ಬಿ. ಎಸ್. ಚಂದ್ರಶೇಖರ್

ಬಿ.

ಎಸ್. ಚಂದ್ರಶೇಖರ್ (ಮೇ ೧೭, ೧೯೪೫) ಭಾರತೀಯ ಕ್ರಿಕೆಟ್ ನ ನಾಲ್ವರು ಸ್ಪಿನ್-ಮಣಿಗಳಲ್ಲಿ ಒಬ್ಬರು. ಎಂದೇ ಖ್ಯಾತರಾದ ಭಗವತ್ ಸುಬ್ರಮಣ್ಯ ಚಂದ್ರಶೇಖರ್ ಮೇ ೧೭, ೧೯೪೫ರಂದು ಜನಿಸಿದರು. ೬೦-೭೦ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ಶಕ್ತಿಯಾಗಿದ್ದ ಚಂದ್ರ, ೧೯೭೧ರಲ್ಲಿ ಭಾರತ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿಯೇ ಸರಣಿ ಗೆಲ್ಲಲು ಕಾರಣರಾದರು.

ಭಾಗವತ್ ಚಂದ್ರಶೇಖರ್
ವಯಕ್ತಿಕ ಮಾಹಿತಿ
ಹುಟ್ಟು (1945-04-17) ೧೭ ಏಪ್ರಿಲ್ ೧೯೪೫ (ವಯಸ್ಸು ೭೮)
ಮೈಸೂರು, ಕರ್ನಾಟ
ಬ್ಯಾಟಿಂಗ್ಬಲಗೈ
ಬೌಲಿಂಗ್ಲೆಗ್ ಬ್ರೇಕ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 58)21 ಜನವರಿ 1964 v ಇಂಗ್ಲೆಂಡ್
ಕೊನೆಯ ಟೆಸ್ಟ್12 ಜುಲೈ 1979 v ಇಂಗ್ಲೆಂಡ್
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 1)22 ಫೆಬ್ರವರಿ 1976 v ನ್ಯೂಜಿಲ್ಯಾಂಡ್
ಕೊನೆಯ ಅಂ. ಏಕದಿನ​22 ಫೆಬ್ರವರಿ 1976 v ನ್ಯೂಜಿಲ್ಯಾಂಡ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್‌ಗಳು ಓಡಿಐ ಎಫ್ ಸಿ ಎ ಪಟ್ಟಿ
ಪಂದ್ಯಗಳು ೫೮ ೨೪೬
ಗಳಿಸಿದ ರನ್ಗಳು ೧೬೭ ೧೧ ೬೦೦ ೨೫
ಬ್ಯಾಟಿಂಗ್ ಸರಾಸರಿ ೪.೦೭ - ೪.೬೧ ೨೫
೧೦೦/೫೦ ೦/೦ ೦/೦ ೦/೦ ೦/೦
ಉನ್ನತ ಸ್ಕೋರ್ ೨೨ ೧೧* ೨೫ ೧೪*
ಎಸೆತಗಳು ೧೫೯೬೩ ೫೬ ೫೩೮೧೭ ೪೨೦
ವಿಕೆಟ್‌ಗಳು ೨೪೨ ೧೦೬೩
ಬೌಲಿಂಗ್ ಸರಾಸರಿ ೨೯.೭೪ ೧೨ ೨೪.೦೩ ೩೮.೮೭
ಐದು ವಿಕೆಟ್ ಗಳಿಕೆ ೧೬ ೭೫
ಹತ್ತು ವಿಕೆಟ್ ಗಳಿಕೆ ೧೯
ಉನ್ನತ ಬೌಲಿಂಗ್ ೮/೭೯ ೩/೩೬ ೯/೭೨ ೪/೬೧
ಹಿಡಿತಗಳು/ ಸ್ಟಂಪಿಂಗ್‌ ೨೫/- ೦/೦ ೧೦೭/೦ ೧/೦
ಮೂಲ: ESPNcricinfo, 10 ನವೆಂಬರ್ 2014

ಜೀವನ

ಮೈಸೂರಿನಲ್ಲಿ ಜನಿಸಿದ ಚಂದ್ರ, ೬ನೆಯ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ತಮ್ಮ ಬಲಗೈ ಶಕ್ತಿ ಕಳೆದುಕೊಂಡರು. ಆಸ್ಟ್ರೇಲಿಯಾದ ರಿಚಿ ಬೆನೋರನ್ನು ಆರಾಧಿಸುತ್ತಿದ್ದ ಚಂದ್ರು ಎಡಗೈನಲ್ಲಿ ಚಂಡೆಸೆಯುವ ಮೂಲಕ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡು, ಅಭ್ಯಾಸ ನಡೆಸಿದರು.೧೦ರ ವಯಸ್ಸಿಗೆ ಬಲಗೈ ಸ್ವಲ್ಪ ಮಟ್ಟಿಗೆ ಬಲಿದ ನಂತರ, ಸ್ಪಿನ್ ಬೌಲಿಂಗ್ ಮಾಡಲು ಶುರುವಿಟ್ಟರು.

ಶ್ರೇಷ್ಠ ಬೌಲರ್

೧೯೫೫ರ ಹೊತ್ತಿಗೆ ಬೆಂಗಳೂರಿಗೆ ಬಂದ ಚಂದ್ರ ಸಿಟಿ ಕ್ರಿಕಿಟರ್ಸ್ ತಂಡ ಸೇರಿದ ಚಂದ್ರ, ವೇಗದ ಬೌಲಿಂಗ್, ಸ್ಪಿನ್ ಎಲ್ಲವನ್ನೂ ಪ್ರಯತ್ನಿಸಿ, ಲೆಗ್ ಬ್ರೇಕ್ ಶೈಲಿಯಲ್ಲಿ ಅಭ್ಯಾಸ ನಡೆಸಿದರು. ಡಿವಿಶನ್ ಮತ್ತು ರಣಜಿ ಹಂತಕ್ಕೆ ಆಯ್ಕೆಯಾಗಿ, ಕರ್ನಾಟಕ ತಂಡದ ಸ್ಪಿನ್ ಅಸ್ತ್ರವಾದರು. ೧೯೬೪ರಲ್ಲಿ ಮುಂಬಯಿನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಿದ ಚಂದ್ರ, ೪ ಮಹತ್ವದ ವಿಕೆಟ್ ಕಬಳಿಸಿದರು. ೧೯೬೪ರ ವರ್ಷದ ಕ್ರಿಕೆಟಿಗರಾಗಿ ಆಯ್ಕೆಯಾದ ಚಂದ್ರ, ೧೯೭೮ರವರೆಗೆ ಭಾರತ ತಂಡಕ್ಕೆ ಆಡಿದರು.

೧೯೭೧ರ ಇಂಗ್ಲೆಂಡ್ ಯಾತ್ರೆಯಲ್ಲಿ ಓವಲ್ ಟೆಸ್ಟ್ ನ ೪ನೆ ಇನಿಂಗ್ಸ್ ನಲ್ಲಿ ೩೮ ರನ್ ನೀಡಿ ೬ ವಿಕೆಟ್ ಪಡೆದದ್ದು ಅವರ ಸ್ಮರಣೀಯ ಘಳಿಗೆ. ಅವರ ಬೌಲಿಂಗ್ ನಿಂದಾಗಿ ಭಾರತ ಮೊದಲ ಬಾರಿ ದೇಶದ ಹೊರಗೆ ಸರಣಿ ವಿಜಯ ಸಾಧಿಸಿತು.

೧೯೭೬ರ ನ್ಯೂಜ಼ಿಲೆಂಡ್ ಪ್ರವಾಸದಲ್ಲಿ ಪ್ರಸನ್ನ-ಚಂದ್ರ ಜೋಡಿ ಒಂದೇ ಟೆಸ್ಟ್ ನಲ್ಲಿ ೧೯ ವಿಕೆಟ್ ಪಡೆದರು. ಆದರೂ ನಾಯಕ ಅಜಿತ್ ವಾಡೇಕರ್ ರೊಂದಿಗೆ ಉತ್ತಮ ಭಾಂಧವ್ಯ ಹೊಂದದ ಕಾರಣದಿಂದ ಚಂದ್ರ ಹೆಚ್ಚು ಟೆಸ್ಟ್ ಆಡಲು ಸಾಧ್ಯವಾಗಲಿಲ್ಲ.

ನಂತರದ ೧೯೭೭-೭೮ರ ಆಸ್ಟ್ರೇಲಿಯಾದ ಪ್ರವಾಸದಲ್ಲೂ ಬೌಲಿಂಗ್ ನಿಂದ ವಿಜಯಕ್ಕೆ ಕಾರಣರಾದರು. ಆದರೆ ನಾಲ್ಕು ಬಾರಿ ೦ ರನ್ ಗಳಿಸಿದ್ದಕ್ಕೆ ತೂತು ಇರುವ ಗ್ರೇ-ನಿಕೋಲ್ಸ್ ಬ್ಯಾಟ್ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬಳುವಳಿಯಾಗಿ ನೀಡಿತು. ನಗುಮನಸ್ಸಿನಿಂದಲೇ ಅದನ್ನು ಸ್ವೀಕರಿಸಿದ ಚಂದ್ರ, ತಮ್ಮ ಶಾಂತ ಸ್ವಭಾವ ಮತ್ತು ವಿನಯವಂತ ನಡವಳಿಕೆಯಿಂದ ಕ್ರಿಕೆಟ್ ಲೋಕದ ಮನಗೆದ್ದರು.

ಭಾರತದ ಸ್ಪಿನ್ ಚತುಷ್ಟಯರಾದ ಚಂದ್ರು, ಪ್ರಸನ್ನ, ಬೇಡಿ ಮತ್ತು ವೆಂಕಟ್ ಇವರು ಕ್ರಿಕೆಟ್ ಎಂಬ ವಿಶ್ವ ಮರೆಯಲಾಗದ ಮಹತ್ವದ ನಿಧಿಗಳು. ಭಾರತಕ್ಕೆ ಇಂಗ್ಲೆಂಡಿನಲ್ಲಿ ಸರಣಿ ವಿಜಯ, ಆಸ್ಟ್ರೇಲಿಯಾದ ವಿರುದ್ಧ ಸರಣಿ ವಿಜಯ ಇವಕ್ಕೆಲ್ಲಾ ನಾಂದಿ ಹಾಡಲಿಕ್ಕೆ ಕಾರಣೀಭೂತರಾದವರು ಚಂದ್ರು. ಪ್ರಸನ್ನ, ಜಿ. ಆರ್. ವಿಶ್ವನಾಥ್, ಸುಧಾಕರ್ ರಾವ್, ಬ್ರಿಜೇಶ್ ಪಟೇಲ್, ಸಯ್ಯದ್ ಕಿರ್ಮಾನಿ ಇದ್ದ ಕರ್ನಾಟಕ ತಂಡ ಅಂದಿನ ಶ್ರೀಮಂತ ಮತ್ತು ಅಧಿಕಾರಿಶಾಹಿ ಮುಂಬಯಿ ತಂಡಕ್ಕೆ ಕೇವಲ ಪ್ರತಿಭೆಯ ಮೂಲಕವಾಗಿ ನೀಡಿದ ಸ್ಪರ್ಧೆ, ಒಮ್ಮೆ ಕರ್ನಾಟಕದಿಂದ ಏಳು ಜನ ಟೆಸ್ಟ್ ಆಟಗಾರರು ಭಾಗವಹಿಸುವಂತಹ ಶಕ್ತಿ ನಿರ್ಮಿಸಿತ್ತು. ಕರ್ನಾಟಕಕ್ಕೆ ಪ್ರತಿಷ್ಠಿತ ರಣಜಿ ಟ್ರೋಫಿ ಪ್ರಶಸ್ತಿಯನ್ನು ಕೂಡಾ ಮೊತ್ತಮೊದಲಬಾರಿಗೆ ತಂದಿತ್ತು.

ಶ್ರೇಷ್ಠ ಸಾಧನೆ

ನಮ್ಮ ಸಚಿನ್ ಬರುವುದಕ್ಕೆ ಮುಂಚೆ ವಿಶ್ವದಲ್ಲಿ ಯಾರು ಅತ್ಯುತ್ಕೃಷ್ಟ ಬ್ಯಾಟುದಾರ ಎಂದರೆ ತಕ್ಷಣ ಹೊಳೆಯುವ ಹೆಸರು ವೆಸ್ಟ್ ಇಂಡೀಜ್ ತಂಡದ ವಿವಿಯನ್ ರಿಚರ್ಡ್ಸ್. ವಿವಿಯನ್ ರಿಚರ್ಡ್ಸ್ ಹೇಳುತ್ತಾರೆ "ನನಗೆ ಅತ್ಯಂತ ಸವಾಲು ಒಡ್ಡಿದ ಬೌಲರ್ ಅಂದರೆ ಬಿ.ಎಸ್. ಚಂದ್ರಶೇಖರ್" ಎಂದು.

ಕೇವಲ ೫೮ ಟೆಸ್ಟ್ ಪಂದ್ಯ ಆಡಿ ೨೪೨ ವಿಕೆಟ್ ಉರುಳಿಸಿದ ಚಂದ್ರು ಅವರ ಸಾಧನೆ ಅಮೋಘವಾದದ್ದು. ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ೩೮ರನ್ನು ನೀಡಿ ೬ ವಿಕೆಟ್ ಉರುಳಿಸಿ ಭಾರತಕ್ಕೆ ಸರಣಿ ಜಯ ಒದಗಿಸಿದ ಅವರ ಸಾಧನೆಯನ್ನು, ಶತಮಾನದ ಒಂದು ಇನ್ನಿಂಗ್ಸಿನಲ್ಲಿನ ಅತ್ಯುತ್ಕೃಷ್ಟ ಬೌಲಿಂಗ್ ಎಂದು ಪರಿಗಣಿಸಿದ ವಿಸ್ಡೆನ್, ಅವರಿಗೆ ೨೦೦೨ರ ವರ್ಷದಲ್ಲಿ ಪ್ರಶಸ್ತಿ ಗೌರವವನ್ನು ಅರ್ಪಿಸಿತು.

ಗೂಗ್ಲಿ

ಕ್ರಿಕೆಟ್ ಬೌಲಿಂಗಿನಲ್ಲಿ ಚಂದ್ರು ಅವರ ಗೂಗ್ಲಿ ಅತ್ಯಂತ ಊಹಿಸಲಸಾಧ್ಯವಾದ ಕಷ್ಟಕಾರವಾದ ಬಾಲ್ ಎಂದು ಮನ್ನಣೆ ಪಡೆದಿದೆ.

ನಗೆ ಹುಟ್ಟಿಸುವ ಬ್ಯಾಟಿಂಗ್ ದಾಖಲೆ

ಅವರ ಬ್ಯಾಟಿಂಗ್ ಸಾಧನೆ ನಗೆ ಹುಟ್ಟಿಸುವಂತದ್ದಾಗಿದ್ದು, ೨೩ ಬಾರಿ ಸೊನ್ನೆ ರನ್ನು ಗಳಿಸಿ ಅತ್ಯಧಿಕ ಶೇಕಡಾವಾರು ಸೊನ್ನೆ ಪ್ರದರ್ಶನ ನೀಡಿದ ವಿಶ್ವದಾಖಲೆ ಅವರದ್ದಾಗಿದೆ. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ೪ ರನ್ನುಗಳು ಮಾತ್ರ. ಅವರು ಒಟ್ಟಾರೆ ಗಳಿಸಿದ ೧೬೭ರನ್ನುಗಳು ಅವರು ಉರುಳಿಸಿದ ೨೪೨ ವಿಕೆಟ್ಟುಗಳಿಗಿಂತ ತುಂಬಾ ಹಿಂದುಳಿದದ್ದು ಕೂಡಾ ಅಚ್ಚರಿಯೇ. ೧೯೭೬ರ ವೆಸ್ಟ್ ಇಂಡೀಜ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಶ್ವನಾಥ್ ಅವರೊಂದಿಗೆ ಅವರು ದೃತಿಗೆಡದೆ ಸಾಕಷ್ಟು ಹೊತ್ತು ನಡೆಸಿದ ಬ್ಯಾಟಿಂಗ್, ಟೆಸ್ಟ್ ಡ್ರಾ ಆಗಲು ಕಾರಣವಾಯಿತು, ಅಲ್ಲದೇ ವಿಜಯಕ್ಕೆ ಕಾರಣರಾದರು.

ಅಪಘಾತದಲ್ಲಿ ಪಾರು

ಕ್ರಿಕೆಟ್ ನಿವೃತ್ತಿ ನಂತರದಲ್ಲಿ ಚಂದ್ರು, ೧೯೯೪ರಲ್ಲಿ ತೀವ್ರವಾದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾದರು. ಕಾಲು ಊನವಾಗುವ ಹಂತದಲ್ಲಿ, ಚಂದ್ರ ಮುಖೇಶ್ ಗೀತೆಗಳನ್ನು ಕೇಳುತ್ತಾ, ನೋವು ಮರೆಯುವ ಪ್ರಯತ್ನ ಮಾಡಿದರು. ವಿಚಿತ್ರವೆಂದರೆ, ಹಿಂದಿಯ ಗೀತಸಾಹಿತ್ಯ ಅರ್ಥವಾಗದ ಚಂದ್ರರಿಗೆ, ಮುಖೇಶ್ ಧ್ವನಿ ಮಾತ್ರ ಇಷ್ಟ. ಪತ್ನಿ ಸಂಧ್ಯಾ, ಮಗಳು ಗ್ರೀಷ್ಮಾ, ಅಮೇರಿಕದಲ್ಲಿ ವಾಸವಾಗಿರುವ ಮಗ ಇವರ ಕುಟುಂಬ.

ಹಿಂದಿ ಗಾಯಕ ಮುಖೇಶ್ ರ ಅಭಿಮಾನಿ ಮತ್ತು ಮಿತ್ರರಾಗಿದ್ದ ಚಂದ್ರ, ಮುಖೇಶ್ ರನ್ನು ಮುಂಬಯಿ ಯಲ್ಲಿ ಆಡುವಾಗಲೆಲ್ಲ ಭೇಟಿ ಮಾಡುತ್ತಿದ್ದರು. ಮುಖೇಶ್ ಬಗ್ಗೆ ಚಂದ್ರರ ಮಾತು. Archived 2010-10-29 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

Tags:

ಬಿ. ಎಸ್. ಚಂದ್ರಶೇಖರ್ ಜೀವನಬಿ. ಎಸ್. ಚಂದ್ರಶೇಖರ್ ಶ್ರೇಷ್ಠ ಬೌಲರ್ಬಿ. ಎಸ್. ಚಂದ್ರಶೇಖರ್ ಶ್ರೇಷ್ಠ ಸಾಧನೆಬಿ. ಎಸ್. ಚಂದ್ರಶೇಖರ್ ಗೂಗ್ಲಿಬಿ. ಎಸ್. ಚಂದ್ರಶೇಖರ್ ನಗೆ ಹುಟ್ಟಿಸುವ ಬ್ಯಾಟಿಂಗ್ ದಾಖಲೆಬಿ. ಎಸ್. ಚಂದ್ರಶೇಖರ್ ಅಪಘಾತದಲ್ಲಿ ಪಾರುಬಿ. ಎಸ್. ಚಂದ್ರಶೇಖರ್ ಉಲ್ಲೇಖಬಿ. ಎಸ್. ಚಂದ್ರಶೇಖರ್ಮೇ ೧೭೧೯೪೫

🔥 Trending searches on Wiki ಕನ್ನಡ:

ಯುರೋಪ್ಕೊಡಗಿನ ಗೌರಮ್ಮಗೋಪಾಲಕೃಷ್ಣ ಅಡಿಗಆಗಮ ಸಂಧಿದೇವಸ್ಥಾನಆದಿ ಶಂಕರಪಟ್ಟದಕಲ್ಲುಪಂಪ ಪ್ರಶಸ್ತಿಡೊಳ್ಳು ಕುಣಿತಪ್ರಾಥಮಿಕ ಶಾಲೆಸೀತೆಕನ್ನಡಈಸೂರುಜಾತಿವ್ಯಾಪಾರಮುಪ್ಪಿನ ಷಡಕ್ಷರಿವಿದ್ಯಾರಣ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿನಾಯಕ ದಾಮೋದರ ಸಾವರ್ಕರ್ಇಂದಿರಾ ಗಾಂಧಿಹೆಸರುಒಡೆಯರ್ಪುನೀತ್ ರಾಜ್‍ಕುಮಾರ್ಭಾರತೀಯ ರೈಲ್ವೆಜಾತ್ರೆಲಗೋರಿರಸ(ಕಾವ್ಯಮೀಮಾಂಸೆ)ಮಳೆಗಾಲಕೊಡಗುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶ್ರೀಧರ ಸ್ವಾಮಿಗಳುಭಾರತೀಯ ಧರ್ಮಗಳುವೀರಪ್ಪನ್ತ್ಯಾಜ್ಯ ನಿರ್ವಹಣೆಮಲ್ಲಿಕಾರ್ಜುನ್ ಖರ್ಗೆಚಿನ್ನಎಚ್.ಎಸ್.ಶಿವಪ್ರಕಾಶ್ಇಮ್ಮಡಿ ಪುಲಕೇಶಿಹಲ್ಮಿಡಿಟೊಮೇಟೊಅಂಬಿಗರ ಚೌಡಯ್ಯಹರಪ್ಪಗಾದೆಗೋಕಾಕ್ ಚಳುವಳಿಭಾರತೀಯ ರಿಸರ್ವ್ ಬ್ಯಾಂಕ್ಗಿಡಮೂಲಿಕೆಗಳ ಔಷಧಿಬೆಳ್ಳುಳ್ಳಿವಿವಾಹಕುದುರೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೀಮೆ ಹುಣಸೆಮಾಸ್ಕೋಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆವರದಕ್ಷಿಣೆಅಧಿಕ ವರ್ಷಭಾರತೀಯ ಜನತಾ ಪಕ್ಷಪ್ರೇಮಾಕನ್ನಡ ಅಕ್ಷರಮಾಲೆಕಳಸಜಯಪ್ರಕಾಶ್ ಹೆಗ್ಡೆಕಂಪ್ಯೂಟರ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಅಸಹಕಾರ ಚಳುವಳಿತಾಪಮಾನನವರತ್ನಗಳುಭಾಷೆಸಾಹಿತ್ಯಶಾಲೆನೀನಾದೆ ನಾ (ಕನ್ನಡ ಧಾರಾವಾಹಿ)ಬಳ್ಳಾರಿಭಕ್ತಿ ಚಳುವಳಿಕೃಷ್ಣಭಾರತದಲ್ಲಿ ತುರ್ತು ಪರಿಸ್ಥಿತಿಚಿಂತಾಮಣಿಎಳ್ಳೆಣ್ಣೆ🡆 More