ವಿ.ಎಂ.ಇನಾಂದಾರ ಅವರ ಪೂರ್ಣ ಹೆಸರು ವೆಂಕಟೇಶ ಮಧ್ವಾರಾಯ ಇನಾಂದಾರ.ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರರು, ವಿಮರ್ಶೆಕರು, ಅನುವಾದಕರಾಗಿ ಸೇವೆಗೈದ ಅನುಪಮ ವ್ಯಕ್ತಿ.
ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹುದವಿಯಲ್ಲಿ; ೧೯೧೨ರ ಅಕ್ಟೋಬರ್ ಒಂದರಂದು. ತಂದೆ:ಮಧ್ವರಾವ್, ತಾಯಿ: ಕಮಲಾಬಾಯಿ. ಬೆಳಗಾವಿ, ಅಥಣಿ, ವಿಜಯಪುರ, ಮುಂಬಯಿಗಳಲ್ಲಿ ಅವರ ಶಿಕ್ಷಣ ನಡೆಯಿತು.
ಬಿ.ಎ ಪದವಿ ಪಡೆದು ವಿಜಯಪುರದ ನ್ಯಾಯಲಯದಲ್ಲಿ ಭಾಷಾಂತರಕಾರರಾಗಿ ವೃತ್ತಿಜೀವನ ಆರಂಭಿಸಿದರು. ಆನಂತರ ೧೯೩೮ರಲ್ಲಿ ವಕೀಲ ಪರೀಕ್ಷೆ ಪಾಸು ಮಾಡಿ ೧೯೪೧ರಲ್ಲಿ ಇಂಗ್ಲಿಷ್ ಎಂ.ಎ ಪದವಿ ಪಡೆದರು. ಕಾಲೇಜು ಅಧ್ಯಾಪಕರಾಗಿ ತಾವು ಹಲವಾರು ಕಡೆಗಳಲ್ಲಿ ಕೆಲಸ ಮಾಡಿದ್ದಾರೆ.
ಕೆಲಕಾಲ ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ಗೌರವ ಪ್ರಾಧ್ಯಾಪಕರಾಗಿಯೂ ತಮ್ಮನ್ನು ಹೆಸರಿಸಿಕೊಂಡಿದ್ದಾರೆ.
ವಿ.ಸ.ಖಾಂಡೇಕರ್ ಅವರ ಮರಾಠಿ ಕೃತಿಯ ಅನುವಾದ ಯಯಾತಿ ಹೆಸರಿನಲ್ಲಿ ಮಾಡಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ.
ಪೌರ್ಯಾತ್ಯ ಪಾಶ್ಚಾತ್ಯ ಸಾಹಿತ್ಯಗಳೆರಡರಲ್ಲು ಅವರ ಪಾಂಡಿತ್ಯ ಹೊಂದಿದ್ದರು. ಇಂಗ್ಲಿಷನಲ್ಲೂ ಅವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. 'ಶಾಪ' ಕಾದಂಬರಿ ಚಲನಚಿತ್ರವಾಗಿದೆ. ಖಾಂಡೇಕರರ ಇನ್ನೊಂದು ಕಾದಂಬರಿ 'ದೋನಧ್ರುವ' ಅನ್ನು ಎರಡು ಧ್ರುವ ಕಾದಂಬರಿಯಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
೧೯೮೬ರ ಜನವರಿ ೨೬ ರಂದು ದೈವಾಧೀನರಾದರು.
This article uses material from the Wikipedia ಕನ್ನಡ article ವಿ.ಎಂ.ಇನಾಂದಾರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.