ಜಸ್ಪಾಲ್ ರಾಣಾ

ಜಸ್ಪಾಲ್ ರಾಣಾ (ಜನನ ಜೂನ್ ೨೮, ೧೯೭೬) ಒಬ್ಬ ಭಾರತೀಯ ಗುರಿಕಾರ.

ಇವರು ಪ್ರಧಾನವಾಗಿ ೨೫ ಮೀ ಸೆಂಟರ್ ಫೈರ್ ಪಿಸ್ತೋಲ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇವರು ೧೯೯೪ರ ಏಶಿಯನ್ ಕ್ರೀಡೆಗಳು, ೨೦೦೬ರ ಕಾಮನ್ವೆಲ್ತ್ ಕ್ರೀಡೆಗಳು, ಹಾಗು ೨೦೦೬ರ ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಸಕ್ತದಲ್ಲಿ, ರಾಣಾ ಡೆಹ್ರಾಡೂನ್ ನಲ್ಲಿರುವ ಜಸ್ಪಾಲ್ ರಾಣಾ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಟೆಕ್ನಾಲಜಿಯಲ್ಲಿ ತರಬೇತಿ ನೀಡುತ್ತಾರೆ.

Jaspal Rana
Born (1976-06-28) ೨೮ ಜೂನ್ ೧೯೭೬ (ವಯಸ್ಸು ೪೭)
Uttarkhand, India
OccupationSportsman (Shooter)

ವೃತ್ತಿಜೀವನ

ಆರಂಭದ ದಿನಗಳು

ರಾಣಾ ಉತ್ತರಾಖಂಡದ ರಜಪೂತ್ ಕುಟುಂಬದಲ್ಲಿ ಜನಿಸಿದರು. ಅವರು ಮುಸ್ಸೋರಿ, ಡೆಹ್ರಾಡೂನ್ ನೈನ್ ಭಾಗ್ ಹಾಗು ನಂತರದಲ್ಲಿ ಡೆಲ್ಲಿಯಲ್ಲಿ ತಮ್ಮ ಆರಂಭಿಕ ಜೀವನವನ್ನು ಕಳೆದರು. ಅಲ್ಲದೇ K.V. ಏರ್ ಫೋರ್ಸ್ ಸ್ಟೇಷನ್ ತುಘಲಕಬಾದ್, ಹಾಗು ಸ್ತ. ಸ್ಟೀಫನ್ಸ್ ಹಾಗು ಶ್ರೀ ಅರಬಿಂದೋ ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಪೂರೈಸಿದರು. ಅವರ ತಂದೆ ನಾರಾಯಣ್ ಸಿಂಗ್ ರಾಣಾ, ಅವರ ಮೊದಲ ತರಬೇತುದಾರರು, ಇವರು ITBPಯ ಒಬ್ಬ ಅಧಿಕಾರಿ. ನಂತರದಲ್ಲಿ ಸಮಗ್ರವಾಗಿ ಟಿಬೋರ್ ಗನಜೋಲ್ ತರಬೇತಿ ನೀಡಿದರು.

ರಾಣಾ ತಮ್ಮ ೧೨ನೇ ವಯಸ್ಸಿನಲ್ಲಿ, ಅಹ್ಮದಾಬಾದ್ ನಲ್ಲಿ ನಡೆದ ೩೧ನೇ ರಾಷ್ಟ್ರೀಯ ಶೂಟಿಂಗ್ ಚ್ಯಾಂಪಿಯನ್ಶಿಪ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಪ್ರದರ್ಶನ ನೀಡಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು. ಅವರು ೪೬ನೇ ವಿಶ್ವ ಶೂಟಿಂಗ್ ಚ್ಯಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಸ್ಟ್ಯಾಂಡರ್ಡ್ ಪಿಸ್ತೂಲ್ ಶೂಟಿಂಗ್ ನಲ್ಲಿ ಖ್ಯಾತಿಯನ್ನು ಗಳಿಸಿದರು.(ಜೂನಿಯರ್ ವಿಭಾಗ) ಜೊತೆಗೆ ೧೯೯೪ರಲ್ಲಿ ಇಟಲಿಯ ಮಿಲಾನ್ ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು.

ಅಂತರರಾಷ್ಟ್ರೀಯ ಪಂದ್ಯಗಳು

ರಾಣಾ ತಮ್ಮ ಹೆಚ್ಚಿನ ಪದಕಗಳನ್ನು ಸೆಂಟರ್ ಫೈರ್ ಪಿಸ್ತೋಲ್ ವಿಭಾಗದಲ್ಲಿ ಗಳಿಸಿದ್ದಾರೆ, ಆದರೆ ಏರ್ ಪಿಸ್ತೋಲ್, ಸ್ಟ್ಯಾಂಡರ್ಡ್ ಪಿಸ್ತೋಲ್, ಫ್ರೀ ಪಿಸ್ತೋಲ್ ಹಾಗು ರಾಪಿಡ್ ಫೈರ್ ಪಿಸ್ತೋಲ್ ವಿಭಾಗಗಳಲ್ಲೂ ಪದಕಗಳನ್ನು ಗಳಿಸಿದ್ದಾರೆ. ಅವರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ೬೦೦ಕ್ಕೂ ಹೆಚ್ಚಿನ ಪದಕಗಳನ್ನು ಗಳಿಸಿದ್ದಾರೆ.

ದೋಹಾದಲ್ಲಿ ನಡೆದ ೨೦೦೬ ಏಶಿಯನ್ ಕ್ರೀಡೆಗಳಲ್ಲಿ, ೨೫ ಮೀ ಸೆಂಟರ್ ಫೈರ್ ಪಿಸ್ತೋಲ್ ನಲ್ಲಿ ೫೯೦ ಅಂಕಗಳನ್ನು ಗಳಿಸುವುದರೊಂದಿಗೆ ವಿಶ್ವ ದಾಖಲೆಯನ್ನು ಸಮನಾಗಿಸಿದರು.(ಇವರು ಈ ಕ್ರಮಾಂಕವನ್ನು ಈ ಹಿಂದೆ ಎರಡು ಬಾರಿ ಗಳಿಸಿದ್ದರು; ೧೯೯೫ರಲ್ಲಿ ಕೊಯಂಬತ್ತೂರ ಹಾಗು ೧೯೯೭ರಲ್ಲಿ ಬೆಂಗಳೂರುನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಈ ಅಂಕಗಳನ್ನು ಪಡೆದಿದ್ದರು). ಭಾರತೀಯ ಒಲಂಪಿಕ್ ಅಸೋಸಿಯೇಶನ್, ಏಶಿಯನ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿದ ರಾಣಾರಿಗೆ 'ಅತ್ಯುತ್ತಮ ಕ್ರೀಡಾಪಟು' ಪ್ರಶಸ್ತಿಯನ್ನು ಘೋಷಿಸಿ ವಿವಾದಕ್ಕೆ ನಾಂದಿ ಹಾಡಿತು; ಆದರೆ ಪ್ರಶಸ್ತಿಯನ್ನು ಕೊರಿಯದ ತೆಹ್ವಾನ್ ಪಾರ್ಕ್ ಗೆ ನೀಡಲಾಯಿತು. ನಡೆದ ಪ್ರಮಾದದ ಬಗ್ಗೆ ರಾಣಾ ಹೆಚ್ಚಿನ ಪ್ರತಿಕ್ರಿಯೆ ತೋರಲಿಲ್ಲ.

ಪ್ರಮುಖ ಸಾಧನೆಗಳು

ಹಿರೋಷಿಮದಲ್ಲಿ ನಡೆದ ೧೯೯೪ರ ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ

ಸಮರೇಶ್ ಜಂಗ್ ರ ಜತೆಗೂಡಿ ೨೦೦೬ರ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪುರುಷರ ೨೫ಮೀ ಸೆಂಟರ್ ಫೈರ್ ಪಿಸ್ತೋಲ್(ಪ್ಯಾರಿಸ್)ನಲ್ಲಿ ಚಿನ್ನದ ಪದಕ

  • ೭-೮ನೇ ಡಿಸೆಂಬರ್ ೨೦೦೬ರಲ್ಲಿ ನಡೆದ ೨೦೦೬ರ ಏಶಿಯನ್ ಕ್ರೀಡೆಗಳಲ್ಲಿ ೨೫ಮೀ ಸ್ಟ್ಯಾಂಡರ್ಡ್ ಪಿಸ್ತೋಲ್ ಹಾಗು ೨೫ಮೀ ಸೆಂಟರ್ ಫೈರ್ ಪಿಸ್ತೋಲ್ ನಲ್ಲಿ ಚಿನ್ನದ ಪದಕಗಳು
  • ೨೫ಮೀ ಸೆಂಟರ್ ಫೈರ್ ಪಿಸ್ತೋಲ್ ವಿಭಾಗವನ್ನು ಗೆಲ್ಲುವುದರೊಂದಿಗೆ, ರಾಣಾ ೫೯೦ ಅಂಕಗಳನ್ನು ಕಲೆ ಹಾಕುವ ಮೂಲಕ ವಿಶ್ವ ದಾಖಲೆಯನ್ನು ಸಮನಾಗಿಸಿದರು.*

ಪ್ರಶಸ್ತಿಗಳು ಮತ್ತು ಮಾನ್ಯತೆ

೧೯೯೪ರಲ್ಲಿ, ಕ್ರೀಡೆಯಲ್ಲಿನ ಉತ್ತಮ ಸಾಧನೆಗಾಗಿ ನೀಡುವ ಎರಡನೇ ಅತ್ಯುಚ್ಚ ಪ್ರಶಸ್ತಿ ಅರ್ಜುನ ಪ್ರಶಸ್ತಿಯನ್ನು ಭಾರತ ಸರ್ಕಾರವು ಹದಿನೆಂಟು ವರ್ಷದ ರಾಣಾರಿಗೆ ನೀಡಿ ಗೌರವಿಸಿತು, ಇಪ್ಪತ್ತೊಂದನೆ ವರ್ಷದ ಹೊತ್ತಿಗೆ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು ಹಾಗು ಈ ನಡುವೆ ಮದರ್ ತೆರೇಸಾರಿಂದ ರಾಷ್ಟ್ರೀಯ ನಾಗರಿಕ ಪುರಸ್ಕಾರ ಪಡೆದರು, ರಾಷ್ಟ್ರಮಟ್ಟದ ಇತರ ಪ್ರಶಸ್ತಿಗಳು ಅನಿರೀಕ್ಷಿತವಾಗಿ ಅವರೆಡೆಗೆ ಹರಿದುಬಂದವು.

ರಾಜಕೀಯ ಜೀವನ

ರಾಣಾ ಭಾರತೀಯ ಜನತಾ ಪಕ್ಷದ ಒಬ್ಬ ಸದಸ್ಯರಾಗಿದ್ದಾರೆ. ಏಶಿಯನ್ ಕ್ರೀಡೆಗಳು ಮುಗಿದ ಸ್ವಲ್ಪ ದಿನಗಳ ನಂತರ, ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗು ಪಕ್ಷದ ಪರ ಪ್ರಚಾರ ಮಾಡುವ ತಮ್ಮ ಆಸಕ್ತಿಯ ಬಗ್ಗೆ ಸೂಚನೆ ನೀಡಿದರು. ಇತ್ತೀಚೆಗೆ BJP ರಾಷ್ಟ್ರೀಯ ಪಕ್ಷವು, ರಾಣಾ ಅವರು ಟೆಹ್ರಿ ಕ್ಷೇತ್ರದಿಂದ ಲೋಕ ಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂದು ಪ್ರಕಟಿಸಿತು, ಈ ಕ್ಷೇತ್ರ ವ್ಯಾಪ್ತಿಯಲ್ಲಿ ಡೆಹ್ರಡೂನ್ ಪಟ್ಟಣ, ಉತ್ತರಕಾಶಿ ಹಾಗು ಉತ್ತರಾಖಂಡದ ಟೆಹ್ರಿ ಜಿಲ್ಲೆಯೂ ಸೇರಿದೆ.

ವೈಯಕ್ತಿಕ ಜೀವನ

ಅವರು, ವಸ್ತ್ರ ವಿನ್ಯಾಸಕಿ ಹಾಗು ರಾಷ್ಟ್ರ ಮಟ್ಟದ ಗುರಿಕಾರ್ತಿ ರೀನಾ ರಾಣಾರನ್ನು ವರಿಸಿದ್ದಾರೆ, ಹಾಗು ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದೇವಾನ್ಷಿ, ಹಾಗು ಮಗ ಯುವರಾಜ್.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ಜಸ್ಪಾಲ್ ರಾಣಾ ವೃತ್ತಿಜೀವನಜಸ್ಪಾಲ್ ರಾಣಾ ಪ್ರಮುಖ ಸಾಧನೆಗಳುಜಸ್ಪಾಲ್ ರಾಣಾ ಪ್ರಶಸ್ತಿಗಳು ಮತ್ತು ಮಾನ್ಯತೆಜಸ್ಪಾಲ್ ರಾಣಾ ರಾಜಕೀಯ ಜೀವನಜಸ್ಪಾಲ್ ರಾಣಾ ವೈಯಕ್ತಿಕ ಜೀವನಜಸ್ಪಾಲ್ ರಾಣಾ ಬಾಹ್ಯ ಕೊಂಡಿಗಳುಜಸ್ಪಾಲ್ ರಾಣಾ ಉಲ್ಲೇಖಗಳುಜಸ್ಪಾಲ್ ರಾಣಾದೆಹರಾದೂನ್‌

🔥 Trending searches on Wiki ಕನ್ನಡ:

ರಾಜಕೀಯ ವಿಜ್ಞಾನಕರ್ಮಧಾರಯ ಸಮಾಸಶ್ರೀ ರಾಘವೇಂದ್ರ ಸ್ವಾಮಿಗಳುಕನ್ನಡ ಚಳುವಳಿಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಎಲೆಕ್ಟ್ರಾನಿಕ್ ಮತದಾನಮಳೆನೀರು ಕೊಯ್ಲು೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕರ್ನಾಟಕದ ಸಂಸ್ಕೃತಿಕಾವ್ಯಮೀಮಾಂಸೆಭಾರತ ಸಂವಿಧಾನದ ಪೀಠಿಕೆರಾಮ ಮಂದಿರ, ಅಯೋಧ್ಯೆಹಂಪೆವಾಟ್ಸ್ ಆಪ್ ಮೆಸ್ಸೆಂಜರ್ಸೀತೆಗುಡಿಸಲು ಕೈಗಾರಿಕೆಗಳುಜೀವವೈವಿಧ್ಯಚಿಂತಾಮಣಿವ್ಯಂಜನಪೌರತ್ವಸರಸ್ವತಿಬಾಲಕಾರ್ಮಿಕಅಂತರಜಾಲಎತ್ತಿನಹೊಳೆಯ ತಿರುವು ಯೋಜನೆಕನ್ನಡದಲ್ಲಿ ಗಾದೆಗಳುನಾಗಸ್ವರಅನುಶ್ರೀನಾಯಕ (ಜಾತಿ) ವಾಲ್ಮೀಕಿಆದಿಚುಂಚನಗಿರಿಕರ್ನಾಟಕ ಹೈ ಕೋರ್ಟ್ಕೊಡಗಿನ ಗೌರಮ್ಮತಾಳೀಕೋಟೆಯ ಯುದ್ಧಅಳಿಲುಹೈದರಾಲಿಹಳೇಬೀಡುವಿವಾಹನಾಗರೀಕತೆಹರಿಹರ (ಕವಿ)ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಜೋಗಭಾರತದ ರಾಷ್ಟ್ರಪತಿಗಳ ಪಟ್ಟಿಅಡಿಕೆಹೆಚ್.ಡಿ.ಕುಮಾರಸ್ವಾಮಿಭಾರತದ ಸ್ವಾತಂತ್ರ್ಯ ದಿನಾಚರಣೆಮಂಗಳ (ಗ್ರಹ)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮಹಾತ್ಮ ಗಾಂಧಿಹಲ್ಮಿಡಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಬಸವೇಶ್ವರಹೊಯ್ಸಳಮೋಳಿಗೆ ಮಾರಯ್ಯಕ್ರೈಸ್ತ ಧರ್ಮಕಲ್ಲಂಗಡಿಜಯಪ್ರಕಾಶ್ ಹೆಗ್ಡೆಮಂತ್ರಾಲಯಮಹಾಭಾರತಮಾನವನಲ್ಲಿ ನಿರ್ನಾಳ ಗ್ರಂಥಿಗಳುರಾವಣಕರ್ನಾಟಕ ವಿಧಾನ ಪರಿಷತ್ಕ್ರಿಯಾಪದಮುರುಡೇಶ್ವರಹಿಂದೂ ಧರ್ಮಗುರುರಾಜ ಕರಜಗಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸದಾಳಿಂಬೆಸಾರ್ವಜನಿಕ ಆಡಳಿತನಾಮಪದಜಾಗತೀಕರಣಭಾರತದ ರಾಷ್ಟ್ರಗೀತೆಸ್ವರಾಜ್ಯಭಾಷಾ ವಿಜ್ಞಾನಜಿ.ಪಿ.ರಾಜರತ್ನಂಬಿಳಿಗಿರಿರಂಗನ ಬೆಟ್ಟಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹಳೆಗನ್ನಡಹೆಸರು🡆 More