ಹಂಚಿನಾಳ ಪಿ.ಎಚ್

ಹಂಚಿನಾಳ ಪಿ.ಎಚ್ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ.

ಹಂಚಿನಾಳ ಪಿ.ಎಚ್
ಹಂಚಿನಾಳ ಪಿ.ಎಚ್
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16* 32' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಹವಾಮಾನ

ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42°C ವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9°C ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.

  • ಬೇಸಿಗೆಕಾಲ - 35°C - 42°C
  • ಮಳೆಗಾಲ - 18°C - 32°C
  • ಚಳಿಗಾಲ - 15°C - 28°C
  • ಮಳೆ - ಪ್ರತಿ ವರ್ಷ 300 - 600ಮಿಮಿ ಗಳಸ್ಟು ಆಗಿತ್ತದೆ

ಆಹಾರ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಸಂಸ್ಕೃತಿ

ಹಂಚಿನಾಳ ಪಿ.ಎಚ್ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ಗಾಂಧಿ ಟೋಪಿ ಅಥವಾ ಬಿಳಿ/ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆಯನ್ನು ಧರಿಸುತ್ತಾರೆ.

ಕಲೆ

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ, ಜಾನಪದ, ಡೊಳ್ಳು ಕುಣಿತ, ಕರಡಿ ಮಜಲು, ಮೊಹರಮ ಹೆಜ್ಜೆ ಕುಣಿತ, ಹರಿ ಭಜನೆ ಮತ್ತು ಶಿವ ಭಜನೆ ಇತ್ಯಾದಿ ಗ್ರಾಮದ ಕಲೆಯಾಗಿದೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಕೃಷಿ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ.

ನೀರಾವರಿ

ಗ್ರಾಮದಲ್ಲಿ ಬಹುಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡು(ಮೇಕೆ) ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ

ಗ್ರಾಮದ ಆರ್ಥಿಕ ಪರಿಸ್ಥಿತಿ ಮಧ್ಯಮ ತರಗತಿಯಲ್ಲಿದೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು 75%. ಅದರಲ್ಲಿ 85% ಪುರುಷರು ಹಾಗೂ 68% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

Tags:

ಹಂಚಿನಾಳ ಪಿ.ಎಚ್ ಭೌಗೋಳಿಕಹಂಚಿನಾಳ ಪಿ.ಎಚ್ ಜನಸಂಖ್ಯೆಹಂಚಿನಾಳ ಪಿ.ಎಚ್ ಹವಾಮಾನಹಂಚಿನಾಳ ಪಿ.ಎಚ್ ಆಹಾರಹಂಚಿನಾಳ ಪಿ.ಎಚ್ ಸಂಸ್ಕೃತಿಹಂಚಿನಾಳ ಪಿ.ಎಚ್ ಕಲೆಹಂಚಿನಾಳ ಪಿ.ಎಚ್ ಧರ್ಮಹಂಚಿನಾಳ ಪಿ.ಎಚ್ ಭಾಷೆಹಂಚಿನಾಳ ಪಿ.ಎಚ್ ದೇವಾಲಯಹಂಚಿನಾಳ ಪಿ.ಎಚ್ ಮಸೀದಿಹಂಚಿನಾಳ ಪಿ.ಎಚ್ ಹಬ್ಬಹಂಚಿನಾಳ ಪಿ.ಎಚ್ ಕೃಷಿಹಂಚಿನಾಳ ಪಿ.ಎಚ್ ನೀರಾವರಿಹಂಚಿನಾಳ ಪಿ.ಎಚ್ ಉದ್ಯೋಗಹಂಚಿನಾಳ ಪಿ.ಎಚ್ ಬೆಳೆಹಂಚಿನಾಳ ಪಿ.ಎಚ್ ಸಸ್ಯಹಂಚಿನಾಳ ಪಿ.ಎಚ್ ಪ್ರಾಣಿಹಂಚಿನಾಳ ಪಿ.ಎಚ್ ಆರ್ಥಿಕತೆಹಂಚಿನಾಳ ಪಿ.ಎಚ್ ಶಿಕ್ಷಣಹಂಚಿನಾಳ ಪಿ.ಎಚ್ ಸಾಕ್ಷರತೆಹಂಚಿನಾಳ ಪಿ.ಎಚ್ ರಾಜಕೀಯಹಂಚಿನಾಳ ಪಿ.ಎಚ್ಕರ್ನಾಟಕವಿಜಯಪುರ

🔥 Trending searches on Wiki ಕನ್ನಡ:

ಸಿದ್ದರಾಮಯ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಅಂತರಜಾಲಜಿ.ಪಿ.ರಾಜರತ್ನಂಸಿಂಧೂತಟದ ನಾಗರೀಕತೆಐಹೊಳೆಪ್ರಾಣಾಯಾಮವಾಣಿವಿಲಾಸಸಾಗರ ಜಲಾಶಯಇಂಡಿ ವಿಧಾನಸಭಾ ಕ್ಷೇತ್ರಬ್ರಹ್ಮ ಸಮಾಜಪ್ರಬಂಧಪತ್ರಿಕೋದ್ಯಮವೀರೇಂದ್ರ ಹೆಗ್ಗಡೆಸಿದ್ಧಯ್ಯ ಪುರಾಣಿಕಶೂದ್ರ ತಪಸ್ವಿಕಾರ್ಲ್ ಮಾರ್ಕ್ಸ್ರಾಷ್ಟ್ರಕೂಟಬಾಹುಬಲಿಶಬ್ದಮಣಿದರ್ಪಣಗೋತ್ರ ಮತ್ತು ಪ್ರವರಭಾರತದ ಆರ್ಥಿಕ ವ್ಯವಸ್ಥೆಆವಕಾಡೊಮಾಧ್ಯಮಮೈಸೂರು ಸಂಸ್ಥಾನಸಂಗೀತಬೌದ್ಧ ಧರ್ಮಶಿಕ್ಷಣಕರ್ನಾಟಕದ ತಾಲೂಕುಗಳುಶಿವನ ಸಮುದ್ರ ಜಲಪಾತನೈಸರ್ಗಿಕ ಸಂಪನ್ಮೂಲಜಿ.ಎಸ್.ಶಿವರುದ್ರಪ್ಪಬ್ಯಾಸ್ಕೆಟ್‌ಬಾಲ್‌ವೇದತತ್ಪುರುಷ ಸಮಾಸಭಾರತದ ರಾಜಕೀಯ ಪಕ್ಷಗಳುಭರತೇಶ ವೈಭವಆರ್ಯ ಸಮಾಜಮಕರ ಸಂಕ್ರಾಂತಿಬಾನು ಮುಷ್ತಾಕ್ಕುಮಾರವ್ಯಾಸನರೇಂದ್ರ ಮೋದಿಚಿತ್ರದುರ್ಗ ಕೋಟೆಖ್ಯಾತ ಕರ್ನಾಟಕ ವೃತ್ತಧಾರವಾಡಸಾಮಾಜಿಕ ಸಮಸ್ಯೆಗಳುಹಂಸಲೇಖಭಾರತೀಯ ಜ್ಞಾನಪೀಠಕನ್ನಡದಲ್ಲಿ ಕಾದಂಬರಿ ಸಾಹಿತ್ಯನವಿಲುಕೋಸುಶಬ್ದ ಮಾಲಿನ್ಯಯುಗಾದಿಸಂಸ್ಕೃತಮಾದಿಗಪ್ರವಾಸೋದ್ಯಮಸಾವಿತ್ರಿಬಾಯಿ ಫುಲೆಪೀನ ಮಸೂರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಂಗಳ (ಗ್ರಹ)ಕನ್ನಡ ರಾಜ್ಯೋತ್ಸವಉಪ್ಪಿನ ಸತ್ಯಾಗ್ರಹಸಹಕಾರಿ ಸಂಘಗಳುರಾಮಕನ್ನಡಪ್ರಭರಾಘವಾಂಕಕಂಠೀರವ ನರಸಿಂಹರಾಜ ಒಡೆಯರ್ಕುಟುಂಬಶಬರಿಆಸ್ಪತ್ರೆವಾಣಿಜ್ಯ ಪತ್ರಭೂಮಿತತ್ಸಮಕರ್ನಾಟಕ ಹೈ ಕೋರ್ಟ್ಪಂಚ ವಾರ್ಷಿಕ ಯೋಜನೆಗಳುಡಿ.ಆರ್. ನಾಗರಾಜ್ಎ.ಕೆ.ರಾಮಾನುಜನ್ಕೆ.ವಿ.ಸುಬ್ಬಣ್ಣಚುನಾವಣೆಸಂವಹನಪೌರತ್ವ🡆 More