ಈ ಲೇಖನವು ಅಪೂರ್ಣವಾಗಿದೆ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮೈಲಾರದ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ = ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಬಣಜಿಗ ಸಮುದಾಯದವರು. ವ್ಯಾಪಾರ ಇವರ ವೃತ್ತಿ. ಮೈಲಾರದಿಂದ ಸುಮಾರು ೮ ಕಿ.ಲೋ ಮೀಟರ ದೂರದಲ್ಲಿರುವ ಚನ್ನವೀರಸ್ವಾಮಿಗಳ ಶಿಶ್ಯರಾಗಿದ್ದರು.
ಐದು ಕೃತಿಗಳ್ಳಲ್ಲಿ ಗುರುಕರುಣ ತ್ರಿವಿಧಿ ಮುಖ್ಯವಾದ ಕೃತಿ. ಗುರು ಚನ್ನವೀರಸ್ವಾವಿಗಳು ಕೋಪದಿಂದ ನೀನು ಬಸಪ್ಪ ಅಲ್ಲ ಮುಸಪ್ಪ ಎಂದು ಬೈದ ಸಂದರ್ಭದಲ್ಲಿ ಒಂದು ಕಾಲಿನಲ್ಲಿ ನಿಂತು ೩೩೩ ತ್ರಿವಿದ್ಧಿಗಳನ್ನು ಹೇಳಿದರು. ತ್ರಿವಿಧಿ ಎಂದರೆ ಮೂರು ಸಾಲಿನ ಪದ್ಯ. ಮೊದಲಿನ ಎರಡು ಸಾಲುಗಳು ಮುಖ್ಯ ತತ್ವ ಒಳಗೊಂಡಿರುತ್ತವೆ. ಇದರಲ್ಲಿ ಅಶ್ಟಾವರಣ, ಪಂಚಾಚಾರ, ಶಟ್ ಸ್ಥಲ ತತ್ವಗಳ ವಿಚಾರ ಮುಖ್ಯವಾಗಿದೆ.
ಶ್ರೀ ಗುರು ಪ್ರಾರ್ಥನೆ
ಶ್ರೀ ಗುರುವೆ ಸತ್ಕ್ರಿಯೆಯ | ಆಗರವೆ ಸುಜ಼್ಜಾನ
ಸಾಗರವೆ ಎನ್ನ ಮತಿಗೆ ಮಂಗಳವಿತ್ತು
ರಾಗದಿಂ ಬೇಗ ಕೃಪೇಯಾಗು ||೧||
ಸದ್ಗುರುವಿನ ಸ್ವರೂಪ
ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ
ಹರವೆ ನಿಜಭಕ್ತಿ-ಜ಼್ಜಾನವೈರಾಗ್ಯಮಂ
ದಿರವೆ ಮದ್ಗುರುವೆ ಕೃಪೆಯಾಗು ||೨||
ದೇಶಿಕನೆ ಅನುಭವೋ|ಲ್ಲಾಸಕನೆ ಸಂಕಲ್ಪ ನಾಶಕನೆ 'ಯಾಣ' ವಾದಿ ತ್ರೈಮಲದೊಳ್ನಿ ರಾಶಕನೆ ಎನಗೆ ಕೃಪೆಯಾಗು ||೩||
ಕಾರ್ಯಕಾರಣ್ ಭಕ್ತಿ| ತುರ್ಯತಾಮಸದ ಚಿ ತ್ಸೂರ್ಯ ಎಡರಿಂಗೆ-ಧೈರ್ಯವಾಗಿಹ ಗುರು ವರ್ಯ ನೀನೆನಗೆ ಕೃಪೆಯಾಗು ||೪||
This article uses material from the Wikipedia ಕನ್ನಡ article ಮೈಲಾರದ ಬಸವಲಿಂಗ ಶರಣರ ಗುರುಕರಣ ತ್ರಿವಿಧಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.