Expression error: Unexpected < operator.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (October 2007) |
ಹಿಂದೂ ಮದುವೆ ಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಹಿಂದೂ ಮದುವೆಯ ಸಮಾರಂಭಗಳು ಸಾಂಪ್ರದಾಯಿಕವಾಗಿ ಕನಿಷ್ಠಪಕ್ಷ ಭಾಗಶಃ ಸಂಸ್ಕೃತದಲ್ಲಿ ನೆರವೇರಿಸಲ್ಪಡುತ್ತವೆ.ಬಹುತೇಕ ಹಿಂದೂ ಸಮಾರಂಭಗಳಲ್ಲಿ ಈ ಭಾಷೆಯು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ಥಳೀಯ ಜನರ ಭಾಷೆಯನ್ನೂ ಸಹ ಬಳಸಲಾಗುತ್ತಿದ್ದು,ಬಹಳಷ್ಟು ಹಿಂದೂಗಳು ಸಂಸ್ಕೃತವನ್ನು ಅಷ್ಟಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಅವರಲ್ಲಿ ಹಲವು ಧಾರ್ಮಿಕ ಕ್ರಿಯೆಗಳಿವೆ,ಸಾಂಪ್ರದಾಯಿಕ ಕಾಲದಿಂದಲೂ ಅವು ನಡೆದುಕೊಂಡು ಬರುತ್ತಿವೆ,ಅದಲ್ಲದೇ ಹಲವಾರು ಆಧುನಿಕ ಪಾಶ್ಚಿಮಾತ್ಯ ಮದುವೆ ಸಮಾರಂಭಗಳಿಗಿಂತ ವಿಭಿನ್ನವಾಗಿರುತ್ತವೆ.ಈ ಮದುವೆಯ ಶಿಷ್ಟಾಚಾರ ಸಂಪ್ರದಾಯಗಳು ವಿವಿಧ ಪ್ರದೇಶ,ಕುಟುಂಬಗಳು ಮತ್ತು ಜಾತಿಗಳು ಇಂತಹವುಗಳ ಮೇಲೆ ಅವಲಂಬಿಸುತ್ತಿರುತ್ತವೆ.ಉದಾಹರಣೆಗೆ ರಜಪೂತ್ ಮದುವೆಗಳು ಮತ್ತು ಐಯ್ಯರ್ ಮದುವೆಗಳು ಹೀಗೆ ವಿಂಗಡಿಸಲ್ಪಡುತ್ತವೆ. ಹಿಂದೂಗಳು ಈ ಮದುವೆಗಳ ಸಂಬಂಧಕ್ಕೆ ಬಹಳಷ್ಟು ಮಹತ್ವ ನೀಡುತ್ತಾರೆ.ಮದುವೆಯ ಸಮಾರಂಭಗಳು ರಂಗುರಂಗಿನಿಂದಲ್ಲದೇ ಅದ್ದೂರಿಯಿಂದ ಕೂಡಿರುತ್ತವೆ.ಅದಲ್ಲದೇ ಈ ಸಮಾರಂಭಗಳು ಹಲವು ದಿನಗಳ ವರೆಗೂ ನಡೆಯುತ್ತವೆ.
ಬಹುಸಂಖ್ಯಾತ ಹಿಂದೂಗಳು ವಾಸಿಸುವ ಭಾರತದಲ್ಲಿ ಆಯಾ ಧರ್ಮಗಳಿಗೆ ಸಂಬಂಧಿಸಿದಂತೆ ವಿವಾಹ ಕಾನೂನುಗಳು ವಿಭಿನ್ನವಾಗಿರುತ್ತವೆ. ಆಗ ೧೯೫೫ ರಲ್ಲಿ ಭಾರತದ ಸಂಸತ್ತಿನಲ್ಲಿ ಅನುಮೊದನೆಗೊಂಡ ಹಿಂದೂ ವಿವಾಹ ಕಾಯ್ದೆ ೧ ರ ಪ್ರಕಾರ ಎಲ್ಲಾ ಕಾನೂನು ಉದ್ದೇಶಗಳಿಗೆ ಎಲ್ಲ ಜಾತಿ,ಮತ ಅಥವಾ ಪಂಥ,ಸಿಖ್ಖ,ಬೌದ್ಧರು ಮತ್ತು ಜೈನ್ ಧರ್ಮದವರನ್ನು ಈ ಹಿಂದೂ ವಿವಾಹ ಕಾಯ್ದೆಯಡಿ ಒಂದೇ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ವಿಶೇಷ ವಿವಾಹ ಕಾಯ್ದೆ ೧೯೫೪ ರ ಪ್ರಕಾರ ಹಿಂದೂ ಅಲ್ಲದ ಯಾರನ್ನಾದರೂ ಓರ್ವ ಹಿಂದೂ ವಿವಾಹವಾಗಬಹುದು.ಕಾನೂನು ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸಿ ಅಗತ್ಯ ಶಿಷ್ಟಾಚಾರ ಪಾಲಿಸಿ ಈ ವಿವಾಹ ಊರ್ಜಿತಗೊಳಿಸಬಹುದು.
ಮದುವೆ-ಪೂರ್ವದ ಸಮಾರಂಭಗಳೆಂದರೆ ನಿಶ್ಚಿತಾರ್ಥ (ಇದು ವಾಗ್ದಾನ ಒಳಗೊಂಡಿರುತ್ತದೆ,ಅಥವಾ ಮೌಖಿಕ ಒಪ್ಪಂದ ಮತ್ತು ಲಗ್ನ-ಪತ್ರ ,ಲಿಖಿತ ಘೋಷಣೆ)ಅಲ್ಲದೇ ವರನ ಕಡೆಯವರು ವಧುವಿನ ಮನೆಗೆ ವರಾತ ಬರುವುದು;ಸಾಮಾನ್ಯವಾಗಿ ಶಾಸ್ತ್ರೋಕ್ತ ಮೆರವಣಿಗೆ ಮೂಲಕ ಬರುತ್ತಾರೆ. ಮದುವೆ-ನಂತರದ ಸಮಾರಂಭಗಳಲ್ಲಿ ವಧುವನ್ನು ಆಕೆಯ ಹೊಸಮನೆಗೆ ಸ್ವಾಗತಿಸುವುದೂ ಒಂದಾಗಿದೆ.
ಆಧುನಿಕ ಯುಗದಲ್ಲಿಯೂ ಹಿಂದೂ ಧರ್ಮವು ಪವಿತ್ರವಾದ ಪುರಾಣಗಳಲ್ಲಿ ಉಲ್ಲೇಖಿತವಾದಂತೆ ದೇವರುಗಳ ಪೂಜಾ ಪದ್ಧತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ಹಿಂದೂ ಧರ್ಮದಲ್ಲಿನ ವಿವಾಹಪದ್ಧತಿಯಲ್ಲಿ ವೇದದ ಒಳಗಿರುವ ಯಜ್ಞ ದ ಪ್ರಕಾರವು ಅಗ್ರಸ್ಥಾನದಲ್ಲಿದೆ.(ಒಂದು ಪ್ರಕಾರದ ಅಗ್ನಿ-ತ್ಯಾಗ) ಈ ಅಗ್ನಿಪೂಜೆಯೊಂದಿಗೆ ಇಂಡೊ-ಆರ್ಯನ್ ಪದ್ಧತಿಯಲ್ಲಿ ಆರ್ಯರ ದೇವತೆಗಳನ್ನು ಪ್ರಾರ್ಥನೆ ಮೂಲಕ ಆಹ್ವಾನಿಸಲಾಗುತ್ತದೆ. ಇದು ಮೂಲದಲ್ಲಿ ಪುರಾತನವಾದ ಈ ಸಮಾರಂಭಗಳು ಸ್ನೇಹ/ಸಂಬಂಧಗಳನ್ನು ಗಹನವಾಗಿ ಬಂಧಿಸಿಡುವಲ್ಲಿ ಸಫಲವಾಗಿವೆ.(ಅದಲ್ಲದೇ ಪೌರಾಣಿಕ ಪಠ್ಯಗಳಲ್ಲಿ ಕಾಣುವುದೇನೆಂದರೆ ಒಂದೇ ಲಿಂಗದ ಅಥವಾ ವಿಭಿನ್ನ ಲಿಂಗದ ಜನರನ್ನು ಒಟ್ಟಿಗೆ ತರುವುದೇ ಇಂತಹ ಸಮಾರಂಭಗಳ ಗಹನವಾದ ಉದ್ದೇಶವಾಗಿದೆ.)ಇಂದೂ ಕೂಡಾ ಈ ಸಾಂಪ್ರದಾಯಿಕತೆಯ ಗಾಢತೆಯು ಮದುವೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಹಿಂದೂ ಮದುವೆಗಳ ಪ್ರಮುಖ ಸಾಕ್ಷಿ ಎಂದರೆ ಅಗ್ನಿ-ದೇವ (ಅಥವಾ ಪವಿತ್ರ ಅಗ್ನಿ) ಅಗ್ನಿ ,ಯಾವುದೇ ಕಾನೂನು ಮತ್ತು ಸಂಪ್ರದಾಯಗಳನ್ನು ಅನುಸರಿಸಿದರೂ ಈ ಪವಿತ್ರ ಅಗ್ನಿಸಾಕ್ಷಿ ಇಲ್ಲದೇ ಮದುವೆಯ ಪ್ರಕ್ರಿಯೆ ಪೂರ್ಣವಾಗದು.ವಧು ಮತ್ತು ವರರಿಬ್ಬರೂ ಈ ಪವಿತ್ರ ಅಗ್ನಿ ಸುತ್ತಲೂ ಏಳು ಸುತ್ತು ಸುತ್ತಿ ತಮ್ಮ ಪವಿತ್ರ ಸಂಬಂಧಕ್ಕೆ ಕಾರಣರಾಗುತ್ತಾರೆ.ಪಾಣಿಗ್ರಹಣ ಕೂಡ ಎನ್ನತ್ತಾರೆ
ಓರ್ವ ವೇದಕಾಲದ ಋಷಿ ಹೇಳುವಂತೆ ಸಂತಸ ಮತ್ತು ಸಂತೃಪ್ತಿಯ ವೈವಾಹಿಕ ಜೀವನವೆಂದರೆ ಭಾವನಾತ್ಮಕವಾಗಿ ಒಂದುಗೂಡುವಿಕೆ,ಅನ್ಯೋನ್ಯತೆ ಮತ್ತು ಪತಿ,ಪತ್ನಿಯರ ನಡುವಿನ ಪ್ರೀತಿಯ ಸಂಬಂಧವೆಂಬುದಾಗಿದೆ. ಹೀಗೆ ಮದುವೆಯೆಂದರೆ ಸ್ವಯಂ-ತೃಪ್ತಿಪಡುವಿಕೆಯಲ್ಲ;ಇದು ಜೀವನದುದ್ದಕೂ ಸಾಮಾಜಿಕ ಮತ್ತು ದೈವಿಕ ಜವಾಬ್ದಾರಿಯನ್ನು ನೆರವೇರಿಸುವಂತಹದ್ದಾಗಿದೆ. ವೈವಾಹಿಕ ಜೀವನವೆಂದರೆ ಇಬ್ಬರು ಒಂದಾಗುವ ಅವಕಾಶದೊಂದಿಗೆ ಜೀವನದುದ್ದಕ್ಕೂ ಆತ್ಮ ಸಂಗಾತಿಗಳಾಗಿರುವುದು.
ಎಲ್ಲಾ ಧಾರ್ಮಿಕ ಆಚರಣೆಗಳು ಕುಟುಂಬದ ಸಂಪ್ರದಾಯಗಳ ಮೇಲೆ ನಿರ್ಧಾರವಾಗುತ್ತವೆ. ಕೆಲವು ಸಾಂಪ್ರದಾಯಿಕ ಆಚರಣೆಗಳು ವಿಭಿನ್ನ ಪ್ರದೇಶಗಳಲ್ಲಿ ಕೊಂಚ ವ್ಯತ್ಯಾಸ ಹೊಂದಿರುತ್ತವೆ.
ಈ ಸಪ್ತಪದಿ ಎಂದರೆ (ಸಂಸ್ಕೃತದಲ್ಲಿ ಏಳು ಮೆಟ್ಟಿಲುಗಳು/ಹೆಜ್ಜೆಗಳು , c.f.(ಒಟ್ಟುಗೂಡಿಸುವಿಕೆ) ಲ್ಯಾಟಿನ್ ನ ಆಡುಭಾಷಾ ಸೂತ್ರದಲ್ಲಿ ಅದು ರಕ್ತ ಸಂಬಂಧಗಳಿಗೆ ಸಂಬಂಧಿಸಿದ್ದಾಗಿದೆ; ಸಪ್ತಮ +ಪಾದಗಳು ) ಅಥವಾ ಇನ್ನೊಂದೆಂದರೆ ಸಾಥ್ ಫೆಯೆರಾಸ್ ಎಂಬ ಪದಗಳು ಹಿಂದೂ ವಿವಾಹಗಳ ಬಗ್ಗೆ ವೇದಗಳ ಕಾಲದಿಂದಲೂ ಆಚರಣೆಗೆ ಬಂದ ಅತ್ಯಂತ ಮಹತ್ವದ ಅಂಗವೆನಿಸಿವೆ. ವಿವಾಹಿತ ಜೋಡಿಯು ಪವಿತ್ರ ಅಗ್ನಿಯ ಮಂಡಲದ ಸುತ್ತಲೂ ಏಳು ಬಾರಿ ಸುತ್ತು ಹಾಕುತ್ತದೆ.ಈ (ಅಗ್ನಿ ),ಅವರಿಬ್ಬರೂ ಒಬ್ಬರಿಗೊಬ್ಬರು ಬದ್ಧರಾಗುವ ವಚನಗಳಿಗಾಗಿ ಮಾಡಿದ ಪ್ರಮಾಣಕ್ಕೆ ಅದು ಸಾಕ್ಷಿಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ವಧು ಮತ್ತು ವರ, ಇವರ ನಡುವೆ ಕೊಂಡಿಯಾಗಿ ಬಟ್ಟೆಯೊಂದರ ಗಂಟೊಂದನ್ನು ಸಾಂಕೇತಿಕವಾಗಿ ಹಾಕಿ ಈ ಸಮಾರಂಭದಲ್ಲಿ ಜೋಡಿಸಲಾಗುತ್ತದೆ. ಎಲ್ಲಾ ಕಡೆಗೂ ಅಥವಾ ಬೇರೆಡೆಗೆ ಹೋಗುವಾಗ ವರನು ವಧುವಿನ ಬಲಗೈಯನ್ನು ತನ್ನ ಬಲಗೈಯಲ್ಲಿ ಹಿಡಿದಿರುತ್ತಾನೆ. ಪ್ರತಿಯೊಂದು ಸುತ್ತುವಿಕೆಯು ಆಯಾ ಸಮುದಾಯ ಮತ್ತು ಪ್ರದೇಶಗಲ್ಲಿನ ವಧುವರರ ಸಂಬಂಧದಂತೆ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಸಾಮಾನ್ಯವಾಗಿ ವಧುವೇ ವರನನ್ನು ಕೊಂಡೊಯ್ಯುತ್ತಾಳೆ. ಉತ್ತರ ಭಾರತದಲ್ಲಿ ಮೊದಲ ಆರು ಸುತ್ತುಗಳನ್ನು ವಧುವೇ ಮುಂದಾಗಿ ನಡೆಯುವುದು ಸಾಮಾನ್ಯವಾಗಿದೆ.ಕೊನೆಯ ಸುತ್ತು ಮಾತ್ರ ವರನು ಮುಂದಾಗುತ್ತಾನೆ. ಭಾರತದ ಮಧ್ಯ ಭಾಗಗಳಲ್ಲಿ ಮೊದಲ ಮೂರು ಅಥವಾ ನಾಲ್ಕು ಸುತ್ತುಗಳನ್ನು ವಧುವೇ ಮುನ್ನಡೆಸುತ್ತಾಳೆ. ಪ್ರತಿಯೊಂದು ಸುತ್ತಿಗೂ ದಂಪತಿ ಜೋಡಿಯು ಒಂದೊಂದು ವಚನದ ಬದ್ಧತೆಯನ್ನು ತೋರಿಸುತ್ತದೆ.ಸಂತಸದ ಸಂಬಂಧ ಮತ್ತು ಗೃಹ ಜವಾಬ್ದಾರಿ ಬಗೆಗೆ ಉತ್ತಮ ಕೊಂಡಿಯನ್ನು ಜೋಡಿಸುತ್ತದೆ.
ದಕ್ಷಿಣ ಭಾರತದಲ್ಲಿ ಪುರೋಹಿತರು ಹೇಳುವ ಪ್ರತಿ ಮಂತ್ರವನ್ನು ಜೋಡಿಯು ಪುನರುಚ್ಚರಿಸುತ್ತದೆ:
!"
ಉತ್ತರ ಭಾರತದಲ್ಲಿ ವಿವಾಹಗಳಲ್ಲಿ ವಧುವರರು ಏಳು ಹೆಜ್ಜೆಗಳ ನಂತರ ಕೆಳಗಿನ ಶಬ್ದೋಚ್ಛಾರ ಮಾಡುತ್ತಾರೆ:
ಈ ಹೂ ಹಾಸಿಗೆ ಉತ್ಸವದಲ್ಲಿ ವಧು ಹೂವಿನ ಅಲಂಕಾರದೊಂದಿಗೆ ತುಂಬಿಹೋಗಿರುತ್ತಾಳೆ.ಮದುವೆಯ ಅನಂತರ ಹಾಸಿಗೆ, ಕೋಣೆಗಳನ್ನು ವರನ ಕುಟುಂಬದವರು ಹೂವಿನ ರಾಶಿಯಿಂದ ಅಲಂಕರಿಸುತ್ತಾರೆ. ಮನೋಭಿಲಾಷೆ ಪೂರೈಕೆಯು ಒಂದು ರಾತ್ರಿಯ ಶುಭ ಸಂದರ್ಭದಲ್ಲಿ ನಡೆಯುತ್ತದೆ.
This article uses material from the Wikipedia ಕನ್ನಡ article ಹಿಂದೂ ಮದುವೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.