ಪ್ರಭುಶಂಕರ

ಡಾ.

ಪ್ರಭುಶಂಕರ, ಕನ್ನಡದ ಪ್ರಮುಖ ಲೇಖಕರು.

ಬಾಲ್ಯ

ಡಾ. ಪ್ರಭುಶಂಕರರು ಫೆಬ್ರುವರಿ ೧೫, ೧೯೨೯ರಂದು ಚಾಮರಾಜನಗರದಲ್ಲಿ ಜನಿಸಿದರು. ತಂದೆ ಕರಿಬಸಪ್ಪ, ತಾಯಿ ರುದ್ರಮ್ಮ. ಅಂದು ಹಳ್ಳಿಯಲ್ಲಿ ಅವಿದ್ಯಾವಂತರೇ ಜಾಸ್ತಿ. ಆದರೂ ತಂದೆ ತಾಯಿಗಳು ಲೋಯರ್ ಸೆಕೆಂಡರಿಯವರೆಗೆ ಓದಿದ್ದುದು ಇವರ ಅದೃಷ್ಟ. ಮಗನಿಗೂ ವಿದ್ಯೆ ಕಲಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಚಾಮರಾಜನಗರ ಮತ್ತು ಯಳಂದೂರುಗಳಲ್ಲಾಯಿತು. ಹೈಸ್ಕೂಲು ವಿದ್ಯಾಭ್ಯಾಸ ಮೈಸೂರು, ಬೆಂಗಳೂರಿನ ಪ್ರೌಢಶಾಲೆಗಳಲ್ಲಿ ನೆರವೇರಿತು. ಬೆಳೆಯುವ ದಿನಗಳಲ್ಲಿ ರಾಮಕೃಷ್ಣ ಮಿಷನ್ನಿನ ಸಂಪರ್ಕ ಅವರಿಗೆ ಲಭಿಸಿತು. ಹೀಗೆ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಜೀವನ-ಸಾಧನೆ-ಬೋಧನೆಗಳಿಂದ ಪ್ರಭಾವಿತರಾದರು. ಕಾಲೇಜು ಕಲಿತದ್ದು ಬೆಂಗಳೂರಿನಲ್ಲಿ. ತೀ.ನಂ.ಶ್ರೀ,ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಮುಂತಾದ ಶ್ರೇಷ್ಠರ ಮಾರ್ಗದರ್ಶನದಲ್ಲಿ ಕನ್ನಡ ಕಲಿತರು. ಅಂತೆಯೇ ಆರ್. ಗುರುರಾಜರಾವ್, ಎಂ.ರಾಮರಾವ್, ಎಸ್. ಅನಂತನಾರಾಯಣರವರಿಂದ ಇಂಗ್ಲಿಷ್ ಕಲಿತರು.

ಜೀವನ

ಪ್ರಭುಶಂಕರರಿಗೆ ಸಾಹಿತ್ಯ ಪ್ರೇರಣೆ ದೊರೆತದ್ದು ನಾ.ಕಸ್ತೂರಿಯವರಿಂದ. ರಾಶಿಯವರು ಪ್ರಾರಂಭಿಸಿದ್ದ ‘ಕೊರವಂಜಿ’ ಮಾಸಪತ್ರಿಕೆ ಮತ್ತು ಸುಬೋಧ ರಾಮರಾಯರು ಪ್ರಾರಂಭಿಸಿ,ಜಿ.ಎಸ್. ಕೃಷ್ಣರಾಯರ ಸಂಪಾದಕತ್ವದಲ್ಲಿ ನಡೆದ ‘ನಗುವನಂದ’ ಪತ್ರಿಕೆಗಳಿಗೆ ಅವರು ಅನೇಕ ಬಿಡಿ ಬರಹಗಳನ್ನು ಬರೆದರು. ಕುವೆಂಪು, ದೇಜಗೌ, ಕ.ವೆಂ. ರಾಘವಾಚಾರ್ ಮುಂತಾದವರ ಸೆಳೆತದಿಂದ ಮೈಸೂರು ಕಾಲೇಜಿಗೆ ಸೇರಿ ಬಿ.ಎ. ಆನರ್ಸ್ ಪಡೆದು ಎಂ.ಎ. ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು. ಪ್ರಭುಶಂಕರರು ಕುವೆಂಪು ಪರಮಾಪ್ತರಲ್ಲಿ ಒಬ್ಬರು. ಕುವೆಂಪು ಕೈಯ್ಯಳತೆ ದೂರದಲ್ಲಿ ತಮ್ಮ ಜೀವಿತದ ಬಹುತೇಕ ಭಾಗ ಸವೆಸಿದ ಹಿರಿಯ ಜೀವ ಅವರದ್ದು. ಅವರು ಕನ್ನಡದಲ್ಲಿ ಕುವೆಂಪು ಬರಹಗಳ ಕುರಿತು ಸಮಗ್ರ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಮೊದಲಿಗರು. ನಾ. ಕಸ್ತೂರಿ ಅವರ ಶಿಷ್ಯರೂ ಆಗಿದ್ದ ಪ್ರಭುಶಂಕರರಿಗೆ ನಾ ಕಸ್ತೂರಿ ಅವರನ್ನು ಕಂಡರೆ ಸಹಾ ಆಪಾರ ಪ್ರೀತಿ. ಪು.ತಿ.ನ ಅವರು ನಿವೃತ್ತರಾಗಿದ್ದಾಗ ಅವರ ನಿವೃತ್ತ ಜೀವನದಲ್ಲಿ ಆರ್ಥಿಕ ಸಹಾಯಕವಾಗುವಂತೆ ಅವರನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ನಿಘಂಟು ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಹಿರಿಯರಲ್ಲಿನ ಭಕ್ತಿಕೂಡಾ ಪ್ರಭುಶಂಕರರದ್ದು.

ವೃತ್ತಿ ಜೀವನ

ಬೆಂಗಳೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಪ್ರಭುಶಂಕರರು ಕೋಲಾರ ಮತ್ತು ಮೈಸೂರು ಕಾಲೇಜಿನಲ್ಲಿ ೧೪ ವರ್ಷ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ ೧೪ ವರ್ಷ ಸೇವೆ ಸಲ್ಲಿಸಿದರು. ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ, ಗೃಹಸರಸ್ವತಿ ಗ್ರಂಥಮಾಲೆಯಲ್ಲಿ ಅಮೂಲ್ಯ ಗ್ರಂಥಗಳ ಪ್ರಕಟಣೆ ಮಾಡಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭಗೊಂಡಾಗ ಪ್ರಥಮ ಪ್ರಾಧ್ಯಾಪಕರಾದರು. ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಮರಳಿ, ಅಧ್ಯಯನ ಸಂಸ್ಥೆ ನಿರ್ದೇಶಕತ್ವವಹಿಸಿ. ಪ್ರಾಧ್ಯಾಪಕರಾಗಿ ನಿವೃತ್ತಿಗೊಂಡರು. ಮಂಗಳೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.

ಕೃತಿಗಳು

ಕುವೆಂಪುರವರ ವ್ಯಕ್ತಿತ್ವ , ಬೆರಳ್‌ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಶೂದ್ರತಪಸ್ವಿ ಕೃತಿಗಳನ್ನು ಇಂಗ್ಲಿಷ್‌ ಭಾಷೆಗೆ ಅನುವಾದ ಮಾಡಿದರು. ಜನಮನ (ವ್ಯಕ್ತಿಚಿತ್ರ) . ಎತ್ತಿಗೆ ಜ್ವರ ಎಮ್ಮೆಗೆ ಬರೆ’ (ಲಘು ಪ್ರಬಂಧ) . ಪ್ರೇಮಭಿಕ್ಷು ,‌ ಜೀವ ಜೀವದ ನಂಟು (ಕಾದಂಬರಿ) . ಅಂಗುಲಿಮಾಲ, ಆಮ್ರಪಾಲಿ , ಗೋರಿಗೊಂದು ಹದ್ದು. (ನಾಟಕ) . ಸಾಹಿತ್ಯ ವಿಮರ್ಶೆ - ಸಾಹಿತ್ಯ ಮತ್ತು ಆಧುನಿಕತೆ , ಕಾವ್ಯ ಸೃಷ್ಟಿಯ ಸ್ವರೂಪ , ಮಂದಹಾಸ ಮೀಮಾಂಸೆ. ಅಮೇರಿಕದಲ್ಲಿ ನಾನು ಮತ್ತು ಶಾಂತಿ (ಪ್ರವಾಸ ಕಥನ) ಮುಂತಾದವುಗಳನ್ನು ಪ್ರಕಟಿಸಿದರು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಕನ್ನಡದಲ್ಲಿ ಮೂಡುವಲ್ಲಿ ಪ್ರಭುಶಂಕರರು ಮಹಾನ್ ಸೇವೆ ಸಲ್ಲಿಸಿದ್ದಾರೆ. ಪ್ರೇಮವೇ ಮೂರ್ತಿವೆತ್ತಾದ ಬುದ್ಧನ ಕುರಿತಾದ ಪ್ರೇಮಭಿಕ್ಷು ಎಂಬ ಅವರ ಮನೋಹರ ಕೃತಿ ಹಲವಾರು ವರ್ಷಗಳ ಕಾಲ ಕಾಲೇಜು ಪಠ್ಯ ಪುಸ್ತಕವಾಗಿತ್ತು. ಅವರ ಅನೇಕ ಮನೋಲ್ಲಾಸಕರ ಹಾಸ್ಯ ಬರಹಗಳು ‘ಬೆಸ್ಟ್ ಆಫ್ ಪ್ರಭುಶಂಕರ’ದಂತಹ ಸಂಕಲನಗಳಲ್ಲಿ ಬೆಳಕು ಕಂಡು ಜನಮನವನ್ನು ತಣಿಸುತ್ತಿವೆ. ಇತ್ತೀಚಿನ ದಿನಗಳಲ್ಲ್ಲೂ ಪ್ರಭುಶಂಕರರ ಉಪನ್ಯಾಸಗಳೆಂದರೆ ಜನ ಎಲ್ಲೆಡೆಯಿಂದ ಓಡಿ ಬರುತ್ತಿದ್ದರು. ಅಷ್ಟು ವಿದ್ವತ್ಪೂರ್ಣ, ಸೊಗಸಿನ, ವಿನೋದಪೂರ್ಣ,ಅಪ್ಯಾಯಮಾನ ಮಾತುಗಾರಿಕೆ ಪ್ರಭುಶಂಕರ ಅವರದ್ದು.

ಪ್ರಶಸ್ತಿಗಳು

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಡಾ. ಪ್ರಭುಶಂಕರರನ್ನು ಅರಸಿ ಬಂದಿದ್ದವು.

ನಿಧನ

ಪ್ರಭುಶಂಕರ ಅವರು ೦೮ ಏಪ್ರಿಲ್ ೨೦೧೮ರಂದು ನಿಧನರಾದರು.

ಉಲ್ಲೇಖಗಳು

Tags:

ಪ್ರಭುಶಂಕರ ಬಾಲ್ಯಪ್ರಭುಶಂಕರ ವೃತ್ತಿ ಜೀವನಪ್ರಭುಶಂಕರ ಕೃತಿಗಳುಪ್ರಭುಶಂಕರ ಪ್ರಶಸ್ತಿಗಳುಪ್ರಭುಶಂಕರ ನಿಧನಪ್ರಭುಶಂಕರ ಉಲ್ಲೇಖಗಳುಪ್ರಭುಶಂಕರ

🔥 Trending searches on Wiki ಕನ್ನಡ:

ಪ್ರಜಾಪ್ರಭುತ್ವದ ವಿಧಗಳುಸರ್ವೆಪಲ್ಲಿ ರಾಧಾಕೃಷ್ಣನ್ಶಿವರಾಜಸ್ಥಾನ್ ರಾಯಲ್ಸ್ಕನ್ನಡ ಅಕ್ಷರಮಾಲೆನಾ. ಡಿಸೋಜಭಾರತದ ಸ್ವಾತಂತ್ರ್ಯ ದಿನಾಚರಣೆಪ್ರಜಾಪ್ರಭುತ್ವದ ಲಕ್ಷಣಗಳುನಿರ್ವಹಣೆ ಪರಿಚಯಭೂಮಿವಿಶ್ವಕೋಶಗಳುವರ್ಣಾಶ್ರಮ ಪದ್ಧತಿಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆದ್ರಾವಿಡ ಭಾಷೆಗಳುನಯನ ಸೂಡಮಾನವನ ನರವ್ಯೂಹಜ್ಯೋತಿಷ ಶಾಸ್ತ್ರಕೆ. ಎಸ್. ನಿಸಾರ್ ಅಹಮದ್ಸರ್ಕಾರೇತರ ಸಂಸ್ಥೆಕೈವಾರ ತಾತಯ್ಯ ಯೋಗಿನಾರೇಯಣರುಗೋವಿಂದ ಪೈಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನರಾಷ್ಟ್ರೀಯ ಸೇವಾ ಯೋಜನೆಗುರುಲಿಂಗ ಕಾಪಸೆಹೊಯ್ಸಳ ವಾಸ್ತುಶಿಲ್ಪಪುರಾಣಗಳುಚೀನಾಆ ನಲುಗುರು (ಚಲನಚಿತ್ರ)ಪಂಚ ವಾರ್ಷಿಕ ಯೋಜನೆಗಳುಇಸ್ಲಾಂಭಾರತದ ರಾಷ್ಟ್ರಗೀತೆಕ್ರಿಯಾಪದಜಾನಪದಹಟ್ಟಿ ಚಿನ್ನದ ಗಣಿಕರ್ನಾಟಕ ಲೋಕಸೇವಾ ಆಯೋಗಆದಿ ಕರ್ನಾಟಕಯಣ್ ಸಂಧಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಅರವಿಂದ ಘೋಷ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೇದಗಣರಾಜ್ಯೋತ್ಸವ (ಭಾರತ)ಆಂಗ್‌ಕರ್ ವಾಟ್ಡಾ ಬ್ರೋಸುಮಲತಾಭಾರತೀಯ ಶಾಸ್ತ್ರೀಯ ನೃತ್ಯಸಗಟು ವ್ಯಾಪಾರಪಾಂಡವರುರಾಯಲ್ ಚಾಲೆಂಜರ್ಸ್ ಬೆಂಗಳೂರುಗರುಡ (ಹಕ್ಕಿ)ಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ಹೂವುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅಕ್ಷಾಂಶ ಮತ್ತು ರೇಖಾಂಶಕರ್ನಾಟಕದ ಇತಿಹಾಸಬರವಣಿಗೆಆಡಮ್ ಸ್ಮಿತ್ಮಲೈ ಮಹದೇಶ್ವರ ಬೆಟ್ಟಸಂಯುಕ್ತ ಕರ್ನಾಟಕಭಾರತದ ಆರ್ಥಿಕ ವ್ಯವಸ್ಥೆಚೆನ್ನಕೇಶವ ದೇವಾಲಯ, ಬೇಲೂರುಭಾರತದ ಸಂಯುಕ್ತ ಪದ್ಧತಿಈಸ್ಟರ್ಹಯಗ್ರೀವಕೇಂದ್ರ ಲೋಕ ಸೇವಾ ಆಯೋಗದಶಾವತಾರಯುಗಾದಿಆಲೂರು ವೆಂಕಟರಾಯರುಸಿಂಧೂತಟದ ನಾಗರೀಕತೆಪಾಲಕ್ಅಬೂ ಬಕರ್ಹಿಂದೂ ಧರ್ಮಪಠ್ಯಪುಸ್ತಕದಾಸ ಸಾಹಿತ್ಯಶಬ್ದವಾಯು ಮಾಲಿನ್ಯರಾಬರ್ಟ್ (ಚಲನಚಿತ್ರ)🡆 More