ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಅಥವಾ ಉನ್ಮಾದ ವ್ಯಕ್ತಿತ್ವ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್), ಈ ಮನೋರೋಗವನ್ನು ಸ್ವಕೇಂದ್ರಿತ ಗಮನಾಪೇಕ್ಷೆ ಎಂಬ ಹೆಸರಿನಲ್ಲಿಯೂ ಕರೆಯುತ್ತಾರೆ.

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ
ವೈದ್ಯಕೀಯ ವಿಭಾಗಗಳುಮಾನಸಿಕ ರೋಗಗಳು
ಲಕ್ಷಣಗಳುನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ

ನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ, ಶ್ರಮಪಡಲು ತಯಾರಿಲ್ಲದ ಮನಸ್ಸು, ವಿಫಲತೆಗೆ, ನಿರಾಶೆಗೆ ತೀವ್ರವಾಗಿ ಪರಿತಪಿಸುವುದು, ಅದಕ್ಕಾಗಿ ಇತರರನ್ನು ದೂಷಿಸುವುದು, ಸಂಬಂಧಗಳಲ್ಲಿ ಗಂಭೀರತೆ ಇಲ್ಲದಿರುವುದು,ಅತಿಯಾದ ಭಾವೋದ್ವೇಗ, ಹುಡುಗಾಟಿಕೆಯ ಪ್ರವೃತ್ತಿ ಹೆಚ್ಚು ಇರುವುದು, ಇವೆಲ್ಲ ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಇದರ ಲಕ್ಷಣ ಸಾಮಾನ್ಯವಾಗಿ ಹದಿಹರೆಯದವರಲ್ಲಿ ಹಾಗೂ ಪ್ರೌಢಾವಸ್ಥೆಯಲ್ಲಿ ಪ್ರಾರಂಭವಾಗುತ್ತದೆ. ಮಧ್ಯವಯಸ್ಸಿನಲ್ಲಿಯೂ ಆಗಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಹಿಳೆಯರಲ್ಲಿ ಈ ಬಗೆಯ ಲಕ್ಷಣಗಳು ಕಂಡುಬರುವುದು ಪುರುಷರಿಗಿಂತ ೪ ಪಟ್ಟು ಜಾಸ್ತಿ ಎಂದು ತಿಳಿದು ಬಂದಿದೆ. ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಸುಮಾರು ಶೇಕಡಾ ೨ ರಿಂದ ೩ ರಷ್ಟು ಜನರು ಈ ಕಾಯಿಲೆಗೆ ಒಳಗಾಗಿದ್ದಾರೆ. ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ಹಾಗೂ ಹೊರ ರೋಗಿಗಳಲ್ಲಿ ೧೦ ರಿಂದ ೧೫ ಪ್ರತಿಶತ ರೋಗಿಗಳು ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗದಿಂದ ಬಳಲುತ್ತಿರುವರು.


ಲಕ್ಷಣಗಳು

ಈ ರೋಗ ಹೋಂದಿರುವವರಿಗೆ ತಮಗೆ ಸಮಸ್ಯೆ ಎಂದು ತಿಳಿದಿಲ್ಲದೇ ಇರಬಹುದು. ಏಕೆಂದರೆ ಅವರ ಆಲೋಚನೆ ಮತ್ತು ವರ್ತನೆ ವಿಧಾನವು ಸ್ವತಃ ಅವರಿಗೆ ಸ್ವಾಭಾವಿಕವೆಂದು ತೋರುತ್ತದೆ. ಆದ್ದರಿಂದ ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಇದರ ಜೊತೆಗೆ, ವ್ಯಾಪಕವಾದ ಅಪನಂಬಿಕೆ, ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ, ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ, ಇತರರು ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ, ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು, ದ್ವೇಷ ಸಾಧಿಸುವ ಪ್ರವೃತ್ತಿ, ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು, ಈ ಬಗೆಯ ಹಲವು ಲಕ್ಷಣಗಳು ಇಂಥಹ ಮನೋರೋಗಿಗಳಲ್ಲಿ ಇರುವುದು. ಹೆಚ್ಚುವರಿ ಗುಣಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

  • ಅತಿ ಪ್ರದರ್ಶನತೆಯ ಗೀಳು
  • ವಿಪರೀತವಾಗಿ ಇತರರಿಂದ ಅನುಮೋದನೆ ಪಡೆದುಕೊಳ್ಳುವ ಗೀಳು
  • ವಿಮರ್ಶೆ ಹಾಗೂ ಟೀಕೆಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುವುದು
  • ಸ್ವಂತ ವ್ಯಕ್ತಿತ್ವದ ಹೆಮ್ಮೆ ಮತ್ತು ಬದಲಾಗಲು ಇಷ್ಟವಿಲ್ಲದಿರುವುದು
  • ಅಸಹಜ ಕಾಮ ಪ್ರಚೋದಕ ಪ್ರದರ್ಶನಶೀಲತೆ ಹಾಗೂ ಲೈಂಗಿಕ ವರ್ತನೆಗಳು.
  • ಯಾವುದೇ ಬದಲಾವಣೆಯನ್ನು ಬೆದರಿಕೆಯಾಗಿ ನೋಡುವುದು
  • ಗಮನ ಸೆಳೆಯಲು ದೈಹಿಕ ಕಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆಗಳನ್ನು ಬಳಸುವುದು
  • ಗಮನದ ಕೇಂದ್ರವಾಗಬೇಕಾದ ಅವಶ್ಯಕತೆ
  • ಹತಾಶೆ,ಕಡಿಮೆ ಸಹಿಷ್ಣುತೆ, ಸದಾ ಅತೃಪ್ತರಾಗಿರುವುದು
  • ಇತರರಿಗೆ ಉತ್ಪ್ರೇಕ್ಷೆಯಾಗಿ ಕಾಣಿಸುವಷ್ಟು ಭಾವನಾತ್ಮಕವಾಗಿ ಬದಲಾಗುತ್ತಿರುವುದು
  • ಸಂಬಂಧಗಳು ನಿಜವಾಗಿರುವುದಕ್ಕಿಂತ ಹೆಚ್ಚು ಆತ್ಮೀಯವಾಗಿವೆ ಎಂದು ನಂಬುವ ಪ್ರವೃತ್ತಿ
  • ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು
  • ವೈಯಕ್ತಿಕ ವೈಫಲ್ಯಗಳನ್ನು ಅಥವಾ ನಿರಾಶೆಯನ್ನು ಇತರರ ಮೇಲೆ ದೂಷಿಸುವುದು.
  • ಇತರರಿಂದ ಸುಲಭವಾಗಿ ಪ್ರಭಾವಿತರಾಗುವುದು
  • ವಿಪರೀತ ನಾಟಕೀಯ ಮತ್ತು ಭಾವನಾತ್ಮಕ ನಡುವಳಿಕೆ
  • ಇತರರ ಸಲಹೆಗಳಿಂದ ಪ್ರಭಾವಿತರಾಗುವುದು.

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಹೊಂದಿದವರು ಈ ಮೇಲಿನ ಎಲ್ಲಾ ಲಕ್ಷಣಗಳನ್ನು ಹೊಂದಿರಬೇಕೆಂದಿಲ್ಲ.

ಪರಿಣಾಮಗಳು

ಅನೇಕ ಸಂದರ್ಭಗಳಲ್ಲಿ ಜನರ ಜತೆಗೆ ಸಾಮಾಜಿಕವಾಗಿ ಸಂಬಂಧ ಹೊಂದಲು ಪ್ರಯತ್ನಿಸುವಾಗ ಇಂಥವರಿಗೆ ಸಮಸ್ಯೆಯಾಗಬಹುದು. ಇದು ಸಾಮಾನ್ಯ ಹಾಗೂ ಆರೋಗ್ಯಕರ ಜೀವನ ನಡೆಸುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಜೊತೆಗೆ ವೃತ್ತಿ ಜೀವನವನ್ನು ಅಪಾಯಕ್ಕೆ ತಳ್ಳಬಹುದು.

ಚಿಕಿತ್ಸೆ

ಮನಃಶಾಸ್ತ್ರಜ್ಞರು ಟಾಕ್ ಥೆರಪಿ ಮೂಲಕ ಸಮಸ್ಯೆ ನಿವಾರಿಸುತ್ತಾರೆ. ಅಲ್ಲದೇ ಕೆಲವು ಸಂದರ್ಭಗಲ್ಲಿ ಸೈಕೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಕೇಂದ್ರಿತ ಗಮಾನಪೇಕ್ಷೆ ಸಮಸ್ಯೆಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ಕೂಡಲೇ ವೈದ್ಯರನ್ನು ಸಂಪರ್ಕಿಸ ಬೇಕು. ಪ್ರಾಥಮಿಕ ಆರೈಕೆಯ ವೃತ್ತಿಪರರು, ಕೌನ್ಸಲರ್ , ಹಾಗೂ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಉಲ್ಲೇಖಗಳು

Tags:

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಲಕ್ಷಣಗಳುಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಪರಿಣಾಮಗಳುಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಚಿಕಿತ್ಸೆಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಉಲ್ಲೇಖಗಳುಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ

🔥 Trending searches on Wiki ಕನ್ನಡ:

ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗಮಿಥುನರಾಶಿ (ಕನ್ನಡ ಧಾರಾವಾಹಿ)ಶಿರ್ಡಿ ಸಾಯಿ ಬಾಬಾನುಡಿ (ತಂತ್ರಾಂಶ)ಗೋತ್ರ ಮತ್ತು ಪ್ರವರಹಣಕಾಸುತತ್ಸಮ-ತದ್ಭವಸಂಯುಕ್ತ ಕರ್ನಾಟಕಹೆಸರುವಾಟ್ಸ್ ಆಪ್ ಮೆಸ್ಸೆಂಜರ್ಯೂಟ್ಯೂಬ್‌ಉಪ್ಪಿನ ಸತ್ಯಾಗ್ರಹಜ್ವರಭೂಮಿಸರ್ಪ ಸುತ್ತುಮಾದರ ಚೆನ್ನಯ್ಯಐಹೊಳೆಕೊಪ್ಪಳವಾಲಿಬಾಲ್ರಾಮಾಚಾರಿ (ಕನ್ನಡ ಧಾರಾವಾಹಿ)ಚಂಡಮಾರುತಬಂಗಾರದ ಮನುಷ್ಯ (ಚಲನಚಿತ್ರ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾಸಪಂಪ ಪ್ರಶಸ್ತಿಜಾಗತೀಕರಣಕನ್ನಡದಲ್ಲಿ ಕಾದಂಬರಿ ಸಾಹಿತ್ಯಸ್ಕೌಟ್ ಚಳುವಳಿಮಜ್ಜಿಗೆವೀರಗಾಸೆಪಪ್ಪಾಯಿಪುಟ್ಟರಾಜ ಗವಾಯಿನಾಗರೀಕತೆಭಾಮಿನೀ ಷಟ್ಪದಿಹಯಗ್ರೀವಇಸ್ಲಾಂ ಧರ್ಮಅಮೇರಿಕ ಸಂಯುಕ್ತ ಸಂಸ್ಥಾನಶ್ರೀ ರಾಘವೇಂದ್ರ ಸ್ವಾಮಿಗಳುಚುನಾವಣೆನಾಮಪದಜಯಪ್ರಕಾಶ್ ಹೆಗ್ಡೆಹರಿಹರ (ಕವಿ)ಶಬ್ದ ಮಾಲಿನ್ಯಸತ್ಯ (ಕನ್ನಡ ಧಾರಾವಾಹಿ)ಕಲಬುರಗಿಶೈಕ್ಷಣಿಕ ಮನೋವಿಜ್ಞಾನಶುಕ್ರಹವಾಮಾನಬೌದ್ಧ ಧರ್ಮಕೊಡಗಿನ ಗೌರಮ್ಮಎಲೆಕ್ಟ್ರಾನಿಕ್ ಮತದಾನತಾಪಮಾನಗರ್ಭಧಾರಣೆಝಾನ್ಸಿ ರಾಣಿ ಲಕ್ಷ್ಮೀಬಾಯಿಗುರು (ಗ್ರಹ)ಕವಿಸಾಲ್ಮನ್‌ಹೃದಯಪ್ರಜಾಪ್ರಭುತ್ವಪೂರ್ಣಚಂದ್ರ ತೇಜಸ್ವಿವಿಧಾನಸೌಧಮೋಳಿಗೆ ಮಾರಯ್ಯರೋಮನ್ ಸಾಮ್ರಾಜ್ಯವಿಷ್ಣುಬುಧಋಗ್ವೇದಬಂಡಾಯ ಸಾಹಿತ್ಯಮೊದಲನೆಯ ಕೆಂಪೇಗೌಡದ್ರೌಪದಿ ಮುರ್ಮುಓಂ ನಮಃ ಶಿವಾಯಚದುರಂಗದ ನಿಯಮಗಳುಎತ್ತಿನಹೊಳೆಯ ತಿರುವು ಯೋಜನೆರಾಮರೈತ ಚಳುವಳಿಬ್ಯಾಂಕ್ಕರ್ನಾಟಕ ಲೋಕಾಯುಕ್ತ🡆 More