ತಮಿಳು ಸಿನೆಮಾ (ತಮಿಳು ನಾಡು ಸಿನೆಮಾ , ತಮಿಳು ಚಲನಚಿತ್ರ ಉದ್ಯಮ , ಅಥವ ಚೆನ್ನೈ ಚಲನಚಿತ್ರ ಉದ್ಯಮ ಎಂದೂ ಕರೆಯುತ್ತಾರೆ) ಭಾರತದ ತಮಿಳು ನಾಡು ರಾಜ್ಯದ ಚೆನ್ನೈ-ನೆಲೆಯ ತಮಿಳು ಭಾಷೆಯ ಚಲನಚಿತ್ರ ಮಾಡುವ ಉದ್ಯಮ.
ಇದು ಚೆನ್ನೈನ ಕೋಡಂಬಾಕ್ಕಂ ಜಿಲ್ಲೆಯಲ್ಲಿ ನೆಲೆಸಿದೆ, ಅಲ್ಲಿ ಅನೇಕ ತಮಿಳು ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ, ಇದರಿಂದ ಜಿಲ್ಲೆಗೆ ಮತ್ತು ಉದ್ಯಮಕ್ಕೆ ಕಾಲಿವುಡ್ ಎಂದೇ ಪ್ರಸ್ತಾಪಿಸಲಾಗುತ್ತದೆ (ತಮಿಳು: கோலிவுட் kōlivūṭ ), ಕೋಡಂಬಾಕ್ಕಮ್ ಮತ್ತು ಹಾಲಿವುಡ್ ಎಂಬ ಎರಡು ಭಿನ್ನ ಶಬ್ದಗಳ ಅಭಿನ್ನ ರೂಪವೇ ಇದು. ಬಾಲಿವುಡ್ನ ನಂತರ ತಮಿಳು ಸಿನೆಮಾ ಭಾರತದ ದೊಡ್ಡದಾದ ಚಲನಚಿತ್ರ ಉದ್ಯಮವೆಂದು ಹೆಸರಾಗಿದೆ, ಆದಾಯ ಮತ್ತು ಪ್ರಪಂಚಾದ್ಯಂತ ವಿತರಣೆಯಿಂದ.
1916ರಿಂದ ಮೂಕ ಚಿತ್ರಗಳನ್ನು ಚೆನ್ನೈನಲ್ಲಿ ನಿರ್ಮಿಸುತ್ತಿದ್ದರು ಮತ್ತು 1931ರಲ್ಲಿ ಕಾಳಿದಾಸ್ ಚಿತ್ರದಿಂದ ವಾಕ್ಚಿತ್ರ ಯುಗದ ಅರುಣೋದಯವಾಯಿತು. 1930ರ ದಶಕದ ಕೊನೆಯಲ್ಲಿ, ಮದ್ರಾಸ್ ರಾಜ್ಯವು ಶಾಸಕಾಂಗ ಸಭೆಯು ಎಂಟರ್ಟೇಂನ್ಮೆಂಟ್ ಟಾಕ್ಸ್ ಆಕ್ಟ್ 1939 ಅನ್ನು ಹೊರಡಿಸಿತು. ತಮಿಳು ನಾಡು ಸಿನೆಮಾ ಭಾರತದ ಚಲನಚಿತ್ರ ಉದ್ಯಮದ ಮೇಲೆ ಅಗಾಧವಾದ ಪ್ರಭಾವ ಬೀರಿತ್ತು, ಇದರಿಂದ 1900 ದಶಕದಲ್ಲಿ ಇತರ ಚಲನಚಿತ್ರ ನಿರ್ಮಾಣದ ಉದ್ಯಮಗಳಾದ ತೆಲುಗು ಸಿನೆಮಾ, ಮಲಯಾಳಂ ಸಿನೆಮಾ, ಕನ್ನಡ ಸಿನೆಮಾ, ಹಿಂದಿ ಸಿನೆಮಾ, ಸಿಂಹಳಿಗಳ ಸಿನೆಮಾ ಮತ್ತು ಶ್ರೀಲಂಕಾ ತಮಿಳು ಸಿನೆಮಾ ಎಲ್ಲಕ್ಕೂ ಚೆನ್ನೈ ಒಂದು ಕೇಂದ್ರ ಸ್ಥಾನವಾಯಿತು. ತಮಿಳು-ಭಾಷೆಯ ಚಿತ್ರಗಳು ಇತರೆ ದೇಶಗಳಲ್ಲೂ ನಿರ್ಮಿಸಿದರು. ಈಗ, ತಮಿಳು ಚಿತ್ರಗಳನ್ನು ಪ್ರಪಂಚದ ವಿವಿಧ ದೇಶಗಳಾದ ಶ್ರೀಲಂಕಾ, ಸಿಂಗಪೂರ್, ದಕ್ಷಿಣ ಕೊರಿಯ, ಮಲೇಶಿಯ, ಮಾರಿಶಸ್, ದಕ್ಷಿಣ ಆಫ್ರಿಕ, ಪಾಶ್ಚಿಮಾತ್ಯ ಯೂರೋಪ್, ಉತ್ತರ ಅಮೇರಿಕ, ಮತ್ತು ಇತರೆ ಪ್ರಮುಖ ತಮಿಳು ಪ್ರಾಂತಗಳ ಚಿತ್ರಮಂದಿರಗಳಿಗೆ ವಿತರಣೆ ಮಾಡುತ್ತಾರೆ.
ಯೊರೋಪಿನಿಂದ ಭೇಟಿ ಕೊಟ್ಟ ಸಂದರ್ಶಕನೊಬ್ಬನು ಮೊದಲ ಬಾರಿಗೆ (ದಿನಾಂಕ ಗೊತ್ತಿಲ್ಲ) ಕೆಲವು ಆರಿಸಿದ ಮೂಕ ಲಘು ಚಿತ್ರಗಳನ್ನು ಮದ್ರಾಸಿನ ವಿಕ್ಟೋರಿಯ ಸಾರ್ವಜನಿಕ ಆವರಣದಲ್ಲಿ ಪ್ರದರ್ಶಿಸಿದರು. ಈ ಚಿತ್ರಗಳು ವಸ್ತುಭೂತವಾದ ವಿಷಯಗಳನ್ನು ಹೊಂದಿದ್ದವು; ಅವುಗಳು ಮುಖ್ಯವಾಗಿ ದೈನಂದಿನ ಘಟನೆಗಳನ್ನು ಚಿತ್ರಿಸಿದ ವರದಿಗಳಾಗಿದ್ದವು.
ಮದ್ರಾಸ್ನಲ್ಲಿ (ಈಗ ಚೆನ್ನೈ ಎಂದು ಹೆಸರು), ಎಲೆಕ್ಟ್ರಿಕ್ ಥಿಯೇಟರ್ ಅನ್ನು ಮೂಕಿ ಚಿತ್ರಗಳನ್ನು ಪ್ರದರ್ಶಿಸಲಿಕ್ಕಾಗಿ ಸ್ಥಾಪಿಸಲಾಯಿತು. ಇದು ಮದ್ರಾಸ್ನಲ್ಲಿ ಬ್ರಿಟಿಷ್ ಸಮುದಾಯದ ಅಚ್ಚುಮೆಚ್ಚಿನ ಹುಟ್ಟಿನ ಸ್ಥಳವಾಗಿತ್ತು. ಚಿತ್ರಮಂದಿರವು ಕೆಲವು ವರ್ಷಗಳ ನಂತರ ಮುಚ್ಚಲಾಯಿತು. ಈ ಕಟ್ಟಡವು ಈಗ ಅಣ್ಣ ಸಲೈ (ಮೌಂಟ್ ರಸ್ತೆ)ನಲ್ಲಿ ಅಂಚೆ ಕಛೇರಿಯ ಭಾಗವಾಗಿದೆ. ಮೌಂಟ್ ರಸ್ತೆಯ ಪ್ರದೇಶದಲ್ಲಿ ಲಿರಿಕ್ ಥಿಯೇಟರ್ ಕೂಡ ಕಟ್ಟಲಾಗಿದೆ. ಈ ಜಾಗದಲ್ಲಿ ಅನೇಕ ಸಮಾರಂಭಗಳು ನಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ, ಅವಿಗಳೆಂದರೆ ಇಂಗ್ಲಿಷ ನಾಟಕಗಳು, ಪಾಶ್ಚಿಮಾತ್ಯ ಸಾಂಪ್ರದಾಯಿಕ ಸಂಗೀತದ ಕಛೇರಿಗಳು ಮತ್ತು ಬ್ಯಾಲೆ ನೃತ್ಯಗಳು. ಮೂಕಿ ಚಿತ್ರಗಳನ್ನೂ ಹೆಚ್ಚಿನ ಆಕರ್ಷಣೆಗಾಗಿ ಪ್ರದರ್ಶಿಸುತ್ತಿದ್ದರು. ಟ್ರಿಚಿಯ ದಕ್ಷಿಣ ಭಾರತದ ರೈಲುಮಾರ್ಗದ ಉದ್ಯೋಗಿಯಾದ ಸಮಿಕಣ್ಣು ವಿನ್ಸೆಂಟ್, ಒಬ್ಬ ಫ್ರೆಂಚ್ ವ್ಯಕ್ತಿ ಡು ಪಾಂಟ್ ಹತ್ತಿರ ಚಿತ್ರ ಪ್ರಕ್ಷೇಪಕ ಮತ್ತು ಕೆಲವು ಮೂಕಿ ಚಿತ್ರಗಳನ್ನು ಕೊಂಡುಕೊಂಡನು ಮತ್ತು ಚಿತ್ರ ಪ್ರದರ್ಶಕನಾಗಿ ವ್ಯವಹಾರ ಆರಂಭಿಸಿದನು. ಅವನು ಬಿಡಾರಗಳನ್ನು ಚಿತ್ರದ ಪ್ರದರ್ಶನಕ್ಕಾಗಿ ನಿಲ್ಲಿಸಿದನು. ಅವನ ಬಿಡಾರದ ಸಿನೆಮಾ ತುಂಬಾ ಜನಪ್ರಿಯವಾಯಿತು ಮತ್ತು ರಾಜ್ಯದ ಎಲ್ಲಾ ಕಡೆ ಅವನ ಸಂಚಾರಿ ಏಕಾಂಶದ ಜೊತೆ ಪ್ರಯಾಣ ಮಾಡಿದನು. ಮುಂಬರುವ ವರ್ಷಗಳಲ್ಲಿ, ಅವನು ವಾಕ್ಚಿತ್ರಗಳನ್ನು ನಿರ್ಮಾಣ ಮಾಡಲಾರಂಭಿಸಿದನು ಮತ್ತು ಕೊಯಂಬತ್ತೂರ್ನಲ್ಲಿ ಚಿತ್ರಮಂದಿರವನ್ನೂ ಕಟ್ಟಿಸಿದ್ದಾನೆ.
1909ರಲ್ಲಿ ಕಿಂಗ್ ಜಾರ್ಜ್ V ಅವರ ಭೇಟಿಯನ್ನು ಆಚರಿಸಲು, ಅದ್ದೂರಿ ವಸ್ತು ಪ್ರದರ್ಶನವನ್ನು ಮದ್ರಾಸ್ನಲ್ಲಿ ಏರ್ಪಡಿಸಿದ್ದರು. ಧ್ವನಿಯ ಜೊತೆ ಲಘು ಚಿತ್ರಗಳ ಪ್ರದರ್ಶನ ಇದರ ಪ್ರಮುಖ ಆಕರ್ಷಣೆಯಾಗಿತ್ತು. ಬ್ರಿಟಿಷ್ ಸಂಸ್ಥೆಯೊಂದು ಕ್ರೋನ್ ಧ್ವನಿವರ್ಧಕವನ್ನು ಆಮದು ಮಾಡಿಕೊಂಡರು, ಇದರಲ್ಲಿ ಚಿತ್ರ ಪ್ರಕ್ಷೇಪಕ, ಗ್ರಾಮಪೋನು ಜೊತೆ ಮೊದಲೇ ಧ್ವನಿಮುದ್ರಿಸಿದ ಬಿಲ್ಲೆಯನ್ನು ಜೋಡಿಸಿದ್ದರು, ಮತ್ತು ಎರಡೂ ಒಂದೇ ಸ್ಥಾಯಿಯಲ್ಲಿ ಓಡಿಸಿದರೆ ಚಲನಚಿತ್ರ ಮತ್ತು ಧ್ವನಿ ಒಂದೇ ಸಮಯದಲ್ಲಿ ನಿರ್ಮಿಸುತ್ತಿತ್ತು. ಆದರೂ, ಮೇಳೈಸಿದ ಸಂಭಾಷಣೆಗಳಿರುತ್ತಿರಲಿಲ್ಲ. ರಘುಪತಿ ವೆಂಕಯ್ಯ ನಾಯ್ಡು, ಯಶಸ್ವೀ ಛಾಯಾಚಿತ್ರಗ್ರಾಹಕ, ಸಲಕರಣೆಯನ್ನು ಪ್ರದರ್ಶನದ ನಂತರ ತೆಗೆದುಕೊಂಡನು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ಹತ್ತಿರ ಸಿನೆಮಾ ಬಿಡಾರವನ್ನು ಸ್ಥಾಪಿಸಿದರು. ಆರ್. ವೆಂಕಯ್ಯ, ಹಣದ ಹೊಳೆ ಹರಿದ ನಂತರ, 1912ರಲ್ಲಿ ಮೌಂಟ್ ರಸ್ತೆಯ ಪ್ರದೇಶದ ಗೈಟಿ ಚಿತ್ರಮಂದಿರವನ್ನು ಶಾಶ್ವತವಾಗಿ ಕಟ್ಟಿದನು. ಇದು ಮದ್ರಾಸ್ನಲ್ಲಿ ಮೊದಲನೇ ಚಿತ್ರ ಪ್ರದರ್ಶಿಸಬಹುದಾದ ಪೂರ್ಣ ಪ್ರಮಾಣದ ಯಾವಾಗಲೂ ಇರುವ ಚಿತ್ರಮಂದಿರ. ಈ ಚಿತ್ರಮಂದಿರವು ಈಗಲೂ ಕಾರ್ಯನಿರ್ವಹಿಸುತ್ತಿದೆ, ಆದಾಗ್ಯೂ ಬೇರೆ ಮಾಲೀಕರ ಆಡಳಿತದಲ್ಲಿ.
ಬಿಡಾರದ ಸಿನೆಮಾಗಳಲ್ಲಿ, ಸಾಮಾನ್ಯವಾಗಿ ಮೂರು ರೀತಿಯ ಪ್ರವೇಶ ಚೀಟಿಗಳಿರುತ್ತಿದ್ದವು: ನೆಲದ ಮೇಲೆ, ಮರದ ಆಸನದ ಮೇಲೆ ಮತ್ತು ಕುರ್ಚಿಯ ಮೇಲೆ. ನೆಲದ ಮೇಲೆ ಖರೀದಿಸಿರುವವನು ಮಣ್ಣಿನ ಮೇಲೆ ಕೂತು ಸಿನೆಮಾ ನೋಡುವನು, ಆದರೆ ಇತರೆ ಗ್ರಾಹಕರಿಗೆ ಹೋಲಿಸಿದಲ್ಲಿ ಅವನು ಕೆಲವು ಸೌಕರ್ಯಗಳನ್ನು ಚೆನ್ನಾಗಿ ಅನುಭವಿಸುತ್ತಿದ್ದನು. ಅವನು ಹೇಗೆ ಬೇಕೊ ಹಾಗೆ ಕುಳಿತುಕೊಳ್ಳಬಹುದಿತ್ತು, ಅಥವ ಯಾವಾಗ ಕಥೆಯು ಮಂಕಾಗಿರುತ್ತದೆಯೋ ಆಗ ತಿರುಗಿ ಕೊಂಚ ಹೊತ್ತು ನಿದ್ದೆ ಮಾಡಬಹುದಿತ್ತು ಮತ್ತು ಅಭಿನಯವು ಅವನಿಗೆ ಇಷ್ಟವಾಗುವಂತೆ ಬಂದಲ್ಲಿ ಮತ್ತೆ ಎದ್ದು ಕುಳಿತು ನೋಡಬಹುದಿತ್ತು--ಮೇಲಿನ ದರ್ಜೆಯಲ್ಲಿ ಕುಳಿತವರು ಯಾವತ್ತೂ ಹೀಗೆ ಈರೀತಿಯ ಸುಖಭೋಗಗಳನ್ನು ತೀರಿಸಿಕೊಳ್ಳಲಾಗುತ್ತಿರಲಿಲ್ಲ.
ತಮಿಳು ಸಿನೆಮಾದ ಮೊದಲನೇ ಮದ್ರಾಸ್ ನಿರ್ಮಾಣದ ಜನನ 1916ರಲ್ಲಿ ಆಯಿತು ಮತ್ತು ದಕ್ಷಿಣ ಭಾರತದ ಚಲನಚಿತ್ರ ಕೀಚಕ ವಧಮ್ (ಕೀಚಕನ ನಾಶ) ಬಿಡುಗಡೆಯಾಯಿತು. 1920ರ ದಶಕದ ಕಾಲದಲ್ಲಿ, ಮೂಕ ತಮಿಳು-ಭಾಷೆಯ ಚಲನಚಿತ್ರಗಳನ್ನು ತಾತ್ಕಾಲಿಕ ಸ್ಥಳಗಳಲ್ಲಿ ಅಂದರೆ ಚೆನ್ನೈನಲ್ಲಿ ಹಾಗೂ ಅದರ ಸುತ್ತಮುತ್ತ ಇರುವ ಜಾಗಗಳಲ್ಲಿ ಸೆರೆಹಿಡಿಯುತ್ತಿದ್ದರು, ಮತ್ತು ತಾಂತ್ರಿಕ ಸಂಸ್ಕರಣೆಗಾಗಿ ಅವುಗಳನ್ನು ಪುಣೆ ಅಥವ ಕಲ್ಕತ್ತಾಗೆ ಕಳುಹಿಸುತ್ತಿದ್ದರು. ನಂತರದ ದಿನಗಳಲ್ಲಿ, ಎಮ್. ಕೆ. ತ್ಯಾಗರಾಜ ಭಾಗವತರ್ ಅವರು ನಟಿಸಿದ ಚಲನಚಿತ್ರಗಳನ್ನು ಪುಣೆ ಮತ್ತು ಕಲ್ಕತ್ತದಲ್ಲಿ ಸೆರೆಹಿಡಿಯಲಾಯಿತು. 1930ರ ದಶಕದಲ್ಲಿ, ಎವಿಎಮ್ ತನ್ನ ತಾತ್ಕಾಲಿಕ ನಿರ್ಮಾಣ ಸ್ಥಳವನ್ನು ಕರೈಕುಡಿಯಲ್ಲಿ ರಚಿಸಿದರು, ಮತ್ತು ಅದೇ ದಶಕದ ಸಮಯದಲ್ಲಿ, ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಾಣ ಸ್ಥಳಗಳು ಸೇಲಮ್ನಲ್ಲಿ (ಮಾಡ್ರನ್ ಥಿಯೇಟರ್ಸ್ ಸ್ಟುಡಿಯೊ) ಮತ್ತು ಕೊಯಂಬತ್ತೂರ್ನಲ್ಲಿ (ಸೆಂಟ್ರಲ್ ಸ್ಟುಡಿಯೊಸ್, ನೆಪ್ಟುನ್, ಮತ್ತು ಪಕ್ಷಿರಾಜ) ಕಟ್ಟಿದರು. 1940ರ ದಶಕದ ಮಧ್ಯದಲ್ಲಿ, ನಿರ್ಮಾಣಸ್ಥಳ ಚಟುವಟಿಕೆಗಳಿಂದ ಚೆನ್ನೈ ಕೇಂದ್ರ ಸ್ಥಳವಾಯಿತು, ಇನ್ನೂ ಎರಡು ಚಲನಚಿತ್ರ ನಿರ್ಮಾಣಸ್ಥಳನ್ನು ಚೆನ್ನೈನಲ್ಲಿ ಕಟ್ಟಲಾಯಿತು, ವಿಜಯ ವಾಹಿನಿ ನಿರ್ಮಾಣಸ್ಥಳ ಮತ್ತು ಜೆಮಿನಿ ನಿರ್ಮಾಣಸ್ಥಳ. ಆನಂತರ, ಎವಿಎಮ್ ನಿರ್ಮಾಣಸ್ಥಳ ತನ್ನ ಕಾರ್ಯಗಳನ್ನು ಚೆನ್ನೈಗೆ ಸ್ಥಳಾಂತರಿಸಿತು. ಆನಂತರ, ಎವಿಎಮ್ ನಿರ್ಮಾಣಸ್ಥಳ ತನ್ನ ಕಾರ್ಯಗಳನ್ನು ಚೆನ್ನೈಗೆ ಸ್ಥಳಾಂತರಿಸಿತು. ಆದ್ದರಿಂದ, ಅವಿಭಕ್ತ ಮದ್ರಾಸ್ ಪ್ರೆಸಿಡೆನ್ಸಿಯು ಹೆಚ್ಚಿನ ದಕ್ಷಿಣ ಭಾರತಕ್ಕೆ ರಾಜಧಾನಿಯಾಗಿದ್ದರಿಂದ, ಚೆನ್ನೈ ತಮಿಳು ಮತ್ತು ಹೆಸರಾಂತ ತೆಲುಗು-ಭಾಷೆಯ ಚಲನಚಿತ್ರಗಳಿಗೆ ಕೇಂದ್ರವಾಯಿತು. ಹಾಗೂ, ಬಹುತೇಕ ಸ್ವಾತಂತ್ರ-ಪೂರ್ವ ಯುಗದ ನಾಟಕ ಮತ್ತು ರಂಗಭೂಮಿಯ ಕಲಾವಿದರು ಚಲನಚಿತ್ರ ಉದ್ಯಮವನ್ನು 1940ರ ದಶಕದಿಂದ ಸೇರಿದರು, ಮತ್ತು ದಕ್ಷಿಣ ಭಾರತದ ಭಾಷೆಗಳ ಚಿತ್ರ ನಿರ್ಮಾಣಕ್ಕೆ ಮತ್ತು ಸ್ವಾತಂತ್ರ ಸಿಗುವ ಮುಂಚೆ ಶ್ರೀ ಲಂಕಾದ ಸಿನೆಮಾಗೆ ಚೆನ್ನೈ ಒಂದು ಕೇಂದ್ರ ಕಾರ್ಯಸ್ಥಳವಾಯಿತು.
ಇಳಯರಾಜ ಮತ್ತು ಎ.ಆರ್. ರೆಹಮಾನ್ ಅವರುಗಳು ಚೆನ್ನೈ ಚಲನಚಿತ್ರೋದ್ಯಮದ ಸಂಗೀತ ನಿರ್ದೇಶಕರು ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶ್ರೋತೃಗಳಿದ್ದಾರೆ. ಇತರ ಉದ್ಯಮದ ಪ್ರಮುಖ ತಮಿಳು ಚಿತ್ರದ ಪ್ರಸ್ತಾರ ಮತ್ತು ಧ್ವನಿಸುರುಳಿಗಳ ರಚನೆಕಾರರೆಂದರೆ ಯುವನ್ ಶಂಕರ್ ರಾಜ, ಹ್ಯಾರಿ ಜಯರಾಜ್, ಕಾರ್ತಿಕ್ ರಾಜ, ವಿದ್ಯಾಸಾಗರ್. ಅನೇಕ ಅಂತರ್ರಾಷ್ಟ್ರೀಯ ರಚನೆಕಾರರು ಚೆನ್ನೈನ ನಿರ್ಮಾಣಸ್ಥಳವನ್ನು ತಮ್ಮ ಸಂಗೀತ ನಿಯೋಜನೆಗಾಗಿ ಬಳಸಿದ್ದಾರೆ, ಹಾಗೆಯೇ ಬೇರೆ ಚಿತ್ರೋದ್ಯಮದ ರಚನೆಕಾರರು ಕೂಡ. 1940ರ ದಶಕದಿಂದಲೂ ಎಸ್. ರಾಜೇಶ್ವರ ರಾವ್ ಅವರು ಚೆನ್ನೈನಲ್ಲಿ ನಲೆಸಿದ್ದಾರೆ. 2000ದ ದಶಕದ ಚಲನಚಿತ್ರಗಳ ಸಮಯದಲ್ಲಿ, ರಚನೆಕಾರರಾದ ಎಮ್. ಎಸ್. ವಿಶ್ವನಾಥನ್ ಅವರು ಜನಪ್ರಿಯರಾಗಿದ್ದರು, ಧ್ವನಿ ಕ್ರಾಂತಿಯಿಂದ ತಮಿಳು ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿಯುಂಟಾಯಿತು.
ತಮಿಳು ಚಿತ್ರೋದ್ಯಮ ರಾಜಕೀಯದ ಜೊತೆ ಒಂದಕ್ಕೊಂದು ಹೆಣೆದುಕೊಂಡಿದೆ, ಬಹಳ ಹಿಂದಿನ ಪ್ರಾದೇಶಿಕ ಸಿನೆಮಾ ಕಾಲದಿಂದಲೂ, ಕಥೆಗಳು, ವಿಷಯಗಳು ಮತ್ತು ಪಾತ್ರಗಳು ತಮಿಳು ಸಾಂಪ್ರದಾಯಕ ಜನಪದ ಲಾವಣಿಗಳಿಂದ ಉತ್ತೇಜಿತವಾದ ಚಿತ್ರಕಥೆಗಳು ಮತ್ತು ಭಾವೀ ರಾಜಕಾರಣಿಗಳನ್ನು ಹುಟ್ಟುಹಾಕುವಲ್ಲಿ ಸಾಧನವಾಗಿದೆ. ಮೊದಲನೇ ಕಾಂಗ್ರೆಸ್ಸಿಗರಲ್ಲದ ಮುಖ್ಯ ಮಂತ್ರಿಗಳಾದ ಸಿ. ಎನ್. ಅನ್ನದುರೈ ಮತ್ತು ಈಗಿನ ಮುಖ್ಯ ಮಂತ್ರಿಗಳಾದ ಎಮ್. ಕರುಣಾನಿಧಿ ಅವರುಗಳು ನಿರ್ದೇಶಕರು ಮತ್ತು ಸಾಹಿತ್ಯ ಲೇಖಕರಾಗಿದ್ದರು. ಎಮ್. ಜಿ. ರಾಮಚಂದ್ರನ್, ಇವರು ವಾಣೀಜ್ಯ ನಾಯಕರಾಗಿದ್ದರು, ಒಂದು ದಶಕಕ್ಕೂ ಹೆಚ್ಚು ದಿನಗಳು ತಮಿಳು ನಾಡಿನ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಈಗಿನ ವಿರೋಧ ಪಕ್ಷದ ಮುಖಂಡರಾದ ಜೆ. ಜಯಲಲಿತ ಅವರು ಕೂಡ ಚಲನಚಿತ್ರಗಳಲ್ಲಿ ನಾಯಕಿಯಾಗಿದ್ದರು. ತಮಿಳು ನಾಡಿನ ಶಾಸಕಾಂಗ ಸಭೆಯ ಸದಸ್ಯರುಗಳಲ್ಲಿ (ಎಮ್ಎಲ್ಎ) ವಿಜಯಕಾಂತ್ ಮತ್ತು ಎಸ್. ವಿ. ಶೇಖರ್ ಅವರುಗಳೂ ಇದ್ದಾರೆ.
ಬಾಲಿವುಡ್ ಚಿತ್ರಗಳ ಜೊತೆ ತಮಿಳು ಚಿತ್ರಗಳೂ ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಅವರುಗಳು ವಿದೇಶಳಲ್ಲಿ ಸಹ ಬಹು ವಿಸ್ತಾರವಾದ ವಿತರಣಾ ಕಾರ್ಯವನ್ನು ಹೊಂದಿದ್ದಾರೆ, ಹಿಂದಿ ಚಿತ್ರಗಳ ಜೊತೆಯಲ್ಲೇ ಚದುರಿಹೋದ ತಮಿಳು ಸಭಿಕರು ದೊಡ್ಡ ಸಂಖ್ಯೆಯಲ್ಲೇ ಚಿತ್ರ ನೋಡಲು ಬರುತ್ತಾರೆ. ಚೆನ್ನೈ ಚಲನಚಿತ್ರ ಉದ್ಯಮವು ಮೊದಲನೇ ಭಾರತದಾದ್ಯಂತ ವಾಣಿಜ್ಯವಾಗಿ ಯಶಸ್ವಿಯಾದ ಚಂದ್ರಲೇಖ ಎಂಬ ಚಿತ್ರವನ್ನು 1948ರಲ್ಲಿ ನಿರ್ಮಿಸಿದರು, ಇದು ತಮಿಳು ಸಿನೆಮಾದಲ್ಲಿ ಒಂದು ಮೈಲಿಗಲ್ಲು.
ತಮಿಳು ಚಿತ್ರಗಳು ಸ್ಥಿರವಾದ ಜನಪ್ರಿಯತೆಯನ್ನು ಭಾರತ, ಶ್ರೀ ಲಂಕಾ, ಸಿಂಗಪೂರ್ ಮತ್ತು ಮಲೇಶಿಯ ಜನಗಳಿಂದ ಅನುಭವಿಸಿದೆ. ಇತ್ತೀಚೆಗೆ ಇವುಗಳು ಜಪಾನ್ನಲ್ಲಿ (ನಿರ್ದಿಷ್ಟವಾಗಿ ಮುತ್ತು , ಕೆ. ಎಸ್. ರವಿಕುಮಾರ್ ನಿರ್ದೇಶನದ, ಮತ್ತು ಇಂದಿರ , ಸುಹಾಸಿನಿ ಮಣಿ ರತ್ನಂ ನಿರ್ದೇಶನದ), ದಕ್ಷಿಣ ಆಫ್ರಿಕ, ಕೆನೆಡ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಎಲ್ಲ ಕಡೆ ಜನಪ್ರಿಯವಾಗಿವೆ. ಶಿವಾಜಿ: ದಿ ಬಾಸ್ (2007) ಚಿತ್ರವು ತನ್ನ ಹೆಚ್ಚಿನ-ಬಂಡವಾಳಕ್ಕೆ, ದೊಡ್ಡದಾಗಿ ತೆರೆ ಕಂಡಿದ್ದಕ್ಕೆ ಮತ್ತು ಪ್ರಪಂಚದಾದ್ಯಂತ ದೊರಕಿದ ಸ್ವಾಗತಕ್ಕೆ ಎಲ್ಲಾ ದಾಖಲೆಗಳನ್ನು-ಮುರಿದಿದೆ ಎಂದು ಹೇಳಲಾಗುತ್ತದೆ. ಯುನೈಟೆಡ್ ಕಿಂಗ್ಡಮ್ ಮತ್ತು ದಕ್ಷಿಣ ಆಫ್ರಿಕ ದೇಶಗಳಲ್ಲಿ ತೆರೆ ಕಂಡ ಮೊದಲ ವಾರದಲ್ಲಿ ಹೆಚ್ಚಿನ ಮೊತ್ತದ ಗಳಿಕೆಗಾಗಿ ಮೊದಲನೇ ಹತ್ತು ಚಿತ್ರಗಳಲ್ಲಿ ಒಂದು ಸ್ಥಾನ ಪಡೆಯಿತು. ಎಯಿಂಗರನ್ ಇಂಟರ್ನ್ಯಾಷನಲ್ ಎಂಬುದು ಬಹುತೇಕ ತಮಿಳು ಚಿತ್ರಗಳನ್ನು ವಿದೇಶದಲ್ಲಿ ವಿತರಿಸುತ್ತದೆ, ದೇಶೀಯ ವಿತರಕರಾದ ಆಸ್ಕರ್ ಫಿಲ್ಮ್ಸ್, ಪಿರಮಿಡ್ ಸಾಯಿಮಿರ, ಮತ್ತು ಮದ್ರಾಸ್ ಟಾಕೀಸ್ ಅವರುಗಳು ವಿತರಣೆಯನ್ನು ಭಾರತದೊಳಗೆ ನಿರ್ವಹಿಸುತ್ತವೆ. ಕೆ. ಎಸ್. ರವಿಕುಮಾರ್ ನಿರ್ದೇಶನದ ದಶಾವತಾರಮ್ ಚಿತ್ರವನ್ನು ಕೆನಡದಲ್ಲಿ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಅವರು ವಿತರಿಸಿದರು.
ಅನೇಕ ತಮಿಳು ಚಿತ್ರಗಳನ್ನು ಪ್ರಪಂಚದಾದ್ಯಂತ ಪ್ರಥಮ ಪ್ರದರ್ಶನಗಳಿಗಾಗಿ ಅಥವ ವಿವಿಧ ಗೌರವಾನ್ವಿತ ಚಿತ್ರ ಪ್ರದರ್ಶನಗಳನ್ನು ವಿಶೇಷ ನಿರೂಪಣೆಗಾಗಿ ಆರಿಸಿಕೊಳ್ಳಲಾಗಿವೆ, ಅಂಥವುಗಳೆಂದರೆ ಮಣಿ ರತ್ನಂ ಅವರ ಕಣ್ಣತ್ತಿಲ್ ಮುತ್ತಮಿತ್ತಲ್ , ವೆಯ್ಯಿಲ್ ಮತ್ತು ಅಮೀರ್ ಸುಲ್ತಾನ್ ಅವರ ಪರುತಿವೀರನ್ . ಇತ್ತೀಚೆಗೆ, ಪ್ರಿಯದರ್ಶನ್ ನಿರ್ದೇಶಿಸಿರುವ ಕಾಂಚೀವರಮ್ , ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸರ್ವಶ್ರೇಷ್ಟವಾಗಿ ಆಯ್ಕೆಯಾಗಿದೆ. ಥವರ್ ಮಗನ್ , ಇಂಡಿಯನ್ ಮತ್ತು ಜೀನ್ಸ್ ನಂತಹ ಚಲನಚಿತ್ರಗಳನ್ನು, ಅತ್ಯುತ್ತಮ ಅಂತರರಾಷ್ರೀಯ ಭಾಷಾ ಚಿತ್ರಗಳೆಂದು ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದವು. ಮಣಿರತ್ನಂ'ರ ನಯಾಗನ್ (1987) ಚಿತ್ರವನ್ನು ಟೈಮ್ ಮೇಗಜಿನ್ನ "ಆಲ್-ಟೈಮ್" 100 ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಮಾಡಲಾಗಿದೆ.
ತಮಿಳ್ ಚಲನಚಿತ್ರಗಳು ಕೇರಳ, ಕರ್ನಾಟಕ ಮತ್ತು ಆಂದ್ರಪ್ರದೇಶ್ಗಳಂತಹ ಭಾರತೀಯ ರಾಜ್ಯಗಳ ಸನ್ನಿಹಿತದಲ್ಲಿನ ಮಹತ್ತರವಾದ ಪ್ರೋತ್ಸಾಹವನ್ನು ಆಹ್ಲಾದಿಸುತ್ತಿವೆ. ಕೇರಳ ಮತ್ತು ಕರ್ನಾಟಕದಲ್ಲಿ ತಮಿಳು ಚಲನಚಿತ್ರಗಳು ನೇರವಾಗಿ ತಮಿಳುನಲ್ಲೇ ಬಿಡುಗಡೆಯಾಗುತ್ತವೆ ಆದರೆ ಆಂದ್ರಪ್ರದೇಶದಲ್ಲಿ ಇವನ್ನು ಸಾಮಾನ್ಯವಾಗಿ ತೆಲುಗು ಭಾಷೆಯಲ್ಲಿ ಮರುಮುದ್ರಿಸಲಾಗುತ್ತದೆ. ಬಹುತೇಕ ಸಫಲ ತಮಿಳು ಚಲನಚಿತ್ರಗಳನ್ನು ಹಿಂದಿ ಮತ್ತು ತೆಲುಗು ಚಲನಚಿತ್ರ ಉದ್ಯಮದಿಂದ ಮರುರೂಪಿಸಲಾಗಿದೆ. 20ನೆಯ ಶತಮಾನದಲ್ಲಿ 5,000ಕ್ಕಿಂತಲು ಅಧಿಕ ತಮಿಳ್ ಚಲನಚಿತ್ರಗಳನ್ನು ನಿರ್ಮಿಸಲಾಯಿತೆಂದು ಮನೊರಮ ಯಿಯರ್ಬುಕ್ 2000 (ಪ್ರಸಿದ್ಧ ಅಲ್ಮಾನಕ್)ದಿಂದ ಅಂದಾಜಿಸಲಾಯಿತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸಲು ಸಾದ್ಯವಾಗುವಂತೆ, ತಮಿಳು ಚಲನಚಿತ್ರಗಳನ್ನು ಇತರ ಭಾಷೆಗಳಲ್ಲಿ ಸಹ ಮರುರೂಪಿಸಲಾಗಿದೆ. ಹಿಂದಿ ಭಾಷೆಯಲ್ಲಿ ಮರುರೂಪಗೊಂಡವುಗಳಲ್ಲಿ S. ಶಂಕರ್ ನಿರ್ದೇಶನದ ಅನ್ನಿಯನ್ , ರಾಜಿವ್ ಮೆನೊನ್ ನಿರ್ದೇಶನದ ಮಿನ್ಸಾರ ಕನವು , ಮಣಿ ರತ್ನಂ ನಿರ್ದೇಶನದ ರೋಜ ಮತ್ತು ಬಾಂಬೆ ಗಳಂತಹ ಪ್ರಸಿದ್ಧವಾದ ಚಿತ್ರಗಳು ಒಳಗೊಂಡಿವೆ.
ತಮುಳು ಭಾಷೆಯ ಚಲನಚಿತ್ರಗಳನ್ನು ಇತರ ಚಲನಚಿತ್ರ ಕೇಂದ್ರಗಳಲ್ಲಿಯು ನಿರ್ಮಿಸಲಾಗಿತ್ತದೆ. ಸಿಂಗಪೂರಿನ ಎರಿಕ್ ಖೂ ನಿರ್ದೇಶನದ ಚಲನಚಿತ್ರ ಮೈ ಮ್ಯಾಜಿಕ್ ಕೆನ್ನೆಸ್ನಲ್ಲಿನ ಪಾಲ್ಮ್ ಡಿಒರ್ಗೆ ಹೆಸರುಸೂಚಿಸಿದ ಮೊದಲ ಸಿಂಗಪೂರ್ ಚಿತ್ರವಾಗಿದೆ. ಚೆನ್ನೈ ಚಲನಚಿತ್ರಗಳಲ್ಲಿನ ಸಂಭಾಷಣೆ ಮತ್ತು ಹಾಡುಗಳಲ್ಲಿ ಆಂಗ್ಲಭಾಷೆಯ ಬಳಕೆಯು ಹೆಚ್ಚಾಗುತ್ತಿದೆ. ಚಲನಚಿತ್ರದ ಸಂಭಾಷಣೆಯು ಆಂಗ್ಲಭಾಷೆಯ ಪದಗಳು ಮತ್ತು ಪದಸಮುಚ್ಚಯಗಳು, ಅಥವಾ ಪೂರ್ಣ ವಾಕ್ಯಗಳನ್ನು ಆಂಗ್ಲಭಾಷೆಯಲ್ಲಿ ಹೊಂದುವ ವೈಶಿಷ್ಟ್ಯತೆಯನ್ನು ಹೊಂದಿರುವುದು ಅಸಾಧಾರಣವೇನಲ್ಲ. ಕೆಲವು ಚಲನಚಿತ್ರಗಳನ್ನು ಏಕಕಾಲದಲ್ಲಿ ಎರಡು ಅಥವಾ ಮೂರು ಭಾಷೆಗಳಲ್ಲಿ ಸಹ ಮಾಡಲಾಗುತ್ತದೆ (ಉಪನಾಮಧೇಯಗಳ ಅಥವಾ ಅನೇಕ ಸವ್ನ್ಡ್ಟ್ರ್ಯಾಕ್ಗಳ ಉಪಯೋಗದಿಂದ). ಚೈನೈನ ಚಲನಚಿತ್ರದ ಸ್ವರ ಸಂಯೋಜಕರು ಅವರ ಚಲನಚಿತ್ರ ಸಂಗೀತದ ಸಿಂಕ್ರೆಟಿಕ್ (ಬೇರೆ ಬೇರೆ ರಚನೆಗಳನ್ನು ಒಗ್ಗೂಡಿಸುವ) ಶೈಲಿಯನ್ನು, ಪ್ರಪಂಚದಾದ್ಯಂತ ಅತ್ಯಂತ ಅದ್ವಿತೀಯವಾಗಿ ಪ್ರಖ್ಯಾತಗೊಳಿಸಿದ್ದಾರೆ. ಬಹುವಾಗಿ, ತಮಿಳು ಚಲನಚಿತ್ರಗಳು ಮಡ್ರಾಸ್ ತಮಿಳಿನ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ, ಇದು ಚೆನೈನಲ್ಲಿ ಮಾತನಾಡುವ ತಮುಳು ಭಾಷೆಯ ಸಂಭಾಷಣೆ ಅವತರಣಿಕೆಯಾಗಿದೆ.
ಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2009) |
ಟಾಕೀ ಯುಗದ ಪ್ರಾರಂಭದಲ್ಲಿ, ತಮಿಳು ಚಲನಚಿತ್ರರಂಗದಲ್ಲಿ ಎಮ್. ಕೆ. ತ್ಯಾಗರಾಜ ಭಾಗವತರ್ ಮತ್ತು ಪಿ. ಯು. ಚಿನ್ನಪ್ಪ ಅವರುಗಳು 1940ರ ಕೊನೆಯವರೆಗೆ ದಿಗ್ಗಜರಾಗಿ ಮೆರೆದರು. 1950ರಿಂದ 1970ರ ಕೊನೆಯವರೆಗೆ ಹೆಸರು ಮಾಡಿದ್ದ ಇಬ್ಬರು ಪ್ರಸಿದ್ಧ ನಟರೆಂದರೆ ಎಮ್. ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್. ಇಂದಿನ ಪ್ರಮುಖ ನಟರೆಂದರೆ ಕಮಲ್ ಹಾಸನ್ ಮತ್ತು ರಜನಿ ಕಾಂತ್, 1970ರ ಮಧ್ಯ ಭಾಗದಿಂದಲೂ ಇವರು ಚಿತ್ರರಂಗದ ಪ್ರಮುಖ ಪಾತ್ರವಹಿಸಿದ್ದಾರೆ.
ಜೊತೆಯಲ್ಲಿ ಸೂರ್ಯ ಶಿವಕುಮಾರ್,ವಿಜಯ್, ಅಜಿತ್ ಕುಮಾರ್ ಮತ್ತು ವಿಕ್ರಮ್ ಕೆನ್ನೆಡಿಯವರುಗಳು ಬಹಳಷ್ಟು ಫಿಲ್ಮ್ಫೇರ್ ಪ್ರಶಸ್ತಿಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದು ಗಲ್ಲಾಪೆಟ್ಟಿಗೆಯ ಯಶಸ್ವೀ ನಟರೆನಿಸಿದ್ದಾರೆ.
ಉದ್ಯಮವು ಅನೇಕ ಗುಂಪುಗಳನ್ನು ಒಳಗೊಂಡಿದೆ, ಈ ಗುಂಪುಗಳು ವಿವಿಧ ವಿವಾದಾಂಶಗಳನ್ನು ಕುರಿತ ಹೆಚ್ಚಿನ ಕಾಳಜಿಯೊಂದಿಗೆ ತಮ್ಮ ಸ್ವಂತ ವಿದ್ಯಮಾನಗಳನ್ನು ತಾವೇ ಸುಸಂಘಟಿಸುತ್ತವೆ. ಪ್ರತ್ಯಾಕವಾದ ಮತ್ತು ಭಿನ್ನವಾದ ಗುಂಪುಗಳನ್ನು ರಚಿಸುವುದರ ಬದಲು, ಪ್ರತಿಯೊಂದು ಸಂಘವು ಕೆಲವು ನಿರ್ದಿಷ್ಟ ವಿದ್ಯಾಮಾನಗಳಿಗೆ ಪ್ರಾಸಂಗಿಕವಾಗಿ ಸೇರಿ ಕಾರ್ಯನಿರ್ವಹಿಸುತ್ತದೆ. ಈ ಸಂಘಗಳು ಉದ್ಯಮದಲ್ಲಿನ ವೃತ್ತಿಯ ಆಧಾರಿತವಾಗಿರುತ್ತದೆ, ನಿರ್ದೇಶಕರ ಸಂಘ ಅಥವಾ ನಿರ್ಮಾಪಕರ ಸಂಘದ ಹಾಗೆ.
ಉತ್ತರ ಭಾರತದ ಚಲನಚಿತ್ರ ಕಲಾವಿದರ ಸಂಘವು ಅತ್ಯಂತ ಪ್ರಖ್ಯಾತ ಸಂಘವಾಗಿದ್ದು, ಇದು ಎಲ್ಲಾ ಪ್ರಮುಖ ತಮಿಳು ಚಲನಚಿತ್ರ ನಟರ ಪಂಗಡವಾಗಿದೆ. ಇದು 1952ರಲ್ಲಿ ನಟ ಶಿವಾಜಿ ಗಣೇಶನ್ರ ನಾಯಕತ್ವದಲ್ಲಿ ರಚನೆಯಾಗಿದೆ[ಸೂಕ್ತ ಉಲ್ಲೇಖನ ಬೇಕು], ಸಂಘವು ಭಾರತೀಯ ಮತ್ತು ತಮಿಳು ಸಮಾಜದಲ್ಲಿ ಸ್ಪಷ್ಟವಾದ ಒಳ್ಳೆಯ ಬದಲಾವಣೆಯನ್ನು ತರುವ ಪ್ರಯತ್ನವಾಗಿ, ನಿರ್ದಿಷ್ಟವಾದ ರಾಜಕೀಯ ಮತ್ತು ಲೋಕೋಪಕಾರಿ ವಿವಾದಾಂಶಗಳಿಗಾಗಿ ಅನೇಕ ಪ್ರತಿಭಟನೆಗಳನ್ನು ಮತ್ತು ಉಪವಾಸ ಸತ್ಯಾಗ್ರಹಗಳನ್ನು ನಡೆಸುವುದನ್ನು ಮುಂದುವರೆಸಿದೆ. ವಿಶೇಷವಾಗಿ, ಅವರು ಚಲನಚಿತ್ರ ಅಥವಾ ಮಾದ್ಯಮ-ಸಂಬಂದಿತ ತೊಂದರೆಗಳನ್ನು ಅಥವಾ ಅದರ ಸದಸ್ಯರುಗಳಿಗೆ ಉದ್ಬವಿಸಬಹುದಾದ ಘರ್ಷಣೆಗಳ ನಿಯಂತ್ರಣ ಮಾಡುವರು. ಸಂಘದ ಈಗಿನ ಅಧ್ಯಕ್ಷರು ನಟ-ರಾಜಕಾರಿಣಿಯಾಗಿ-ಪರಿವರ್ತನೆಯಾದ ಆರ್. ಸರತ್ ಕುಮಾರ್.
ಇತರ ಸಂಘಗಳು, ನಿರ್ದೇಶಕರಾದ ಭಾರತಿರಾಜರ ನಾಯಕತ್ವವದ ತಮಿಳು ಚಲನಚಿತ್ರದ ನಿರ್ದೇಶಕರ ಸಂಘವನ್ನು ಮತ್ತು ಚಲನಚಿತ್ರ ಸಂಬಂದಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಾಗಿ ಬೆಟ್ಟಿಯಾಗುವ ವ್ಯಕ್ತಿ ಚಲನಚಿತ್ರದ ನಿರ್ಮಾಪಕ ರಾಮ ನಾರಯಣನ್ ಅವರ ನಾಯಕತ್ವದಲ್ಲಿನ ತಮಿಳು ಚಲನಚಿತ್ರದ ನಿರ್ಮಾಪಕರ ಕೌನ್ಸಿಲ್ಗಳನ್ನು ಒಳಗೊಂಡಿವೆ. ಅತೀ ಸಾಮಾನ್ಯ ಸಂಘವು ಪ್ರಸಿದ್ಧ ಪಿಲ್ಮ್ ಎಂಪ್ಲಾಯೀಸ್' ಪೆಡೆರೇಷನ್ ಆಫ್ ಸೌತ್ ಇಂಡಿಯ (FEFSI) ವನ್ನು ಒಳಗೊಂಡು, ಎಲ್ಲಾ ತರಹದ ಚಲನಚಿತ್ರ ವ್ಯಕ್ತಿತ್ವಗಳನ್ನು (ನಟರು, ನಿರ್ದೇಶಕರು, ನಿರ್ಮಾಪಕರು, ಚಲನಚಿತ್ರಚಾಯಾಗ್ರಾಹಿಗಳು, ಸ್ವರಸಂಯೋಜಕರು, ಮೊದಲಾದವರು) ಒಂದುಗೂಡಿಸುತ್ತದೆ. ಅವರು ಆಗಾಗ್ಗೆ ಬೆಳಕಿನ ಟೆಕ್ನೀಷಿಯನ್ಗಳು ಮತ್ತು ಸಾಹಸಕೃತ್ಯ ಸಂಯೋಜಕ ರಂತಹ ಕಡಿಮೆ ಆದಾಯದ ಚಲನಚಿತ್ರ ಕೆಲಸಗಾರರ ಉನ್ನತಿಕೆಗಾಗಿ ಸಫಲವಾಗಿ ಹೊಣೆಯಾಗುತ್ತಾರೆ.
1985ರಲ್ಲಿ ತಮಿಳು ಚಲನಚಿತ್ರಗಳ ಸರಾಸರಿ ಸಂಖ್ಯೆಯು ಅತಿ ಹೆಚ್ಚಿನದಾಗಿತ್ತು.
ಇಲ್ಲಿ ಸೂಚಿಸಿರುವುದು ತಮಿಳು ನಾಡಿನ ಚಲನಚಿತ್ರಗಳ ಸಂಗ್ರಹಣೆಯ ಬೂತ್ಗಳ ಒಲವಿನ ನಕ್ಷೆಯಾಗಿದ್ದು, ಇದರ ಸಂಗ್ರಹವು ಅನೇಕ ಮಿಲಿಯನ್ ಯುನೈಟೆಡ್ ಸ್ಟೇಟ್ಸ್ ಡಾಲರ್ಗಳಷ್ಟಿದೆ. ಈ ದತ್ತಾಂಶವು ಚಲನಚಿತ್ರ ಒಳಗಿನ ಜಾಹೀರಾತುಗಳ, ಸೆಲೆಬ್ರಿಟಿ ಬ್ರ್ಯಾಂಡಿಂಗ್, ಸಂಚಾರಿ ಮನರಂಜನೆ, ವೇದಿಕೆ, ಡಿವಿಡಿ ಮತ್ತು ಇತರ ಧೀಮಂತ ಸ್ವತ್ತಿನ ಹಕ್ಕುಗಳ ಮಾರುಕಟ್ಟೆ ಭಾಗಗಳನ್ನು ಒಳಹೊಂಡಿಲ್ಲ.
1948ರಲ್ಲಿ ಬಿಡುಗಡೆಯಾದ ಚಂದ್ರಲೇಖಾ ಚಲನಚಿತ್ರದ ಒಟ್ಟು ವೆಚ್ಚ $600,000 (2008ರಲ್ಲಿ $28 ಮಿಲಿಯನ್) ಇದು ತಮಿಳು ಚಲನಚಿತ್ರರಂಗದಲ್ಲೇ ಎಂದಿಗಿಂತಲೂ ಹೆಚ್ಚು ದುಬಾರಿ ಚಿತ್ರ. ವಿಶ್ವದಾದ್ಯಂತ ಉಪಶೀರ್ಷಿಕೆಗಳೊಂದಿಗೆ 609 ತೆರೆಗಳಲ್ಲಿ ಪ್ರದರ್ಶಿತವಾಯಿತು.
ತಮಿಳುನಾಡು ರಾಜ್ಯದ ಒಟ್ಟಾರೆ ಸ್ವದೇಶಿ ಉತ್ಪನ್ನಗಳ ವಹಿವಾಟಿನಲ್ಲಿ ತಮಿಳು ಚಲನಚಿತ್ರ ಮಾರುಕಟ್ಟೆಯ ವಹಿವಾಟು ಸರಿಸುಮಾರು 0.1% ನಷ್ಟಿದೆ. 2007ರಲ್ಲಿ ದಾಖಲೆಯ 108 ಚಲನಚಿತ್ರಗಳು ಬಿಡುಗಡೆಯಾದವು. ಮನೋರಂಜನಾ ತೆರಿಗೆಗಾಗಿ, ಪ್ರದರ್ಶಕರು ತಮ್ಮ ಆದಾಯ ವಿವರವನ್ನು ವಾರಕ್ಕೊಮ್ಮೆ ಸಲ್ಲಿಸಬೇಕಾಗುತ್ತದೆ (ಸಾಮಾನ್ಯವಾಗಿ ಪ್ರತಿ ಮಂಗಳವಾರ). ಉತ್ಪಾದನೆಯ ಖರ್ಚು 1980ರಲ್ಲಿನ Rs.40 ಲಕ್ಷಕ್ಕಿಂತಲು ಕಡಿಮೆದಿಂದ 2005ರ ಹೊತ್ತಿಗೆ ಸಾಂಕೇತಿಕವಾಗಿ ಅನೇಕ ಪ್ರಖ್ಯಾತ ತಾರೆಗಳನ್ನೊಂದಿದ ದೊಡ್ಡಮಟ್ಟಿನ ಬಂಡವಾಳದ ಚಲನಚಿತ್ರಕ್ಕಾಗಿ Rs.11 ಕೋಟಿ ವರೆಗು ಪ್ರತಿಪಾದಕವಾಗಿ ಬೆಳೆದಿದೆ. ಅದೇ ರೀತಿಯಾಗಿ, ಪ್ರತಿಯೊಂದು ಮುದ್ರಣದ ಪ್ರಕ್ರಿಯೆಗೆ ಆಗುವ ಖರ್ಚು 1980ರಲ್ಲಿನ Rs.2,500ರ ಕೆಳಮಟ್ಟದಿಂದ 2005ರ ಹೊತ್ತಿನ ಸುಮಾರು Rs.70,000 ವರೆಗು ಹೆಚ್ಚಾಗಿದೆ. [ಸೂಕ್ತ ಉಲ್ಲೇಖನ ಬೇಕು]
ತಮಿಳುನಾಡು ಸರಕಾರವು ಹೆಸರಿನಲ್ಲಿ ಸ್ವಚ್ಛ ತಮಿಳು ಶಬ್ದಗಳನ್ನು ಹೊಂದಿದ್ದ ತಮಿಳು ಚಲನಚಿತ್ರಗಳಿಗೆ ಮನರಂಜನ ತೆರಿಗೆ ವಿನಾಯಿತಿಯನ್ನು ಒದಗಿಸಿದೆ. ಇದು ಜುಲೈ 22, 2006ರಂದು ಅಂಗೀಕರಿಸಿದ ಸರಕಾರಿ ಅನುಶಾಸನ 72ರ ಅನುರೂಪತೆಯಲ್ಲಿದೆ. ಈ ಹೊಸಾ ಅನುಶಾಸನದ ನಂತರ ಬಿಡುಗಡೆಯಾದ ಮೊದಲ ಚಲನಚಿತ್ರ ಉನಕ್ಕುಮ್ ಎನಕ್ಕುಮ್ . ಇದರ ಮೂಲ ಶಿರೋನಾಮೆ ಸಂತಿಂಗ್ ಸಂತಿಂಗ್ ಉನಕ್ಕುಮ್ ಎನಕ್ಕುಮ್ ಆಗಿದ್ದು, ಅರ್ಧ ಆಂಗ್ಲಭಾಷೆಯ ಮತ್ತು ಅರ್ಧ ತಮಿಳು ಭಾಷೆಯ ಶಿರೋನಾಮೆಯಾಗಿದೆ.
ತಮಿಳುನಾಡಿನಲ್ಲಿ ಸುಮಾರು 1800 ಚಲನಚಿತ್ರ-ಮಂದಿರಗಳಿವೆ.
{{cite book}}
: CS1 maint: multiple names: authors list (link){{cite book}}
: CS1 maint: location missing publisher (link)This article uses material from the Wikipedia ಕನ್ನಡ article ತಮಿಳು ಸಿನೆಮಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.