ಚಕ್ರವರ್ತಿ ಚಂದ್ರಚೂಡ್ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.
ಪ್ರಸ್ತುತ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಹಾಗೂ ಸಿನೆಮಾರಂಗದ ವಿವಿಧ ಭಾಗಗಳಲ್ಲಿ ಸಕ್ರಿಯರಾಗಿದ್ದಾರೆ. ಮೂಲತಃ ಸಾಮಾಜಿಕ ಚಳವಳಿಗಳ ಹಿನ್ನೆಲೆಯಿಂದ ಬಂದ ಇವರು ಪ್ರಸ್ತುತ `ದರ್ವೇಶ್ ಚೌಕಿ: ಬೇರುಗಳ ಸರಪಳಿ' ಸಂಸ್ಥೆಯ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ `ದಾದಾ' ಎಂದೇ ಪರಿಚಿತರು.
ಜನನ | ದೇವನೂರು, ಚಿಕ್ಕಮಗಳೂರು ಜಿಲ್ಲೆ |
---|---|
ವೃತ್ತಿ | ಪತ್ರಕರ್ತ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಬಿ.ಇ. ಮತ್ತು ಎಂ.ಎ. (ಮನಃಶಾಸ್ತ್ರ) |
ಚಕ್ರವರ್ತಿ ಚಂದ್ರಚೂಡ್ ಜನಿಸಿದ್ದು 1977ರ ಆಗಸ್ಟ್ 15ರಂದು. ಲಕ್ಷ್ಮೀಶ ಕವಿ ಜೈಮಿನಿ ಭಾರತ ಬರೆದ ಸ್ಥಳವೆಂದು ಹೇಳಲಾಗುವ ಚಿಕ್ಕಮಗಳೂರಿನ ದ್ಯಾವನೂರಿನ ದೇಗುಲ ಮಂಟಪದಲ್ಲಿ ಜನನ. ಪ್ರಾಥಮಿಕ ಶಿಕ್ಷಣವನ್ನು ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪೂರೈಸಿದ ಇವರು, ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ ಪದವಿಯನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಮನಃಶ್ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಚಕ್ರವರ್ತಿ, DYFI, SFI ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ಕೆರೆ ನಿರ್ಮಾಣ, ಜಲ ಅಧ್ಯಯನ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಇದೀಗ 'ದರ್ವೇಶ್ ಚೌಕಿ' ಸಂಘಟನೆಯ ಮೂಲಕ ಈ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಹದಿನೈದು ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಹಾಗೂ ಪತ್ರಕರ್ತರಾಗಿ ಕೆಲಸ ಮಾಡಿದ ಚಕ್ರವರ್ತಿಯವರು ಹಲವು ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಹುಮುಖ ಬದುಕು, ಚಿಂತನೆ ಹಾಗೂ ಆಸಕ್ತಿಗಳ ಚಕ್ರವರ್ತಿ ಚಂದ್ರಚೂಡ್ ಗೀತ ರಚನೆಕಾರರೂ ಆಗಿದ್ದಾರೆ. ಸ್ವತಃ ಹಾಡುತ್ತಾರೆ ಕೂಡ. ಕಥೆ, ಕವಿತೆಗಳನ್ನು ಬರೆಯುತ್ತಾರೆ. ಸಿನೆಮಾ, ರಂಗಭೂಮಿ ಹಾಗೂ ಸಂಗೀತಾಸ್ವಾದನೆ ಇವರ ಮೆಚ್ಚಿನ ಹವ್ಯಾಸಗಳು.
This article uses material from the Wikipedia ಕನ್ನಡ article ಚಕ್ರವರ್ತಿ ಚಂದ್ರಚೂಡ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.