ಆಳ್ವಾಸ್ ಕಾಲೇಜಿನರು ವಿದ್ಯಾರ್ಥಿಗಳ ಅಂಕಕ್ಕೆ ಅನುಗುಣವಾಗಿ ವಿಕಿಪೀಡಿಯ ಅಸೋಸಿಯೇಶನ್ ಚಟುವಟಿಕೆಯನ್ನು ಕೂಡ ನಡೆಸುತ್ತಿದ್ದಾರೆ. ಜೊತೆಗೆ ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಜೊತೆಗೂಡಿ ಹಲವಾರು ಕನ್ನಡ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಎರಡು ದಿನಗಳ ಕಾನ್ಪರೆನ್ಸ್ ಮತ್ತು ಟ್ರೈನಿಂಗ್ ನಡೆಸಬೇಕೆಂದು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪ್ ವತಿಯಿಂದ ತೀರ್ಮಾನಿಸಿದ್ದೇವೆ.
ಸಮಾವೇಶ ಮತ್ತು ತರಬೇತಿಯ - ಉದ್ದೇಶ ಮತ್ತು ಅಗತ್ಯ
- ಕರಾವಳಿ ಪ್ರದೇಶದಲ್ಲಿ ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ನಂತರ ಶಿಕ್ಷಣಕ್ಕೆ ಸಂಬಂಧಿಸಿ ಹೆಚ್ಚು ಹೆಚ್ಚು ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿವೆ. ಕರಾವಳಿಯ ಪ್ರಮುಖ ಮೂರು ಕಾಲೇಜುಗಳಾದ ಸಂತ ಅಲೋಶಿಯಸ್ ಕಾಲೇಜು-ಮಂಗಳೂರು, ಆಳ್ವಾಸ್ ಕಾಲೇಜು ಮೂಡಬಿದಿರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು-ಉಜಿರೆ ಇಲ್ಲಿ ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಯುತ್ತಿದೆ. ಈ ಕಾಲೇಜುಗಳ ಜೊತೆಗೆ ಇನ್ನಷ್ಟು ಕಾಲೇಜುಗಳಲ್ಲಿ ಶಿಕ್ಷಣ ಯೋಜನೆಯನ್ನು ವಿಸ್ತರಿಸಲು ಈ ಸಮಾವೇಶದಿಂದ ಸಾಧ್ಯವಾಗುತ್ತದೆ.
- ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
- ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ವಿಕಿಪೀಡಿಯ ವಿದ್ಯಾರ್ಥಿ ಅಸೋಸಿಯೇಶನ್ ನಡೆಸಿಕೊಂಡು ಬರಲಾಗುತ್ತಿದೆ.
- ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಪ್ರಥಮ ವರ್ಷದ ಮೊದಲ ಚತುರ್ಮಾಸದಲ್ಲಿ ವಿಕಿಪೀಡಿಯ ಲೇಖನ ತಯಾರಿಸುವ ಕುರಿತಂತೆ ಕ್ರಿಯಾತ್ಮಕ ಕನ್ನಡ ಚಟುವಟಿಕೆ ಭಾಗವನ್ನು ಕಳೆದ ವರ್ಷದಿಂದ ಪಠ್ಯದಲ್ಲಿ ಇರಿಸಲಾಗಿದೆ. ಹೀಗಾಗಿ ಹಲವಾರು ಕಾಲೇಜಿನವರು ವಿದ್ಯಾರ್ಥಿಗಳಿಗೆ ಶಿಕ್ಷಣ ಯೋಜನೆಯನ್ನು ನಡೆಸಬೇಕೆಂದು ಮುಂದೆ ಬಂದಿದ್ದಾರೆ. ಆದರೆ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಅಂತಹವರಿಗೆ ಈ ಸಮಾವೇಶ ಸಹಕಾರಿ.
- ಈ ಎರಡು ದಿನಗಳಲ್ಲಿ ಭಾಗವಹಿಸುವ ಆಸಕ್ತ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತರಬೇತಿ ಪಡೆದು, ಅವರು ಮುಂದಿನ ಹಂತದಲ್ಲಿ ಪ್ರತ್ಯೇಕ ರಾಪಿಡ್ ಗ್ರಾಂಟ್ಗೆ ಅರ್ಹರಾಗಿ ಅರ್ಜಿ ಹಾಕಲು ಮಾರ್ಗದರ್ಶನ ನೀಡುವುದು ತರಬೇತಿಯ ಉದ್ದೇಶವಾಗಿದೆ.
ಸಾಧನೆ
- ವಿಕಿಪೀಡಿಯ ಗ್ರಾಂಟ್ಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದು. ಈ ಮೂಲಕ ಹೆಚ್ಚು ಸಂಪಾದನೋತ್ಸವಕ್ಕೆ ಮೂಲ ಸಂಪನ್ಮೂಲವನ್ನು ಪಡೆಯುವಂತೆ ಅರಿವು ಮೂಡಿಸುವುದು.
- ಅಂದಾಜು ೩೦ ಮಂದಿ ಹೊಸಬರು ಎರಡೂ ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರಿಗೆ ತರಬೇತಿ ನೀಡಿ, ಅವರನ್ನು ಕನ್ನಡ ವಿಕಿಪೀಡಿಯ ಸಂಪಾದಕರಾಗಿ ಪರಿಚಯಿಸುವುದು. ಅವರು ಮುಂದಿನ ದಿನಗಳಲ್ಲಿ ಕನ್ನಡ ವಿಕಿಪೀಡಿಯದ ರಾಯಭಾರಿಗಳಂತೆ ಕರಾವಳಿಯ ಹಲವು ಕಾಲೇಜುಗಳಲ್ಲಿ ಕಾರ್ಯನಿರ್ಹಿಸಲಿದ್ದಾರೆ.
ಯೋಜನೆ ತಯಾರಿಸಿದವರು
ಯೋಜನೆಯ ಮಾರ್ಗದರ್ಶಕರು ಮತ್ತು ಸಂಪನ್ಮೂಲ ವ್ಯಕ್ತಿ
ಸಹಯೋಗ
- ವಿಕಿಮೀಡಿಯ ಫೌಂಡೇಶನ್
- ಕನ್ನಡ ವಿಭಾಗ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
- ಬಿಸಿಎ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
- ವಿಕಾಸ, ಕನ್ನಡ ಅಧ್ಯಾಪಕರ ಸಂಘ, ಮಂಗಳೂರು.
ಮೇಲ್ವಿಚಾರಣೆ
- ಡಾ. ಸರಸ್ವತಿ ಕುಮಾರಿ ಕೆ., ಮುಖ್ಯಸ್ಥರು, ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
- ಡಾ. ರವೀಂದ್ರ ಸ್ವಾಮಿ, ಮುಖ್ಯಸ್ಥರು, ಬಿಸಿಎ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
- ಪ್ರೊ. ಕೃಷ್ಣಮೂರ್ತಿ, ಅಧ್ಯಕ್ಷರು, ವಿಕಾಸ, ಕನ್ನಡ ಅಧ್ಯಾಪಕರ ಸಂಘ, ಮಂಗಳೂರು.
ಸಂಘಟಕರು
ದಿನಾಂಕಗಳು ಮತ್ತು ಸ್ಥಳ
ಕಾರ್ಯಕ್ರಮ ವಿವರ
ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ - ಸಮಾವೇಶ ಮತ್ತು ತರಬೇತಿ ಪ್ರಯುಕ್ತ ಈ ಕೆಳಗಿನಂತೆ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೊದಲನೆಯ ದಿನ
- ಫೆಬ್ರವರಿ ೯, ೨೦೧೯, ಶನಿವಾರ, ಬೆಳಿಗ್ಗೆ ೯:00 ಗಂಟೆಯಿಂದ ಸಂಜೆ ೫:೦೦ ರ ವರೆಗೆ
ಸಮಾವೇಶ (ಸೆಮಿನಾರ್/ಕಾನ್ಫರೆನ್ಸ್)
- ಉದ್ಘಾಟನೆ
- ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ವಿವರಣೆ - ಏನು, ಯಾಕೆ, ಹೇಗೆ? ವಿದ್ಯಾರ್ಥಿಗಳ ಕೆಲಸವನ್ನು ಪರಿಶೀಲಿಸುವುದು ಹೇಗೆ? ವಿವಿಧ ಸವಲತ್ತುಗಳ ಪರಿಚಯ. ಗ್ರಾಂಟ್ಗೆ ಅರ್ಜಿ ಹಾಕುವುದು ಹೇಗೆ?
- ತಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಪ್ರಬಂಧ ಮಂಡನೆ ಮತ್ತು ಒಬ್ಬ ವಿದ್ಯಾರ್ಥಿಯಿಂದ ತನ್ನ ಅನುಭವ ಮಂಡನೆ-
- ಕ್ರೈಸ್ಟ್ ವಿ.ವಿ. ಬೆಂಗಳೂರು
- ಸಂತ ಅಲೋಶಿಯಸ್ ಕಾಲೇಜು ಮಂಗಳೂರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ
- ಆಳ್ವಾಸ್ ಕಾಲೇಜು ಮೂಡುಬಿದಿರೆ
- ಆಳ್ವಾಸ್ ಕಾಲೇಜು ಮೂಡುಬಿದಿರೆಯ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಯಿಂದ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಬಗ್ಗೆ ಪ್ರಬಂಧ ಮಂಡನೆ ಮತ್ತು ಅನುಭವ ಮಂಡನೆ
- ವಿಶೇಷ ಅನುಭವ ಮಂಡನೆ -
- ಗಣ್ಯರೊಡನೆ ಚರ್ಚೆ (Panel discussion)
ಎರಡನೆಯ ದಿನ
- ಫೆಬ್ರವರಿ ೧೦, ೨೦೧೯, ಭಾನುವಾರ, ಬೆಳಿಗ್ಗೆ ೯:00 ಗಂಟೆಯಿಂದ ಸಂಜೆ ೫:೦೦ ರ ವರೆಗೆ
ಕನ್ನಡ ವಿಕಿಪೀಡಿಯ ತರಬೇತಿ
ಭಾಗವಹಿಸುವವರು-
- ಸರಕಾರಿ ಕಾಲೇಜು, ಕಾಸರಗೋಡಿನಿಂದ ಇಬ್ಬರು
- ಎಸ್.ಡಿ.ಎಂ ಕಾಲೇಜು, ಉಜಿರೆಯಿಂದ ಒಬ್ಬರು
- ಆಳ್ವಾಸ್ ಕಾಲೇಜು, ಮೂಡಬಿದಿರೆಯಿಂದ ಇಬ್ಬರು
- ಗೋವಿಂದ ದಾಸ್ ಪದವಿ ಕಾಲೇಜು, ಸುರತ್ಕಲ್ನಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳದಿಂದ ಇಬ್ಬರು
- ನೆಹರೂ ಮೆಮೋರಿಯಲ್ ಮಹಾವಿದ್ಯಾಲಯದಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲದಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವಿನಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲ್ಕಟ್ಟೆಯಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರಿನಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರಿನಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿಯಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರಿನಿಂದ ಇಬ್ಬರು
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಲ್ಮಠ ಮಂಗಳೂರಿನಿಂದ ಇಬ್ಬರು
- ಮಹಿಳೆಯರ ಸರಕಾರಿ ಕಾಲೇಜು, ಉಡುಪಿಯಿಂದ ಮೂವರು
- ತುಮಕೂರು ವಿಶ್ವವಿದ್ಯಾಲಯದಿಂದ ಇಬ್ಬರು
- ಸಹ್ಯಾದ್ರಿ ಕಾಲೇಜು, ಶಿವಮೊಗ್ಗದಿಂದ ಒಬ್ಬರು
- ಎಸ್. ಜಿ. ಕಾಲೇಜು, ಕೊಪ್ಪಳದಿಂದ ಒಬ್ಬರು
- ರಾಣಿ ಚೆನ್ನಮ್ಮ ವಿ.ವಿ., ಬೆಳಗಾವಿಯಿಂದ ಒಬ್ಬರು
- ಸಂತ ಅಲೋಶಿಯಸ್ ಕಾಲೇಜು, ಮಂಗಳೂರಿನಿಂದ ೧೪ ಮಂದಿ ಪ್ರಾಧ್ಯಾಪಕರು
ಭಾಗವಹಿಸಿದ ಕಾಲೇಜುಗಳು
- ಆಳ್ವಾಸ್ ಕಾಲೇಜು, ಮೂಡಬಿದಿರೆ
- ಸಂಶೋಧಕ ಕೇಂದ್ರ, ಕಾಸರಗೋಡು
- ಕೆನರಾ ಕಾಲೇಜು, ಮಂಗಳೂರು
- ಕ್ರೈಸ್ಟ್ ವಿಶ್ವವಿದ್ಯಾನಿಲಯ, ಬೆಂಗಳೂರು
- ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಜೇಶ್ವರ, ಕಾಸರಗೋಡು
- ತುಮಕೂರು ವಿ.ವಿ., ತುಮಕೂರು
- ರಾಣಿ ಚೆನ್ನಮ್ಮ ವಿ.ವಿ., ಬೆಳಗಾವಿ
- ಎಸ್.ಜಿ.ಕಾಲೇಜು, ಕೊಪ್ಪಳ
- ಎಸ್.ಡಿ.ಎಂ. ಕಾಲೇಜು ಉಜಿರೆ, ಬೆಳ್ತಂಗಡಿ
- ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ), ಮಂಗಳೂರು.
- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು.
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ.
- ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗವಹಿಸಿದವರು ಮತ್ತು ಲೇಖನಗಳು
- --Vishwanatha Badikana (ಚರ್ಚೆ) ೦೬:೩೬, ೧೦ ಫೆಬ್ರುವರಿ ೨೦೧೯ (UTC) ೧. ಅಂಶಗಣ
- --ಪವನಜ (ಚರ್ಚೆ) ೦೬:೪೨, ೧೦ ಫೆಬ್ರುವರಿ ೨೦೧೯ (UTC)
- --Archana Devdas (ಚರ್ಚೆ) ೦೬:೪೯, ೧೦ ಫೆಬ್ರುವರಿ ೨೦೧೯ (UTC)
- --JESHMA NISHITHA DSOUZA (ಚರ್ಚೆ) ೦೬:೫೨, ೧೦ ಫೆಬ್ರುವರಿ ೨೦೧೯ (UTC)
- --Ravindra Swami K (ಚರ್ಚೆ) ೦೬:೫೩, ೧೦ ಫೆಬ್ರುವರಿ ೨೦೧೯ (UTC)
- --Dhanalakshmi .K. T (ಚರ್ಚೆ) ೦೭:೧೪, ೧೦ ಫೆಬ್ರುವರಿ ೨೦೧೯ (UTC)
- --Babitha managalore (ಚರ್ಚೆ) ೦೭:೧೫, ೧೦ ಫೆಬ್ರುವರಿ ೨೦೧೯ (UTC)
- --Shettypremalatha (ಚರ್ಚೆ) ೦೭:೧೬, ೧೦ ಫೆಬ್ರುವರಿ ೨೦೧೯ (UTC)
- --ನಾಗರತ್ನ ಪರಾಂಡೆ (ಚರ್ಚೆ) ೦೭:೧೮, ೧೦ ಫೆಬ್ರುವರಿ ೨೦೧೯ (UTC)
- Banuprasad k n (ಚರ್ಚೆ) ೦೭:೧೮, ೧೦ ಫೆಬ್ರುವರಿ ೨೦೧೯ (UTC)
- --Nagarajdandoti (ಚರ್ಚೆ) ೦೭:೧೯, ೧೦ ಫೆಬ್ರುವರಿ ೨೦೧೯ (UTC)
- --Vidyachar (ಚರ್ಚೆ) ೦೭:೧೯, ೧೦ ಫೆಬ್ರುವರಿ ೨೦೧೯ (UTC)
- --Bmchandrashekhar (ಚರ್ಚೆ) ೦೭:೨೦, ೧೦ ಫೆಬ್ರುವರಿ ೨೦೧೯ (UTC)
- --Kavitha Bharadwaja (ಚರ್ಚೆ) ೦೭:೨೦, ೧೦ ಫೆಬ್ರುವರಿ ೨೦೧೯ (UTC)
- --Rashamin25 (ಚರ್ಚೆ) ೦೭:೨೧, ೧೦ ಫೆಬ್ರುವರಿ ೨೦೧೯ (UTC)
- --Chandanaa K S (ಚರ್ಚೆ) ೦೭:೨೧, ೧೦ ಫೆಬ್ರುವರಿ ೨೦೧೯ (UTC)
- --Santhosh notagar (ಚರ್ಚೆ) ೦೭:೨೨, ೧೦ ಫೆಬ್ರುವರಿ ೨೦೧೯ (UTC)
- --ಮಹಬೂಬಅಲಿ ಅ ನದಾಫ (ಚರ್ಚೆ) ೦೭:೨೩, ೧೦ ಫೆಬ್ರುವರಿ ೨೦೧೯ (UTC)
- --ಅಪರ್ಣ ಕೆ (ಚರ್ಚೆ) ೦೭:೨೪, ೧೦ ಫೆಬ್ರುವರಿ ೨೦೧೯ (UTC)
- --Gururajprabhuk (ಚರ್ಚೆ) ೦೭:೨೫, ೧೦ ಫೆಬ್ರುವರಿ ೨೦೧೯ (UTC)
- --Manjunathsagar (ಚರ್ಚೆ) ೦೭:೨೫, ೧೦ ಫೆಬ್ರುವರಿ ೨೦೧೯ (UTC)
- --Prashantha Kaje (ಚರ್ಚೆ) ೦೭:೨೬, ೧೦ ಫೆಬ್ರುವರಿ ೨೦೧೯ (UTC)
- --Avinash N kulal (ಚರ್ಚೆ) ೦೭:೨೬, ೧೦ ಫೆಬ್ರುವರಿ ೨೦೧೯ (UTC)
- --AKKHIL.M.G (ಚರ್ಚೆ) ೦೭:೩೦, ೧೦ ಫೆಬ್ರುವರಿ ೨೦೧೯ (UTC)
- --Sudhakumarik (ಚರ್ಚೆ) ೦೭:೩೩, ೧೦ ಫೆಬ್ರುವರಿ ೨೦೧೯ (UTC)
- --ANU RACHANA (ಚರ್ಚೆ) ೦೮:೪೧, ೧೦ ಫೆಬ್ರುವರಿ ೨೦೧೯ (UTC)
- --Kavitha G. Kana (ಚರ್ಚೆ) ೦೯:೨೯, ೧೦ ಫೆಬ್ರುವರಿ ೨೦೧೯ (UTC)
- --Bharathesha Alasandemajalu (ಚರ್ಚೆ) ೦೯:೩೯, ೧೦ ಫೆಬ್ರುವರಿ ೨೦೧೯ (UTC)
- --Kishorekumarrai (ಚರ್ಚೆ) ೦೯:೪೫, ೧೦ ಫೆಬ್ರುವರಿ ೨೦೧೯ (UTC)
ವರದಿ
ಈ ವರದಿಯು ಪೂರ್ಣಗೊಂಡಿರುವ ವರದಿ ಪುಟವನ್ನು ನೋಡಿ. ಚರ್ಚಾ ಪುಟದಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕೆಂಬ ಉದ್ದೇಶದಿಂದ ದಿನಾಂಕ: ೦೯ ಮತ್ತು ೧೦ ಫೆಬ್ರವರಿ ೨೦೧೯. ಶನಿವಾರ ಮತ್ತು ಭಾನುವಾರ ಎರಡು ದಿನಗಳಲ್ಲಿ ಬೆಳಿಗ್ಗೆ ೯:00 ಗಂಟೆಯಿಂದ ಸಂಜೆ ೫:೦೦ ರ ವರೆಗೆ ಸಂತ ಅಲೋಶಿಯಸ್ ಕಾಲೇಜು, ಮಂಗಳೂರಿನಲ್ಲಿ. ಗೂಗ್ಲ್ ಮ್ಯಾಪ್. ಸಮಾವೇಶ ಮತ್ತು ತರಬೇತಿಯನ್ನು ಎರಡು ದಿನಗಳಲ್ಲಿ ನಡೆಸಲಾಯಿತು. ಒಟ್ಟು ೧೩ ಕಾಲೇಜುಗಳಿಂದ ವಿವಿಧ ಶಿಸ್ತಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಮಾವೇಶ ಮತ್ತು ತರಬೇತಿಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು.
ಭಾಗವಹಿಸಿರುವ ಕಾಲೇಜುಗಳು
ಈ ಸಮಾವೇಶ ಮತ್ತು ತರಬೇತಿಗೆ ಪೂರ್ವ ತಯಾರಿ ನಡೆಸಿರುವಂತೆ ಕರಾವಳಿ ಪ್ರದೇಶದ ವಿವಿಧ ೨೦ ಕಾಲೇಜುಗಳಿಗೆ ಕರೆ ನೀಡಲಾಯಿತು. ಅವುಗಳಲ್ಲಿ ೧೩ ಕಾಲೇಜುಜಿನವರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವರು. ಭಾಗವಹಿಸಿರುವ ಕಾಲೇಜುಗಳ ಹೆಸರುಗಳು ಈ ಕೆಳಗಿನಂತಿವೆ;
- ಆಳ್ವಾಸ್ ಕಾಲೇಜು, ಮೂಡಬಿದಿರೆ
- ಸಂಶೋಧಕ ಕೇಂದ್ರ, ಕಾಸರಗೋಡು
- ಕೆನರಾ ಕಾಲೇಜು, ಮಂಗಳೂರು
- ಕ್ರೈಸ್ಟ್ ವಿಶ್ವವಿದ್ಯಾನಿಲಯ, ಬೆಂಗಳೂರು
- ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಜೇಶ್ವರ, ಕಾಸರಗೋಡು
- ತುಮಕೂರು ವಿ.ವಿ., ತುಮಕೂರು
- ರಾಣಿ ಚೆನ್ನಮ್ಮ ವಿ.ವಿ., ಬೆಳಗಾವಿ
- ಎಸ್.ಜಿ.ಕಾಲೇಜು, ಕೊಪ್ಪಳ
- ಎಸ್.ಡಿ.ಎಂ. ಕಾಲೇಜು ಉಜಿರೆ, ಬೆಳ್ತಂಗಡಿ
- ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ), ಮಂಗಳೂರು.
- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು.
- ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ.
- ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಸಮಾವೇಶ ಮತ್ತು ತರಬೇತಿ
ಈ ಸಮಾವೇಶವನ್ನು ಮಂಗಳೂರಿನಲ್ಲೇ ಇರಿಸಿಕೊಳ್ಳುವುದು ಪ್ರಮುಖ ಉದ್ದೇಶವಾಗಿತ್ತು. ಯಾಕೆಂದರೆ ಇತ್ತೀಚೆಗಿನ ದಿನಗಳಲ್ಲಿ ಕನ್ನಡ ವಿಕಿಪೀಡಿಯದ ಬಹಳಷ್ಟು ಲೇಖಕರು ಕರಾವಳಿ ಪ್ರದೇಶದಿಂದ ಮುಂದೆ ಬರುತ್ತಿದ್ದಾರೆ. ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಎಂಬ ಸಂಪಾದಕರ ಸಮುದಾಯವು ಕರಾವಳಿಯ ಸಂತ ಅಲೋಶಿಯಸ್ ಕಾಲೇಜು, ಆಳ್ವಾಸ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು - ಇಲ್ಲಿ ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಂಡು ಕ್ರಿಯಾಶೀಲವಾಗಿ ವಿಕಿಪೀಡಿಯದ ಕೆಲಸ ಆರಂಭಿಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಪಾದಕರನ್ನು ಹೆಚ್ಚಿಸುವ ಮತ್ತು ಈ ಪ್ರದೇಶದ ಹಲವಾರು ಸಂಸ್ಥೆಗಳಲ್ಲಿ ವಿಕಿಪೀಡಿಯ ಒಂದು ಆಯ್ಕೆಯ ವಿಷಯವಾಗಿ ಸಂಘಟನೆಗಳಲ್ಲಿ, ಕಾಲೇಜುಗಳಲ್ಲಿ ಮುಂದೆ ಬರಬೇಕೆಂಬ ಆಶಯವನ್ನು ಹೊಂದಿದೆ. ಆ ಪ್ರಕಾರ ಕರಾವಳಿಯಲ್ಲಿ ಈಗಾಗಲೇ ಒಂದಷ್ಟು ಕೆಲಸಗಳು ಆರಂಭವಾಗಿವೆ.
ಸಮಾವೇಶದ ಉದ್ದೇಶ
- ಕರಾವಳಿ ಪ್ರದೇಶದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಸಂಬಂಧಿಸಿದಂತೆ ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ನಂತರ ಶಿಕ್ಷಣಕ್ಕೆ ಸಂಬಂಧಿಸಿ ಹೆಚ್ಚು ಹೆಚ್ಚು ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿವೆ. ಕರಾವಳಿಯ ಪ್ರಮುಖ ಮೂರು ಕಾಲೇಜುಗಳಾದ ಸಂತ ಅಲೋಶಿಯಸ್ ಕಾಲೇಜು-ಮಂಗಳೂರು, ಆಳ್ವಾಸ್ ಕಾಲೇಜು ಮೂಡುಬಿದಿರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು-ಉಜಿರೆ ಇಲ್ಲಿ ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಯುತ್ತಿದೆ. ಈ ಕಾಲೇಜುಗಳ ಜೊತೆಗೆ ಇನ್ನಷ್ಟು ಕಾಲೇಜುಗಳಲ್ಲಿ ಶಿಕ್ಷಣ ಯೋಜನೆಯನ್ನು ವಿಸ್ತರಿಸಲು ಈ ಸಮಾವೇಶದಿಂದ ಸಾಧ್ಯವಾಗುತ್ತದೆ ಎಂಬ ಸ್ಪಷ್ಟ ನಿಲುವು ಇತ್ತು. ಆ ಪ್ರಕಾರ ಕೆಲವು ಕಾಲೇಜುಗಳ ಪ್ರಾಧ್ಯಾಪಕರು ಶಿಕ್ಷಣ ಯೋಜನೆಯನ್ನು ಆರಂಭಿಸುವ ಯೋಚನೆಯನ್ನು ವ್ಯಕ್ತಪಡಿಸಿರುತ್ತಾರೆ.
- ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ವಿಕಿಪೀಡಿಯ ವಿದ್ಯಾರ್ಥಿ ಅಸೋಸಿಯೇಶನ್ ಆರಂಭಿಸುವಂತೆ ಮಾರ್ಗಸೂಚಿಯನ್ನು ರೂಪಿಸಿ ಕೊಡಲಾಗಿದೆ.
- ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಪ್ರಥಮ ವರ್ಷದ ಮೊದಲ ಚತುರ್ಮಾಸದಲ್ಲಿ ವಿಕಿಪೀಡಿಯ ಲೇಖನ ತಯಾರಿಸುವ ಕುರಿತಂತೆ ಕ್ರಿಯಾತ್ಮಕ ಕನ್ನಡ ಚಟುವಟಿಕೆ ಭಾಗವನ್ನು ಕಳೆದ ವರ್ಷದಿಂದ ಪಠ್ಯದಲ್ಲಿ ಇರಿಸಲಾಗಿದೆ. ಹೀಗಾಗಿ ಹಲವಾರು ಕಾಲೇಜಿನವರು ವಿದ್ಯಾರ್ಥಿಗಳಿಗೆ ಶಿಕ್ಷಣ ಯೋಜನೆಯನ್ನು ನಡೆಸಬೇಕೆಂದು ಮುಂದೆ ಬಂದಿದ್ದಾರೆ. ಅವರಿಗೆ ಆರ್ಥಿಕ ಸಂಪನ್ಮೂಲದ ಕೊರತೆಯಿದ್ದರೂ ಇಂತಹ ಚಟುವಟಿಕೆಯಿಂದ ಇನ್ನಷ್ಟು ಹುರುಪುಗೊಳ್ಳುವಂತೆ ಪ್ರಯತ್ನಿಸುವುದಾಗಿದೆ.
- ಈ ಎರಡು ದಿನಗಳಲ್ಲಿ ಭಾಗವಹಿಸಿದ ಆಸಕ್ತ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತರಬೇತಿ ಪಡೆದು, ಅವರು ಮುಂದಿನ ಹಂತದಲ್ಲಿ ಪ್ರತ್ಯೇಕ ರಾಪಿಡ್ ಗ್ರಾಂಟ್ಗೆ ಅರ್ಹರಾಗಿ ಅರ್ಜಿ ಹಾಕಲು ಉದ್ದೇಶಿತ ಮಾರ್ಗದರ್ಶನ ನೀಡಿಲಾಗಿದೆ.
ಸಮಾವೇಶದ ಅಗತ್ಯ
ವಿಕಿಪೀಡಿಯ ಶಿಕ್ಷಣ ಯೋಜನೆ - ಸಮಾವೇಶ ಮತ್ತು ತರಬೇತಿ ಯಾಕೆ ಬೇಕು? ಮತ್ತು ಸಮಾವೇಶದ ಅಗತ್ಯವೇನು ? ಎಂಬ ಪ್ರಶ್ನೆಗಳನ್ನು ಚರ್ಚೆ ಮತ್ತು ತೀರ್ಮಾನಗಳ ಮೂಲಕ ತೆಗೆದುಕೊಳ್ಳಲಾಯಿತು.
- ಕನ್ನಡವು ಉನ್ನತ ಶಿಕ್ಷಣದಲ್ಲಿ ಕ್ರಿಯಾಶೀಲವಾಗಿ ಬಳಕೆಯಾಗುವುದಕ್ಕೆ ಈ ವಿಕಿಪೀಡಿಯ ಶಿಕ್ಷಣ ಯೋಜನೆಯೂ ಪ್ರಮುಖವಾಗುತ್ತದೆ.
- ಕಾಲೇಜಿನ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಓದುವುದರೊಂದಿಗೆ ತಮ್ಮ ಪಠ್ಯಕ್ಕೆ ಪೂರಕವಾದ ಪಠ್ಯಕ್ರಮದಲ್ಲಿ ಇಲ್ಲದ ವಿಚಾರಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ.
- ಕನ್ನಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪುಸ್ತಕಗಳನ್ನು ಹುಡುಕಾಡುವ ಸಂಭವಗಳೇ ಹೆಚ್ಚು. ಅಂತಹ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್, ಕನ್ನಡ ವಿಕ್ಸ್ನರಿ, ಕನ್ನಡ ವಿಕಿಡಾಟ ಇತ್ಯಾದಿ ಕಡೆಗಳಲ್ಲಿ ಸಮಗ್ರ ಮಾಹಿತಿಯನ್ನು ಹುಡುಕಿ ಓದಲು ಅನುಕೂಲ ಮಾಡಿಕೊಡಬೇಕಾಗಿದೆ. ಅದಕ್ಕಾಗಿ ಕನ್ನಡ ಓದಬಲ್ಲ, ಬರೆಯಬಲ್ಲ, ಟೈಪ್ ಮಾಡಬಲ್ಲ ಸಾವಿರಾರು ಮಂದಿ ವಿಕಿಪೀಡಿಯದಲ್ಲಿ ಕೆಲಸ ಮಾಡಿದರೆ ಭವಿಷ್ಯದ ಓದುಗರು ಇದರ ಲಾಭ ಪಡೆದುಕೊಳ್ಳಬಹುದು.
- ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಒಂದು ವಿಕಿಪೀಡಿಯ ಸಂಘಟನೆ ಮತ್ತು ಕ್ರಿಯಾ ಚಟುವಟಿಕೆಗಳು ನಡೆದು, ತರಗತಿಗಳಲ್ಲಿ ನಡೆವ ಪ್ರಬಂಧ ತಯಾರಿ ಇತ್ಯಾದಿಗಳನ್ನು ಡೌನ್ಲೋಡ್ ಮಾಡದೆ, ಅಪ್ಲೋಡ್ ಮಾಡುವ ಸಂಸ್ಕೃತಿಯನ್ನು ಹೇಳಿಕೊಡಲು ಈ ಯೋಜನೆ ಪರಿಣಾಮಕಾರಿ.
ಸಮಾವೇಶ
ಮೊದಲನೆಯ ದಿನ ವಿಕಿಪೀಡಿಯ ಶಿಕ್ಷಣ ಯೋಜನೆಯ ಉದ್ದೇಶಿತ ಯೋಜನೆಯಂತೆ ಈ ಸಮಾವೇಶ ಆರಂಭಗೊಂಡಿತು. ಫೆಬ್ರವರಿ ೯, ೨೦೧೯, ಶನಿವಾರ, ಬೆಳಿಗ್ಗೆ ೯:00 ಗಂಟೆಯಿಂದ ಸಂಜೆ ೫:೦೦ ರ ವರೆಗೆ ಸಮಾವೇಶ (ಸೆಮಿನಾರ್/ಕಾನ್ಫರೆನ್ಸ್)
- ೯.೦೦ರಿಂದ ೧೦.೩೦ರ ವರೆಗೆ ಟುಟೋರಿಯಲ್ ವಿಡಿಯೋ : ಕನ್ನಡ ವಿಕಿಪೀಡಿಯ ಲೇಖನಗಳನ್ನು ಸಂಪಾದಿಸುವ ಬಗೆಗೆ ಟುಟೋರಿಯಲ್ ವಿಡಿಯೋಗಳನ್ನು ತೋರಿಸಲಾಯಿತು.
- ೧೦.೩೦ರಿಂದ ಉದ್ಘಾಟನೆ ಕಾರ್ಯಕ್ರಮ : ಉದ್ಘಾಟನೆ ಮತ್ತು ಕಾರ್ಯಕ್ರಮದ ರೂಪುರೇಷೆ ಪರಿಚಯ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲರಿಂದ ಉದ್ಘಾಟನೆ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಡಾ. ಪ್ರವೀಣ್ ಮಾರ್ಟೀಸ್ರ ಅಧ್ಯಕ್ಷತೆ, ಡಾ. ಯು. ಬಿ. ಪವನಜರು - ಮುಖ್ಯ ಅತಿಥಿ
- ೧೧.೩೦ರಿಂದ ಚಹ ವಿರಾಮ
- ೧೧.೪೫ರಿಂದ ೧.೩೦ರ ವರೆಗೆ : ಕಾರ್ಯಕ್ರಮ ನಡೆಸಿಕೊಟ್ಟವರು - ಡಾ. ಯು.ಬಿ.ಪವನಜ - ವಿಕಿಪೀಡಿಯ ಶಿಕ್ಷಣ ಯೋಜನೆಯ ಪರಿಚಯ - ವಿಕಿಪೀಡಿಯ ಶಿಕ್ಷಣ ಯೋಜನೆ ಏನು? ಯಾಕೆ? ಹೇಗೆ? ವಿದ್ಯಾರ್ಥಿಗಳ ಕೆಲಸವನ್ನು ಪರಿಶೀಲಿಸುವುದು ಹೇಗೆ? ವಿವಿಧ ಸವಲತ್ತುಗಳ ಪರಿಚಯ. ಗ್ರಾಂಟ್ಗೆ ಅರ್ಜಿ ಹಾಕುವುದು ಹೇಗೆ?
- ೧.೩೦ರಿಂದ ೨.೦೦ ಗಂಟೆ ವರೆಗೆ ಊಟದ ವಿರಾಮ
- ೨.೦೦ ರಿಂದ ೫.೦೦ ಗಂಟೆ ವರೆಗೆ ಸಮಾವೇಶ : ತಮ್ಮ ತಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಪ್ರಬಂಧ ಮಂಡನೆ ಮತ್ತು ಒಬ್ಬ ವಿದ್ಯಾರ್ಥಿಯಿಂದ ತನ್ನ ಅನುಭವ ಮಂಡನೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಕ್ರೈಸ್ಟ್ ವಿ.ವಿ. ಬೆಂಗಳೂರು, ಆಳ್ವಾಸ್ ಕಾಲೇಜು ಮೂಡುಬಿದಿರೆಯ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಯಿಂದ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಬಗ್ಗೆ ಪ್ರಬಂಧ ಮಂಡನೆ ಮತ್ತು ಅನುಭವ ಮಂಡನೆ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು
ವಿಷಯ ಮಂಡನೆ
ಬಗೆಗೆ ಮಾಹಿತಿ ಮತ್ತು ವಿಷಯ ಮಂಡನೆ ನಡೆಯಿತು. ತಮ್ಮಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗೆಗೆ ಅನುಭವ ಮತ್ತು ವಿಷಯ ಮಂಡನೆ (ಪ್ರಾದ್ಯಾಪಕ ಮತ್ತು ವಿದ್ಯಾರ್ಥಿ)
- ಎಸ್.ಡಿ.ಎಂ. ಕಾಲೇಜು ಉಜಿರೆ - ಡಾ. ಹಂಪೇಶ್ ಮತ್ತು ಧನ್ಯ ಹೊಳ್ಳ
- ಆಳ್ವಾಸ್ ಕಾಲೇಜು ಮೂಡುಬಿದಿರೆ - ಅಶೋಕ್ ಎ ಮತ್ತು ದುರ್ಗಾಪ್ರಸನ್ನ
- ಕ್ರೈಸ್ಟ್ ವಿ.ವಿ. ಬೆಂಗಳೂರು - ಮಹಾದೇವಪ್ಪ ಮತ್ತು ಧನ್ಯ
- ಸಂತ ಅಲೋಶಿಯಸ್ ಕಾಲೇಜು ಮಂಗಳೂರು - ಡಾ. ವಿಶ್ವನಾಥ ಬದಿಕಾನ ಮತ್ತು ಗೋಪಾಲಕೃಷ್ಣ ಎ.
ತರಬೇತಿ
ಎರಡನೆಯ ದಿನ -ವಿಕಿಪೀಡಿಯ ತರಬೇತಿ
- ಬೆಳಿಗ್ಗೆ ೯.೦೦ ರಿಂದ ೧೨.೩೦ರ ವರೆಗೆ ಲೇಖನ ರಚನೆ ತರಬೇತಿ : ನಡೆಸಿಕೊಟ್ಟವರು ಡಾ. ಯು.ಬಿ.ಪವನಜ ಮತ್ತು ಧನಲಕ್ಷ್ಮಿ
ಛಾಯಾಚಿತ್ರಗಳು
ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ - ಸಮಾವೇಶ ಮತ್ತು ತರಬೇತಿ
-
ಪ್ರಾರ್ಥನೆ
-
ಉದ್ಘಾಟನೆ)
-
ತರಬೇತಿ
-
ತರಬೇತಿ
-
ತರಬೇತಿ
-
ತರಬೇತಿ
-
ಶಿಕ್ಷಣ ಯೋಜನೆ ಬಗ್ಗೆ ಹಂಪೇಶ್ ಎಸ್.ಡಿ.ಎಂ. ಕಾಲೇಜು ಉಜಿರೆ
-
ಶಿಕ್ಷಣ ಯೋಜನೆ ಬಗ್ಗೆ ಎಸ್.ಡಿ.ಎಂ. ಕಾಲೇಜು ಉಜಿರೆ ಹಳೆ ವಿದ್ಯಾರ್ಥಿನಿ
-
ಶಿಕ್ಷಣ ಯೋಜನೆ ಬಗ್ಗೆ, ಅಶೋಕ್
ಆಳ್ವಾಸ್ ಕಾಲೇಜು -
ಶಿಕ್ಷಣ ಯೋಜನೆ ಬಗ್ಗೆ, ದುರ್ಗಾ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ
-
ಶಿಕ್ಷಣ ಯೋಜನೆ ಬಗ್ಗೆ, ಗೋಪಾಲ
ಸಂತ ಅಲೋಶಿಯಸ್ ಕಾಲೇಜು ಹಳೆವಿದ್ಯಾರ್ಥಿ
-
ಶಿಕ್ಷಣ ಯೋಜನೆ ಬಗ್ಗೆ, ಮಹದೇವ
ಕ್ರೈಸ್ಟ್ ವಿಶ್ವವಿದ್ಯಾನಿಲಯ
ಉಲ್ಲೇಖ
This article uses material from the Wikipedia ಕನ್ನಡ article ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ - ಸಮಾವೇಶ ಮತ್ತು ತರಬೇತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.