ಕಲಬುರಗಿ ವಿಭಾಗ

ಗುಲ್ಬರ್ಗಾ ವಿಭಾಗವು (ಕಲಬುರಗಿ ವಿಭಾಗ) ಕಲಬುರಗಿ ಎಂದರೆ ಕಲ್ಲು - ಹೊಂದಿರುವ ನಾಡು ಎಂದರ್ಥ.ಇದರಿಂದ ಈ ಜಿಲ್ಲೆಯನ್ನು ಕಲಬುರಗಿ ಎಂದು ಕರೆಯಲಾಯಿತು .

ಇದು ಕರ್ನಾಟಕದ ಎರಡನೇ ದೊಡ್ಡ ರಾಜ್ಯ.ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗವು ಬಳ್ಳಾರಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ಯಾದ್ಗಿರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದೆ. ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ಗು ತರಬೇತಿ ಕೇಂದ್ರವಿದೆ. ಕಲಬುರಗಿವು ಒಂದು ಉತ್ತರ ಕರ್ನಾಟಕದಲ್ಲಿ ಬರುವ ಜಿಲ್ಲೆ.ಇದು ಕಲ್ಯಾಣ ಕರ್ನಾಟಕದಲ್ಲಿ ಬರುವ ಜಿಲ್ಲೆಯಲ್ಲಿ ಒಂದು .ಇಲ್ಲಿ ಅತ್ಯಂತ ಹೆಚ್ಚು ತೊಗರಿಯನ್ನು ಬೆಳೆಯಲಾಗುತ್ತದೆ.ಗುಲ್ಬರ್ಗಾ ನಗರವು ವಿಭಾಗದ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಕಲಬುರಗಿ ವಿಭಾಗ
ಗುಲ್ಬರ್ಗಾ ವಿಭಾಗದ ಜಿಲ್ಲೆಗಳು.

ಚರಿತ್ರೆ

ಕಲಬುರಗಿ ನಗರದ ಹಿಂದಿನ ಹೆಸರು ಗುಲ್ಬರ್ಗಾ. ಕಲಬುರಗಿಯ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಕಲಬುರಗಿ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಕಲಬುರಗಿ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಎಂದು ಹೆಸರಾದ ವಿಜ್ಞಾನೇಶ್ವರರ ಸಂಶೋಧನಾ ಕೇಂದ್ರ ಮರ್ತೂರಿನಲ್ಲಿ ಇದೆ. ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಕಲಬುರಗಿ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಕಲಬುರಗಿ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ ೧೯೪೭ ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕಲಬುರಗಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಕಲಬುರಗಿ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಕಲಬುರಗಿ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಕಲಬುರಗಿ ಹೈದರಾಬಾದ ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಕಲಬುರಗಿ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ ರ ಸಪ್ಟೆಂಬರ್ ನಲ್ಲಿ ಹೈದರಾಬಾದ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕಲಬುರಗಿ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. ೧೯೭೬ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಈ ಭಾಗದ ಅನೇಕ ಜನರು ಹೋರಾಟ ಮಾಡಿದ್ದಾರೆ. ಅವರಲ್ಲಿ ವೆಂಕಟಪ್ಪನಾಯಕ ಸುರಪುರ(ಬ್ರಿಟೀಶರ ಮತ್ತು ನಿಜಾಮನ ವಿರುದ್ಧ),ರಮಾನ೦ದ ತೀರ್ಥ, ಸರ್ದಾರ್ ಶರಣಗೌಡ್ ಇನಾಂದಾರ, ಚನ್ನಬಸಪ್ಪ ಕುಳಗೆರಿ, ದೇವಿಂದ್ರಪ್ಪ ಮಾಸ್ತರ್ -ಸಿಂದಗಿ( ಬಿ) (ನಿಜಾಮನ ವಿರುದ್ಧ) ಕರಬಸಪ್ಪ ಶ್ರೀಗನ್ - ಹರಸೂರ/ಶ್ರೀ ಸರಡಗಿ] (ನಿಜಾಮನ ವಿರುದ್ಧ),ಮುಂತಾದವರು ಹೋರಾಟ ಮಾಡಿ ಹೈದರಾಬಾದ ನಿಜಾಮರ ವಿರುದ್ದ ಹಾಗೂ ಬ್ರೀಟಿಷರ ವಿರುದ್ಧ ಜಯ ಸಾಧಿಸಿದ್ದಾರೆ. ಕಾರಣ ಈ ಭಾಗ ಬಹು ದಿನಗಳ ಕಾಲ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ಹ್ಯೆದರಾಬಾದ್ ಕರ್ನಾಟಕದಲ್ಲಿ ಜರುಗಿದ ವಿಮೋಚನಾ ಇತಿಹಾಸವನ್ನು ಮೊದಲ ಬಾರಿಗೆ ಸಂಶೋಧನೆ ಮಾಡಿ ಡಾ. ಬಿ. ಸಿ. ಮಹಾಬಲೇಶ್ವರಪ್ಪ ಅವರು ಮಹದುಪಕಾರ ಮಾಡಿದ್ದಾರೆ. ಅನಂತರ ಇಲ್ಲಿ ಪ್ರತಿ ವರ್ಷ ಸಪ್ಟೆಂಬರ್ ೧೭ ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ

ಕರ್ನಾಟಕದ ಕಂದಾಯ ವಿಭಾಗಗಳು

  • ಬೆಂಗಳೂರು ವಿಭಾಗ
  • ಬೆಳಗಾವಿ ವಿಭಾಗ
  • ಗುಲ್ಬರ್ಗಾ ವಿಭಾಗ
  • ಮೈಸೂರು ವಿಭಾಗ

ಭಾಗದ ಪ್ರಮುಖ ಸ್ಥಳಗಳು

  • ಚಂದ್ರಲಾಂಬಾ ದೇವಸ್ಥಾನ ಸನ್ನತ್ತಿ
  • ನಾರಾಯಣಪುರ ಆಣೆಕಟ್ಟು.
  • ಕೇಂದ್ರೀಯ ವಿಶ್ವವಿದ್ಯಾಲಯ
  • ಶರಣಬಸವೇಶ್ವರ ದೇವಸ್ಥಾನ
  • ಹಂಪಿ
  • ದರೋಜಿ ಕರಡಿಧಾಮ
  • ಸಂಡೂರ್

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ಕಲಬುರಗಿ ವಿಭಾಗ ಚರಿತ್ರೆಕಲಬುರಗಿ ವಿಭಾಗ ಕರ್ನಾಟಕದ ಕಂದಾಯ ವಿಭಾಗಗಳುಕಲಬುರಗಿ ವಿಭಾಗ ಭಾಗದ ಪ್ರಮುಖ ಸ್ಥಳಗಳುಕಲಬುರಗಿ ವಿಭಾಗ ಬಾಹ್ಯ ಕೊಂಡಿಗಳುಕಲಬುರಗಿ ವಿಭಾಗ ಉಲ್ಲೇಖಗಳುಕಲಬುರಗಿ ವಿಭಾಗ

🔥 Trending searches on Wiki ಕನ್ನಡ:

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗಂಗಾಶಿವಪ್ಪ ನಾಯಕಗಾಂಧಿ ಜಯಂತಿಸಂಸ್ಕೃತಶಿಶುನಾಳ ಶರೀಫರುಗೋವಿನ ಹಾಡುನಗರೀಕರಣಭಾರತದಲ್ಲಿನ ಜಾತಿ ಪದ್ದತಿಇಸ್ಲಾಂ ಧರ್ಮನಾಗರೀಕತೆನಾಡ ಗೀತೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸಮುದ್ರಗುಪ್ತಬುದ್ಧನರೇಂದ್ರ ಮೋದಿಉತ್ತಮ ಪ್ರಜಾಕೀಯ ಪಕ್ಷಗ್ರಾಮ ಪಂಚಾಯತಿಚಂದ್ರಗುಪ್ತ ಮೌರ್ಯಹಿಂದೂ ಧರ್ಮದೇವನೂರು ಮಹಾದೇವಐಹೊಳೆಭಾರತದಲ್ಲಿ ಮೀಸಲಾತಿಧಾರವಾಡಕರ್ನಾಟಕದ ಶಾಸನಗಳುನಾಗವರ್ಮ-೧ನಾಲ್ವಡಿ ಕೃಷ್ಣರಾಜ ಒಡೆಯರುಸೂರ್ಯವ್ಯೂಹದ ಗ್ರಹಗಳುಸಂಧ್ಯಾವಂದನ ಪೂರ್ಣಪಾಠಭಾರತೀಯ ಭೂಸೇನೆಕರ್ನಾಟಕಚೋಳ ವಂಶಮೌರ್ಯ ಸಾಮ್ರಾಜ್ಯಕರ್ನಾಟಕ ಲೋಕಸೇವಾ ಆಯೋಗವಿಜಯದಾಸರುಪೊನ್ನಬಿ. ಆರ್. ಅಂಬೇಡ್ಕರ್ಭಾವನಾ(ನಟಿ-ಭಾವನಾ ರಾಮಣ್ಣ)ಪರಿಸರ ವ್ಯವಸ್ಥೆಮೂಲಧಾತುಗಳ ಪಟ್ಟಿಮಲ್ಲಿಗೆಭರತ-ಬಾಹುಬಲಿಜೋಡು ನುಡಿಗಟ್ಟುಮಾನವ ಹಕ್ಕುಗಳುಕ್ರಿಯಾಪದಸೂರ್ಯ (ದೇವ)ಎಕರೆಭಾರತ ಬಿಟ್ಟು ತೊಲಗಿ ಚಳುವಳಿಕನ್ನಡದಲ್ಲಿ ವಚನ ಸಾಹಿತ್ಯಮಳೆಗಾಲಸಂಚಿ ಹೊನ್ನಮ್ಮಜ್ವಾಲಾಮುಖಿಧರ್ಮಸ್ಥಳಜ್ಞಾನಪೀಠ ಪ್ರಶಸ್ತಿವ್ಯಕ್ತಿತ್ವಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವೇದಭಾರತದಲ್ಲಿ ಪಂಚಾಯತ್ ರಾಜ್ಪುರಂದರದಾಸಚಂದ್ರಶಿವಗಂಗೆ ಬೆಟ್ಟದೊಡ್ಡಬಳ್ಳಾಪುರಸಾಮಾಜಿಕ ಸಮಸ್ಯೆಗಳುರಾಮನಗರಹೆಣ್ಣು ಬ್ರೂಣ ಹತ್ಯೆಮೆಕ್ಕೆ ಜೋಳವಿಜಯಪುರ ಜಿಲ್ಲೆಇಂದಿರಾ ಗಾಂಧಿಶೂನ್ಯ ಛಾಯಾ ದಿನಮಡಿವಾಳ ಮಾಚಿದೇವಡಿ.ಎಸ್.ಕರ್ಕಿತಿರುಪತಿಭಾರತದ ಪ್ರಧಾನ ಮಂತ್ರಿಜೈನ ಧರ್ಮಚಿನ್ನ🡆 More