ಬಸವನಬಾಗೇವಾಡಿ ತಾಲ್ಲೂಕು

ಬಸವನ ಬಾಗೇವಾಡಿ ಒಂದು ನಗರ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ .ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ.

ಬಸವನ ಬಾಗೇವಾಡಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 43 ಕಿ.ಮಿ. ದೂರ ಇದೆ.

ಬಸವನಬಾಗೇವಾಡಿ ತಾಲ್ಲೂಕು
ಬಸವನ ಬಾಗೇವಾಡಿ
village
Population
 (2012)
 • Total೩೫,೦೦೦
Websitehttp://www.basavanabagewaditown.mrc.gov.in/
ಬಸವನಬಾಗೇವಾಡಿ ತಾಲ್ಲೂಕು
ವಿಶ್ವಗುರು ಮಹಾತ್ಮ ಬಸವಣ್ಣನವರು
ಬಸವನಬಾಗೇವಾಡಿ ತಾಲ್ಲೂಕು
ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ
ಬಸವನಬಾಗೇವಾಡಿ ತಾಲ್ಲೂಕು
ಆಲಮಟ್ಟಿ ಆಣೆಕಟ್ಟು
ಬಸವನಬಾಗೇವಾಡಿ ತಾಲ್ಲೂಕು
ಆಲಮಟ್ಟಿ ರಾಕ್ ಉದ್ಯಾನ ವನ

ಬಸವನ ಬಾಗೇವಾಡಿಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಚರಿತ್ರೆ

ಬಸವನ ಬಾಗೇವಾಡಿ ವಿಜಯಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿ ಗ್ರಾಮವು ವಿಜಯಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ವಿಜಯಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.

ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.

ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.

ಸುಮಾರು 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬಸವನ ಬಾಗೇವಾಡಿಯು ವಿಜಯಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿಯು ವಿಜಯಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ನೋಡುಗರ ಮನ ಸೆಳೆಯುತ್ತದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಬಸವನ ಬಾಗೇವಾಡಿ ಪುರಸಭೆ

ಬಸವನ ಬಾಗೇವಾಡಿ ಪುರಸಭೆ Archived 2016-01-10 ವೇಬ್ಯಾಕ್ ಮೆಷಿನ್ ನಲ್ಲಿ.

ಬಸವನ ಬಾಗೇವಾಡಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು. 2011 ರ ಜನಗಣತಿಯ ಪ್ರಕಾರ ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 35000 ಜನಸಂಖ್ಯೆಯನ್ನು ಹೊಂದಿರುತ್ತದೆ. ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಬಸವನ ಬಾಗೇವಾಡಿ ಪುರಸಭೆಯ ವ್ಯಾಪ್ತಿಯು ಒಟ್ಟು 10 ಚದುರ ಕೀಲೋಮೀಟರ್ ಗಳಿರುತ್ತದೆ. ಶ್ರೀ ಬಸವೇಶ್ವರ ಜನ್ಮಸ್ಥಳಕ್ಕೆ ಬಸವ ಸ್ಮಾರಕ ಎಂದು ಪ್ರಸಿದ್ದಿ ಪಡೆದಿದೆ. ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರ ಇಲಾಖೆಗೆ ಒಳಪಡುತ್ತದೆ. ಬಸವನ ಬಾಗೇವಾಡಿ ಪ್ರಸಿದ್ದವಾದ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ಈ ದೇವಾಲಯಕ್ಕೆ ಜನರು ದೇಶ ವಿದೇಶದಿಂದ ಬರುತ್ತಾರೆ ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.

ಇಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಯೋಜನೆ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದು.

ಭೌಗೋಳಿಕ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಬಸವನ ಬಾಗೇವಾಡಿ ತಾಲ್ಲೂಕವು ಉತ್ತರಕ್ಕೆ ವಿಜಯಪುರ ತಾಲ್ಲೂಕು, ಪಶ್ಚಿಮಕ್ಕೆ ವಿಜಯಪುರ ತಾಲ್ಲೂಕು ದಕ್ಷಿಣಕ್ಕೆ ಬೀಳಗಿತಾಲ್ಲೂಕು ಮತ್ತು ಪೂರ್ವಕ್ಕೆ ಮುದ್ದೇಬಿಹಾಳ ತಾಲ್ಲೂಕು ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಬಸವನ ಬಾಗೇವಾಡಿತಾಲ್ಲೂಕವು 143 ಹಳ್ಳಿಗಳು, 32 ಗ್ರಾಮ ಪಂಚಾಯತಗಳು ಹಾಗೂ 4 ಹೊಬಳ್ಳಿಗಳನ್ನೊಳಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ 8,2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಿಡಗುಂದಿ ಮತ್ತು ಕೊಲ್ಹಾರ ನಗರಗಳನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಹವಾಮಾನ

  • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ ಕಾಲ - 35°C - 42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - 18°C - 28°Cಡಿಗ್ರಿ ಸೆಲ್ಸಿಯಸ್
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಮಳೆ ಮಾಪನ ಕೇಂದ್ರಗಳು

  • ಬಸವನ ಬಾಗೇವಾಡಿ - ಆಲಮಟ್ಟಿ , ಹೂವಿನ ಹಿಪ್ಪರಗಿ, ಮನಗೂಳಿ, ಮಟ್ಟಿಹಾಳ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ, ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಆಹಾರ (ಖಾದ್ಯ)

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಧಾರ್ಮಿಕ ಕೇಂದ್ರಗಳು

  • ಬಸವನ ಬಾಗೇವಾಡಿ - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
  • ಇಂಗಳೇಶ್ವರ - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.

ದೇವಾಲಯಗಳು

ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಪ್ರತಿವರ್ಷ ಶ್ರೀ ಬಸವೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಕೃಷಿ

ಕೃಷಿ ಬಸವನ ಬಾಗೇವಾಡಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ತೋಟಗಾರಿಕೆ

ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.

ನೀರಾವರಿ

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರತಿಶತ 30 ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಕಲೆ

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಆರ್ಥಿಕತೆ

ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ

ಬಸವನ ಬಾಗೇವಾಡಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಉದ್ಯೋಗ

ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಕೆರೆಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು

ರೋಣಿಹಾಳ, ಮಣ್ಣೂರ, ಮನಗೂಳಿ, ಹೂವಿನ ಹಿಪ್ಪರಗಿ, ಅರಳಿಚಂಡಿ, ಮುತ್ತಗಿ, ಕುಪಕಡ್ಡಿ, ಅಗಸಬಾಳ, ಕೂಡಗಿ, ನಾಗವಾಡ, ಮಸೂತಿ, ಕಿರಿಶ್ಯಾಳ, ಸುಳಖೋಡ, ಮುಕಾರ್ತಿಹಾಳ, ಆಸಂಗಿ, ಗರಸಂಗಿ.

ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು

ಆಕಳವಾಡಿ, ಮಲಘಾಣ, ತಳೇವಾಡ, ಉಕ್ಕಲಿ, ಉಕ್ಕಲಿ ಇಂಗು ಕೆರೆ, ಬೆಳ್ಳುಬ್ಬಿ, ವಡವಡಗಿ, ಮಸೂತಿ, ತಳೇವಾಡ ಇಂಗು ಕೆರೆ, ಕೊಡಗಾನೂರ, ಮುಳವಾಡ, ಇಂಗಳೇಶ್ವರ.

ಆಣೆಕಟ್ಟುಗಳು

ಕಾಲುವೆಗಳು

  • ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
  • ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.

ಕೃಷಿ ಮಾರುಕಟ್ಟೆಗಳು

ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು

ರೈತ ಸಂಪರ್ಕ ಕೇಂದ್ರಗಳು

  • ಬಸವನ ಬಾಗೇವಾಡಿ - ಕೊಲ್ಹಾರ, ಹೂವಿನ ಹಿಪ್ಪರಗಿ.

ಹಾಲು ಉತ್ಪಾದಕ ಘಟಕಗಳು

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಅರಳದಿನ್ನಿ, ಬಸವನ ಬಾಗೇವಾಡಿ, ಗೊಳಸಂಗಿ, ಹಣಮಾಪುರ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಕಲಗುರ್ಕಿ, ಕಣಕಾಲ, ಕನ್ನಾಳ, ಕವಲಗಿ, ಕೊಲ್ಹಾರ, ಮನಗೂಳಿ, ಮಸೂತಿ, ಮುಳವಾಡ, ಮುತ್ತಗಿ, ನಿಡಗುಂದಿ, ನಾಗರದಿಣ್ಣಿ, ನಂದಿಹಾಳ, ಸಾಸಲಗಿ, ಉಕ್ಕಲಿ, ಯರನಾಳ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯಗಳು

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿಗಳು

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಸಾಕ್ಷರತೆ

ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ.

ಶಿಕ್ಷಣ

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಉರ್ದು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಲಯನ್ಸ್ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಮೂರಾರ್ಜಿ ದೇಸಾಯಿ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ನೂತನ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಸರ್ವೋದಯ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಶ್ರೀ ಬಸವೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಸರಕಾರಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಶ್ರೀ ಸಿದ್ದೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಬಿ.ಎಲ್.ಡಿ.ಈ.ಎ. ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗೊಳಸಂಗಿ, ಬಸವನ ಬಾಗೇವಾಡಿ
  • ಶ್ರೀ ಎಮ್.ವಿ.ನಾಗಠಾಣ ಕಲಾ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
  • ಶ್ರೀ ಸಂಗನಬಸವೇಶ್ವರ ಕಲಾ ಮಹಾವಿದ್ಯಾಲಯ, ಮಸೂತಿ-ಕೂಡಗಿ, ಬಸವನ ಬಾಗೇವಾಡಿ
  • ಶ್ರೀ ವಿಶ್ವಕರ್ಮ ಕಲಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
  • ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಶ್ರೀ ನಂದಿಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
  • ಜನತಾ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮನಗೂಳಿ, ಬಸವನ ಬಾಗೇವಾಡಿ
  • ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಕೊಲ್ಹಾರ, ಬಸವನ ಬಾಗೇವಾಡಿ
  • ಹರ್ಡೆಕರ ಮಂಜಪ್ಪ್ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮಟ್ಟಿ, ಬಸವನ ಬಾಗೇವಾಡಿ
  • ನಂದಿ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಜಿ.ವಿ.ವಿ.ಎಸ್. ಪ್ರೌಢ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ

ಪ್ರಮುಖ ವ್ಯಕ್ತಿಗಳು

ರಾಜಕೀಯ

ಬಸವನ ಬಾಗೇವಾಡಿ ನಗರವು ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.

ಆರೋಗ್ಯ

ಬಸವನ ಬಾಗೇವಾಡಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ , ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
  • ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
  • 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
  • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
  • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮಟ್ಟಿಹಾಳ
  • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುಕಾರ್ತಿಹಾಳ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುತ್ತಗಿ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೂವಿನ ಹಿಪ್ಪರಗಿ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮನಗೂಳಿ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿಡಗುಂದಿ

ಬ್ಯಾಂಕಗಳು

  • ವಿಜಯ ಬ್ಯಾಂಕ, ಬಸವನ ಬಾಗೇವಾಡಿ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಬಸವನ ಬಾಗೇವಾಡಿ
  • ಡಿ.ಸಿ.ಸಿ. ಬ್ಯಾಂಕ, ಬಸವನ ಬಾಗೇವಾಡಿ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಬಸವನ ಬಾಗೇವಾಡಿ
  • ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಬಸವನ ಬಾಗೇವಾಡಿ
  • ಸಿಂಡಿಕೇಟ್ ಬ್ಯಾಂಕ, ಬಸವನ ಬಾಗೇವಾಡಿ
  • ಕಾರ್ಪೋರೇಶನ್ ಬ್ಯಾಂಕ, ಬಸವನ ಬಾಗೇವಾಡಿ
  • ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ
  • ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ

ಖಜಾನೆ ಕಚೇರಿಗಳು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ಅರೇಶಂಕರ, ಬಸವನ ಬಾಗೇವಾಡಿ, ಬಳೂತಿ, ಬೇನಾಳ, ಬೊಮ್ಮನಹಳ್ಳಿ, ಬ್ಯಾಕೋಡ, ಚಿಮ್ಮಲಗಿ, ಡೋಣೂರ, ಗೊಳಸಂಗಿ, ಗೋನಾಳ, ಗುಡದಿನ್ನಿ, ಗುಳಬಾಳ, ಹಳೆರೊಳ್ಳಿ, ಹಂಗರಗಿ, ಹತ್ತರಕಿಹಾಳ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಇಂಗಳೇಶ್ವರ, ಇವಣಗಿ, ಕಲಗುರ್ಕಿ, ಕಣಕಾಲ, ಕೊಲ್ಹಾರ, ಕುಪಕಡ್ಡಿ, ಕುದರಿ ಸಾಲವಾಡಗಿ, ಮಲಘಾಣ, ಮನಗೂಳಿ, ಮಣ್ಣೂರ, ಮಸಬಿನಾಳ, ಮಸೂತಿ, ಮಟ್ಟಿಹಾಳ, ಮುಳವಾಡ, ಮುತ್ತಗಿ, ನಿಡಗುಂದಿ, ರಬಿನಾಳ, ರೋಣಿಹಾಳ, ಸಾಸನೂರ, ಸಾತಿಹಾಳ, ಸೋಲವಾಡಗಿ, ಸೋಮನಾಳ, ಟಕ್ಕಳಕಿ, ತಳೇವಾಡ, ತೆಲಗಿ, ಉಕ್ಕಲಿ, ವಡವಡಗಿ, ಯಾಳವಾರ.

ಪಟ್ಟಣ ಪಂಚಾಯತಿಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಅಬ್ಬಿಹಾಳ, ಅಗಸಬಾಳ, ಆಕಳವಾಡಿ, ಆಲಮಟ್ಟಿ, ಅಂಬಳನೂರ, ಅಂಗಡಗೇರಿ, ಅರಳದಿನ್ನಿ, ಅರಳಿಚಂಡಿ, ಅರಷಣಗಿ, ಅರೇಶಂಕರ, ಆಸಂಗಿ ಬಿ.ಕೆ., ಆಸಂಗಿ ಕೆ.ಡಿ., ಬಳೂತಿ, ಬಳ್ಳೂರ, ಬೀರಲದಿನ್ನಿ, ಬಿಂಗಪ್ಪನಹಳ್ಳಿ, ಬೇನಾಳ, ಭೈರವಾಡಗಿ, ಬಿದನಾಳ, ಬಿಸನಾಳ, ಬಿಸಲಕೊಪ್ಪ, ಬೊಮ್ಮನಹಳ್ಳಿ, ಬೂದಿಹಾಳ, ಬುದ್ನಿ, ಬ್ಯಾಕೋಡ, ಬ್ಯಾಲ್ಯಾಳ, ಚಬನೂರ, ಚೀರಲದಿನ್ನಿ, ಚಿಮ್ಮಲಗಿ, ದೇಗಿನಾಳ, ದೇವಲಾಪುರ, ದಿಂಡವಾರ, ಡೋಣೂರ, ಗಣಿ, ಗರಸಂಗಿ ಬಿ.ಕೆ., ಗರಸಂಗಿ ಕೆ.ಡಿ., ಗೊಳಸಂಗಿ, ಗೋನಾಳ, ಗುಡದಿನ್ನಿ, ಗುಳಬಾಳ, ಹಳೆರೊಳ್ಳಿ, ಹಳಿಹಾಳ, ಹಳ್ಳದ ಗೆಣ್ಣೂರ, ಹಣಮಾಪುರ, ಹಂಚಿನಾಳ, ಹಂಗರಗಿ, ಹತ್ತರಕಿಹಾಳ, ಹೆಬ್ಬಾಳ, ಹುಲಬೆಂಚಿ, ಹುಣಶ್ಯಾಳ ಪಿ.ಬಿ., ಹುಣಶ್ಯಾಳ ಪಿ.ಸಿ., ಹೂವಿನ ಹಿಪ್ಪರಗಿ, ಇಂಗಳೇಶ್ವರ, ಇಟಗಿ, ಇವಣಗಿ, ಜಾಯವಾಡಗಿ, ಜೀರಲಭಾವಿ, ಕಡಕೋಳ, ಕಲಗುರ್ಕಿ, ಕಾಮನಕೇರಿ, ಕಣಕಾಲ, ಕನ್ನಾಳ, ಕರಬಂಟನಾಳ, ಕವಲಗಿ, ಕಿರಿಶ್ಯಾಳ, ಕೊಡಗಾನೂರ, ಕೊಲ್ಹಾರ, ಕೃಷ್ಣಾಪುರ, ಕುಪಕಡ್ಡಿ, ಕುದರಿ ಸಾಲವಾಡಗಿ, ಕೂಡಗಿ, ಕುರುಬರದಿನ್ನಿ, ಮಜರೆಕೊಪ್ಪ, ಮಲಘಾಣ, ಮನಗೂಳಿ, ಮಣಗೂರ, ಮಣ್ಣೂರ, ಮಾರಡಗಿ, ಮರಿಮಟ್ಟಿ, ಮಾರ್ಕಬ್ಬಿನಹಳ್ಳಿ, ಮಸಬಿನಾಳ, ಮಸೂತಿ, ಮಟ್ಟಿಹಾಳ, ಮುದ್ದಾಪುರ, ಮುಕಾರ್ತಿಹಾಳ, ಮುಳವಾಡ, ಮುಳ್ಳಾಳ, ಮುತ್ತಗಿ, ಮುತ್ತಲದಿನ್ನಿ, ನಾಗರದಿನ್ನಿ, ನಾಗರಾಳ ಡೋಣ, ನಾಗರಾಳ ಹುಲಿ, ನಾಗವಾಡ, ನಾಗೂರ, ನಂದಿಹಾಳ ಪಿ.ಹೆಚ್., ನಂದಿಹಾಳ ಪಿ.ಯು., ನರಸಲಗಿ, ನೇಗಿನಾಳ, ನಿಡಗುಂದಿ, ರಬಿನಾಳ, ರಾಜನಾಳ, ರಾಮನಹಟ್ಟಿ, ರೋಣಿಹಾಳ, ಸಂಕನಾಳ, ಸಾಸನೂರ, ಸಾತಿಹಾಳ, ಶೀಕಳವಾಡಿ, ಸಿದ್ದನಾಥ, ಸಿಂದಗೇರಿ,ಸೋಲವಾಡಗಿ, ಸೋಮನಾಳ, ಸುಳಖೋಡ, ತಡಲಗಿ, ಟಕ್ಕಳಕಿ, ತಳೇವಾಡ, ತೆಲಗಿ, ಉಕ್ಕಲಿ, ಉಣ್ಣಿಭಾವಿ, ಉಪ್ಪಲದಿನ್ನಿ, ಉತ್ನಾಳ, ವಡವಡಗಿ, ವಂದಾಲ, ಯಾಳವಾರ, ಯಂಬತ್ನಾಳ, ಯರನಾಳ.

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಆಲಮಟ್ಟಿ , ಅರಷಣಗಿ, ಬೀರಲದಿನ್ನಿ, ಬ್ಯಾಕೋಡ, ಚಿಮ್ಮಲಗಿ, ದಿಂಡವಾರ, ಡೋಣುರ, ಗೊಳಸಂಗಿ, ಹೂವಿನ ಹಿಪ್ಪರಗಿ, ಹಣಮಾಪುರ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಇಂಗಳೇಶ್ವರ, ಇಟಗಿ, ಕುದರಿ ಸಾಲವಾಡಗಿ, ಕಣಕಾಲ, ಕೋಲ್ಹಾರ, ಕೂಡಗಿ, ಮಲಘಾಣ, ಮನಗೂಳಿ, ಮಣ್ಣೂರ, ಮಾರ್ಕಬ್ಬಿನಹಳ್ಳಿ, ಮಸಬಿನಾಳ, ಮಸೂತಿ, ಮುಳವಾಡ, ಮುತ್ತಗಿ, ನರಸಲಗಿ, ನಿಡಗುಂದಿ, ರೋಣಿಹಾಳ, ಸಾಸನೂರ, ಸಾತಿಹಾಳ, ತಳೇವಾಡ, ತೆಲಗಿ, ಉಕ್ಕಲಿ, ವಡವಡಗಿ, ವಂದಾಲ, ಯಾಳವಾರ, ಯರನಾಳ.

ಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು

ಮನಗೂಳಿ, ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ.

ನಾಡ ಕಚೇರಿಗಳು

ಬಸವನ ಬಾಗೇವಾಡಿ ತಾಲ್ಲೂಕಿನ ನಾಡ ಕಚೇರಿಗಳು

ಹೂವಿನ ಹಿಪ್ಪರಗಿ

ಕಂದಾಯ ಕಚೇರಿಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಕಂದಾಯ ಕಚೇರಿಗಳು

ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ.

ತಾಲ್ಲೂಕು ಪಂಚಾಯತಿ

  • ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ

ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಆರಕ್ಷಕ (ಪೋಲಿಸ್) ಠಾಣೆಗಳು

  1. ಹೊರ ಪೋಲಿಸ್ ಠಾಣೆ, ಯಾಳವಾರ

ಅಗ್ನಿಶಾಮಕ ಠಾಣೆಗಳು

ನ್ಯಾಯಾಲಯಗಳು

ಸಕ್ಕರೆ ಕಾರ್ಖಾನೆಗಳು

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಕೂಡಗಿ, ಮನಗೂಳಿ, ನಿಡಗುಂದಿ, ಕುದರಿ ಸಾಲವಾಡಗಿ, ತೆಲಗಿ, ರೋಣಿಹಾಳ, ಉಕ್ಕಲಿ, ವಡವಡಗಿ, ಗೊಳಸಂಗಿ, ಕೊಲ್ಹಾರ, ಮುಳವಾಡ, ಯಾಳವಾರ, ಸಾಸನೂರ, ಹೂವಿನ ಹಿಪ್ಪರಗಿ.

ಪಶು ಆಸ್ಪತ್ರೆಗಳು

  • ಪಶು ಆಸ್ಪತ್ರೆ, ಬಸವನ ಬಾಗೇವಾಡಿ

ಪಶು ಚಿಕಿತ್ಸಾಲಯಗಳು

ನಿಡಗುಂದಿ, ಮನಗೂಳಿ, ಹೂವಿನ ಹಿಪ್ಪರಗಿ, ಕೂಡಗಿ, ವಂದಾಲ, ಕೊಲ್ಹಾರ, ನರಸಲಗಿ, ಗೊಳಸಂಗಿ, ಸಾಸನೂರ, ಉಕ್ಕಲಿ, ತೆಲಗಿ, ಮುಳವಾಡ, ಮಸಬಿನಾಳ, ಮುತ್ತಗಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಇಂಗಳೇಶ್ವರ, ಮಲಘಾಣ, ಡೋಣುರ, ಯಾಳವಾರ, ಸಾತಿಹಾಳ, ವಡವಡಗಿ, ಬಿಸನಾಳ.

ಉಚಿತ ಪ್ರಸಾದನಿಲಯಗಳು

ಬಸವನ ಬಾಗೇವಾಡಿ, ಹೆಬ್ಬಾಳ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿ, ತೆಲಗಿ, ವಡವಡಗಿ, ಜಾಯವಾಡಗಿ, ನರಸಲಗಿ, ನಿಡಗುಂದಿ, ಸಿದ್ದನಾಥ.

ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಆಲಮಟ್ಟಿ, ಬಸವನ ಬಾಗೇವಾಡಿ, ಡೋಣೂರ, ಹೂವಿನ ಹಿಪ್ಪರಗಿ, ಹಣಮಾಪುರ, ಹಂಗರಗಿ, ಇಂಗಳೇಶ್ವರ, ಕೋಲ್ಹಾರ, ಕುದರಿ ಸಾಲವಾಡಗಿ, ಮನಗೂಳಿ, ಮಸಬಿನಾಳ, ಮಸೂತಿ, ಮುಳವಾಡ, ಮುತ್ತಗಿ, ನರಸಲಗಿ, ರಬಿನಾಳ, ಸಾಸನೂರ, ತೆಲಗಿ, ಉಕ್ಕಲಿ, ವಡವಡಗಿ, ವಂದಾಲ, ಯಾಳವಾರ

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು

ದೂರವಾಣಿ ಕೈಪಿಡಿ

  • ತಹಸಿಲ್ದಾರರ ಕಾರ್ಯಾಲಯ - 321750
  • ಖಜಾನೆ ಕಾರ್ಯಾಲಯ - 321680
  • ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - 321220
  • ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - 321276
  • ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 245580

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ರಾಷ್ಟ್ರೀಯ ಹೆದ್ದಾರಿ - 13 => ಸೋಲಾಪುರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.

ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.

ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.

ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಸರಕಾರಿ ವಾಹನ ನಿಲ್ದಾಣಗಳು

  • ಬಸವನ ಬಾಗೇವಾಡಿ - ಮನಗೂಳಿ, ಹೂವಿನ ಹಿಪ್ಪರಗಿ, ನಿಡಗುಂದಿ, ಕೊಲ್ಹಾರ.

ಸರಕಾರಿ ವಾಹನ ಘಟಕಗಳು

  • ಬಸವನ ಬಾಗೇವಾಡಿ

ಚಿತ್ರ ಮಂದಿರಗಳು

  • 1. ಸತ್ಯನಾರಾಯಣ ಚಿತ್ರ ಮಂದಿರ
  • 2. ಅಲಂಕಾರ ಚಿತ್ರ ಮಂದಿರ

ಆಕರ್ಷಕ ಸ್ಥಳಗಳು

ಈ ತಾಲೂಕಿನಲ್ಲಿ ಕೆಲವು ಪ್ರಸಿದ್ಧ ಸ್ಥಳಗಳೂ ಇವೆ.

ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ

Tags:

ಬಸವನಬಾಗೇವಾಡಿ ತಾಲ್ಲೂಕು ಚರಿತ್ರೆಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ಪುರಸಭೆಬಸವನಬಾಗೇವಾಡಿ ತಾಲ್ಲೂಕು ಭೌಗೋಳಿಕಬಸವನಬಾಗೇವಾಡಿ ತಾಲ್ಲೂಕು ಹವಾಮಾನಬಸವನಬಾಗೇವಾಡಿ ತಾಲ್ಲೂಕು ಮಳೆ ಮಾಪನ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ಸಾಂಸ್ಕೃತಿಕಬಸವನಬಾಗೇವಾಡಿ ತಾಲ್ಲೂಕು ಆಹಾರ (ಖಾದ್ಯ)ಬಸವನಬಾಗೇವಾಡಿ ತಾಲ್ಲೂಕು ಧಾರ್ಮಿಕ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ದೇವಾಲಯಗಳುಬಸವನಬಾಗೇವಾಡಿ ತಾಲ್ಲೂಕು ಮಸೀದಿಗಳುಬಸವನಬಾಗೇವಾಡಿ ತಾಲ್ಲೂಕು ಹಬ್ಬಗಳುಬಸವನಬಾಗೇವಾಡಿ ತಾಲ್ಲೂಕು ಕೃಷಿಬಸವನಬಾಗೇವಾಡಿ ತಾಲ್ಲೂಕು ತೋಟಗಾರಿಕೆಬಸವನಬಾಗೇವಾಡಿ ತಾಲ್ಲೂಕು ನೀರಾವರಿಬಸವನಬಾಗೇವಾಡಿ ತಾಲ್ಲೂಕು ಸಂಸ್ಕೃತಿಬಸವನಬಾಗೇವಾಡಿ ತಾಲ್ಲೂಕು ಕಲೆಬಸವನಬಾಗೇವಾಡಿ ತಾಲ್ಲೂಕು ಆರ್ಥಿಕತೆಬಸವನಬಾಗೇವಾಡಿ ತಾಲ್ಲೂಕು ವ್ಯಾಪಾರಬಸವನಬಾಗೇವಾಡಿ ತಾಲ್ಲೂಕು ಉದ್ಯೋಗಬಸವನಬಾಗೇವಾಡಿ ತಾಲ್ಲೂಕು ಕೆರೆಗಳುಬಸವನಬಾಗೇವಾಡಿ ತಾಲ್ಲೂಕು ಆಣೆಕಟ್ಟುಗಳುಬಸವನಬಾಗೇವಾಡಿ ತಾಲ್ಲೂಕು ಕಾಲುವೆಗಳುಬಸವನಬಾಗೇವಾಡಿ ತಾಲ್ಲೂಕು ಕೃಷಿ ಮಾರುಕಟ್ಟೆಗಳುಬಸವನಬಾಗೇವಾಡಿ ತಾಲ್ಲೂಕು ರೈತ ಸಂಪರ್ಕ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ಹಾಲು ಉತ್ಪಾದಕ ಘಟಕಗಳುಬಸವನಬಾಗೇವಾಡಿ ತಾಲ್ಲೂಕು ಬೆಳೆಗಳುಬಸವನಬಾಗೇವಾಡಿ ತಾಲ್ಲೂಕು ಸಸ್ಯಗಳುಬಸವನಬಾಗೇವಾಡಿ ತಾಲ್ಲೂಕು ಪ್ರಾಣಿಗಳುಬಸವನಬಾಗೇವಾಡಿ ತಾಲ್ಲೂಕು ಸಾಕ್ಷರತೆಬಸವನಬಾಗೇವಾಡಿ ತಾಲ್ಲೂಕು ಶಿಕ್ಷಣಬಸವನಬಾಗೇವಾಡಿ ತಾಲ್ಲೂಕು ಪ್ರಮುಖ ವ್ಯಕ್ತಿಗಳುಬಸವನಬಾಗೇವಾಡಿ ತಾಲ್ಲೂಕು ರಾಜಕೀಯಬಸವನಬಾಗೇವಾಡಿ ತಾಲ್ಲೂಕು ಆರೋಗ್ಯಬಸವನಬಾಗೇವಾಡಿ ತಾಲ್ಲೂಕು ವಿದ್ಯುತ್ ಪರಿವರ್ತನಾ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ಬ್ಯಾಂಕಗಳುಬಸವನಬಾಗೇವಾಡಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)ಬಸವನಬಾಗೇವಾಡಿ ತಾಲ್ಲೂಕು ಪಟ್ಟಣ ಪಂಚಾಯತಿಗಳುಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳುಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳುಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ನಾಡ ಕಚೇರಿಗಳುಬಸವನಬಾಗೇವಾಡಿ ತಾಲ್ಲೂಕು ಕಂದಾಯ ಕಚೇರಿಗಳುಬಸವನಬಾಗೇವಾಡಿ ತಾಲ್ಲೂಕು ತಾಲ್ಲೂಕು ಪಂಚಾಯತಿಬಸವನಬಾಗೇವಾಡಿ ತಾಲ್ಲೂಕು ಜಿಲ್ಲಾ ಪಂಚಾಯತಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ತಾಲ್ಲೂಕಿನ ಆರಕ್ಷಕ (ಪೋಲಿಸ್) ಠಾಣೆಗಳುಬಸವನಬಾಗೇವಾಡಿ ತಾಲ್ಲೂಕು ಅಗ್ನಿಶಾಮಕ ಠಾಣೆಗಳುಬಸವನಬಾಗೇವಾಡಿ ತಾಲ್ಲೂಕು ನ್ಯಾಯಾಲಯಗಳುಬಸವನಬಾಗೇವಾಡಿ ತಾಲ್ಲೂಕು ಸಕ್ಕರೆ ಕಾರ್ಖಾನೆಗಳುಬಸವನಬಾಗೇವಾಡಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ಪಶು ಆಸ್ಪತ್ರೆಗಳುಬಸವನಬಾಗೇವಾಡಿ ತಾಲ್ಲೂಕು ಉಚಿತ ಪ್ರಸಾದನಿಲಯಗಳುಬಸವನಬಾಗೇವಾಡಿ ತಾಲ್ಲೂಕು ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳುಬಸವನಬಾಗೇವಾಡಿ ತಾಲ್ಲೂಕು ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳುಬಸವನಬಾಗೇವಾಡಿ ತಾಲ್ಲೂಕು ದೂರವಾಣಿ ಕೈಪಿಡಿಬಸವನಬಾಗೇವಾಡಿ ತಾಲ್ಲೂಕು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳುಬಸವನಬಾಗೇವಾಡಿ ತಾಲ್ಲೂಕು ಸರಕಾರಿ ವಾಹನ ನಿಲ್ದಾಣಗಳುಬಸವನಬಾಗೇವಾಡಿ ತಾಲ್ಲೂಕು ಸರಕಾರಿ ವಾಹನ ಘಟಕಗಳುಬಸವನಬಾಗೇವಾಡಿ ತಾಲ್ಲೂಕು ಚಿತ್ರ ಮಂದಿರಗಳುಬಸವನಬಾಗೇವಾಡಿ ತಾಲ್ಲೂಕು ಆಕರ್ಷಕ ಸ್ಥಳಗಳುಬಸವನಬಾಗೇವಾಡಿ ತಾಲ್ಲೂಕು ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರಬಸವನಬಾಗೇವಾಡಿ ತಾಲ್ಲೂಕುಕರ್ನಾಟಕಬಸವನ ಬಾಗೇವಾಡಿಮುದ್ದೇಬಿಹಾಳವಿಜಯಪುರ

🔥 Trending searches on Wiki ಕನ್ನಡ:

ಬಾಗಲಕೋಟೆನಾಗಚಂದ್ರಟೈಗರ್ ಪ್ರಭಾಕರ್ಕೆ ವಿ ನಾರಾಯಣರಂಜಾನ್ಕೇಂದ್ರ ಸಾಹಿತ್ಯ ಅಕಾಡೆಮಿಅಶ್ವತ್ಥಮರಪಾಂಡವರುರಗಳೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮೊಘಲ್ ಸಾಮ್ರಾಜ್ಯಅಸ್ಪೃಶ್ಯತೆರಾಷ್ಟ್ರೀಯ ಶಿಕ್ಷಣ ನೀತಿಮೂಲಧಾತುಗಳ ಪಟ್ಟಿರನ್ನಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಪತ್ರಪ್ರಬಂಧ ರಚನೆವಿಮೆಶ್ರೀ ರಾಮಾಯಣ ದರ್ಶನಂಎಸ್. ಶ್ರೀಕಂಠಶಾಸ್ತ್ರೀಶ್ರೀಕೃಷ್ಣದೇವರಾಯಶಿವನ ಸಮುದ್ರ ಜಲಪಾತಕಾರ್ಖಾನೆ ವ್ಯವಸ್ಥೆಪಂಪಶ್ರವಣ ಕುಮಾರಆವಕಾಡೊಶಾಂತಕವಿಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯರೇಣುಕಯುಗಾದಿಎಸ್.ಜಿ.ಸಿದ್ದರಾಮಯ್ಯಮಕರ ಸಂಕ್ರಾಂತಿಬುಡಕಟ್ಟುಎರಡನೇ ಎಲಿಜಬೆಥ್ಚುನಾವಣೆಪಿತ್ತಕೋಶಭೋವಿಎಚ್ ನರಸಿಂಹಯ್ಯಭಗತ್ ಸಿಂಗ್ಸ್ವಚ್ಛ ಭಾರತ ಅಭಿಯಾನನಾಗೇಶ ಹೆಗಡೆಕುಮಾರವ್ಯಾಸಶಾಸನಗಳುಉಮಾಶ್ರೀಕೆ. ಎಸ್. ನರಸಿಂಹಸ್ವಾಮಿದ್ರಾವಿಡ ಭಾಷೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನವಿಲುಕೋಸುವಿಭಕ್ತಿ ಪ್ರತ್ಯಯಗಳುನದಿಆಲೂರು ವೆಂಕಟರಾಯರುಭಾರತದ ರಾಷ್ಟ್ರಪತಿಗಳ ಪಟ್ಟಿಋಗ್ವೇದಸಂವಹನನಾಮಪದಖಾಸಗೀಕರಣಶಂಕರ್ ನಾಗ್ಗ್ರಹದೊಡ್ಡರಂಗೇಗೌಡನರಿಭಾರತದ ಇತಿಹಾಸಸವದತ್ತಿಕನ್ನಡ ಚಂಪು ಸಾಹಿತ್ಯಆರೋಗ್ಯಕಪ್ಪೆಚಿಪ್ಪುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಂತಾನೋತ್ಪತ್ತಿಯ ವ್ಯವಸ್ಥೆಪಂಜೆ ಮಂಗೇಶರಾಯ್ಕ್ಯಾನ್ಸರ್ಅರ್ಜುನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಜಾಹೀರಾತುಡಿ.ಆರ್. ನಾಗರಾಜ್ಕಬಡ್ಡಿಮಾನವನಲ್ಲಿ ರಕ್ತ ಪರಿಚಲನೆಭಾರತೀಯ ಸಂಸ್ಕೃತಿ🡆 More