರು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ ಹೊಸಕೋಟೆಯನ್ನು ಹಲವು ಪಾಳೆಗಾರರು ಆಳ್ವಿಕೆ ನಡೆಸಿದ್ದು ಎಲ್ಲಾ ಪಾಳೆಗಾರರು ಹೊಸಕೋಟೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು ಅವರ ಪಟ್ಟಿ ಕೆಳಗಿನಂತಿದೆ.
ಮು ಚಿ ತಮ್ಮೆಗೌಡರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹೊಸಕೋಟೆಯು ಬಿಜಾಪುರದ ಆದಿಲ್ ಷಾಹಿಗಳ ವಶವಾಗುತ್ತದೆ ಅವರ ಪರವಾಗಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಭೋಸ್ಲೆ ರವರ ಆಳ್ವಿಕೆಯಲ್ಲಿ ಇರುತ್ತದೆ 1664 ಶಹಾಜಿ ಮರಣದ ನಂತರ ಅವರ ಮಗ ವೆಂಕೋಜಿ ರವರ ಆಳ್ವಿಕೆಗೆ ಒಳಪಡುತ್ತದೆ.
ಈ ಮಾಹಿತಿಯನ್ನು ಡಾ ರವಿಕುಮಾರ್ ರವರ ಶಾಸನಗಳ ಆಧಾರದಲ್ಲಿ ಹೊಸಕೋಟೆ ಎನ್ನುವ ಲೇಖನದ ಮೂಲಕ ನೀಡಲಾಗಿದೆ
ನಿಮ್ಮ ಪುರುಷೋತ್ತಮ್ 9886842756
ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( ಮೀಟರ್ಗಳು ಅಥವಾ ೨೮೭೦ ಅಡಿಗಳು.
)ದಲ್ಲಿದೆ. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫ಹೊಸಕೋಟೆಯು ಎನ್ಹೆಚ್ ೪ ರಲ್ಲಿ ಇದ್ದು ಬೆಂಗಳೂರು ನಗರದಿಂದ ಸುಮಾರು ೨೨.೩ ಕಿ.ಮೀ. ದೂರದಲ್ಲಿದ್ದು , ಅಲ್ಲಿಗೆ ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಮತ್ತು ಕ.ರಾ.ರ.ಸಾ.ಸಂ ಗಳ ಬಹಳಷ್ಟು ಬಸ್ಸುಗಳ ಸೌಲಭ್ಯ ಇದೆ. ಬೆಂಗಳೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ರಾಷ್ಟ್ರೀಯ ಹೆದ್ದಾರಿ ೪ (ಹಳೆ ಮದ್ರಾಸ್ ರಸ್ತೆ) ಸಂಪರ್ಕವನ್ನು ಕಲ್ಪಿಸುತ್ತದೆ ಹಾಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಗೆ ಮುಖ್ಯ ಸಂಪರ್ಕವನ್ನು ಕಲ್ಪಿಸುತ್ತದೆ ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ ನಿಲ್ದಾಣಗಳು ಹತ್ತಿರದ ರೇಲ್ವೆ ನಿಲ್ದಾಣಗಳು.
೨೦೦೧ರ ಭಾರತೀಯ ಜನಗಣತಿGRIndiaಯ ಪ್ರಕಾರ , ಹೊಸಕೋಟೆಯ ಜನಸಂಖ್ಯೆ ೩೬,೩೩೩ ಇತ್ತು . ಗಂಡಸರು ಜನಸಂಖ್ಯೆಯ ೫೨% ರಷ್ಟೂ ಹೆಂಗಸರು ೪೮% ರಷ್ಟೂ ಇದ್ದರು. ಹೊಸಕೋಟೆಯ ಸರಾಸರಿ ಸಾಕ್ಷರತೆ ೭೦% ಇದ್ದು ಇದು ದೇಶದ ಸರಾಸರಿಯಾದ ೫೯.೫% ಕ್ಕಿಂದ ಹೆಚ್ಚಾಗಿದೆ. ಗಂಡಸರ ಸಾಕ್ಷರತೆ ೭೪% ಮತ್ತು ಹೆಂಗಸರದು ೬೫%. ಹೊಸಕೋಟೆಯ ಜನಸಂಖ್ಯೆಯ ೧೨% ಭಾಗವು ೬ ವರ್ಷಕ್ಕಿಂತ ಕಡಿಮೆಯವರದು.
ಅನೇಕ ಖಾಸಗಿ ಮತ್ತು ಸರಕಾರೀ ಶಿಕ್ಷಣ ಸಂಸ್ಥೆಗಳು ಹೊಸಕೋಟೆಯಲ್ಲಿ ಇವೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST) ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆಗಳೂ ಇವೆ.
This article uses material from the Wikipedia ಕನ್ನಡ article ಹೊಸಕೋಟೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.