ಉಷಾ ನವರತ್ನ ರಾಂ (ನವೆಂಬರ್ ೨೩, ೧೯೩೯ - ಅಕ್ಟೋಬರ್ ೦೧, ೨೦೦೦) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲೊಬ್ಬರು.
ಉಷಾ ನವರತ್ನರಾಂ | |
---|---|
ಜನನ | ನವೆಂಬರ್ ೨೩, ೧೯೩೯ ಬೆಂಗಳೂರು |
ಮರಣ | ಅಕ್ಟೋಬರ್ ೧೧, ೨೦೦೦ |
ವೃತ್ತಿ | ಶಿಕ್ಷಕಿ, ಕಥೆಗಾರ್ತಿ |
ಕನ್ನಡದ ಜನಪ್ರಿಯ ಲೇಖಕಿ ಉಷಾ 1939 ನವೆಂಬರ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ್. ಉಷಾ ನವರತ್ನರಾಂ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿ ಸುಮಾರು 3 ದಶಕಗಳ ಕಾಲ ಶಿಕ್ಷಕರಾಗಿ ಹುದ್ದೆ ನಿರ್ವಹಿಸಿದ್ದರು. ಅವರು ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ಅಂಕಣಗಾರ್ತಿಯೂ ಆಗಿದ್ದರು. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಉಷಾರವರ ಮದುವೆ ೧೯೬೯ ಫೆಬ್ರುವರಿ ೩ರಂದು ಖ್ಯಾತ ಸಾಹಿತಿ ನವರತ್ನ ರಾಮ್ ರವರ ಜೊತೆಗೆ ಜರುಗಿತು. ಇವರಿಗೆ ಮೂವರು ಮಕ್ಕಳು: ಆರತಿ, ಅಂಜಲಿ ಹಾಗು ಆಶ್ರಯಾ.
ಉಷಾ ನವರತ್ನ ರಾಮ್ ಅವರ ಅನೇಕ ಕಾದಂಬರಿಗಳು ಸುಧಾ, ಪ್ರಜಾಮತ, ಕರ್ಮವೀರ, ತರಂಗ, ಮಂಗಳ ಮೊದಲಾದ ಕನ್ನಡದ ವಿವಿಧ ವಾರಪತ್ರಿಕೆಗಳಲ್ಲಿ ಹಾಗು ಮಲ್ಲಿಗೆ, ತುಷಾರ, ವನಿತಾ, ಪ್ರಿಯಾಂಕ, ರಾಗಸಂಗಮ, ಹಂಸರಾಗ ಮೊದಲಾದ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದವು.
ಉಷಾರವರ ಈ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ:
ಕಣಜ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
This article uses material from the Wikipedia ಕನ್ನಡ article ಉಷಾ ನವರತ್ನರಾಂ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.