ಅಂತಾರಾಷ್ಟ್ರೀಯ ವಿಚಾರಸಂಸ್ಥೆ

ಅಂತಾರಾಷ್ಟ್ರೀಯ ವಿಚಾರಸಂಸ್ಥೆಪ್ಯಾರಿಸ್ಸಿನಲ್ಲಿ 1919ರಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ನೆರೆದಿದ್ದ ಬ್ರಿಟಿಷ್ ಚಕ್ರಾಧಿಪತ್ಯದ ಪ್ರತಿನಿಧಿಗಳಲ್ಲಿ ಮಾತುಕತೆ ನಡೆದು ಅದರ ಪರಿಣಾಮವಾಗಿ 20 ಜುಲೈ 1920ರಲ್ಲಿ ಬ್ರಿಟಿಷ್ ರಾಷ್ಟ್ರೀಯ ಸಂಸ್ಥೆ ಲಂಡನ್ನಿನಲ್ಲಿ ಉದಯಿಸಿತು.

ಇದಕ್ಕೆ 16 ಜುಲೈ 1926ರಲ್ಲಿ ಬ್ರಿಟಿಷ್ ರಾಜರ ಮನ್ನಣೆ ದೊರೆತು ಅವರು ಅನುಗ್ರಹಿಸಿದ ಸನ್ನದಿಗೆ ಅನುಗುಣವಾಗಿ ಕಾರ್ಯಕಲಾಪಗಳು ಆರಂಭವಾದುವು. ಅಂದಿನಿಂದ ಇದರ ಹೆಸರು ರಾಯಲ್ ಅಂತಾರಾಷ್ಟ್ರೀಯ ವಿಚಾರಸಂಸ್ಥೆ (ರಾಯಲ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಅಫೇರ್ಸ್) ಎಂದಾಯಿತು. ಈಗ ಇದು ಛಾಥಮ್ ಸದನ ಎಂದು ಕರೆಯಲ್ಪಡುತ್ತಿದೆ.

ಅಂತಾರಾಷ್ಟ್ರೀಯ ವಿಚಾರಸಂಸ್ಥೆ
ನೆಲ್ಸನ್ ಮಂಡೇಲಾ ಚ್ಯಾಟಮ್ ಸದನದ 'ದಕ್ಷಿಣ ಆಫ್ರಿಕಾ: ವ್ಯಾಪಾರಕ್ಕೆ ಅವಕಾಶ' ಸಮ್ಮೇಳನದಲ್ಲಿ ಭಾಷಣ ಮಾಡುತ್ತಿದ್ದಾರೆ, ೧೦ ಜುಲೈ ೧೯೯೬.

ಧ್ಯೇಯೋದ್ಧೇಶಗಳು

ಇದರ ಧ್ಯೇಯ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕ ಮೊದಲಾದ ದೃಷ್ಟಿಗಳಿಂದ ನಿಷ್ಪಕ್ಷಪಾತವಾಗಿ ಸಮದೃಷ್ಟಿಯಿಂದ ಪರಿಶೀಲಿಸುವುದು. ಇದಕ್ಕೆ ಸರ್ಕಾರದ ಅಥವಾ ಯಾವ ರಾಜಕೀಯ ಪಕ್ಷದ ಸೋಂಕೂ ಇಲ್ಲ. ಸನ್ನದಿನ ನಿಯಮಗಳ ಪ್ರಕಾರ ಸಂಸ್ಥೆ ಯಾವ ಅಂತಾರಾಷ್ಟ್ರೀಯ ವಿಚಾರದಲ್ಲೂ ತನ್ನ ಅಭಿಪ್ರಾಯ ಕೊಡಬಾರದು; ಇದರ ಚರ್ಚಾಗೋಷ್ಠಿಗಳಲ್ಲೂ ಪ್ರಕಾಶನಗಳಲ್ಲೂ ವ್ಯಕ್ತವಾದ ಅಭಿಪ್ರಾಯಗಳು ಸದಸ್ಯರ ವೈಯಕ್ತಿಕ ಅಭಿಪ್ರಾಯಗಳು. ಬ್ರಿಟನ್ನಿನ ರಾಜನೀತಿಜ್ಞರಲ್ಲಿ ಪ್ರಮುಖರಾದವರೇ ಇದರ ಅಧ್ಯಕ್ಷರು-ವೈಕೌಂಟ್ ಸೆಸಿಲ್, ವಿನ್‌ಸ್ಟನ್‌ ಚರ್ಚಿಲ್‌, ಮೇಜರ್ ಅಟ್ಲೀ ಮೊದಲಾದವರು. ಬ್ರಿಟನ್ನಿನ ಪ್ರಧಾನಮಂತ್ರಿ ಅಧಿಕಾರದ ಕಾರಣದಿಂದಾಗಿ ನೇಮಕಗೊಂಡ ಉಪಾಧ್ಯಕ್ಷ. ಇದರ ಆಶ್ರಿತ ಸಂಸ್ಥೆಗಳು ಕೆನಡ, ಆಸ್ಟ್ರೇಲಿಯ ಮತ್ತು ಪಾಕಿಸ್ತಾನಗಳಲ್ಲಿವೆ. ಸಂಸ್ಥೆಯ ಸದಸ್ಯತ್ವ ಕೇವಲ ಆಮಂತ್ರಣಗಳ ಮೂಲಕ. ಆದ್ದರಿಂದ ಇದಕ್ಕೆ ವಿದ್ವಾಂಸರಲ್ಲಿ ಅಧಿಕ ಮನ್ನಣೆ, ಪುರಸ್ಕಾರ. ಸದಸ್ಯರ ಸಂಖ್ಯೆ ಸು. 3,000. ಪುಸ್ತಕಾಲಯದಲ್ಲಿ 10 ಲಕ್ಷಕ್ಕೆ ಮೀರಿ ಗ್ರಂಥಗಳಿವೆ. ಮುಖ್ಯ ನಿಯತಕಾಲಿಕ ಪ್ರಕಾಶನಗಳು-ಸರ್ವೆ ಆಫ್ ಇಂಟನಾರ್್ಯಷನಲ್ ಅಫೇರ್ಸ್ (ವಾರ್ಷಿಕ); ಬ್ರಿಟಿಷ್ ಬುಕ್ ಆಫ್ ಇಂಟನಾರ್್ಯಷನಲ್ ಲಾ (ವಾರ್ಷಿಕ); ಇಂಟನ್ಯಾಷನಲ್ ಅಫೇರ್ಸ್ (ತ್ರೈಮಾಸಿಕ); ದಿ ವಲ್ರ್್ಟ ಟುಡೇ (ಮಾಸಿಕ). ಇವಲ್ಲದೆ ಹಲವಾರು ಇತರ ಉತ್ತಮ ಪ್ರಕಾಶನಗಳೂ ಉಂಟು.

ಬಾಹ್ಯ ಸಂಪರ್ಕಗಳು

Tags:

ಪ್ಯಾರಿಸ್

🔥 Trending searches on Wiki ಕನ್ನಡ:

ಕ್ಯಾನ್ಸರ್ಹುಯಿಲಗೋಳ ನಾರಾಯಣರಾಯಅಂಗವಿಕಲತೆಚುನಾವಣೆಮಗುವಿನ ಬೆಳವಣಿಗೆಯ ಹಂತಗಳುಭಾರತೀಯ ಜನತಾ ಪಕ್ಷಭಾರತೀಯ ಕಾವ್ಯ ಮೀಮಾಂಸೆಹೆಚ್.ಡಿ.ಕುಮಾರಸ್ವಾಮಿಸೇಬುಶುಕ್ರಮೌರ್ಯ ಸಾಮ್ರಾಜ್ಯಕಲ್ಯಾಣ್ಅಕ್ಕಮಹಾದೇವಿಮರಓಂ ನಮಃ ಶಿವಾಯಯೂಟ್ಯೂಬ್‌ಮೂಲಧಾತುಗಳ ಪಟ್ಟಿಕರ್ನಾಟಕ ಸರ್ಕಾರಶಿಕ್ಷಣಟಿ. ವಿ. ವೆಂಕಟಾಚಲ ಶಾಸ್ತ್ರೀಗ್ರಹಚದುರಂಗದ ನಿಯಮಗಳುಗಣೇಶ ಚತುರ್ಥಿಗಣೇಶ್ (ನಟ)ಭಾರತದ ಮುಖ್ಯ ನ್ಯಾಯಾಧೀಶರುಚಂದ್ರಗುಪ್ತ ಮೌರ್ಯಯಶವಂತರಾಯಗೌಡ ಪಾಟೀಲಸೂರ್ಯಭಾರತದ ಉಪ ರಾಷ್ಟ್ರಪತಿರಾಮ್ ಮೋಹನ್ ರಾಯ್ದಶರಥಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ವ್ಯಾಕರಣಭಾರತದ ಆರ್ಥಿಕ ವ್ಯವಸ್ಥೆಕೃಷ್ಣರಾಜಸಾಗರವೇದಬಸವೇಶ್ವರಸಾವಿತ್ರಿಬಾಯಿ ಫುಲೆವಚನಕಾರರ ಅಂಕಿತ ನಾಮಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಬಿ.ಎಸ್. ಯಡಿಯೂರಪ್ಪಹನುಮಂತಬೆಂಗಳೂರು ಕೋಟೆಮಾದಿಗವೀರಪ್ಪ ಮೊಯ್ಲಿಚಂದ್ರನೆಪೋಲಿಯನ್ ಬೋನಪಾರ್ತ್ಆಯ್ಕಕ್ಕಿ ಮಾರಯ್ಯಶ್ರೀಪಾದರಾಜರುಎಸ್.ಎಲ್. ಭೈರಪ್ಪಬಸವರಾಜ ಕಟ್ಟೀಮನಿಜೋಳಭಾರತಊಳಿಗಮಾನ ಪದ್ಧತಿಸುದೀಪ್ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಕನ್ನಡದ ಉಪಭಾಷೆಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬ್ರಹ್ಮ ಸಮಾಜಲಕ್ಷ್ಮೀಶಚಂದ್ರಶೇಖರ ಕಂಬಾರಸಂಧಿರತ್ನಾಕರ ವರ್ಣಿತಿಂಥಿಣಿ ಮೌನೇಶ್ವರರಾಷ್ಟ್ರೀಯ ಸೇವಾ ಯೋಜನೆಮಾಲಿನ್ಯಇಸ್ಲಾಂ ಧರ್ಮದೇವನೂರು ಮಹಾದೇವಸೂಕ್ಷ್ಮ ಅರ್ಥಶಾಸ್ತ್ರಜಯಂತ ಕಾಯ್ಕಿಣಿಮಳೆಗಾಲವ್ಯವಹಾರವ್ಯಾಸರಾಯರುನೆಲ್ಸನ್ ಮಂಡೇಲಾವ್ಯಾಯಾಮಸಾಕ್ರಟೀಸ್ಜನ್ನಬಿ. ಜಿ. ಎಲ್. ಸ್ವಾಮಿನಾಮಪದ🡆 More