ಟಿ.ಎಸ್.
ರಂಗಾ ಅವರು ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಸಿನೆಮಾ ನಿರ್ದೇಶಕ. ಪ್ರಸಿದ್ಧ ರಂಗಕರ್ಮಿ ಬಿ.ವಿ.ಕಾರಂತರ ಸಹವರ್ತಿಯಾಗಿ ಇವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಆಡಿದ್ದಾರೆ. ಕೆಲವು ಕನ್ನಡ ಸಿನೆಮಾಗಳನ್ನು ಹಾಗೂ ಹಿಂದಿ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಟಿ.ಎಸ್. ನಾಗಾಭರಣರೊಡಗೂಡಿ ರಚಿಸಿದ 'ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.
ರಂಗಾ ಅವರು ೧೯೪೯ರಲ್ಲಿ ಹುಟ್ಟಿದರು. ಅವರು ರಾಜಕಾರಣದಲ್ಲಿ ಹಾಗೂ ಸಮಾಜಸೇವೆಯಲ್ಲಿ ಹೆಸರು ಮಾಡಿದ್ದ ಗಾಂಧಿವಾದಿ ಟಿ.ಎಸ್.ಶಾಮಣ್ಣನವರ ಪುತ್ರ. ಆದರೆ ಅವರ ಒಲವು ರಾಜಕೀಯದೆಡೆಗೆ ಇರಲಿಲ್ಲ. ರಂಗಭೂಮಿಯೇ ಆಪ್ತವಾಗಿದ್ದ ಅವರು ಧಾರವಾಡ ಮತ್ತು ವಿಜಯಪುರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ನಿರ್ದೇಶಿಸಿದ 'ಸಾವಿತ್ರಿ' ಚಿತ್ರದ ನಾಯಕಿ ಅಶ್ವಿನಿಯವರನ್ನು ಅವರು ಮದುವೆಯಾದರು. ಅವರ ಮಗಳ ಹೆಸರು ತನ್ವಿ. ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿದ್ದ ಅವರ ಕಛೇರಿಯ ಹೆಸರು 'ಕೃತಿ'.
೧೮ ಏಪ್ರಿಲ್ ೨೦೧೮ರಂದು ಭಾನುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೯ ವರ್ಷ ವಯಸ್ಸಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು, ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.
This article uses material from the Wikipedia ಕನ್ನಡ article ಟಿ. ಎಸ್. ರಂಗಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.